< ಇಬ್ರಿಯರಿಗೆ ಬರೆದ ಪತ್ರಿಕೆ 2 >

1 ಆದ್ದರಿಂದ ದಾರಿಬಿಟ್ಟು ಹೋಗದಂತೆ, ನಾವು ಕೇಳಿದ ಸಂಗತಿಗಳಿಗೆ ಹೆಚ್ಚು ಲಕ್ಷ್ಯ ಕೊಡುವವರಾಗಿರಬೇಕು.
අතෝ වයං යද් භ්‍රමස්‍රෝතසා නාපනීයාමහේ තදර්ථමස්මාභි ර‍්‍යද්‍යද් අශ්‍රාවි තස්මින් මනාංසි නිධාතව්‍යානි|
2 ಏಕೆಂದರೆ ದೇವದೂತರ ಮೂಲಕ ಹೇಳಲಾದ ವಾಕ್ಯವೇ ದೃಢಪಡಿಸಲಾಯಿತು. ಆದ್ದರಿಂದ ಆ ವಾಕ್ಯವನ್ನು ಮೀರಿದವರಿಗೂ ಅವಿಧೇಯರಾದವರಿಗೂ ನ್ಯಾಯವಾದ ದಂಡನೆ ಕೊಡಲಾಯಿತು.
යතෝ හේතෝ දූතෛඃ කථිතං වාක්‍යං යද්‍යමෝඝම් අභවද් යදි ච තල්ලඞ්ඝනකාරිණේ තස්‍යාග්‍රාහකාය ච සර්ව්වස්මෛ සමුචිතං දණ්ඩම් අදීයත,
3 ಇಂತಹ ಮಹಾ ರಕ್ಷಣೆಯನ್ನು ನಾವು ಅಲಕ್ಷ್ಯ ಮಾಡಿದರೆ ತಪ್ಪಿಸಿಕೊಳ್ಳುವುದು ಹೇಗೆ? ಈ ರಕ್ಷಣೆಯನ್ನು ನಮಗೆ ಕರ್ತ ಆಗಿರುವ ಯೇಸುವೇ ಮೊದಲು ತಿಳಿಸಿದ್ದಾರೆ. ಅವರಿಂದ ಕೇಳಿಸಿಕೊಂಡವರೂ ನಮಗೆ ಆ ರಕ್ಷಣೆಯನ್ನು ದೃಢಪಡಿಸಿದ್ದಾರೆ.
තර්හ්‍යස්මාභිස්තාදෘශං මහාපරිත්‍රාණම් අවඥාය කථං රක්‍ෂා ප්‍රාප්ස්‍යතේ, යත් ප්‍රථමතඃ ප්‍රභුනා ප්‍රෝක්තං තතෝ(අ)ස්මාන් යාවත් තස්‍ය ශ්‍රෝතෘභිඃ ස්ථිරීකෘතං,
4 ದೇವರು ಸಹ ಸೂಚಕಕಾರ್ಯಗಳಿಂದಲೂ ಅದ್ಭುತಕಾರ್ಯಗಳಿಂದಲೂ ನಾನಾ ವಿಧವಾದ ಮಹತ್ಕಾರ್ಯಗಳಿಂದಲೂ ತಮ್ಮ ಚಿತ್ತಾನುಸಾರವಾಗಿ ದಯಪಾಲಿಸಿದ ಪವಿತ್ರಾತ್ಮರ ವರದಾನಗಳಿಂದಲೂ ಸಾಕ್ಷಿನೀಡಿ ದೃಢಪಡಿಸಿದ್ದಾರೆ.
අපරං ලක්‍ෂණෛරද්භුතකර්ම්මභි ර්විවිධශක්තිප්‍රකාශේන නිජේච්ඡාතඃ පවිත්‍රස්‍යාත්මනෝ විභාගේන ච යද් ඊශ්වරේණ ප්‍රමාණීකෘතම් අභූත්|
5 ನಾವು ಸಾರುತ್ತಿರುವ ಮುಂದಣ ಲೋಕವನ್ನು ದೇವರು ತಮ್ಮ ದೂತರಿಗೆ ಅಧೀನ ಮಾಡಲಿಲ್ಲವಲ್ಲ.
වයං තු යස්‍ය භාවිරාජ්‍යස්‍ය කථාං කථයාමඃ, තත් තේන් දිව්‍යදූතානාම් අධීනීකෘතමිති නහි|
6 ಆದರೆ ಪವಿತ್ರ ವೇದದ ಒಂದು ಸ್ಥಳದಲ್ಲಿ ಒಬ್ಬನು ಹೀಗೆ ಸಾಕ್ಷಿ ಹೇಳಿದ್ದಾನೆ: “ಮನುಷ್ಯನನ್ನು ನೀನು ನೆನಸುವುದಕ್ಕೆ ಅವನು ಎಷ್ಟು ಮಾತ್ರದವನು? ಮನುಷ್ಯಪುತ್ರನನ್ನು ಲಕ್ಷ್ಯವಿಡುವುದಕ್ಕೆ ಅವನು ಎಷ್ಟರವನು?
කින්තු කුත්‍රාපි කශ්චිත් ප්‍රමාණම් ඊදෘශං දත්තවාන්, යථා, "කිං වස්තු මානවෝ යත් ස නිත්‍යං සංස්මර‍්‍ය්‍යතේ ත්වයා| කිං වා මානවසන්තානෝ යත් ස ආලෝච්‍යතේ ත්වයා|
7 ನೀನು ಆತನನ್ನು ದೇವದೂತರಿಗಿಂತ ಸ್ವಲ್ಪವೇ ಕಡಿಮೆಯಾಗಿ ಮಾಡಿದೆಯಲ್ಲಾ? ಮಹಿಮೆಯನ್ನೂ ಮಾನವನ್ನೂ ಆತನಿಗೆ ಕಿರೀಟವನ್ನಾಗಿ ಇಟ್ಟೆ.
දිව්‍යදතගණේභ්‍යඃ ස කිඤ්චින් න්‍යූනඃ කෘතස්ත්වයා| තේජෝගෞරවරූපේණ කිරීටේන විභූෂිතඃ| සෘෂ්ටං යත් තේ කරාභ්‍යාං ස තත්ප්‍රභුත්වේ නියෝජිතඃ|
8 ಎಲ್ಲವನ್ನೂ ಆತನ ಪಾದಗಳ ಕೆಳಗೆ ಹಾಕಿ ಆತನಿಗೆ ಅಧೀನ ಮಾಡಿದ್ದೀಯಲ್ಲವೇ?” ಹೀಗೆ ದೇವರು ಎಲ್ಲವನ್ನೂ ಆತನಿಗೆ ಅಧೀನ ಮಾಡಿದರೆಂಬುದರಲ್ಲಿ ಆತನಿಗೆ ಒಂದನ್ನಾದರೂ ಅಧೀನಮಾಡದೆ ಬಿಡಲಿಲ್ಲ ಎಂಬುದು ಸ್ವಷ್ಟವಾಗುತ್ತದೆ. ಆದರೆ ಈಗ ಎಲ್ಲವೂ ಆತನಿಗೆ ಅಧೀನವಾಗಿರುವುದನ್ನು ನಾವು ಇನ್ನೂ ಕಾಣುವದಿಲ್ಲ.
චරණාධශ්ච තස්‍යෛව ත්වයා සර්ව්වං වශීකෘතං|| " තේන සර්ව්වං යස්‍ය වශීකෘතං තස්‍යාවශීභූතං කිමපි නාවශේෂිතං කින්ත්වධුනාපි වයං සර්ව්වාණි තස්‍ය වශීභූතානි න පශ්‍යාමඃ|
9 ಆದರೂ ದೇವದೂತರಿಗಿಂತ ಸ್ವಲ್ಪಕಾಲ ಕಡಿಮೆಯಾಗಿ ಮಾಡಲಾದ ಆ ಒಬ್ಬಾತನು ಯೇಸುವೇ. ಈ ಯೇಸು ಬಾಧೆಪಟ್ಟು ಮೃತಪಟ್ಟಿದ್ದರಿಂದಲೇ ಮಹಿಮೆಯನ್ನೂ ಮಾನವನ್ನೂ ಕಿರೀಟವಾಗಿ ಹೊಂದಿದರೆಂದು ಎಂದು ನಾವು ಕಾಣುತ್ತೇವೆ. ದೇವರ ಕೃಪೆಯಿಂದಲೇ ಎಲ್ಲರಿಗೋಸ್ಕರ ಮರಣವನ್ನು ಈ ಯೇಸು ಅನುಭವಿಸಬೇಕಾಗಿತ್ತು.
තථාපි දිව්‍යදූතගණේභ්‍යෝ යඃ කිඤ්චින් න්‍යූනීකෘතෝ(අ)භවත් තං යීශුං මෘත්‍යුභෝගහේතෝස්තේජෝගෞරවරූපේණ කිරීටේන විභූෂිතං පශ්‍යාමඃ, යත ඊශ්වරස්‍යානුග්‍රහාත් ස සර්ව්වේෂාං කෘතේ මෘත්‍යුම් අස්වදත|
10 ದೇವರು ಸಮಸ್ತವನ್ನೂ ತಮಗೋಸ್ಕರವೂ ತಮ್ಮ ಮೂಲಕವೂ ಉಂಟುಮಾಡಿ ಬಹುಮಂದಿ ಮಕ್ಕಳನ್ನು ಮಹಿಮೆಗೆ ತರುವಂತೆ ಅವರ ರಕ್ಷಣಾ ನಾಯಕರಾದ ಕ್ರಿಸ್ತ ಯೇಸುವನ್ನು ಬಾಧೆಗಳ ಮೂಲಕ ಸಿದ್ಧಿಗೆ ತರುವುದು ದೇವರಿಗೆ ಯುಕ್ತವಾಗಿತ್ತು.
අපරඤ්ච යස්මෛ යේන ච කෘත්ස්නං වස්තු සෘෂ්ටං විද්‍යතේ බහුසන්තානානාං විභවායානයනකාලේ තේෂාං පරිත්‍රාණාග්‍රසරස්‍ය දුඃඛභෝගේන සිද්ධීකරණමපි තස්‍යෝපයුක්තම් අභවත්|
11 ಪವಿತ್ರ ಮಾಡುವ ದೇವರೂ ಪವಿತ್ರರಾದವರೆಲ್ಲರೂ ಒಂದೇ ಕುಟುಂಬಕ್ಕೆ ಸೇರಿದವರಾಗಿದ್ದಾರೆ. ಈ ಕಾರಣದಿಂದ ಯೇಸು ಅವರನ್ನು ಸಹೋದರರೆಂದು ಕರೆಯುವುದಕ್ಕೆ ನಾಚಿಕೆಪಡದೆ,
යතඃ පාවකඃ පූයමානාශ්ච සර්ව්වේ ඒකස්මාදේවෝත්පන්නා භවන්ති, ඉති හේතෝඃ ස තාන් භ්‍රාතෘන් වදිතුං න ලජ්ජතේ|
12 ಹೇಳಿದ್ದು, “ನಿಮ್ಮ ಹೆಸರನ್ನು ನನ್ನ ಸಹೋದರರಿಗೆ ಸಾರುವೆನು. ಸಭಾ ಮಧ್ಯದಲ್ಲಿ ನಿಮಗೆ ಸ್ತುತಿ ಪದಗಳನ್ನು ಹಾಡುವೆನು.”
තේන ස උක්තවාන්, යථා, "ද්‍යෝතයිෂ්‍යාමි තේ නාම භ්‍රාතෘණාං මධ්‍යතෝ මම| පරන්තු සමිතේ ර්මධ්‍යේ කරිෂ්‍යේ තේ ප්‍රශංසනං|| "
13 ಎಂದೂ ಪುನಃ, “ನಾನು ದೇವರ ಮೇಲೆ ಭರವಸೆ ಇಡುವೆನು.” ಎಂದೂ ಪುನಃ, “ಇಗೋ ನಾನೂ, ದೇವರು ನನಗೆ ದಯಪಾಲಿಸಿರುವ ಮಕ್ಕಳೂ ನನಗಿದ್ದಾರೆ.” ಎಂದು ಹೇಳಿದ್ದಾರೆ.
පුනරපි, යථා, "තස්මින් විශ්වස්‍ය ස්ථාතාහං| " පුනරපි, යථා, "පශ්‍යාහම් අපත්‍යානි ච දත්තානි මහ්‍යම් ඊශ්වරාත්| "
14 ಮಕ್ಕಳು ರಕ್ತಮಾಂಸಧಾರಿಗಳು ಆಗಿರುವುದರಿಂದ ಯೇಸು ತಮ್ಮ ಮರಣದಿಂದಲೇ ಮರಣಾಧಿಕಾರಿಯನ್ನು ಅಂದರೆ, ಸೈತಾನನನ್ನು ನಾಶಮಾಡುವುದಕ್ಕೂ
තේෂාම් අපත්‍යානාං රුධිරපලලවිශිෂ්ටත්වාත් සෝ(අ)පි තද්වත් තද්විශිෂ්ටෝ(අ)භූත් තස්‍යාභිප්‍රායෝ(අ)යං යත් ස මෘත්‍යුබලාධිකාරිණං ශයතානං මෘත්‍යුනා බලහීනං කුර‍්‍ය්‍යාත්
15 ಮರಣ ಭಯದಿಂದ ಜೀವಮಾನದಲ್ಲೆಲ್ಲಾ ದಾಸತ್ವದೊಳಗಿದ್ದವರನ್ನು ಬಿಡಿಸುವುದಕ್ಕೂ ಅವರ ಮಾನವತ್ವದಲ್ಲಿ ಪಾಲುಗಾರರಾದರು.
යේ ච මෘත්‍යුභයාද් යාවජ්ජීවනං දාසත්වස්‍ය නිඝ්නා ආසන් තාන් උද්ධාරයේත්|
16 ಯೇಸು ನಿಜವಾಗಿಯೂ ದೂತರಿಗಾಗಿ ಹಾಗೆ ಮಾಡದೆ ಅಬ್ರಹಾಮನ ಸಂತತಿಯವರಿಗಾಗಿ ಹಾಗೆ ಮಾಡಿದರು.
ස දූතානාම් උපකාරී න භවති කින්ත්විබ්‍රාහීමෝ වංශස්‍යෛවෝපකාරී භවතී|
17 ಆದ್ದರಿಂದ ಯೇಸು ಎಲ್ಲಾ ವಿಷಯಗಳಲ್ಲಿಯೂ ತಮ್ಮ ಸಹೋದರರಿಗೆ ಸಮಾನವಾಗಬೇಕಾಯಿತು. ಹೀಗೆ ಅವರು ಜನರ ಪಾಪಗಳನ್ನು ನಿವಾರಣೆ ಮಾಡುವುದಕ್ಕಾಗಿ ದೇವರ ಸೇವೆಯಲ್ಲಿ ಕರುಣೆಯುಳ್ಳ ನಂಬಿಗಸ್ತರಾದ ಮಹಾಯಾಜಕರಾದರು.
අතෝ හේතෝඃ ස යථා කෘපාවාන් ප්‍රජානාං පාපශෝධනාර්ථම් ඊශ්වරෝද්දේශ්‍යවිෂයේ විශ්වාස්‍යෝ මහායාජකෝ භවේත් තදර්ථං සර්ව්වවිෂයේ ස්වභ්‍රාතෘණාං සදෘශීභවනං තස්‍යෝචිතම් ආසීත්|
18 ಆದ್ದರಿಂದ ಯೇಸು ತಾವೇ ಶೋಧನೆಗೊಳಗಾಗಿ ಬಾಧೆಯನ್ನು ಅನುಭವಿಸಿರುವುದರಿಂದ, ಶೋಧನೆಗೆ ಒಳಗಾಗುವವರಿಗೆ ಸಹಾಯ ಮಾಡುವುದಕ್ಕೆ ಶಕ್ತರಾಗಿದ್ದಾರೆ.
යතඃ ස ස්වයං පරීක්‍ෂාං ගත්වා යං දුඃඛභෝගම් අවගතස්තේන පරීක්‍ෂාක්‍රාන්තාන් උපකර්ත්තුං ශක්නෝති|

< ಇಬ್ರಿಯರಿಗೆ ಬರೆದ ಪತ್ರಿಕೆ 2 >