< ಅಪೊಸ್ತಲರ ಕೃತ್ಯಗಳ 17 >
1 ಅವರು ಅಂಫಿಪೊಲಿ ಮತ್ತು ಅಪೊಲೋನ್ಯ ಮಾರ್ಗವಾಗಿ ಥೆಸಲೋನಿಕಕ್ಕೆ ಬಂದರು. ಅಲ್ಲಿ ಯೆಹೂದ್ಯರ ಒಂದು ಸಭಾಮಂದಿರವಿತ್ತು.
पौलुस ते सीलास तैसेरां बाद अम्फिपुलिस ते अपुल्लोनिया नगरन मांमेइं गेइतां थिस्सलुनीके नगरे मां आए, तैड़ी यहूदी केरू अक प्रार्थना घर थियूं।
2 ಪೌಲನು ತನ್ನ ವಾಡಿಕೆಯಂತೆ ಮೂರು ಸಬ್ಬತ್ ದಿನಗಳಂದು ಅವರ ಬಳಿ ಹೋಗಿ, ಅವರಲ್ಲಿ ಪವಿತ್ರ ವೇದಗಳ ಬಗ್ಗೆ ವಾದಿಸಿ,
पौलुस अपने रीतरे मुताबिक प्रार्थना घरे मां ट्लाई आरामेरे दिहाड़न तगर पवित्रशास्त्रेरी किताबी मरां तैन सेइं बेंस केरतो राव।
3 ಕ್ರಿಸ್ತ ಯೇಸು ಯಾತನೆಯನ್ನು ಅನುಭವಿಸಿ, ಸತ್ತವರೊಳಗಿಂದ ಜೀವಂತವಾಗಿ ಎದ್ದು ಬರಬೇಕಾಗಿತ್ತೆಂಬುದನ್ನು ವಿವರಿಸಿ, “ನಾನು ನಿಮಗೆ ಪ್ರಕಟಿಸುತ್ತಿರುವ ಯೇಸುವೇ ಆ ಕ್ರಿಸ್ತ,” ಎಂದು ಅವನು ಅವರ ಮುಂದೆ ಬಹಿರಂಗಪಡಿಸಿದನು.
पौलुस तैन केरो मतलब खोल्ली-खोल्ली समझ़ातो थियो, “कि यीशु मसीहेरो दुःख झ़ैल्लनो ते मुड़दन मरां ज़ींतू भोनू ज़रूरी थियूं, कि ज़ैस यीशुएरे बारे मां अवं प्रचार केरतम, तैए मसीह आए।”
4 ಅವರಲ್ಲಿ ಕೆಲವರು ದೇವಭಕ್ತಿಯುಳ್ಳ ಗ್ರೀಕರೂ ಪ್ರಮುಖರಾಗಿದ್ದ ಮಹಿಳೆಯರೂ ದೊಡ್ಡ ಸಂಖ್ಯೆಯಲ್ಲಿ ಒಡಂಬಟ್ಟವರಾಗಿ ಪೌಲ, ಸೀಲರನ್ನು ಸೇರಿಕೊಂಡರು.
तैन मरां किछ यहूदी ते गैर कौमां केरे लोक ज़ैनेईं विश्वास कियोरो थियो, ते होरि भी बेड़ि भक्त कुआन्शां ज़ैनेईं विश्वास कियोरो थियो पौलुसे ते सीलासे सेइं मिली जेई।
5 ಆದರೆ ಯೆಹೂದ್ಯರು ಮತ್ಸರದಿಂದ ಕೂಡಿ, ಬೀದಿಗಳಲ್ಲಿ ತಿರುಗಾಡುವ ಕೆಲವು ದುಷ್ಟವ್ಯಕ್ತಿಗಳನ್ನು ಕೂಡಿಸಿ ಪಟ್ಟಣದಲ್ಲಿ ಗಲಭೆ ಎಬ್ಬಿಸಿದರು. ಜನಸಮೂಹದ ಮುಂದೆ ಪೌಲ, ಸೀಲರನ್ನು ಎಳೆದು ತರುವಂತೆ ಅವರನ್ನು ಹುಡುಕುತ್ತಾ ಯಾಸೋನ ಎಂಬುವನ ಮನೆಯನ್ನು ಮುತ್ತಿದರು.
पन यहूदेईं जलनी सेइं काई नगरन मां बुरे लोक अकोट्ठे केरतां हंगामो केरनो शुरू कियो। तैनेईं यासोनेरे घरे पुड़ हमलो कियो ताके पौलुसे ते सीलासे लोकां केरे सामने आनन।
6 ಆದರೆ ಅಲ್ಲಿ ಅವರಿಲ್ಲದಿರುವುದನ್ನು ಕಂಡು ಅವರು ಯಾಸೋನನನ್ನೂ ಕೆಲವು ಸಹೋದರರನ್ನೂ ಎಳೆದುಕೊಂಡು ಬಂದು ಪಟ್ಟಣದ ಅಧಿಕಾರಿಗಳ ಮುಂದೆ ನಿಲ್ಲಿಸಿ, “ಲೋಕವನ್ನು ತಲೆಕೆಳಗೆ ಮಾಡಿರುವ ಈ ಮನುಷ್ಯರು ಇಲ್ಲಿಗೂ ಬಂದಿದ್ದಾರೆ.
पन ज़ैखन तैना न मैल्ले त यासोन त काई होरे विश्वासी ढ्ला घसीटतां नगरेरे हाकिमन कां आने, ते ज़ोरे-ज़ोरे सेइं ज़ोने लगे, “एन मैनेईं हर ठैरी परेशानी फैलावरी, ते अज़ इड़ी भी पुज़ोरेन।
7 ಯಾಸೋನನು ಅವರನ್ನು ತನ್ನ ಮನೆಯಲ್ಲಿ ಸೇರಿಸಿಕೊಂಡಿದ್ದಾನೆ. ಅವರು ಯೇಸು ಎಂಬ ಬೇರೊಬ್ಬ ಅರಸನಿದ್ದಾನೆ ಎಂದು ಹೇಳುತ್ತಾ ಕೈಸರನ ವಿರುದ್ಧವಾಗಿ ನಡೆಯುತ್ತಾರೆ,” ಎಂದು ಗಟ್ಟಿಯಾಗಿ ಕೂಗಿದರು.
ते एना यासोने अपने घरे मां रखोरेन, ते एना लोक महाराज़ेरे हुक्मेरी खलाफत केरतन, ते ज़ोतन कि राज़ो त यीशु आए।”
8 ಇದನ್ನು ಕೇಳಿದ ಜನರೂ ಪಟ್ಟಣದ ಅಧಿಕಾರಿಗಳೂ ಕಳವಳಗೊಂಡರು.
ए गल शुन्तां नगरेरे हाकिम ते सारे लोक परेशान भोए।
9 ಆಮೇಲೆ ಯಾಸೋನನಿಂದಲೂ ಮತ್ತಿತರರಿಂದಲೂ ಜಾಮೀನು ಪಡೆದು ಅವರನ್ನು ಬಿಡುಗಡೆ ಮಾಡಿದರು.
ते तैनेईं यासोन ते बाकी लोक ज़मानती पुड़ हथरां छ़डे।
10 ರಾತ್ರಿಯಾದ ಕೂಡಲೇ, ಸಹೋದರರು ಪೌಲ, ಸೀಲರನ್ನು ಬೆರೋಯಕ್ಕೆ ಕಳುಹಿಸಿದರು. ಅಲ್ಲಿಗೆ ಅವರು ತಲುಪಿದಾಗ ಅಲ್ಲಿಯೂ ಯೆಹೂದ್ಯರ ಸಭಾಮಂದಿರಕ್ಕೆ ಹೋದರು.
ड्लोझ़ां विश्वासी ढ्लाएईं पौलुस ते सीलास तैट्ठां बिरीया नगरे जो भेज़े, ज़ैखन तैना तैड़ी पुज़े त तैना यहूदी केरे प्रार्थना घरे मां जे।
11 ಬೆರೋಯದಲ್ಲಿದ್ದವರು ಥೆಸಲೋನಿಕದವರಿಗಿಂತ ಹೆಚ್ಚು ಸದ್ಗುಣವುಳ್ಳವರು; ಅವರು ವಾಕ್ಯವನ್ನು ಅತ್ಯಾಸಕ್ತಿಯಿಂದ ಸ್ವೀಕರಿಸಿ, ಇವರು ಹೇಳಿದ್ದು ಸರಿಯಾದದ್ದೋ ಏನೋ ಎಂದು ಅವರು ಪ್ರತಿದಿನವೂ ಪವಿತ್ರ ವೇದಗಳನ್ನು ಪರೀಕ್ಷಿಸುತ್ತಿದ್ದರು.
बिरीया नगरेरे लोक थिस्सलुनीके नगरेरे यहूदन करां भले थिये, तांए तैनेईं खुशखबरी बेड़ि खुशी सेइं कबूल की, तैना रोज़ एना गल्लां केरे बारे मां गलबात केरते थिये, कि पौलुसेरी गल्लां सेच़्च़ी आन कि नईं।
12 ಆದ್ದರಿಂದ ಅವರಲ್ಲಿ ಅನೇಕರು ವಿಶ್ವಾಸ ಹೊಂದಿದರು. ಅನೇಕ ಗ್ರೀಕ್ ಪುರುಷರೂ ಪ್ರಮುಖ ಸ್ತ್ರೀಯರೂ ವಿಶ್ವಾಸವನ್ನಿಟ್ಟರು.
एल्हेरेलेइ काई यहूदेईं ते काई होरि यूनानी इज़्ज़तदार कुआन्शेईं भी यीशु पुड़ विश्वास कियो।
13 ಆದರೆ ಪೌಲನು ದೇವರ ವಾಕ್ಯವನ್ನು ಬೆರೋಯದಲ್ಲಿ ಬೋಧಿಸುತ್ತಿದ್ದಾನೆಂಬುದು ಥೆಸಲೋನಿಕದಲ್ಲಿದ್ದ ಯೆಹೂದ್ಯರಿಗೆ ತಿಳಿದುಬಂದಾಗ ಅವರು ಅಲ್ಲಿಗೂ ಬಂದು, ಜನಸಮೂಹವನ್ನು ಪ್ರಚೋದಿಸಿ ಗಲಭೆ ಎಬ್ಬಿಸಿದರು.
ज़ैखन थिस्सलुनीके नगरेरे यहूदन पतो लगो कि पौलुस बिरीया नगरे मां परमेशरेरू वचन शुनाते, ते तैना लोकन भटकाने ते हलचल मच़ाने लग्गे।
14 ಆದ್ದರಿಂದ ಸಹೋದರರು ಕೂಡಲೇ ಪೌಲನನ್ನು ಸಮುದ್ರ ತೀರಕ್ಕೆ ಕಳುಹಿಸಿಬಿಟ್ಟರು. ಆದರೆ ಸೀಲ ಮತ್ತು ತಿಮೊಥೆ ಬೆರೋಯದಲ್ಲಿಯೇ ಉಳಿದುಕೊಂಡರು.
तैखन विश्वासी ढ्लाएईं पौलुस समुन्दरेरे बन्ने भेज़ो, पन सीलास त तीमुथियुस तैड़ी राए।
15 ಪೌಲನನ್ನು ಬಿಟ್ಟು ಬರಲು ಹೋದವರು ಅವನ ಜೊತೆ ಅಥೇನೆ ಪಟ್ಟಣದವರೆಗೆ ಹೋದರು. ಸೀಲ ಮತ್ತು ತಿಮೊಥೆಯರು ಸಾಧ್ಯವಾದಷ್ಟು ಬೇಗನೇ ತನ್ನ ಬಳಿ ಬರಬೇಕೆಂಬ ಅಪ್ಪಣೆಯನ್ನು ಪೌಲನಿಂದ ಪಡೆದು, ಅವರು ಬೆರೋಯಕ್ಕೆ ಹಿಂತಿರುಗಿ ಹೋದರು.
ते पौलुसेरी मद्दत केरनेबाले एथेंस नगरे तगर जे, ते सीलास ते तीमुथियुसेरे लेइ बिस्तार नेइतां च़ले जे, कि मीं कां जल्दी एज्जे।
16 ಪೌಲನು ಅವರಿಗಾಗಿ ಕಾಯುತ್ತಾ ಅಥೇನೆಯಲ್ಲಿ ಇದ್ದಾಗ, ಆ ಪಟ್ಟಣವು ವಿಗ್ರಹಗಳಿಂದ ತುಂಬಿಕೊಂಡಿದ್ದನ್ನು ಕಂಡು, ಅವನ ಆತ್ಮವು ಅವನೊಳಗೆ ಕುದಿಯಿತು.
ज़ैखन पौलुस एथेंस नगरे मां तैन बलगने लग्गोरो थियो, त एन तकते कि सारू नगर मूरती सेइं भेरतांए त तैसेरो दिल बड़ो उदास भोव।
17 ಆದ್ದರಿಂದ ಅವನು ಸಭಾಮಂದಿರದಲ್ಲಿ ಯೆಹೂದ್ಯರೊಂದಿಗೂ ದೇವಭಕ್ತಿಯುಳ್ಳ ಗ್ರೀಕರೊಂದಿಗೂ ಅಲ್ಲದೆ ಬಹಿರಂಗ ಸಂತೆಪೇಟೆ ಸ್ಥಳದಲ್ಲಿ ದಿನದಿನವೂ ಬರುತ್ತಿದ್ದ ಜನರೊಂದಿಗೂ ಚರ್ಚೆ ಮಾಡುತ್ತಿದ್ದನು.
एल्हेरेलेइ तै प्रार्थना घरे मां यहूदन ते तैन सेइं ज़ैना परमेशरेरो डर मन्नेबाले (भक्त) गैर कौमन मरां यहूदन मां ओरे थिये चौके मां गेइतां मिलतो थियो, ते तैन सेइं रोज़ बेंस केरतो थियो।
18 ಆದರೆ ಎಪಿಕೂರಿಯರು ಹಾಗೂ ಸ್ತೋಯಿಕರು ಎಂಬ ತತ್ವಜ್ಞಾನಿಗಳಲ್ಲಿ ಸಹ ಕೆಲವರು ಅವನೊಂದಿಗೆ ವಾಗ್ವಾದ ಮಾಡಲು ಪ್ರಾರಂಭಿಸಿ, “ಈ ಬಾಯಿಬಡುಕ ಏನು ಹೇಳಬೇಕೆಂದಿದ್ದಾನೆ?” ಎಂದರು. ಇನ್ನೂ ಕೆಲವರು, “ಅವನು ವಿದೇಶದ ದೇವರುಗಳ ಬಗ್ಗೆ ಪ್ರಸ್ತಾಪಿಸುವಂತೆ ತೋರುತ್ತದೆ,” ಎಂದರು. ಏಕೆಂದರೆ ಅವನು ಯೇಸುವನ್ನು ಮತ್ತು ಪುನರುತ್ಥಾನವನ್ನು ಕುರಿತ ಸುವಾರ್ತೆ ಸಾರುತ್ತಿದ್ದನು.
किछ इपिकूरी ते किछ स्तोईकी उस्ताद तैस सेइं बेंस केरने लगे, ते तैन मरां किछ ज़ोने लगे, “बकवादी कुन ज़ोनू चाते?” ते किछ ज़ोने लगे, “ए त होरि देबतां केरो पतो देनेबालो भोइ सकते, किजोकि पौलुस यीशुएरो ते कने ज़ींते भोनेरी खुशखबरी शुनातो थियो।”
19 ಆಗ ಅವರು ಪೌಲನನ್ನು ಕರೆದುಕೊಂಡು ಅರಿಯೊಪಾಗ ಎಂಬ ಸ್ಥಳಕ್ಕೆ ಬಂದು, “ನೀನು ಹೇಳುತ್ತಿರುವ ಈ ಹೊಸ ಉಪದೇಶ ಏನೆಂಬುದನ್ನು ನಾವು ತಿಳಿದುಕೊಳ್ಳಬಹುದೋ?
तैखन तैनेईं तै एप्पू सेइं साथी अरियुपगुस नव्वेंरे मन्दरे मां नेव, ते तैस पुच़्छ़ू, “कुन अस ज़ैनी सकतम कि ज़ैस नव्वें पंथेरी तू शिक्षा देतस, तै कुने?
20 ನೀನು ಕೆಲವು ವಿಚಿತ್ರವಾದ ವಿಚಾರಗಳನ್ನು ನಮಗೆ ಹೇಳುತ್ತಿರುವೆ. ಆದ್ದರಿಂದ ಅವುಗಳ ಅರ್ಥವನ್ನು ತಿಳಿಯಬಯಸುತ್ತೇವೆ,” ಎಂದರು.
असां तेरे ऐशेरां बेड़ि आजीब गल्लां शुन्ने लोरेंम, ते असां एन ज़ाननू चातम कि एन केरो कुन मतलबे?”
21 ಅಲ್ಲಿ ನೆಲೆಸಿದ್ದ ಅಥೇನೆಯ ನಿವಾಸಿಗಳೂ ವಿದೇಶಿಯರೂ ಹೊಸ ಹೊಸ ವಿಷಯಗಳನ್ನು ಹೇಳುವುದಕ್ಕೂ ಕೇಳುವುದಕ್ಕೂ ಹೊರತು ಇತರ ವಿಷಯಗಳಲ್ಲಿ ಸಮಯ ಕಳೆಯುತ್ತಿರಲಿಲ್ಲ.
(द्रासले मां एथेंसेरे लोक कुन देशी कुन परदेशी अपनि फुरस्तरो सारो मौको होरि कम्मां केरे बजाहे सिर्फ नव्वीं-नव्वीं गल्लां ज़ोने ते शुन्ने मां गुज़ारते थिये।)
22 ಅರಿಯೊಪಾಗದ ಗುಂಪಿನ ಮುಂದೆ ನಿಂತು ಪೌಲನು ಹೀಗೆಂದನು: “ಅಥೇನೆಯ ಜನರೇ! ನೀವು ಪ್ರತಿಯೊಂದರಲ್ಲಿಯೂ ಹೇಗೆ ಬಹು ಧಾರ್ಮಿಕರಾಗಿದ್ದೀರಿ ಎಂಬುದನ್ನು ನಾನು ಕಂಡುಕೊಂಡಿದ್ದೇನೆ.
तैखन पौलुस अरियुपगुसे नव्वेंरे मन्दरे मझ़ाटे खड़ो भोइतां ज़ोने लगो, “हे एथेंसेरे लोकव, अवं हेरताईं कि तुस हर गल्ली मां देबतन बड़ो उच्चो द्रजो देतथ।
23 ನಾನು ಸುತ್ತಮುತ್ತಲೂ ತಿರುಗಾಡುತ್ತಾ, ನಿಮ್ಮ ಆರಾಧನಾ ವಿಗ್ರಹಗಳನ್ನು ಲಕ್ಷ್ಯವಿಟ್ಟು ಗಮನಿಸಿದಾಗ, ‘ತಿಳಿಯದ ದೇವರಿಗೆ’ ಎಂಬ ಬರಹವಿದ್ದ ಬಲಿಪೀಠವನ್ನು ನೋಡಿದೆನು. ಆದ್ದರಿಂದ ನೀವು ಯಾವುದನ್ನು ತಿಳಿಯದೆ ಪೂಜಿಸುತ್ತಿರುವಿರೋ ಅದನ್ನೇ ನಾನು ನಿಮಗೆ ಪ್ರಕಟಿಸುತ್ತೇನೆ.
ज़ैखन अवं तुश्शे नगर मां हंठतो फिरतो थियो, त मेरी नज़र तुश्शे पूज़नेरी चीज़न पुड़ ते बलिदानेरी ठारी पुड़ पेई, ज़ैस पुड़ लिखोरू थियूं, अनज़ान परमेशरेरे लेइ, बस्सा तुस ज़ैस ज़ानथ नन्ना ते तैसेरी पूज़ा केरतथ, अवं तुसन तैसेरे बारे मां ज़ोताईं।
24 “ಜಗತ್ತನ್ನೂ ಅದರಲ್ಲಿರುವ ಸಮಸ್ತವನ್ನೂ ಸೃಷ್ಟಿಸಿದ ದೇವರು ಇಹಪರಲೋಕಗಳ ಅಧಿಪತಿಯಾಗಿದ್ದಾರೆ. ಅವರು ಕೈಗಳಿಂದ ಕಟ್ಟಿದ ದೇವಾಲಯಗಳಲ್ಲಿ ವಾಸಿಸುವವರಲ್ಲ.
ज़ैनी परमेशरे दुनिया ते सैरी चीज़ां बनेवरिन, तै धेरतरो ते अम्बरेरो मालिके, तै हथ्थां केरे बनेवरे मन्दरन मां न राए।
25 ದೇವರಿಗೆ ಏನಾದರೂ ಅವಶ್ಯಕತೆಯಿರುವಂತೆ ಮಾನವ ಹಸ್ತಗಳ ಸೇವೆಯು ಅಗತ್ಯವಿರುವುದಿಲ್ಲ. ದೇವರೇ ಎಲ್ಲರಿಗೂ ಜೀವವನ್ನೂ ಉಸಿರನ್ನೂ ಪ್ರತಿಯೊಂದನ್ನೂ ದಯಪಾಲಿಸಿರುವುದರಿಂದ,
तैस मैनेरे मद्दतरी ज़रूरत नईं, किजोकि तै केन्ची चीज़री ज़रूरत नईं, तै सैरन ज़िन्दगी ते सांस ते सब किछ देते।
26 ದೇವರು ಒಬ್ಬ ಮನುಷ್ಯನಿಂದ ಎಲ್ಲಾ ದೇಶಗಳನ್ನು ಸೃಷ್ಟಿಸಿ, ಜನರು ಇಡೀ ಭೂಲೋಕವನ್ನು ತುಂಬಿಕೊಳ್ಳುವಂತೆ ಮಾಡಿದರು; ಅವರವರು ಇರತಕ್ಕ ಕಾಲಾವಧಿಯನ್ನೂ ವಾಸಿಸಲು ನಿರ್ದಿಷ್ಟ ಸ್ಥಳಗಳನ್ನೂ ನೇಮಿಸಿದ್ದಾರೆ.
तैनी एक्की मैन्हु सेइं हर कौमारे लोक पैदा किये, ताके सारे ज़मीनी पुड़ आबाद भोन, तैनी तैन केरि ज़िन्दगरे दिहाड़े बनाए ते रानेरे लेइ ठार बनाई।
27 ದೇವರು ನಮ್ಮಲ್ಲಿ ಯಾರಿಂದಲೂ ದೂರವಾಗಿಲ್ಲವಾದರೂ ದೇವರನ್ನು ನಾವು ಅಪೇಕ್ಷಿಸುವಂತೆ ನಾವು ದೇವರನ್ನು ಹುಡುಕಿ ಕಂಡುಕೊಳ್ಳುವಂತೆ ಹೀಗೆ ಮಾಡಿದರು.
परमेशरे एन कियूं ताके लोक तैस तोप्पन ते शैइद तोपते-तोपते तैन मैल्ली गाए, हालांकी तै असन केन्ची करां दूर नईं।
28 ಏಕೆಂದರೆ, ‘ನಾವು ಜೀವಿಸುವುದೂ ಚಲಿಸುವುದೂ ಇರುವುದೂ ದೇವರಲ್ಲಿಯೇ.’ ನಿಮ್ಮ ಕವಿಗಳಲ್ಲಿ ಕೆಲವರು ಹೇಳಿರುವಂತೆ, ‘ನಾವು ನಿಜಕ್ಕೂ ದೇವರ ಮಕ್ಕಳೇ ಆಗಿದ್ದೇವೆ.’
किजोकि तै असन सेइं साथी आए ते ज़ींते रातम ते च़लतम फिरतम, ज़ेन्च़रे कि तुश्शे लिखने बालेईं भी ज़ोरूए, ‘असां त तैसेरे बच्चेम।’
29 “ನಾವು ದೇವರ ಮಕ್ಕಳಾಗಿರುವುದರಿಂದ, ಮಾನವ ಕಲ್ಪನೆ, ಕುಶಲತೆಯಿಂದ ರೂಪಿಸಿದ ಬೆಳ್ಳಿ, ಬಂಗಾರ, ಶಿಲೆಯ ಮೂರ್ತಿಯಂತೆ ದೇವರು ಇದ್ದಾರೆಂದು ನಾವು ಭಾವಿಸಬಾರದು.
ते परमेशरेरे बच्चे भोइतां सोचेरू लोड़े, कि ईश्वरत्व सोन्ने, चैंदरी, या घोड़ेरी मूरतरीए ते ज़ै केन्ची मैनेरे हाथां केरि कारीगिरीए ते खियाले सेइं आए।
30 ಇಂಥಾ ಅಜ್ಞಾನ ಕಾಲವನ್ನು ಹಿಂದಿನ ಕಾಲದಲ್ಲಿ ದೇವರು ತಮ್ಮ ಗಮನಕ್ಕೆ ತಂದುಕೊಳ್ಳಲಿಲ್ಲ. ಆದರೆ ಈಗ ಎಲ್ಲಾ ಕಡೆಗಳಲ್ಲಿರುವ ಸರ್ವಮಾನವರೂ ಪಶ್ಚಾತ್ತಾಪ ಪಡಬೇಕೆಂದು ದೇವರು ಆಜ್ಞಾಪಿಸುತ್ತಾರೆ.
एल्हेरेलेइ परमेशरे लोकां अज्ञानतारे वक्ते पुड़ ध्यान न दित्तू, ते हुनी तै मैनन् सेब्भी ठैरन हुक्म देते कि मन फिरान।
31 ಏಕೆಂದರೆ ದೇವರು ನೇಮಿಸಿದ ಒಬ್ಬರ ಮುಖಾಂತರ ಇಡೀ ಜಗತ್ತಿಗೆ ನೀತಿಗನುಸಾರವಾಗಿ ನ್ಯಾಯತೀರ್ಪು ಮಾಡುವ ಒಂದು ದಿನವನ್ನು ನೇಮಕ ಮಾಡಿದ್ದಾರೆ. ಇದನ್ನು ಎಲ್ಲರಿಗೂ ಖಚಿತ ಪಡಿಸಲೆಂದೇ ಆ ಒಬ್ಬರನ್ನು ಸತ್ತವರೊಳಗಿಂದ ಜೀವಂತವಾಗಿ ಎಬ್ಬಿಸಿದ್ದಾರೆ.”
किजोकि तैनी अक दिहाड़ी ठुवालेवरीए ज़ैखन तै सच़्च़े सेइं दुनियारो इन्साफ एक्की एरे मैनेरे ज़िरिये सेइं केरेलो, ज़ै तैनी रख्खोरोए, ते तै तैनी मुड़दन मरां ज़ींतो केरतां ए गल सैरी मैनन् साबत कियोरीए।”
32 ಸತ್ತವರ ಪುನರುತ್ಥಾನದ ವಿಷಯವನ್ನು ಕೇಳಿದಾಗ, ಅವರಲ್ಲಿ ಕೆಲವರು ಪರಿಹಾಸ್ಯ ಮಾಡಿದರು. ಇತರರು, “ನಾವು ಇನ್ನೊಮ್ಮೆ ಈ ವಿಷಯದ ಮೇಲೆ ನೀನು ಮಾತನಾಡುವುದನ್ನು ಕೇಳುತ್ತೇವೆ,” ಎಂದರು.
ज़ैखन तैनेईं मुड़दां केरि आदालतरे बारे मां शुनू त तैन मरां किछ एस गल्लरी मज़ाक बनाने लगे, ते किछेईं ज़ोवं, “अस एस बारे मां फिरी कोस्कोई शुन्मेले।”
33 ಹೀಗಿರಲು ಪೌಲನು ಅವರ ಮಧ್ಯದಿಂದ ಹೊರಟುಹೋದನು.
एन हेरतां पौलुस तैट्ठां निस्तां च़लो जेव।
34 ಆದರೆ ಕೆಲವರು ಪೌಲನನ್ನು ಅಂಟಿಕೊಂಡು ದೇವರಲ್ಲಿ ವಿಶ್ವಾಸವನ್ನಿಟ್ಟರು. ಅವರಲ್ಲಿ ಅರಿಯೊಪಾಗದ ದಿಯೊನುಸ್ಯನು ಮತ್ತು ದಾಮರಿ ಎಂಬ ಹೆಸರಿನ ಒಬ್ಬ ಮಹಿಳೆ ಹಾಗೂ ಇನ್ನಿತರರೂ ಇದ್ದರು.
पन किछ लोक तैस सेइं मिली जे, ते तैनेईं प्रभु पुड़ विश्वास कियो, तैन मरां अक दियुनुसियुस ज़ै अरियुपगुसेरो प्रधान थियो, ते अक कुआन्श थी, तैसारू नवं दमरिस थियूं, ते तैन केरे अलावा होरे भी बड़े मैन्हु थिये।