< ರೋಮಾಪುರದವರಿಗೆ 2 >
1 ೧ ಆದ್ದರಿಂದ ಎಲೈ ಮನುಷ್ಯನೇ, ಮತ್ತೊಬ್ಬರಲ್ಲಿ ದೋಷ ಹುಡುಕುವ ನೀನು ಯಾವನಾದರೂ ಸರಿಯೇ, ನಿನಗೆ ಅದರಿಂದ ಕ್ಷಮೆಯಿಲ್ಲ. ಯಾಕೆಂದರೆ, ಮತ್ತೊಬ್ಬರಲ್ಲಿ ದೋಷ ಹುಡುಕುವುದರಿಂದ ನಿನ್ನನ್ನು ನೀನೇ ದೋಷಿಯೆಂದು ತೀರ್ಪುಮಾಡಿಕೊಂಡ ಹಾಗಾಯಿತು. ಮತ್ತೊಬ್ಬರಲ್ಲಿ ದೋಷವೆಣಿಸುವ ನೀನು ಆ ದೋಷಗಳನ್ನೇ ಮಾಡುತ್ತೀಯಲ್ಲಾ.
ಹೇ ಪರದೂಷಕ ಮನುಷ್ಯ ಯಃ ಕಶ್ಚನ ತ್ವಂ ಭವಸಿ ತವೋತ್ತರದಾನಾಯ ಪನ್ಥಾ ನಾಸ್ತಿ ಯತೋ ಯಸ್ಮಾತ್ ಕರ್ಮ್ಮಣಃ ಪರಸ್ತ್ವಯಾ ದೂಷ್ಯತೇ ತಸ್ಮಾತ್ ತ್ವಮಪಿ ದೂಷ್ಯಸೇ, ಯತಸ್ತಂ ದೂಷಯನ್ನಪಿ ತ್ವಂ ತದ್ವದ್ ಆಚರಸಿ|
2 ೨ ಅಂಥವುಗಳನ್ನು ಅನುಸರಿಸುವವರ ವಿಷಯದಲ್ಲಿ ದೇವರು ಕೊಡುವ ತೀರ್ಪು ಸತ್ಯಕ್ಕನುಸಾರವಾಗಿಯೇ ಇರುವುದೆಂದು ನಾವು ಬಲ್ಲೆವು.
ಕಿನ್ತ್ವೇತಾದೃಗಾಚಾರಿಭ್ಯೋ ಯಂ ದಣ್ಡಮ್ ಈಶ್ವರೋ ನಿಶ್ಚಿನೋತಿ ಸ ಯಥಾರ್ಥ ಇತಿ ವಯಂ ಜಾನೀಮಃ|
3 ೩ ಇದನ್ನು ಪರಿಗಣಿಸು ಎಲೈ ಮನುಷ್ಯನೇ, ಅಂಥವುಗಳನ್ನು ಅನುಸರಿಸುವವರಲ್ಲಿ ದೋಷಹುಡುಕಿ, ನೀನು ಅವುಗಳನ್ನೇ ಮಾಡುತ್ತಿರುವಲ್ಲಿ ದೇವರ ದಂಡನೆಯ ತೀರ್ಪನ್ನು ತಪ್ಪಿಸಿಕೊಂಡೇನೆಂದು ಯೋಚಿಸುತ್ತೀಯೋ?
ಅತಏವ ಹೇ ಮಾನುಷ ತ್ವಂ ಯಾದೃಗಾಚಾರಿಣೋ ದೂಷಯಸಿ ಸ್ವಯಂ ಯದಿ ತಾದೃಗಾಚರಸಿ ತರ್ಹಿ ತ್ವಮ್ ಈಶ್ವರದಣ್ಡಾತ್ ಪಲಾಯಿತುಂ ಶಕ್ಷ್ಯಸೀತಿ ಕಿಂ ಬುಧ್ಯಸೇ?
4 ೪ ಅಥವಾ ಆತನ ಅಪಾರವಾದ ದಯೆ, ಸಹನೆ, ದೀರ್ಘಶಾಂತಿಗಳನ್ನು ಕೇವಲವಾಗಿ ಯೋಚಿಸಿ, ನಿನ್ನ ಮನಸ್ಸು ಮಾರ್ಪಡಿಸಿಕೊಳ್ಳುವಂತೆ ಪ್ರೆರೇಪಿಸುವ ದೇವರ ಒಳ್ಳೆತನದ ಅರಿವು ನಿನಗಿಲ್ಲವೋ?
ಅಪರಂ ತವ ಮನಸಃ ಪರಿವರ್ತ್ತನಂ ಕರ್ತ್ತುಮ್ ಇಶ್ವರಸ್ಯಾನುಗ್ರಹೋ ಭವತಿ ತನ್ನ ಬುದ್ಧ್ವಾ ತ್ವಂ ಕಿಂ ತದೀಯಾನುಗ್ರಹಕ್ಷಮಾಚಿರಸಹಿಷ್ಣುತ್ವನಿಧಿಂ ತುಚ್ಛೀಕರೋಷಿ?
5 ೫ ನೀನು ನಿನ್ನ ಮೊಂಡತನವನ್ನೂ, ಪಶ್ಚಾತ್ತಾಪವಿಲ್ಲದ ಮನಸ್ಸನ್ನೂ ಅನುಸರಿಸಿ ನ್ಯಾಯತೀರ್ಪಿನ ದಿನದವರೆಗೂ ನಿನಗಾಗಿ ದೇವರ ಕೋಪವನ್ನು ಸಂಗ್ರಹಿಸಿಕೊಳ್ಳುತ್ತಾ ಇದ್ದೀ.
ತಥಾ ಸ್ವಾನ್ತಃಕರಣಸ್ಯ ಕಠೋರತ್ವಾತ್ ಖೇದರಾಹಿತ್ಯಾಚ್ಚೇಶ್ವರಸ್ಯ ನ್ಯಾಯ್ಯವಿಚಾರಪ್ರಕಾಶನಸ್ಯ ಕ್ರೋಧಸ್ಯ ಚ ದಿನಂ ಯಾವತ್ ಕಿಂ ಸ್ವಾರ್ಥಂ ಕೋಪಂ ಸಞ್ಚಿನೋಷಿ?
6 ೬ ದೇವರು ಪ್ರತಿಯೊಬ್ಬರಿಗೆ ಅವರವರ ಕೃತ್ಯಗಳಿಗೆ ತಕ್ಕ ಪ್ರತಿಫಲವನ್ನು ಕೊಡುವನು,
ಕಿನ್ತು ಸ ಏಕೈಕಮನುಜಾಯ ತತ್ಕರ್ಮ್ಮಾನುಸಾರೇಣ ಪ್ರತಿಫಲಂ ದಾಸ್ಯತಿ;
7 ೭ ಯಾರು ಪ್ರಶಂಸೆ, ಗೌರವ, ಮತ್ತು ಭ್ರಷ್ಟರಹಿತ ಜೀವನ ಹೊಂದಬೇಕೆಂದು ಒಳ್ಳೆಯದನ್ನು ಬೇಸರಗೊಳ್ಳದೆ ಮಾಡುತ್ತಾರೋ, ಅವರಿಗೆ ನಿತ್ಯಜೀವವನ್ನು ಕೊಡುವನು. (aiōnios )
ವಸ್ತುತಸ್ತು ಯೇ ಜನಾ ಧೈರ್ಯ್ಯಂ ಧೃತ್ವಾ ಸತ್ಕರ್ಮ್ಮ ಕುರ್ವ್ವನ್ತೋ ಮಹಿಮಾ ಸತ್ಕಾರೋಽಮರತ್ವಞ್ಚೈತಾನಿ ಮೃಗಯನ್ತೇ ತೇಭ್ಯೋಽನನ್ತಾಯು ರ್ದಾಸ್ಯತಿ| (aiōnios )
8 ೮ ಯಾರು ಸ್ವಾರ್ಥಸಾಧಕರಾಗಿದ್ದು, ಸತ್ಯವನ್ನು ಅನುಸರಿಸದೆ ಅನ್ಯಾಯವನ್ನು ಅನುಸರಿಸುತ್ತಾರೋ, ಅವರ ಮೇಲೆ ದೇವರ ಕೋಪ ಮತ್ತು ರೌದ್ರಗಳು ಬರುವವು.
ಅಪರಂ ಯೇ ಜನಾಃ ಸತ್ಯಧರ್ಮ್ಮಮ್ ಅಗೃಹೀತ್ವಾ ವಿಪರೀತಧರ್ಮ್ಮಮ್ ಗೃಹ್ಲನ್ತಿ ತಾದೃಶಾ ವಿರೋಧಿಜನಾಃ ಕೋಪಂ ಕ್ರೋಧಞ್ಚ ಭೋಕ್ಷ್ಯನ್ತೇ|
9 ೯ ಯೆಹೂದ್ಯರಿಗೆ ಮೊದಲು ಅನಂತರ ಗ್ರೀಕರಿಗೆ, ಕೆಟ್ಟದ್ದನ್ನು ಅನುಸರಿಸುವ ಪ್ರತಿಯೊಬ್ಬ ಮನುಷ್ಯನ ಮೇಲೂ ಸಂಕಟವೂ, ಯಾತನೆಯೂ ಬರುವವು.
ಆ ಯಿಹೂದಿನೋಽನ್ಯದೇಶಿನಃ ಪರ್ಯ್ಯನ್ತಂ ಯಾವನ್ತಃ ಕುಕರ್ಮ್ಮಕಾರಿಣಃ ಪ್ರಾಣಿನಃ ಸನ್ತಿ ತೇ ಸರ್ವ್ವೇ ದುಃಖಂ ಯಾತನಾಞ್ಚ ಗಮಿಷ್ಯನ್ತಿ;
10 ೧೦ ಯೆಹೂದ್ಯರಿಗೆ ಮೊದಲು, ಅನಂತರ ಗ್ರೀಕರಿಗೆ, ಒಳ್ಳೆಯದನ್ನು ಅನುಸರಿಸುವ ಪ್ರತಿಯೊಬ್ಬನಿಗೆ ಗೌರವವೂ, ಮಾನವೂ, ಮನಶಾಂತಿಯೂ ಉಂಟಾಗುವವು.
ಕಿನ್ತು ಆ ಯಿಹೂದಿನೋ ಭಿನ್ನದೇಶಿಪರ್ಯ್ಯನ್ತಾ ಯಾವನ್ತಃ ಸತ್ಕರ್ಮ್ಮಕಾರಿಣೋ ಲೋಕಾಃ ಸನ್ತಿ ತಾನ್ ಪ್ರತಿ ಮಹಿಮಾ ಸತ್ಕಾರಃ ಶಾನ್ತಿಶ್ಚ ಭವಿಷ್ಯನ್ತಿ|
11 ೧೧ ದೇವರಲ್ಲಿ ಪಕ್ಷಪಾತವಿಲ್ಲ.
ಈಶ್ವರಸ್ಯ ವಿಚಾರೇ ಪಕ್ಷಪಾತೋ ನಾಸ್ತಿ|
12 ೧೨ ಧರ್ಮಶಾಸ್ತ್ರವಿಲ್ಲದೆ ಪಾಪಮಾಡಿದವರು ಧರ್ಮಶಾಸ್ತ್ರವಿಲ್ಲದವರಾಗಿ ನಾಶಹೊಂದುವರು; ಮತ್ತು ಧರ್ಮಶಾಸ್ತ್ರಕ್ಕನುಸಾರವಾಗಿದ್ದು ಪಾಪಮಾಡಿದವರು ಧರ್ಮಶಾಸ್ತ್ರಕ್ಕನುಸಾರವಾಗಿ ತೀರ್ಪನ್ನು ಹೊಂದುವರು.
ಅಲಬ್ಧವ್ಯವಸ್ಥಾಶಾಸ್ತ್ರೈ ರ್ಯೈಃ ಪಾಪಾನಿ ಕೃತಾನಿ ವ್ಯವಸ್ಥಾಶಾಸ್ತ್ರಾಲಬ್ಧತ್ವಾನುರೂಪಸ್ತೇಷಾಂ ವಿನಾಶೋ ಭವಿಷ್ಯತಿ; ಕಿನ್ತು ಲಬ್ಧವ್ಯವಸ್ಥಾಶಾಸ್ತ್ರಾ ಯೇ ಪಾಪಾನ್ಯಕುರ್ವ್ವನ್ ವ್ಯವಸ್ಥಾನುಸಾರಾದೇವ ತೇಷಾಂ ವಿಚಾರೋ ಭವಿಷ್ಯತಿ|
13 ೧೩ ಧರ್ಮಶಾಸ್ತ್ರವನ್ನು ಕೇಳಿದ ಮಾತ್ರದಿಂದಲೇ ಯಾರೂ ದೇವರ ಸನ್ನಿಧಿಯಲ್ಲಿ ನೀತಿವಂತರಾಗುವುದಿಲ್ಲ; ಅದನ್ನು ಅನುಸರಿಸುವವರೇ ನೀತಿವಂತರೆಂದು ನಿರ್ಣಯಿಸಲ್ಪಡುವರು.
ವ್ಯವಸ್ಥಾಶ್ರೋತಾರ ಈಶ್ವರಸ್ಯ ಸಮೀಪೇ ನಿಷ್ಪಾಪಾ ಭವಿಷ್ಯನ್ತೀತಿ ನಹಿ ಕಿನ್ತು ವ್ಯವಸ್ಥಾಚಾರಿಣ ಏವ ಸಪುಣ್ಯಾ ಭವಿಷ್ಯನ್ತಿ|
14 ೧೪ ಧರ್ಮಶಾಸ್ತ್ರವಿಲ್ಲದ ಅನ್ಯಜನರು ಸ್ವಾಭಾವಿಕವಾಗಿ ಧರ್ಮಶಾಸ್ತ್ರದಲ್ಲಿ ಹೇಳಿದಂತೆ ನಡೆದುಕೊಂಡರೆ ಅವರು ಧರ್ಮಶಾಸ್ತ್ರವಿಲ್ಲದವರಾಗಿದ್ದರೂ, ತಮಗೆ ತಾವೇ ಧರ್ಮಶಾಸ್ತ್ರವಾಗಿದ್ದಾರೆ.
ಯತೋ ಽಲಬ್ಧವ್ಯವಸ್ಥಾಶಾಸ್ತ್ರಾ ಭಿನ್ನದೇಶೀಯಲೋಕಾ ಯದಿ ಸ್ವಭಾವತೋ ವ್ಯವಸ್ಥಾನುರೂಪಾನ್ ಆಚಾರಾನ್ ಕುರ್ವ್ವನ್ತಿ ತರ್ಹ್ಯಲಬ್ಧಶಾಸ್ತ್ರಾಃ ಸನ್ತೋಽಪಿ ತೇ ಸ್ವೇಷಾಂ ವ್ಯವಸ್ಥಾಶಾಸ್ತ್ರಮಿವ ಸ್ವಯಮೇವ ಭವನ್ತಿ|
15 ೧೫ ಇದರಿಂದ ಅವರು ಧರ್ಮಶಾಸ್ತ್ರದ ಮುಖ್ಯ ತಾತ್ಪರ್ಯ ತಮ್ಮ ಹೃದಯದಲ್ಲಿ ಬರೆದಿದೆ ಎಂಬುದನ್ನು ತೋರ್ಪಡಿಸುತ್ತಾರೆ. ಇದಕ್ಕೆ ಅವರ ಮನಸ್ಸು ಸಹ ಸಾಕ್ಷಿ ನುಡಿಯುತ್ತದೆ; ಅವರ ಆಲೋಚನೆಗಳು ವಾದಿಪ್ರತಿವಾದಿಗಳಂತೆ, ಇದು ತಪ್ಪೆಂದು ಅದು ತಪ್ಪಲ್ಲವೆಂದು ಹೇಳುತ್ತದೆ.
ತೇಷಾಂ ಮನಸಿ ಸಾಕ್ಷಿಸ್ವರೂಪೇ ಸತಿ ತೇಷಾಂ ವಿತರ್ಕೇಷು ಚ ಕದಾ ತಾನ್ ದೋಷಿಣಃ ಕದಾ ವಾ ನಿರ್ದೋಷಾನ್ ಕೃತವತ್ಸು ತೇ ಸ್ವಾನ್ತರ್ಲಿಖಿತಸ್ಯ ವ್ಯವಸ್ಥಾಶಾಸ್ತ್ರಸ್ಯ ಪ್ರಮಾಣಂ ಸ್ವಯಮೇವ ದದತಿ|
16 ೧೬ ನಾನು ಸಾರುವ ಸುವಾರ್ತೆಯಲ್ಲಿ ಬೋಧಿಸಿರುವ ಪ್ರಕಾರ ದೇವರು ಯೇಸು ಕ್ರಿಸ್ತನ ಮೂಲಕವಾಗಿ ಮನುಷ್ಯರ ಗುಟ್ಟುಗಳನ್ನು ಹಿಡಿದು ವಿಚಾರಿಸುವ ದಿನದಂದು ಸೂಚಿಸುತ್ತದೆ. ಆ ದಿನದಲ್ಲಿ ಇದೆಲ್ಲಾ ತಿಳಿದು ಬರುವುದು.
ಯಸ್ಮಿನ್ ದಿನೇ ಮಯಾ ಪ್ರಕಾಶಿತಸ್ಯ ಸುಸಂವಾದಸ್ಯಾನುಸಾರಾದ್ ಈಶ್ವರೋ ಯೀಶುಖ್ರೀಷ್ಟೇನ ಮಾನುಷಾಣಾಮ್ ಅನ್ತಃಕರಣಾನಾಂ ಗೂಢಾಭಿಪ್ರಾಯಾನ್ ಧೃತ್ವಾ ವಿಚಾರಯಿಷ್ಯತಿ ತಸ್ಮಿನ್ ವಿಚಾರದಿನೇ ತತ್ ಪ್ರಕಾಶಿಷ್ಯತೇ|
17 ೧೭ ನೀನು ಯೆಹೂದ್ಯನೆನಸಿಕೊಂಡು, ಧರ್ಮಶಾಸ್ತ್ರದಲ್ಲಿ ಭರವಸವಿಟ್ಟು, ದೇವರಲ್ಲಿ ಹೆಮ್ಮೆಯಿಂದ ಸಂತೋಷಿಸಿ,
ಪಶ್ಯ ತ್ವಂ ಸ್ವಯಂ ಯಿಹೂದೀತಿ ವಿಖ್ಯಾತೋ ವ್ಯವಸ್ಥೋಪರಿ ವಿಶ್ವಾಸಂ ಕರೋಷಿ,
18 ೧೮ ಧರ್ಮಶಾಸ್ತ್ರದಿಂದ ಉಪದೇಶವನ್ನು ಹೊಂದಿ, ಆತನ ಚಿತ್ತವನ್ನು ಬಲ್ಲವನೂ, ಇದು ತಕ್ಕದ್ದು ಅದು ತಕ್ಕದ್ದಲ್ಲವೆಂದು ವಿವೇಚಿಸುವವನೂ ಆಗಿದ್ದೀಯೆ.
ಈಶ್ವರಮುದ್ದಿಶ್ಯ ಸ್ವಂ ಶ್ಲಾಘಸೇ, ತಥಾ ವ್ಯವಸ್ಥಯಾ ಶಿಕ್ಷಿತೋ ಭೂತ್ವಾ ತಸ್ಯಾಭಿಮತಂ ಜಾನಾಸಿ, ಸರ್ವ್ವಾಸಾಂ ಕಥಾನಾಂ ಸಾರಂ ವಿವಿಂಕ್ಷೇ,
19 ೧೯ ಧರ್ಮಶಾಸ್ತ್ರದಲ್ಲಿ ಜ್ಞಾನಸತ್ಯಗಳ ಸ್ವರೂಪವೇ ನಿನಗೆ ತಿಳಿದಿರುವುದರಿಂದ ಕುರುಡರಿಗೆ ದಾರಿತೋರಿಸುವವನೂ, ಕತ್ತಲೆಯಲ್ಲಿರುವವರಿಗೆ ಬೆಳಕೂ,
ಅಪರಂ ಜ್ಞಾನಸ್ಯ ಸತ್ಯತಾಯಾಶ್ಚಾಕರಸ್ವರೂಪಂ ಶಾಸ್ತ್ರಂ ಮಮ ಸಮೀಪೇ ವಿದ್ಯತ ಅತೋ ಽನ್ಧಲೋಕಾನಾಂ ಮಾರ್ಗದರ್ಶಯಿತಾ
20 ೨೦ ತಿಳಿವಳಿಕೆಯಿಲ್ಲದವರಿಗೆ ಶಿಕ್ಷಕನೂ, ಬಾಲಕರಿಗೆ ಉಪಾಧ್ಯಾಯನೂ, ಆಗಿದ್ದೇನೆಂದು ನಂಬಿಕೊಂಡಿದ್ದಿಯೇ,
ತಿಮಿರಸ್ಥಿತಲೋಕಾನಾಂ ಮಧ್ಯೇ ದೀಪ್ತಿಸ್ವರೂಪೋಽಜ್ಞಾನಲೋಕೇಭ್ಯೋ ಜ್ಞಾನದಾತಾ ಶಿಶೂನಾಂ ಶಿಕ್ಷಯಿತಾಹಮೇವೇತಿ ಮನ್ಯಸೇ|
21 ೨೧ ಮತ್ತೊಬ್ಬನಿಗೆ ಉಪದೇಶ ಮಾಡುವ ನಿನಗೆ ನೀನೇ ಉಪದೇಶಮಾಡಿಕೊಳ್ಳದೆ ಇದ್ದೀಯೋ? ಕದಿಯಬಾರದೆಂದು ಬೋಧಿಸುವ ನೀನೇ ಕಳ್ಳತನ ಮಾಡುತ್ತಿಯೇನು?
ಪರಾನ್ ಶಿಕ್ಷಯನ್ ಸ್ವಯಂ ಸ್ವಂ ಕಿಂ ನ ಶಿಕ್ಷಯಸಿ? ವಸ್ತುತಶ್ಚೌರ್ಯ್ಯನಿಷೇಧವ್ಯವಸ್ಥಾಂ ಪ್ರಚಾರಯನ್ ತ್ವಂ ಕಿಂ ಸ್ವಯಮೇವ ಚೋರಯಸಿ?
22 ೨೨ ಹಾದರ ಮಾಡಬಾರದೆಂದು ಹೇಳುವ ನೀನೇ ವ್ಯಭಿಚಾರ ಮಾಡುತ್ತೀಯೋ? ವಿಗ್ರಹಗಳನ್ನು ವಿರೋಧಿಸುವ ನೀನು ದೇವಾಲಯವನ್ನೇ ದೋಚುತ್ತಿಯೇನು?
ತಥಾ ಪರದಾರಗಮನಂ ಪ್ರತಿಷೇಧನ್ ಸ್ವಯಂ ಕಿಂ ಪರದಾರಾನ್ ಗಚ್ಛಸಿ? ತಥಾ ತ್ವಂ ಸ್ವಯಂ ಪ್ರತಿಮಾದ್ವೇಷೀ ಸನ್ ಕಿಂ ಮನ್ದಿರಸ್ಯ ದ್ರವ್ಯಾಣಿ ಹರಸಿ?
23 ೨೩ ಧರ್ಮಶಾಸ್ತ್ರದಲ್ಲಿ ಹೆಮ್ಮೆಯಿಂದ ಹೆಚ್ಚಳಪಡುವ ನೀನು ಧರ್ಮಶಾಸ್ತ್ರವನ್ನು ಮೀರಿ ನಡೆದು ದೇವರನ್ನು ಅವಮಾನಪಡಿಸುತ್ತೀಯೋ?
ಯಸ್ತ್ವಂ ವ್ಯವಸ್ಥಾಂ ಶ್ಲಾಘಸೇ ಸ ತ್ವಂ ಕಿಂ ವ್ಯವಸ್ಥಾಮ್ ಅವಮತ್ಯ ನೇಶ್ವರಂ ಸಮ್ಮನ್ಯಸೇ?
24 ೨೪ “ನಿಮ್ಮ ದೆಸೆಯಿಂದ ಅನ್ಯಜನರ ಮಧ್ಯದಲ್ಲಿ ದೇವರ ನಾಮವು ದೂಷಣೆಗೆ ಗುರಿಯಾಗುತ್ತಿದೆಂದು” ಬರೆದಿದೆಯಲ್ಲಾ.
ಶಾಸ್ತ್ರೇ ಯಥಾ ಲಿಖತಿ "ಭಿನ್ನದೇಶಿನಾಂ ಸಮೀಪೇ ಯುಷ್ಮಾಕಂ ದೋಷಾದ್ ಈಶ್ವರಸ್ಯ ನಾಮ್ನೋ ನಿನ್ದಾ ಭವತಿ| "
25 ೨೫ ನೀನು ಧರ್ಮಶಾಸ್ತ್ರಕ್ಕನುಸಾರವಾಗಿ ನಡೆಯುವವನಾದರೆ ಸುನ್ನತಿಯೆಂಬ ಸಂಸ್ಕಾರವು ನಿನಗೆ ಪ್ರಯೋಜನಕರವಾಗಿದೆ; ಆದರೆ ನೀನು ಧರ್ಮಶಾಸ್ತ್ರವನ್ನು ಮೀರಿ ನಡೆಯುವವನಾಗಿದ್ದರೆ ನಿನಗೆ ಸುನ್ನತಿಯಿದ್ದರೂ ಇಲ್ಲದಂತಾಯಿತು.
ಯದಿ ವ್ಯವಸ್ಥಾಂ ಪಾಲಯಸಿ ತರ್ಹಿ ತವ ತ್ವಕ್ಛೇದಕ್ರಿಯಾ ಸಫಲಾ ಭವತಿ; ಯತಿ ವ್ಯವಸ್ಥಾಂ ಲಙ್ಘಸೇ ತರ್ಹಿ ತವ ತ್ವಕ್ಛೇದೋಽತ್ವಕ್ಛೇದೋ ಭವಿಷ್ಯತಿ|
26 ೨೬ ಹೀಗಿರಲಾಗಿ ಸುನ್ನತಿಯಿಲ್ಲದವನು ಧರ್ಮಶಾಸ್ತ್ರದ ನೇಮಗಳ ಪ್ರಕಾರ ನಡೆದರೆ ಸುನ್ನತಿಯಿಲ್ಲದವನಾಗಿದ್ದರೂ ಸುನ್ನತಿಯಿದ್ದವನಂತೆ ಎಣಿಸಲ್ಪಡುವುದಿಲ್ಲವೇ?
ಯತೋ ವ್ಯವಸ್ಥಾಶಾಸ್ತ್ರಾದಿಷ್ಟಧರ್ಮ್ಮಕರ್ಮ್ಮಾಚಾರೀ ಪುಮಾನ್ ಅತ್ವಕ್ಛೇದೀ ಸನ್ನಪಿ ಕಿಂ ತ್ವಕ್ಛೇದಿನಾಂ ಮಧ್ಯೇ ನ ಗಣಯಿಷ್ಯತೇ?
27 ೨೭ ನೀವು ಸುನ್ನತಿ ಮಾಡಿಸಿಕೊಂಡಿದ್ದಿರಿ; ಧರ್ಮಶಾಸ್ತ್ರವನ್ನು ಇಟ್ಟುಕೊಂಡಿದ್ದೀರಿ; ಆದರೂ ಅದನ್ನು ಮೀರಿ ನಡೆಯುತ್ತೀರಿ. ಹೀಗಿರಲಾಗಿ, ಶಾರೀರಿಕವಾಗಿ ಸುನ್ನತಿಯನ್ನು ಮಾಡಿಸಿಕೊಳ್ಳದಿದ್ದರೂ ಸ್ವಾಭಾವಿಕವಾಗಿ ಧರ್ಮಶಾಸ್ತ್ರವನ್ನು ಅನುಸರಿಸಿ ನಡೆಯುವವರು ಸುನ್ನತಿ ಮಾಡಿಸಿಕೊಂಡಿರುವ ನಿಮಗೆ ತೀರ್ಪುಕೊಡುತ್ತಾರೆ.
ಕಿನ್ತು ಲಬ್ಧಶಾಸ್ತ್ರಶ್ಛಿನ್ನತ್ವಕ್ ಚ ತ್ವಂ ಯದಿ ವ್ಯವಸ್ಥಾಲಙ್ಘನಂ ಕರೋಷಿ ತರ್ಹಿ ವ್ಯವಸ್ಥಾಪಾಲಕಾಃ ಸ್ವಾಭಾವಿಕಾಚ್ಛಿನ್ನತ್ವಚೋ ಲೋಕಾಸ್ತ್ವಾಂ ಕಿಂ ನ ದೂಷಯಿಷ್ಯನ್ತಿ?
28 ೨೮ ಹೊರಗೆ ಮಾತ್ರ ಯೆಹೂದ್ಯನಾಗಿರುವವನು ಯೆಹೂದ್ಯನಲ್ಲ; ಮತ್ತು ಹೊರಗೆ ಶರೀರದಲ್ಲಿ ಮಾತ್ರ ಮಾಡಿರುವ ಸುನ್ನತಿಯು ಸುನ್ನತಿಯಲ್ಲ.
ತಸ್ಮಾದ್ ಯೋ ಬಾಹ್ಯೇ ಯಿಹೂದೀ ಸ ಯಿಹೂದೀ ನಹಿ ತಥಾಙ್ಗಸ್ಯ ಯಸ್ತ್ವಕ್ಛೇದಃ ಸ ತ್ವಕ್ಛೇದೋ ನಹಿ;
29 ೨೯ ಆದರೆ ಆಂತರಿಕವಾಗಿ ಯೆಹೂದ್ಯನಾಗಿರುವವನೇ ಯೆಹೂದ್ಯನು; ಮತ್ತು ಸುನ್ನತಿಯನ್ನು ಹೃದಯದಲ್ಲಿ ಹೊಂದಿರುವವನೇ ಸುನ್ನತಿಯುಳ್ಳವನು. ಇದು ಬಾಹ್ಯಾಚಾರಕ್ಕೆ ಸಂಬಂಧಪಟ್ಟದ್ದಲ್ಲ, ಆತ್ಮಸಂಬಂಧಪಟ್ಟದ್ದೇ; ಇಂಥ ಮನುಷ್ಯನಿಗೆ ಬರುವ ಪ್ರಶಂಸೆಯು, ದೇವರಿಂದಲೇ ಹೊರತು ಮನುಷ್ಯರಿಂದ ಬರುವುದಿಲ್ಲ.
ಕಿನ್ತು ಯೋ ಜನ ಆನ್ತರಿಕೋ ಯಿಹೂದೀ ಸ ಏವ ಯಿಹೂದೀ ಅಪರಞ್ಚ ಕೇವಲಲಿಖಿತಯಾ ವ್ಯವಸ್ಥಯಾ ನ ಕಿನ್ತು ಮಾನಸಿಕೋ ಯಸ್ತ್ವಕ್ಛೇದೋ ಯಸ್ಯ ಚ ಪ್ರಶಂಸಾ ಮನುಷ್ಯೇಭ್ಯೋ ನ ಭೂತ್ವಾ ಈಶ್ವರಾದ್ ಭವತಿ ಸ ಏವ ತ್ವಕ್ಛೇದಃ|