< ಅಪೊಸ್ತಲರ ಕೃತ್ಯಗಳ 13 >

1 ಅಂತಿಯೋಕ್ಯದ ಸಭೆಯಲ್ಲಿ, ಪ್ರವಾದಿಗಳೂ ಬೋಧಕರೂ ಇದ್ದರು. ಅವರು ಯಾರೆಂದರೆ ಬಾರ್ನಬನು, ನೀಗರ ಎಂದು ಕರೆಯಲಾಗುತ್ತಿದ್ದ ಸಿಮೆಯೋನ, ಕುರೇನೆದ ಲೂಕ್ಯ, ಚತುರಾಧಿಪತಿ ಹೆರೋದನೊಂದಿಗೆ ಬೆಳೆದ ಮೆನಹೇನ ಮತ್ತು ಸೌಲ ಮುಂತಾದವರೇ.
อปรญฺจ พรฺณพฺพา: , ศิโมนฺ ยํ นิคฺรํ วทนฺติ, กุรีนียลูกิโย เหโรทา ราชฺญา สห กฺฤตวิทฺยาภฺยาโส มินเหมฺ, เศาลศฺไจเต เย กิยนฺโต ชนา ภวิษฺยทฺวาทิน อุปเทษฺฏารศฺจานฺติยขิยานครสฺถมณฺฑลฺยามฺ อาสนฺ,
2 ಇವರೆಲ್ಲರೂ ಕರ್ತದೇವರನ್ನು ಆರಾಧಿಸಿ, ಉಪವಾಸಮಾಡುತ್ತಿದ್ದರು. ಆಗ ಪವಿತ್ರಾತ್ಮ ದೇವರು, “ಬಾರ್ನಬನನ್ನೂ ಸೌಲನನ್ನೂ ನಾನು ಕರೆದಿರುವ ಕಾರ್ಯಕ್ಕಾಗಿ ಅವರನ್ನು ನನಗಾಗಿ ಪ್ರತ್ಯೇಕಿಸಿರಿ,” ಎಂದರು.
เต ยโทปวาสํ กฺฤเตฺวศฺวรมฺ อเสวนฺต ตสฺมินฺ สมเย ปวิตฺร อาตฺมา กถิตวานฺ อหํ ยสฺมินฺ กรฺมฺมณิ พรฺณพฺพาไศเลา นิยุกฺตวานฺ ตตฺกรฺมฺม กรฺตฺตุํ เตา ปฺฤถกฺ กุรุตฯ
3 ಆಗ ಅವರು ಉಪವಾಸವಿದ್ದು ಪ್ರಾರ್ಥನೆಮಾಡಿ, ಅವರಿಬ್ಬರ ಮೇಲೆ ಕೈಗಳನ್ನಿಟ್ಟು ಕಳುಹಿಸಿಬಿಟ್ಟರು.
ตตไสฺตรุปวาสปฺรารฺถนโย: กฺฤตโย: สโตเสฺต ตโย รฺคาตฺรโย รฺหสฺตารฺปณํ กฺฤตฺวา เตา วฺยสฺฤชนฺฯ
4 ಪವಿತ್ರಾತ್ಮ ದೇವರಿಂದ ಕಳುಹಿಸಲಾದ ಅವರಿಬ್ಬರೂ ಸೆಲ್ಯೂಕ್ಯಕ್ಕೆ ಹೋಗಿ ಅಲ್ಲಿಂದ ನೌಕೆಯಲ್ಲಿ ಪ್ರಯಾಣಮಾಡಿ ಸೈಪ್ರಸಿಗೆ ತಲುಪಿದರು.
ตต: ปรํ เตา ปวิเตฺรณาตฺมนา เปฺรริเตา สนฺเตา สิลูกิยานครมฺ อุปสฺถาย สมุทฺรปเถน กุโปฺรปทฺวีปมฺ อคจฺฉตำฯ
5 ಸಲಮೀಸಿಗೆ ಬಂದು, ಅಲ್ಲಿಯ ಯೆಹೂದ್ಯರ ಸಭಾಮಂದಿರಗಳಲ್ಲಿ ದೇವರ ವಾಕ್ಯವನ್ನು ಸಾರಿದರು. ಮಾರ್ಕನೆನಿಸಿಕೊಂಡ ಯೋಹಾನನು ಸಹ ಅವರೊಂದಿಗಿದ್ದು ಅವರಿಗೆ ಸಹಾಯಕನಾಗಿದ್ದನು.
ตต: สาลามีนครมฺ อุปสฺถาย ตตฺร ยิหูทียานำ ภชนภวนานิ คเตฺวศฺวรสฺย กถำ ปฺราจารยตำ; โยหนปิ ตตฺสหจโร'ภวตฺฯ
6 ಅವರು ಆ ದ್ವೀಪದಲ್ಲೆಲ್ಲಾ ಪ್ರಯಾಣಮಾಡಿ ಪಾಫೋಸ್ ಎಂಬಲ್ಲಿಗೆ ಬಂದರು. ಅಲ್ಲಿ ಮಂತ್ರವಾದಿಯೂ ಸುಳ್ಳುಪ್ರವಾದಿಯೂ ಆಗಿದ್ದ “ಬಾರ್ ಯೇಸು” ಎಂಬ ಹೆಸರಿನ ಒಬ್ಬ ಯೆಹೂದ್ಯನನ್ನು ಕಂಡರು.
อิตฺถํ เต ตโสฺยปทฺวีปสฺย สรฺวฺวตฺร ภฺรมนฺต: ปาผนครมฺ อุปสฺถิตา: ; ตตฺร สุวิเวจเกน สรฺชิยเปาลนามฺนา ตทฺเทศาธิปตินา สห ภวิษฺยทฺวาทิโน เวศธารี พรฺยีศุนามา โย มายาวี ยิหูที อาสีตฺ ตํ สากฺษาตฺ ปฺราปฺตวต: ฯ
7 ಅವನು ರಾಜ್ಯಪಾಲ ಸೆರ್ಗ್ಯಪೌಲನ ಜೊತೆಗಿದ್ದನು. ಈ ರಾಜ್ಯಪಾಲನು ಬುದ್ಧಿವಂತನಾಗಿದ್ದನು. ಇವನು ದೇವರ ವಾಕ್ಯವನ್ನು ಕೇಳುವ ಉದ್ದೇಶದಿಂದ ಬಾರ್ನಬ ಮತ್ತು ಸೌಲರನ್ನು ಕರೆಕಳುಹಿಸಿದನು.
ตทฺเทศาธิป อีศฺวรสฺย กถำ โศฺรตุํ วาญฺฉนฺ เปาลพรฺณพฺเพา นฺยมนฺตฺรยตฺฯ
8 ಆದರೆ ಮಂತ್ರವಾದಿಯಾದ ಎಲುಮನು ಅವರನ್ನು ವಿರೋಧಿಸಿ ರಾಜ್ಯಪಾಲನು ವಿಶ್ವಾಸಿಯಾಗದಂತೆ ಅಡ್ಡಿಮಾಡಲು ಪ್ರಯತ್ನಿಸಿದನು. ಎಲುಮ ಎಂಬ ಹೆಸರಿಗೆ ಮಂತ್ರವಾದಿ ಎಂಬುದೇ ಅರ್ಥ.
กินฺตฺวิลุมา ยํ มายาวินํ วทนฺติ ส เทศาธิปตึ ธรฺมฺมมารฺคาทฺ พหิรฺภูตํ กรฺตฺตุมฺ อยตตฯ
9 ಆಗ ಪೌಲನೆಂದೂ ಕರೆಯಲಾಗುತ್ತಿದ್ದ ಸೌಲನು, ಪವಿತ್ರಾತ್ಮಭರಿತನಾಗಿ, ಎಲುಮನನ್ನು ನೇರವಾಗಿ ದೃಷ್ಟಿಸಿ,
ตสฺมาตฺ โศโล'รฺถาตฺ เปาล: ปวิเตฺรณาตฺมนา ปริปูรฺณ: สนฺ ตํ มายาวินํ ปฺรตฺยนนฺยทฺฤษฺฏึ กฺฤตฺวากถยตฺ,
10 “ಎಲೈ ಸೈತಾನನ ಮಗನೇ, ನೀತಿಗೆಲ್ಲಾ ವೈರಿಯೇ, ನಿನ್ನಲ್ಲಿ ಎಲ್ಲಾ ತರದ ಮೋಸವೂ ಕುತಂತ್ರವೂ ತುಂಬಿವೆ. ಕರ್ತದೇವರ ಸನ್ಮಾರ್ಗಗಳಿಗೆ ಅಡ್ಡಿಯಾಗುವುದನ್ನು ನೀನೆಂದೂ ನಿಲ್ಲಿಸುವುದಿಲ್ಲವೋ?
เห นรกินฺ ธรฺมฺมเทฺวษินฺ เกาฏิลฺยทุษฺกรฺมฺมปริปูรฺณ, ตฺวํ กึ ปฺรโภ: สตฺยปถสฺย วิปรฺยฺยยกรณาตฺ กทาปิ น นิวรฺตฺติษฺยเส?
11 ಇಗೋ ಕರ್ತದೇವರ ಹಸ್ತ ನಿನಗೆ ವಿರೋಧವಾಗಿದೆ. ಈಗ ನೀನು ಕುರುಡನಾಗಿ, ಸ್ವಲ್ಪ ಕಾಲ ಸೂರ್ಯನ ಬೆಳಕನ್ನು ಕಾಣದೇ ಹೋಗುವೆ,” ಎಂದನು. ತಕ್ಷಣವೇ ಅವನ ಮೇಲೆ ಮಂಜು ಮುಸುಕಿ ಕತ್ತಲೆ ಆವರಿಸಿತು. ಅವನು ತಡವರಿಸುತ್ತಾ ತನ್ನನ್ನು ಯಾರಾದರೂ ಕೈಹಿಡಿದು ನಡೆಸುವರೋ ಎಂದು ಹುಡುಕಾಡಿದನು.
อธุนา ปรเมศฺวรสฺตว สมุจิตํ กริษฺยติ เตน กติปยทินานิ ตฺวมฺ อนฺธ: สนฺ สูรฺยฺยมปิ น ทฺรกฺษฺยสิฯ ตตฺกฺษณาทฺ ราตฺริวทฺ อนฺธการสฺตสฺย ทฺฤษฺฏิมฺ อาจฺฉาทิตวานฺ; ตสฺมาตฺ ตสฺย หสฺตํ ธรฺตฺตุํ ส โลกมนฺวิจฺฉนฺ อิตสฺตโต ภฺรมณํ กฺฤตวานฺฯ
12 ಸಂಭವಿಸಿದ್ದೆಲ್ಲವನ್ನೂ ರಾಜ್ಯಪಾಲನು ಕಂಡು, ಕರ್ತ ಯೇಸುವಿನ ವಿಷಯವಾಗಿದ್ದ ಬೋಧನೆಯ ಬಗ್ಗೆ ಆಶ್ಚರ್ಯಪಟ್ಟು ವಿಶ್ವಾಸವನ್ನಿಟ್ಟನು.
เอนำ ฆฏนำ ทฺฤษฺฏฺวา ส เทศาธิปติ: ปฺรภูปเทศาทฺ วิสฺมิตฺย วิศฺวาสํ กฺฤตวานฺฯ
13 ಪಾಫೋಸಿನಿಂದ, ಪೌಲ ಮತ್ತು ಅವನ ಸಂಗಡಿಗರು ಪಂಫುಲ್ಯಕ್ಕೆ ಸೇರಿದ ಪೆರ್ಗೆ ಎಂಬಲ್ಲಿಗೆ ನೌಕೆಯಲ್ಲಿ ಪ್ರಯಾಣಮಾಡಿದರು, ಅಲ್ಲಿ ಯೋಹಾನನು ಅವರನ್ನು ಬಿಟ್ಟು ಯೆರೂಸಲೇಮಿಗೆ ಹಿಂತಿರುಗಿ ಹೋದನು.
ตทนนฺตรํ เปาลสฺตตฺสงฺคิเนา จ ปาผนคราตฺ โปฺรตํ จาลยิตฺวา ปมฺผุลิยาเทศสฺย ปรฺคีนครมฺ อคจฺฉนฺ กินฺตุ โยหนฺ ตโย: สมีปาทฺ เอตฺย ยิรูศาลมํ ปฺรตฺยาคจฺฉตฺฯ
14 ಉಳಿದವರು ಪೆರ್ಗೆದಿಂದ ಪಿಸಿದ್ಯದ ಅಂತಿಯೋಕ್ಯಕ್ಕೆ ಹೋದರು. ಸಬ್ಬತ್ ದಿನ ಅವರು ಸಭಾಮಂದಿರದೊಳಗೆ ಹೋಗಿ ಕುಳಿತುಕೊಂಡರು.
ปศฺจาตฺ เตา ปรฺคีโต ยาตฺรำ กฺฤตฺวา ปิสิทิยาเทศสฺย อานฺติยขิยานครมฺ อุปสฺถาย วิศฺรามวาเร ภชนภวนํ ปฺรวิศฺย สมุปาวิศตำฯ
15 ನಿಯಮ ಮತ್ತು ಪ್ರವಾದಿಗಳ ಗ್ರಂಥವು ಪಾರಾಯಣವಾದ ತರುವಾಯ, ಸಭಾಮಂದಿರದ ಅಧಿಕಾರಿಗಳು ಅವರಿಗೆ, “ಸಹೋದರರೇ, ಜನರಿಗೆ ಪ್ರೋತ್ಸಾಹ ಕೊಡುವ ಸಂದೇಶ ನಿಮ್ಮಲ್ಲಿದ್ದರೆ, ಮಾತನಾಡಿರಿ,” ಎಂದು ಕೇಳಿಕೊಂಡರು.
วฺยวสฺถาภวิษฺยทฺวากฺยโย: ปฐิตโย: สโต เรฺห ภฺราตเรา โลกานฺ ปฺรติ ยุวโย: กาจิทฺ อุปเทศกถา ยทฺยสฺติ ตรฺหิ ตำ วทตํ เตา ปฺรติ ตสฺย ภชนภวนสฺยาธิปตย: กถามฺ เอตำ กถยิตฺวา ไปฺรษยนฺฯ
16 ಪೌಲನು ಎದ್ದು ನಿಂತು, ಕೈಸನ್ನೆ ಮಾಡಿ ಹೀಗೆ ಹೇಳಿದನು: “ಇಸ್ರಾಯೇಲ್ ಜನರೇ, ದೇವರಲ್ಲಿ ಭಯಭಕ್ತಿಯುಳ್ಳವರೇ, ಕೇಳಿರಿ!
อต: เปาล อุตฺติษฺฐนฺ หเสฺตน สงฺเกตํ กุรฺวฺวนฺ กถิตวานฺ เห อิสฺราเยลียมนุษฺยา อีศฺวรปรายณา: สรฺเวฺว โลกา ยูยมฺ อวธทฺธํฯ
17 ಈ ಇಸ್ರಾಯೇಲ್ ಜನರ ದೇವರು ನಮ್ಮ ಪಿತೃಗಳನ್ನು ಆಯ್ದುಕೊಂಡರು; ಈಜಿಪ್ಟಿನಲ್ಲಿ ನಮ್ಮ ಜನರು ವಾಸಿಸುತ್ತಿದ್ದಾಗ; ಅವರನ್ನು ಪ್ರಬಲರನ್ನಾಗಿ ಮಾಡಿ ತಮ್ಮ ಭುಜಬಲವನ್ನು ಪ್ರಯೋಗಿಸಿ ಆ ದೇಶದೊಳಗಿಂದ ಅವರನ್ನು ಬಿಡಿಸಿ ಕರೆತಂದರು;
เอเตษามิสฺราเยโลฺลกานามฺ อีศฺวโร'สฺมากํ ปูรฺวฺวปรุษานฺ มโนนีตานฺ กตฺวา คฺฤหีตวานฺ ตโต มิสริ เทเศ ปฺรวสนกาเล เตษามุนฺนตึ กฺฤตฺวา ตสฺมาตฺ สฺวียพาหุพเลน ตานฺ พหิ: กฺฤตฺวา สมานยตฺฯ
18 ಅರಣ್ಯದಲ್ಲಿ ಸುಮಾರು ನಲವತ್ತು ವರ್ಷ ಅವರ ನಡತೆಯನ್ನು ಸಹಿಸಿಕೊಂಡರು.
จตฺวารึศทฺวตฺสรานฺ ยาวจฺจ มหาปฺรานฺตเร เตษำ ภรณํ กฺฤตฺวา
19 ಕಾನಾನ್ ದೇಶದಲ್ಲಿದ್ದ ಏಳು ರಾಜ್ಯಗಳನ್ನು ಜಯಿಸಿ, ಅವರ ದೇಶವನ್ನು ತಮ್ಮ ಜನರಿಗೆ ಬಾಧ್ಯವಾಗಿ ದಯಪಾಲಿಸಿದರು.
กินานฺเทศานฺตรฺวฺวรฺตฺตีณิ สปฺตราชฺยานิ นาศยิตฺวา คุฏิกาปาเตน เตษุ สรฺวฺวเทเศษุ เตโภฺย'ธิการํ ทตฺตวานฺฯ
20 ಇದಕ್ಕೆ ನಾನೂರ ಐವತ್ತು ವರ್ಷಗಳ ಕಾಲ ಹಿಡಿಯಿತು. “ಇದಾದನಂತರ, ದೇವರು ಅವರಿಗೆ ಪ್ರವಾದಿ ಸಮುಯೇಲನ ಸಮಯದವರೆಗೆ ನ್ಯಾಯಸ್ಥಾಪಕರನ್ನು ದಯಪಾಲಿಸಿದರು.
ปญฺจาศทธิกจตุ: ศเตษุ วตฺสเรษุ คเตษุ จ ศิมูเยลฺภวิษฺยทฺวาทิปรฺยฺยนฺตํ เตษามุปริ วิจารยิตฺฤนฺ นิยุกฺตวานฺฯ
21 ಅನಂತರ ಜನರು ಒಬ್ಬ ಅರಸನು ತಮಗೆ ಬೇಕೆಂದು ಕೇಳಿಕೊಳ್ಳಲು, ದೇವರು ಬೆನ್ಯಾಮೀನ್ ಗೋತ್ರದ ಕೀಷನ ಮಗ ಸೌಲನನ್ನು ಅವರಿಗೆ ಕೊಟ್ಟರು. ಇವನು ನಲವತ್ತು ವರ್ಷ ಆಳ್ವಿಕೆ ಮಾಡಿದನು.
ไตศฺจ ราชฺญิ ปฺรารฺถิเต, อีศฺวโร พินฺยามีโน วํศชาตสฺย กีศ: ปุตฺรํ เศาลํ จตฺวารึศทฺวรฺษปรฺยฺยนฺตํ เตษามุปริ ราชานํ กฺฤตวานฺฯ
22 ದೇವರು ಸೌಲನನ್ನು ಅರಸುತನದಿಂದ ತೆಗೆದುಹಾಕಿ, ದೇವರು ದಾವೀದನನ್ನು ಅವರ ಅರಸನನ್ನಾಗಿ ಎಬ್ಬಿಸಿದರು. ಇವನನ್ನು ಕುರಿತು, ‘ಇಷಯನ ಮಗ ದಾವೀದನು ನನಗೆ ಸಿಕ್ಕಿದನು. ನನ್ನ ಹೃದಯಕ್ಕೆ ತಕ್ಕಂಥ ಮನುಷ್ಯನು; ಇವನು ನಾನು ಅಪೇಕ್ಷಿಸುವುದೆಲ್ಲವನ್ನೂ ಮಾಡುವನು,’ ಎಂದು ದೇವರು ತಾವೇ ಸಾಕ್ಷಿಕೊಟ್ಟರು.
ปศฺจาตฺ ตํ ปทจฺยุตํ กฺฤตฺวา โย มทิษฺฏกฺริยา: สรฺวฺวา: กริษฺยติ ตาทฺฤศํ มม มโนภิมตมฺ เอกํ ชนํ ยิศย: ปุตฺรํ ทายูทํ ปฺราปฺตวานฺ อิทํ ปฺรมาณํ ยสฺมินฺ ทายูทิ ส ทตฺตวานฺ ตํ ทายูทํ เตษามุปริ ราชตฺวํ กรฺตฺตุมฺ อุตฺปาทิตวานฯ
23 “ಈ ದಾವೀದನ ಸಂತತಿಯಲ್ಲಿಯೇ ದೇವರು ಇಸ್ರಾಯೇಲಿಗೆ ತನ್ನ ವಾಗ್ದಾನದಂತೆ ರಕ್ಷಕ ಯೇಸುವನ್ನು ತಂದರು.
ตสฺย สฺวปฺรติศฺรุตสฺย วากฺยสฺยานุสาเรณ อิสฺราเยโลฺลกานำ นิมิตฺตํ เตษำ มนุษฺยาณำ วํศาทฺ อีศฺวร เอกํ ยีศุํ (ตฺราตารมฺ) อุทปาทยตฺฯ
24 ಯೇಸು ಬರುವ ಮೊದಲು, ಸ್ನಾನಿಕ ಯೋಹಾನನು ಎಲ್ಲಾ ಇಸ್ರಾಯೇಲರಿಗೆ ಪಶ್ಚಾತ್ತಾಪ ಮತ್ತು ದೀಕ್ಷಾಸ್ನಾನದ ಬಗ್ಗೆ ಸಾರಿದನು.
ตสฺย ปฺรกาศนาตฺ ปูรฺวฺวํ โยหนฺ อิสฺราเยโลฺลกานำ สนฺนิเธา มน: ปราวรฺตฺตนรูปํ มชฺชนํ ปฺราจารยตฺฯ
25 ಯೋಹಾನನು ತನ್ನ ಸೇವೆಯನ್ನು ಪೂರೈಸುತ್ತಿರುವಾಗ, ‘ನನ್ನನ್ನು ಯಾರೆಂದು ನೀವು ನೆನೆಸುತ್ತೀರಿ? ನೀವು ಎದುರು ನೋಡುತ್ತಿರುವ ಅವರು ನಾನಲ್ಲ, ಇಗೋ, ಅವರು ನನ್ನ ನಂತರ ಬರುತ್ತಾರೆ. ಅವರ ಪಾದರಕ್ಷೆಗಳನ್ನು ಬಿಚ್ಚುವುದಕ್ಕೂ ನಾನು ಯೋಗ್ಯನಲ್ಲ,’ ಎಂದನು.
ยสฺย จ กรฺมฺมโณ ภารํ ปฺรปฺตวานฺ โยหนฺ ตนฺ นิษฺปาทยนฺ เอตำ กถำ กถิตวานฺ, ยูยํ มำ กํ ชนํ ชานีถ? อหมฺ อภิษิกฺตตฺราตา นหิ, กินฺตุ ปศฺยต ยสฺย ปาทโย: ปาทุกโย รฺพนฺธเน โมจยิตุมปิ โยโคฺย น ภวามิ ตาทฺฤศ เอโก ชโน มม ปศฺจาทฺ อุปติษฺฐติฯ
26 “ಅಬ್ರಹಾಮನ ವಂಶದವರಾದ ಸಹೋದರರೇ, ದೇವರಲ್ಲಿ ಭಯಭಕ್ತಿಯುಳ್ಳ ಇನ್ನಿತರರೇ, ಈ ರಕ್ಷಣೆಯ ಸಂದೇಶ ಕಳುಹಿಸಿರುವುದು ನಮಗಾಗಿಯೇ.
เห อิพฺราหีโม วํศชาตา ภฺราตโร เห อีศฺวรภีตา: สรฺวฺวโลกา ยุษฺมานฺ ปฺรติ ปริตฺราณสฺย กไถษา เปฺรริตาฯ
27 ಯೆರೂಸಲೇಮಿನಲ್ಲಿ ವಾಸವಾಗಿರುವವರೂ ಅವರ ಅಧಿಕಾರಿಗಳೂ ಯೇಸುವನ್ನು ಯಾರೆಂದು ಗುರುತಿಸಿಲಿಲ್ಲ. ಆದರೂ ಅವರು ಪ್ರತಿ ಸಬ್ಬತ್ ದಿನದಲ್ಲಿ ಪಾರಾಯಣವಾಗುವ ಪ್ರವಾದಿಗಳ ವಾಕ್ಯಗಳನ್ನೂ ಗ್ರಹಿಸಲಿಲ್ಲ. ಅವರು ಯೇಸುವನ್ನು ಅಪರಾಧಿಯೆಂದು ತೀರ್ಪು ಮಾಡಿ, ಪ್ರವಾದಿಗಳ ವಾಕ್ಯಗಳನ್ನು ನೆರವೇರಿಸಿದರು.
ยิรูศาลมฺนิวาสินเสฺตษามฺ อธิปตยศฺจ ตสฺย ยีโศ: ปริจยํ น ปฺราปฺย ปฺรติวิศฺรามวารํ ปฐฺยมานานำ ภวิษฺยทฺวาทิกถานามฺ อภิปฺรายมฺ อพุทฺธฺวา จ ตสฺย วเธน ตา: กถา: สผลา อกุรฺวฺวนฺฯ
28 ಮರಣದಂಡನೆ ವಿಧಿಸಲು ಯಾವುದೇ ಕಾರಣ ಸಿಗದಿದ್ದರೂ ಯೇಸುವನ್ನು ಕೊಲ್ಲಬೇಕೆಂದು ಪಿಲಾತನನ್ನು ಕೇಳಿಕೊಂಡರು.
ปฺราณหนนสฺย กมปิ เหตุมฺ อปฺราปฺยาปิ ปีลาตสฺย นิกเฏ ตสฺย วธํ ปฺรารฺถยนฺตฯ
29 ಪವಿತ್ರ ವೇದದಲ್ಲಿ ಯೇಸುವನ್ನು ಕುರಿತು ಬರೆದಿರುವ ಪ್ರಕಾರ ನೆರವೇರಿದ ನಂತರ, ಅವರನ್ನು ಶಿಲುಬೆಯಿಂದ ಕೆಳಗಿಳಿಸಿ ಸಮಾಧಿಯಲ್ಲಿಟ್ಟರು.
ตสฺมินฺ ยา: กถา ลิขิตา: สนฺติ ตทนุสาเรณ กรฺมฺม สมฺปาทฺย ตํ กฺรุศาทฺ อวตารฺยฺย ศฺมศาเน ศายิตวนฺต: ฯ
30 ಆದರೆ ದೇವರು ಯೇಸುವನ್ನು ಸತ್ತವರೊಳಗಿಂದ ಜೀವಂತವಾಗಿ ಎಬ್ಬಿಸಿದರು.
กินฺตฺวีศฺวร: ศฺมศานาตฺ ตมุทสฺถาปยตฺ,
31 ಯೇಸುವಿನೊಡನೆ ಗಲಿಲಾಯದಿಂದ ಯೆರೂಸಲೇಮಿನವರೆಗೆ ಮುಂಚೆ ಬಂದಿದ್ದವರಿಗೆ ಯೇಸು ಅನೇಕ ದಿನಗಳವರೆಗೆ ಕಾಣಿಸಿಕೊಂಡರು. ಈಗ ಅವರೇ ನಮ್ಮ ಜನರಿಗೆ ಯೇಸುವಿನ ಸಾಕ್ಷಿಗಳಾಗಿದ್ದಾರೆ.
ปุนศฺจ คาลีลปฺรเทศาทฺ ยิรูศาลมนครํ เตน สารฺทฺธํ เย โลกา อาคจฺฉนฺ ส พหุทินานิ เตโภฺย ทรฺศนํ ทตฺตวานฺ, อตสฺต อิทานีํ โลกานฺ ปฺรติ ตสฺย สากฺษิณ: สนฺติฯ
32 “ನಾವು ನಿಮಗೆ, ದೇವರು ನಮ್ಮ ಪಿತೃಗಳಿಗೆ ವಾಗ್ದಾನ ಮಾಡಿದ್ದನ್ನು ಶುಭವರ್ತಮಾನವನ್ನಾಗಿ ಹೇಳುತ್ತಿದ್ದೇವೆ.
อสฺมากํ ปูรฺวฺวปุรุษาณำ สมกฺษมฺ อีศฺวโร ยสฺมินฺ ปฺรติชฺญาตวานฺ ยถา, ตฺวํ เม ปุโตฺรสิ จาทฺย ตฺวำ สมุตฺถาปิตวานหมฺฯ
33 ದೇವರು ಯೇಸುವನ್ನು ಎಬ್ಬಿಸುವುದರ ಮೂಲಕ ಅವರ ಸಂತತಿಯಾದ ನಮಗಿಂದು ಆ ವಾಗ್ದಾನವನ್ನು ನೆರವೇರಿಸಿದ್ದಾರೆ; ಮಾತ್ರವಲ್ಲದೆ ಎರಡನೆಯ ಕೀರ್ತನೆಯಲ್ಲಿ ಹೀಗೆ ಬರೆಯಲಾಗಿದೆ: “‘ನೀನು ನನ್ನ ಪುತ್ರನು, ಇಂದು ನಾನು ನಿನ್ನ ತಂದೆಯಾಗಿದ್ದೇನೆ.’
อิทํ ยทฺวจนํ ทฺวิตียคีเต ลิขิตมาเสฺต ตทฺ ยีโศรุตฺถาเนน เตษำ สนฺตานา เย วยมฺ อสฺมากํ สนฺนิเธา เตน ปฺรตฺยกฺษี กฺฤตํ, ยุษฺมานฺ อิมํ สุสํวาทํ ชฺญาปยามิฯ
34 ಹೀಗೆ ಯೇಸುವನ್ನು ಸಮಾಧಿಯಲ್ಲಿ ಕೊಳೆಯಲು ಬಿಡದೇ ದೇವರು ಅವರನ್ನು ಜೀವಂತವಾಗಿ ಎಬ್ಬಿಸಿದ ಸತ್ಯವು ಈ ಮಾತುಗಳಲ್ಲಿ ಬಂದಿದೆ: “‘ನಾನು ದಾವೀದನಿಗೆ ವಾಗ್ದಾನ ಮಾಡಿದ ಪವಿತ್ರ ಹಾಗೂ ನಿಶ್ಚಯವಾದ ಆಶೀರ್ವಾದಗಳನ್ನು ನಿಮಗೆ ಕೊಡುವೆನು’
ปรเมศฺวเรณ ศฺมศานาทฺ อุตฺถาปิตํ ตทียํ ศรีรํ กทาปิ น เกฺษษฺยเต, เอตสฺมินฺ ส สฺวยํ กถิตวานฺ ยถา ทายูทํ ปฺรติ ปฺรติชฺญาโต โย วรสฺตมหํ ตุภฺยํ ทาสฺยามิฯ
35 ಇನ್ನೊಂದು ಕೀರ್ತನೆಯಲ್ಲಿ ಹೀಗೆ ಹೇಳಿದ್ದಾರೆ: “‘ನಿಮ್ಮ ಪರಿಶುದ್ಧ ವ್ಯಕ್ತಿಯನ್ನು ಕೊಳೆಯುವಂತೆ ಬಿಡುವುದೇ ಇಲ್ಲ.’
เอตทนฺยสฺมินฺ คีเต'ปิ กถิตวานฺฯ สฺวกียํ ปุณฺยวนฺตํ ตฺวํ กฺษยิตุํ น จ ทาสฺยสิฯ
36 “ದಾವೀದನು ತನ್ನ ಜೀವಮಾನದಲ್ಲಿ ದೇವರ ಉದ್ದೇಶಕ್ಕೆ ಅನುಗುಣವಾಗಿ ಸೇವೆಮಾಡಿ ಮರಣಹೊಂದಿದನು. ಅವನ ಪಿತೃಗಳೊಂದಿಗೆ ಅವನನ್ನು ಸೇರಿಸಿದರು. ಅವನ ದೇಹ ಕೊಳೆತುಹೋಯಿತು.
ทายูทา อีศฺวราภิมตเสวาไย นิชายุษิ วฺยยิเต สติ ส มหานิทฺรำ ปฺราปฺย นิไช: ปูรฺวฺวปุรุไษ: สห มิลิต: สนฺ อกฺษียต;
37 ಆದರೆ ದೇವರು ಮರಣದಿಂದ ಎಬ್ಬಿಸಿದ ಈ ಯೇಸು ಕೊಳೆಯುವ ಅವಸ್ಥೆಯನ್ನು ಕಾಣಲಿಲ್ಲ.
กินฺตุ ยมีศฺวร: ศฺมศานาทฺ อุทสฺถาปยตฺ ส นากฺษียตฯ
38 “ಆದ್ದರಿಂದ, ನನ್ನ ಸಹೋದರರೇ, ಯೇಸುವಿನ ಮೂಲಕವೇ ಪಾಪಕ್ಷಮಾಪಣೆ ಸಾಧ್ಯವೆಂದು ನಿಮಗೆ ಸಾರಲಾಗುತ್ತಿದೆಯೆಂದು ನೀವು ತಿಳಿಯಬೇಕೆಂಬುದೇ ನನ್ನ ಅಪೇಕ್ಷೆ.
อโต เห ภฺราตร: , อเนน ชเนน ปาปโมจนํ ภวตีติ ยุษฺมานฺ ปฺรติ ปฺรจาริตมฺ อาเสฺตฯ
39 ಮೋಶೆಯ ನಿಯಮದ ಮೂಲಕವಾಗಿ ನೀತಿವಂತರೆಂದು ನಿರ್ಣಯಿಸಲಾಗದ ಎಲ್ಲಾ ಪಾಪಗಳಿಂದ ಬಿಡುಗಡೆಯಾಗಿ, ಯೇಸುವನ್ನು ನಂಬುವ ಪ್ರತಿಯೊಬ್ಬರೂ ಯೇಸುವಿನ ಮೂಲಕವಾಗಿ ಬಿಡುಗಡೆಹೊಂದಿ ನೀತಿವಂತರಾಗುವರು.
ผลโต มูสาวฺยวสฺถยา ยูยํ เยโภฺย โทเษโภฺย มุกฺตา ภวิตุํ น ศกฺษฺยถ เตภฺย: สรฺวฺวโทเษภฺย เอตสฺมินฺ ชเน วิศฺวาสิน: สรฺเวฺว มุกฺตา ภวิษฺยนฺตีติ ยุษฺมาภิ รฺชฺญายตำฯ
40 ಆದ್ದರಿಂದ ಪ್ರವಾದಿಗಳು ಹೇಳಿದ ಮಾತುಗಳು ನಿಮ್ಮಲ್ಲಿ ನಡೆಯದಂತೆ ಜಾಗರೂಕರಾಗಿರಿ:
อปรญฺจฯ อวชฺญาการิโณ โลกาศฺจกฺษุรุนฺมีลฺย ปศฺยตฯ ตไถวาสมฺภวํ ชฺญาตฺวา สฺยาต ยูยํ วิลชฺชิตา: ฯ ยโต ยุษฺมาสุ ติษฺฐตฺสุ กริเษฺย กรฺมฺม ตาทฺฤศํฯ เยไนว ตสฺย วฺฤตฺตานฺเต ยุษฺมภฺยํ กถิเต'ปิ หิฯ ยูยํ น ตนฺตุ วฺฤตฺตานฺตํ ปฺรเตฺยษฺยถ กทาจน๚
41 “‘ತಿರಸ್ಕಾರ ಮಾಡುವವರೇ, ಗಮನಿಸಿರಿ, ಆಶ್ಚರ್ಯಪಟ್ಟು, ಚದುರಿ ಹೋಗಿರಿ, ನಿಮ್ಮ ಜೀವಮಾನ ಕಾಲದಲ್ಲಿ ನಾನು ಒಂದು ಕಾರ್ಯವನ್ನು ಮಾಡಲಿದ್ದೇನೆ ಆ ಕಾರ್ಯವನ್ನು ಯಾರಾದರೂ ವಿವರಿಸಿ ಹೇಳಿದರೂ ನೀವದನ್ನು ಎಂದಿಗೂ ನಂಬುವುದೇ ಇಲ್ಲ,’” ಎಂದು ಹೇಳಿದನು.
เยยํ กถา ภวิษฺยทฺวาทินำ คฺรนฺเถษุ ลิขิตาเสฺต สาวธานา ภวต ส กถา ยถา ยุษฺมานฺ ปฺรติ น ฆฏเตฯ
42 ಪೌಲ ಬಾರ್ನಬರು ಸಭಾಮಂದಿರವನ್ನು ಬಿಟ್ಟು ಹೊರಡುವಾಗ, “ಬರುವ ಸಬ್ಬತ್ ದಿನವೂ ಬಂದು ಇದೇ ವಿಷಯಗಳನ್ನು ಕುರಿತು ಮಾತನಾಡಿರಿ,” ಎಂದು ಜನರು ಅವರನ್ನು ಕೇಳಿಕೊಂಡರು.
ยิหูทียภชนภวนานฺ นิรฺคตโยสฺตโย รฺภินฺนเทศีไย รฺวกฺษฺยมาณา ปฺรารฺถนา กฺฤตา, อาคามินิ วิศฺรามวาเร'ปิ กเถยมฺ อสฺมานฺ ปฺรติ ปฺรจาริตา ภวตฺวิติฯ
43 ಸಭೆಯು ಮುಗಿದ ತರುವಾಯ ಅನೇಕ ಯೆಹೂದ್ಯರೂ ದೇವಭಕ್ತಿವುಳ್ಳ ಯೆಹೂದಿ ಮಾರ್ಗದ ವಿಶ್ವಾಸಿಗಳು ಪೌಲ ಬಾರ್ನಬರನ್ನು ಹಿಂಬಾಲಿಸಿದರು. ಪೌಲ ಬಾರ್ನಬರು ತಮ್ಮೊಂದಿಗೆ ಬಂದವರ ಜೊತೆ ಮಾತನಾಡಿ ದೇವರ ಕೃಪೆಯಲ್ಲಿ ಮುಂದುವರಿಯಲು ಅವರನ್ನು ಒಡಂಬಡಿಸಿದರು.
สภายา ภงฺเค สติ พหโว ยิหูทียโลกา ยิหูทียมตคฺราหิโณ ภกฺตโลกาศฺจ พรฺณพฺพาเปาลโย: ปศฺจาทฺ อาคจฺฉนฺ, เตน เตา ไต: สห นานากถา: กถยิเตฺวศฺวรานุคฺรหาศฺรเย สฺถาตุํ ตานฺ ปฺราวรฺตฺตยตำฯ
44 ಮುಂದಿನ ಸಬ್ಬತ್ ದಿನ ಕರ್ತದೇವರ ವಾಕ್ಯ ಕೇಳಲು ನಗರದ ಜನರೆಲ್ಲರೂ ಹೆಚ್ಚಾಗಿ ಕೂಡಿಬಂದರು.
ปรวิศฺรามวาเร นครสฺย ปฺราเยณ สรฺเวฺว ลากา อีศฺวรียำ กถำ โศฺรตุํ มิลิตา: ,
45 ಜನಸಮೂಹಗಳನ್ನು ಯೆಹೂದ್ಯರು ಕಂಡಾಗ ಅಸೂಯೆಗೊಂಡು ಪೌಲನು ಹೇಳಿದ ಮಾತುಗಳಿಗೆ ವಿರೋಧವಾಗಿ ವಾದಿಸಿ ದೂಷಣೆಮಾಡತೊಡಗಿದರು.
กินฺตุ ยิหูทียโลกา ชนนิวหํ วิโลกฺย อีรฺษฺยยา ปริปูรฺณา: สนฺโต วิปรีตกถากถเนเนศฺวรนินฺทยา จ เปาเลโนกฺตำ กถำ ขณฺฑยิตุํ เจษฺฏิตวนฺต: ฯ
46 ಆಗ ಪೌಲ, ಬಾರ್ನಬರು ಧೈರ್ಯದಿಂದ ಅವರಿಗೆ ಉತ್ತರಕೊಟ್ಟರು: “ದೇವರ ವಾಕ್ಯವನ್ನು ನಾವು ಮೊದಲು ನಿಮಗೆ ಹೇಳುವುದು ಅವಶ್ಯವಾಗಿತ್ತು. ಆದರೆ ನೀವು ಅದನ್ನು ತಳ್ಳಿಬಿಟ್ಟಿದ್ದರಿಂದಲೂ ನಿತ್ಯಜೀವಕ್ಕೆ ನೀವು ಅಯೋಗ್ಯರೆಂದು ತೀರ್ಮಾನಿಸಿಕೊಂಡಿದ್ದೀರಿ. ಆದುದರಿಂದ ಇಗೋ, ನಾವೀಗ ಯೆಹೂದ್ಯರಲ್ಲದ ಜನರ ಬಳಿಗೆ ಹೋಗುತ್ತೇವೆ. (aiōnios g166)
ตต: เปาลพรฺณพฺพาวกฺโษเภา กถิตวนฺเตา ปฺรถมํ ยุษฺมากํ สนฺนิธาวีศฺวรียกถายา: ปฺรจารณมฺ อุจิตมาสีตฺ กินฺตุํ ตทคฺราหฺยตฺวกรเณน ยูยํ สฺวานฺ อนนฺตายุโษ'โยคฺยานฺ ทรฺศยถ, เอตตฺการณาทฺ วยมฺ อนฺยเทศียโลกานำ สมีปํ คจฺฉาม: ฯ (aiōnios g166)
47 ಕರ್ತದೇವರು ನಮಗೆ ಆಜ್ಞಾಪಿಸಿದ್ದು ಇಂತಿದೆ: “‘ಭೂಲೋಕದ ಕಟ್ಟಕಡೆಯವರೆಗೆ ನೀನು ರಕ್ಷಣೆಯನ್ನು ತರುವಂತೆ ನಾನು ಯೆಹೂದ್ಯರಲ್ಲದವರಿಗೆ ನಿನ್ನನ್ನು ಬೆಳಕನ್ನಾಗಿ ನೇಮಿಸಿರುವೆನು.’”
ปฺรภุรสฺมานฺ อิตฺถมฺ อาทิษฺฏวานฺ ยถา, ยาวจฺจ ชคต: สีมำ โลกานำ ตฺราณการณาตฺฯ มยานฺยเทศมเธฺย ตฺวํ สฺถาปิโต ภู: ปฺรทีปวตฺ๚
48 ಯೆಹೂದ್ಯರಲ್ಲದವರು ಇದನ್ನು ಕೇಳಿದಾಗ, ಬಹಳ ಹರ್ಷಗೊಂಡು ಕರ್ತದೇವರ ವಾಕ್ಯವನ್ನು ಘನಪಡಿಸಿದರು. ನಿತ್ಯಜೀವಕ್ಕೆ ನೇಮಕರಾದ ಎಲ್ಲರೂ ವಿಶ್ವಾಸವನ್ನಿಟ್ಟರು. (aiōnios g166)
ตทา กถามีทฺฤศีํ ศฺรุตฺวา ภินฺนเทศียา อาหฺลาทิตา: สนฺต: ปฺรโภ: กถำ ธนฺยำ ธนฺยามฺ อวทนฺ, ยาวนฺโต โลกาศฺจ ปรมายุ: ปฺราปฺตินิมิตฺตํ นิรูปิตา อาสนฺ เต วฺยศฺวสนฺฯ (aiōnios g166)
49 ಆ ಪ್ರದೇಶದಲ್ಲೆಲ್ಲಾ ಕರ್ತದೇವರ ವಾಕ್ಯವು ಪ್ರಸಾರವಾಗುತ್ತಾ ಬಂತು.
อิตฺถํ ปฺรโภ: กถา สรฺเวฺวเทศํ วฺยาปฺโนตฺฯ
50 ಆದರೆ ಯೆಹೂದ್ಯರು, ಆರಾಧಕರಾಗಿದ್ದ ಮಾನ್ಯರಾದ ಸ್ತ್ರೀಯರನ್ನೂ ನಗರದ ಗಣ್ಯ ನಾಯಕರನ್ನೂ ಪ್ರೇರೇಪಿಸಿ, ಪೌಲ, ಬಾರ್ನಬರ ಮೇಲೆ ಹಿಂಸೆಯನ್ನು ಎಬ್ಬಿಸಿ ತಮ್ಮ ಪ್ರದೇಶದಿಂದ ಹೊರಗೋಡಿಸಿದರು.
กินฺตุ ยิหูทียา นครสฺย ปฺรธานปุรุษานฺ สมฺมานฺยา: กถิปยา ภกฺตา โยษิตศฺจ กุปฺรวฺฤตฺตึ คฺราหยิตฺวา เปาลพรฺณพฺเพา ตาฑยิตฺวา ตสฺมาตฺ ปฺรเทศาทฺ ทูรีกฺฤตวนฺต: ฯ
51 ಆಗ ಅವರಿಗೆ ವಿರೋಧವಾಗಿ ಪೌಲ, ಬಾರ್ನಬರು ತಮ್ಮ ಪಾದದ ಧೂಳನ್ನು ಝಾಡಿಸಿ ಇಕೋನ್ಯಕ್ಕೆ ಹೊರಟು ಹೋದರು.
อต: การณาตฺ เตา นิชปทธูลีเสฺตษำ ปฺราติกูเลฺยน ปาตยิเตฺวกนิยํ นครํ คเตาฯ
52 ಶಿಷ್ಯರು ಬಹಳ ಸಂತೋಷದಿಂದಲೂ ಪವಿತ್ರಾತ್ಮ ದೇವರಿಂದಲೂ ತುಂಬಿದವರಾದರು.
ตต: ศิษฺยคณ อานนฺเทน ปวิเตฺรณาตฺมนา จ ปริปูรฺโณภวตฺฯ

< ಅಪೊಸ್ತಲರ ಕೃತ್ಯಗಳ 13 >