< ಅಪೊಸ್ತಲರ ಕೃತ್ಯಗಳ 28 >
1 ನಾವು ಸುರಕ್ಷಿತವಾಗಿ ದಡ ಸೇರಿದ ಮೇಲೆ, ಆ ದ್ವೀಪವು ಮಾಲ್ಟ ದ್ವೀಪವೆಂದು ಕಂಡುಕೊಂಡೆವು.
ज़ैखन असां ठीक ठाक बन्ने पुड़ पुज़े, त असन पतो च़लो कि इस टैपू जो माल्टा ज़ोतन।
2 ಆ ದ್ವೀಪದ ನಿವಾಸಿಗಳು ನಮಗೆ ಅಸಾಧಾರಣವಾದ ದಯೆತೋರಿಸಿದರು. ಆಗ ಮಳೆ ಬರುತ್ತಿದ್ದು ಬಹಳ ಚಳಿಯಿದ್ದುದರಿಂದ ಅವರು ಬೆಂಕಿಹೊತ್ತಿಸಿ ನಮ್ಮನ್ನು ಬರಮಾಡಿಕೊಂಡರು.
तैट्ठेरे राने बालेईं असन सेइं बड़ो रोड़ो बर्ताव कियो, झ़ड़ी लग्गोरी थी, ते ठंढ भी बड़ी थी, तैनेईं अग बाली ते इश्शी बड़ी आदर कमाई।
3 ಪೌಲನು ಕಟ್ಟಿಗೆ ಕೂಡಿಸಿ ಹೊರೆಯನ್ನು ತಂದು ಬೆಂಕಿಯಲ್ಲಿ ಹಾಕಲು ಶಾಖದಿಂದ ಒಂದು ಸರ್ಪವು ಹೊರಬಂದು ಅವನ ಕೈಗೆ ಸುತ್ತಿಕೊಂಡಿತು.
पौलुसे कैड़ु केरो अक लेग्गु बनावं, ते ज़ैखन तै तैना कैड़ु अग्गी मां छ़डने लगो त अगारे सेके सेइं तैन कैड़न मरां अक सप निस्सो, ते पौलुसेरे हथ्थे सेइं पलेटोव।
4 ಸರ್ಪವು ಪೌಲನ ಕೈಗೆ ಸುತ್ತಿಕೊಂಡಿರುವುದನ್ನು ದ್ವೀಪ ನಿವಾಸಿಗಳು ಕಂಡಾಗ, “ನಿಶ್ವಯವಾಗಿ ಈ ಮನುಷ್ಯನು ಕೊಲೆಗಾರನಾಗಿರಬೇಕು. ಸಮುದ್ರದಿಂದ ತಪ್ಪಿಸಿಕೊಂಡು ಬಂದರೂ ನ್ಯಾಯವು ಅವನನ್ನು ಜೀವಿಸಲಿಕ್ಕೆ ಬಿಡಲಿಲ್ಲ,” ಎಂದು ತಮ್ಮತಮ್ಮೊಳಗೆ ಮಾತನಾಡಿಕೊಂಡರು.
ज़ैखन तैन लोकेईं सप पौलुसेरे हथ्थे सेइं पलेटोरो लव, त एप्पू मांमेइं ज़ोने लगे, “ए मैन्हु ज़रूर कोई खूनी आए, ए समुन्द्रे मां गर्क भोने करां त बच़ोरोए, पन इन्साफे ए ज़ींतो न राने न दित्तो।”
5 ಆದರೆ ಪೌಲನು ಸರ್ಪವನ್ನು ಬೆಂಕಿಯೊಳಗೆ ಝಾಡಿಸಿ ಬಿಟ್ಟನು. ಅವನಿಗೆ ಯಾವ ಕೇಡೂ ಆಗಲಿಲ್ಲ.
पन तैनी तैस सप्पे अग्गी मांजो घिल देइतां ट्लट्टो, ते तैस किछ नुकसान न भोव।
6 ಅವನು ಬಾತುಹೋಗುತ್ತಾನೆ ಅಥವಾ ಇದ್ದಕ್ಕಿದ್ದಂತೆ ಸತ್ತು ಹೋಗುತ್ತಾನೆ ಎಂದು ಜನರು ಕಾದಿದ್ದರು. ಆದರೆ ಬಹಳ ಹೊತ್ತು ಕಾದು ನೋಡಿದ ಮೇಲೆ, ಅವನಿಗೆ ಕೆಟ್ಟದ್ದೇನೂ ಆಗದಿರುವುದನ್ನು ಕಂಡು ಅವರು ತಮ್ಮ ಮನಸ್ಸುಗಳನ್ನು ಬದಲಾಯಿಸಿಕೊಂಡು, “ಇವನೊಬ್ಬ ದೇವರು” ಎಂದು ಹೇಳಿಕೊಂಡರು.
तैना लोक बलगने लग्गोरो थिये, कि एसेरी सारी जान एफरी गानीए ते ए मेरि गानोए, ते बड़े च़िरे तगर बलगनेरे बाद पौलुसे किछ न भोवं, त तैना लोक सोचने लगे, “ए ज़रूर कोई देबतोए।”
7 ದ್ವೀಪದ ಮುಖ್ಯ ಅಧಿಕಾರಿ ಪೊಪ್ಲಿಯನೆಂಬುವನಿಗೆ ಸೇರಿದ ಹೊಲವು ಸಮೀಪದಲ್ಲಿಯೇ ಇತ್ತು. ಅವನು ನಮ್ಮನ್ನು ತನ್ನ ಮನೆಗೆ ಆಮಂತ್ರಿಸಿ ಮೂರು ದಿನ ನಮ್ಮನ್ನು ಉಪಚರಿಸಿದನು.
तैस ठैरारे आसे-पासेरे टैपेरी प्रधान पुबलियुसेरी ज़मीन थी, तैनी असां अपने घरे ने ते ट्लाई दिहाड़े इश्शी आदर खातर की।
8 ಪೊಪ್ಲಿಯನ ತಂದೆ ಅಸ್ವಸ್ಥತೆಯಿಂದ ಮಲಗಿದ್ದನು. ಅವನು ಜ್ವರ ಮತ್ತು ರಕ್ತ ಭೇದಿಯಿಂದ ಬಾಧೆಗೊಳಗಾಗಿದ್ದನು. ಪೌಲನು ಅವನನ್ನು ಸಂದರ್ಶಿಸಿ, ಪ್ರಾರ್ಥನೆಮಾಡಿ, ಅವನ ಮೇಲೆ ತನ್ನ ಹಸ್ತಗಳನ್ನಿಟ್ಟು ಅವನನ್ನು ಗುಣಪಡಿಸಿದನು.
पुबलियुसेरे बाजी भुखार ते पैचसी सेइं बड़ो बिमार भोरो थियो, ते पौलुसे तैस कां गेइतां तैसेरेलेइ प्रार्थना की, ते तैस पुड़ हथ रेखतां तै बझ़ाव।
9 ಹೀಗಾದ ತರುವಾಯ ಆ ದ್ವೀಪದಲ್ಲಿಯೇ ಉಳಿದ ರೋಗಿಗಳು ಸಹ ಬಂದು ಗುಣಹೊಂದಿದರು.
फिरी तैस टैपेरे बाकी बिमार लोक आए ते तैना ठीक भोइ जे।
10 ಅವರು ಅನೇಕ ವಿಧವಾಗಿ ನಮ್ಮನ್ನು ಗೌರವಿಸಿದರು. ನಾವು ಪ್ರಯಾಣಕ್ಕೆ ಸಿದ್ಧರಾದಾಗ ನಮಗೆ ಅಗತ್ಯವಿದ್ದವುಗಳನ್ನೆಲ್ಲಾ ತಂದು ಒದಗಿಸಿಕೊಟ್ಟರು.
तैन लोकेईं इश्शी बड़ी इज़्ज़त की, ते असां तैट्ठां अग्रोवं गानेरे लेइ तियार भोए, त तैनेईं इश्शी ज़ुरुरतरी सैरी चीज़ां ज़िहाज़े मां छ़ैडी दित्ती।
11 ಮೂರು ತಿಂಗಳ ಸಮಯ ದಾಟಿದ ತರುವಾಯ ಆ ದ್ವೀಪದಲ್ಲಿ ಚಳಿಗಾಲ ಕಳೆದ ಮೇಲೆ ಒಂದು ನೌಕೆಯನ್ನು ಹತ್ತಿ ಹೊರಟೆವು. ಅದು ಅಶ್ವಿನಿ ಚಿಹ್ನೆಯಿದ್ದ ಅಲೆಕ್ಸಾಂದ್ರಿಯದ ಒಂದು ನೌಕೆಯಾಗಿತ್ತು.
इश्शू ज़िहाज़ बिगड़नेरे ट्लेइ महिना बाद असां सिकन्दरियारे एक्की ज़िहाज़े मां च़ले जे, ज़ैन ठंढ मुकने तगर तैस टैपू मां रुकेरु थियूं, तैस मां यूनैनी केरि दूई अकोट्ठी देबतेरी मूरतां बनोरी थी।
12 ಸುರಕೂಸ್ ಎಂಬ ಪಟ್ಟಣವನ್ನು ತಲುಪಿ ಅಲ್ಲಿ ಮೂರು ದಿನ ಇದ್ದೆವು.
पेइले असां सुरकूसा नगरे मां पुज़े, ते ट्लाई दिहाड़े तैड़ी राए।
13 ಅಲ್ಲಿಂದ ಸಮುದ್ರ ಪ್ರಯಾಣ ಮುಂದುವರಿಸಿ ರೇಗಿಯ ಪಟ್ಟಣಕ್ಕೆ ಬಂದೆವು. ಮರುದಿನ ದಕ್ಷಿಣ ಗಾಳಿ ಬೀಸುತ್ತಿದ್ದುದರಿಂದ ಎರಡನೆಯ ದಿನ ಪೊತಿಯೋಲ ರೇವನ್ನು ತಲುಪಿದೆವು.
तैट्ठां असां च़लते-च़लते रेगियुम नगरे मां पुज़े, ते होरसां दक्षिणी हवा च़लने लगी ते असां होरसां पुतियुली नगरे मां पुज़े।
14 ಅಲ್ಲಿ ಕೆಲವು ಸಹೋದರರು ನಮ್ಮನ್ನು ಕಂಡು ಒಂದು ವಾರ ತಮ್ಮೊಂದಿಗೆ ಕಳೆಯಬೇಕೆಂದು ಆಮಂತ್ರಿಸಿದರು. ಕೊನೆಗೆ ನಾವು ರೋಮ್ ಸೇರಿದೆವು.
तैड़ी असन किछ ढ्ला भी मैल्ले, तैनेईं असां कुजाए ते असां तैड़ी सत दिहाड़े राए, ते तैसेरां बाद असां रोमे मां पुज़े।
15 ಅಲ್ಲಿದ್ದ ಸಹೋದರರು ನಾವು ಬರುತ್ತೇವೆಂಬ ವಿಷಯವನ್ನು ಕೇಳಿ ನಮ್ಮನ್ನು ಎದುರುಗೊಳ್ಳಲು ಅಪ್ಪಿಯ ಪೇಟೆಗೂ ತ್ರಿಛತ್ರದ ಬಳಿಗೂ ಬಂದರು. ಪೌಲನು ಅವರನ್ನು ನೋಡಿ ದೇವರ ಸ್ತುತಿ ಮಾಡಿ ಧೈರ್ಯ ತಂದುಕೊಂಡನು.
तैट्ठेरे मसीही ढ्लान पतो लगो, कि असां ओरेम त तैना असन अगराने अप्पियुसेरे चौके ते ट्लेइ धर्मशालन तगर आए, पौलुसे तैना लेइतां परमेशरेरू शुक्र कियूं ते तैस बड़ी हिम्मत भोइ।
16 ನಾವು ರೋಮ್ ಪಟ್ಟಣಕ್ಕೆ ಬಂದಾಗ, ತನ್ನ ಕಾವಲುಗಾರನಾಗಿದ್ದ ಸೈನಿಕನೊಂದಿಗೆ ಪ್ರತ್ಯೇಕವಾಗಿ ಇರಲು ಪೌಲನಿಗೆ ಅನುಮತಿ ದೊರೆಯಿತು.
ज़ैखन अस रोम नगरे मां पुज़े ते पौलुसे अज़ाज़त मैल्ली, कि तै एक्की पैरहेदारी निगरेंनी मां ज़ैड़ी चाए गेइ सकते।
17 ಮೂರು ದಿನಗಳಾದ ಮೇಲೆ ಪೌಲನು ಯೆಹೂದ್ಯರ ನಾಯಕರನ್ನು ಕರೆಯಿಸಿದನು. ಅವರೆಲ್ಲರೂ ಬಂದಾಗ ಅವರಿಗೆ, “ನನ್ನ ಸಹೋದರರೇ, ನಮ್ಮ ಜನರಿಗೂ ನಮ್ಮ ಪೂರ್ವಜರಿಗೂ ವಿರೋಧವಾಗಿ ನಾನು ಏನನ್ನೂ ಮಾಡಲಿಲ್ಲ. ಆದರೂ ನನ್ನನ್ನು ಯೆರೂಸಲೇಮಿನಲ್ಲಿ ಬಂಧಿಸಿ ರೋಮನ್ನರ ವಶಕ್ಕೆ ಒಪ್ಪಿಸಲಾಯಿತು.
ज़ैखन ट्लाई दिहाड़े बीते त पौलुसे यहूदी केरे प्रधान कुजाए, ते ज़ैखन तैना अकोट्ठे भोए त पौलुसे तैन सेइं ज़ोवं, “ढ्लाव मीं अपनि कौमरे ते अपने दादे-पड़दादां केरि रसमरे खलाफ कोई कम नईं कियेरू त फिर भी अवं पाबंद केरतां यरूशलेम नगरे मां रोमी सरकारारे हवाले कियो।
18 ಅವರು ನನ್ನನ್ನು ವಿಚಾರಣೆ ಮಾಡಿ, ನಾನು ಮರಣಶಿಕ್ಷೆ ಹೊಂದಲು ಯಾವ ಅಪರಾಧವೂ ಇಲ್ಲದಿರುವುದನ್ನು ಕಂಡು ನನ್ನನ್ನು ಬಿಡುಗಡೆ ಮಾಡಲಿದ್ದರು.
तैनेईं पुछ़ गन केरनेरे बाद अवं हथरां छ़डनो थियो। किजोकि मीं कोई एरू कम न थियूं कियेरू कि ज़ैस सेइं मीं मौतरी सज़ा देथे।
19 ಆದರೆ ಯೆಹೂದ್ಯರು ಅದನ್ನು ವಿರೋಧಿಸಿದಾಗ, ನಾನು ನೇರವಾಗಿ ಕೈಸರನಿಗೆ ಮನವಿ ಮಾಡಿಕೊಳ್ಳಲೇಬೇಕಾಯಿತು. ನನಗೆ ಸ್ವದೇಶದವರ ವಿರೋಧವಾಗಿ ಹೊರಿಸಲು ಯಾವ ಆಪಾದನೆಯೂ ಇಲ್ಲ.
पन ज़ैखन यहूदेईं मुखालफत की, त मीं महाराज़े कां बिनती की। पन एल्हेरेलेइ नईं कि अवं अपनि कौमी पुड़ कोई इलज़ाम लांनो चातो थियो।
20 ಈ ಕಾರಣದಿಂದಲೇ ನಾನು ನಿಮ್ಮನ್ನು ಭೇಟಿಯಾಗಿ ಮಾತನಾಡಬೇಕೆಂದು ಕರೆಯಿಸಿದೆನು. ಇಸ್ರಾಯೇಲರ ನಿರೀಕ್ಷೆಯ ನಿಮಿತ್ತವಾಗಿಯೇ ನಾನು ಈ ಸರಪಣಿಗಳಿಂದ ಬಂಧಿತನಾಗಿದ್ದೇನೆ,” ಎಂದನು.
एल्हेरेलेइ मीं एन रोड़ू समझ़ू, कि तुसन सेइं मिलतां गल केरि, अवं इस्राएलेरी एक्की उमीदी ज़ै मसीह आए शांगलन सेइं बंधोरोइं।”
21 ಅದಕ್ಕೆ ಅವರು, “ನಿನ್ನ ವಿಷಯದಲ್ಲಿ ಯೂದಾಯದಿಂದ ನಮಗೆ ಯಾವ ಪತ್ರವೂ ಬಂದಿಲ್ಲ. ಅಲ್ಲಿಂದ ಬಂದ ಸಹೋದರರಲ್ಲಿ ಯಾರೂ ನಿನ್ನ ವಿಷಯದಲ್ಲಿ ಏನನ್ನೂ ವರದಿ ಮಾಡಿಲ್ಲ. ನಿನ್ನ ಬಗ್ಗೆ ಯಾವ ಕೆಟ್ಟದ್ದನ್ನೂ ಹೇಳಿಲ್ಲ.
तैनेईं तैस सेइं ज़ोवं, “असन यहूदन करां न कोई चिट्ठी मैल्ली ते न तैट्ठां एजनेबाले इश्शे लोकेईं तेरे बारे मां कोई खबर दित्ती, ते न तेरे खलाफ किछ ज़ोवं।
22 ಆದರೆ ನಿನ್ನ ಅಭಿಪ್ರಾಯಗಳೇನೆಂಬುದನ್ನು ಕೇಳಲು ನಮಗೆ ಮನಸ್ಸಿದೆ. ಏಕೆಂದರೆ ಈ ಪಂಥದ ವಿರುದ್ಧವಾಗಿ ಎಲ್ಲಾ ಕಡೆಗಳಲ್ಲಿ ಜನರು ಮಾತನಾಡುತ್ತಿರುವುದನ್ನು ನಾವು ಬಲ್ಲೆವು,” ಎಂದರು.
पन असां तेरे बारे मां ज़ाननू चातम, ए त असन पत्तोए, कि लोक सेब्भी ठैरन एस पंथेरे खलाफ गल्लां केरतन।”
23 ಅವರು ಒಂದು ದಿನ ಪೌಲನೊಂದಿಗಿರಲು ಏರ್ಪಡಿಸಿ, ಅವನಿದ್ದ ಸ್ಥಳಕ್ಕೆ ಬಹುಮಂದಿ ಕೂಡಿಬಂದರು. ಬೆಳಿಗ್ಗೆಯಿಂದ ಸಂಜೆಯವರೆಗೆ ಅವನು ದೇವರ ರಾಜ್ಯದ ಬಗ್ಗೆ ಖಚಿತವಾಗಿ ಸಾಕ್ಷಿ ಕೊಡುತ್ತಾ, ಮೋಶೆಯ ನಿಯಮ ಮತ್ತು ಪ್ರವಾದಿಗಳ ಗ್ರಂಥಗಳಿಂದ ಯೇಸುವಿನ ಬಗ್ಗೆ ವಿವರಿಸಿ ಅವರ ಮನವೊಲಿಸಲು ಪ್ರಯತ್ನಿಸಿದನು.
तैखन यहूदी लोकेईं पौलुसेरी गल्लां शुन्नेरे लेइ अक दिहाड़ी ठुवहलाई, ज़ैखन तै दिहाड़ी आई, त लोक पेइले लोकन करां भी जादे अकोट्ठे भोए। पौलुसे तैन परमेशरेरे राज़्ज़ेरे बारे मां समझ़ाव, ते साथी यीशुएरे बारे मां मूसेरे कानूने ते नेबी केरे किताबन मरां तैन रोड़ेच़ारे समझ़ेइतां झ़ेझ़ां करां ड्लोझ़ी तगर गल्लां शुनातो राव।
24 ಕೆಲವರಿಗೆ ಅವನು ಹೇಳಿದ್ದರ ಬಗ್ಗೆ ಮನದಟ್ಟಾಯಿತು.
किछ तैसेरी गल्लां शुन्तां मघन भोइ जे ते मन्नू ते किछेईं विश्वास भी कियो।
25 ಆದರೆ ಬೇರೆಯವರು ನಂಬಲಿಲ್ಲ. ಅವರು ತಮ್ಮತಮ್ಮಲ್ಲಿಯೇ ಭಿನ್ನಾಭಿಪ್ರಾಯ ಉಳ್ಳವರಾಗಿರಲು ಪೌಲನು ಅವರಿಗೆ, “ಪವಿತ್ರಾತ್ಮ ದೇವರು ನಿಮ್ಮ ಪಿತೃಗಳಿಗೆ ಪ್ರವಾದಿ ಯೆಶಾಯನ ಮುಖಾಂತರ ಈ ಮಾತುಗಳನ್ನು ಸರಿಯಾಗಿಯೇ ಹೇಳಿದ್ದಾರೆ:
ज़ैखन तैना एप्पू मांमेइं अक न भोए, त पौलुसे तैन गाने करां पेइले अक गल ज़ोई, “पवित्र आत्मारे ज़िरिये यशायाह नबी तुश्शे दादे-पड़दादां केरे बारे मां ठीके ज़ोरू थियूं।”
26 “‘ಈ ಜನರ ಬಳಿಗೆ ಹೋಗಿ ಹೇಳು, “ನೀವು ಕೇಳುತ್ತಲೇ ಇರುವಿರಿ, ಎಂದೆಂದೂ ಅರ್ಥಮಾಡಿಕೊಳ್ಳಲಾರಿರಿ; ನೀವು ಕಾಣುತ್ತಲೇ ಇರುವಿರಿ, ಎಂದೆಂದೂ ಅರಿತುಕೊಳ್ಳಲಾರಿರಿ.”
एन लोकन कां गा, ते एन ज़ो कि, “तुस शुन्ते त राले, पन समझ़ेले न, ते तकते त राले पन पिशानेले न।
27 ಈ ಜನರ ಹೃದಯವು ಕಠೋರವಾಗಿದೆ; ಇವರ ಕಿವಿಗಳು ಕೇಳದ ಹಾಗೆ ಮಂದವಾಗಿವೆ, ಇವರು ತಮ್ಮ ಕಣ್ಣುಗಳನ್ನು ಮುಚ್ಚಿಕೊಂಡಿದ್ದಾರೆ. ಇಲ್ಲವಾದರೆ ಅವರು ತಮ್ಮ ಕಣ್ಣುಗಳಿಂದ ನೋಡಿ, ಕಿವಿಗಳಿಂದ ಕೇಳಿಸಿಕೊಂಡು, ತಮ್ಮ ಹೃದಯದಿಂದ ತಿಳಿದು, ನನ್ನ ಕಡೆಗೆ ತಿರುಗಿಕೊಂಡಿದ್ದರೆ, ನಾನು ಅವರನ್ನು ಸ್ವಸ್ಥಪಡಿಸುತ್ತಿದ್ದೆನು,’ ಎಂಬುದೇ.
किजोकि एन लोकां केरे दिले मोट्टे भोरोरेन, ते एना टोव्ने भोरोरेन, ते एनेईं अपनि एछ़्छ़ी निकोल कियोरिन। किजोकि एरू न भोए, कि एना लहन ते कन्न सेइं शुन्न ते दिले सेइं समझ़न, ते एना मेरे पासे फिरन ते अवं एन शिफ़ा देईं।
28 “ಆದ್ದರಿಂದ ದೇವರ ರಕ್ಷಣೆಯು ಯೆಹೂದ್ಯರಲ್ಲದವರಿಗೆ ಒದಗಿ ಬಂದಿದೆ ಎಂಬುದು ನಿಮಗೆ ತಿಳಿದಿರಲಿ. ಅವರು ಅದಕ್ಕೆ ಕಿವಿಗೊಡುವರು,” ಎಂದನು.
“एल्हेरेलेइ अवं चाताईं कि तुस ज़ानथ कि परमेशरेरी मुक्ति गैर कौमन कां भी भेज़ोरोए ते तैना तैस शुनेले।”
29 ಪೌಲನು ಇದನ್ನು ಹೇಳಿದ ತರುವಾಯ ಯೆಹೂದ್ಯರು ತಮ್ಮತಮ್ಮಲ್ಲಿಯೇ ಕಟುವಾಗಿ ಚರ್ಚಿಸಿಕೊಳ್ಳುತ್ತಾ ಹೊರಟು ಹೋದರು.
ज़ैखन पौलुसे एन ज़ोवं, त यहूदी एप्पू मांमेइं बेंस केरते तैट्ठां च़ले जे।
30 ಪೌಲನು ತಾನು ಬಾಡಿಗೆಗೆ ತೆಗೆದುಕೊಂಡ ಮನೆಯಲ್ಲಿ ಎರಡು ವರ್ಷಗಳ ಕಾಲವಿದ್ದು ತನ್ನ ಬಳಿಗೆ ಬಂದವರನ್ನೆಲ್ಲಾ ಸ್ವಾಗತಿಸುತ್ತಿದ್ದನು.
पौलुस पूरे दूई सालन तगर क्रैइयेरे मुकाने मां राव,
31 ಅವನು ಧೈರ್ಯದಿಂದ ಯಾವ ಅಡ್ಡಿ ಆತಂಕಗಳಿಲ್ಲದೇ ದೇವರ ರಾಜ್ಯವನ್ನು ಪ್ರಕಟಿಸುತ್ತಾ, ಕರ್ತ ಆಗಿರುವ ಯೇಸುಕ್ರಿಸ್ತರ ವಿಷಯವಾಗಿ ಉಪದೇಶ ಮಾಡುತ್ತಾ ಇದ್ದನು.
ते ज़ै भी तैस सेइं मिलने एइतो थियो, पौलुस तैस सेइं मिलतो थियो, ते बेधड़क भोइतां परमेशरेरे राज़्ज़ेरी खुशखबरी शुनातो थियो, ते प्रभु यीशु मसीहेरे बारे मां शिक्षा देंतो राव।