< ಲೂಕನು 23 >

1 ಆಗ ಅಲ್ಲಿ ಕೂಡಿದ್ದವರೆಲ್ಲರೂ ಎದ್ದು ಯೇಸುವನ್ನು ಪಿಲಾತನ ಬಳಿಗೆ ಕರೆದುಕೊಂಡು ಹೋದರು.
තතඃ සභාස්ථාඃ සර්ව්වලෝකා උත්ථාය තං පීලාතසම්මුඛං නීත්වාප්‍රෝද්‍ය වක්තුමාරේභිරේ,
2 ಅವರು ಯೇಸುವಿನ ಮೇಲೆ ದೂರು ಹೇಳಲಾರಂಭಿಸಿ, “ಈ ನಮ್ಮ ಜನಾಂಗವು ದಂಗೆಯೇಳುವಂತೆಯೂ ತಾನೇ ಕ್ರಿಸ್ತನೆಂಬ ಒಬ್ಬ ಅರಸನಾಗಿದ್ದೇನೆಂದೂ ಹೇಳಿ ಕೈಸರನಿಗೆ ತೆರಿಗೆ ಕೊಡದಂತೆ ಈತನು ಅಡ್ಡಿಮಾಡುತ್ತಿರುವುದನ್ನೂ ನಾವು ಕಂಡಿದ್ದೇವೆ,” ಎಂದರು.
ස්වමභිෂික්තං රාජානං වදන්තං කෛමරරාජාය කරදානං නිෂේධන්තං රාජ්‍යවිපර‍්‍ය්‍යයං කුර්ත්තුං ප්‍රවර්ත්තමානම් ඒන ප්‍රාප්තා වයං|
3 ಆಗ ಪಿಲಾತನು ಯೇಸುವಿಗೆ, “ನೀನು ಯೆಹೂದ್ಯರ ಅರಸನೋ?” ಎಂದು ಕೇಳಿದನು. ಅದಕ್ಕೆ ಯೇಸು ಅವರಿಗೆ, “ನೀವೇ ಹೇಳುತ್ತಿದ್ದೀರಿ,” ಎಂದರು.
තදා පීලාතස්තං පෘෂ්ටවාන් ත්වං කිං යිහූදීයානාං රාජා? ස ප්‍රත්‍යුවාච ත්වං සත්‍යමුක්තවාන්|
4 ತರುವಾಯ ಪಿಲಾತನು, ಮುಖ್ಯಯಾಜಕರಿಗೂ ಜನರಿಗೂ, “ಈ ಮನುಷ್ಯನಲ್ಲಿ ನಾನು ಯಾವ ತಪ್ಪನ್ನೂ ಕಾಣಲಿಲ್ಲ,” ಎಂದನು.
තදා පීලාතඃ ප්‍රධානයාජකාදිලෝකාන් ජගාද්, අහමේතස්‍ය කමප්‍යපරාධං නාප්තවාන්|
5 ಅದಕ್ಕೆ ಅವರು, “ಈತನು ಗಲಿಲಾಯ ಪ್ರಾಂತ ಮೊದಲುಗೊಂಡು ಈ ಸ್ಥಳದವರೆಗೂ ಯೂದಾಯ ಪ್ರಾಂತದ ಎಲ್ಲಾ ಕಡೆಗೂ ಬೋಧಿಸುತ್ತಾ, ಜನರನ್ನು ಕ್ರಾಂತಿಗೆ ಪ್ರೇರೇಪಿಸುತ್ತಿದ್ದಾನೆ,” ಎಂದು ಒತ್ತಾಯ ಪೂರ್ವಕವಾಗಿ ಹೇಳಿದರು.
තතස්තේ පුනඃ සාහමිනෝ භූත්වාවදන්, ඒෂ ගාලීල ඒතත්ස්ථානපර‍්‍ය්‍යන්තේ සර්ව්වස්මින් යිහූදාදේශේ සර්ව්වාල්ලෝකානුපදිශ්‍ය කුප්‍රවෘත්තිං ග්‍රාහීතවාන්|
6 ಪಿಲಾತನು ಗಲಿಲಾಯದ ವಿಷಯವಾಗಿ ಕೇಳಿದಾಗ, “ಈ ಮನುಷ್ಯನು ಗಲಿಲಾಯದವನೋ?” ಎಂದು ವಿಚಾರಿಸಿದನು.
තදා පීලාතෝ ගාලීලප්‍රදේශස්‍ය නාම ශ්‍රුත්වා පප්‍රච්ඡ, කිමයං ගාලීලීයෝ ලෝකඃ?
7 ಯೇಸು ಹೆರೋದನ ಅಧಿಕಾರಕ್ಕೆ ಸಂಬಂಧ ಪಟ್ಟವನೆಂದು ತಿಳಿದ ಕೂಡಲೇ ಅದೇ ಸಮಯದಲ್ಲಿ ಯೆರೂಸಲೇಮಿನಲ್ಲಿಯೇ ಇದ್ದ ಹೆರೋದನ ಬಳಿಗೆ ಯೇಸುವನ್ನು ಕಳುಹಿಸಿದನು.
තතඃ ස ගාලීල්ප්‍රදේශීයහේරෝද්‍රාජස්‍ය තදා ස්ථිතේස්තස්‍ය සමීපේ යීශුං ප්‍රේෂයාමාස|
8 ಹೆರೋದನು ಯೇಸುವನ್ನು ಕಂಡಾಗ, ಅತ್ಯಂತ ಸಂತೋಷಪಟ್ಟನು. ಏಕೆಂದರೆ ಅವನು ಯೇಸುವಿನ ವಿಷಯವಾಗಿ ಅನೇಕ ಸಂಗತಿಗಳನ್ನು ಕೇಳಿದ್ದರಿಂದ, ಅವರನ್ನು ಕಾಣಲು ಬಹಳ ಕಾಲದಿಂದ ಆಶೆಪಟ್ಟಿದ್ದನು. ಅವರಿಂದಾಗುವ ಸೂಚಕಕಾರ್ಯವನ್ನು ಕಾಣಲು ನಿರೀಕ್ಷಿಸುತ್ತಿದ್ದನು.
තදා හේරෝද් යීශුං විලෝක්‍ය සන්තුතෝෂ, යතඃ ස තස්‍ය බහුවෘත්තාන්තශ්‍රවණාත් තස්‍ය කිඤිචදාශ්චර‍්‍ය්‍යකර්ම්ම පශ්‍යති ඉත්‍යාශාං කෘත්වා බහුකාලමාරභ්‍ය තං ද්‍රෂ්ටුං ප්‍රයාසං කෘතවාන්|
9 ಅವನು ಯೇಸುವನ್ನು ಅನೇಕ ಪ್ರಶ್ನೆಗಳನ್ನು ಕೇಳಿದರೂ ಯೇಸು ಅವನಿಗೆ ಏನೂ ಉತ್ತರ ಕೊಡಲಿಲ್ಲ.
තස්මාත් තං බහුකථාඃ පප්‍රච්ඡ කින්තු ස තස්‍ය කස්‍යාපි වාක්‍යස්‍ය ප්‍රත්‍යුත්තරං නෝවාච|
10 ಮುಖ್ಯಯಾಜಕರೂ ನಿಯಮ ಬೋಧಕರು ನಿಂತುಕೊಂಡು ಬಲವಾಗಿ ಯೇಸುವಿನ ಮೇಲೆ ದೂರುಗಳನ್ನು ಹೇಳುತ್ತಿದ್ದರು.
අථ ප්‍රධානයාජකා අධ්‍යාපකාශ්ච ප්‍රෝත්තිෂ්ඨන්තඃ සාහසේන තමපවදිතුං ප්‍රාරේභිරේ|
11 ಆಗ ಹೆರೋದನು ತನ್ನ ಸೈನಿಕರೊಂದಿಗೆ ಯೇಸುವನ್ನು ತಿರಸ್ಕರಿಸಿ, ಹಾಸ್ಯಮಾಡಿ, ಅವರ ಮೇಲೆ ರಾಜವಸ್ತ್ರವನ್ನು ಹೊದಿಸಿ ಅವರನ್ನು ತಿರುಗಿ ಪಿಲಾತನ ಬಳಿಗೆ ಕಳುಹಿಸಿದನು.
හේරෝද් තස්‍ය සේනාගණශ්ච තමවඥාය උපහාසත්වේන රාජවස්ත්‍රං පරිධාප්‍ය පුනඃ පීලාතං ප්‍රති තං ප්‍රාහිණෝත්|
12 ಪಿಲಾತನೂ ಹೆರೋದನೂ ಅದೇ ದಿನದಲ್ಲಿ ಒಬ್ಬರಿಗೊಬ್ಬರು ಸ್ನೇಹಿತರಾದರು. ಏಕೆಂದರೆ ಅದುವರೆಗೂ ಅವರು ವೈರಿಗಳಾಗಿದ್ದರು.
පූර්ව්වං හේරෝද්පීලාතයෝඃ පරස්පරං වෛරභාව ආසීත් කින්තු තද්දිනේ ද්වයෝ ර්මේලනං ජාතම්|
13 ಪಿಲಾತನು ಮುಖ್ಯಯಾಜಕರನ್ನೂ ಅಧಿಕಾರಿಗಳನ್ನೂ ಜನರನ್ನೂ ಒಟ್ಟಾಗಿ ಕರೆಯಿಸಿ ಅವರಿಗೆ,
පශ්චාත් පීලාතඃ ප්‍රධානයාජකාන් ශාසකාන් ලෝකාංශ්ච යුගපදාහූය බභාෂේ,
14 “ಜನರು ತಿರುಗಿ ಬೀಳುವಂತೆ ಮಾಡುತ್ತಾನೆಂದು ನೀವು ಈತನನ್ನು ನನ್ನ ಬಳಿಗೆ ತಂದಿದ್ದೀರಿ. ಇಗೋ, ನೀವು ಈತನ ಮೇಲೆ ತಂದಿರುವ ದೂರುಗಳನ್ನು ನಾನು ನಿಮ್ಮ ಮುಂದೆಯೇ ವಿಚಾರಿಸಿದಾಗ ಈತನಲ್ಲಿ ನನಗೆ ಯಾವ ಅಪರಾಧವೂ ಕಾಣಲಿಲ್ಲ.
රාජ්‍යවිපර‍්‍ය්‍යයකාරකෝයම් ඉත්‍යුක්ත්වා මනුෂ්‍යමේනං මම නිකටමානෛෂ්ට කින්තු පශ්‍යත යුෂ්මාකං සමක්‍ෂම් අස්‍ය විචාරං කෘත්වාපි ප්‍රෝක්තාපවාදානුරූපේණාස්‍ය කෝප්‍යපරාධඃ සප්‍රමාණෝ න ජාතඃ,
15 ಮಾತ್ರವಲ್ಲದೆ, ಈತನನ್ನು ನಮ್ಮ ಬಳಿಗೆ ಕಳುಹಿಸಿದ ಹೆರೋದ ಅರಸನಿಗೂ ಸಹ ಈತನಲ್ಲಿ ಯಾವ ಅಪರಾಧವೂ ಕಾಣಲಿಲ್ಲ. ಇಗೋ, ಈತನಲ್ಲಿ ಮರಣಕ್ಕೆ ಯೋಗ್ಯವಾದದ್ದೇನೂ ಕಾಣಲಿಲ್ಲ.
යූයඤ්ච හේරෝදඃ සන්නිධෞ ප්‍රේෂිතා මයා තත්‍රාස්‍ය කෝප්‍යපරාධස්තේනාපි න ප්‍රාප්තඃ| පශ්‍යතානේන වධහේතුකං කිමපි නාපරාද්ධං|
16 ಹೀಗಿರುವುದರಿಂದ ನಾನು ಈತನನ್ನು ದಂಡಿಸಿ ಬಿಟ್ಟುಬಿಡುತ್ತೇನೆ,” ಎಂದನು.
තස්මාදේනං තාඩයිත්වා විහාස්‍යාමි|
17 ಏಕೆಂದರೆ ಅಧಿಪತಿಯು ಸೆರೆಯಾಳು ಒಬ್ಬನನ್ನು ಹಬ್ಬದಲ್ಲಿ ಜನರಿಗೋಸ್ಕರ ಬಿಡಿಸುವುದು ಪದ್ಧತಿಯಾಗಿತ್ತು.
තත්‍රෝත්සවේ තේෂාමේකෝ මෝචයිතව්‍යඃ|
18 ಆಗ ಅವರೆಲ್ಲರೂ ಆ ಕ್ಷಣವೇ, “ಈತನಿಗೆ ಮರಣದಂಡನೆ ವಿಧಿಸಿರಿ, ನಮಗೆ ಬರಬ್ಬನನ್ನು ಬಿಡುಗಡೆಮಾಡು,” ಎಂದು ಬೊಬ್ಬೆಹಾಕಿದರು.
ඉති හේතෝස්තේ ප්‍රෝච්චෛරේකදා ප්‍රෝචුඃ, ඒනං දූරීකෘත්‍ය බරබ්බානාමානං මෝචය|
19 ಬರಬ್ಬನು ಪಟ್ಟಣದಲ್ಲಿ ನಡೆದ ದಂಗೆ ಮತ್ತು ಕೊಲೆಯ ನಿಮಿತ್ತ ಸೆರೆಯಲ್ಲಿ ಹಾಕಿದವನಾಗಿದ್ದನು.
ස බරබ්බා නගර උපප්ලවවධාපරාධාභ්‍යාං කාරායාං බද්ධ ආසීත්|
20 ಪಿಲಾತನು ಯೇಸುವನ್ನು ಬಿಡಿಸಬೇಕೆಂದು ಮನಸ್ಸುಳ್ಳವನಾಗಿ ಮತ್ತೊಮ್ಮೆ ಜನರಲ್ಲಿ ಮನವಿ ಮಾಡಿಕೊಂಡನು.
කින්තු පීලාතෝ යීශුං මෝචයිතුං වාඤ්ඡන් පුනස්තානුවාච|
21 ಅವರಾದರೋ, “ಈತನನ್ನು ಶಿಲುಬೆಗೆ ಹಾಕಿಸು, ಈತನನ್ನು ಶಿಲುಬೆಗೆ ಹಾಕಿಸು!” ಎಂದು ಆರ್ಭಟಿಸತೊಡಗಿದರು.
තථාප්‍යේනං ක්‍රුශේ ව්‍යධ ක්‍රුශේ ව්‍යධේති වදන්තස්තේ රුරුවුඃ|
22 ಪಿಲಾತನು ಮೂರನೆಯ ಸಾರಿ ಅವರಿಗೆ, “ಏಕೆ? ಈತನು ಮಾಡಿದ ಅಪರಾಧವೇನು? ಈತನಲ್ಲಿ ಮರಣದಂಡನೆಗೆ ಕಾರಣವಾದದ್ದೇನೂ ನನಗೆ ಕಾಣಲಿಲ್ಲ. ಆದ್ದರಿಂದ ನಾನು ಈತನನ್ನು ದಂಡಿಸಿ ಬಿಟ್ಟುಬಿಡುತ್ತೇನೆ,” ಎಂದನು.
තතඃ ස තෘතීයවාරං ජගාද කුතඃ? ස කිං කර්ම්ම කෘතවාන්? නාහමස්‍ය කමපි වධාපරාධං ප්‍රාප්තඃ කේවලං තාඩයිත්වාමුං ත්‍යජාමි|
23 ಆದರೆ ಯೇಸುವನ್ನು ಶಿಲುಬೆಗೆ ಹಾಕಿಸಬೇಕೆಂದು ಜನರು ಆರ್ಭಟಿಸುತ್ತಾ, ಒತ್ತಾಯಮಾಡಿದರು. ಹೀಗೆ ಅವರ ಕೂಗಾಟವೇ ಗೆದ್ದಿತು.
තථාපි තේ පුනරේනං ක්‍රුශේ ව්‍යධ ඉත්‍යුක්ත්වා ප්‍රෝච්චෛර්දෘඪං ප්‍රාර්ථයාඤ්චක්‍රිරේ;
24 ಪಿಲಾತನು ಅವರು ಕೇಳಿಕೊಂಡಂತೆಯೇ ಆಗಲಿ ಎಂದು ನಿರ್ಣಯಿಸಿದನು.
තතඃ ප්‍රධානයාජකාදීනාං කලරවේ ප්‍රබලේ සති තේෂාං ප්‍රාර්ථනාරූපං කර්ත්තුං පීලාත ආදිදේශ|
25 ಇದಲ್ಲದೆ ಪಿಲಾತನು ಜನರು ಬರಬ್ಬನನ್ನು ಎಂದರೆ, ದಂಗೆ ಮತ್ತು ಕೊಲೆಯ ನಿಮಿತ್ತ ಸೆರೆಮನೆಯೊಳಗೆ ಹಾಕಿದವನನ್ನು ಅವರಿಗೆ ಬಿಟ್ಟುಕೊಟ್ಟು, ಯೇಸುವನ್ನೋ ಅವರ ಇಷ್ಟಕ್ಕೆ ಒಪ್ಪಿಸಿದನು.
රාජද්‍රෝහවධයෝරපරාධේන කාරාස්ථං යං ජනං තේ යයාචිරේ තං මෝචයිත්වා යීශුං තේෂාමිච්ඡායාං සමාර්පයත්|
26 ಸೈನಿಕರು ಯೇಸುವನ್ನು ತೆಗೆದುಕೊಂಡು ಹೋಗುತ್ತಿರುವಾಗ ಹೊಲದಿಂದ ಬರುತ್ತಿದ್ದ ಕುರೇನೆದ ಸೀಮೋನನೆಂಬವನನ್ನು ಹಿಡಿದು, ಅವನ ಮೇಲೆ ಶಿಲುಬೆಯನ್ನು ಹೊರಿಸಿ, ಯೇಸುವಿನ ಹಿಂದೆ ಹೊತ್ತುಕೊಂಡು ಹೋಗುವಂತೆ ಮಾಡಿದರು.
අථ තේ යීශුං ගෘහීත්වා යාන්ති, ඒතර්හි ග්‍රාමාදාගතං ශිමෝනනාමානං කුරීණීයං ජනං ධෘත්වා යීශෝඃ පශ්චාන්නේතුං තස්‍ය ස්කන්ධේ ක්‍රුශමර්පයාමාසුඃ|
27 ಜನರ ಮಹಾ ಸಮೂಹ ಯೇಸುವಿನ ಹಿಂದೆ ಹೊರಟಿತು. ಅವರಲ್ಲಿ ಯೇಸುವಿಗಾಗಿ ಶೋಕಿಸುತ್ತಾ, ಗೋಳಾಡುತ್ತಿದ್ದ ಮಹಿಳೆಯರು ಸಹ ಇದ್ದರು.
තතෝ ලෝකාරණ්‍යමධ්‍යේ බහුස්ත්‍රියෝ රුදත්‍යෝ විලපන්ත්‍යශ්ච යීශෝඃ පශ්චාද් යයුඃ|
28 ಯೇಸು ಅವರ ಕಡೆಗೆ ತಿರುಗಿಕೊಂಡು, “ಯೆರೂಸಲೇಮಿನ ಪುತ್ರಿಯರೇ, ನನಗಾಗಿ ಅಳಬೇಡಿರಿ. ನಿಮಗಾಗಿಯೂ ನಿಮ್ಮ ಮಕ್ಕಳಿಗಾಗಿ ಅಳಿರಿ.
කින්තු ස ව්‍යාඝුට්‍ය තා උවාච, හේ යිරූශාලමෝ නාර‍්‍ය්‍යෝ යුයං මදර්ථං න රුදිත්වා ස්වාර්ථං ස්වාපත්‍යාර්ථඤ්ච රුදිති;
29 ಏಕೆಂದರೆ, ‘ಇಗೋ, ಬಂಜೆಯರೂ ಹೆರದವರೂ ಹಾಲು ಕುಡಿಸದವರೂ ಧನ್ಯರು,’ ಎಂದು ಜನರು ಹೇಳುವ ದಿವಸಗಳು ಬರುತ್ತವೆ.
පශ්‍යත යඃ කදාපි ගර්භවත්‍යෝ නාභවන් ස්තන්‍යඤ්ච නාපායයන් තාදෘශී ර්වන්ධ්‍යා යදා ධන්‍යා වක්‍ෂ්‍යන්ති ස කාල ආයාති|
30 ಆಗ ಅವರು, “‘ಬೆಟ್ಟಗಳಿಗೆ, “ನಮ್ಮ ಮೇಲೆ ಬೀಳಿರಿ!” ಗುಡ್ಡಗಳಿಗೆ, “ನಮ್ಮನ್ನು ಮುಚ್ಚಿಕೊಳ್ಳಿರಿ!”’ ಎಂದು ಹೇಳಲಾರಂಭಿಸುವರು.
තදා හේ ශෛලා අස්මාකමුපරි පතත, හේ උපශෛලා අස්මානාච්ඡාදයත කථාමීදෘශීං ලෝකා වක්‍ෂ්‍යන්ති|
31 ಅವರು ಹಸಿ ಮರಕ್ಕೆ ಇವುಗಳನ್ನು ಮಾಡಿದರೆ, ಒಣ ಮರಕ್ಕೆ ಇನ್ನೇನು ಮಾಡಿಯಾರು?” ಎಂದರು.
යතඃ සතේජසි ශාඛිනි චේදේතද් ඝටතේ තර්හි ශුෂ්කශාඛිනි කිං න ඝටිෂ්‍යතේ?
32 ಅಪರಾಧಿಗಳಾದ ಬೇರೆ ಇಬ್ಬರನ್ನು ಕೂಡ ಯೇಸುವಿನೊಂದಿಗೆ ಮರಣದಂಡನೆಗಾಗಿ ಕರೆದುಕೊಂಡು ಹೋದರು.
තදා තේ හන්තුං ද්වාවපරාධිනෞ තේන සාර්ද්ධං නින්‍යුඃ|
33 ಅವರು “ತಲೆಬುರುಡೆಯ ಸ್ಥಳ” ಎಂದು ಕರೆಯಲಾಗುವ ಸ್ಥಳಕ್ಕೆ ಬಂದಾಗ, ಅಲ್ಲಿ ಯೇಸುವನ್ನು ಶಿಲುಬೆಗೆ ಹಾಕಿದರು. ಆ ಅಪರಾಧಿಗಳಲ್ಲಿ ಒಬ್ಬನನ್ನು ಯೇಸುವಿನ ಬಲಗಡೆಯಲ್ಲಿ ಮತ್ತೊಬ್ಬನನ್ನು ಅವರ ಎಡಗಡೆಯಲ್ಲಿ ಶಿಲುಬೆಗೆ ಹಾಕಿದರು.
අපරං ශිරඃකපාලනාමකස්ථානං ප්‍රාප්‍ය තං ක්‍රුශේ විවිධුඃ; තද්ද්වයෝරපරාධිනෝරේකං තස්‍ය දක්‍ෂිණෝ තදන්‍යං වාමේ ක්‍රුශේ විවිධුඃ|
34 ಆಗ ಯೇಸು, “ತಂದೆಯೇ, ಇವರನ್ನು ಕ್ಷಮಿಸಿ, ತಾವು ಏನು ಮಾಡುತ್ತಿದ್ದಾರೆಂದು ಅರಿಯರು,” ಎಂದರು. ಸೈನಿಕರಾದರೋ ಯೇಸುವಿನ ಉಡುಪನ್ನು ಚೀಟುಹಾಕಿ, ಹಂಚಿಕೊಂಡರು.
තදා යීශුරකථයත්, හේ පිතරේතාන් ක්‍ෂමස්ව යත ඒතේ යත් කර්ම්ම කුර්ව්වන්ති තන් න විදුඃ; පශ්චාත්තේ ගුටිකාපාතං කෘත්වා තස්‍ය වස්ත්‍රාණි විභජ්‍ය ජගෘහුඃ|
35 ಜನರು ನೋಡುತ್ತಾ ನಿಂತುಕೊಂಡಿದ್ದರು. ಅವರೊಂದಿಗೆ ಅಧಿಕಾರಿಗಳು ಸಹ ಯೇಸುವನ್ನು ಅಪಹಾಸ್ಯಮಾಡಿ, “ಬೇರೆಯವರನ್ನು ರಕ್ಷಿಸಿದ ಈತನು ದೇವರು ಆರಿಸಿಕೊಂಡ ಕ್ರಿಸ್ತನಾಗಿದ್ದರೆ, ತನ್ನನ್ನು ತಾನೇ ರಕ್ಷಿಸಿಕೊಳ್ಳಲಿ,” ಎಂದರು.
තත්‍ර ලෝකසංඝස්තිෂ්ඨන් දදර්ශ; තේ තේෂාං ශාසකාශ්ච තමුපහස්‍ය ජගදුඃ, ඒෂ ඉතරාන් රක්‍ෂිතවාන් යදීශ්වරේණාභිරුචිතෝ (අ)භිෂික්තස්ත්‍රාතා භවති තර්හි ස්වමධුනා රක්‍ෂතු|
36 ಸೈನಿಕರು ಸಹ ಯೇಸುವಿನ ಬಳಿಗೆ ಬಂದು ಅವರನ್ನು ಹಾಸ್ಯಮಾಡಿ ಯೇಸುವಿಗೆ ಹುಳಿರಸವನ್ನು ಕೊಟ್ಟು,
තදන්‍යඃ සේනාගණා ඒත්‍ය තස්මෛ අම්ලරසං දත්වා පරිහස්‍ය ප්‍රෝවාච,
37 “ನೀನು ಯೆಹೂದ್ಯರ ಅರಸನಾಗಿದ್ದರೆ ನಿನ್ನನ್ನು ನೀನೇ ರಕ್ಷಿಸಿಕೋ,” ಎಂದರು.
චේත්ත්වං යිහූදීයානාං රාජාසි තර්හි ස්වං රක්‍ෂ|
38 ಯೇಸುವಿನ ಶಿಲುಬೆಯ ಮೇಲ್ಗಡೆಯಲ್ಲಿ ಒಂದು ಲಿಖಿತ ಹೀಗಿತ್ತು: ಈತನು ಯೆಹೂದ್ಯರ ಅರಸನು.
යිහූදීයානාං රාජේති වාක්‍යං යූනානීයරෝමීයේබ්‍රීයාක්‍ෂරෛ ර්ලිඛිතං තච්ඡිරස ඌර්ද්ධ්වේ(අ)ස්ථාප්‍යත|
39 ಶಿಲುಬೆಗೆ ಹಾಕಿದ್ದ ಅಪರಾಧಿಗಳಲ್ಲಿ ಒಬ್ಬನು, “ನೀನು ಕ್ರಿಸ್ತನಾಗಿದ್ದರೆ ನಿನ್ನನ್ನು ರಕ್ಷಿಸಿಕೊಂಡು, ನಮ್ಮನ್ನೂ ರಕ್ಷಿಸು,” ಎಂದು ಯೇಸುವನ್ನು ದೂಷಿಸಿದನು.
තදෝභයපාර්ශ්වයෝ ර්විද්ධෞ යාවපරාධිනෞ තයෝරේකස්තං විනින්ද්‍ය බභාෂේ, චේත්ත්වම් අභිෂික්තෝසි තර්හි ස්වමාවාඤ්ච රක්‍ෂ|
40 ಆದರೆ ಮತ್ತೊಬ್ಬ ಅಫರಾಧಿಯು ಅವನನ್ನು ಖಂಡಿಸುತ್ತಾ, “ನೀನು ಇದೇ ದಂಡನೆಗೆ ಗುರಿಯಾಗಿದ್ದರೂ ದೇವರಿಗೆ ಭಯಪಡುವುದಿಲ್ಲವೋ?
කින්ත්වන්‍යස්තං තර්ජයිත්වාවදත්, ඊශ්වරාත්තව කිඤ්චිදපි භයං නාස්ති කිං? ත්වමපි සමානදණ්ඩෝසි,
41 ನಮಗಾದರೋ ನಮ್ಮ ಕೃತ್ಯಕ್ಕೆ ತಕ್ಕ ಶಿಕ್ಷೆ ನ್ಯಾಯವಾಗಿ ಸಿಕ್ಕಿದೆ. ಈತನಾದರೋ ತಪ್ಪಾದದ್ದೇನೂ ಮಾಡಲಿಲ್ಲ,” ಎಂದನು.
යෝග්‍යපාත්‍රේ ආවාං ස්වස්වකර්ම්මණාං සමුචිතඵලං ප්‍රාප්නුවඃ කින්ත්වනේන කිමපි නාපරාද්ධං|
42 ಬಳಿಕ ಅವನು, “ಯೇಸುವೇ, ನೀವು ನಿಮ್ಮ ರಾಜ್ಯದಲ್ಲಿ ಬರುವಾಗ ನನ್ನನ್ನು ನೆನಪುಮಾಡಿಕೊಳ್ಳಿರಿ,” ಎಂದನು.
අථ ස යීශුං ජගාද හේ ප්‍රභේ භවාන් ස්වරාජ්‍යප්‍රවේශකාලේ මාං ස්මරතු|
43 ಆಗ ಯೇಸು ಅವನಿಗೆ, “ಈ ದಿನವೇ ನೀನು ನನ್ನ ಸಂಗಡ ಪರದೈಸಿನಲ್ಲಿರುವೆ ಎಂದು ನಾನು ನಿನಗೆ ಸತ್ಯವಾಗಿ ಹೇಳುತ್ತೇನೆ,” ಎಂದರು.
තදා යීශුඃ කථිතවාන් ත්වාං යථාර්ථං වදාමි ත්වමද්‍යෛව මයා සාර්ද්ධං පරලෝකස්‍ය සුඛස්ථානං ප්‍රාප්ස්‍යසි|
44 ಆಗ ಸುಮಾರು ಮಧ್ಯಾಹ್ನವಾಗಿತ್ತು, ಆ ಹೊತ್ತಿನಿಂದ ಮೂರು ಗಂಟೆಯವರೆಗೆ ದೇಶದ ಮೇಲೆಲ್ಲಾ ಕತ್ತಲೆ ಕವಿಯಿತು.
අපරඤ්ච ද්විතීයයාමාත් තෘතීයයාමපර‍්‍ය්‍යන්තං රවේස්තේජසෝන්තර්හිතත්වාත් සර්ව්වදේශෝ(අ)න්ධකාරේණාවෘතෝ
45 ಸೂರ್ಯನು ಕಳೆಗುಂದಿದನು ಮತ್ತು ದೇವಾಲಯದ ತೆರೆಯು ಹರಿದು ಎರಡು ಭಾಗವಾಯಿತು.
මන්දිරස්‍ය යවනිකා ච ඡිද්‍යමානා ද්විධා බභූව|
46 ಯೇಸು ಮಹಾಧ್ವನಿಯಿಂದ, “ತಂದೆಯೇ, ನನ್ನ ಆತ್ಮವನ್ನು ನಿನ್ನ ಕೈಗಳಲ್ಲಿ ಒಪ್ಪಿಸುತ್ತೇನೆ,” ಎಂದು ಗಟ್ಟಿಯಾಗಿ ಕೂಗಿ ಪ್ರಾಣಬಿಟ್ಟರು.
තතෝ යීශුරුච්චෛරුවාච, හේ පිත ර්මමාත්මානං තව කරේ සමර්පයේ, ඉත්‍යුක්ත්වා ස ප්‍රාණාන් ජහෞ|
47 ಆಗ ಶತಾಧಿಪತಿಯು, ನಡೆದದ್ದನ್ನು ಕಂಡು, “ಈತನು ನೀತಿವಂತನೇ ಸರಿ,” ಎಂದು ಹೇಳಿ ದೇವರನ್ನು ಮಹಿಮೆಪಡಿಸಿದನು.
තදෛතා ඝටනා දෘෂ්ට්වා ශතසේනාපතිරීශ්වරං ධන්‍යමුක්ත්වා කථිතවාන් අයං නිතාන්තං සාධුමනුෂ්‍ය ආසීත්|
48 ಆ ದೃಶ್ಯವನ್ನು ಕಾಣಲು ಬಂದ ಜನರು ನಡೆದ ಘಟನೆಗಳನ್ನು ಕಂಡು, ತಮ್ಮ ಎದೆಗಳನ್ನು ಬಡಿದುಕೊಂಡು ಹಿಂದಿರುಗಿ ಹೋದರು.
අථ යාවන්තෝ ලෝකා ද්‍රෂ්ටුම් ආගතාස්තේ තා ඝටනා දෘෂ්ට්වා වක්‍ෂඃසු කරාඝාතං කෘත්වා ව්‍යාචුට්‍ය ගතාඃ|
49 ಯೇಸುವಿಗೆ ಪರಿಚಯವಿದ್ದವರೆಲ್ಲರೂ ಗಲಿಲಾಯದಿಂದ ಅವರನ್ನು ಹಿಂಬಾಲಿಸಿದ ಸ್ತ್ರೀಯರೂ ದೂರದಲ್ಲಿ ನಿಂತು ಇವುಗಳನ್ನು ನೋಡುತ್ತಿದ್ದರು.
යීශෝ ර්ඥාතයෝ යා යා යෝෂිතශ්ච ගාලීලස්තේන සාර්ද්ධමායාතාස්තා අපි දූරේ ස්ථිත්වා තත් සර්ව්වං දදෘශුඃ|
50 ಯೋಸೇಫನೆಂಬ ಹೆಸರುಳ್ಳ ಒಬ್ಬ ಮನುಷ್ಯನಿದ್ದನು, ಇವನು ಆಲೋಚನಾ ಸಭೆಯವನೂ ಒಳ್ಳೆಯವನೂ ಮತ್ತು ನೀತಿವಂತನೂ ಆಗಿದ್ದನು.
තදා යිහූදීයානාං මන්ත්‍රණාං ක්‍රියාඤ්චාසම්මන්‍යමාන ඊශ්වරස්‍ය රාජත්වම් අපේක්‍ෂමාණෝ
51 ಇವನು ಅವರ ತೀರ್ಮಾನಕ್ಕೂ ಕೃತ್ಯಕ್ಕೂ ಒಪ್ಪಿಕೊಂಡಿರಲಿಲ್ಲ. ಇವನು ಯೆಹೂದ್ಯರ ಪಟ್ಟಣವಾದ ಅರಿಮಥಾಯದವನೂ ದೇವರ ರಾಜ್ಯಕ್ಕಾಗಿ ಎದುರುನೋಡುವವನೂ ಆಗಿದ್ದನು.
යිහූදිදේශීයෝ (අ)රිමථීයනගරීයෝ යූෂඵ්නාමා මන්ත්‍රී භද්‍රෝ ධාර්ම්මිකශ්ච පුමාන්
52 ಇವನು ಪಿಲಾತನ ಬಳಿಗೆ ಹೋಗಿ, ಯೇಸುವಿನ ದೇಹವನ್ನು ಕೊಡಲು ಬೇಡಿಕೊಂಡನು.
පීලාතාන්තිකං ගත්වා යීශෝ ර්දේහං යයාචේ|
53 ತರುವಾಯ ಇವನು ಶರೀರವನ್ನು ಕೆಳಗೆ ಇಳಿಸಿ, ನಾರುಬಟ್ಟೆಯಲ್ಲಿ ಸುತ್ತಿ, ಬಂಡೆಯಲ್ಲಿ ಕೊರೆದಿದ್ದ ಸಮಾಧಿಯಲ್ಲಿ ಇಟ್ಟನು, ಅದರಲ್ಲಿ ಅದುವರೆಗೆ ಯಾರನ್ನೂ ಇಟ್ಟಿರಲಿಲ್ಲ.
පශ්චාද් වපුරවරෝහ්‍ය වාසසා සංවේෂ්ට්‍ය යත්‍ර කෝපි මානුෂෝ නාස්ථාප්‍යත තස්මින් ශෛලේ ස්වාතේ ශ්මශානේ තදස්ථාපයත්|
54 ಅಂದು ಸಿದ್ಧತೆಯ ದಿನವಾಗಿತ್ತು. ಸಬ್ಬತ್ ದಿನ ಪ್ರಾರಂಭವಾಗಲಿತ್ತು.
තද්දිනමායෝජනීයං දිනං විශ්‍රාමවාරශ්ච සමීපඃ|
55 ಗಲಿಲಾಯದಿಂದ ಯೇಸುವಿನೊಂದಿಗೆ ಬಂದ ಸ್ತ್ರೀಯರು ಅರಿಮಥಾಯದ ಯೋಸೇಫನೊಂದಿಗೆ ಹೋಗಿ, ಸಮಾಧಿಯನ್ನೂ ದೇಹವನ್ನು ಅದರಲ್ಲಿಟ್ಟ ರೀತಿಯನ್ನೂ ನೋಡಿದರು.
අපරං යීශුනා සාර්ද්ධං ගාලීල ආගතා යෝෂිතඃ පශ්චාදිත්වා ශ්මශානේ තත්‍ර යථා වපුඃ ස්ථාපිතං තච්ච දෘෂ්ට්වා
56 ಅವರು ಮನೆಗೆ ಹಿಂತಿರುಗಿ ಪರಿಮಳ ದ್ರವ್ಯವನ್ನೂ ಸುಗಂಧ ತೈಲವನ್ನೂ ಸಿದ್ಧಪಡಿಸಿಕೊಂಡರು; ಆದರೆ ಮೋಶೆಯ ಆಜ್ಞಾನುಸಾರವಾಗಿ ಸಬ್ಬತ್ ದಿನದಲ್ಲಿ ವಿಶ್ರಮಿಸಿಕೊಂಡರು.
ව්‍යාඝුට්‍ය සුගන්ධිද්‍රව්‍යතෛලානි කෘත්වා විධිවද් විශ්‍රාමවාරේ විශ්‍රාමං චක්‍රුඃ|

< ಲೂಕನು 23 >