< ಮತ್ತಾಯನು 26 >
1 ೧ ಯೇಸು ಈ ಮಾತುಗಳನ್ನೆಲ್ಲಾ ಹೇಳಿ ಮುಗಿಸಿದ ನಂತರ ತನ್ನ ಶಿಷ್ಯರಿಗೆ, “ಎರಡು ದಿನಗಳಾದ ಮೇಲೆ ಪಸ್ಕಹಬ್ಬ ಬರುತ್ತದೆಂದು ನೀವು ಬಲ್ಲಿರಿ;
యీశురేతాన్ ప్రస్తావాన్ సమాప్య శిష్యానూచే,
2 ೨ ಆಗ ಮನುಷ್ಯಕುಮಾರನನ್ನು ಶಿಲುಬೆಗೆ ಹಾಕುವುದಕ್ಕೆ ಒಪ್ಪಿಸಿ ಕೊಡಲಾಗುವುದು” ಎಂದು ಹೇಳಿದನು.
యుష్మాభి ర్జ్ఞాతం దినద్వయాత్ పరం నిస్తారమహ ఉపస్థాస్యతి, తత్ర మనుజసుతః క్రుశేన హన్తుం పరకరేషు సమర్పిష్యతే|
3 ೩ ಆ ಕಾಲದಲ್ಲಿ ಮುಖ್ಯಯಾಜಕರೂ, ಜನರ ಹಿರಿಯರೂ ಕಾಯಫನೆಂಬ ಮಹಾಯಾಜಕನ ಭವನದಲ್ಲಿ ಕೂಡಿಬಂದು
తతః పరం ప్రధానయాజకాధ్యాపకప్రాఞ్చః కియఫానామ్నో మహాయాజకస్యాట్టాలికాయాం మిలిత్వా
4 ೪ ಯೇಸುವನ್ನು ಗುಟ್ಟಾಗಿ ಹಿಡಿದು ಕೊಲ್ಲಬೇಕೆಂಬುದಾಗಿ ಒಳಸಂಚು ಮಾಡಿದರು.
కేనోపాయేన యీశుం ధృత్వా హన్తుం శక్నుయురితి మన్త్రయాఞ్చక్రుః|
5 ೫ “ಆದರೂ ಹಬ್ಬದಲ್ಲಿ ಹಿಡಿಯಬಾರದು, ನಮ್ಮ ಜನರಲ್ಲಿ ಗದ್ದಲವಾದೀತು” ಎಂದು ಮಾತನಾಡಿಕೊಂಡರು.
కిన్తు తైరుక్తం మహకాలే న ధర్త్తవ్యః, ధృతే ప్రజానాం కలహేన భవితుం శక్యతే|
6 ೬ ಯೇಸು ಬೇಥಾನ್ಯದಲ್ಲಿ ಸೀಮೋನನೆಂಬ ಕುಷ್ಠರೋಗಿಯ ಮನೆಯಲ್ಲಿ ಊಟಕ್ಕೆ ಕುಳಿತಿರುವಾಗ ಒಬ್ಬ ಸ್ತ್ರೀಯು
తతో బైథనియాపురే శిమోనాఖ్యస్య కుష్ఠినో వేశ్మని యీశౌ తిష్ఠతి
7 ೭ ಬಹು ಬೆಲೆಯುಳ್ಳ ಸುಗಂಧತೈಲದ ಭರಣಿಯನ್ನು ತೆಗೆದುಕೊಂಡು ಆತನ ಬಳಿಗೆ ಬಂದು ಆ ತೈಲವನ್ನು ಆತನ ತಲೆಯ ಮೇಲೆ ಸುರಿದಳು.
కాచన యోషా శ్వేతోపలభాజనేన మహార్ఘ్యం సుగన్ధి తైలమానీయ భోజనాయోపవిశతస్తస్య శిరోభ్యషేచత్|
8 ೮ ಶಿಷ್ಯರು ಇದನ್ನು ಕಂಡು ಕೋಪಗೊಂಡು, “ಹೀಗೆ ವ್ಯರ್ಥವಾಗಿ ಖರ್ಚುಮಾಡುವುದೇಕೆ?
కిన్తు తదాలోక్య తచ్ఛిష్యైః కుపితైరుక్తం, కుత ఇత్థమపవ్యయతే?
9 ೯ ಈ ತೈಲವನ್ನು ಬಹಳ ಹಣಕ್ಕೆ ಮಾರಿ ಬಡವರಿಗೆ ಕೊಡಬಹುದಾಗಿತ್ತಲ್ಲಾ” ಅಂದರು.
చేదిదం వ్యక్రేష్యత, తర్హి భూరిమూల్యం ప్రాప్య దరిద్రేభ్యో వ్యతారిష్యత|
10 ೧೦ ಯೇಸು ಅದನ್ನು ತಿಳಿದು ಅವರಿಗೆ, “ಈ ಸ್ತ್ರೀಗೆ ಏಕೆ ತೊಂದರೆ ಕೊಡುತ್ತಿದ್ದೀರಿ? ಈಕೆ ನನಗೆ ಒಳ್ಳೆಯ ಕಾರ್ಯವನ್ನು ಮಾಡಿದ್ದಾಳೆ.
యీశునా తదవగత్య తే సముదితాః, యోషామేనాం కుతో దుఃఖినీం కురుథ, సా మాం ప్రతి సాధు కర్మ్మాకార్షీత్|
11 ೧೧ ಬಡವರು ಯಾವಾಗಲೂ ನಿಮ್ಮೊಂದಿಗೆ ಇರುತ್ತಾರಲ್ಲಾ, ಆದರೆ ನಾನು ನಿಮ್ಮೊಂದಿಗೆ ಯಾವಾಗಲೂ ಇರುವುದಿಲ್ಲ.
యుష్మాకమం సమీపే దరిద్రాః సతతమేవాసతే, కిన్తు యుష్మాకమన్తికేహం నాసే సతతం|
12 ೧೨ ಈಕೆಯು ಈ ತೈಲವನ್ನು ನನ್ನ ದೇಹದ ಮೇಲೆ ಸುರಿದದ್ದು ನನ್ನ ಉತ್ತರಕ್ರಿಯೆಗಾಗಿಯೇ.
సా మమ కాయోపరి సుగన్ధితైలం సిక్త్వా మమ శ్మశానదానకర్మ్మాకార్షీత్|
13 ೧೩ ನಾನು ನಿಮಗೆ ಸತ್ಯವಾಗಿ ಹೇಳುತ್ತೇನೆ, ಈ ಸುವಾರ್ತೆಯು ಸರ್ವಲೋಕದಲ್ಲಿ ಎಲ್ಲೆಲ್ಲಿ ಸಾರಲಾಗುವುದೋ ಅಲ್ಲೆಲ್ಲಾ ಈ ಸ್ತ್ರೀ ಮಾಡಿದ್ದನ್ನು ಸಹ ಈಕೆಯ ನೆನಪಿಗಾಗಿ” ಹೇಳುವರು.
అతోహం యుష్మాన్ తథ్యం వదామి సర్వ్వస్మిన్ జగతి యత్ర యత్రైష సుసమాచారః ప్రచారిష్యతే, తత్ర తత్రైతస్యా నార్య్యాః స్మరణార్థమ్ కర్మ్మేదం ప్రచారిష్యతే|
14 ೧೪ ಆ ಮೇಲೆ ಹನ್ನೆರಡು ಮಂದಿ ಶಿಷ್ಯರಲ್ಲಿ ಒಬ್ಬನಾದ ಇಸ್ಕರಿಯೋತ ಯೂದನೆಂಬುವವನು ಮುಖ್ಯಯಾಜಕರ ಬಳಿಗೆ ಹೋಗಿ,
తతో ద్వాదశశిష్యాణామ్ ఈష్కరియోతీయయిహూదానామక ఏకః శిష్యః ప్రధానయాజకానామన్తికం గత్వా కథితవాన్,
15 ೧೫ “ನಾನು ಆತನನ್ನು ಹಿಡಿಯಲು ನಿಮಗೆ ಸಹಾಯಮಾಡಿದರೆ ನನಗೆ ಏನು ಕೊಡುತ್ತೀರಿ?” ಅಂದನು. ಅವರು ಅವನಿಗೆ ಮೂವತ್ತು ಬೆಳ್ಳಿನಾಣ್ಯಗಳನ್ನು ತೂಗಿ ಕೊಟ್ಟರು.
యది యుష్మాకం కరేషు యీశుం సమర్పయామి, తర్హి కిం దాస్యథ? తదానీం తే తస్మై త్రింశన్ముద్రా దాతుం స్థిరీకృతవన్తః|
16 ೧೬ ಅಂದಿನಿಂದ ಅವನು ಆತನನ್ನು ಹಿಡಿದುಕೊಡುವುದಕ್ಕಾಗಿ ಸಂದರ್ಭ ಹುಡುಕುತ್ತಿದ್ದನು.
స తదారభ్య తం పరకరేషు సమర్పయితుం సుయోగం చేష్టితవాన్|
17 ೧೭ ಹುಳಿಯಿಲ್ಲದ ರೊಟ್ಟಿಯ ಹಬ್ಬದ ಮೊದಲನೆಯ ದಿನದಲ್ಲಿ ಶಿಷ್ಯರು ಯೇಸುವಿನ ಬಳಿಗೆ ಬಂದು, “ಪಸ್ಕದ ಊಟಮಾಡುವುದಕ್ಕೆ ನಾವು ನಿನಗೆ ಎಲ್ಲಿ ಸಿದ್ಧಮಾಡಬೇಕನ್ನುತ್ತೀ” ಎಂದು ಕೇಳಿದರು.
అనన్తరం కిణ్వశూన్యపూపపర్వ్వణః ప్రథమేహ్ని శిష్యా యీశుమ్ ఉపగత్య పప్రచ్ఛుః భవత్కృతే కుత్ర వయం నిస్తారమహభోజ్యమ్ ఆయోజయిష్యామః? భవతః కేచ్ఛా?
18 ೧೮ ಆತನು, “ನೀವು ಪಟ್ಟಣದೊಳಕ್ಕೆ ನಾನು ಸೂಚಿಸಿದವನ ಬಳಿಗೆ ಹೋಗಿ ಅವನಿಗೆ, ‘ನನ್ನ ಕಾಲ ಸಮೀಪವಾಯಿತು, ನಾನು ನಿನ್ನ ಮನೆಯಲ್ಲಿ ನನ್ನ ಶಿಷ್ಯರ ಸಂಗಡ ಪಸ್ಕಹಬ್ಬ ಮಾಡುತ್ತೇನೆ’ ಎಂಬುದಾಗಿ ಗುರುವು ಹೇಳುತ್ತಿದ್ದಾನೆ ಎಂದು ಹೇಳಿರಿ” ಅಂದನು.
తదా స గదితవాన్, మధ్యేనగరమముకపుంసః సమీపం వ్రజిత్వా వదత, గురు ర్గదితవాన్, మత్కాలః సవిధః, సహ శిష్యైస్త్వదాలయే నిస్తారమహభోజ్యం భోక్ష్యే|
19 ೧೯ ಶಿಷ್ಯರು ಯೇಸು ತಮಗೆ ಅಪ್ಪಣೆಕೊಟ್ಟಂತೆಯೇ ಮಾಡಿ ಪಸ್ಕದ ಭೋಜನವನ್ನು ತಯಾರಿಸಿದರು.
తదా శిష్యా యీశోస్తాదృశనిదేశానురూపకర్మ్మ విధాయ తత్ర నిస్తారమహభోజ్యమాసాదయామాసుః|
20 ೨೦ ಸಂಜೆಯಾದಾಗ ಆತನು ಹನ್ನೆರಡು ಮಂದಿ ಶಿಷ್ಯರ ಸಂಗಡ ಊಟಕ್ಕೆ ಕುಳಿತುಕೊಂಡನು.
తతః సన్ధ్యాయాం సత్యాం ద్వాదశభిః శిష్యైః సాకం స న్యవిశత్|
21 ೨೧ ಅವರು ಊಟಮಾಡುತ್ತಿರುವಾಗ ಆತನು, “ನಿಮಗೆ ಸತ್ಯವಾಗಿ ಹೇಳುತ್ತೇನೆ ನಿಮ್ಮಲ್ಲಿ ಒಬ್ಬನು ನನ್ನನ್ನು ಹಿಡಿದುಕೊಡುವನು” ಅಂದನು.
అపరం భుఞ్జాన ఉక్తవాన్ యుష్మాన్ తథ్యం వదామి, యుష్మాకమేకో మాం పరకరేషు సమర్పయిష్యతి|
22 ೨೨ ಆಗ ಅವರು ಬಹಳ ದುಃಖಪಟ್ಟು, “ಕರ್ತನೇ, ನಾನಲ್ಲವಲ್ಲಾ?” ಎಂದು ಪ್ರತಿಯೊಬ್ಬರು ಕೇಳತೊಡಗಿದರು.
తదా తేఽతీవ దుఃఖితా ఏకైకశో వక్తుమారేభిరే, హే ప్రభో, స కిమహం?
23 ೨೩ ಅದಕ್ಕೆ ಪ್ರತ್ಯುತ್ತರವಾಗಿ ಯೇಸು, “ಬಟ್ಟಲಲ್ಲಿ ನನ್ನ ಸಂಗಡ ಕೈ ಅದ್ದಿದವನೇ ನನ್ನನ್ನು ಹಿಡಿದುಕೊಡುವವನು.
తతః స జగాద, మయా సాకం యో జనో భోజనపాత్రే కరం సంక్షిపతి, స ఏవ మాం పరకరేషు సమర్పయిష్యతి|
24 ೨೪ ಮನುಷ್ಯಕುಮಾರನು ಆತನ ವಿಷಯವಾಗಿ ಬರೆದಿರುವ ಹಾಗೆ ಹೊರಟುಹೋಗುತ್ತಾನೆ; ಆದರೆ ಯಾವನು ಮನುಷ್ಯಕುಮಾರನನ್ನು ಹಿಡಿದುಕೊಡುವನೋ ಅವನ ಗತಿಯನ್ನು ಏನೆಂದು ಹೇಳಲಿ. ಆ ಮನುಷ್ಯನು ಹುಟ್ಟದಿದ್ದರೆ ಎಷ್ಟೋ ಚೆನ್ನಾಗಿರುತ್ತಿತ್ತು” ಅಂದನು.
మనుజసుతమధి యాదృశం లిఖితమాస్తే, తదనురూపా తద్గతి ర్భవిష్యతి; కిన్తు యేన పుంసా స పరకరేషు సమర్పయిష్యతే, హా హా చేత్ స నాజనిష్యత, తదా తస్య క్షేమమభవిష్యత్|
25 ೨೫ ಆಗ ಆತನನ್ನು ಹಿಡಿದುಕೊಡಬೇಕೆಂದಿದ್ದ ಯೂದನು, “ಗುರುವೇ, ನಾನೋ?” ಎಂದು ಕೇಳಲು ಯೇಸು ಅವನಿಗೆ, “ನೀನೇ ಹಾಗೆ ಹೇಳಿದ್ದೀ” ಎಂದು ಹೇಳಿದನು.
తదా యిహూదానామా యో జనస్తం పరకరేషు సమర్పయిష్యతి, స ఉక్తవాన్, హే గురో, స కిమహం? తతః స ప్రత్యుక్తవాన్, త్వయా సత్యం గదితమ్|
26 ೨೬ ಅವರು ಊಟಮಾಡುತ್ತಿರುವಾಗ ಯೇಸು ರೊಟ್ಟಿಯನ್ನು ತೆಗೆದುಕೊಂಡು ದೇವರ ಸ್ತೋತ್ರ ಮಾಡಿ ಅದನ್ನು ಮುರಿದು ಶಿಷ್ಯರಿಗೆ ಕೊಟ್ಟು, “ತೆಗೆದುಕೊಳ್ಳಿರಿ, ತಿನ್ನಿರಿ, ಇದು ನನ್ನ ದೇಹ” ಅಂದನು.
అనన్తరం తేషామశనకాలే యీశుః పూపమాదాయేశ్వరీయగుణాననూద్య భంక్త్వా శిష్యేభ్యః ప్రదాయ జగాద, మద్వపుఃస్వరూపమిమం గృహీత్వా ఖాదత|
27 ೨೭ ಆ ಮೇಲೆ ಪಾನಪಾತ್ರೆಯನ್ನು ತೆಗೆದುಕೊಂಡು ಸ್ತೋತ್ರಸಲ್ಲಿಸಿ ಅವರಿಗೆ ಕೊಟ್ಟು, “ಇದರಲ್ಲಿರುವುದನ್ನು ಎಲ್ಲರೂ ಕುಡಿಯಿರಿ; ಇದು ನನ್ನ ರಕ್ತ,
పశ్చాత్ స కంసం గృహ్లన్ ఈశ్వరీయగుణాననూద్య తేభ్యః ప్రదాయ కథితవాన్, సర్వ్వై ర్యుష్మాభిరనేన పాతవ్యం,
28 ೨೮ ಇದು ಬಹು ಜನರ ಪಾಪಗಳ ಕ್ಷಮಾಪಣೆಗಾಗಿ ಸುರಿಸಲ್ಪಡುವ ಹೊಸ ಒಡಂಬಡಿಕೆಯ ರಕ್ತ.
యస్మాదనేకేషాం పాపమర్షణాయ పాతితం యన్మన్నూత్ననియమరూపశోణితం తదేతత్|
29 ೨೯ ನಾನು ನನ್ನ ತಂದೆಯ ರಾಜ್ಯದಲ್ಲಿ ನಿಮ್ಮ ಸಂಗಡ ಹೊಸದಾಗಿ ದ್ರಾಕ್ಷಾರಸವನ್ನು ಕುಡಿಯುವ ದಿನದವರೆಗೂ ಇನ್ನು ಇದನ್ನು ಕುಡಿಯುವುದೇ ಇಲ್ಲ ಎಂದು ನಾನು ನಿಮಗೆ ಹೇಳುತ್ತೇನೆ” ಅಂದನು.
అపరమహం నూత్నగోస్తనీరసం న పాస్యామి, తావత్ గోస్తనీఫలరసం పునః కదాపి న పాస్యామి|
30 ೩೦ ಬಳಿಕ ಅವರು ಕೀರ್ತನೆಯನ್ನು ಹಾಡಿದ ಮೇಲೆ ಎಣ್ಣೆಯ ಮರಗಳ ಗುಡ್ಡಕ್ಕೆ ಹೊರಟು ಹೋದರು.
పశ్చాత్ తే గీతమేకం సంగీయ జైతునాఖ్యగిరిం గతవన్తః|
31 ೩೧ ಆಗ ಯೇಸು, ಅವರಿಗೆ, “ಕುರುಬನನ್ನು ಹೊಡೆಯುವೆನು; ಹಿಂಡಿನ ಕುರಿಗಳು ಚದರಿಹೋಗುವವು ಎಂದು ಬರೆದಿರುವ ಹಾಗೆ ನೀವೆಲ್ಲರೂ ಈ ರಾತ್ರಿ ನನ್ನ ವಿಷಯದಲ್ಲಿ ಹಿಂಜರಿಯುವಿರಿ.”
తదానీం యీశుస్తానవోచత్, అస్యాం రజన్యామహం యుష్మాకం సర్వ్వేషాం విఘ్నరూపో భవిష్యామి, యతో లిఖితమాస్తే, "మేషాణాం రక్షకో యస్తం ప్రహరిష్యామ్యహం తతః| మేషాణాం నివహో నూనం ప్రవికీర్ణో భవిష్యతి"||
32 ೩೨ “ಆದರೆ ನಾನು ಜೀವಿತನಾಗಿ ಎದ್ದ ಮೇಲೆನಿಮಗಿಂತ ಮೊದಲೇ ಗಲಿಲಾಯಕ್ಕೆ ಹೋಗುವೆನು” ಎಂದು ಹೇಳಿದನು.
కిన్తు శ్మశానాత్ సముత్థాయ యుష్మాకమగ్రేఽహం గాలీలం గమిష్యామి|
33 ೩೩ ಆದರೆ ಪೇತ್ರನು ಆತನಿಗೆ, “ಎಲ್ಲರೂ ನಿನ್ನ ವಿಷಯದಲ್ಲಿ ದಿಗಿಲುಪಟ್ಟು ಹಿಂಜರಿದರೂ ನಾನು ಮಾತ್ರ ಎಂದಿಗೂ ಹಿಂಜರಿಯುವುದಿಲ್ಲ” ಎಂದು ಉತ್ತರ ಕೊಟ್ಟನು.
పితరస్తం ప్రోవాచ, భవాంశ్చేత్ సర్వ్వేషాం విఘ్నరూపో భవతి, తథాపి మమ న భవిష్యతి|
34 ೩೪ ಯೇಸು ಪೇತ್ರನಿಗೆ, “ನಿನಗೆ ಸತ್ಯವಾಗಿ ಹೇಳುತ್ತೇನೆ, ಇದೇ ರಾತ್ರಿಯಲ್ಲಿ ಕೋಳಿ ಕೂಗುವುದಕ್ಕಿಂತ ಮೊದಲೇ ನೀನು ನನ್ನನ್ನು ಮೂರು ಸಾರಿ ನಿರಾಕರಿಸುವಿ” ಅಂದನು.
తతో యీశునా స ఉక్తః, తుభ్యమహం తథ్యం కథయామి, యామిన్యామస్యాం చరణాయుధస్య రవాత్ పూర్వ్వం త్వం మాం త్రి ర్నాఙ్గీకరిష్యసి|
35 ೩೫ ಪೇತ್ರನು ಆತನಿಗೆ, “ನಾನು ನಿನ್ನ ಸಂಗಡ ಸಾಯಬೇಕಾಗಿಬಂದರೂ ನಿನ್ನನ್ನು ನಿರಾಕರಿಸುವುದಿಲ್ಲ” ಎಂದು ಹೇಳಿದನು. ಅದರಂತೆ ಶಿಷ್ಯರೆಲ್ಲರೂ ಹೇಳಿದರು.
తతః పితర ఉదితవాన్, యద్యపి త్వయా సమం మర్త్తవ్యం, తథాపి కదాపి త్వాం న నాఙ్గీకరిష్యామి; తథైవ సర్వ్వే శిష్యాశ్చోచుః|
36 ೩೬ ಅನಂತರ ಯೇಸು ತನ್ನ ಶಿಷ್ಯರ ಸಂಗಡ ಗೆತ್ಸೇಮನೆ ಎಂಬ ತೋಟಕ್ಕೆ ಬಂದು ಅವರಿಗೆ, “ಇಲ್ಲೇ ಕುಳಿತುಕೊಳ್ಳಿರಿ, ನಾನು ಅತ್ತ ಹೋಗಿ ಪ್ರಾರ್ಥಿಸುತ್ತೇನೆ” ಎಂದು ಹೇಳಿ,
అనన్తరం యీశుః శిష్యైః సాకం గేత్శిమానీనామకం స్థానం ప్రస్థాయ తేభ్యః కథితవాన్, అదః స్థానం గత్వా యావదహం ప్రార్థయిష్యే తావద్ యూయమత్రోపవిశత|
37 ೩೭ ಪೇತ್ರನನ್ನು ಮತ್ತು ಜೆಬೆದಾಯನ ಇಬ್ಬರು ಮಕ್ಕಳನ್ನು ಕರೆದುಕೊಂಡು ಮುಂದಕ್ಕೆ ಹೋಗಿ ದುಃಖಪಟ್ಟು ಮನಗುಂದಿದವನಾದನು.
పశ్చాత్ స పితరం సివదియసుతౌ చ సఙ్గినః కృత్వా గతవాన్, శోకాకులోఽతీవ వ్యథితశ్చ బభూవ|
38 ೩೮ ಮತ್ತು ಅವರಿಗೆ, “ನನ್ನ ಪ್ರಾಣವು ಸಾಯುವಷ್ಟು ದುಃಖಕ್ಕೆ ಒಳಗಾಗಿದೆ; ನೀವು ಇಲ್ಲೇ ಇದ್ದು ನನ್ನ ಸಂಗಡ ಎಚ್ಚರವಾಗಿರಿ” ಎಂದು ಹೇಳಿದನು.
తానవాదీచ్చ మృతియాతనేవ మత్ప్రాణానాం యాతనా జాయతే, యూయమత్ర మయా సార్ద్ధం జాగృత|
39 ೩೯ ಆತನು ಸ್ವಲ್ಪ ಮುಂದೆ ಹೋಗಿ ಬೋರಲು ಬಿದ್ದು, “ನನ್ನ ತಂದೆಯೇ, ಸಾಧ್ಯವಾದರೆ ಈಪಾನಪಾತ್ರೆಯು ನನ್ನನ್ನು ಬಿಟ್ಟುಹೋಗಲಿ; ಆದರೂ ನನ್ನ ಚಿತ್ತದಂತಾಗದೆ ನಿನ್ನ ಚಿತ್ತದಂತೆಯೇ ಆಗಲಿ” ಎಂದು ದೇವರನ್ನು ಪ್ರಾರ್ಥಿಸಿದನು.
తతః స కిఞ్చిద్దూరం గత్వాధోముఖః పతన్ ప్రార్థయాఞ్చక్రే, హే మత్పితర్యది భవితుం శక్నోతి, తర్హి కంసోఽయం మత్తో దూరం యాతు; కిన్తు మదిచ్ఛావత్ న భవతు, త్వదిచ్ఛావద్ భవతు|
40 ೪೦ ಅನಂತರ ಆತನು ಶಿಷ್ಯರ ಬಳಿಗೆ ಬರಲು ಅವರು ನಿದ್ದೆಮಾಡುವುದನ್ನು ಕಂಡು ಪೇತ್ರನಿಗೆ, “ಒಂದು ಗಳಿಗೆಯಾದರೂ ನನ್ನ ಸಂಗಡ ಎಚ್ಚರವಾಗಿರಲಾರಿರಾ?
తతః స శిష్యానుపేత్య తాన్ నిద్రతో నిరీక్ష్య పితరాయ కథయామాస, యూయం మయా సాకం దణ్డమేకమపి జాగరితుం నాశన్కుత?
41 ೪೧ ಶೋಧನೆಗೆ ಒಳಗಾಗದಂತೆ ಎಚ್ಚರವಾಗಿದ್ದು ಪ್ರಾರ್ಥಿಸಿರಿ; ಆತ್ಮವು ಸಿದ್ಧವಾಗಿದೆ ಆದರೆ ದೇಹವು ಬಲಹೀನವಾಗಿದೆ” ಎಂದು ಹೇಳಿದನು.
పరీక్షాయాం న పతితుం జాగృత ప్రార్థయధ్వఞ్చ; ఆత్మా సముద్యతోస్తి, కిన్తు వపు ర్దుర్బ్బలం|
42 ೪೨ ತಿರುಗಿ ಎರಡನೇ ಸಾರಿ ಹೋಗಿ, “ನನ್ನ ತಂದೆಯೇ, ನಾನು ಕುಡಿಯದ ಹೊರತು ಈ ಪಾತ್ರೆ ಬಿಟ್ಟುಹೋಗಲಾರದು ಎಂದಿದ್ದರೆ ನಿನ್ನ ಚಿತ್ತದಂತೆಯೇ ಆಗಲಿ” ಎಂದು ದೇವರನ್ನು ಪ್ರಾರ್ಥಿಸಿದನು.
స ద్వితీయవారం ప్రార్థయాఞ్చక్రే, హే మత్తాత, న పీతే యది కంసమిదం మత్తో దూరం యాతుం న శక్నోతి, తర్హి త్వదిచ్ఛావద్ భవతు|
43 ೪೩ ಆತನು ತಿರುಗಿ ಬಂದಾಗಲೂ ಅವರು ನಿದ್ದೆಮಾಡುವುದನ್ನು ಕಂಡನು; ಅವರ ಕಣ್ಣುಗಳು ಭಾರವಾಗಿದ್ದವು.
స పునరేత్య తాన్ నిద్రతో దదర్శ, యతస్తేషాం నేత్రాణి నిద్రయా పూర్ణాన్యాసన్|
44 ೪೪ ಅನಂತರ ಮತ್ತೆ ಅವರನ್ನು ಬಿಟ್ಟು ಹೊರಟುಹೋಗಿ ತಿರುಗಿ ಅದೇ ಮಾತುಗಳನ್ನು ಹೇಳುತ್ತಾ ಮೂರನೆಯ ಸಾರಿಯೂ ಪ್ರಾರ್ಥಿಸಿದನು.
పశ్చాత్ స తాన్ విహాయ వ్రజిత్వా తృతీయవారం పూర్వ్వవత్ కథయన్ ప్రార్థితవాన్|
45 ೪೫ ತರುವಾಯ ಆತನು ಶಿಷ್ಯರ ಬಳಿಗೆ ಬಂದು ಅವರಿಗೆ, “ನೀವು ಇನ್ನು ನಿದ್ದೆ ಮಾಡಿ ವಿಶ್ರಮಿಸಿಕೊಳ್ಳುತ್ತಿದ್ದೀರೋ; ಇಗೋ, ಅ ಗಳಿಗೆ ಸಮೀಪಿಸಿತು, ಈಗ ಮನುಷ್ಯಕುಮಾರನು ಪಾಪಿಷ್ಠರ ಕೈಗೆ ಒಪ್ಪಿಸಲ್ಪಡುತ್ತಾನೆ.
తతః శిష్యానుపాగత్య గదితవాన్, సామ్ప్రతం శయానాః కిం విశ్రామ్యథ? పశ్యత, సమయ ఉపాస్థాత్, మనుజసుతః పాపినాం కరేషు సమర్ప్యతే|
46 ೪೬ ಏಳಿರಿ, ಹೋಗೋಣ; ನನ್ನನ್ನು ಹಿಡಿದುಕೊಡುವವನು ಹತ್ತಿರಕ್ಕೆ ಬಂದಿದ್ದಾನೆ ನೋಡಿರಿ” ಎಂದು ಹೇಳಿದನು.
ఉత్తిష్ఠత, వయం యామః, యో మాం పరకరేషు మసర్పయిష్యతి, పశ్యత, స సమీపమాయాతి|
47 ೪೭ ಯೇಸು ಇನ್ನೂ ಮಾತನಾಡುತ್ತಿರುವಾಗಲೇ, ಹನ್ನೆರಡು ಮಂದಿ ಶಿಷ್ಯರಲ್ಲಿ ಒಬ್ಬನಾದ ಯೂದನು ಬಂದನು. ಮುಖ್ಯಯಾಜಕರ ಹಾಗು ಜನರ ಹಿರಿಯರ ಕಡೆಯಿಂದ ಬಹು ಜನರ ಗುಂಪು ಕತ್ತಿ, ದೊಣ್ಣೆಗಳನ್ನು ಹಿಡಿದುಕೊಂಡು ಅವನ ಸಂಗಡ ಬಂದರು.
ఏతత్కథాకథనకాలే ద్వాదశశిష్యాణామేకో యిహూదానామకో ముఖ్యయాజకలోకప్రాచీనైః ప్రహితాన్ అసిధారియష్టిధారిణో మనుజాన్ గృహీత్వా తత్సమీపముపతస్థౌ|
48 ೪೮ ಇದಲ್ಲದೆ ಆತನನ್ನು ಹಿಡಿದುಕೊಡುವವನು ಅವರಿಗೆ, “ನಾನು ಯಾರಿಗೆ ಮುದ್ದಿಡುತ್ತೇನೋ ಅವನೇ ಆತನು; ಅವನನ್ನು ಹಿಡಿಯಿರಿ” ಎಂದು ಮುನ್ಸೂಚನೆ ನೀಡಿದ್ದನು.
అసౌ పరకరేష్వర్పయితా పూర్వ్వం తాన్ ఇత్థం సఙ్కేతయామాస, యమహం చుమ్బిష్యే, సోఽసౌ మనుజః, సఏవ యుష్మాభి ర్ధార్య్యతాం|
49 ೪೯ ಕೂಡಲೇ ಅವನು ಯೇಸುವಿನ ಬಳಿಗೆ ಬಂದು, “ಗುರುವೇ ನಮಸ್ಕಾರ” ಎಂದು ಹೇಳಿ ಆತನಿಗೆ ಮುದ್ದಿಟ್ಟನು.
తదా స సపది యీశుముపాగత్య హే గురో, ప్రణమామీత్యుక్త్వా తం చుచుమ్బే|
50 ೫೦ ಯೇಸು ಅವನಿಗೆ, “ಗೆಳೆಯನೇ, ನೀನು ಯಾಕೆ ಬಂದಿರುವೇ” ಎಂದು ಹೇಳಿದನು. ಅವರು ಹತ್ತಿರಕ್ಕೆ ಬಂದು ಯೇಸುವಿನ ಮೇಲೆ ಕೈಹಾಕಿ ಆತನನ್ನು ಹಿಡಿದರು.
తదా యీశుస్తమువాచ, హే మిత్రం కిమర్థమాగతోసి? తదా తైరాగత్య యీశురాక్రమ్య దఘ్రే|
51 ೫೧ ಇಗೋ ಯೇಸುವಿನ ಸಂಗಡ ಇದ್ದವರಲ್ಲಿ ಒಬ್ಬನು ಕೈಚಾಚಿ ತನ್ನ ಕತ್ತಿಯನ್ನು ಹಿರಿದು ಮಹಾಯಾಜಕನ ಆಳನ್ನು ಹೊಡೆದು ಅವನ ಕಿವಿಯನ್ನು ಕತ್ತರಿಸಿ ಹಾಕಿದನು.
తతో యీశోః సఙ్గినామేకః కరం ప్రసార్య్య కోషాదసిం బహిష్కృత్య మహాయాజకస్య దాసమేకమాహత్య తస్య కర్ణం చిచ్ఛేద|
52 ೫೨ ಆಗ ಯೇಸು ಅವನಿಗೆ, “ನಿನ್ನ ಕತ್ತಿಯನ್ನು ತಿರುಗಿ ಒರೆಯಲ್ಲಿ ಸೇರಿಸು; ಕತ್ತಿಯನ್ನು ಹಿಡಿದವರೆಲ್ಲರೂ ಕತ್ತಿಯಿಂದ ನಾಶವಾಗುವರು,
తతో యీశుస్తం జగాద, ఖడ్గం స్వస్థానే నిధేహి యతో యే యే జనా అసిం ధారయన్తి, తఏవాసినా వినశ్యన్తి|
53 ೫೩ ನಾನು ನನ್ನ ತಂದೆಯನ್ನು ಬೇಡಿಕೊಳ್ಳಲಾರೆನೆ, ಬೇಡಿಕೊಂಡರೆ ಆತನು ನನಗೆ ಈಗಲೇ ಹನ್ನೆರಡು ಗಣಗಳಿಗಿಂತ ಹೆಚ್ಚು ಮಂದಿ ದೇವದೂತರನ್ನು ಕಳುಹಿಸಿಕೊಡುವುದಿಲ್ಲವೆಂದು ಭಾವಿಸುತ್ತೀಯೋ?
అపరం పితా యథా మదన్తికం స్వర్గీయదూతానాం ద్వాదశవాహినీతోఽధికం ప్రహిణుయాత్ మయా తముద్దిశ్యేదానీమేవ తథా ప్రార్థయితుం న శక్యతే, త్వయా కిమిత్థం జ్ఞాయతే?
54 ೫೪ ಕಳುಹಿಸಿಕೊಟ್ಟರೆ ನನಗೆ ಹೀಗೀಗೆ ಆಗಬೇಕೆಂಬ ಶಾಸ್ತ್ರದ ಮಾತುಗಳು ನೆರವೇರುವುದಾದರೂ ಹೇಗೆ?” ಎಂದು ಹೇಳಿದನು.
తథా సతీత్థం ఘటిష్యతే ధర్మ్మపుస్తకస్య యదిదం వాక్యం తత్ కథం సిధ్యేత్?
55 ೫೫ ಅದೇ ಸಮಯದಲ್ಲಿ ಯೇಸು ಗುಂಪಾಗಿ ಕೂಡಿಬಂದಿದ್ದ ಜನರಿಗೆ, “ಕಳ್ಳನನ್ನು ಹಿಡಿಯುವುದಕ್ಕೆ ಬಂದಂತೆ ಕತ್ತಿಗಳನ್ನು ದೊಣ್ಣೆಗಳನ್ನು ತೆಗೆದುಕೊಂಡು ನನ್ನನ್ನು ಹಿಡಿಯುವುದಕ್ಕೆ ಬಂದಿರಾ? ನಾನು ಪ್ರತಿದಿನ ದೇವಾಲಯದಲ್ಲಿ ಕುಳಿತುಕೊಂಡು ಬೋಧಿಸುತ್ತಿದ್ದಾಗ ನೀವು ನನ್ನನ್ನು ಹಿಡಿಯಲಿಲ್ಲವಲ್ಲಾ;
తదానీం యీశు ర్జననివహం జగాద, యూయం ఖడ్గయష్టీన్ ఆదాయ మాం కిం చౌరం ధర్త్తుమాయాతాః? అహం ప్రత్యహం యుష్మాభిః సాకముపవిశ్య సముపాదిశం, తదా మాం నాధరత;
56 ೫೬ ಆದರೆ ಪ್ರವಾದಿಗಳು ಬರೆದ ವಚನಗಳು ನೆರವೇರುವಂತೆ ಇದೆಲ್ಲಾ ಆಯಿತು” ಎಂದು ಹೇಳಿದನು. ಆಗ ಶಿಷ್ಯರೆಲ್ಲರೂ ಆತನನ್ನು ಬಿಟ್ಟು ಓಡಿಹೋದರು.
కిన్తు భవిష్యద్వాదినాం వాక్యానాం సంసిద్ధయే సర్వ్వమేతదభూత్| తదా సర్వ్వే శిష్యాస్తం విహాయ పలాయన్త|
57 ೫೭ ಯೇಸುವನ್ನು ಹಿಡಿದವರು ಆತನನ್ನು ಮಹಾಯಾಜಕನಾದ ಕಾಯಫನ ಬಳಿಗೆ ಕರೆದುಕೊಂಡು ಹೋದರು, ಅಲ್ಲಿ ಶಾಸ್ತ್ರಿಗಳೂ ಹಿರಿಯರೂ ಒಟ್ಟಾಗಿ ಸೇರಿಬಂದಿದ್ದರು.
అనన్తరం తే మనుజా యీశుం ధృత్వా యత్రాధ్యాపకప్రాఞ్చః పరిషదం కుర్వ్వన్త ఉపావిశన్ తత్ర కియఫానామకమహాయాజకస్యాన్తికం నిన్యుః|
58 ೫೮ ಆದರೆ ಪೇತ್ರನು ದೂರದಿಂದ ಆತನನ್ನು ಹಿಂಬಾಲಿಸುತ್ತಾ, ಮಹಾಯಾಜಕನ ಭವನದ ಅಂಗಳದ ಒಳಗೆ ನುಗ್ಗಿ ಬಂದು ಆತನಿಗೆ ಏನಾಗುವುದೋ ಎಂದು ನೋಡಬೇಕೆಂದು ಸೈನಿಕರ ಸಂಗಡ ಕುಳಿತುಕೊಂಡನು.
కిన్తు శేషే కిం భవిష్యతీతి వేత్తుం పితరో దూరే తత్పశ్చాద్ వ్రజిత్వా మహాయాజకస్యాట్టాలికాం ప్రవిశ్య దాసైః సహిత ఉపావిశత్|
59 ೫೯ ಆಗ ಮುಖ್ಯಯಾಜಕರೂ ಹಿರೀಸಭೆಯವರೆಲ್ಲರೂ ಯೇಸುವನ್ನು ಕೊಲ್ಲಿಸಬೇಕೆಂದು ಆತನ ಮೇಲೆ ಸುಳ್ಳುಸಾಕ್ಷಿಯನ್ನು ಹುಡುಕಿದರು; ಆದರೆ ಬಹು ಮಂದಿ ಸುಳ್ಳುಸಾಕ್ಷಿಗಳು ಮುಂದೆ ಬಂದರೂ ಏನೂ ಸಿಕ್ಕಲಿಲ್ಲ.
తదానీం ప్రధానయాజకప్రాచీనమన్త్రిణః సర్వ్వే యీశుం హన్తుం మృషాసాక్ష్యమ్ అలిప్సన్త,
60 ೬೦ ಅನಂತರ ಇಬ್ಬರು ಮುಂದೆ ಬಂದು,
కిన్తు న లేభిరే| అనేకేషు మృషాసాక్షిష్వాగతేష్వపి తన్న ప్రాపుః|
61 ೬೧ “ನಾನು ದೇವರ ಆಲಯವನ್ನು ಕೆಡವಿಬಿಟ್ಟು ಮೂರು ದಿನಗಳಲ್ಲಿ ತಿರುಗಿ ಕಟ್ಟಬಲ್ಲೆನೆಂದು ‘ಈ ಮನುಷ್ಯನು ಹೇಳಿದನು’” ಅಂದರು;
శేషే ద్వౌ మృషాసాక్షిణావాగత్య జగదతుః, పుమానయమకథయత్, అహమీశ్వరమన్దిరం భంక్త్వా దినత్రయమధ్యే తన్నిర్మ్మాతుం శక్నోమి|
62 ೬೨ ಆಗ ಮಹಾಯಾಜಕನು ಎದ್ದು ನಿಂತು, “ನೀನೇನೂ ಉತ್ತರಹೇಳುವುದಿಲ್ಲವೋ? ಇವರು ನಿನ್ನ ಮೇಲೆ ಹೇಳುವ ಆರೋಪಗಳು ನಿಜವೇನು?” ಎಂದು ಆತನನ್ನು ಕೇಳಿದನು. ಆದರೆ ಯೇಸು ಸುಮ್ಮನಿದ್ದನು.
తదా మహాయాజక ఉత్థాయ యీశుమ్ అవాదీత్| త్వం కిమపి న ప్రతివదసి? త్వామధి కిమేతే సాక్ష్యం వదన్తి?
63 ೬೩ ಮಹಾಯಾಜಕನು ಯೇಸುವಿಗೆ, “ನಿನಗೆ ಜೀವಸ್ವರೂಪನಾದ ದೇವರ ಮೇಲೆ ಆಣೆಯಿಟ್ಟು ಕೇಳುತ್ತಿದ್ದಾನೆ; ನೀನು ದೇವಕುಮಾರನಾದ ಕ್ರಿಸ್ತನಾದರೆ ನಮಗೆ ಹೇಳಬೇಕು” ಅಂದನು.
కిన్తు యీశు ర్మౌనీభూయ తస్యౌ| తతో మహాయాజక ఉక్తవాన్, త్వామ్ అమరేశ్వరనామ్నా శపయామి, త్వమీశ్వరస్య పుత్రోఽభిషిక్తో భవసి నవేతి వద|
64 ೬೪ ಯೇಸು ಪ್ರತ್ಯುತ್ತರವಾಗಿ, “ನೀನೇ ಹೇಳಿದ್ದೀ; ಆದರೆ ನಾನು ನಿಮಗೆ ಹೇಳುವುದೇನೆಂದರೆ, ಇನ್ನು ಮೇಲೆಮನುಷ್ಯಕುಮಾರನು ಸರ್ವಶಕ್ತನ ಬಲಗಡೆಯಲ್ಲಿ ಆಸೀನನಾಗಿರುವುದನ್ನೂ, ಆಕಾಶದ ಮೇಘಗಳ ಮೇಲೆ ಕುಳಿತು ಬರುವುದನ್ನೂ ಕಾಣುವಿರಿ” ಅಂದನು.
యీశుః ప్రత్యవదత్, త్వం సత్యముక్తవాన్; అహం యుష్మాన్ తథ్యం వదామి, ఇతఃపరం మనుజసుతం సర్వ్వశక్తిమతో దక్షిణపార్శ్వే స్థాతుం గగణస్థం జలధరానారుహ్యాయాన్తం వీక్షధ్వే|
65 ೬೫ ಆಗ ಮಹಾಯಾಜಕನು ತನ್ನ ಬಟ್ಟೆಗಳನ್ನು ಹರಿದುಕೊಂಡು, “ಇವನು ದೇವದೂಷಣೆಯ ಮಾತನಾಡಿದ್ದಾನೆ; ನಮಗೆ ಸಾಕ್ಷಿಗಳು ಇನ್ನು ಯಾತಕ್ಕೆ ಬೇಕು? ನೋಡಿ ಇವನು ಈಗಲೇ ಆಡಿದ ದೂಷಣೆಯ ಮಾತನ್ನು ಕೇಳಿದಿರಲ್ಲಾ;
తదా మహాయాజకో నిజవసనం ఛిత్త్వా జగాద, ఏష ఈశ్వరం నిన్దితవాన్, అస్మాకమపరసాక్ష్యేణ కిం ప్రయోజనం? పశ్యత, యూయమేవాస్యాస్యాద్ ఈశ్వరనిన్దాం శ్రుతవన్తః,
66 ೬೬ ನಿಮಗೆ ಹೇಗೆ ತೋರುತ್ತದೆ?” ಅನ್ನಲು, “ಇವನು ಮರಣದಂಡನೆಗೆ ಯೋಗ್ಯನು” ಎಂದು ಅವರು ಉತ್ತರಕೊಟ್ಟರು.
యుష్మాభిః కిం వివిచ్యతే? తే ప్రత్యూచుః, వధార్హోఽయం|
67 ೬೭ ಆಗ ಅವರು ಆತನ ಮುಖದ ಮೇಲೆ ಉಗುಳಿ ಆತನನ್ನು ಗುದ್ದಿದರು; ಕೆಲವರು ಆತನ ಕೆನ್ನೆಗೆ ಹೊಡೆದು,
తతో లోకైస్తదాస్యే నిష్ఠీవితం కేచిత్ ప్రతలమాహత్య కేచిచ్చ చపేటమాహత్య బభాషిరే,
68 ೬೮ “ಕ್ರಿಸ್ತನೇ, ನಿನ್ನನ್ನು ಹೊಡೆದವರಾರು? ನಮಗೆ ಪ್ರವಾದನೆ ಹೇಳು” ಅಂದರು.
హే ఖ్రీష్ట త్వాం కశ్చపేటమాహతవాన్? ఇతి గణయిత్వా వదాస్మాన్|
69 ೬೯ ಆಗ ಪೇತ್ರನು ಹೊರಗೆ ಅಂಗಳದಲ್ಲಿ ಕುಳಿತಿದ್ದನು. ಅಲ್ಲಿ ಒಬ್ಬಳು ದಾಸಿಯು ಅವನ ಬಳಿಗೆ ಬಂದು, “ನೀನೂ ಸಹ ಗಲಿಲಾಯದ ಯೇಸುವಿನ ಕೂಡ ಇದ್ದವನು” ಅಲ್ಲವೇ ಎನ್ನಲು.
పితరో బహిరఙ్గన ఉపవిశతి, తదానీమేకా దాసీ తముపాగత్య బభాషే, త్వం గాలీలీయయీశోః సహచరఏకః|
70 ೭೦ ಅವನು ನಿರಾಕರಿಸಿ, “ನೀನು ಏನು ಹೇಳುತ್ತಿರುವೆ ನನಗೆ ಗೊತ್ತಿಲ್ಲ” ಎಂದು ಎಲ್ಲರ ಮುಂದೆ ಹೇಳಿದನು.
కిన్తు స సర్వ్వేషాం సమక్షమ్ అనఙ్గీకృత్యావాదీత్, త్వయా యదుచ్యతే, తదర్థమహం న వేద్మి|
71 ೭೧ ಅವನು ಅಲ್ಲಿಂದ ಬಾಗಿಲಿನ ಕಡೆಗೆ ಹೋದಾಗ ಮತ್ತೊಬ್ಬ ದಾಸಿಯು ಅವನನ್ನು ಕಂಡು ಅಲ್ಲಿದ್ದವರಿಗೆ, “ಇವನೂ ನಜರೇತಿನ ಯೇಸುವಿನ ಜೊತೆಯಲ್ಲಿ ಇದ್ದವನು” ಎಂದು ಹೇಳಿದಳು.
తదా తస్మిన్ బహిర్ద్వారం గతే ఽన్యా దాసీ తం నిరీక్ష్య తత్రత్యజనానవదత్, అయమపి నాసరతీయయీశునా సార్ద్ధమ్ ఆసీత్|
72 ೭೨ ಅವನು ತಿರುಗಿ ನಿರಾಕರಿಸಿ ಆಣೆಯಿಟ್ಟು, “ಆ ಮನುಷ್ಯನನ್ನು ನಾನರಿಯೆನು” ಎಂದು ಹೇಳಿದನು.
తతః స శపథేన పునరనఙ్గీకృత్య కథితవాన్, తం నరం న పరిచినోమి|
73 ೭೩ ಸ್ವಲ್ಪ ಹೊತ್ತಿನ ನಂತರ ಅಲ್ಲಿ ನಿಂತಿದ್ದವರು ಮುಂದೆ ಬಂದು ಪೇತ್ರನಿಗೆ, “ನಿಶ್ಚಯವಾಗಿ ನೀನೂ ಸಹ ಅವರಲ್ಲಿ ಒಬ್ಬನು, ನಿನ್ನ ಭಾಷೆಯೇ ನಿನ್ನನ್ನು (ಗಲಿಲಾಯದವನೆಂದು) ತೋರಿಸಿಕೊಡುತ್ತದೆ” ಎಂದು ಹೇಳಲು
క్షణాత్ పరం తిష్ఠన్తో జనా ఏత్య పితరమ్ అవదన్, త్వమవశ్యం తేషామేక ఇతి త్వదుచ్చారణమేవ ద్యోతయతి|
74 ೭೪ ಅವನು, “ಶಾಪಹಾಕಿಕೊಳ್ಳುವುದಕ್ಕೆ ಪ್ರಾರಂಭಿಸಿ ಆಣೆಯಿಟ್ಟು, ಆ ಮನುಷ್ಯನನ್ನು ನಾನರಿಯೆನು” ಎಂದು ಹೇಳಿದನು. ಕೂಡಲೇ ಹುಂಜವೂ ಕೂಗಿತು.
కిన్తు సోఽభిశప్య కథితవాన్, తం జనం నాహం పరిచినోమి, తదా సపది కుక్కుటో రురావ|
75 ೭೫ ಪೇತ್ರನಿಗೆ ಯೇಸು, “ಹುಂಜವೂ ಕೂಗುವುದಕ್ಕಿಂತ ಮೊದಲೇ ಮೂರು ಸಾರಿ ನನ್ನನ್ನು ನಿರಾಕರಿಸುವಿ” ಎಂದು ಹೇಳಿದ ಮಾತನ್ನು ನೆನಪಿಸಿಕೊಂಡು ಹೊರಗೆ ಹೋಗಿ ಬಹು ವ್ಯಥೆಪಟ್ಟು ಅತ್ತನು.
కుక్కుటరవాత్ ప్రాక్ త్వం మాం త్రిరపాహ్నోష్యసే, యైషా వాగ్ యీశునావాది తాం పితరః సంస్మృత్య బహిరిత్వా ఖేదాద్ భృశం చక్రన్ద|