< ರೋಮಾಪುರದವರಿಗೆ 9 >

1 ನಾನು ಕ್ರಿಸ್ತ ಯೇಸುವಿನಲ್ಲಿ ಸತ್ಯವನ್ನು ಮಾತನಾಡುತ್ತೇನೆ. ನಾನು ಸುಳ್ಳು ಹೇಳುತ್ತಾ ಇಲ್ಲ. ನನ್ನ ಮನಸ್ಸಾಕ್ಷಿಯು ಇದನ್ನು ಪವಿತ್ರಾತ್ಮ ದೇವರ ಮೂಲಕ ಖಚಿತ ಪಡಿಸುತ್ತದೆ.
අහං කාඤ්චිද් කල්පිතාං කථාං න කථයාමි, ඛ්‍රීෂ්ටස්‍ය සාක්‍ෂාත් සත්‍යමේව බ්‍රවීමි පවිත්‍රස්‍යාත්මනඃ සාක්‍ෂාන් මදීයං මන ඒතත් සාක්‍ෂ්‍යං දදාති|
2 ನನ್ನ ಹೃದಯದಲ್ಲಿ ಮಹಾದುಖಃವೂ ಎಡೆಬಿಡದ ವೇದನೆಯೂ ತೀರದವೇದನೆಯೂ ಇದೆ.
මමාන්තරතිශයදුඃඛං නිරන්තරං ඛේදශ්ච
3 ನನ್ನ ಸ್ವಂತ ಜನರಾದ ನನ್ನ ಯೆಹೂದ್ಯ ಸಹೋದರರಿಗಾಗಿ, ಸಾಧ್ಯವಾದರೆ ನಾನೇ ಕ್ರಿಸ್ತ ಯೇಸುವಿನಿಂದ ದೂರಹೋಗಿ ಶಾಪಗ್ರಸ್ತನಾಗಲು ಸಿದ್ಧನಾಗಿದ್ದೇನೆ.
තස්මාද් අහං ස්වජාතීයභ්‍රාතෘණාං නිමිත්තාත් ස්වයං ඛ්‍රීෂ්ටාච්ඡාපාක්‍රාන්තෝ භවිතුම් ඓච්ඡම්|
4 ಇಸ್ರಾಯೇಲರಾದ ಅವರಿಗೆ ಸ್ವೀಕಾರವೂ ದೇವರ ಮಹಿಮೆಯೂ ಒಡಂಬಡಿಕೆಗಳೂ ನಿಯಮ ಕೊಡೋಣವೂ ದೇವಾಲಯದ ಸೇವೆಯೂ ಹಾಗೂ ವಾಗ್ದಾನಗಳೂ ಒಪ್ಪಿಸಲಾಗಿವೆ.
යතස්ත ඉස්‍රායේලස්‍ය වංශා අපි ච දත්තකපුත්‍රත්වං තේජෝ නියමෝ ව්‍යවස්ථාදානං මන්දිරේ භජනං ප්‍රතිඥාඃ පිතෘපුරුෂගණශ්චෛතේෂු සර්ව්වේෂු තේෂාම් අධිකාරෝ(අ)ස්ති|
5 ನಮ್ಮ ಪಿತೃಗಳು ಅವರಿಗೆ ಸೇರಿದವರು. ಕ್ರಿಸ್ತ ಯೇಸುವು ಮನುಷ್ಯರಾಗಿ ಹುಟ್ಟಿದ್ದು ಅವರ ವಂಶದಲ್ಲಿಯೇ; ಈ ಕ್ರಿಸ್ತ ಯೇಸುವೇ ಎಲ್ಲರ ಮೇಲಿರುವ ದೇವರೂ ಎಂದೆಂದಿಗೂ ಸ್ತುತಿಹೊಂದತಕ್ಕವರೂ ಆಗಿದ್ದಾರೆ! ಆಮೆನ್. (aiōn g165)
තත් කේවලං නහි කින්තු සර්ව්වාධ්‍යක්‍ෂඃ සර්ව්වදා සච්චිදානන්ද ඊශ්වරෝ යඃ ඛ්‍රීෂ්ටඃ සෝ(අ)පි ශාරීරිකසම්බන්ධේන තේෂාං වංශසම්භවඃ| (aiōn g165)
6 ಇದು ದೇವರ ವಾಕ್ಯವು ನೆರವೇರಲಿಲ್ಲ ಎಂಬಂತೆ ಅಲ್ಲ. ಏಕೆಂದರೆ ಇಸ್ರಾಯೇಲ್ ವಂಶದಲ್ಲಿ ಬಂದವರೆಲ್ಲರೂ ಇಸ್ರಾಯೇಲರಲ್ಲ.
ඊශ්වරස්‍ය වාක්‍යං විඵලං ජාතම් ඉති නහි යත්කාරණාද් ඉස්‍රායේලෝ වංශේ යේ ජාතාස්තේ සර්ව්වේ වස්තුත ඉස්‍රායේලීයා න භවන්ති|
7 ಅಥವಾ ಅಬ್ರಹಾಮನ ಸಂತತಿಯವರೆಲ್ಲ ಅವನ ಮಕ್ಕಳಲ್ಲ. ಆದರೆ, “ಇಸಾಕನಿಂದ ಹುಟ್ಟುವವರೇ ನಿನ್ನ ಸಂತತಿ ಎನಿಸಿಕೊಳ್ಳುವರು,” ಎಂದು ಹೇಳಲಾಗಿದೆ.
අපරම් ඉබ්‍රාහීමෝ වංශේ ජාතා අපි සර්ව්වේ තස්‍යෛව සන්තානා න භවන්ති කින්තු ඉස්හාකෝ නාම්නා තව වංශෝ විඛ්‍යාතෝ භවිෂ්‍යති|
8 ಇದರ ಅರ್ಥ, ಶರೀರಸಂಬಂಧದ ಮಕ್ಕಳು ದೇವರ ಮಕ್ಕಳಾಗಿರದೆ ವಾಗ್ದಾನದ ಮಕ್ಕಳೇ ಅಬ್ರಹಾಮನ ಮಕ್ಕಳೆಂದು ಎನಿಸಿಕೊಳ್ಳುವರು ಎಂಬುದು.
අර්ථාත් ශාරීරිකසංසර්ගාත් ජාතාඃ සන්තානා යාවන්තස්තාවන්ත ඒවේශ්වරස්‍ය සන්තානා න භවන්ති කින්තු ප්‍රතිශ්‍රවණාද් යේ ජායන්තේ තඒවේශ්වරවංශෝ ගණ්‍යතේ|
9 ಏಕೆಂದರೆ, “ನೇಮಕವಾದ ಕಾಲದಲ್ಲಿ ನಾನು ತಿರುಗಿ ಬಂದಾಗ ಸಾರಳಿಗೆ ಒಬ್ಬ ಮಗನಿರುವನು,” ಅದು ವಾಗ್ದಾನದ ಮಾತಾಗಿತ್ತು.
යතස්තත්ප්‍රතිශ්‍රුතේ ර්වාක්‍යමේතත්, ඒතාදෘශේ සමයේ (අ)හං පුනරාගමිෂ්‍යාමි තත්පූර්ව්වං සාරායාඃ පුත්‍ර ඒකෝ ජනිෂ්‍යතේ|
10 ಇದು ಮಾತ್ರವಲ್ಲದೆ, ರೆಬೆಕ್ಕಳು ಸಹ ನಮ್ಮ ಪಿತೃವಾದ ಇಸಾಕನ ಮೂಲಕ ಅವಳಿಜವಳಿ ಮಕ್ಕಳನ್ನು ಪಡೆದಳು.
අපරමපි වදාමි ස්වමනෝ(අ)භිලාෂත ඊශ්වරේණ යන්නිරූපිතං තත් කර්ම්මතෝ නහි කින්ත්වාහ්වයිතු ර්ජාතමේතද් යථා සිද්ධ්‍යති
11 ಹೀಗೆ, ಆ ಮಕ್ಕಳು ಹುಟ್ಟುವುದಕ್ಕೆ ಮುಂಚೆ, ಒಳ್ಳೆಯದು ಅಥವಾ ಕೆಟ್ಟದ್ದನ್ನು ಮಾಡುವುದಕ್ಕೆ ಮುಂಚೆಯೇ, ದೇವರ ಆಯ್ಕೆಯ ಉದ್ದೇಶವು ಕೃತ್ಯಗಳಿಗೆ ಅನುಸಾರವಲ್ಲವೆಂಬುದು ಸ್ಥಿರವಾಯಿತು.
තදර්ථං රිබ්කානාමිකයා යෝෂිතා ජනෛකස්මාද් අර්ථාද් අස්මාකම් ඉස්හාකඃ පූර්ව්වපුරුෂාද් ගර්භේ ධෘතේ තස්‍යාඃ සන්තානයෝඃ ප්‍රසවාත් පූර්ව්වං කිඤ්ච තයෝඃ ශුභාශුභකර්ම්මණඃ කරණාත් පූර්ව්වං
12 ಆದರೆ ಅದು ಕರೆಯುವಾತನಿಂದಲೇ, “ಹಿರಿಯನು ಕಿರಿಯವನಿಗೆ ಸೇವೆಮಾಡುವನು,” ಎಂದು ರೆಬೆಕ್ಕಳಿಗೆ ಹೇಳಲಾಗಿತ್ತು.
තාං ප්‍රතීදං වාක්‍යම් උක්තං, ජ්‍යේෂ්ඨඃ කනිෂ්ඨං සේවිෂ්‍යතේ,
13 ಇದಕ್ಕನುಸಾರವಾಗಿ, “ಯಾಕೋಬನನ್ನು ನಾನು ಪ್ರೀತಿಸಿದೆನು, ಆದರೆ ಏಸಾವನನ್ನು ಹಗೆ ಮಾಡಿದೆನು,” ಎಂದು ಬರೆದಿರುತ್ತದೆ.
යථා ලිඛිතම් ආස්තේ, තථාප්‍යේෂාවි න ප්‍රීත්වා යාකූබි ප්‍රීතවාන් අහං|
14 ಹಾಗಾದರೆ ನಾವು ಏನು ಹೇಳೋಣ? ದೇವರು ಅನ್ಯಾಯಗಾರನೋ? ಎಂದಿಗೂ ಇಲ್ಲ.
තර්හි වයං කිං බ්‍රූමඃ? ඊශ්වරඃ කිම් අන්‍යායකාරී? තථා න භවතු|
15 ದೇವರು ಮೋಶೆಗೆ ಹೇಳಿದ್ದೇನೆಂದರೆ, “ಯಾವನ ಮೇಲೆ ನನ್ನ ಕರುಣೆ ಉಂಟೋ, ಅವನನ್ನು ಕರುಣಿಸುವೆನು. ಯಾವನ ಮೇಲೆ ನನ್ನ ಕನಿಕರವಿದೆಯೋ ಅವನನ್ನು ಕನಿಕರಿಸುವೆನು.”
යතඃ ස ස්වයං මූසාම් අවදත්; අහං යස්මින් අනුග්‍රහං චිකීර්ෂාමි තමේවානුගෘහ්ලාමි, යඤ්ච දයිතුම් ඉච්ඡාමි තමේව දයේ|
16 ಆದ್ದರಿಂದ ದೇವರ ಆಯ್ಕೆಯು ಮನುಷ್ಯನ ಬಯಕೆ ಅಥವಾ ಪ್ರಯತ್ನದಿಂದಾಗಿರದೆ, ದೇವರ ಕರುಣೆಯಿಂದಲೇ ಆಗಿದೆ.
අතඒවේච්ඡතා යතමානේන වා මානවේන තන්න සාධ්‍යතේ දයාකාරිණේශ්වරේණෛව සාධ්‍යතේ|
17 ಏಕೆಂದರೆ, “ನಾನು ನಿನ್ನಲ್ಲಿ ನನ್ನ ಶಕ್ತಿಯನ್ನು ತೋರಿಸಿ ನನ್ನ ಹೆಸರನ್ನು ಭೂಮಿಯ ಮೇಲೆಲ್ಲಾ ಪ್ರಸಿದ್ಧಪಡಿಸಬೇಕೆಂಬ ಉದ್ದೇಶದಿಂದಲೇ ನಿನ್ನನ್ನು ಉನ್ನತಸ್ಥಾನಕ್ಕೆ ಏರಿಸಿದೆನು,” ಎಂದು ಪವಿತ್ರ ವೇದದಲ್ಲಿ ದೇವರು ಫರೋಹನಿಗೆ ಹೇಳುತ್ತಾರೆ.
ඵිරෞණි ශාස්ත්‍රේ ලිඛති, අහං ත්වද්ද්වාරා මත්පරාක්‍රමං දර්ශයිතුං සර්ව්වපෘථිව්‍යාං නිජනාම ප්‍රකාශයිතුඤ්ච ත්වාං ස්ථාපිතවාන්|
18 ಆದ್ದರಿಂದ ದೇವರು ಯಾರನ್ನು ಕರುಣಿಸಬೇಕೆಂದು ಬಯಸುತ್ತಾರೋ, ಅವರನ್ನು ಕರುಣಿಸುತ್ತಾರೆ. ಯಾರನ್ನು ಕಠಿಣಪಡಿಸಬೇಕೆಂದು ಬಯಸುತ್ತಾರೋ, ಅವರನ್ನು ಕಠೋರನ್ನಾಗಿ ಮಾಡುತ್ತಾರೆ.
අතඃ ස යම් අනුග්‍රහීතුම් ඉච්ඡති තමේවානුගෘහ්ලාති, යඤ්ච නිග්‍රහීතුම් ඉච්ඡති තං නිගෘහ්ලාති|
19 ಹಾಗಾದರೆ ನೀನು, “ದೇವರು ಇನ್ನೂ ತಪ್ಪು ಕಂಡುಹಿಡಿಯುವುದು ಏಕೆ? ದೇವರ ಸಂಕಲ್ಪವನ್ನು ಎದುರಿಸುವವರು ಯಾರು?” ಎಂದು ನೀನು ನನ್ನನ್ನು ಕೇಳುವೆ.
යදි වදසි තර්හි ස දෝෂං කුතෝ ගෘහ්ලාති? තදීයේච්ඡායාඃ ප්‍රතිබන්ධකත්වං කර්ත්තං කස්‍ය සාමර්ථ්‍යං විද්‍යතේ?
20 ಎಲೈ, ಮನುಷ್ಯನೇ, ದೇವರಿಗೆ ಎದುರಾಗಿ ಮಾತನಾಡಲು ನೀನು ಯಾರು? “ರೂಪಿಸಿರುವುದು ರೂಪಿಸಿದವನಿಗೆ, ‘ಏಕೆ ನನ್ನನ್ನು ಹೀಗೆ ರೂಪಿಸಿದೆ?’” ಎಂದು ಪ್ರಶ್ನಿಸಬಹುದೋ?
හේ ඊශ්වරස්‍ය ප්‍රතිපක්‍ෂ මර්ත්‍ය ත්වං කඃ? ඒතාදෘශං මාං කුතඃ සෘෂ්ටවාන්? ඉති කථාං සෘෂ්ටවස්තු ස්‍රෂ්ට්‍රේ කිං කථයිෂ්‍යති?
21 ಕುಂಬಾರನಿಗೆ ಒಂದೇ ಮಣ್ಣಿನ ರಾಶಿಯಿಂದ ಒಂದನ್ನು ಉತ್ತಮವಾದ ಪಾತ್ರೆಯನ್ನಾಗಿಯೂ ಮತ್ತೊಂದನ್ನು ಸಾಮಾನ್ಯವಾದ ಪಾತ್ರೆಯನ್ನಾಗಿಯೂ ಮಾಡುವ ಅಧಿಕಾರ ಇಲ್ಲವೋ?
ඒකස්මාන් මෘත්පිණ්ඩාද් උත්කෘෂ්ටාපකෘෂ්ටෞ ද්විවිධෞ කලශෞ කර්ත්තුං කිං කුලාලස්‍ය සාමර්ථ්‍යං නාස්ති?
22 ನಾಶಕ್ಕೂ, ಕೋಪಾಗ್ನಿಗೂ ಪಾತ್ರೆಯಾಗಿರುವುದರ ಮೇಲೆ ದೇವರು ತಮ್ಮ ಕೋಪವನ್ನು ತೋರಿಸಿ ತಮ್ಮ ಸಾಮರ್ಥ್ಯವನ್ನು ತಿಳಿಯಪಡಿಸಬೇಕೆಂದಿದ್ದರೂ ಬಹು ಸಹನೆಯಿಂದ ತಾಳಿಕೊಂಡಿರಲು ಬಯಸಿದರೆ, ಯಾರು ಏನು ಮಾಡಬಹುದು?
ඊශ්වරඃ කෝපං ප්‍රකාශයිතුං නිජශක්තිං ඥාපයිතුඤ්චේච්ඡන් යදි විනාශස්‍ය යෝග්‍යානි ක්‍රෝධභාජනානි ප්‍රති බහුකාලං දීර්ඝසහිෂ්ණුතාම් ආශ්‍රයති;
23 ದೇವರು ಯೆಹೂದ್ಯರೊಳಗಿಂದ ಮಾತ್ರವೇ ಕರೆಯದೆ, ಯೆಹೂದ್ಯರಲ್ಲದವರಿಂದಲೂ ಕರೆದು, ಮಹಿಮೆಗೆಂದು ಮೊದಲೇ ಸಿದ್ಧಮಾಡಿ, ತಮ್ಮ ಕರುಣೆಗೆ ಪಾತ್ರರಾದ ಜನರಿಗೆ ತಮ್ಮ ಮಹಿಮೆಯ ಐಶ್ವರ್ಯವನ್ನು ಪ್ರಕಟಿಸಲು ಇದನ್ನು ಮಾಡಿದರು.
අපරඤ්ච විභවප්‍රාප්ත්‍යර්ථං පූර්ව්වං නියුක්තාන්‍යනුග්‍රහපාත්‍රාණි ප්‍රති නිජවිභවස්‍ය බාහුල්‍යං ප්‍රකාශයිතුං කේවලයිහූදිනාං නහි භින්නදේශිනාමපි මධ්‍යාද්
24 ಇದಕ್ಕಾಗಿಯೇ ದೇವರು ಯೆಹೂದ್ಯರನ್ನು ಮಾತ್ರವೇ ಕರೆಯದೆ ಯೆಹೂದ್ಯರಲ್ಲದವರನ್ನು ಸಹ ಕರೆದಿದ್ದಾರಲ್ಲಾ?
අස්මානිව තාන්‍යාහ්වයති තත්‍ර තව කිං?
25 ಹೋಶೇಯನ ಪ್ರವಾದನೆಯಲ್ಲಿ ದೇವರು, “ನನ್ನ ಜನರಲ್ಲದವರನ್ನು ‘ನನ್ನ ಜನರು,’ ಎಂದು ಕರೆಯುವರು. ನಾನು ಪ್ರೀತಿಸದವರನ್ನು ನನ್ನ ‘ಪ್ರಿಯರು’ ಎಂದೂ ಹೇಳುವರು.”
හෝශේයග්‍රන්ථේ යථා ලිඛිතම් ආස්තේ, යෝ ලෝකෝ මම නාසීත් තං වදිෂ්‍යාමි මදීයකං| යා ජාති ර්මේ(අ)ප්‍රියා චාසීත් තාං වදිෂ්‍යාම්‍යහං ප්‍රියාං|
26 ಮತ್ತು, “ಯಾವ ಸ್ಥಳದಲ್ಲಿ ‘ನೀವು ನನ್ನ ಜನರಲ್ಲ,’ ಎಂದು ಅವರಿಗೆ ಹೇಳಲಾಗಿತ್ತೋ, ಆ ಸ್ಥಳದಲ್ಲಿಯೇ, ‘ಅವರು ಜೀವಸ್ವರೂಪಿಯಾದ ದೇವರ ಮಕ್ಕಳು,’ ಎಂದು ಕರೆಯಲಾಗುವರು,” ಎಂದು ದೇವರು ಹೇಳುತ್ತಾರೆ.
යූයං මදීයලෝකා න යත්‍රේති වාක්‍යමෞච්‍යත| අමරේශස්‍ය සන්තානා ඉති ඛ්‍යාස්‍යන්ති තත්‍ර තේ|
27 ಇದಲ್ಲದೆ ಯೆಶಾಯನು ಇಸ್ರಾಯೇಲರನ್ನು ಕುರಿತು ಕೂಗಿ ಹೇಳುವುದೇನೆಂದರೆ, “ಇಸ್ರಾಯೇಲರ ಸಂಖ್ಯೆಯು ಸಮುದ್ರದ ಉಸುಬಿನಂತಿದ್ದರೂ ಅವರಲ್ಲಿ ಕೆಲವರು ಮಾತ್ರ ರಕ್ಷಣೆಹೊಂದುವರು.
ඉස්‍රායේලීයලෝකේෂු යිශායියෝ(අ)පි වාචමේතාං ප්‍රාචාරයත්, ඉස්‍රායේලීයවංශානාං යා සංඛ්‍යා සා තු නිශ්චිතං| සමුද්‍රසිකතාසංඛ්‍යාසමානා යදි ජායතේ| තථාපි කේවලං ලෝකෛරල්පෛස්ත්‍රාණං ව්‍රජිෂ්‍යතේ|
28 ಏಕೆಂದರೆ ಕರ್ತನು ತಮ್ಮ ವಾಕ್ಯವನ್ನು ಭೂಮಿಯ ಮೇಲೆ ಅಂತಿಮವಾಗಿಯೂ ತ್ವರಿತವಾಗಿಯೂ ನೆರವೇರಿಸುವರು.”
යතෝ න්‍යායේන ස්වං කර්ම්ම පරේශඃ සාධයිෂ්‍යති| දේශේ සඒව සංක්‍ෂේපාන්නිජං කර්ම්ම කරිෂ්‍යති|
29 ಯೆಶಾಯನು ಈ ಹಿಂದೆ, “ಸೇನಾಧೀಶ್ವರರಾದ ದೇವರು ನಮಗೆ ಸಂತತಿಯನ್ನು ಉಳಿಸದೆ ಹೋಗಿದ್ದರೆ, ನಾವು ಸೊದೋಮಿನಂತೆ ಆಗುತ್ತಿದ್ದೆವು, ಗೊಮೋರದ ಹಾಗೆ ಇರುತ್ತಿದ್ದೆವು.” ಎಂದು ಹೇಳಿದ್ದಾನೆ.
යිශායියෝ(අ)පරමපි කථයාමාස, සෛන්‍යාධ්‍යක්‍ෂපරේශේන චේත් කිඤ්චින්නෝදශිෂ්‍යත| තදා වයං සිදෝමේවාභවිෂ්‍යාම විනිශ්චිතං| යද්වා වයම් අමෝරායා අගමිෂ්‍යාම තුල්‍යතාං|
30 ಹಾಗಾದರೆ ನಾವು ಏನು ಹೇಳೋಣ? ನೀತಿಯನ್ನು ಅನುಸರಿಸದ ಯೆಹೂದ್ಯರಲ್ಲದವರು ನಂಬಿಕೆಯ ಮೂಲಕ ದೊರಕುವ ನೀತಿಯನ್ನು ಪಡೆದರು.
තර්හි වයං කිං වක්‍ෂ්‍යාමඃ? ඉතරදේශීයා ලෝකා අපි පුණ්‍යාර්ථම් අයතමානා විශ්වාසේන පුණ්‍යම් අලභන්ත;
31 ಆದರೆ ನೀತಿಯ ನಿಯಮವನ್ನು ಅನುಸರಿಸಿದ ಇಸ್ರಾಯೇಲರಾದರೋ ಆ ನೀತಿಯ ಮಾರ್ಗವನ್ನು ಪಡೆಯಲಿಲ್ಲ.
කින්ත්විස්‍රායේල්ලෝකා ව්‍යවස්ථාපාලනේන පුණ්‍යාර්ථං යතමානාස්තන් නාලභන්ත|
32 ಏಕೆ? ಏಕೆಂದರೆ ಅವರು ನಂಬಿಕೆಯನ್ನು ಅನುಸರಿಸದೆ ಕೃತ್ಯಗಳನ್ನು ಅನುಸರಿಸಿದ್ದರಿಂದಲೇ. ಅವರು ಎಡವುಕಲ್ಲನ್ನು ಎಡವಿದರು.
තස්‍ය කිං කාරණං? තේ විශ්වාසේන නහි කින්තු ව්‍යවස්ථායාඃ ක්‍රියයා චේෂ්ටිත්වා තස්මින් ස්ඛලනජනකේ පාෂාණේ පාදස්ඛලනං ප්‍රාප්තාඃ|
33 ಪವಿತ್ರ ವೇದದಲ್ಲಿ ಹೀಗೆ ಬರೆಯಲಾಗಿದೆ: “ಇಗೋ, ನಾನು ಚೀಯೋನಿನಲ್ಲಿ ಜನರು ಎಡವಿ ಬೀಳುವಂತೆ ಮಾಡುವ ಕಲ್ಲನ್ನೂ ಮುಗ್ಗರಿಸುವ ಬಂಡೆಯನ್ನೂ ಇಡುತ್ತೇನೆ. ಆತನ ಮೇಲೆ ನಂಬಿಕೆಯಿಡುವವನು ಆಶಾಭಂಗಪಡುವದೇ ಇಲ್ಲ.”
ලිඛිතං යාදෘශම් ආස්තේ, පශ්‍ය පාදස්ඛලාර්ථං හි සීයෝනි ප්‍රස්තරන්තථා| බාධාකාරඤ්ච පාෂාණං පරිස්ථාපිතවානහම්| විශ්වසිෂ්‍යති යස්තත්‍ර ස ජනෝ න ත්‍රපිෂ්‍යතේ|

< ರೋಮಾಪುರದವರಿಗೆ 9 >