< ಲೂಕನು 8 >
1 ಇದಾದ ಮೇಲೆ, ಯೇಸು ಪ್ರತಿಯೊಂದು ಪಟ್ಟಣಕ್ಕೂ ಹಳ್ಳಿಗೂ ಹೋಗಿ, ದೇವರ ರಾಜ್ಯದ ವಿಷಯ ಪ್ರಚಾರ ಮಾಡುತ್ತಾ ಸುವಾರ್ತೆಯನ್ನು ಸಾರುತ್ತಾ ಇದ್ದರು. ಹನ್ನೆರಡು ಮಂದಿ ಶಿಷ್ಯರು ಅವರೊಂದಿಗೆ ಇದ್ದರು.
১অপৰঞ্চ যীশু ৰ্দ্ৱাদশভিঃ শিষ্যৈঃ সাৰ্দ্ধং নানানগৰেষু নানাগ্ৰামেষু চ গচ্ছন্ ইশ্ৱৰীযৰাজৎৱস্য সুসংৱাদং প্ৰচাৰযিতুং প্ৰাৰেভে|
2 ಇದಲ್ಲದೆ ದುರಾತ್ಮಗಳಿಂದಲೂ ರೋಗಗಳಿಂದಲೂ ಬಿಡುಗಡೆ ಹೊಂದಿದ ಕೆಲವು ಸ್ತ್ರೀಯರು ಮತ್ತು ಏಳು ದೆವ್ವಗಳು ಬಿಟ್ಟುಹೋಗಿದ್ದ ಮಗ್ದಲಿನ ಎಂದು ಕರೆಯಲಾದ ಮರಿಯಳು,
২তদা যস্যাঃ সপ্ত ভূতা নিৰগচ্ছন্ সা মগ্দলীনীতি ৱিখ্যাতা মৰিযম্ হেৰোদ্ৰাজস্য গৃহাধিপতেঃ হোষে ৰ্ভাৰ্য্যা যোহনা শূশানা
3 ಹೆರೋದನ ಅರಮನೆಯ ಗೃಹ ನಿರ್ವಾಹಕನಾದ ಕೂಜನ ಪತ್ನಿ ಯೋಹಾನಳು, ಸುಸನ್ನಳು ಮತ್ತು ಬೇರೆ ಅನೇಕರು ತಮ್ಮ ಆಸ್ತಿಯಿಂದ ಯೇಸುವಿಗೂ ಅವರ ಶಿಷ್ಯರಿಗೂ ಉಪಚಾರಮಾಡುತ್ತಿದ್ದರು.
৩প্ৰভৃতযো যা বহ্ৱ্যঃ স্ত্ৰিযঃ দুষ্টভূতেভ্যো ৰোগেভ্যশ্চ মুক্তাঃ সত্যো নিজৱিভূতী ৰ্ৱ্যযিৎৱা তমসেৱন্ত, তাঃ সৰ্ৱ্ৱাস্তেন সাৰ্দ্ধম্ আসন্|
4 ಪ್ರತಿಯೊಂದು ಪಟ್ಟಣದಿಂದ ಬಹುಜನರು ಅವರ ಬಳಿಗೆ ಒಟ್ಟಾಗಿ ಸೇರಿ ಬರಲು ಯೇಸು ಒಂದು ಸಾಮ್ಯವನ್ನು ಅವರಿಗೆ ಹೇಳಿದರು.
৪অনন্তৰং নানানগৰেভ্যো বহৱো লোকা আগত্য তস্য সমীপেঽমিলন্, তদা স তেভ্য একাং দৃষ্টান্তকথাং কথযামাস| একঃ কৃষীবলো বীজানি ৱপ্তুং বহিৰ্জগাম,
5 “ಒಬ್ಬ ರೈತನು ಬಿತ್ತುವುದಕ್ಕೆ ಹೊರಟನು. ಅವನು ಬಿತ್ತುತ್ತಿರುವಾಗ, ಕೆಲವು ಬೀಜಗಳು ದಾರಿಯ ಪಕ್ಕದಲ್ಲಿ ಬಿದ್ದವು; ಅವು ಕಾಲ್ತುಳಿತಕ್ಕೆ ಒಳಗಾದವು, ಆಕಾಶದ ಪಕ್ಷಿಗಳು ಅವುಗಳನ್ನು ಹೆಕ್ಕಿ ತಿಂದವು.
৫ততো ৱপনকালে কতিপযানি বীজানি মাৰ্গপাৰ্শ্ৱে পেতুঃ, ততস্তানি পদতলৈ ৰ্দলিতানি পক্ষিভি ৰ্ভক্ষিতানি চ|
6 ಇದಲ್ಲದೆ ಕೆಲವು ಬೀಜಗಳು ಕಲ್ಲುಭೂಮಿಯ ಮೇಲೆ ಬಿದ್ದವು, ಅವು ಮೊಳೆತ ಕೂಡಲೇ ತೇವ ಇಲ್ಲದಿರುವ ಕಾರಣ ಒಣಗಿಹೋದವು.
৬কতিপযানি বীজানি পাষাণস্থলে পতিতানি যদ্যপি তান্যঙ্কুৰিতানি তথাপি ৰসাভাৱাৎ শুশুষুঃ|
7 ಇನ್ನು ಕೆಲವು ಮುಳ್ಳುಗಿಡಗಳ ಮಧ್ಯದಲ್ಲಿ ಬಿದ್ದವು, ಆಗ ಮುಳ್ಳುಗಿಡಗಳು ಅವುಗಳೊಂದಿಗೆ ಬೆಳೆದು ಅವುಗಳನ್ನು ಅಡಗಿಸಿಬಿಟ್ಟವು.
৭কতিপযানি বীজানি কণ্টকিৱনমধ্যে পতিতানি ততঃ কণ্টকিৱনানি সংৱৃদ্ধ্য তানি জগ্ৰসুঃ|
8 ಉಳಿದ ಬೀಜಗಳು ಒಳ್ಳೆಯ ನೆಲದ ಮೇಲೆ ಬಿದ್ದವು. ಆಗ ಅವು ಬೆಳೆದು ನೂರರಷ್ಟು ಫಲಕೊಟ್ಟವು.” ಇದನ್ನು ಯೇಸು ಹೇಳಿ, “ಕೇಳುವುದಕ್ಕೆ ಕಿವಿಯುಳ್ಳವರು ಕೇಳಲಿ,” ಎಂದು ಒತ್ತಿ ಹೇಳಿದರು.
৮তদন্যানি কতিপযবীজানি চ ভূম্যামুত্তমাযাং পেতুস্ততস্তান্যঙ্কুৰযিৎৱা শতগুণানি ফলানি ফেলুঃ| স ইমা কথাং কথযিৎৱা প্ৰোচ্চৈঃ প্ৰোৱাচ, যস্য শ্ৰোতুং শ্ৰোত্ৰে স্তঃ স শৃণোতু|
9 ಯೇಸುವಿನ ಶಿಷ್ಯರು ಅವರನ್ನು ಈ ಸಾಮ್ಯದ ಅರ್ಥ ಏನಾಗಿರಬಹುದು? ಎಂದು ಕೇಳಿದರು.
৯ততঃ পৰং শিষ্যাস্তং পপ্ৰচ্ছুৰস্য দৃষ্টান্তস্য কিং তাৎপৰ্য্যং?
10 ಅದಕ್ಕೆ ಯೇಸು, “ದೇವರ ರಾಜ್ಯದ ರಹಸ್ಯಗಳನ್ನು ತಿಳಿದುಕೊಳ್ಳುವುದಕ್ಕೆ ನಿಮಗೆ ಅನುಮತಿಸಲಾಗಿದೆ, ಆದರೆ ಉಳಿದವರಿಗೆ, “‘ಅವರು ಕಣ್ಣಾರೆ ನೋಡಿದರೂ ಕಾಣದಂತೆಯೂ; ಮತ್ತು ಕೇಳಿದರೂ ಗ್ರಹಿಸದಂತೆ ಸಾಮ್ಯಗಳಲ್ಲಿ ಮರೆಯಾಗಿವೆ.’
১০ততঃ স ৱ্যাজহাৰ, ঈশ্ৱৰীযৰাজ্যস্য গুহ্যানি জ্ঞাতুং যুষ্মভ্যমধিকাৰো দীযতে কিন্ত্ৱন্যে যথা দৃষ্ট্ৱাপি ন পশ্যন্তি শ্ৰুৎৱাপি ম বুধ্যন্তে চ তদৰ্থং তেষাং পুৰস্তাৎ তাঃ সৰ্ৱ্ৱাঃ কথা দৃষ্টান্তেন কথ্যন্তে|
11 “ಆ ಸಾಮ್ಯದ ಅರ್ಥ ಹೀಗಿದೆ: ಬೀಜ ಎಂದರೆ ದೇವರ ವಾಕ್ಯ.
১১দৃষ্টান্তস্যাস্যাভিপ্ৰাযঃ, ঈশ্ৱৰীযকথা বীজস্ৱৰূপা|
12 ವಾಕ್ಯವನ್ನು ಕೇಳಿದವರು ನಂಬಿ ರಕ್ಷಣೆ ಹೊಂದಿಕೊಳ್ಳದಂತೆ, ಪಿಶಾಚನು ಬಂದು ಅವರ ಹೃದಯದೊಳಗಿಂದ, ಆ ವಾಕ್ಯವನ್ನು ತೆಗೆದುಬಿಡುತ್ತಾನೆ, ಇವರೇ ಆ ಬೀಜಗಳು ಬಿದ್ದ ಪಕ್ಕದ ದಾರಿಯಾಗಿದ್ದಾರೆ.
১২যে কথামাত্ৰং শৃণ্ৱন্তি কিন্তু পশ্চাদ্ ৱিশ্ৱস্য যথা পৰিত্ৰাণং ন প্ৰাপ্নুৱন্তি তদাশযেন শৈতানেত্য হৃদযাতৃ তাং কথাম্ অপহৰতি ত এৱ মাৰ্গপাৰ্শ্ৱস্থভূমিস্ৱৰূপাঃ|
13 ಬೀಜ ಬಿದ್ದ ಕಲ್ಲುಭೂಮಿಯು ಯಾರೆಂದರೆ ವಾಕ್ಯವನ್ನು ಕೇಳಿದಾಗ ಸಂತೋಷದಿಂದ ಸ್ವೀಕರಿಸುವವರು, ಆದರೆ ಇವರು ಬೇರಿಲ್ಲದಿರುವುದರಿಂದ, ಸ್ವಲ್ಪಕಾಲ ನಂಬಿ, ಶೋಧನೆ ಬಂದಾಗ ಬಿದ್ದುಹೋಗುವವರು.
১৩যে কথং শ্ৰুৎৱা সানন্দং গৃহ্লন্তি কিন্ত্ৱবদ্ধমূলৎৱাৎ স্ৱল্পকালমাত্ৰং প্ৰতীত্য পৰীক্ষাকালে ভ্ৰশ্যন্তি তএৱ পাষাণভূমিস্ৱৰূপাঃ|
14 ಬೀಜ ಬಿದ್ದ ಮುಳ್ಳುನೆಲವು ಯಾರೆಂದರೆ ವಾಕ್ಯವನ್ನು ಕೇಳಿದ ಮೇಲೆ ಮುಂದುವರಿದು, ಈ ಜೀವನದ ಚಿಂತೆಗಳಿಂದಲೂ ಐಶ್ವರ್ಯಗಳಿಂದಲೂ ಮತ್ತು ಭೋಗಗಳಿಂದಲೂ ಅದುಮಿಬಿಟ್ಟು, ಪರಿಪಕ್ವತೆಗೆ ಫಲಕೊಡದಿದ್ದವರು.
১৪যে কথাং শ্ৰুৎৱা যান্তি ৱিষযচিন্তাযাং ধনলোভেন এহিকসুখে চ মজ্জন্ত উপযুক্তফলানি ন ফলন্তি ত এৱোপ্তবীজকণ্টকিভূস্ৱৰূপাঃ|
15 ಆದರೆ ಬೀಜ ಬಿದ್ದ ಒಳ್ಳೆಯ ಭೂಮಿಯವರು ಯಾರೆಂದರೆ ಯಥಾರ್ಥವಾದ ಒಳ್ಳೆಯ ಹೃದಯದಿಂದ, ವಾಕ್ಯವನ್ನು ಕೇಳಿ ಅದನ್ನು ಕೈಕೊಂಡು, ತಾಳ್ಮೆಯಿಂದ ಫಲಿಸುವವರೇ,” ಎಂದು ಹೇಳಿದರು.
১৫কিন্তু যে শ্ৰুৎৱা সৰলৈঃ শুদ্ধৈশ্চান্তঃকৰণৈঃ কথাং গৃহ্লন্তি ধৈৰ্য্যম্ অৱলম্ব্য ফলান্যুৎপাদযন্তি চ ত এৱোত্তমমৃৎস্ৱৰূপাঃ|
16 “ದೀಪವನ್ನು ಹಚ್ಚಿ ಯಾರೂ ಅದನ್ನು ಪಾತ್ರೆಯಿಂದ ಮುಚ್ಚುವುದಿಲ್ಲ, ಇಲ್ಲವೆ ಮಂಚದ ಕೆಳಗೆ ಇಡುವುದಿಲ್ಲ. ಆದರೆ ಮನೆಯೊಳಗೆ ಪ್ರವೇಶಿಸುವವರು ಬೆಳಕನ್ನು ಕಾಣುವಂತೆ, ಅದನ್ನು ದೀಪಸ್ತಂಭದ ಮೇಲೆ ಇಡುತ್ತಾರಷ್ಟೆ.
১৬অপৰঞ্চ প্ৰদীপং প্ৰজ্ৱাল্য কোপি পাত্ৰেণ নাচ্ছাদযতি তথা খট্ৱাধোপি ন স্থাপযতি, কিন্তু দীপাধাৰোপৰ্য্যেৱ স্থাপযতি, তস্মাৎ প্ৰৱেশকা দীপ্তিং পশ্যন্তি|
17 ಪ್ರಕಟವಾಗದಂತೆ ಯಾವುದೂ ಮರೆಯಾಗಿರುವುದಿಲ್ಲ, ಬೆಳಕಿಗೆ ಬಾರದೆ ಇರುವ ರಹಸ್ಯವು ಯಾವುದೂ ಇಲ್ಲ.
১৭যন্ন প্ৰকাশযিষ্যতে তাদৃগ্ অপ্ৰকাশিতং ৱস্তু কিমপি নাস্তি যচ্চ ন সুৱ্যক্তং প্ৰচাৰযিষ্যতে তাদৃগ্ গৃপ্তং ৱস্তু কিমপি নাস্তি|
18 ಆದ್ದರಿಂದ ನೀವು ಕೇಳುವ ವಿಷಯಗಳಲ್ಲಿ ಎಚ್ಚರಿಕೆಯಾಗಿರಿ. ಏಕೆಂದರೆ ಇದ್ದವರಿಗೆ ಇನ್ನೂ ಹೆಚ್ಚಾಗಿ ಕೊಡಲಾಗುವುದು; ಇಲ್ಲದವರ ಕಡೆಯಿಂದ ತಮಗಿದೆ ಎಂದುಕೊಳ್ಳುವುದನ್ನು ಸಹ, ಅವರಿಂದ ಕಿತ್ತುಕೊಳ್ಳಲಾಗುವುದು,” ಎಂದು ಹೇಳಿದರು.
১৮অতো যূযং কেন প্ৰকাৰেণ শৃণুথ তত্ৰ সাৱধানা ভৱত, যস্য সমীপে বৰ্দ্ধতে তস্মৈ পুনৰ্দাস্যতে কিন্তু যস্যাশ্ৰযে ন বৰ্দ্ধতে তস্য যদ্যদস্তি তদপি তস্মাৎ নেষ্যতে|
19 ಯೇಸುವಿನ ತಾಯಿ ಮತ್ತು ಸಹೋದರರು ಅವರಿದ್ದಲ್ಲಿಗೆ ಬಂದು ಜನರ ಗುಂಪಿನ ನಿಮಿತ್ತ ಅವರ ಬಳಿಗೆ ಹೋಗಲಾರದೆ ಇದ್ದರು.
১৯অপৰঞ্চ যীশো ৰ্মাতা ভ্ৰাতৰশ্চ তস্য সমীপং জিগমিষৱঃ
20 ಆಗ ಒಬ್ಬನು ಯೇಸುವಿಗೆ, “ನಿಮ್ಮ ತಾಯಿಯೂ ಸಹೋದರರೂ ನಿಮ್ಮನ್ನು ಕಾಣಬೇಕೆಂದು, ಅಪೇಕ್ಷಿಸಿ ಹೊರಗೆ ನಿಂತಿದ್ದಾರೆ,” ಎಂದನು.
২০কিন্তু জনতাসম্বাধাৎ তৎসন্নিধিং প্ৰাপ্তুং ন শেকুঃ| তৎপশ্চাৎ তৱ মাতা ভ্ৰাতৰশ্চ ৎৱাং সাক্ষাৎ চিকীৰ্ষন্তো বহিস্তিষ্ঠনতীতি ৱাৰ্ত্তাযাং তস্মৈ কথিতাযাং
21 ಅದಕ್ಕೆ ಯೇಸು, “ದೇವರ ವಾಕ್ಯವನ್ನು ಕೇಳಿ ಅದರಂತೆ ನಡೆಯುವವರೇ ನನ್ನ ತಾಯಿ ಮತ್ತು ನನ್ನ ಸಹೋದರರು ಆಗಿದ್ದಾರೆ,” ಎಂದು ಹೇಳಿದರು.
২১স প্ৰত্যুৱাচ; যে জনা ঈশ্ৱৰস্য কথাং শ্ৰুৎৱা তদনুৰূপমাচৰন্তি তএৱ মম মাতা ভ্ৰাতৰশ্চ|
22 ಒಂದು ದಿನ ಯೇಸು ತಮ್ಮ ಶಿಷ್ಯರಿಗೆ, “ನಾವು ಕೆರೆಯ ಆಚೆದಡಕ್ಕೆ ಹೋಗೋಣ,” ಎಂದು ಹೇಳಿದರು, ಆಗ ಅವರು ದೋಣಿಯನ್ನು ಹತ್ತಿ ಹೊರಟರು.
২২অনন্তৰং একদা যীশুঃ শিষ্যৈঃ সাৰ্দ্ধং নাৱমাৰুহ্য জগাদ, আযাত ৱযং হ্ৰদস্য পাৰং যামঃ, ততস্তে জগ্মুঃ|
23 ಆದರೆ ಅವರು ಪ್ರಯಾಣ ಮಾಡುತ್ತಿದ್ದಾಗ, ಯೇಸು ನಿದ್ರಿಸುತ್ತಿದ್ದರು. ಆಗ ಬಿರುಗಾಳಿಯು ಸರೋವರದ ಮೇಲೆ ಬೀಸಲು, ದೋಣಿಯು ನೀರಿನಿಂದ ತುಂಬಿದ್ದರಿಂದ, ಅವರು ಅಪಾಯಕ್ಕೊಳಗಾದರು.
২৩তেষু নৌকাং ৱাহযৎসু স নিদদ্ৰৌ;
24 ಆಗ ಶಿಷ್ಯರು ಯೇಸುವಿನ ಬಳಿ ಬಂದು ಅವರನ್ನು ಎಬ್ಬಿಸಿ, “ಗುರುವೇ, ಗುರುವೇ, ನಾವು ಮುಳುಗುತ್ತಿದ್ದೇವೆ!” ಎಂದರು. ಆಗ ಯೇಸು ಎದ್ದು ಬಿರುಗಾಳಿಯನ್ನೂ ರಭಸವಾಗಿ ಬರುತ್ತಿದ್ದ ಅಲೆಗಳನ್ನೂ ಗದರಿಸಿದರು; ಆಗ ಬಿರುಗಾಳಿಯು ನಿಂತು ಹೋಗಿ, ಎಲ್ಲಾ ಪ್ರಶಾಂತವಾಯಿತು.
২৪অথাকস্মাৎ প্ৰবলঝঞ্ভ্শগমাদ্ হ্ৰদে নৌকাযাং তৰঙ্গৈৰাচ্ছন্নাযাং ৱিপৎ তান্ জগ্ৰাস| তস্মাদ্ যীশোৰন্তিকং গৎৱা হে গুৰো হে গুৰো প্ৰাণা নো যান্তীতি গদিৎৱা তং জাগৰযাম্বভূৱুঃ| তদা স উত্থায ৱাযুং তৰঙ্গাংশ্চ তৰ্জযামাস তস্মাদুভৌ নিৱৃত্য স্থিৰৌ বভূৱতুঃ|
25 ಆಗ ಯೇಸು ತಮ್ಮ ಶಿಷ್ಯರಿಗೆ, “ನಿಮ್ಮ ನಂಬಿಕೆ ಎಲ್ಲಿ?” ಎಂದರು. ಅವರು ಹೆದರಿದವರಾಗಿ ಆಶ್ಚರ್ಯದಿಂದ ಒಬ್ಬರಿಗೊಬ್ಬರು, “ಇವರು ಯಾರಿರಬಹುದು? ಗಾಳಿಗೂ ನೀರಿಗೂ ಸಹ ಅಪ್ಪಣೆ ಕೊಡುತ್ತಾರಲ್ಲಾ. ಅವು ಇವರು ಹೇಳಿದ ಹಾಗೆ ಕೇಳುತ್ತಾವಲ್ಲಾ?” ಎಂದು ತಮ್ಮತಮ್ಮೊಳಗೆ ಮಾತನಾಡಿಕೊಂಡರು.
২৫স তান্ বভাষে যুষ্মাকং ৱিশ্ৱাসঃ ক? তস্মাত্তে ভীতা ৱিস্মিতাশ্চ পৰস্পৰং জগদুঃ, অহো কীদৃগযং মনুজঃ পৱনং পানীযঞ্চাদিশতি তদুভযং তদাদেশং ৱহতি|
26 ಅವರು ಗಲಿಲಾಯಕ್ಕೆ ಎದುರಾಗಿದ್ದ, ಗೆರಸೇನರ ಸೀಮೆಗೆ ತಲುಪಿದರು.
২৬ততঃ পৰং গালীল্প্ৰদেশস্য সম্মুখস্থগিদেৰীযপ্ৰদেশে নৌকাযাং লগন্ত্যাং তটেঽৱৰোহমাৱাদ্
27 ಯೇಸು ದಡಕ್ಕೆ ಸೇರಿದಾಗ, ಬಹುಕಾಲದಿಂದ ದೆವ್ವಗಳು ಹಿಡಿದು ಬಟ್ಟೆ ಧರಿಸಿಕೊಳ್ಳದೆ ಯಾವ ಮನೆಯಲ್ಲಿ ಇರದೆ ಸಮಾಧಿಯ ಗುಹೆಗಳಲ್ಲಿ ವಾಸಿಸುತ್ತಿದ್ದ ಒಬ್ಬ ಮನುಷ್ಯನನ್ನು ಯೇಸು ಸಂಧಿಸಿದರು.
২৭বহুতিথকালং ভূতগ্ৰস্ত একো মানুষঃ পুৰাদাগত্য তং সাক্ষাচ্চকাৰ| স মনুষো ৱাসো ন পৰিদধৎ গৃহে চ ন ৱসন্ কেৱলং শ্মশানম্ অধ্যুৱাস|
28 ಅವನು ಯೇಸುವನ್ನು ಕಂಡಾಗ, ಅವರ ಮುಂದೆ ಅಡ್ಡಬಿದ್ದು, “ಯೇಸುವೇ, ಮಹೋನ್ನತ ದೇವಪುತ್ರರೇ, ನನ್ನ ಗೊಡವೆ ನಿಮಗೆ ಏಕೆ? ನನ್ನನ್ನು ಪೀಡಿಸಬೇಡಿ, ನಿಮ್ಮನ್ನು ಬೇಡಿಕೊಳ್ಳುತ್ತೇನೆ!” ಎಂದು ಗಟ್ಟಿಯಾದ ಸ್ವರದಿಂದ ಕೂಗಿ ಹೇಳಿದನು.
২৮স যীশুং দৃষ্ট্ৱৈৱ চীচ্ছব্দং চকাৰ তস্য সম্মুখে পতিৎৱা প্ৰোচ্চৈৰ্জগাদ চ, হে সৰ্ৱ্ৱপ্ৰধানেশ্ৱৰস্য পুত্ৰ, মযা সহ তৱ কঃ সম্বন্ধঃ? ৎৱযি ৱিনযং কৰোমি মাং মা যাতয|
29 ಏಕೆಂದರೆ, ದೆವ್ವಕ್ಕೆ ಅವನಿಂದ ಹೊರಗೆ ಬರಬೇಕೆಂದು ಯೇಸು ಅಪ್ಪಣೆ ಕೊಟ್ಟಿದ್ದರು. ಅದು ಬಹಳ ಸಾರಿ ಅವನನ್ನು ಹಿಡಿಯುತ್ತಿದ್ದುದರಿಂದ, ಅವನು ಸರಪಣಿಗಳಿಂದಲೂ ಬೇಡಿಗಳಿಂದಲೂ ಬಂಧಿತನಾದರೂ ಅವನು ಆ ಬಂಧನಗಳನ್ನು ಮುರಿದು ಬಿಡುತ್ತಿದ್ದನು ಮತ್ತು ದೆವ್ವವು ಅವನನ್ನು ಏಕಾಂತ ಸ್ಥಳಕ್ಕೆ ಓಡಿಸಿಕೊಂಡು ಹೋಗುತ್ತಿತ್ತು.
২৯যতঃ স তং মানুষং ত্যক্ত্ৱা যাতুম্ অমেধ্যভূতম্ আদিদেশ; স ভূতস্তং মানুষম্ অসকৃদ্ দধাৰ তস্মাল্লোকাঃ শৃঙ্খলেন নিগডেন চ ববন্ধুঃ; স তদ্ ভংক্ত্ৱা ভূতৱশৎৱাৎ মধ্যেপ্ৰান্তৰং যযৌ|
30 ಯೇಸು ಅವನಿಗೆ, “ನಿನ್ನ ಹೆಸರೇನು?” ಎಂದು ಕೇಳಿದರು. ಅದಕ್ಕವನು, “ಸೇನೆ,” ಎಂದನು. ಏಕೆಂದರೆ ಬಹಳ ದೆವ್ವಗಳು ಅವನಲ್ಲಿ ಸೇರಿಕೊಂಡಿದ್ದವು.
৩০অনন্তৰং যীশুস্তং পপ্ৰচ্ছ তৱ কিন্নাম? স উৱাচ, মম নাম বাহিনো যতো বহৱো ভূতাস্তমাশিশ্ৰিযুঃ|
31 ಅವು ತಮ್ಮನ್ನು ಪಾತಾಳಕ್ಕೆ ಹೋಗುವಂತೆ ಅಪ್ಪಣೆ ಕೊಡಬಾರದೆಂದು ಯೇಸುವನ್ನು ಬೇಡಿಕೊಂಡವು. (Abyssos )
৩১অথ ভূতা ৱিনযেন জগদুঃ, গভীৰং গৰ্ত্তং গন্তুং মাজ্ঞাপযাস্মান্| (Abyssos )
32 ಆಗ ಅಲ್ಲಿ ಬೆಟ್ಟದ ಮೇಲೆ ಹಂದಿಗಳ ಹಿಂಡು ಮೇಯುತ್ತಿದ್ದರಿಂದ ಅವುಗಳೊಳಗೆ ತಾವು ಸೇರಿಕೊಳ್ಳಲು ಅಪ್ಪಣೆ ಕೊಡಬೇಕೆಂದು ಯೇಸುವನ್ನು ಬೇಡಿಕೊಂಡವು, ಅವರು ಅವುಗಳಿಗೆ ಅನುಮತಿ ಕೊಟ್ಟರು.
৩২তদা পৰ্ৱ্ৱতোপৰি ৱৰাহৱ্ৰজশ্চৰতি তস্মাদ্ ভূতা ৱিনযেন প্ৰোচুঃ, অমুং ৱৰাহৱ্ৰজম্ আশ্ৰযিতুম্ অস্মান্ অনুজানীহি; ততঃ সোনুজজ্ঞৌ|
33 ಆಗ ಆ ದೆವ್ವಗಳು ಆ ಮನುಷ್ಯನೊಳಗಿಂದ ಹೊರಗೆ ಬಂದು, ಹಂದಿಗಳೊಳಗೆ ಸೇರಿದವು. ಆ ಗುಂಪು ಚುರುಕಾಗಿ ಓಡಿ, ಕಡಿದಾದ ಬದಿಯಿಂದ ಸರೋವರಕ್ಕೆ ಬಿದ್ದು ಮುಳುಗಿಹೋಯಿತು.
৩৩ততঃ পৰং ভূতাস্তং মানুষং ৱিহায ৱৰাহৱ্ৰজম্ আশিশ্ৰিযুঃ ৱৰাহৱ্ৰজাশ্চ তৎক্ষণাৎ কটকেন ধাৱন্তো হ্ৰদে প্ৰাণান্ ৱিজৃহুঃ|
34 ಹಂದಿಗಳನ್ನು ಮೇಯಿಸುತ್ತಿದ್ದವರು ನಡೆದದ್ದನ್ನು ಕಂಡು, ಓಡಿಹೋಗಿ ಪಟ್ಟಣದಲ್ಲಿಯೂ ಸೀಮೆಯಲ್ಲಿಯೂ ಅದನ್ನು ತಿಳಿಯಪಡಿಸಿದರು,
৩৪তদ্ দৃষ্ট্ৱা শূকৰৰক্ষকাঃ পলাযমানা নগৰং গ্ৰামঞ্চ গৎৱা তৎসৰ্ৱ্ৱৱৃত্তান্তং কথযামাসুঃ|
35 ಆಗ ಜನರು ನಡೆದ ಸಂಗತಿ ಏನೆಂದು ಕಾಣುವುದಕ್ಕಾಗಿ ಹೊರಟು ಯೇಸುವಿನ ಬಳಿಗೆ ಬಂದರು. ದೆವ್ವಗಳು ಬಿಟ್ಟುಹೋಗಿದ್ದ ಆ ಮನುಷ್ಯನು ಬಟ್ಟೆಯನ್ನು ಧರಿಸಿಕೊಂಡು ಸ್ವಸ್ಥಬುದ್ಧಿಯುಳ್ಳವನಾಗಿ, ಯೇಸುವಿನ ಪಾದಗಳ, ಬಳಿಯಲ್ಲಿ ಕುಳಿತಿರುವುದನ್ನು ಕಂಡು ಭಯಪಟ್ಟರು.
৩৫ততঃ কিং ৱৃত্তম্ এতদ্দৰ্শনাৰ্থং লোকা নিৰ্গত্য যীশোঃ সমীপং যযুঃ, তং মানুষং ত্যক্তভূতং পৰিহিতৱস্ত্ৰং স্ৱস্থমানুষৱদ্ যীশোশ্চৰণসন্নিধৌ সূপৱিশন্তং ৱিলোক্য বিভ্যুঃ|
36 ನಡೆದದ್ದನ್ನು ಕಂಡವರು, ಯಾವ ರೀತಿಯಲ್ಲಿ ದೆವ್ವಪೀಡಿತನಾಗಿದ್ದವನು ಮತ್ತೆ ಸ್ವಸ್ಥನಾದನೆಂದು ಅವರಿಗೆ ತಿಳಿಯಪಡಿಸಿದರು.
৩৬যে লোকাস্তস্য ভূতগ্ৰস্তস্য স্ৱাস্থ্যকৰণং দদৃশুস্তে তেভ্যঃ সৰ্ৱ্ৱৱৃত্তান্তং কথযামাসুঃ|
37 ಆಗ ಗೆರಸೇನರ ಸೀಮೆಯ ಸುತ್ತಮುತ್ತಲಿನ ಜನಸಮೂಹವೆಲ್ಲವು, ಬಹಳ ಭಯಹಿಡಿದವರಾದುದರಿಂದ ಅವರು ತಮ್ಮ ಬಳಿಯಿಂದ ಹೊರಟುಹೋಗಬೇಕೆಂದು ಯೇಸುವನ್ನು ಬೇಡಿಕೊಂಡರು. ಯೇಸು ದೋಣಿಯನ್ನು ಹತ್ತಿ ಹಿಂದಿರುಗಿದರು.
৩৭তদনন্তৰং তস্য গিদেৰীযপ্ৰদেশস্য চতুৰ্দিক্স্থা বহৱো জনা অতিত্ৰস্তা ৱিনযেন তং জগদুঃ, ভৱান্ অস্মাকং নিকটাদ্ ৱ্ৰজতু তস্মাৎ স নাৱমাৰুহ্য ততো ৱ্যাঘুট্য জগাম|
38 ಆಗ ದೆವ್ವಗಳು ಬಿಟ್ಟುಹೋಗಿದ್ದ ಆ ಮನುಷ್ಯನು ತಾನೂ ಅವರ ಜೊತೆಯಲ್ಲಿ ಬರುವೆನೆಂದು, ಯೇಸುವನ್ನು ಬೇಡಿಕೊಂಡನು, ಆದರೆ ಯೇಸು ಅವನಿಗೆ,
৩৮তদানীং ত্যক্তভূতমনুজস্তেন সহ স্থাতুং প্ৰাৰ্থযাঞ্চক্ৰে
39 “ನೀನು ನಿನ್ನ ಮನೆಗೆ ಹಿಂದಿರುಗಿ ಹೋಗಿ ದೇವರು ನಿನಗೆ ಎಂಥಾ ಮಹಾಕಾರ್ಯಗಳನ್ನು ಮಾಡಿದ್ದಾರೆಂಬುದನ್ನು ಹೇಳು,” ಎಂದು ಅವನನ್ನು ಕಳುಹಿಸಿಬಿಟ್ಟರು. ಅವನು ತನ್ನ ಮಾರ್ಗವಾಗಿ ಹೊರಟುಹೋಗಿ ಯೇಸು ತನಗೆ ಮಾಡಿದ ಮಹಾಕಾರ್ಯಗಳನ್ನು ಊರೆಲ್ಲಾ ಸಾರಿದನು.
৩৯কিন্তু তদৰ্থম্ ঈশ্ৱৰঃ কীদৃঙ্মহাকৰ্ম্ম কৃতৱান্ ইতি নিৱেশনং গৎৱা ৱিজ্ঞাপয, যীশুঃ কথামেতাং কথযিৎৱা তং ৱিসসৰ্জ| ততঃ স ৱ্ৰজিৎৱা যীশুস্তদৰ্থং যন্মহাকৰ্ম্ম চকাৰ তৎ পুৰস্য সৰ্ৱ্ৱত্ৰ প্ৰকাশযিতুং প্ৰাৰেভে|
40 ಯೇಸು ಹಿಂತಿರುಗಿ ಬಂದಾಗ ಅವರ ಬರುವಿಕೆಯನ್ನು ಎದುರುನೋಡುತ್ತಿದ್ದ ಜನರೆಲ್ಲರೂ ಅವರನ್ನು ಸ್ವಾಗತಿಸಿದರು.
৪০অথ যীশৌ পৰাৱৃত্যাগতে লোকাস্তং আদৰেণ জগৃহু ৰ্যস্মাত্তে সৰ্ৱ্ৱে তমপেক্ষাঞ্চক্ৰিৰে|
41 ಆಗ ಸಭಾಮಂದಿರದ ಅಧಿಕಾರಿಯಾಗಿದ್ದ, ಯಾಯೀರನೆಂಬವನು ಬಂದು ಯೇಸುವಿನ ಪಾದಗಳ ಮುಂದೆ ಅಡ್ಡಬಿದ್ದು, ತನ್ನ ಮನೆಗೆ ಬರಬೇಕೆಂದು ಬೇಡಿಕೊಂಡನು
৪১তদনন্তৰং যাযীৰ্নাম্নো ভজনগেহস্যৈকোধিপ আগত্য যীশোশ্চৰণযোঃ পতিৎৱা স্ৱনিৱেশনাগমনাৰ্থং তস্মিন্ ৱিনযং চকাৰ,
42 ಏಕೆಂದರೆ ಸುಮಾರು ಹನ್ನೆರಡು ವರ್ಷದ, ಅವನ ಒಬ್ಬಳೇ ಮಗಳು, ಸಾಯುವ ಹಾಗಿದ್ದಳು. ಯೇಸು ದಾರಿಯಲ್ಲಿ ಹೋಗುತ್ತಿದ್ದಾಗ, ಜನರು ಅವರನ್ನು ನೂಕಾಡುತ್ತಿದ್ದರು.
৪২যতস্তস্য দ্ৱাদশৱৰ্ষৱযস্কা কন্যৈকাসীৎ সা মৃতকল্পাভৱৎ| ততস্তস্য গমনকালে মাৰ্গে লোকানাং মহান্ সমাগমো বভূৱ|
43 ಹನ್ನೆರಡು ವರ್ಷಗಳಿಂದಲೂ ರಕ್ತಸ್ರಾವ ರೋಗದಿಂದ ನರಳುತ್ತಿದ್ದ ಒಬ್ಬ ಸ್ತ್ರೀ ಆ ಗುಂಪಿನಲ್ಲಿದ್ದಳು. ಅವಳು ತನ್ನ ಆಸ್ತಿಯನ್ನೆಲ್ಲಾ ವೆಚ್ಚಮಾಡಿದ್ದರೂ ಆಕೆಯನ್ನು ಗುಣಪಡಿಸಲು ಯಾರಿಂದಲೂ ಸಾಧ್ಯವಾಗಲಿಲ್ಲ.
৪৩দ্ৱাদশৱৰ্ষাণি প্ৰদৰৰোগগ্ৰস্তা নানা ৱৈদ্যৈশ্চিকিৎসিতা সৰ্ৱ্ৱস্ৱং ৱ্যযিৎৱাপি স্ৱাস্থ্যং ন প্ৰাপ্তা যা যোষিৎ সা যীশোঃ পশ্চাদাগত্য তস্য ৱস্ত্ৰগ্ৰন্থিং পস্পৰ্শ|
44 ಅವಳು ಯೇಸುವಿನ ಹಿಂದೆ ಬಂದು ಅವರ ಉಡುಪಿನ ಅಂಚನ್ನು ಮುಟ್ಟಿದಳು, ಕೂಡಲೇ ಆಕೆಯ ರಕ್ತಸ್ರಾವವು ನಿಂತುಹೋಯಿತು.
৪৪তস্মাৎ তৎক্ষণাৎ তস্যা ৰক্তস্ৰাৱো ৰুদ্ধঃ|
45 ಯೇಸು, “ನನ್ನನ್ನು ಮುಟ್ಟಿದವರು ಯಾರು?” ಎಂದರು. ಎಲ್ಲರೂ ನಿರಾಕರಿಸಿದರು, ಪೇತ್ರನು ಯೇಸುವಿಗೆ, “ಬೋಧಕರೇ, ಇಷ್ಟೊಂದು ಜನರು ನಿಮ್ಮನ್ನು ನೂಕುತ್ತಾ ನಿಮ್ಮನ್ನು ಒತ್ತುತ್ತಿದ್ದಾರಲ್ಲಾ” ಎಂದನು.
৪৫তদানীং যীশুৰৱদৎ কেনাহং স্পৃষ্টঃ? ততোঽনেকৈৰনঙ্গীকৃতে পিতৰস্তস্য সঙ্গিনশ্চাৱদন্, হে গুৰো লোকা নিকটস্থাঃ সন্তস্তৱ দেহে ঘৰ্ষযন্তি, তথাপি কেনাহং স্পৃষ্টইতি ভৱান্ কুতঃ পৃচ্ছতি?
46 ಆದರೆ ಯೇಸು, “ಯಾರೋ ಒಬ್ಬರು ನನ್ನನ್ನು ಮುಟ್ಟಿದ್ದಾರೆ; ನನ್ನಿಂದ ಗುಣಪಡಿಸುವ ಶಕ್ತಿಯು ಹೊರಟಿತೆಂದು ನನಗೆ ತಿಳಿಯಿತು,” ಎಂದರು.
৪৬যীশুঃ কথযামাস, কেনাপ্যহং স্পৃষ্টো, যতো মত্তঃ শক্তি ৰ্নিৰ্গতেতি মযা নিশ্চিতমজ্ঞাযি|
47 ಆ ಸ್ತ್ರೀಯು, ತಾನು ಇನ್ನು ಮರೆಮಾಡಲು ಸಾಧ್ಯವಿಲ್ಲವೆಂದು ತಿಳಿದು, ನಡುಗುತ್ತಾ ಬಂದು ಯೇಸುವಿನ ಮುಂದೆ ಅಡ್ಡಬಿದ್ದು, ಯಾವ ಕಾರಣದಿಂದ ಆಕೆಯು ಯೇಸುವನ್ನು ಮುಟ್ಟಿದಳೆಂದೂ ಹೇಗೆ ತಾನು ಕೂಡಲೇ ಸ್ವಸ್ಥಳಾದಳೆಂದೂ ಎಲ್ಲಾ ಜನರ ಮುಂದೆ ಅವರಿಗೆ ತಿಳಿಯಪಡಿಸಿದಳು.
৪৭তদা সা নাৰী স্ৱযং ন গুপ্তেতি ৱিদিৎৱা কম্পমানা সতী তস্য সম্মুখে পপাত; যেন নিমিত্তেন তং পস্পৰ্শ স্পৰ্শমাত্ৰাচ্চ যেন প্ৰকাৰেণ স্ৱস্থাভৱৎ তৎ সৰ্ৱ্ৱং তস্য সাক্ষাদাচখ্যৌ|
48 ಆಗ ಯೇಸು ಆಕೆಗೆ, “ಮಗಳೇ, ನಿನ್ನ ನಂಬಿಕೆಯೇ ನಿನ್ನನ್ನು ಗುಣಪಡಿಸಿದೆ. ಸಮಾಧಾನದಿಂದ ಹೋಗು,” ಎಂದರು.
৪৮ততঃ স তাং জগাদ হে কন্যে সুস্থিৰা ভৱ, তৱ ৱিশ্ৱাসস্ত্ৱাং স্ৱস্থাম্ অকাৰ্ষীৎ ৎৱং ক্ষেমেণ যাহি|
49 ಯೇಸು ಇನ್ನೂ ಮಾತನಾಡುತ್ತಿರುವಾಗಲೇ, ಸಭಾಮಂದಿರದ ಅಧಿಕಾರಿಯಾದ ಯಾಯೀರನ ಮನೆಯಿಂದ ಒಬ್ಬನು ಬಂದು ಅಧಿಕಾರಿಗೆ, “ನಿನ್ನ ಮಗಳು ತೀರಿಹೋದಳು, ಇನ್ನೂ ಗುರುವಿಗೆ ತೊಂದರೆಪಡಿಸುವುದೇಕೆ?” ಎಂದನು.
৪৯যীশোৰেতদ্ৱাক্যৱদনকালে তস্যাধিপতে ৰ্নিৱেশনাৎ কশ্চিল্লোক আগত্য তং বভাষে, তৱ কন্যা মৃতা গুৰুং মা ক্লিশান|
50 ಯೇಸು ಅದನ್ನು ಕೇಳಿ, ಆ ಅಧಿಕಾರಿಗೆ, “ಭಯಪಡಬೇಡ; ನಂಬಿಕೆ ಮಾತ್ರ ಇರಲಿ, ಅವಳು ಬದುಕುವಳು,” ಎಂದು ಹೇಳಿದರು.
৫০কিন্তু যীশুস্তদাকৰ্ণ্যাধিপতিং ৱ্যাজহাৰ, মা ভৈষীঃ কেৱলং ৱিশ্ৱসিহি তস্মাৎ সা জীৱিষ্যতি|
51 ಯೇಸು ಯಾಯೀರನ ಮನೆಯೊಳಕ್ಕೆ ಬಂದಾಗ ಪೇತ್ರ, ಯಾಕೋಬ ಯೋಹಾನ ಮತ್ತು ಹುಡುಗಿಯ ತಂದೆತಾಯಿಗಳ ಹೊರತು ಯಾರನ್ನೂ ಒಳಗೆ ಬರಗೊಡಲಿಲ್ಲ.
৫১অথ তস্য নিৱেশনে প্ৰাপ্তে স পিতৰং যোহনং যাকূবঞ্চ কন্যাযা মাতৰং পিতৰঞ্চ ৱিনা, অন্যং কঞ্চন প্ৰৱেষ্টুং ৱাৰযামাস|
52 ಎಲ್ಲರೂ ಅಳುತ್ತಾ ಹುಡುಗಿಗಾಗಿ ಗೋಳಾಡುತ್ತಿದ್ದರು. ಯೇಸು, “ಅಳಬೇಡಿರಿ, ಆಕೆಯು ಸತ್ತಿಲ್ಲ, ನಿದ್ರೆ ಮಾಡುತ್ತಾಳೆ,” ಎಂದರು.
৫২অপৰঞ্চ যে ৰুদন্তি ৱিলপন্তি চ তান্ সৰ্ৱ্ৱান্ জনান্ উৱাচ, যূযং মা ৰোদিষ্ট কন্যা ন মৃতা নিদ্ৰাতি|
53 ಆಕೆಯು ಸತ್ತಿದ್ದಾಳೆಂದು ತಿಳಿದು ಅಳುತ್ತಿದ್ದವರು ಯೇಸುವನ್ನು ಹಾಸ್ಯಮಾಡಿದರು.
৫৩কিন্তু সা নিশ্চিতং মৃতেতি জ্ঞাৎৱা তে তমুপজহসুঃ|
54 ಆದರೆ ಯೇಸು ಆಕೆಯ ಕೈಹಿಡಿದು, “ಮಗಳೇ, ಎದ್ದೇಳು!” ಎಂದು ಕರೆದರು.
৫৪পশ্চাৎ স সৰ্ৱ্ৱান্ বহিঃ কৃৎৱা কন্যাযাঃ কৰৌ ধৃৎৱাজুহুৱে, হে কন্যে ৎৱমুত্তিষ্ঠ,
55 ಆಗ ಆಕೆಯ ಪ್ರಾಣವು ಹಿಂದಿರುಗಿ ಬಂತು. ಕೂಡಲೇ ಆಕೆಯು ಎದ್ದಳು. ಆಕೆಗೆ ತಿನ್ನಲು ಏನಾದರೂ ಕೊಡುವಂತೆ ಯೇಸು ಅಪ್ಪಣೆಕೊಟ್ಟರು.
৫৫তস্মাৎ তস্যাঃ প্ৰাণেষু পুনৰাগতেষু সা তৎক্ষণাদ্ উত্তস্যৌ| তদানীং তস্যৈ কিঞ্চিদ্ ভক্ষ্যং দাতুম্ আদিদেশ|
56 ಆಕೆಯ ತಂದೆತಾಯಿಗಳು ಬೆರಗಾದರು, ಆಗ ನಡೆದದ್ದನ್ನು ಅವರು ಯಾರಿಗೂ ಹೇಳಬಾರದೆಂದು ಯೇಸು ಅವರಿಗೆ ಆಜ್ಞಾಪಿಸಿದರು.
৫৬ততস্তস্যাঃ পিতৰৌ ৱিস্মযং গতৌ কিন্তু স তাৱাদিদেশ ঘটনাযা এতস্যাঃ কথাং কস্মৈচিদপি মা কথযতং|