< ಮತ್ತಾಯನು 4 >
1 ಆಮೇಲೆ ಸೈತಾನನಿಂದ ಶೋಧಿತರಾಗಲೆಂದು ಪವಿತ್ರಾತ್ಮರು ಯೇಸುವನ್ನು ಅರಣ್ಯಕ್ಕೆ ನಡೆಸಿದರು.
तैल्ला पत्ती, पवित्र आत्मा यीशु सुनसान ठैरी मां नीयो, ताके शैतान तैसेरी अज़मैइश केरे।
2 ನಲವತ್ತು ದಿನ ಹಗಲೂ ರಾತ್ರಿ ಉಪವಾಸವಿದ್ದ ಮೇಲೆ ಯೇಸುವಿಗೆ ಹಸಿವಾಯಿತು.
40 दिहाड़े ते 40 रातन किछ न खानेरां पत्ती तैस ढ्लुख लग्गी।
3 ಆಗ ಶೋಧಕನು ಯೇಸುವಿನ ಬಳಿ ಬಂದು, “ನೀನು ದೇವರ ಪುತ್ರನಾಗಿದ್ದರೆ, ಈ ಕಲ್ಲುಗಳು ರೊಟ್ಟಿಗಳಾಗುವಂತೆ ಆಜ್ಞಾಪಿಸು,” ಎಂದನು.
त तैखन शैताने ज़ैस जो अज़माने बालो भी ज़ोतन, तैस कां एइतां ज़ोवं, “अगर तू परमेशरेरू मट्ठू आस, त इन घोड़न जो हुक्म देइतां साबत केर, कि एना रोट्टी बनन् ताके तू खेइ सकस।”
4 ಅದಕ್ಕೆ ಯೇಸು, “ಪವಿತ್ರ ವೇದದಲ್ಲಿ ಬರೆದಿರುವ ಪ್ರಕಾರ, ‘ಮನುಷ್ಯನು ಜೀವಿಸುವುದು ರೊಟ್ಟಿಯಿಂದ ಮಾತ್ರವಲ್ಲ, ದೇವರ ಬಾಯಿಂದ ಹೊರಡುವ ಪ್ರತಿಯೊಂದು ಮಾತಿನಿಂದಲೂ ಜೀವಿಸುತ್ತಾನೆ,’” ಎಂದರು.
यीशुए तैस जुवाब दित्तो, “अवं न केरेलो किजोकि परमेशरेरी किताबी मां लिखोरूए, ‘मैन्हु सिर्फ रोट्टेइं सेइं ज़ींतो न राए, बल्के तै हर गल मन्ने सेइं ज़ींतो राते, ज़ै परमेशर ज़ोते।’”
5 ಆಮೇಲೆ ಸೈತಾನನು ಯೇಸುವನ್ನು ಪವಿತ್ರ ನಗರಕ್ಕೆ ಕರೆದುಕೊಂಡು ಹೋಗಿ ದೇವಾಲಯದ ಅತಿ ಎತ್ತರವಾದ ಶಿಖರದ ಮೇಲೆ ನಿಲ್ಲಿಸಿ,
फिरी शैताने तै पवित्र नगर यरूशलेमे मां नीयो ते मन्दरेरी उच्ची छ़म्पी पुड़ नेइतां खड़ो कियो।
6 “ನೀನು ದೇವರ ಪುತ್ರನಾಗಿದ್ದರೆ, ಕೆಳಕ್ಕೆ ಧುಮುಕು. ಪವಿತ್ರ ವೇದದಲ್ಲಿ ಬರೆದಿರುವ ಪ್ರಕಾರ: “‘ದೇವರು ನಿನ್ನ ವಿಷಯವಾಗಿ ತಮ್ಮ ದೂತರಿಗೆ ಆಜ್ಞಾಪಿಸುವರು, ನಿನ್ನ ಪಾದಗಳು ಕಲ್ಲಿಗೆ ತಗಲದಂತೆ ದೂತರು ನಿನ್ನನ್ನು ತಮ್ಮ ಕೈಗಳಲ್ಲಿ ಎತ್ತಿಕೊಳ್ಳುವರು,’” ಎಂದನು.
तैखन तैनी यीशु सेइं ज़ोवं, “अगर तू हकीक्ति मां परमेशरेरू मट्ठू आस त इट्ठां बिछ़ड़तां साबत केर, किजोकि पवित्रशास्त्रे मां लिखोरूए, ‘तै तेरे लेइ अपने स्वर्गदूतन हुक्म देलो, ते तैना तीं अपने हथ्थन मां ट्लाले, ताके तेरे पावन केन्ची घोड़न सेइं ठोकर न लग्गे।’”
7 ಅದಕ್ಕೆ ಯೇಸು, “‘ನಿನ್ನ ದೇವರಾದ ಕರ್ತದೇವರನ್ನು ಪರೀಕ್ಷಿಸಬಾರದು’ ಎಂಬುದನ್ನು ಸಹ ಪವಿತ್ರ ವೇದದಲ್ಲಿ ಬರೆದಿದೆ,” ಎಂದರು.
यीशुए तैस सेइं ज़ोवं, “(नईं, अवं छाल न मारेलो, किजोकि) परमेशरेरी किताबी मां एन भी लिखोरूए, ‘तू प्रभु अपने परमेशरे अज़मेइतां इन साबत केरनेरी कोशिश न केर कि तै अपने वादे पूरे केरते या नईं।’”
8 ಅನಂತರ ಸೈತಾನನು ಯೇಸುವನ್ನು ಬಹಳ ಎತ್ತರವಾದ ಪರ್ವತಕ್ಕೆ ಕರೆದುಕೊಂಡು ಹೋಗಿ, ಲೋಕದ ಎಲ್ಲಾ ರಾಜ್ಯಗಳನ್ನೂ ಅವುಗಳ ಮಹಿಮೆಯನ್ನೂ ಅವರಿಗೆ ತೋರಿಸಿ,
तैखन शैताने, यीशु एक्की बड़े उच्चे पहाड़े पुड़ नीयो, ते तैड़ी दुनियारां सारां राज़्ज़ां ते तैन केरि धन दौलत तैस हिराई।
9 “ನೀನು ಅಡ್ಡಬಿದ್ದು ನನ್ನನ್ನು ಆರಾಧಿಸಿದರೆ ಇವೆಲ್ಲವನ್ನು ನಿನಗೆ ಕೊಡುವೆನು,” ಎಂದನು.
तैखन तैनी यीशु सेइं ज़ोवं, “अगर तू मीं कां मथ्थो टेकस ते मेरी आराधना केरस, त अवं इन सब किछ तीं देलो।”
10 ಯೇಸು ಅವನಿಗೆ, “ಸೈತಾನನೇ, ತೊಲಗು. ಏಕೆಂದರೆ, ‘ನಿನ್ನ ಕರ್ತದೇವರನ್ನು ಆರಾಧಿಸಿ, ಅವರಿಗೆ ಮಾತ್ರವೇ ಸೇವೆ ಸಲ್ಲಿಸಬೇಕು,’ ಎಂದು ಪವಿತ್ರ ವೇದದಲ್ಲಿ ಬರೆದಿದೆ,” ಎಂದರು.
यीशुए तैस जो ज़ोवं, “हे शैतान! दूर भो, किजोकि परमेशरेरी किताबी मां लिखोरूए, ‘तू सिर्फ प्रभु अपने परमेशरे कां मथ्थो टेक ते तैसेरी आराधना केर!’”
11 ಆಗ ಸೈತಾನನು ಯೇಸುವನ್ನು ಬಿಟ್ಟುಹೋದನು. ದೇವದೂತರು ಬಂದು ಅವರಿಗೆ ಉಪಚಾರ ಮಾಡಿದರು.
तैखन शैतान तैस करां च़लो जेव, ते अकदम किछ स्वर्गदूत यीशु कां एइतां तैसेरी सेवा केरने लग्गे।
12 ಯೋಹಾನನು ಬಂಧಿತನಾದನೆಂದು ಕೇಳಿ, ಯೇಸು ಗಲಿಲಾಯಕ್ಕೆ ಹಿಂದಿರುಗಿದರು.
एक्सां केन्चे यीशु जो ज़ोवं, कि यूहन्ना ज़ै बपतिस्मो देनेबालो थियो, कैद कियोरोए त यीशु यहूदिया इलाकेरां, गलील इलाके मां वापस अव।
13 ಬಳಿಕ ನಜರೇತನ್ನು ಬಿಟ್ಟು, ಜೆಬುಲೂನ್ ಮತ್ತು ನೆಫ್ತಲೀಮ್ ಪ್ರಾಂತಗಳಿಗೆ ಬಂದು ಸರೋವರದ ಬಳಿಯಲ್ಲಿದ್ದ ಕಪೆರ್ನೌಮ್ ಎಂಬ ಊರಿನಲ್ಲಿ ವಾಸಮಾಡಿದರು.
ते नासरत नगर शैरतां कफरनहूम नगरे मां राने लगो, ज़ैन समुन्दरेरे बन्ने पुड़ आए, ज़ैड़ी जबूलून ते कने नप्ताली गोट्लेरे लोक राते थिये।
14 ಹೀಗೆ ಪ್ರವಾದಿ ಯೆಶಾಯನ ಮುಖಾಂತರ ಹೇಳಿಸಿರುವ ಈ ಮಾತು ನೆರವೇರಿತು. ಅದೇನೆಂದರೆ:
ताके तैन वचन ज़ैन यशायाह नेबे ज़ोरू थियूं पूरू भोए, तैनी ज़ोवं,
15 “ಜೆಬುಲೂನ್ ನಾಡು ಮತ್ತು ನೆಫ್ತಲೀಮ್ ನಾಡು, ಯೊರ್ದನ್ ನದಿಯ ಆಚೆ ಸರೋವರದ ಕಡೆ, ಯೆಹೂದ್ಯರಲ್ಲದವರಿರುವ ಗಲಿಲಾಯ ನಾಡು,
“ज़ैना लोक जबूलून ते नप्ताली गोत्रां केरे इलाके मां आन, ज़ैना गलील समुन्दरेरे नेड़े यरदन दरियारे उस पार, गलील इलाके मां आन, ज़ैड़ी गैर यहूदी लोक भी रातन,
16 ಕತ್ತಲಲ್ಲಿ ವಾಸಿಸಿದ ಈ ಸ್ಥಳಗಳ ಜನರಿಗೆ ಮಹಾ ಬೆಳಕು ಕಾಣಿಸಿತು; ಮರಣ ಛಾಯೆಯ ಈ ಪ್ರದೇಶದಲ್ಲಿ ವಾಸಿಸುವವರಿಗೆ ಬೆಳಕು ಉದಯಿಸಿತು.”
(तैना लोक) ज़ैना पापेरे आंधरे मां बिश्शोरेन, तैनेईं बड्डी लौ लई। तै लौ तैन पुड़ चमकी ज़ैना हमेशारे मौतारे आंधरेरे मुलखे मां बिश्शोरेन।”
17 ಅಂದಿನಿಂದ ಯೇಸು, “ದೇವರ ಕಡೆಗೆ ತಿರುಗಿಕೊಳ್ಳಿರಿ, ಪರಲೋಕ ರಾಜ್ಯವು ಸಮೀಪಿಸಿದೆ,” ಎಂದು ಬೋಧಿಸತೊಡಗಿದರು.
तेइसेरू देंतू यीशुए परमेशरेरी खबर लोकन शुनानेरी सेवा शुरू की। तैनी लोकन ज़ोवं, “अपने पापन करां मनफिराथ, किजोकि स्वर्गेरू राज़ नेड़े ओरूए।”
18 ಯೇಸು ಗಲಿಲಾಯ ಸರೋವರದ ತೀರದಲ್ಲಿ ನಡೆದುಹೋಗುತ್ತಿರುವಾಗ, ಪೇತ್ರ ಎನಿಸಿಕೊಂಡ ಸೀಮೋನನನ್ನೂ ಅವನ ಸಹೋದರ ಅಂದ್ರೆಯನನ್ನೂ ಕಂಡರು. ಬೆಸ್ತರಾಗಿದ್ದ ಅವರು ಸರೋವರದಲ್ಲಿ ಬಲೆ ಬೀಸುತ್ತಿದ್ದರು.
एक्सां ज़ैखन यीशु गलील समुन्दरेरे बन्ने च़लोरो थियो, त तैनी दूई मैन्हु लाए ज़ैना मेछ़ली ट्लानेबाले थिये। तैना मेछ़ली ट्लानेरे लेइ समुन्दरे मां ज़ाल छ़ेड्डी राओरे थिये। तैन मरां एक्केरू नवं शमौन, ज़ैस जो पतरस भी ज़ोतन, ते तैसेरो ढ्ला ज़ेसेरू नवं अन्द्रियास थियूं।
19 ಯೇಸು ಅವರಿಗೆ, “ನನ್ನನ್ನು ಹಿಂಬಾಲಿಸಿರಿ. ನಾನು ನಿಮ್ಮನ್ನು, ಮನುಷ್ಯರನ್ನು ದೇವರ ಮಾರ್ಗದಲ್ಲಿ ನಡೆಸುವವರನ್ನಾಗಿ ಮಾಡುವೆನು,” ಎಂದು ಹೇಳಿದರು.
यीशुए तैन सेइं ज़ोवं, “एज्जा मेरे चेले बना। अवं तुसन शिखालेलो कि केन्च़रां होरे मैन्हु मेरे चेले बनानेन।”
20 ತಕ್ಷಣವೇ, ಅವರು ತಮ್ಮ ಬಲೆಗಳನ್ನು ಬಿಟ್ಟು ಯೇಸುವನ್ನು ಹಿಂಬಾಲಿಸಿದರು.
तैना अकदम अपना ज़ालां छ़ेडतां यीशु पत्ती च़ले जे।
21 ಯೇಸು ಅಲ್ಲಿಂದ ಮುಂದೆ ಹೋಗುತ್ತಿದ್ದಾಗ ಇನ್ನಿಬ್ಬರು ಅಣ್ಣತಮ್ಮಂದಿರನ್ನು ಅಂದರೆ, ಜೆಬೆದಾಯನ ಮಗ ಯಾಕೋಬ ಮತ್ತು ಅವನ ಸಹೋದರ ಯೋಹಾನನನ್ನು ಕಂಡರು. ಅವರು ತಮ್ಮ ತಂದೆ ಜೆಬೆದಾಯನೊಡನೆ ದೋಣಿಯೊಳಗೆ ತಮ್ಮ ಬಲೆಗಳನ್ನು ಸರಿಪಡಿಸುತ್ತಿದ್ದರು. ಯೇಸು ಅವರನ್ನೂ ಕರೆದರು.
ते तैना तैट्ठां थोड़े ज़ेरे अग्गर जे, त यीशुए होरे दूई ढ्ला, यानी याकूब त कने तैसेरो ढ्ला यूहन्ना अपने बाजी जब्दी सेइं साथी किश्ती मां लाए। तैना किश्ती मां ज़ालां ठीक केरने लग्गोरे थिये। यीशुए तैना भी कुजाए (कि तैना तैसेरे चेले बनन्)।
22 ಕೂಡಲೇ, ಅವರು ದೋಣಿಯನ್ನೂ ತಮ್ಮ ತಂದೆಯನ್ನೂ ಬಿಟ್ಟು ಯೇಸುವನ್ನು ಹಿಂಬಾಲಿಸಿದರು.
ते तैना भी तैखने किश्ती ते अपने बाजी तैड़ी ज़ेरे छ़ेडतां यीशु सेइं साथी च़ले जे।
23 ಯೇಸು ಗಲಿಲಾಯದಲ್ಲೆಲ್ಲಾ ಸಂಚರಿಸಿ, ಯೆಹೂದ್ಯರ ಸಭಾಮಂದಿರಗಳಲ್ಲಿ ಬೋಧಿಸುತ್ತಾ, ರಾಜ್ಯದ ಸುವಾರ್ತೆಯನ್ನು ಸಾರುತ್ತಾ, ಜನರಲ್ಲಿದ್ದ ಸಕಲ ವಿಧವಾದ ವ್ಯಾಧಿಗಳನ್ನೂ ಸಕಲ ವಿಧವಾದ ಬೇನೆಗಳನ್ನೂ ಗುಣಪಡಿಸುತ್ತಾ ಬಂದರು.
तैल्ला पत्ती, यीशु सारे गलील इलाके मां हंठतो फिरतो राव। तै तैन केरे प्रार्थना घरन मां लोकन शिक्षा देतो राव ते परमेशरेरे राज़्ज़ेरी खुशखबरी शुनातो राव। ते तै लोकां केरि हर किसमेरी बिमैरी ते कमज़ोरी दूर केरतो राव।
24 ಯೇಸುವಿನ ಸುದ್ದಿ ಸಿರಿಯಾ ದೇಶದಲ್ಲೆಲ್ಲಾ ಹಬ್ಬಿದ್ದರಿಂದ, ಜನರು ವಿವಿಧ ವ್ಯಾಧಿಗಳಿಂದಲೂ ತೀವ್ರ ವೇದನೆಯಿಂದಲೂ ಅಸ್ವಸ್ಥರಾದವರನ್ನೂ ದೆವ್ವ ಹಿಡಿದವರನ್ನೂ ಮೂರ್ಛಾರೋಗಿಗಳನ್ನೂ ಪಾರ್ಶ್ವವಾಯು ಪೀಡಿತರನ್ನೂ ಅವರ ಬಳಿಗೆ ಕರೆದುಕೊಂಡು ಬಂದರು; ಯೇಸು ಅವರನ್ನೆಲ್ಲಾ ಗುಣಪಡಿಸಿದರು.
यीशुएरे बारे मां ई खबर सारे सीरिया इलाके मां मुशूर भोइ जेई। एसेरे वजाई सेइं, ज़ैड़ी कोन्ची तै जेव, तैड़ी लोक सेब्भी बिमारन ज़ैना हर किसमेरी बिमैरी ते तकलीफन मां फसोरे थिये, ते ज़ैन लोकन पुड़ भूतां केरो सायो थियो, ते ज़ैना मिरगरे रोगी थिये, ते ज़ैना अधरंगेरे रोगी थिये, तैना यीशु कां आने ते यीशुए तैना सारे बज़्झ़ाए।
25 ಗಲಿಲಾಯ, ದೆಕಪೊಲಿ, ಯೆರೂಸಲೇಮ್, ಯೂದಾಯ ಹಾಗೂ ಯೊರ್ದನ್ ನದಿಯ ಆಚೆಕಡೆಯಿಂದಲೂ ಜನರು ದೊಡ್ಡ ಗುಂಪಾಗಿ ಯೇಸುವನ್ನು ಹಿಂಬಾಲಿಸಿದರು.
एसेरे वजाई सेइं मैन्हु केरि बड़ी भीड़ यीशु पत्ती च़ली। तैना लोक गलील, दिकापुलिस इलाकां केरे, यरूशलेम नगरेरे, यहूदिया इलाकेरे, ते यरदन दरियारे पैरीं पारेरे इलाकां केरां ओरे थिये।