< ಗಲಾತ್ಯದವರಿಗೆ ಬರೆದ ಪತ್ರಿಕೆ 5 >
1 ಕ್ರಿಸ್ತ ಯೇಸು ನಮ್ಮನ್ನು ಸ್ವತಂತ್ರಕ್ಕಾಗಿಯೇ ಬಿಡುಗಡೆ ಮಾಡಿದ್ದಾರೆ. ಆದ್ದರಿಂದ ಸ್ಥಿರವಾಗಿ ನಿಲ್ಲಿರಿ. ನೀವು ನಿಯಮದ ದಾಸತ್ವದ ನೊಗದಲ್ಲಿ ಪುನಃ ಸಿಕ್ಕಿಕೊಳ್ಳಬೇಡಿರಿ.
ขฺรีษฺโฏ'สฺมภฺยํ ยตฺ สฺวาตนฺตฺรฺยํ ทตฺตวานฺ ยูยํ ตตฺร สฺถิราสฺติษฺฐต ทาสตฺวยุเคน ปุน รฺน นิพธฺยธฺวํฯ
2 ಇಗೋ, ಪೌಲನೆಂಬ ನಾನು ನಿಮಗೆ ಹೇಳುವುದೇನೆಂದರೆ, ನೀವು ಸುನ್ನತಿ ಮಾಡಿಸಿಕೊಂಡರೆ, ಕ್ರಿಸ್ತ ಯೇಸುವಿನ ಮುಖಾಂತರ ನಿಮಗೆ ಏನೂ ಪ್ರಯೋಜನವಾಗುವುದಿಲ್ಲ.
ปศฺยตาหํ เปาโล ยุษฺมานฺ วทามิ ยทิ ฉินฺนตฺวโจ ภวถ ตรฺหิ ขฺรีษฺเฏน กิมปิ โนปการิษฺยเธฺวฯ
3 ಸುನ್ನತಿ ಮಾಡಿಸಿಕೊಳ್ಳಲು ಬಯಸುವ ಪ್ರತಿಯೊಬ್ಬನೂ ನಿಯಮವನ್ನೆಲ್ಲಾ ಕೈಗೊಳ್ಳುವ ಹಂಗಿನಲ್ಲಿದ್ದಾನೆ ಎಂದು ಪುನಃ ದೃಢವಾಗಿ ಹೇಳುತ್ತೇನೆ.
อปรํ ย: กศฺจิตฺ ฉินฺนตฺวคฺ ภวติ ส กฺฤตฺสฺนวฺยวสฺถายา: ปาลนมฺ อีศฺวราย ธารยตีติ ปฺรมาณํ ททามิฯ
4 ನೀವು ನಿಯಮದ ಮೂಲಕ ನೀತಿವಂತರಾಗಬೇಕೆಂದು ಪ್ರಯತ್ನಿಸುವವರು, ಕ್ರಿಸ್ತ ಯೇಸುವಿನಿಂದ ಬೇರ್ಪಟ್ಟಿದ್ದೀರಿ. ನೀವು ಕೃಪೆಯಿಂದ ಬಿದ್ದವರಾಗಿದ್ದೀರಿ.
ยุษฺมากํ ยาวนฺโต โลกา วฺยวสฺถยา สปุณฺยีภวิตุํ เจษฺฏนฺเต เต สรฺเวฺว ขฺรีษฺฏาทฺ ภฺรษฺฏา อนุคฺรหาตฺ ปติตาศฺจฯ
5 ನಾವಾದರೋ ನಂಬಿಕೆಯಿಂದ ನೀತಿವಂತರಾಗುವ ನಮ್ಮ ನಿರೀಕ್ಷೆಯನ್ನು ದೇವರ ಆತ್ಮನ ಮೂಲಕ ಆತುರದಿಂದ ಎದುರುನೋಡುತ್ತಿದ್ದೇವೆ.
ยโต วยมฺ อาตฺมนา วิศฺวาสาตฺ ปุณฺยลาภาศาสิทฺธํ ปฺรตีกฺษามเหฯ
6 ಏಕೆಂದರೆ ಕ್ರಿಸ್ತ ಯೇಸುವಿನಲ್ಲಿರುವವರಿಗೆ ಸುನ್ನತಿಯಾದರೂ ಸುನ್ನತಿ ಆಗದಿದ್ದರೂ ಯಾವ ವ್ಯತ್ಯಾಸವಿರುವುದಿಲ್ಲ. ಆದರೆ ಪ್ರೀತಿಯಿಂದ ಕಾರ್ಯ ನಡೆಸುವ ನಂಬಿಕೆಯು ಮಾತ್ರ ಪ್ರಯೋಜನವಾಗಿರುತ್ತದೆ.
ขฺรีษฺเฏ ยีเศา ตฺวกฺเฉทาตฺวกฺเฉทโย: กิมปิ คุณํ นาสฺติ กินฺตุ เปฺรมฺนา สผโล วิศฺวาส เอว คุณยุกฺต: ฯ
7 ನೀವು ಚೆನ್ನಾಗಿ ಓಡುತ್ತಿದ್ದಿರಿ. ನೀವು ಸತ್ಯಕ್ಕೆ ವಿಧೇಯರಾಗದಂತೆ ನಿಮ್ಮನ್ನು ತಡೆದವರು ಯಾರು?
ปูรฺวฺวํ ยูยํ สุนฺทรมฺ อธาวต กินฺตฺวิทานีํ เกน พาธำ ปฺราปฺย สตฺยตำ น คฺฤหฺลีถ?
8 ಈ ಪ್ರೇರಣೆಯು ನಿಮ್ಮನ್ನು ಕರೆದ ದೇವರಿಂದ ಬಂದದ್ದಲ್ಲ.
ยุษฺมากํ สา มติ รฺยุษฺมทาหฺวานการิณ อีศฺวรานฺน ชาตาฯ
9 ಸ್ವಲ್ಪ ಹುಳಿಯು ಹಿಟ್ಟನ್ನೆಲ್ಲಾ ಹುಳಿಮಾಡುವುದು.
วิการ: กฺฤตฺสฺนศกฺตูนำ สฺวลฺปกิเณฺวน ชสยเตฯ
10 ನೀವು ಬೇರೆ ರೀತಿಯಿಂದ ಯೋಚಿಸುವುದಿಲ್ಲವೆಂದು ಕರ್ತ ಯೇಸುವಿನಲ್ಲಿ ನಿಮ್ಮನ್ನು ಕುರಿತು ನನಗೆ ಭರವಸೆ ಇದೆ. ಆದರೆ ನಿಮ್ಮನ್ನು ತೊಂದರೆ ಪಡಿಸುವವನು ಯಾವನಾದರೂ ಸರಿ, ಅವನು ದಂಡನೆಯನ್ನು ಅನುಭವಿಸುವನು.
ยุษฺมากํ มติ รฺวิการํ น คมิษฺยตีตฺยหํ ยุษฺมานธิ ปฺรภุนาศํเส; กินฺตุ โย ยุษฺมานฺ วิจารลยติ ส ย: กศฺจิทฺ ภเวตฺ สมุจิตํ ทณฺฑํ ปฺราปฺสฺยติฯ
11 ಆದರೆ ಪ್ರಿಯರೇ, ನಾನು ಸುನ್ನತಿಯಾಗಬೇಕೆಂದು ಇನ್ನೂ ಬೋಧಿಸುವವನಾಗಿದ್ದರೆ, ಈಗಲೂ ನನಗೆ ಹಿಂಸೆಯಾಗುತ್ತಿರುವುದು ಏಕೆ? ಹಾಗಾದರೆ ಶಿಲುಬೆಯ ಸಂದೇಶ ಸಾರುವುದರಿಂದ ಯಾವ ಆತಂಕವೂ ಉಂಟಾಗುತ್ತಿರಲಿಲ್ಲವಲ್ಲಾ?
ปรนฺตุ เห ภฺราตร: , ยทฺยหมฺ อิทานีมฺ อปิ ตฺวกฺเฉทํ ปฺรจารเยยํ ตรฺหิ กุต อุปทฺรวํ ภุญฺชิย? ตตฺกฺฤเต กฺรุศํ นิรฺพฺพาธมฺ อภวิษฺยตฺฯ
12 ನಿಮ್ಮನ್ನು ಸುನ್ನತಿ ಮಾಡಿಸಿಕೊಳ್ಳಬೇಕೆಂದು ತೊಂದರೆ ಪಡಿಸುವವರಿಗೆ ಆ ಅಂಗಚ್ಛೇದವನ್ನಾದರೂ ಮಾಡಿಕೊಂಡರೆ ಲೇಸು ಎಂದು ಬಯಸುತ್ತೇನೆ!
เย ชนา ยุษฺมากํ จาญฺจลฺยํ ชนยนฺติ เตษำ เฉทนเมว มยาภิลษฺยเตฯ
13 ಪ್ರಿಯರೇ, ನೀವು ಸ್ವಾತಂತ್ರ್ಯಕ್ಕಾಗಿ ಕರೆಹೊಂದಿದವರು. ಆದರೆ ಆ ಸ್ವಾತಂತ್ರ್ಯವನ್ನು ಶಾರೀರಿಕ ಅನುಕೂಲಕ್ಕಾಗಿ ಉಪಯೋಗಿಸದೆ, ಪ್ರೀತಿಯಿಂದ ಒಬ್ಬರಿಗೊಬ್ಬರು ದೀನರಾಗಿ ಸೇವೆಮಾಡಿರಿ.
เห ภฺราตร: , ยูยํ สฺวาตนฺตฺรฺยารฺถมฺ อาหูตา อาเธฺว กินฺตุ ตตฺสฺวาตนฺตฺรฺยทฺวาเรณ ศารีริกภาโว ยุษฺมานฺ น ปฺรวิศตุฯ ยูยํ เปฺรมฺนา ปรสฺปรํ ปริจรฺยฺยำ กุรุธฺวํฯ
14 ಏಕೆಂದರೆ, “ನಿನ್ನ ನೆರೆಯವನನ್ನು ನಿನ್ನಂತೆಯೇ ಪ್ರೀತಿಸು,” ಎಂಬ ಒಂದೇ ಆಜ್ಞೆಯಲ್ಲಿ ನಿಯಮವೆಲ್ಲಾ ಅಡಕವಾಗಿದೆ.
ยสฺมาตฺ ตฺวํ สมีปวาสินิ สฺววตฺ เปฺรม กุรฺยฺยา อิเตฺยกาชฺญา กฺฤตฺสฺนายา วฺยวสฺถายา: สารสํคฺรห: ฯ
15 ಆದರೆ ನೀವು ಒಬ್ಬರನ್ನೊಬ್ಬರು ಕಚ್ಚಿ ನುಂಗುವವರಾದರೆ ಒಬ್ಬರಿಂದೊಬ್ಬರು ನಾಶವಾದೀರಿ, ಎಚ್ಚರಿಕೆ.
กินฺตุ ยูยํ ยทิ ปรสฺปรํ ทํทศฺยเธฺว 'ศาศฺยเธฺว จ ตรฺหิ ยุษฺมากมฺ เอโก'เนฺยน ยนฺน คฺรสฺยเต ตตฺร ยุษฺมาภิ: สาวธาไน รฺภวิตวฺยํฯ
16 ನಾನು ಹೇಳುವುದೇನೆಂದರೆ, ಪವಿತ್ರಾತ್ಮರ ನಡೆಸುವಿಕೆಯಿಂದ ಬಾಳಿರಿ, ಆಗ ನೀವು ದೈಹಿಕ ಆಸೆಗಳನ್ನು ಎಂದೂ ಪೂರೈಸಲಾರಿರಿ.
อหํ พฺรวีมิ ยูยมฺ อาตฺมิกาจารํ กุรุต ศารีริกาภิลาษํ มา ปูรยตฯ
17 ಏಕೆಂದರೆ ಮಾಂಸಭಾವವು ಆತ್ಮನಿಗೆ ವಿರುದ್ಧವಾಗಿಯೂ ಆತ್ಮನು ಮಾಂಸಭಾವಕ್ಕೆ ವಿರುದ್ಧವಾಗಿಯೂ ಆಶಿಸುತ್ತದೆ. ನೀವು ಮಾಡಬಯಸುವುದನ್ನು ಮಾಡದಂತೆ ಇವು ಒಂದಕ್ಕೊಂದು ವಿರೋಧವಾಗಿವೆ.
ยต: ศารีริกาภิลาษ อาตฺมโน วิปรีต: , อาตฺมิกาภิลาษศฺจ ศรีรสฺย วิปรีต: , อนโยรุภโย: ปรสฺปรํ วิโรโธ วิทฺยเต เตน ยุษฺมาภิ รฺยทฺ อภิลษฺยเต ตนฺน กรฺตฺตวฺยํฯ
18 ಆದರೆ ನೀವು ದೇವರ ಆತ್ಮದಿಂದ ನಡೆಸಿಕೊಳ್ಳುವವರಾದರೆ, ನಿಯಮದ ಅಧೀನತೆಯಲ್ಲಿ ಇರುವವರಲ್ಲ.
ยูยํ ยทฺยาตฺมนา วินียเธฺว ตรฺหิ วฺยวสฺถายา อธีนา น ภวถฯ
19 ಮಾಂಸಭಾವದ ಕೃತ್ಯಗಳು ಹೀಗೆ ಸ್ಪಷ್ಟವಾಗಿವೆ: ಜಾರತ್ವ, ಅಶುದ್ಧತ್ವ, ಸಡಿಲ ಜೀವನ,
อปรํ ปรทารคมนํ เวศฺยาคมนมฺ อศุจิตา กามุกตา ปฺรติมาปูชนมฺ
20 ವಿಗ್ರಹಾರಾಧನೆ, ಮಾಟ, ಹಗೆತನ, ಜಗಳ, ಹೊಟ್ಟೆಕಿಚ್ಚು, ಸಿಟ್ಟು, ಸ್ವಾರ್ಥತ್ವ, ವಿರೋಧತ್ವ, ಭಿನ್ನತೆ,
อินฺทฺรชาลํ ศตฺรุตฺวํ วิวาโท'นฺตรฺชฺวลนํ โกฺรธ: กลโห'ไนกฺยํ
21 ಮತ್ಸರ, ಕುಡಿಕತನ, ದುಂದೌತಣ ಈ ಮೊದಲಾದವುಗಳೇ. ಇಂಥ ಕೃತ್ಯಗಳನ್ನು ನಡೆಸುವವರು ದೇವರ ರಾಜ್ಯಕ್ಕೆ ಬಾಧ್ಯರಾಗುವುದಿಲ್ಲವೆಂದು ನಾನು ನಿಮಗೆ ಮುಂಚೆಯೇ ಹೇಳಿದಂತೆ ಈಗಲೂ ಹೇಳುತ್ತೇನೆ.
ปารฺถกฺยมฺ อีรฺษฺยา วโธ มตฺตตฺวํ ลมฺปฏตฺวมิตฺยาทีนิ สฺปษฺฏเตฺวน ศารีริกภาวสฺย กรฺมฺมาณิ สนฺติฯ ปูรฺวฺวํ ยทฺวตฺ มยา กถิตํ ตทฺวตฺ ปุนรปิ กถฺยเต เย ชนา เอตาทฺฤศานิ กรฺมฺมาณฺยาจรนฺติ ไตรีศฺวรสฺย ราเชฺย'ธิการ: กทาจ น ลปฺสฺยเตฯ
22 ಪವಿತ್ರಾತ್ಮರ ಫಲವೇನೆಂದರೆ: ಪ್ರೀತಿ, ಆನಂದ, ಸಮಾಧಾನ, ಸಹನೆ, ದಯೆ, ಸದ್ಗುಣ, ನಂಬಿಗಸ್ತಿಕೆ,
กิญฺจ เปฺรมานนฺท: ศานฺติศฺจิรสหิษฺณุตา หิไตษิตา ภทฺรตฺวํ วิศฺวาสฺยตา ติติกฺษา
23 ಸಾತ್ವಿಕತೆ, ಸಂಯಮ ಇಂಥವುಗಳೇ. ಇವುಗಳಿಗೆ ವಿರೋಧವಾಗಿ ಯಾವ ನಿಯಮವೂ ಇಲ್ಲ.
ปริมิตโภชิตฺวมิตฺยาทีนฺยาตฺมน: ผลานิ สนฺติ เตษำ วิรุทฺธา กาปิ วฺยวสฺถา นหิฯ
24 ಕ್ರಿಸ್ತ ಯೇಸುವಿನವರು ತಮ್ಮ ಮಾಂಸಭಾವವನ್ನೂ ಅದರ ಆಶೆ ಹಾಗೂ ಅಪೇಕ್ಷೆಗಳ ಸಹಿತವಾಗಿ ಶಿಲುಬೆಗೆ ಹಾಕಿದ್ದಾರೆ.
เย ตุ ขฺรีษฺฏสฺย โลกาเสฺต ริปุภิรภิลาไษศฺจ สหิตํ ศารีริกภาวํ กฺรุเศ นิหตวนฺต: ฯ
25 ನಾವು ದೇವರ ಆತ್ಮದಿಂದ ಜೀವಿಸುತ್ತಿರಲಾಗಿ ಆತ್ಮರನ್ನನುಸರಿಸಿ ನಡೆಯೋಣ.
ยทิ วยมฺ อาตฺมนา ชีวามสฺตรฺหฺยาตฺมิกาจาโร'สฺมาภิ: กรฺตฺตวฺย: ,
26 ನಾವು ಅಹಂಕಾರಿಗಳಾಗಿರಬಾರದು. ಒಬ್ಬರನ್ನೊಬ್ಬರು ಕೆಣಕದೆಯೂ ಒಬ್ಬರ ಮೇಲೊಬ್ಬರು ಮತ್ಸರಗೊಳ್ಳದೆಯೂ ಇರೋಣ.
ทรฺป: ปรสฺปรํ นิรฺภรฺตฺสนํ เทฺวษศฺจาสฺมาภิ รฺน กรฺตฺตวฺยานิฯ