< ಮಾರ್ಕನು 1 >
1 ದೇವಪುತ್ರರಾದ ಯೇಸುಕ್ರಿಸ್ತರ ಸುವಾರ್ತೆಯ ಆರಂಭ.
ई यीशु मसीहेरे बारे मां खुशखेबरारी शुरुआत आए, ज़ैन परमेशरेरू मट्ठू आए।
2 ಪ್ರವಾದಿ ಯೆಶಾಯನ ಗ್ರಂಥದಲ್ಲಿ: “ಇಗೋ, ನಿನ್ನ ಮುಂದೆ ನಾನು ನನ್ನ ದೂತನನ್ನು ಕಳುಹಿಸುತ್ತೇನೆ, ಅವನು ನಿನ್ನ ದಾರಿಯನ್ನು ಸಿದ್ಧಮಾಡುವನು.”
(बड़े पेइले) यशायाह नेबे अपनि किताबी मां लिखोरू थियूं कि, (परमेशरे अपने मट्ठे सेइं ज़ोवं, ) “शुन, अवं अपनो बिस्तार देनेबालो तीं केरां पेइले भेज़ेलो।” “तै तीं केरां पेइलो गेइतां तेरे लेइ बत तियार केरेलो। (यानी, लोकां केरे दिल परमेशरे लेइ तियार केरेलो)”
3 “‘ಕರ್ತದೇವರ ಮಾರ್ಗವನ್ನು ಸಿದ್ಧಮಾಡಿರಿ, ಅವರ ದಾರಿಗಳನ್ನು ಸರಾಗಮಾಡಿರಿ,’ ಎಂದು ಅರಣ್ಯದಲ್ಲಿ ಕೂಗುವವನ ಸ್ವರವದೆ.”
“तै बिस्तार देनेबालो सुनसान ठैरी मां लोकन, ज़ैना तैस कां गाले, तैन हक देइतां ज़ोलो कि ‘तुसन कां प्रभु एजनेबालो आए, एल्हेरेलेइ तुस तैसेरेलेइ बत तियार केरा त कने तैसेरेलेइ सड़कां सिद्धी केरा।’ (यानी, प्रभुएरे लेइ तुस अपने दिल साफ केरा)”
4 ಎಂದು ಬರೆದಿಟ್ಟ ಪ್ರಕಾರ, ಸ್ನಾನಿಕನಾದ ಯೋಹಾನನು ಅರಣ್ಯದಲ್ಲಿ ಪಾಪಗಳ ಪರಿಹಾರಕ್ಕಾಗಿ ದೇವರ ಕಡೆಗೆ ತಿರುಗಿಕೊಂಡು ದೀಕ್ಷಾಸ್ನಾನ ಮಾಡಿಸಿಕೊಳ್ಳಬೇಕೆಂದು, ಸಾರುತ್ತಾ ಬಂದನು.
ज़ेन्च़रां लिखोरू थियूं, अक बिस्तार देनेबालो अव। तैस मैनेरू नवं यूहन्ना थियूं। लोक तैस जो बपतिस्मो देनेबालो भी ज़ोते थिये। तै यहूदिया इलाकेरे सुनसान ठैरी मां अव। तैड़ी तै लोकन परमेशरेरी गल्लां शुनातो थियो कि, “तुस अपने पापन करां मनफिराथ, त कने बपतिस्मो नेथ, ताके परमेशर तुश्शे पाप माफ़ केरे।”
5 ಯೂದಾಯ ಪ್ರಾಂತದ ಎಲ್ಲಾ ಹಳ್ಳಿಗಳಿಂದ ಮತ್ತು ಯೆರೂಸಲೇಮ್ ನಗರದಿಂದ ಎಲ್ಲಾ ಜನರು ಅವನ ಬಳಿಗೆ ಬರುತ್ತಿದ್ದರು. ಅವರು ತಮ್ಮ ಪಾಪಗಳನ್ನು ಅರಿಕೆಮಾಡುತ್ತಾ, ಅವನಿಂದ ಯೊರ್ದನ್ ನದಿಯಲ್ಲಿ ದೀಕ್ಷಾಸ್ನಾನ ಮಾಡಿಸಿಕೊಳ್ಳುತ್ತಿದ್ದರು.
यहूदिया इलाकेरे बड़े लोक त यरूशलेम नगरेरे रानेबालन मरां बड़े लोक यूहन्नारी गल्लां शुन्नेरे लेइ सुनसान ठैरी मां तैस कां आए। तैन लोकेईं अपने पाप मेन्तां यूहन्ना करां यरदन दरियाए मां बपतिस्मो नीयो।
6 ಯೋಹಾನನು ಒಂಟೆಯ ಕೂದಲಿನ ಉಡುಪನ್ನು ಧರಿಸಿ, ಸೊಂಟಕ್ಕೆ ಒಂದು ಚರ್ಮದ ನಡುಕಟ್ಟನ್ನು ಕಟ್ಟಿಕೊಳ್ಳುತ್ತಿದ್ದನು. ಮಿಡತೆಗಳು ಮತ್ತು ಕಾಡುಜೇನು ಅವನ ಆಹಾರವಾಗಿತ್ತು.
यूहन्ना आम लिगड़ां लातो थियो ज़ैना लिगड़ां ऊँटेरे बालन सेइं बनोरां थियां। तै अपनि कमरी पुड़ चमड़ेरू मज़ बंधतो थियो। ते तै टिट्टां त कने जंगलेरू माछ़ी खातो थियो।
7 ಅವನು, “ನನಗಿಂತ ಶಕ್ತರೊಬ್ಬರು ನನ್ನ ನಂತರ ಬರುತ್ತಾರೆ, ಅವರ ಪಾದರಕ್ಷೆಗಳ ಪಟ್ಟಿಗಳನ್ನು ದಾಸನಂತೆ ಬಾಗಿ ಬಿಚ್ಚುವುದಕ್ಕೂ ನಾನು ಅರ್ಹನಲ್ಲ.
तै लोकन शुनातो थियो कि, “कोई अक, ज़ै मीं केरां भी महान आए, मेरे बाद एजनेबालोए। अवं त तैसेरो गुलाम भोनेरे काबल भी नईं कि लिकतां तैसेरे बूटेरे तसमे खोल्ली।
8 ನಾನು ನಿಮಗೆ ನೀರಿನಲ್ಲಿ ದೀಕ್ಷಾಸ್ನಾನ ಮಾಡಿಸುತ್ತೇನೆ, ಆದರೆ ಅವರು ನಿಮಗೆ ಪವಿತ್ರಾತ್ಮರಲ್ಲಿಯೇ ದೀಕ್ಷಾಸ್ನಾನ ಮಾಡಿಸುವರು,” ಎಂದು ಘೋಷಿಸುತ್ತಿದ್ದನು.
अवं त तुसन पैनी सेइं बपतिस्मो देताईं, पन तै तुसन पवित्र आत्मा सेइं बपतिस्मो देलो”
9 ಹೀಗಿರುವಲ್ಲಿ, ಒಂದು ದಿನ ಯೇಸು ಗಲಿಲಾಯ ಪ್ರಾಂತದ ನಜರೇತ್ ಎಂಬ ಪಟ್ಟಣದಿಂದ ಬಂದು, ಯೊರ್ದನ್ ನದಿಯಲ್ಲಿ ಯೋಹಾನನಿಂದ ದೀಕ್ಷಾಸ್ನಾನ ಮಾಡಿಸಿಕೊಂಡರು.
तैल्ला पत्ती, तैन दिहाड़न मां एरू भोवं कि यीशु गलील इलाकेरे नासरत नगरेरां यूहन्ना कां अव। तैनी यूहन्ना करां यरदन दरियाए मां बपतिस्मो नीयो।
10 ಯೇಸು ನೀರಿನಿಂದ ಮೇಲಕ್ಕೆ ಬಂದ ಕೂಡಲೇ, ಆಕಾಶವು ತೆರೆದು, ಪವಿತ್ರಾತ್ಮರು ಪಾರಿವಾಳದಂತೆ ತಮ್ಮ ಮೇಲೆ ಇಳಿದು ಬರುವುದನ್ನು ಕಂಡರು.
ज़ैखन यीशु बपतिस्मो नेइतां पैनी मरां बेइर अव, त तैनी अम्बर खुलतू त पवित्र आत्मा कबूतरेरी शकली मां तैस पुड़ एत्तो लाव।
11 ಆಗ, “ನೀನು ನನ್ನ ಪ್ರಿಯ ಪುತ್ರನು, ನಿನ್ನನ್ನು ಅಪಾರವಾಗಿ ಮೆಚ್ಚಿದ್ದೇನೆ,” ಎಂಬ ಧ್ವನಿಯು ಪರಲೋಕದಿಂದ ಕೇಳಿಬಂತು.
तैखन परमेशरे स्वर्गेरां यीशु सेइं ज़ोवं, “तू मेरू ट्लारू मट्ठू आस, अवं तीं पुड़ बड़ो खुश आईं।”
12 ಕೂಡಲೇ ಪವಿತ್ರಾತ್ಮ ದೇವರು ಯೇಸುವನ್ನು ಅರಣ್ಯಕ್ಕೆ ನಡೆಸಿದರು.
तैल्ला पत्ती, अकदम पवित्र आत्मा यीशु सुनसान ठैरी जो भेज़ो।
13 ಯೇಸು ಅಲ್ಲಿ ನಲವತ್ತು ದಿನಗಳು, ಸೈತಾನನಿಂದ ಶೋಧನೆಗೆ ಒಳಗಾದರು. ಕಾಡುಮೃಗಗಳೊಡನೆ ಅರಣ್ಯದಲ್ಲಿ ಇದ್ದು, ದೇವದೂತರಿಂದ ಉಪಚಾರ ಪಡೆದರು.
सुनसान ठैरी मां 40 दिहाड़न तगर शैताने यीशु अज़माव। त तैड़ी यीशु जंगली जानवरन साथी थियो। तैखन परमेशरेरे स्वर्गदूत यीशु कां एइतां तैसेरी सेवा केरने लग्गे।
14 ಯೋಹಾನನು ಬಂಧಿತನಾಗಿ ಸೆರೆಯಾದ ತರುವಾಯ, ಯೇಸು ಗಲಿಲಾಯಕ್ಕೆ ಬಂದು ದೇವರ ಸುವಾರ್ತೆಯನ್ನು ಸಾರಿದರು:
किछ वक्तेरां बाद, यूहन्ना नबी कैद कियो जेव। तैल्ला बाद, यीशु गलील इलाके मां जेव। तैड़ी तै लोकन परमेशरेरे राज़्ज़ेरे बारे मां खुशखबरी शुनाने लगो।
15 “ಕಾಲವು ಪರಿಪೂರ್ಣವಾಗಿದೆ, ದೇವರ ರಾಜ್ಯವು ಸಮೀಪಿಸಿದೆ, ಪಶ್ಚಾತ್ತಾಪಪಟ್ಟು ಸುವಾರ್ತೆಯನ್ನು ನಂಬಿರಿ,” ಎಂದು ಹೇಳಿದರು.
तैनी ज़ोवं कि, “ठीक वक्त ओरोए त कने परमेशरेरू राज़ नेड़े ओरूए! एल्हेरेलेइ, तुस अपने पापन करां मनफिराथ ते इस खुशखेबरी पुड़ विश्वास केरा।”
16 ಯೇಸು ಗಲಿಲಾಯ ಸರೋವರದ ತೀರದಲ್ಲಿ ನಡೆದುಹೋಗುತ್ತಿರುವಾಗ, ಸೀಮೋನನು ಮತ್ತು ಅವನ ಸಹೋದರ ಅಂದ್ರೆಯನನ್ನೂ ಕಂಡರು. ಬೆಸ್ತರಾಗಿದ್ದ ಅವರು ಸರೋವರದಲ್ಲಿ ಬಲೆ ಬೀಸುತ್ತಿದ್ದರು.
एक्सां, ज़ैखन यीशु गलील नव्वेंरे समुन्दरेरे बन्ने च़लोरो थियो, तैखन तैनी दूई मैन्हु शमौन त तैसेरो ढ्ला अन्द्रियास लाए, ज़ैना मेछ़ली ट्लानेबाले थिये। तैना मेछ़ली ट्लानेरे लेइ समुन्दरे मां ज़ाल छ़ेड्डी राओरे थिये।
17 ಯೇಸು ಅವರಿಗೆ, “ನನ್ನನ್ನು ಹಿಂಬಾಲಿಸಿರಿ. ನಾನು ನಿಮ್ಮನ್ನು, ಮನುಷ್ಯರನ್ನು ದೇವರ ಮಾರ್ಗದಲ್ಲಿ ನಡೆಸುವವರನ್ನಾಗಿ ಮಾಡುವೆನು,” ಎಂದು ಹೇಳಿದರು.
यीशुए तैन सेइं ज़ोवं, “एज्जा मेरे चेले बना। अवं तुसन शिखालेलो कि केन्च़रां होरे मैन्हु मेरे चेले बनानेन।”
18 ತಕ್ಷಣವೇ ಅವರು ತಮ್ಮ ಬಲೆಗಳನ್ನು ಬಿಟ್ಟು ಯೇಸುವನ್ನು ಹಿಂಬಾಲಿಸಿದರು.
अकदम तैना अपना जालां छ़ेडतां यीशु पत्ती च़ले जे।
19 ಯೇಸು ಅಲ್ಲಿಂದ ಮುಂದೆ ಹೋಗುತ್ತಿದ್ದಾಗ, ಜೆಬೆದಾಯನ ಮಗ ಯಾಕೋಬ ಮತ್ತು ಅವನ ತಮ್ಮ ಯೋಹಾನನನ್ನು ಕಂಡರು. ಅವರು ತಮ್ಮ ದೋಣಿಯೊಳಗೆ ತಮ್ಮ ಬಲೆಗಳನ್ನು ಸರಿಮಾಡುತ್ತಿದ್ದರು.
ज़ैखन तैना थोड़े ज़ेरे अग्गर जे, त यीशुए याकूब त कने तैसेरो ढ्ला यूहन्ना लाए। तैना दुइये जेब्देरां मट्ठां थियां। तैना किश्ती मां जालां ठीक केरने लग्गोरे थिए।
20 ಕೂಡಲೇ ಯೇಸು ಅವರನ್ನು ಕರೆಯಲು, ಅವರು ತಮ್ಮ ತಂದೆ ಜೆಬೆದಾಯನನ್ನು ಕೂಲಿಯಾಳುಗಳ ಸಂಗಡ ದೋಣಿಯಲ್ಲಿ ಬಿಟ್ಟು ಯೇಸುವನ್ನು ಹಿಂಬಾಲಿಸಿದರು.
अकदम यीशुए तैना अपने चेले बनानेरे लेइ कुजाए। तैना दुइये, अपने बाजी जब्दी किश्ती मां मज़दूरन सेइं साथी छ़ेडतां, यीशु सेइं साथी च़ले जे।
21 ಅವರು ಕಪೆರ್ನೌಮಿಗೆ ಹೋದರು, ಕೂಡಲೇ ಸಬ್ಬತ್ ದಿನದಂದು ಯೇಸು ಸಭಾಮಂದಿರಕ್ಕೆ ಹೋಗಿ ಬೋಧಿಸತೊಡಗಿದರು.
तैल्ला पत्ती, यीशु त तैसेरे चेले तैट्ठां कफरनहूम नगरे मां जे। आरामेरे दिहाड़े, अकदम यीशु तैन केरे प्रार्थना घरे मां जेव। तैड़ी तै परमेशरेरी गल्लां तैन लोकन शुनाने लगो।
22 ಯೇಸುವಿನ ಬೋಧನೆಯನ್ನು ಕೇಳಿ ಜನರು ಆಶ್ಚರ್ಯಪಟ್ಟರು. ಏಕೆಂದರೆ ಯೇಸು ನಿಯಮ ಬೋಧಕರಂತೆ ಬೋಧಿಸದೆ, ಅಧಿಕಾರವಿದ್ದವರಂತೆ ಬೋಧಿಸುತ್ತಿದ್ದರು.
तैना यीशुएरी शिक्षा शुन्तां हैरान भोए, किजोकि तैनी शास्त्री लोकां केरि ज़ेरि शिक्षा न दित्ती, पन तै अधिकारे सेइं शिक्षा देइ राओरो थियो।
23 ಆ ಸಮಯದಲ್ಲಿ ಸಭಾಮಂದಿರದೊಳಗೆ ಅಶುದ್ಧಾತ್ಮವಿದ್ದ ಒಬ್ಬ ಮನುಷ್ಯನಿದ್ದನು.
ज़ैखन यीशु तैड़ी थियो, त तैन केरे प्रार्थना घरे मां अक मैन्हु थियो, ज़ैस पुड़ भूतेरो सायो थियो।
24 ಅವನು, “ನಜರೇತಿನ ಯೇಸುವೇ, ನಮ್ಮ ಗೊಡವೆ ನಿನಗೇಕೆ? ನೀವು ನಮ್ಮನ್ನು ನಾಶಮಾಡುವುದಕ್ಕಾಗಿ ಬಂದಿರುವೆಯೋ? ನೀವು ಯಾರೆಂದು ನಾನು ಬಲ್ಲೆನು. ನೀವು ದೇವರಿಂದ ಬಂದ ಪರಿಶುದ್ಧರು,” ಎಂದು ಕೂಗಿ ಹೇಳಿದನು.
अचानक तैनी मैने चिन्डां मेरतां ज़ोवं, “हे नासरत नगरेरो यीशु! तीं सेइं असन कुन कम? कुन तू असन नाश केरनेरे लेइ ओरोस? अवं ज़ानताईं कि तू कौन आस, तू परमेशरेरू पवित्र मट्ठू आस!”
25 ಆಗ ಯೇಸು, “ಸುಮ್ಮನಿರು, ಅವನೊಳಗಿಂದ ಹೊರಗೆ ಬಾ,” ಎಂದು ಗದರಿಸಿದರು.
पन यीशुए तैस भूते झ़िड़कतां ज़ोवं, “च़ुप रा, एस मैन्हु मरां निस्सी गा!”
26 ಅಶುದ್ಧಾತ್ಮವು ಅವನನ್ನು ಉಗ್ರವಾಗಿ ಒದ್ದಾಡಿಸಿ ಗಟ್ಟಿಯಾಗಿ ಕೂಗುತ್ತಾ, ಅವನೊಳಗಿಂದ ಹೊರಗೆ ಬಂತು.
तैखन भूते तै मैन्हु ड्लेडेइतां त ज़ोरे सेइं चिन्डां मेरतां तैस मैन्हु मरां निस्सी जेव।
27 ಜನರೆಲ್ಲರು ಇದನ್ನು ಕಂಡು ವಿಸ್ಮಯಗೊಂಡು, “ಇದೇನು? ಅಧಿಕಾರಸಹಿತವಾದ ಹೊಸ ಬೋಧನೆ! ಈತನು ಅಶುದ್ಧಾತ್ಮಗಳಿಗೆ ಆಜ್ಞಾಪಿಸುತ್ತಾನೆ, ಅವು ಈತನಿಗೆ ವಿಧೇಯವಾಗುತ್ತವೆ!” ಎಂದು ತಮ್ಮತಮ್ಮೊಳಗೆ ಮಾತನಾಡಿಕೊಂಡರು.
एन हेरतां सारे लोक बड़े हैरान भोए। तैना एप्पू मांमेइं गलबात केरतां एक्की होरि पुछ़ने लग्गे कि, “ए कुन गल आए! ए त अक नंव्वी शिक्षा आए ज़ैस मां अधिकार आए! तै त भूतन भी अधिकारे सेइं हुक्म देते ते तैना भी तैसेरो हुक्म मन्तन।”
28 ಕೂಡಲೇ ಯೇಸುವಿನ ಸುದ್ದಿಯು ಗಲಿಲಾಯದ ಸುತ್ತಮುತ್ತಲಿನ ಪ್ರಾಂತದಲ್ಲೆಲ್ಲಾ ಹಬ್ಬಿತು.
अकदम यीशुएरे बारे मां ए गल गलील इलाकेरे आसेपासेरे सेब्भी ठैरन मां फैली जेई।
29 ಅವರು ಸಭಾಮಂದಿರವನ್ನು ಬಿಟ್ಟ ಕೂಡಲೇ, ಯಾಕೋಬ ಯೋಹಾನರೊಡನೆ ಸೀಮೋನ ಅಂದ್ರೆಯರ ಮನೆಗೆ ಹೋದರು.
तैना अकदम प्रार्थना घरे मरां निस्तां, याकूब त कने यूहन्ना सेइं साथी शमौन त अन्द्रियासेरे घरे जे।
30 ಅಲ್ಲಿ ಸೀಮೋನನ ಅತ್ತೆಯು ಜ್ವರದಿಂದ ಮಲಗಿದ್ದಳು. ಕೂಡಲೇ ಅವರು ಆಕೆಯ ವಿಷಯವಾಗಿ ಯೇಸುವಿಗೆ ತಿಳಿಸಿದರು.
शमौनेरी शिखी भुखारे थियो ते तै लेटोरी थी। अकदम तैनेईं तैसारे बारे मां यीशु सेइं ज़ोवं कि ऊ बिमार आए।
31 ಯೇಸು ಆಕೆಯ ಬಳಿಗೆ ಬಂದು, ಕೈಹಿಡಿದು ಎಬ್ಬಿಸಿದರು. ಜ್ವರವು ಆಕೆಯನ್ನು ಬಿಟ್ಟುಹೋಯಿತು ಮತ್ತು ಆಕೆಯು ಅವರಿಗೆ ಉಪಚರಿಸಿದಳು.
यीशुए तैस कां गेइतां तैसारो हथ ट्लेइतां खड़ी की। अकदम तैसारो भुखार ठीक भोव। ते तै तैन केरि सेवा केरने लग्गी।
32 ಆ ಸಂಜೆ ಸೂರ್ಯಾಸ್ತವಾದ ಮೇಲೆ ಜನರು ಅಸ್ವಸ್ಥರಾದವರನ್ನು ಮತ್ತು ದೆವ್ವಪೀಡಿತರನ್ನು ಯೇಸುವಿನ ಬಳಿಗೆ ಕರೆತಂದರು.
ड्लोझ़ी ज़ैखन दिहाड़ो डुब्बो, त लोक सारे बिमार मैन्हु त कने ज़ैन मैनन् पुड़ भूतेरो सायो थियो तैना यीशु कां आन्ने लग्गे, ताके तै तैनन् बज़्झ़ाए।
33 ಇಡೀ ಊರಿನವರು ಕೂಡಿ ಆ ಮನೆಯ ಬಾಗಿಲಿನ ಬಳಿ ಬಂದರು.
तैस नगरेरे बड़े लोक तैस घरेरे दारे पुड़ अकोट्ठे भोए।
34 ಯೇಸು ವಿವಿಧ ರೋಗಗಳಿಗೆ ಒಳಗಾದ ಅನೇಕರನ್ನು ಸ್ವಸ್ಥಪಡಿಸಿ, ಅನೇಕ ದೆವ್ವಗಳನ್ನು ಓಡಿಸಿದರು. ಆದರೆ ತಾನು ಯಾರೆಂದು ಆ ದೆವ್ವಗಳಿಗೆ ತಿಳಿದಿದ್ದರಿಂದ ಯೇಸು ಅವುಗಳಿಗೆ ಮಾತನಾಡಲು ಅನುಮತಿಸಲಿಲ್ಲ.
यीशुए बड़े मैन्हु बज़्झ़ाए, ज़ैना बड़े किसमां केरि बिमैरन सेइं दुखी थिये। त तैनी बड़े मैनन् मरां भूतां केरो सायो कड्डो। पन यीशुए भूतन किछ ज़ोने न दित्तू, किजोकि तैना यीशु पिशानतां थियां (कि एन परमेशरेरू मट्ठू आए)।
35 ಬೆಳಗಾಗುವ ಮೊದಲೇ, ಇನ್ನೂ ಕತ್ತಲಿರುವಾಗ, ಯೇಸು ಎದ್ದು ಏಕಾಂತ ಸ್ಥಳಕ್ಕೆ ಹೊರಟುಹೋಗಿ, ಅಲ್ಲಿ ಪ್ರಾರ್ಥನೆ ಮಾಡುತ್ತಿದ್ದರು.
एग्री दिहाड़ी, झ़ेज़्झ़ां-झ़ेज़्झ़ां दिहाड़ो निस्ने केरां बड़े पेइले, यीशु उठतां बेइर एक्की सुनसान ठैरी मां जेव। तैड़ी तै प्रार्थना केरने लगो।
36 ಆಗ ಸೀಮೋನನು ಮತ್ತು ಅವನ ಸಂಗಡಿಗರು ಯೇಸುವನ್ನು ಹುಡುಕಿಕೊಂಡು ಹೋದರು.
पन थोड़े च़िरेरां बाद, शमौन त तैसेरे साथी, यीशु तोपने जे।
37 ಯೇಸುವನ್ನು ಕಂಡ ಮೇಲೆ, “ಎಲ್ಲರೂ ನಿಮ್ಮನ್ನು ಎದುರು ನೋಡುತ್ತಿದ್ದಾರೆ,” ಎಂದು ಹೇಳಿದರು.
ज़ैखन तैनन् तै मैल्लो, त तैनेईं यीशुए सेइं ज़ोवं, “(वापस ड्लाव्वें मां एई, ) सारे लोक तीं तोप्पी राओरेन!”
38 ಯೇಸು ಅವರಿಗೆ, “ನಾವು ಸಮೀಪದಲ್ಲಿರುವ ಬೇರೆ ಊರುಗಳಿಗೆ ಹೋಗೋಣ. ಅಲ್ಲಿಯೂ ನಾನು ಸುವಾರ್ತೆಯನ್ನು ಸಾರಬೇಕು. ನಾನು ಬಂದಿರುವುದು ಇದಕ್ಕಾಗಿಯೇ,” ಎಂದು ಹೇಳಿದರು.
पन यीशुए तैन सेइं ज़ोवं, “एज्जा, अस होरि केन्ची आसेपासेरे ड्लोंव्वन मां गाम, ताके अवं तैन लोकन भी परमेशरेरी गल्लां शुनेई। किजोकि अवं एस्से कम्मेरे लेइ दुनियाई मां ओरोईं।”
39 ಆದ್ದರಿಂದ ಯೇಸು ಗಲಿಲಾಯ ಪ್ರಾಂತವನ್ನೆಲ್ಲಾ ಸಂಚರಿಸಿ, ಅವರ ಸಭಾಮಂದಿರಗಳಲ್ಲಿ ಉಪದೇಶ ಮಾಡುತ್ತಾ, ದೆವ್ವಗಳನ್ನು ಓಡಿಸುತ್ತಾ ಇದ್ದರು.
तैल्हेरेलेइ यीशु गलील इलाकेरे सारे ड्लोंव्वन मां गेइतां, तैन केरे प्रार्थना घरन मां लोकन परमेशरेरी गल्लां शुनातो राव ते बड़े लोकन मरां भूतां केरो सायो कढतो राव।
40 ಕುಷ್ಠರೋಗಿಯಾಗಿದ್ದ ಒಬ್ಬನು ಯೇಸುವಿನ ಬಳಿಗೆ ಬಂದು, ಮೊಣಕಾಲೂರಿ, “ನಿಮಗೆ ಮನಸ್ಸಿದ್ದರೆ, ನೀವು ನನ್ನನ್ನು ಶುದ್ಧಮಾಡಬಲ್ಲಿರಿ,” ಎಂದು ಅವರನ್ನು ಬೇಡಿಕೊಂಡನು.
तैल्ला पत्ती, एक्सां अक कोढ़ी मैन्हु यीशु कां अव। तैनी मैने यीशुएरे सामने ज़ैन्धु केरे भारे बिश्तां तैस कां मिन्नत केरतां तैस सेइं ज़ोवं, “अगर तू चास, त मीं बज़्झ़ेई सकतस। (महरबानी केरतां मीं बज़्झ़ा।)”
41 ಯೇಸು ಕನಿಕರಪಟ್ಟು, ತಮ್ಮ ಕೈಚಾಚಿ ಅವನನ್ನು ಮುಟ್ಟಿ, “ನನಗೆ ಮನಸ್ಸಿದೆ, ನೀನು ಶುದ್ಧನಾಗು,” ಎಂದರು.
यीशुए तैस मैन्हु पुड़ तरस खाव। यीशुए अपनो हथ अग्रोवं कियो त तैस कोढ़ी मैन्हु सेइं हथ लेइतां ज़ोवं, “अवं चाताईं, तू बज़्झ़ोस।”
42 ತಕ್ಷಣವೇ ಕುಷ್ಠರೋಗವು ಹೋಗಿ ಅವನು ಶುದ್ಧನಾದನು.
अकदम तै कोढ़ी बज़्झ़ोई जेव।
43 ಯೇಸು ಅವನಿಗೆ, “ನೋಡು, ಇದನ್ನು ಯಾರಿಗೂ ಹೇಳಬೇಡ. ಆದರೆ ಹೋಗಿ ಯಾಜಕನಿಗೆ ನಿನ್ನನ್ನು ತೋರಿಸಿ, ಮೋಶೆಯು ಆಜ್ಞಾಪಿಸಿದ್ದನ್ನು ಶುದ್ಧತ್ವಕ್ಕಾಗಿ ಸಮರ್ಪಿಸು ಇದು ಅವರಿಗೆ ಸಾಕ್ಷಿಯಾಗಿರಲಿ,” ಎಂದು ಅವನಿಗೆ ಕಟ್ಟುನಿಟ್ಟಾಗಿ ಎಚ್ಚರಿಸಿ, ಕೂಡಲೇ ಅವನನ್ನು ಕಳುಹಿಸಿಬಿಟ್ಟರು.
तैखन यीशुए तै मैन्हु समझ़ेइतां लूशी भेज़ो।
त तैनी तैस सेइं ज़ोवं, “हेर, एस गल्लरे बारे मां केन्ची सेइं किछ न ज़ोइयां। (तू यरूशलेम नगरेरे मन्दरे मां गा), त कने अपने आपे याजके हिरा। तैल्ला पत्ती, तू अपने बेज़्झ़ोनेरे वजाई सेइं च़ढ़तल च़ाढ़, ज़ेसेरे बारे मां मूसा नेबे कानूने मां हुक्म दित्तोरोए, ताके लोकन पतो च़ले कि तू बेज्झ़ोरोस।”
45 ಆದರೆ ಅವನು ಹೋಗಿ ಈ ವಿಷಯವನ್ನು ಎಲ್ಲಾ ಕಡೆಗಳಲ್ಲಿ ಹಬ್ಬಿಸಿದನು. ಇದರ ಪರಿಣಾಮವಾಗಿ ಯೇಸು ಯಾವ ಊರೊಳಗೂ ಬಹಿರಂಗವಾಗಿ ಪ್ರವೇಶಿಸಲಾಗದೆ, ನಿರ್ಜನ ಪ್ರದೇಶಗಳಲ್ಲಿರುತ್ತಿದ್ದರು. ಆದರೂ ಜನರು ಎಲ್ಲಾ ಕಡೆಗಳಿಂದ ಯೇಸುವಿನ ಬಳಿಗೆ ಬರುತ್ತಿದ್ದರು.
पन तै मैन्हु बेइर गेइतां एस गल्लारे बारे मां लोकन बड़ू शुनाने लगो ते इड़ी तगर फैलाने लगो कि यीशु फिरी बांदे नगरे मां न गेइ सको, पन बेइर सुनसान ठैरन मां राव ते च़ेव्रे पासां केरे लोक तैस कां एइते राए।