< ಅಪೊಸ್ತಲರ ಕೃತ್ಯಗಳ 2 >

1 ಪೆಂಟೆಕೋಸ್ಟ್ ಎಂಬ ಐವತ್ತನೆಯ ದಿನದ ಹಬ್ಬದಂದು, ಅವರೆಲ್ಲರೂ ಒಂದೇ ಸ್ಥಳದಲ್ಲಿ ಒಂದಾಗಿ ಕೂಡಿ ಬಂದಿದ್ದರು.
ಅಪರಞ್ಚ ನಿಸ್ತಾರೋತ್ಸವಾತ್ ಪರಂ ಪಞ್ಚಾಶತ್ತಮೇ ದಿನೇ ಸಮುಪಸ್ಥಿತೇ ಸತಿ ತೇ ಸರ್ವ್ವೇ ಏಕಾಚಿತ್ತೀಭೂಯ ಸ್ಥಾನ ಏಕಸ್ಮಿನ್ ಮಿಲಿತಾ ಆಸನ್|
2 ಆಗ ಬೀಸುತ್ತಿರುವ ಬಿರುಗಾಳಿಯ ರಭಸವಾದ ಶಬ್ದವು ಫಕ್ಕನೆ ಪರಲೋಕದಿಂದ ಬಂದು ಅವರು ಕುಳಿತುಕೊಂಡಿದ್ದ ಮನೆಯನ್ನೆಲ್ಲಾ ತುಂಬಿಕೊಂಡಿತು.
ಏತಸ್ಮಿನ್ನೇವ ಸಮಯೇಽಕಸ್ಮಾದ್ ಆಕಾಶಾತ್ ಪ್ರಚಣ್ಡಾತ್ಯುಗ್ರವಾಯೋಃ ಶಬ್ದವದ್ ಏಕಃ ಶಬ್ದ ಆಗತ್ಯ ಯಸ್ಮಿನ್ ಗೃಹೇ ತ ಉಪಾವಿಶನ್ ತದ್ ಗೃಹಂ ಸಮಸ್ತಂ ವ್ಯಾಪ್ನೋತ್|
3 ಅಗ್ನಿ ಜ್ವಾಲೆಗಳು ಬೆಂಕಿಯ ನಾಲಿಗೆಗಳಂತೆ ವಿಂಗಡವಾಗಿ ಬಂದು ಪ್ರತಿಯೊಬ್ಬರ ಮೇಲೆ ಇಳಿಯುವುದನ್ನು ಅವರು ಕಂಡರು.
ತತಃ ಪರಂ ವಹ್ನಿಶಿಖಾಸ್ವರೂಪಾ ಜಿಹ್ವಾಃ ಪ್ರತ್ಯಕ್ಷೀಭೂಯ ವಿಭಕ್ತಾಃ ಸತ್ಯಃ ಪ್ರತಿಜನೋರ್ದ್ಧ್ವೇ ಸ್ಥಗಿತಾ ಅಭೂವನ್|
4 ಅವರೆಲ್ಲರೂ ಪವಿತ್ರಾತ್ಮಭರಿತರಾದರು. ಮಾತ್ರವಲ್ಲದೆ ಪವಿತ್ರಾತ್ಮ ದೇವರು ಕೊಟ್ಟ ಪ್ರೇರಣೆಯ ಪ್ರಕಾರ ಬೇರೆ ಬೇರೆ ಭಾಷೆಗಳಲ್ಲಿ ಮಾತನಾಡಲು ಪ್ರಾರಂಭಿಸಿದರು.
ತಸ್ಮಾತ್ ಸರ್ವ್ವೇ ಪವಿತ್ರೇಣಾತ್ಮನಾ ಪರಿಪೂರ್ಣಾಃ ಸನ್ತ ಆತ್ಮಾ ಯಥಾ ವಾಚಿತವಾನ್ ತದನುಸಾರೇಣಾನ್ಯದೇಶೀಯಾನಾಂ ಭಾಷಾ ಉಕ್ತವನ್ತಃ|
5 ಆಗ ಜಗತ್ತಿನ ಪ್ರತಿಯೊಂದು ದೇಶದಿಂದಲೂ ಬಂದ ದೇವಭಕ್ತಿಯುಳ್ಳ ಯೆಹೂದ್ಯರು ಯೆರೂಸಲೇಮಿನಲ್ಲಿದ್ದರು.
ತಸ್ಮಿನ್ ಸಮಯೇ ಪೃಥಿವೀಸ್ಥಸರ್ವ್ವದೇಶೇಭ್ಯೋ ಯಿಹೂದೀಯಮತಾವಲಮ್ಬಿನೋ ಭಕ್ತಲೋಕಾ ಯಿರೂಶಾಲಮಿ ಪ್ರಾವಸನ್;
6 ಈ ಶಬ್ದ ಕೇಳಿದಾಗ, ಜನರ ಗುಂಪೊಂದು ಕೂಡಿಬಂದಿತು. ಬಂದವರೆಲ್ಲರೂ ತಮ್ಮ ತಮ್ಮ ಭಾಷೆಗಳಲ್ಲಿಯೇ ಆ ಶಿಷ್ಯರು ಮಾತಾಡುತ್ತಿರುವುದನ್ನು ಕೇಳಿ, ಆಶ್ಚರ್ಯಗೊಂಡರು.
ತಸ್ಯಾಃ ಕಥಾಯಾಃ ಕಿಂವದನ್ತ್ಯಾ ಜಾತತ್ವಾತ್ ಸರ್ವ್ವೇ ಲೋಕಾ ಮಿಲಿತ್ವಾ ನಿಜನಿಜಭಾಷಯಾ ಶಿಷ್ಯಾಣಾಂ ಕಥಾಕಥನಂ ಶ್ರುತ್ವಾ ಸಮುದ್ವಿಗ್ನಾ ಅಭವನ್|
7 ಅವರು ಅತ್ಯಾಶ್ಚರ್ಯವುಳ್ಳವರಾಗಿ, “ಇಲ್ಲಿ ಮಾತನಾಡುತ್ತಿರುವವರೆಲ್ಲರೂ ಗಲಿಲಾಯದವರಲ್ಲವೇ?
ಸರ್ವ್ವಏವ ವಿಸ್ಮಯಾಪನ್ನಾ ಆಶ್ಚರ್ಯ್ಯಾನ್ವಿತಾಶ್ಚ ಸನ್ತಃ ಪರಸ್ಪರಂ ಉಕ್ತವನ್ತಃ ಪಶ್ಯತ ಯೇ ಕಥಾಂ ಕಥಯನ್ತಿ ತೇ ಸರ್ವ್ವೇ ಗಾಲೀಲೀಯಲೋಕಾಃ ಕಿಂ ನ ಭವನ್ತಿ?
8 ನಾವೆಲ್ಲರೂ ನಮ್ಮ ನಮ್ಮ ಮಾತೃಭಾಷೆಗಳಲ್ಲಿಯೇ ಇವರು ಮಾತಾಡುತ್ತಿರುವುದನ್ನು ಕೇಳುತ್ತಿರುವುದು ಹೇಗೆ?
ತರ್ಹಿ ವಯಂ ಪ್ರತ್ಯೇಕಶಃ ಸ್ವಸ್ವಜನ್ಮದೇಶೀಯಭಾಷಾಭಿಃ ಕಥಾ ಏತೇಷಾಂ ಶೃಣುಮಃ ಕಿಮಿದಂ?
9 ಪಾರ್ಥಿಯರು, ಮೇದ್ಯರು ಹಾಗೂ ಏಲಾಮ್ಯರು, ಮೆಸೊಪೊಟೇಮಿಯ, ಯೂದಾಯ, ಕಪ್ಪದೋಕ್ಯ, ಪೊಂತ, ಏಷ್ಯಾ,
ಪಾರ್ಥೀ-ಮಾದೀ-ಅರಾಮ್ನಹರಯಿಮ್ದೇಶನಿವಾಸಿಮನೋ ಯಿಹೂದಾ-ಕಪ್ಪದಕಿಯಾ-ಪನ್ತ-ಆಶಿಯಾ-
10 ಫ್ರುಗ್ಯ ಮತ್ತು ಪಂಫುಲ್ಯ, ಈಜಿಪ್ಟ್ ಹಾಗೂ ಕುರೇನೆದ ಹತ್ತಿರದ ಲಿಬ್ಯದ ಭಾಗಗಳ ನಿವಾಸಿಗಳು; ರೋಮ್ ಪಟ್ಟಣದಿಂದ ಬಂದ ಸಂದರ್ಶಕರು ಇಲ್ಲಿ ಬಂದಿದ್ದಾರೆ.
ಫ್ರುಗಿಯಾ-ಪಮ್ಫುಲಿಯಾ-ಮಿಸರನಿವಾಸಿನಃ ಕುರೀಣೀನಿಕಟವರ್ತ್ತಿಲೂಬೀಯಪ್ರದೇಶನಿವಾಸಿನೋ ರೋಮನಗರಾದ್ ಆಗತಾ ಯಿಹೂದೀಯಲೋಕಾ ಯಿಹೂದೀಯಮತಗ್ರಾಹಿಣಃ ಕ್ರೀತೀಯಾ ಅರಾಬೀಯಾದಯೋ ಲೋಕಾಶ್ಚ ಯೇ ವಯಮ್
11 ಇವರಲ್ಲದೆ, ಯೆಹೂದ್ಯರು ಮತ್ತು ಯೆಹೂದಿ ವಿಶ್ವಾಸಕ್ಕೆ ಬಂದಿದ್ದವರೂ ಇಲ್ಲಿದ್ದಾರೆ. ಅವರೊಂದಿಗೆ ಕ್ರೇತದವರು ಹಾಗೂ ಅರಬೀಯರು ನಮ್ಮ ಭಾಷೆಗಳಲ್ಲಿಯೇ ದೇವರ ಮಹತ್ಕಾರ್ಯಗಳನ್ನು ಹೇಳುತ್ತಿರುವದನ್ನು ಕೇಳುತ್ತಿದ್ದೇವಲ್ಲಾ!” ಎಂದು ಹೇಳಿದರು.
ಅಸ್ಮಾಕಂ ನಿಜನಿಜಭಾಷಾಭಿರೇತೇಷಾಮ್ ಈಶ್ವರೀಯಮಹಾಕರ್ಮ್ಮವ್ಯಾಖ್ಯಾನಂ ಶೃಣುಮಃ|
12 ಅವರು ಆಶ್ಚರ್ಯದಿಂದಲೂ ಗಲಿಬಿಲಿಗೊಂಡವರಾಗಿಯೂ, “ಇದರ ಅರ್ಥವೇನು?” ಎಂದು ತಮ್ಮತಮ್ಮೊಳಗೆ ಪ್ರಶ್ನೆಮಾಡಿಕೊಂಡರು.
ಇತ್ಥಂ ತೇ ಸರ್ವ್ವಏವ ವಿಸ್ಮಯಾಪನ್ನಾಃ ಸನ್ದಿಗ್ಧಚಿತ್ತಾಃ ಸನ್ತಃ ಪರಸ್ಪರಮೂಚುಃ, ಅಸ್ಯ ಕೋ ಭಾವಃ?
13 ಆದರೆ, ಅವರಲ್ಲಿ ಕೆಲವರು, ಅವರ ಬಗ್ಗೆ ಹಾಸ್ಯಮಾಡುತ್ತಾ, “ಇವರು ಕುಡಿದು ಮತ್ತರಾಗಿದ್ದಾರೆ,” ಎಂದರು.
ಅಪರೇ ಕೇಚಿತ್ ಪರಿಹಸ್ಯ ಕಥಿತವನ್ತ ಏತೇ ನವೀನದ್ರಾಕ್ಷಾರಸೇನ ಮತ್ತಾ ಅಭವನ್|
14 ಆಗ ಹನ್ನೊಂದು ಜನರೊಂದಿಗೆ ಪೇತ್ರನು ಎದ್ದು ನಿಂತುಕೊಂಡು, ಜನಸಮೂಹವನ್ನು ಉದ್ದೇಶಿಸಿ ಹೇಳಿದ್ದೇನೆಂದರೆ: “ಯೆಹೂದ್ಯರೇ, ಯೆರೂಸಲೇಮಿನ ಸರ್ವನಿವಾಸಿಗಳೇ, ಇದರ ಬಗ್ಗೆ ನಾನು ವಿವರಿಸುತ್ತೇನೆ, ಕೇಳಿರಿ. ನಾನು ಹೇಳುವುದನ್ನು ಜಾಗರೂಕತೆಯಿಂದ ಆಲಿಸಿರಿ.
ತದಾ ಪಿತರ ಏಕಾದಶಭಿ ರ್ಜನೈಃ ಸಾಕಂ ತಿಷ್ಠನ್ ತಾಲ್ಲೋಕಾನ್ ಉಚ್ಚೈಃಕಾರಮ್ ಅವದತ್, ಹೇ ಯಿಹೂದೀಯಾ ಹೇ ಯಿರೂಶಾಲಮ್ನಿವಾಸಿನಃ ಸರ್ವ್ವೇ, ಅವಧಾನಂ ಕೃತ್ವಾ ಮದೀಯವಾಕ್ಯಂ ಬುಧ್ಯಧ್ವಂ|
15 ನೀವು ಊಹಿಸಿದಂತೆ, ಈ ಜನರು ಕುಡಿದು ಮತ್ತರಾಗಿಲ್ಲ. ಈಗ ಸಮಯ ಬೆಳಿಗ್ಗೆ ಒಂಬತ್ತು ಗಂಟೆ!
ಇದಾನೀಮ್ ಏಕಯಾಮಾದ್ ಅಧಿಕಾ ವೇಲಾ ನಾಸ್ತಿ ತಸ್ಮಾದ್ ಯೂಯಂ ಯದ್ ಅನುಮಾಥ ಮಾನವಾ ಇಮೇ ಮದ್ಯಪಾನೇನ ಮತ್ತಾಸ್ತನ್ನ|
16 ಇದು ಪ್ರವಾದಿ ಯೋವೇಲನ ಪ್ರವಾದನೆಯ ನೆರವೇರುವಿಕೆಯಾಗಿದೆ:
ಕಿನ್ತು ಯೋಯೇಲ್ಭವಿಷ್ಯದ್ವಕ್ತ್ರೈತದ್ವಾಕ್ಯಮುಕ್ತಂ ಯಥಾ,
17 “ದೇವರು ಹೇಳುವುದೇನೆಂದರೆ: ‘ಅಂತ್ಯ ದಿನಗಳಲ್ಲಿ ನನ್ನ ಆತ್ಮವನ್ನು ಎಲ್ಲಾ ಮನುಷ್ಯರ ಮೇಲೆ ಸುರಿಸುವೆನು, ನಿಮ್ಮ ಗಂಡು ಹೆಣ್ಣುಮಕ್ಕಳು ಪ್ರವಾದಿಸುವರು, ನಿಮ್ಮ ಯುವಜನರಿಗೆ ದರ್ಶನಗಳು ಕಾಣುವವು, ನಿಮ್ಮ ಹಿರಿಯರಿಗೆ ಕನಸುಗಳು ಬೀಳುವುವು.
ಈಶ್ವರಃ ಕಥಯಾಮಾಸ ಯುಗಾನ್ತಸಮಯೇ ತ್ವಹಮ್| ವರ್ಷಿಷ್ಯಾಮಿ ಸ್ವಮಾತ್ಮಾನಂ ಸರ್ವ್ವಪ್ರಾಣ್ಯುಪರಿ ಧ್ರುವಮ್| ಭಾವಿವಾಕ್ಯಂ ವದಿಷ್ಯನ್ತಿ ಕನ್ಯಾಃ ಪುತ್ರಾಶ್ಚ ವಸ್ತುತಃ| ಪ್ರತ್ಯಾದೇಶಞ್ಚ ಪ್ರಾಪ್ಸ್ಯನ್ತಿ ಯುಷ್ಮಾಕಂ ಯುವಮಾನವಾಃ| ತಥಾ ಪ್ರಾಚೀನಲೋಕಾಸ್ತು ಸ್ವಪ್ನಾನ್ ದ್ರಕ್ಷ್ಯನ್ತಿ ನಿಶ್ಚಿತಂ|
18 ಆ ದಿನಗಳಲ್ಲಿ, ನನ್ನ ದಾಸ ದಾಸಿಯರ ಮೇಲೆ, ನನ್ನ ಆತ್ಮವನ್ನು ಸುರಿಸುವೆನು, ಅವರು ಪ್ರವಾದಿಸುವರು.
ವರ್ಷಿಷ್ಯಾಮಿ ತದಾತ್ಮಾನಂ ದಾಸದಾಸೀಜನೋಪಿರಿ| ತೇನೈವ ಭಾವಿವಾಕ್ಯಂ ತೇ ವದಿಷ್ಯನ್ತಿ ಹಿ ಸರ್ವ್ವಶಃ|
19 ನಾನು ಆಕಾಶದಲ್ಲಿ ಅದ್ಭುತಗಳನ್ನು, ಭೂಮಿಯಲ್ಲಿ ಸೂಚಕಕಾರ್ಯಗಳನ್ನು, ರಕ್ತ, ಬೆಂಕಿ, ಹಬೆಯನ್ನು ತೋರಿಸುವೆನು.
ಊರ್ದ್ಧ್ವಸ್ಥೇ ಗಗಣೇ ಚೈವ ನೀಚಸ್ಥೇ ಪೃಥಿವೀತಲೇ| ಶೋಣಿತಾನಿ ಬೃಹದ್ಭಾನೂನ್ ಘನಧೂಮಾದಿಕಾನಿ ಚ| ಚಿಹ್ನಾನಿ ದರ್ಶಯಿಷ್ಯಾಮಿ ಮಹಾಶ್ಚರ್ಯ್ಯಕ್ರಿಯಾಸ್ತಥಾ|
20 ಕರ್ತದೇವರ ಮಹಿಮೆಯುಳ್ಳ ಮಹಾದಿನವೂ ಬರುವುದಕ್ಕೆ ಮೊದಲು ಸೂರ್ಯನು ಕತ್ತಲಾಗುವನು, ಚಂದ್ರನು ರಕ್ತವಾಗುವನು.
ಮಹಾಭಯಾನಕಸ್ಯೈವ ತದ್ದಿನಸ್ಯ ಪರೇಶಿತುಃ| ಪುರಾಗಮಾದ್ ರವಿಃ ಕೃಷ್ಣೋ ರಕ್ತಶ್ಚನ್ದ್ರೋ ಭವಿಷ್ಯತಃ|
21 ಆಗ ಕರ್ತದೇವರ ಹೆಸರನ್ನು ಹೇಳಿಕೊಳ್ಳುವವರೆಲ್ಲರಿಗೆ ರಕ್ಷಣೆ ಆಗುವುದು.’
ಕಿನ್ತು ಯಃ ಪರಮೇಶಸ್ಯ ನಾಮ್ನಿ ಸಮ್ಪ್ರಾರ್ಥಯಿಷ್ಯತೇ| ಸಏವ ಮನುಜೋ ನೂನಂ ಪರಿತ್ರಾತೋ ಭವಿಷ್ಯತಿ||
22 “ಇಸ್ರಾಯೇಲ್ ಜನರೇ, ಈ ವಿಷಯವನ್ನು ಕೇಳಿರಿ: ದೇವರು ನಜರೇತಿನ ಯೇಸುಸ್ವಾಮಿಯವರ ಮುಖಾಂತರ ನಿಮ್ಮ ಮಧ್ಯದಲ್ಲಿ ಅದ್ಭುತಕಾರ್ಯಗಳನ್ನೂ ಆಶ್ಚರ್ಯಕಾರ್ಯಗಳನ್ನೂ ಸೂಚಕಕಾರ್ಯಗಳನ್ನೂ ನಡೆಸಿದ್ದರಿಂದ, ಯೇಸು ದೇವರ ಮೆಚ್ಚಿಕೆ ಪಡೆದವರಾಗಿದ್ದಾರೆಂಬುದನ್ನು, ನೀವೇ ತಿಳಿದಿರುವಿರಿ.
ಅತೋ ಹೇ ಇಸ್ರಾಯೇಲ್ವಂಶೀಯಲೋಕಾಃ ಸರ್ವ್ವೇ ಕಥಾಯಾಮೇತಸ್ಯಾಮ್ ಮನೋ ನಿಧದ್ಧ್ವಂ ನಾಸರತೀಯೋ ಯೀಶುರೀಶ್ವರಸ್ಯ ಮನೋನೀತಃ ಪುಮಾನ್ ಏತದ್ ಈಶ್ವರಸ್ತತ್ಕೃತೈರಾಶ್ಚರ್ಯ್ಯಾದ್ಭುತಕರ್ಮ್ಮಭಿ ರ್ಲಕ್ಷಣೈಶ್ಚ ಯುಷ್ಮಾಕಂ ಸಾಕ್ಷಾದೇವ ಪ್ರತಿಪಾದಿತವಾನ್ ಇತಿ ಯೂಯಂ ಜಾನೀಥ|
23 ದೇವರು ತಾವು ಮುಂಚಿತವಾಗಿ ನಿರ್ಣಯಿಸಿದ ಪ್ರಕಾರವೂ ತಾವು ಮೊದಲೇ ತಿಳಿದಿರುವಂತೆ ದೇವರು ಯೇಸುವನ್ನು ತಾವಾಗಿಯೇ ನಿಮಗೆ ಒಪ್ಪಿಸಿಕೊಟ್ಟರು. ನೀವಾದರೋ ದುಷ್ಟರ ಸಹಾಯದಿಂದ ಯೇಸುವನ್ನು ಶಿಲುಬೆಗೆ ಹಾಕಿ ಕೊಲೆಮಾಡಿದಿರಿ.
ತಸ್ಮಿನ್ ಯೀಶೌ ಈಶ್ವರಸ್ಯ ಪೂರ್ವ್ವನಿಶ್ಚಿತಮನ್ತ್ರಣಾನಿರೂಪಣಾನುಸಾರೇಣ ಮೃತ್ಯೌ ಸಮರ್ಪಿತೇ ಸತಿ ಯೂಯಂ ತಂ ಧೃತ್ವಾ ದುಷ್ಟಲೋಕಾನಾಂ ಹಸ್ತೈಃ ಕ್ರುಶೇ ವಿಧಿತ್ವಾಹತ|
24 ಆದರೆ ದೇವರು ಯೇಸುವನ್ನು ಮರಣ ವೇದನೆಯಿಂದ ಬಿಡಿಸಿ ಜೀವಂತವಾಗಿ ಎಬ್ಬಿಸಿದರು. ಏಕೆಂದರೆ ಯೇಸುವನ್ನು ಹಿಡಿದಿಟ್ಟುಕೊಂಡಿರಲು ಮರಣಕ್ಕೆ ಸಾಧ್ಯವಾಗಲಿಲ್ಲ.
ಕಿನ್ತ್ವೀಶ್ವರಸ್ತಂ ನಿಧನಸ್ಯ ಬನ್ಧನಾನ್ಮೋಚಯಿತ್ವಾ ಉದಸ್ಥಾಪಯತ್ ಯತಃ ಸ ಮೃತ್ಯುನಾ ಬದ್ಧಸ್ತಿಷ್ಠತೀತಿ ನ ಸಮ್ಭವತಿ|
25 ದಾವೀದನು ಯೇಸುಸ್ವಾಮಿಯವರ ಬಗ್ಗೆ ಹೀಗೆ ಹೇಳಿದ್ದಾನೆ: “‘ನಾನು ಕರ್ತದೇವರನ್ನು ಯಾವಾಗಲೂ ನನ್ನೆದುರಿನಲ್ಲಿಯೇ ಇಟ್ಟುಕೊಂಡಿದ್ದೇನೆ. ನಾನು ಕದಲದಂತೆ ಕರ್ತದೇವರು ನನ್ನ ಬಲಗಡೆಯಲ್ಲಿದ್ದಾರೆ.
ಏತಸ್ತಿನ್ ದಾಯೂದಪಿ ಕಥಿತವಾನ್ ಯಥಾ, ಸರ್ವ್ವದಾ ಮಮ ಸಾಕ್ಷಾತ್ತಂ ಸ್ಥಾಪಯ ಪರಮೇಶ್ವರಂ| ಸ್ಥಿತೇ ಮದ್ದಕ್ಷಿಣೇ ತಸ್ಮಿನ್ ಸ್ಖಲಿಷ್ಯಾಮಿ ತ್ವಹಂ ನಹಿ|
26 ಆದ್ದರಿಂದ ನನ್ನ ಹೃದಯ ಹರ್ಷಿಸುವುದು, ನನ್ನ ನಾಲಿಗೆ ಉಲ್ಲಾಸಗೊಳ್ಳುವುದು; ನನ್ನ ಶರೀರವು ಸಹ ನಿರೀಕ್ಷೆಯಿಂದ ನೆಲೆಯಾಗಿರುವುದು.
ಆನನ್ದಿಷ್ಯತಿ ತದ್ಧೇತೋ ರ್ಮಾಮಕೀನಂ ಮನಸ್ತು ವೈ| ಆಹ್ಲಾದಿಷ್ಯತಿ ಜಿಹ್ವಾಪಿ ಮದೀಯಾ ತು ತಥೈವ ಚ| ಪ್ರತ್ಯಾಶಯಾ ಶರೀರನ್ತು ಮದೀಯಂ ವೈಶಯಿಷ್ಯತೇ|
27 ಏಕೆಂದರೆ ನೀವು ನನ್ನ ಪ್ರಾಣವನ್ನು ಪಾತಾಳದಲ್ಲಿ ಬಿಟ್ಟುಬಿಡುವುದಿಲ್ಲ, ನಿಮ್ಮ ಪರಿಶುದ್ಧ ವ್ಯಕ್ತಿಯನ್ನು ಕೊಳೆಯುವಂತೆ ಬಿಡುವುದೇ ಇಲ್ಲ. (Hadēs g86)
ಪರಲೋಕೇ ಯತೋ ಹೇತೋಸ್ತ್ವಂ ಮಾಂ ನೈವ ಹಿ ತ್ಯಕ್ಷ್ಯಸಿ| ಸ್ವಕೀಯಂ ಪುಣ್ಯವನ್ತಂ ತ್ವಂ ಕ್ಷಯಿತುಂ ನೈವ ದಾಸ್ಯಸಿ| ಏವಂ ಜೀವನಮಾರ್ಗಂ ತ್ವಂ ಮಾಮೇವ ದರ್ಶಯಿಷ್ಯಸಿ| (Hadēs g86)
28 ನೀವು ನನಗೆ ಜೀವಮಾರ್ಗಗಳನ್ನು ತಿಳಿಯಪಡಿಸಿರುವಿರಿ; ನಿಮ್ಮ ಸನ್ನಿಧಿಯಲ್ಲಿ ನನ್ನನ್ನು ಆನಂದಭರಿತನಾಗ ಮಾಡುವಿರಿ.’
ಸ್ವಸಮ್ಮುಖೇ ಯ ಆನನ್ದೋ ದಕ್ಷಿಣೇ ಸ್ವಸ್ಯ ಯತ್ ಸುಖಂ| ಅನನ್ತಂ ತೇನ ಮಾಂ ಪೂರ್ಣಂ ಕರಿಷ್ಯಸಿ ನ ಸಂಶಯಃ||
29 “ಪ್ರಿಯರೇ, ಮೂಲಪಿತೃ ದಾವೀದನು ಮರಣಹೊಂದಿದನು; ಸಮಾಧಿಮಾಡಲಾಯಿತು. ಇಂದಿಗೂ ಅವನ ಸಮಾಧಿ ನಮ್ಮಲ್ಲಿದೆ ಎಂಬುದನ್ನು ನಾನು ನಿಮಗೆ ಧೈರ್ಯದಿಂದ ಹೇಳಬಲ್ಲೆ.
ಹೇ ಭ್ರಾತರೋಽಸ್ಮಾಕಂ ತಸ್ಯ ಪೂರ್ವ್ವಪುರುಷಸ್ಯ ದಾಯೂದಃ ಕಥಾಂ ಸ್ಪಷ್ಟಂ ಕಥಯಿತುಂ ಮಾಮ್ ಅನುಮನ್ಯಧ್ವಂ, ಸ ಪ್ರಾಣಾನ್ ತ್ಯಕ್ತ್ವಾ ಶ್ಮಶಾನೇ ಸ್ಥಾಪಿತೋಭವದ್ ಅದ್ಯಾಪಿ ತತ್ ಶ್ಮಶಾನಮ್ ಅಸ್ಮಾಕಂ ಸನ್ನಿಧೌ ವಿದ್ಯತೇ|
30 ಆದರೆ ಪ್ರವಾದಿಯಾಗಿದ್ದ ದಾವೀದನ ಸಂತತಿಯವರಲ್ಲಿ ಒಬ್ಬರನ್ನು ಅವನ ಸಿಂಹಾಸನದ ಮೇಲೆ ಕುಳ್ಳಿರಿಸುವೆನು, ಎಂದು ಆಣೆಯಿಟ್ಟು ದೇವರು ವಾಗ್ದಾನ ಮಾಡಿದ್ದನ್ನು ದಾವೀದನು ತಿಳಿದಿದ್ದನು.
ಫಲತೋ ಲೌಕಿಕಭಾವೇನ ದಾಯೂದೋ ವಂಶೇ ಖ್ರೀಷ್ಟಂ ಜನ್ಮ ಗ್ರಾಹಯಿತ್ವಾ ತಸ್ಯೈವ ಸಿಂಹಾಸನೇ ಸಮುವೇಷ್ಟುಂ ತಮುತ್ಥಾಪಯಿಷ್ಯತಿ ಪರಮೇಶ್ವರಃ ಶಪಥಂ ಕುತ್ವಾ ದಾಯೂದಃ ಸಮೀಪ ಇಮಮ್ ಅಙ್ಗೀಕಾರಂ ಕೃತವಾನ್,
31 ದಾವೀದನು ಕ್ರಿಸ್ತ ಯೇಸುವಿನ ಪುನರುತ್ಥಾನದ ಬಗ್ಗೆ ಮುಂಚಿತವಾಗಿಯೇ ನೋಡಿ, ಹೀಗೆ ಮಾತನಾಡಿದನು: ‘ಅವರನ್ನು ಪಾತಾಳದಲ್ಲಿಯೇ ಬಿಡಲಿಲ್ಲ; ಅವರ ದೇಹವು ಕೊಳೆಯುವ ಅವಸ್ಥೆಯನ್ನು ಕಾಣಲಿಲ್ಲ.’ (Hadēs g86)
ಇತಿ ಜ್ಞಾತ್ವಾ ದಾಯೂದ್ ಭವಿಷ್ಯದ್ವಾದೀ ಸನ್ ಭವಿಷ್ಯತ್ಕಾಲೀಯಜ್ಞಾನೇನ ಖ್ರೀಷ್ಟೋತ್ಥಾನೇ ಕಥಾಮಿಮಾಂ ಕಥಯಾಮಾಸ ಯಥಾ ತಸ್ಯಾತ್ಮಾ ಪರಲೋಕೇ ನ ತ್ಯಕ್ಷ್ಯತೇ ತಸ್ಯ ಶರೀರಞ್ಚ ನ ಕ್ಷೇಷ್ಯತಿ; (Hadēs g86)
32 ದೇವರು ಈ ಯೇಸುವನ್ನೇ ಮರಣದಿಂದ ಎಬ್ಬಿಸಿದರು. ಇದಕ್ಕೆ ನಾವೆಲ್ಲರೂ ಸಾಕ್ಷಿಗಳು.
ಅತಃ ಪರಮೇಶ್ವರ ಏನಂ ಯೀಶುಂ ಶ್ಮಶಾನಾದ್ ಉದಸ್ಥಾಪಯತ್ ತತ್ರ ವಯಂ ಸರ್ವ್ವೇ ಸಾಕ್ಷಿಣ ಆಸ್ಮಹೇ|
33 ಆದ್ದರಿಂದ ಯೇಸು ದೇವರ ಬಲಗಡೆಗೆ ಏರಿಹೋಗಿ ವಾಗ್ದಾನಮಾಡಿದ ಪವಿತ್ರಾತ್ಮ ದೇವರನ್ನು ತಂದೆಯಿಂದ ಪಡೆದುಕೊಂಡರು. ಈಗ ನೀವು ಕಂಡು ಕೇಳಿರುವ ಆ ಪವಿತ್ರಾತ್ಮ ವರವನ್ನು ಯೇಸುವೇ ಇವರ ಮೇಲೆ ಸುರಿಸಿದ್ದಾರೆ.
ಸ ಈಶ್ವರಸ್ಯ ದಕ್ಷಿಣಕರೇಣೋನ್ನತಿಂ ಪ್ರಾಪ್ಯ ಪವಿತ್ರ ಆತ್ಮಿನ ಪಿತಾ ಯಮಙ್ಗೀಕಾರಂ ಕೃತವಾನ್ ತಸ್ಯ ಫಲಂ ಪ್ರಾಪ್ಯ ಯತ್ ಪಶ್ಯಥ ಶೃಣುಥ ಚ ತದವರ್ಷತ್|
34 ದಾವೀದನು ಪರಲೋಕಕ್ಕೆ ಏರಿಹೋಗಲಿಲ್ಲವಾದರೂ ಹೀಗೆ ಹೇಳಿದ್ದಾನೆ: “‘ಕರ್ತದೇವರು ನನ್ನ ಕರ್ತದೇವರಿಗೆ: “ನಾನು ನಿನ್ನ ವಿರೋಧಿಗಳನ್ನು
ಯತೋ ದಾಯೂದ್ ಸ್ವರ್ಗಂ ನಾರುರೋಹ ಕಿನ್ತು ಸ್ವಯಮ್ ಇಮಾಂ ಕಥಾಮ್ ಅಕಥಯದ್ ಯಥಾ, ಮಮ ಪ್ರಭುಮಿದಂ ವಾಕ್ಯಮವದತ್ ಪರಮೇಶ್ವರಃ|
35 ನಿನ್ನ ಪಾದಗಳ ಪೀಠವಾಗಿ ಮಾಡುವವರೆಗೂ ನನ್ನ ಬಲಪಾರ್ಶ್ವದಲ್ಲಿ ನೀನು ಕುಳಿತುಕೊಂಡಿರು.”’
ತವ ಶತ್ರೂನಹಂ ಯಾವತ್ ಪಾದಪೀಠಂ ಕರೋಮಿ ನ| ತಾವತ್ ಕಾಲಂ ಮದೀಯೇ ತ್ವಂ ದಕ್ಷವಾರ್ಶ್ವ ಉಪಾವಿಶ|
36 “ಆದ್ದರಿಂದ ನೀವು ಶಿಲುಬೆಗೇರಿಸಿದ ಈ ಯೇಸುವನ್ನೇ ದೇವರು ಕರ್ತ ಹಾಗೂ ಕ್ರಿಸ್ತ ಆಗಿಯೂ ಮಾಡಿದ್ದಾರೆ ಎಂಬುದು ಎಲ್ಲಾ ಇಸ್ರಾಯೇಲ್ ಮನೆತನದವರಿಗೆ ಸ್ಪಷ್ಟವಾಗಿ ತಿಳಿದಿರಲಿ,” ಎಂದನು.
ಅತೋ ಯಂ ಯೀಶುಂ ಯೂಯಂ ಕ್ರುಶೇಽಹತ ಪರಮೇಶ್ವರಸ್ತಂ ಪ್ರಭುತ್ವಾಭಿಷಿಕ್ತತ್ವಪದೇ ನ್ಯಯುಂಕ್ತೇತಿ ಇಸ್ರಾಯೇಲೀಯಾ ಲೋಕಾ ನಿಶ್ಚಿತಂ ಜಾನನ್ತು|
37 ಜನರು ಇದನ್ನು ಕೇಳಿದಾಗ ಅವರಿಗೆ ಹೃದಯದಲ್ಲಿ ಅಲಗು ನೆಟ್ಟಂತಾಗಿ, “ಸಹೋದರರೇ, ನಾವೇನು ಮಾಡಬೇಕು?” ಎಂದು ಪೇತ್ರನನ್ನೂ ಉಳಿದ ಅಪೊಸ್ತಲರನ್ನೂ ಕೇಳಿದರು.
ಏತಾದೃಶೀಂ ಕಥಾಂ ಶ್ರುತ್ವಾ ತೇಷಾಂ ಹೃದಯಾನಾಂ ವಿದೀರ್ಣತ್ವಾತ್ ತೇ ಪಿತರಾಯ ತದನ್ಯಪ್ರೇರಿತೇಭ್ಯಶ್ಚ ಕಥಿತವನ್ತಃ, ಹೇ ಭ್ರಾತೃಗಣ ವಯಂ ಕಿಂ ಕರಿಷ್ಯಾಮಃ?
38 ಅದಕ್ಕೆ ಪೇತ್ರನು, “ನಿಮ್ಮಲ್ಲಿ ಪ್ರತಿಯೊಬ್ಬನೂ ಪಶ್ಚಾತ್ತಾಪಪಟ್ಟು, ನಿಮ್ಮ ಪಾಪಗಳ ಕ್ಷಮೆಗಾಗಿ ಕ್ರಿಸ್ತ ಯೇಸುವಿನ ಹೆಸರಿನಲ್ಲಿ ದೀಕ್ಷಾಸ್ನಾನ ತೆಗೆದುಕೊಳ್ಳಿರಿ. ಆಗ ನೀವು ಪವಿತ್ರಾತ್ಮ ವರವನ್ನು ಪಡೆದುಕೊಳ್ಳುವಿರಿ.
ತತಃ ಪಿತರಃ ಪ್ರತ್ಯವದದ್ ಯೂಯಂ ಸರ್ವ್ವೇ ಸ್ವಂ ಸ್ವಂ ಮನಃ ಪರಿವರ್ತ್ತಯಧ್ವಂ ತಥಾ ಪಾಪಮೋಚನಾರ್ಥಂ ಯೀಶುಖ್ರೀಷ್ಟಸ್ಯ ನಾಮ್ನಾ ಮಜ್ಜಿತಾಶ್ಚ ಭವತ, ತಸ್ಮಾದ್ ದಾನರೂಪಂ ಪರಿತ್ರಮ್ ಆತ್ಮಾನಂ ಲಪ್ಸ್ಯಥ|
39 ಈ ವಾಗ್ದಾನವು ನಿಮಗೂ ನಿಮ್ಮ ಮಕ್ಕಳಿಗೂ ದೂರ ಇರುವ ಎಲ್ಲರಿಗೂ ನಮ್ಮ ಕರ್ತದೇವರು ತಮ್ಮ ಕಡೆಗೆ ಕರೆಯುವ ಎಲ್ಲರಿಗಾಗಿಯೂ ಇರುವುದು,” ಎಂದನು.
ಯತೋ ಯುಷ್ಮಾಕಂ ಯುಷ್ಮತ್ಸನ್ತಾನಾನಾಞ್ಚ ದೂರಸ್ಥಸರ್ವ್ವಲೋಕಾನಾಞ್ಚ ನಿಮಿತ್ತಮ್ ಅರ್ಥಾದ್ ಅಸ್ಮಾಕಂ ಪ್ರಭುಃ ಪರಮೇಶ್ವರೋ ಯಾವತೋ ಲಾಕಾನ್ ಆಹ್ವಾಸ್ಯತಿ ತೇಷಾಂ ಸರ್ವ್ವೇಷಾಂ ನಿಮಿತ್ತಮ್ ಅಯಮಙ್ಗೀಕಾರ ಆಸ್ತೇ|
40 ಪೇತ್ರನು ಇನ್ನೂ ಅನೇಕ ಮಾತುಗಳಿಂದ ಅವರನ್ನು ಎಚ್ಚರಿಸಿ, ಸಾಕ್ಷಿ ನುಡಿದು, “ಈ ಕೆಟ್ಟ ಸಂತತಿಯಿಂದ ನಿಮ್ಮನ್ನು ರಕ್ಷಿಸಿಕೊಳ್ಳಿರಿ,” ಎಂದು ಹೇಳಿದನು.
ಏತದನ್ಯಾಭಿ ರ್ಬಹುಕಥಾಭಿಃ ಪ್ರಮಾಣಂ ದತ್ವಾಕಥಯತ್ ಏತೇಭ್ಯೋ ವಿಪಥಗಾಮಿಭ್ಯೋ ವರ್ತ್ತಮಾನಲೋಕೇಭ್ಯಃ ಸ್ವಾನ್ ರಕ್ಷತ|
41 ಪೇತ್ರನ ಸಂದೇಶವನ್ನು ಸ್ವೀಕರಿಸಿದವರು ದೀಕ್ಷಾಸ್ನಾನ ಪಡೆದರು. ಆ ದಿನ ಸುಮಾರು ಮೂರು ಸಾವಿರ ಜನರು ಅವರೊಂದಿಗೆ ಸೇರಿದರು.
ತತಃ ಪರಂ ಯೇ ಸಾನನ್ದಾಸ್ತಾಂ ಕಥಾಮ್ ಅಗೃಹ್ಲನ್ ತೇ ಮಜ್ಜಿತಾ ಅಭವನ್| ತಸ್ಮಿನ್ ದಿವಸೇ ಪ್ರಾಯೇಣ ತ್ರೀಣಿ ಸಹಸ್ರಾಣಿ ಲೋಕಾಸ್ತೇಷಾಂ ಸಪಕ್ಷಾಃ ಸನ್ತಃ
42 ಅವರೆಲ್ಲರು ಅಪೊಸ್ತಲರ ಬೋಧನೆಯಲ್ಲಿ, ಅನ್ಯೋನ್ಯತೆಯಲ್ಲಿ, ರೊಟ್ಟಿ ಮುರಿಯುವುದರಲ್ಲಿ, ಪ್ರಾರ್ಥನೆ ಮಾಡುವುದರಲ್ಲಿ ತಮ್ಮನ್ನು ಸಮರ್ಪಿಸಿಕೊಂಡು,
ಪ್ರೇರಿತಾನಾಮ್ ಉಪದೇಶೇ ಸಙ್ಗತೌ ಪೂಪಭಞ್ಜನೇ ಪ್ರಾರ್ಥನಾಸು ಚ ಮನಃಸಂಯೋಗಂ ಕೃತ್ವಾತಿಷ್ಠನ್|
43 ಪ್ರತಿಯೊಬ್ಬರೂ ಭಯಭಕ್ತಿಉಳ್ಳವರಾಗಿದ್ದರು. ಅಪೊಸ್ತಲರು ಅನೇಕ ಅದ್ಭುತಕಾರ್ಯಗಳನ್ನೂ ಸೂಚಕಕಾರ್ಯಗಳನ್ನೂ ಮಾಡುತ್ತಿದ್ದರು.
ಪ್ರೇರಿತೈ ರ್ನಾನಾಪ್ರಕಾರಲಕ್ಷಣೇಷು ಮಹಾಶ್ಚರ್ಯ್ಯಕರ್ಮಮಸು ಚ ದರ್ಶಿತೇಷು ಸರ್ವ್ವಲೋಕಾನಾಂ ಭಯಮುಪಸ್ಥಿತಂ|
44 ವಿಶ್ವಾಸಿಗಳೆಲ್ಲರೂ ಒಟ್ಟಾಗಿದ್ದು, ತಮ್ಮಲ್ಲಿರುವ ಪ್ರತಿಯೊಂದನ್ನೂ ಹಂಚಿಕೊಳ್ಳುತ್ತಿದ್ದರು.
ವಿಶ್ವಾಸಕಾರಿಣಃ ಸರ್ವ್ವ ಚ ಸಹ ತಿಷ್ಠನತಃ| ಸ್ವೇಷಾಂ ಸರ್ವ್ವಾಃ ಸಮ್ಪತ್ತೀಃ ಸಾಧಾರಣ್ಯೇನ ಸ್ಥಾಪಯಿತ್ವಾಭುಞ್ಜತ|
45 ಅವರು ಆಸ್ತಿಪಾಸ್ತಿಯನ್ನು ಮಾರಿ ಅವರವರ ಅವಶ್ಯಕತೆಗೆ ಅನುಸಾರವಾಗಿ ಎಲ್ಲರಿಗೂ ಹಂಚುತ್ತಿದ್ದರು.
ಫಲತೋ ಗೃಹಾಣಿ ದ್ರವ್ಯಾಣಿ ಚ ಸರ್ವ್ವಾಣಿ ವಿಕ್ರೀಯ ಸರ್ವ್ವೇಷಾಂ ಸ್ವಸ್ವಪ್ರಯೋಜನಾನುಸಾರೇಣ ವಿಭಜ್ಯ ಸರ್ವ್ವೇಭ್ಯೋಽದದನ್|
46 ಪ್ರತಿದಿನವೂ ದೇವಾಲಯದಲ್ಲಿ ಒಮ್ಮನಸ್ಸಿನಿಂದ ಸಭೆ ಕೂಡಿಬರುವುದನ್ನು ಕ್ರಮವಾಗಿ ಮುಂದುವರೆಸಿದರು. ತಮ್ಮ ಮನೆಗಳಲ್ಲಿ ರೊಟ್ಟಿ ಮುರಿಯುತ್ತಾ ಆನಂದದಿಂದಲೂ ಸರಳ ಹೃದಯದಿಂದಲೂ ಊಟಮಾಡುತ್ತಿದ್ದರು.
ಸರ್ವ್ವ ಏಕಚಿತ್ತೀಭೂಯ ದಿನೇ ದಿನೇ ಮನ್ದಿರೇ ಸನ್ತಿಷ್ಠಮಾನಾ ಗೃಹೇ ಗೃಹೇ ಚ ಪೂಪಾನಭಞ್ಜನ್ತ ಈಶ್ವರಸ್ಯ ಧನ್ಯವಾದಂ ಕುರ್ವ್ವನ್ತೋ ಲೋಕೈಃ ಸಮಾದೃತಾಃ ಪರಮಾನನ್ದೇನ ಸರಲಾನ್ತಃಕರಣೇನ ಭೋಜನಂ ಪಾನಞ್ಚಕುರ್ವ್ವನ್|
47 ಅವರು ದೇವರಿಗೆ ಸ್ತೋತ್ರ ಮಾಡುತ್ತಾ, ಜನರೆಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು. ರಕ್ಷಣೆ ಹೊಂದಿದವರನ್ನು ಕರ್ತ ಯೇಸುವು ಪ್ರತಿದಿನವೂ ಅವರೊಂದಿಗೆ ಸೇರಿಸುತ್ತಿದ್ದರು.
ಪರಮೇಶ್ವರೋ ದಿನೇ ದಿನೇ ಪರಿತ್ರಾಣಭಾಜನೈ ರ್ಮಣ್ಡಲೀಮ್ ಅವರ್ದ್ಧಯತ್|

< ಅಪೊಸ್ತಲರ ಕೃತ್ಯಗಳ 2 >