< ಲೂಕನು 13 >
1 ಪಿಲಾತನು, ಬಲಿ ಅರ್ಪಿಸುತ್ತಿದ್ದ ಗಲಿಲಾಯದವರ ರಕ್ತವನ್ನೇ ಅವರ ಬಲಿಗಳೊಂದಿಗೆ ಬೆರೆಸಿದ ವಿಷಯವನ್ನು ಯೇಸುವಿಗೆ ತಿಳಿಸಿದ ಕೆಲವರು ಆ ಸಮಯದಲ್ಲಿ ಅಲ್ಲಿದ್ದರು.
୧ଏଚିବେ଼ଲାତା ଏଚେକା ଲ଼କୁ ୱା଼ହାନା, ପିଲାତ ଏମିନି ଗାଲିଲି ଲ଼କୁତି ନେତେରି ଏ଼ୱାରି ପୂଜା ତଲେ ଆଟ୍ହାମାଚେସି, ଏ଼ କାତା ଜୀସୁଇଁ ୱେସ୍ତେରି ।
2 ಯೇಸು ಅವರಿಗೆ, “ಆ ಗಲಿಲಾಯದವರು ಇಂಥಾ ಕೊಲೆಗೆ ಈಡಾದ ಕಾರಣ ಅವರು ಎಲ್ಲಾ ಗಲಿಲಾಯದವರಿಗಿಂತ ದೋಷಿಗಳೆಂದು ನೀವು ಭಾವಿಸುತ್ತೀರೋ?
୨ଏମ୍ବାଟିଏ ଜୀସୁ ଏ଼ୱାରାଇଁ ଏଲେଇଚେସି, “ଏ଼ ଗାଲିଲିତାରି ଡଣ୍ତ ବେଟାଆ଼ହାଲିଏ ଏ଼ୱାରି ଅ଼ର ଗାଲିଲିତାରି କିହାଁ ହା଼ରେକା ପା଼ପୁ ଗାଟାରି ଇଞ୍ଜିଁ ମୀରୁ ଅଣ୍ପିମାଞ୍ଜେରି?
3 ಹಾಗಲ್ಲವೆಂದು ನಾನು ನಿಮಗೆ ಹೇಳುತ್ತೇನೆ! ನೀವು ದೇವರ ಕಡೆಗೆ ತಿರುಗಿಕೊಳ್ಳದೆ ಹೋದರೆ, ನೀವೆಲ್ಲರೂ ಅವರಂತೆಯೇ ನಾಶವಾಗುವಿರಿ.
୩ନା଼ନୁ ମିଙ୍ଗେ ୱେସିମାଞ୍ଜାଇଁ, ଏଲେକିଁ ଆ଼ଏ, ସାମା ମୀରୁ ମ଼ନ ୱେଟ୍ଆତିହିଁ ବାରେଜା଼ଣା ତେରି ଏ଼ୱାରିଲେହେଁ ହା଼ଦେରି ।
4 ಇಲ್ಲವೆ ಸಿಲೋವ ಎಂಬಲ್ಲಿ ಗೋಪುರವು ಬಿದ್ದು ಸತ್ತು ಹೋದ ಆ ಹದಿನೆಂಟು ಜನರು ಯೆರೂಸಲೇಮಿನಲ್ಲಿ ವಾಸವಾಗಿರುವ ಎಲ್ಲಾ ಮನುಷ್ಯರಿಗಿಂತಲೂ ದೋಷಿಗಳೆಂದು ಭಾವಿಸುತ್ತೀರೋ?
୪ସିଲହତା ଆମିନି ଅଟର ଜା଼ଣାତି ଲାକ ପାଡାଆ଼ତି କ଼ଟା ଇଲୁ ରିହାନା ହା଼ତେରି, ଏ଼ୱାରି ବାରେଜା଼ଣା ଜିରୁସାଲମତି ଲ଼କୁ କିହାଁ ହା଼ରେକା ପା଼ପୁ ଗାଟାରି ଇଞ୍ଜିଁ ମୀରୁ ଅଣ୍ପିମାଞ୍ଜେରି?
5 ಹಾಗಲ್ಲವೆಂದು ನಾನು ನಿಮಗೆ ಹೇಳುತ್ತೇನೆ! ನೀವು ದೇವರ ಕಡೆಗೆ ತಿರುಗಿಕೊಳ್ಳದೆ ಹೋದರೆ ನೀವೆಲ್ಲರೂ ಅವರಂತೆಯೇ ನಾಶವಾಗುವಿರಿ,” ಎಂದರು.
୫ନା଼ନୁ ମିଙ୍ଗେ ୱେସିମାଞ୍ଜାଇଁ, ଏଲେକିଁ ଆ଼ଏ, ମୀରୁ ମ଼ନ ୱେଟ୍ଆତିହିଁ ବାରେଜା଼ଣା ତେରି ଏଲେକିହିଁଏ ନା଼ସା ଆ଼ଦେରି ।”
6 ಅನಂತರ ಯೇಸು ಈ ಸಾಮ್ಯವನ್ನು ಹೇಳಿದರು: “ಒಬ್ಬ ಮನುಷ್ಯನಿಗೆ ತನ್ನ ದ್ರಾಕ್ಷಿಯ ತೋಟದಲ್ಲಿ ನೆಡಲಾಗಿದ್ದ, ಒಂದು ಅಂಜೂರದ ಮರವಿತ್ತು. ಅವನು ಬಂದು ಅದರಲ್ಲಿ ಫಲವನ್ನು ಹುಡುಕಲು ಒಂದೂ ಸಿಕ್ಕಲಿಲ್ಲ.
୬ଜୀସୁ ଈ ପୁଣ୍ମ୍ବିକିନି କାତା ୱେସ୍ତେସି, ରଅଣି ଅଙ୍ଗୁରି ବା଼ଡ଼ାତା ର଼ ତ଼ୟା ମା଼ର୍ନୁ ଉହି ଆ଼ହାମାଚେ । ଏ଼ୱାସି ୱା଼ହାନା ପା଼ଡ଼େୟି ପାରୀତେସି ସାମା ମେଡ଼ାଆ଼ଆତେସି ।
7 ಆಗ ಅವನು ತನ್ನ ದ್ರಾಕ್ಷಿಯ ತೋಟ ಮಾಡುವವನಿಗೆ, ‘ನೋಡು, ಮೂರು ವರ್ಷಗಳಿಂದ ನಾನು ಈ ಅಂಜೂರದ ಮರದಲ್ಲಿ ಫಲ ಹುಡುಕುತ್ತಾ ಬಂದಿದ್ದೇನೆ, ಆದರೆ ಏನೂ ಸಿಕ್ಕಲಿಲ್ಲ. ಇದನ್ನು ಕಡಿದುಹಾಕು! ಇದು ಏಕೆ ನೆಲವನ್ನು ಕೆಡಿಸಬೇಕು?’ ಎಂದು ಹೇಳಿದನು.
୭ଇଞ୍ଜାଁ ଏ଼ୱାସି କାମା କିନାଣାଇଁ ଏଲେଇଚେସି, “ମେହ୍ମୁ ନା଼ନୁ ତୀନି ବାର୍ସା ଆ଼ତେୟିଏ ଈ ତ଼ୟା ମା଼ର୍ନୁତା ୱା଼ହାନା ପା଼ଡ଼େୟି ପାରିମାଇଁ, ସାମା ମେ଼ଡ଼ା ଆ଼ହି ହିଲଅଁ; ଏ଼ଦାଣି ଟୂଣ୍ହା ତୁହ୍ମୁ, ଈଦି ଏ଼ନାଆଁତାକି ବୂମିତି ପା଼ଡ଼ିୟା କିନେ?”
8 “ಆದರೆ ಅವನು ಉತ್ತರವಾಗಿ ಅವನಿಗೆ, ‘ಒಡೆಯನೇ, ಇನ್ನೊಂದು ವರ್ಷವೂ ಇದನ್ನು ಬಿಡು, ನಾನು ಅದರ ಸುತ್ತಲೂ ಅಗಿದು ಗೊಬ್ಬರ ಹಾಕುವೆನು.
୮ସାମା କାମାକିନାସି ଏଲେଇଚେସି, “ପ୍ରବୁ ଈଦି ଇୟନା ତାକି ମାଣ୍ମ୍ବେ, ନା଼ନୁ ଈଦାଣି ସା଼ରିସୁଟୁ କା଼ର୍ହାନା ଗାତା ହୀଇଁ,
9 ಮುಂದಿನ ವರ್ಷ ಇದು ಫಲ ಫಲಿಸಿದರೆ, ಸರಿ! ಇಲ್ಲವಾದರೆ, ನೀನು ಇದನ್ನು ಕಡಿದುಹಾಕು, ಎಂದನು.’”
୯ଅ଼ଡ଼େ ଡା଼ୟୁ ପା଼ଡ଼େୟି ଆ଼ୟିତିହିଁ ନେହେଁ ଆ଼ୟାଆତିହିଁ ଏ଼ଦାଣି ଟୂଣ୍ହା ତୁହ୍ମୁ ।”
10 ಯೇಸು ಸಬ್ಬತ್ ದಿನದಲ್ಲಿ ಒಂದು ಸಭಾಮಂದಿರದೊಳಗೆ ಬೋಧಿಸುತ್ತಾ ಇದ್ದರು,
୧୦ର଼ ଦିନା ଜୀସୁ ଜ଼ମିନି ଦିନା ର଼ ଜୀହୁଦି ଲ଼କୁତି କୁଟମି ଇଲୁତା ଜା଼ପ୍ହି ମାଚେସି ।
11 ಆಗ, ಹದಿನೆಂಟು ವರ್ಷಗಳಿಂದ ದುರಾತ್ಮನಿಂದ ರೋಗ ಪೀಡಿತಳಾಗಿ ನಡುಬಗ್ಗಿ ಹೋಗಿದ್ದ ಒಬ್ಬ ಸ್ತ್ರೀಯು ಅಲ್ಲಿ ಇದ್ದಳು. ಆಕೆ ತನ್ನಷ್ಟಕ್ಕೆ ತಾನೇ ನೆಟ್ಟಗೆ ನಿಲ್ಲಲಾರದೆ ಇದ್ದಳು.
୧୧ଏମ୍ବାଆଁ ର଼ ଇୟା ମାଚେ, ଏ଼ଦି ଅଟର ବାର୍ସା ପାତେକା ପ଼ଲ୍ଆ ବୂତୁ ତଲେ କସ୍ତ ଆ଼ହିମାଚେ, ଏ଼ଦି ଟୁଡୁୱା ଆ଼ହାନା ସଲ୍କେ ଆ଼ହିଁ ତା଼କାଲି ଆ଼ଡିହିଲାଆତେ ।
12 ಯೇಸು ಆಕೆಯನ್ನು ಕಂಡು, ಹತ್ತಿರಕ್ಕೆ ಕರೆದು ಆಕೆಗೆ, “ಅಮ್ಮಾ, ನೀನು ಈ ನಿನ್ನ ಬಲಹೀನತೆಯಿಂದ ಬಿಡುಗಡೆಯಾಗಿದ್ದಿ,” ಎಂದು ಹೇಳಿ,
୧୨ଜୀସୁ ଏ଼ଦାନି ମେସାନା ଡାଗେ ହା଼ଟାନା ଏଲେଇଚେସି, “ଏ଼ ଇୟା ନୀନୁ ନୀ ଆ଼ଡାଆ କସ୍ତଟି ନେହିଁ ଆ଼ତି ।”
13 ಯೇಸು ಆಕೆಯ ಮೇಲೆ ತಮ್ಮ ಕೈಗಳನ್ನು ಇಟ್ಟರು, ಕೂಡಲೇ ಆಕೆಯು ನೆಟ್ಟಗಾದಳು ಮತ್ತು ದೇವರನ್ನು ಸ್ತುತಿಸಿದಳು.
୧୩ଅ଼ଡ଼େ ଏ଼ୱାସି ଏ଼ଦାନିଲେକ କେୟୁ ଇଟିତେସି, ଏମ୍ବାଟିଏ ଏ଼ଦି ଏ଼ ଦେବୁଣିଏ ସଲ୍କେ ଆ଼ହାନା ମାହାପୂରୁତି ଜହରା କିତେ ।
14 ಯೇಸು ಸಬ್ಬತ್ ದಿನದಲ್ಲಿ ಸ್ವಸ್ಥಮಾಡಿದ ಕಾರಣ ಸಭಾಮಂದಿರದ ಅಧಿಕಾರಿಯು ಕೋಪದಿಂದ ಜನರಿಗೆ, “ಆರು ದಿವಸಗಳಲ್ಲಿ ಮನುಷ್ಯರು ಕೆಲಸ ಮಾಡತಕ್ಕದ್ದು. ಆದ್ದರಿಂದ ಆ ದಿನಗಳಲ್ಲಿ ನೀವು ಬಂದು ಸ್ವಸ್ಥರಾಗಿರಿ, ಸಬ್ಬತ್ ದಿನದಲ್ಲಿ ಬೇಡ,” ಎಂದನು.
୧୪ସାମା ଜୀସୁ ଜ଼ମିନି ଦିନାତା ନେହିଁ କିହିମାଚାକି ଜୀହୁଦି ଲ଼କୁତି କୁଟମି ଇଲୁତି କାଜାସି କାର୍ବି ଆ଼ହାନା ଲ଼କୁଣି ଏଲେଇଚେସି, “କାମା କିହାଲି ସ଼ ଦିନା ମିଙ୍ଗେ ମାନେ; ଏ଼ଦାଣିତାକି ସ଼ ଦିନା ନେହିଁ ଆ଼ହାଲି ୱା଼ଦୁ, ଜ଼ମିନି ଦିନାତା ୱା଼ଆଦୁ ।”
15 ಅದಕ್ಕೆ ಕರ್ತದೇವರು ಅವನಿಗೆ, “ಕಪಟಿಗಳೇ! ನಿಮ್ಮಲ್ಲಿ ಪ್ರತಿಯೊಬ್ಬನು ಸಬ್ಬತ್ ದಿನದಲ್ಲಿ ತನ್ನ ಎತ್ತನ್ನಾಗಲಿ, ಕತ್ತೆಯನ್ನಾಗಲಿ ಕೊಟ್ಟಿಗೆಯಿಂದ ಬಿಡಿಸಿ ನೀರು ಕುಡಿಸುವುದಕ್ಕಾಗಿ ಹೋಗುವುದಿಲ್ಲವೇ?
୧୫ସାମା ପ୍ରବୁ ଏ଼ୱାଣାଇଁ ଏଲେଇଚେସି, “ଆଡ଼େ କୁଟୁ ଗାଟାତେରି, ମୀରୁ ବାରେଜା଼ଣା ତେରି ଜ଼ମିନି ଦିନାତା ମୀ କ଼ଡି କି ଗା଼ଡ଼୍ଦେତି ହାଃଅଲାଟି ଅ଼ହାନା ଏ଼ୟୁ ଊଟ୍ହି ହିଲଅତେରି କି?
16 ಅಬ್ರಹಾಮನ ಮಗಳಾದ ಈ ಸ್ತ್ರೀಯನ್ನು ಹದಿನೆಂಟು ವರ್ಷಗಳಿಂದ ಸೈತಾನನು ಕಟ್ಟಿಹಾಕಿದ ಈ ಬಂಧನದಿಂದ ಸಬ್ಬತ್ ದಿನದಲ್ಲಿ ಬಿಡಿಸಬಾರದೇ?” ಎಂದರು.
୧୬ଅଟର ବାର୍ସା ପାତେକା ସୟତାନ ତା଼ଣାଟି ଦସ୍ପି ଆ଼ହାମାନି ଅବ୍ରାହାମ କୂଡ଼ାତି ଈ ଇୟାନି ଜ଼ମିନି ଦିନାତା ନେହିଁକିନାୟି ହିଲାଆତେ କି?”
17 ಯೇಸು ಇದನ್ನು ಹೇಳುತ್ತಿರುವಾಗ, ಅವರ ವಿರೋಧಿಗಳೆಲ್ಲರೂ ನಾಚಿಕೆಪಟ್ಟರು, ಆದರೆ ಇತರರು, ಅವರಿಂದ ನಡೆದ ಎಲ್ಲಾ ಮಹಿಮೆಯುಳ್ಳ ಕಾರ್ಯಗಳಿಗಾಗಿ ಸಂತೋಷಪಟ್ಟರು.
୧୭ଏ଼ୱାସି ଈ ବାରେ କାତା ୱେସାଲିଏ, ତାନି ସାତ୍ରୁୟାଁ ବାରେ ଲାଜା ବେଟାଆ଼ତେରି, ସାମା ଜୀସୁ କିହାମାନି କାମା ମେସାନା ଲ଼କୁ ରା଼ହାଁ ଆ଼ତେରି ।
18 ಅನಂತರ ಯೇಸು, “ದೇವರ ರಾಜ್ಯವು ಯಾವುದಕ್ಕೆ ಹೋಲಿಕೆಯಾಗಿದೆ? ನಾನು ಯಾವುದಕ್ಕೆ ಅದನ್ನು ಹೋಲಿಸಲಿ?
୧୮ଜୀସୁ ଏଲେଇଚେସି, “ମାହାପୂରୁ ରା଼ଜି ଏ଼ନିଲେହେଁତାୟି? ଆମ୍ବାରିତଲେ ଏ଼ଦାନି ତୂକ୍ଇଁ?
19 ಅದು ಸಾಸಿವೆಕಾಳಿಗೆ ಹೋಲಿಕೆಯಾಗಿದೆ. ಅದನ್ನು ಒಬ್ಬ ಮನುಷ್ಯನು ತೆಗೆದುಕೊಂಡುಹೋಗಿ ತನ್ನ ತೋಟದಲ್ಲಿ ಬಿತ್ತಲು, ಅದು ಬೆಳೆದು ಒಂದು ದೊಡ್ಡ ಮರವಾಯಿತು. ಆಕಾಶದ ಪಕ್ಷಿಗಳು ಅದರ ಕೊಂಬೆಗಳಲ್ಲಿ ಗೂಡು ಕಟ್ಟಿ ವಾಸಮಾಡಿದವು,” ಎಂದರು.
୧୯ଏ଼ଦି ଇଲେତି ର଼ ହାର୍ସୁ ପା଼ଡ଼େୟି ଲେହେଁ, ଏ଼ଦାଆଁ ଅ଼ହାନା ରଅସି ତାନି ବା଼ଡ଼ାତା ମାଟିତେସି, ଅ଼ଡ଼େ ଏ଼ଦି ପାଡାଆ଼ହାନା ର଼ ମା଼ର୍ନୁ ଆ଼ତେ, ଅ଼ଡ଼େ ହା଼ଗୁ ଲାକ ଊମ୍ବିନି ପଟାୟାଁ ୱା଼ହାନା ଏ଼ କମାତା ବାସା କିତୁ ।”
20 ಪುನಃ ಯೇಸು, “ದೇವರ ರಾಜ್ಯವನ್ನು ಯಾವುದಕ್ಕೆ ಹೋಲಿಸಲಿ?
୨୦ଜୀସୁ ଅ଼ଡ଼େ ଏଲେଇଚେସି, “ନା଼ନୁ ଆମ୍ବାରିତଲେ ମାହାପୂରୁତି ରା଼ଜି ତୂକ୍ଇଁ?
21 ಅದು ಹುಳಿಹಿಟ್ಟಿಗೆ ಹೋಲಿಕೆಯಾಗಿದೆ. ಅದನ್ನು ಒಬ್ಬ ಸ್ತ್ರೀಯು ತೆಗೆದುಕೊಂಡು ಹುಳಿಯಿಲ್ಲದ ಸುಮಾರು ಇಪ್ಪತ್ತೇಳು ಕಿಲೋಗ್ರಾಂ ಹಿಟ್ಟಿನಲ್ಲಿ ಕಲಸಿದಾಗ ಆ ಹಿಟ್ಟೆಲ್ಲಾ ಹುಳಿಯಾಯಿತು,” ಎಂದರು.
୨୧ଏ଼ଦି ପୁଲା ଏ଼ୟୁଲେହେଁତାୟି, ର଼ ଇୟା ତୀନିମା଼ଣା ଗୁଣ୍ତାତା କାଲ୍ହା ଇଟିତେ, ଡା଼ୟୁ ବାରେ ଗୁଣ୍ତା ପୁଲା ଆ଼ତେ ।”
22 ಯೇಸು ಪಟ್ಟಣಗಳನ್ನೂ ಹಳ್ಳಿಗಳನ್ನೂ ಸಂಚರಿಸಿ, ಅಲ್ಲೆಲ್ಲಾ ಬೋಧಿಸುತ್ತಾ ಯೆರೂಸಲೇಮಿನ ಕಡೆಗೆ ಪ್ರಯಾಣಮಾಡಿದರು.
୨୨ଡା଼ୟୁ ଜୀସୁ ଗା଼ଡ଼ାତାକି ଗା଼ଡ଼ା ନା଼ୟୁଁ ତାକି ନା଼ୟୁଁ ରେ଼ଜିହିଁ ଜା଼ପ୍ହିହିଁ ଜିରୁସାଲମ ୱାକି ହାଜିମାଚେସି ।
23 ಒಬ್ಬನು ಯೇಸುವಿಗೆ, “ಸ್ವಾಮಿ, ರಕ್ಷಣೆ ಹೊಂದುವವರು ಕೆಲವರೋ?” ಎಂದು ಕೇಳಲು, ಯೇಸು ಅವರಿಗೆ,
୨୩ରଅସି ଏ଼ୱାଣାଇଁ ୱେଚେସି, “ପ୍ରବୁ ଗେଲ୍ପି ଆ଼ନାରି ୱାର୍ଇ ଇଚରା ଜା଼ଣାକି?” ଜୀସୁ ଏ଼ୱାରାଇଁ ଏଲେଇଚେସି,
24 “ಇಕ್ಕಟ್ಟಾದ ಬಾಗಿಲಿನಿಂದ ಒಳಗೆ ಪ್ರವೇಶಿಸುವುದಕ್ಕೆ ಪ್ರಯಾಸಪಡಿರಿ, ಅನೇಕರು ಒಳಗೆ ಪ್ರವೇಶಿಸುವುದಕ್ಕೆ ಪ್ರಯತ್ನಿಸಿದರೂ ಆಗುವುದಿಲ್ಲ ಎಂದು ನಾನು ನಿಮಗೆ ಹೇಳುತ್ತೇನೆ.
୨୪“ଜୀୱୁ ତୂସାନା ଜାକ୍ଣି ଦୁୱେରିଟି ହାଜୁ; ଇଚିହିଁ ନା଼ନୁ ମିଙ୍ଗେ ୱେସିମାଞ୍ଜାଇଁ, ହା଼ରେକା ହ଼ଡାଲି ଅଣ୍ପିନେରି, ସାମା ହ଼ଡାଲି ଆ଼ଡଅରି ।
25 ಮನೆಯಜಮಾನರು ಒಂದು ಸಾರಿ ಎದ್ದು ಬಾಗಿಲನ್ನು ಮುಚ್ಚಿಕೊಂಡರೆ, ನೀವು ಹೊರಗೆ ನಿಂತುಕೊಂಡು ಬಾಗಿಲನ್ನು ತಟ್ಟುತ್ತಾ, ‘ಸ್ವಾಮಿ, ನಮಗೆ ಬಾಗಿಲನ್ನು ತೆರೆಯಿರಿ,’ ಎಂದು ಹೇಳುವುದಕ್ಕೆ ಆರಂಭಿಸಿದಾಗ, “ಆತನು ನಿಮಗೆ ಉತ್ತರವಾಗಿ, ‘ನೀವು ಯಾರು? ಎಲ್ಲಿಯವರೋ ನಾನು ನಿಮ್ಮನ್ನು ಅರಿಯೆನು,’ ಎಂದು ಹೇಳುವನು.
୨୫ଇଲୁଗାଟାସି ନିଙ୍ଗାନା ଦା଼ରା ସୁଣ୍ତିତି ଡା଼ୟୁ ଏଚେ଼ତା ମୀରୁ ପାଙ୍ଗାତା ନିଚାନା ଦା଼ରା ଡୀ ଡୀ ୱେଚିହିଁ ‘ଏ଼ ପ୍ରବୁ ମାଙ୍ଗେତାକି ଦା଼ରା ଦେତାମୁ’ ଇଞ୍ଜିଁ ହା଼ଟିଦେରି, ଏଚେ଼ତା ଏ଼ୱାସି ମିଙ୍ଗେ ଏଲେଇଞ୍ଜାନେସି, ‘ମୀରୁ ଏମ୍ବିତାତେରି ନା଼ନୁ ପୁଞ୍ଜାମାଞ୍ଜଅଁ ।’
26 “ಆಗ ನೀವು, ‘ನಿಮ್ಮೊಂದಿಗೆ ನಾವು ಊಟಮಾಡಿದೆವು, ಪಾನಮಾಡಿದೆವು, ನೀವು ನಮ್ಮ ಬೀದಿಗಳಲ್ಲಿ ಬೋಧಿಸಿದಿರಿ,’ ಎಂದು ಹೇಳಲಾರಂಭಿಸುವಿರಿ.
୨୬ଏଚିବେ଼ଲା ମୀରୁ ଏଲେଇଞ୍ଜେରି, ‘ଏ଼ ପ୍ରବୁ ମା଼ମ୍ବୁ ନୀ ତଲେ ତିଚା ଉଟାତମି, ଅ଼ଡ଼େ ନୀନୁ ମା଼ ଆଂଗେଣିକାଣା ଜା଼ପ୍ହିମାଞ୍ଜାତି ।’
27 “ಅದಕ್ಕೆ ಆತನು, ‘ನೀವು ಎಲ್ಲಿಯವರೋ ನಾನರಿಯೆ, ಅನೀತಿಯನ್ನು ಮಾಡುವವರಾದ ನೀವೆಲ್ಲರೂ ನನ್ನಿಂದ ತೊಲಗಿಹೋಗಿರಿ,’ ಎಂದು ಹೇಳುವರು.
୨୭ଅ଼ଡ଼େ ଏ଼ୱାସି ମିଙ୍ଗେ ଏଲେଇଞ୍ଜାନେସି, ‘ମୀରୁ ଆମିନି ଟା଼ୟୁତି ଲ଼କୁତେରି ନା଼ନୁ ପୁଞ୍ଜାମାଞ୍ଜଅଁ; ଏ଼ ଲାଗେଏ ପ଼ଲେଏ ତାତେରି ନା଼ ତା଼ଣାଟି ହେକ ଆ଼ଦୁ ।’
28 “ಅಬ್ರಹಾಮ, ಇಸಾಕ, ಯಾಕೋಬ ಮತ್ತು ಎಲ್ಲಾ ಪ್ರವಾದಿಗಳು ದೇವರ ರಾಜ್ಯದಲ್ಲಿ ಇರುವುದನ್ನೂ ನಿಮ್ಮನ್ನು ಮಾತ್ರ ಹೊರಗೆ ಹಾಕಿರುವುದನ್ನೂ ಕಾಣುವಾಗ, ಅಲ್ಲಿ ನಿಮಗೆ ಗೋಳಾಟವೂ ಹಲ್ಲು ಕಡಿಯೋಣವೂ ಇರುವವು.
୨୮ଏଚିବେ଼ଲା ମୀରୁ ଅବ୍ରାହାମ, ଇସାହାକ, ଜାକୁବ ଇଞ୍ଜାଁ ବାରେ ମାହାପୂରୁ ଅଣ୍ପୁତି ବ଼ଲୁ ୱେହ୍ନାରାଇଁ ମାହାପୂରୁ ରା଼ଜିତା ମାନାଣି ଅ଼ଡ଼େ ମିଙ୍ଗେ ପାଙ୍ଗାତା କୁତା ମାଞ୍ଜାନାଣି ଅଣ୍ପାନା ପାଲ୍କା ଟୀଟି କିହିଁ ଡ଼ୀଦେରି ।
29 ಪೂರ್ವ ಪಶ್ಚಿಮ ಉತ್ತರ ದಕ್ಷಿಣಗಳಿಂದ ಜನರು ಬಂದು, ದೇವರ ರಾಜ್ಯದಲ್ಲಿ ಹಬ್ಬದ ಔತಣಕ್ಕೆ ಕುಳಿತುಕೊಳ್ಳುವರು.
୨୯ଅ଼ଡ଼େ ହା଼ରେକା ଲ଼କୁ ୱେ଼ଡ଼ା ହ଼ପୁ ୱାକିଟି ଅ଼ଡ଼େ ୱେ଼ଡ଼ା କୂଡ଼୍ନି ୱାକିଟି, ଟିଃନି ୱାକିଟି ଟେ଼ବ୍ରି ୱାକିଟି ୱା଼ହାନା ମାହାପୂରୁତି ରା଼ଜିତି ବ଼ଜିତା କୁଗିନେରି ।
30 ಆಗ ಕಡೆಯವರು ಮೊದಲನೆಯವರಾಗುವರು, ಮೊದಲನೆಯವರು ಕಡೆಯವರಾಗುವರು,” ಎಂದು ಹೇಳಿದರು.
୩୦ଅ଼ଡ଼େ ମେହ୍ଦୁ ଡା଼ୟୁତା ମାନି କଚେକା ନ଼କିତା ଆ଼ନେରି ଅ଼ଡ଼େ ନ଼କିତା ମାନି କଚେକା ଡା଼ୟୁତା ଆ଼ନେରି ।”
31 ಅದೇ ಸಮಯದಲ್ಲಿ ಫರಿಸಾಯರಲ್ಲಿ ಕೆಲವರು ಯೇಸುವಿನ ಬಳಿಗೆ ಬಂದು, “ನೀವು ಇಲ್ಲಿಂದ ಹೊರಟು ಹೋಗಿರಿ. ಹೆರೋದನು ನಿಮ್ಮನ್ನು ಕೊಲ್ಲಬೇಕೆಂದಿರುವನು,” ಎಂದು ಅವರಿಗೆ ಹೇಳಿದರು.
୩୧ଏଚିବେ଼ଲାତେଏ ଏଚରଜା଼ଣା ପାରୁସିୟାଁ ୱା଼ହାନା ଜୀସୁଇଁ ୱେସ୍ତେରି, “ନୀନୁ ଈ ଟା଼ୟୁ ପିସାନା ହାଜାତୁହ୍ମୁ ଏ଼ନାଆଁତାକି ଇଚିହିଁ ହେରଦ ନିଙ୍ଗେ ପା଼ୟାଲି ଅଣ୍ପିମାନେସି ।”
32 ಅದಕ್ಕೆ ಯೇಸು ಅವರಿಗೆ, “ಇಗೋ, ‘ನಾನು ಈ ದಿವಸ ಮತ್ತು ನಾಳೆ ದೆವ್ವಗಳನ್ನು ಓಡಿಸುತ್ತೇನೆ ಸ್ವಸ್ಥಮಾಡುತ್ತೇನೆ, ಮೂರನೆಯ ದಿನದಲ್ಲಿ ನಾನು ಸಿದ್ಧಿಗೆ ಬರುತ್ತೇನೆ,’ ಎಂದು ನೀವು ಹೋಗಿ ಆ ನರಿಗೆ ಹೇಳಿರಿ.
୩୨ଜୀସୁ ଏ଼ୱାରାଇଁ ଏଲେଇଚେସି, “ମୀରୁ ହାଜାନା ଏ଼ ନାକାଇଁ ୱେହ୍ଦୁ, ‘ମେହ୍ମୁ ନା଼ନୁ ନୀଞ୍ଜୁ ଅ଼ଡ଼େ ୱିଏ ବୂତୁୟାଁ ପିସ୍ପି କିହିମାଇଁ ଅ଼ଡ଼େ ନେହିଁ କିହିମାଇଁ ଇଞ୍ଜାଁ ତୀନି ଦିନାଟିଏ ନା଼ କାମା ରା଼ପ୍ଇଁ ।’
33 ಆದರೂ ಈ ದಿವಸ ಮತ್ತು ನಾಳೆ ಮತ್ತು ನಾಡಿದ್ದು ನಾನು ಪ್ರಯಾಣ ಮಾಡಲೇಬೇಕು. ಏಕೆಂದರೆ ಒಬ್ಬ ಪ್ರವಾದಿಯು ಯೆರೂಸಲೇಮಿನ ಹೊರಗೆ ಕೊಲೆಗೀಡಾಗಬಾರದು!
୩୩ଏ଼ନିଜିକେଏ ନୀଞ୍ଜୁ ୱିଏ ଅ଼ଡ଼େ ମାଏଁ ନାଙ୍ଗେ ତା଼କିହିଁ ହାଜାଲି ଆ଼ନେ, ଇଚିହିଁ ମାହାପୂରୁ ଅଣ୍ପୁତି ବ଼ଲୁ ୱେହ୍ନାସି ଜିରୁସାଲମ ପିସ୍ପେ ପାଙ୍ଗାତା ହାନାୟି ନେହେଁ ଆ଼ଏ ।”
34 “ಯೆರೂಸಲೇಮೇ, ಯೆರೂಸಲೇಮೇ, ಪ್ರವಾದಿಗಳನ್ನು ಕೊಲ್ಲುವವಳೇ, ನಿನ್ನ ಬಳಿಗೆ ಕಳುಹಿಸಿದವರನ್ನು ಕಲ್ಲೆಸೆಯುವವಳೇ, ಕೋಳಿಯು ತನ್ನ ಮರಿಗಳನ್ನು ತನ್ನ ರೆಕ್ಕೆಗಳ ಕೆಳಗೆ ಕೂಡಿಸುವಂತೆ ನಾನು ನಿನ್ನ ಮಕ್ಕಳನ್ನು ಕೂಡಿಸುವುದಕ್ಕೆ ನನಗೆ ಎಷ್ಟೋ ಸಾರಿ ಮನಸ್ಸಿತ್ತು. ಆದರೆ ನಿನಗೆ ಮನಸ್ಸಿಲ್ಲದೆ ಹೋಯಿತು.
୩୪“ଏ଼ ଜିରୁସାଲମ, ଏ଼ ଜିରୁସାଲମ ମାହାପୂରୁ ଅଣ୍ପୁତି ବ଼ଲୁ ୱେହ୍ନାରାଇଁ ପା଼ୟିନାତି ଅ଼ଡ଼େ ନୀ ତା଼ଣା ପାଣ୍ତ୍ୱି ଆ଼ହାମାନାରାଇଁ ୱାଲ୍କାତଲେ ୱେନାତି, ତାଲି କୟୁ ଏ଼ନିକିଁ ତାନି ହୀପାୟାଁଣି ତାନି ମା଼ରାୟାଁ ଡ଼଼ଇ ଜ଼ଙ୍ଗିନେ, ଏଲେକିଁ ଏଚର ଦେବା ନୀ ପ଼ଦି ପ଼ଦାତି ପ୍ଡିକ୍ହାନା ଇଟିଇଁ ଇଞ୍ଜିଁ ଅଣ୍ପିମାଚେଏଁ ସାମା ମୀରୁ ଏଲେକିହାଲି ହିୟାଆତେରି ।
35 ನೋಡಿರಿ, ನಿಮ್ಮ ದೇವಾಲಯವು ನಿಮಗೆ ಬರಿದಾಗಿ ಹಾಳುಬೀಳುವುದು. ಏಕೆಂದರೆ, ‘ಕರ್ತದೇವರ ಹೆಸರಿನಲ್ಲಿ ಬರುವವರು ಧನ್ಯರು,’ ಎಂದು ನೀವು ಹೇಳುವ ಸಮಯವು ಬರುವ ತನಕ ನೀವು ನನ್ನನ್ನು ಕಾಣುವುದೇ ಇಲ್ಲ, ಎಂದು ನಾನು ನಿಮಗೆ ಹೇಳುತ್ತೇನೆ,” ಎಂದರು.
୩୫ମେହ୍ଦୁ ମୀ ଇଲୁ ମୀ କେୟୁତା ହୀପ୍କି ଆ଼ହିମାଞ୍ଜାନେ; ଅ଼ଡ଼େ ନା଼ନୁ ମିଙ୍ଗେ ଏଲେଇଞ୍ଜିମାଞ୍ଜାଇଁ ମାହାପୂରୁ ଦ଼ରୁଟି ଆମ୍ବାଆସି ୱା଼ହିମାନେସି ଏ଼ୱାସି ନେହାଁସି ଇଞ୍ଜିଁ ଏମିନି ନେ଼ଚୁ ଈ କାତା ଏଲେଇଞ୍ଜେରି ଏ଼ ଦିନା ୱା଼ଆ ପାତେକା ମୀରୁ ଅ଼ଡ଼େ ନାଙ୍ଗେ ମେସ୍ତଅତେରି ।”