< ಮತ್ತಾಯನು 14 >

1 ಆ ಕಾಲದಲ್ಲಿ ಉಪರಾಜನಾದ ಹೆರೋದನು ಯೇಸುವಿನ ಸುದ್ದಿಯನ್ನು ಕೇಳಿ,
त्या दिनसमा हेरोद राजानी येशुबद्दल ऐकं;
2 ತನ್ನ ಸೇವಕರಿಗೆ, “ಇವನು ಸ್ನಾನಿಕ ಯೋಹಾನನೇ; ಸತ್ತವರೊಳಗಿಂದ ಎದ್ದು ಬಂದಿದ್ದಾನೆ. ಆದಕಾರಣ ಮಹತ್ಕಾರ್ಯಗಳನ್ನು ನಡಿಸುವ ಶಕ್ತಿಗಳು ಅವನಲ್ಲಿ ಇದೆ” ಎಂದು ಹೇಳಿದನು.
अनी आपला सेवकसले सांगं, हाऊ बाप्तिस्मा करनारा योहान शे; हाऊ मरेल मातीन ऊठेल शे म्हणीन या चमत्कार त्यानामा व्हई राहिनात.
3 ಹೆರೋದನು ತನ್ನ ಅಣ್ಣನಾದ ಫಿಲಿಪ್ಪನ ಹೆಂಡತಿಯಾದ ಹೆರೋದ್ಯಳ ನಿಮಿತ್ತ ಯೋಹಾನನನ್ನು ಹಿಡಿದು ಕಟ್ಟಿಸಿ ಸೆರೆಮನೆಯಲ್ಲಿ ಹಾಕಿಸಿದ್ದನು.
कारण हेरोदनी आपला भाऊ फिलीप्प यानी बायको हेरोदीया हिनामुये बाप्तिस्मा करनारा योहानले धरीसन अनं बांधीन कैदखानामा टाकेल व्हतं;
4 ಯೋಹಾನನು ಹೆರೋದನಿಗೆ “ನೀನು ಇವಳನ್ನು ಹೆಂಡತಿಯಾಗಿ ಇಟ್ಟುಕೊಂಡಿರುವುದು ನ್ಯಾಯವಲ್ಲವೆಂದು” ಹೇಳುತ್ತಿದ್ದನು.
कारण योहान त्याले सांगे, की, तु तिले ठेवावं हाई तुनाकरता योग्य नही;
5 ಹೆರೋದನು ಅವನನ್ನು ಕೊಲ್ಲಿಸಬೇಕೆಂದಿದ್ದರೂ ಜನರಿಗೆ ಭಯಪಟ್ಟನು, ಏಕೆಂದರೆ ಅವರು ಅವನನ್ನು ಪ್ರವಾದಿಯೆಂದು ಎಣಿಸಿದ್ದರು.
अनी हेरोद राजा त्याले मारा करता दखे पण लोकसनी त्याले भिती वाटे कारण लोके योहानले संदेष्टा समजेत.
6 ಆದರೆ ಹೆರೋದನ ಹುಟ್ಟಿದ ದಿನದ ಹಬ್ಬವು ನಡೆಯುವಾಗ ಹೆರೋದ್ಯಳ ಮಗಳು ಬಂದಿದ್ದ ಅತಿಥಿಗಳ ಮುಂದೆ ನೃತ್ಯಮಾಡಿ ಹೆರೋದನನ್ನು ಮೆಚ್ಚಿಸಿದಳು.
नंतर हेरोदना जन्मदिन वना तवय हेरोदियानी पोरनी दरबारमा नाचगाणा करीसन हेरोदले खूश करं.
7 ಅವನು ಅವಳಿಗೆ, ನೀನು ಏನು ಕೇಳಿಕೊಂಡರೂ ಕೊಡುತ್ತೇನೆಂದು ಆಣೆಯಿಟ್ಟು ವಾಗ್ದಾನ ಮಾಡಿದನು.
म्हणीन त्यानी तिले शपथ वाहिसन वचन दिधं की, जे काही तु मनापाशी मांगशी ते मी तुले दिसु.
8 ಅವಳು ತನ್ನ ತಾಯಿಯ ಪ್ರೇರೇಪಣೆಗೆ ಒಳಗಾಗಿ, “ಸ್ನಾನಿಕ ಯೋಹಾನನ ತಲೆಯನ್ನು ಹರಿವಾಣದಲ್ಲಿ ನನಗೆ ತರಿಸಿಕೊಡು” ಅಂದಳು.
मंग तिले मायनी शिकाडेल प्रमाणे तिनी सांगं, बाप्तिस्मा करनारा योहाननं मुंडकं ताटमा ठेईसन माले आठे आणी द्या.
9 ಆಕೆಯ ಕೋರಿಕೆಯಿಂದ ಅರಸನು ದುಃಖಪಟ್ಟರೂ ತಾನು ಮಾಡಿದ ಆಣೆಯ ನಿಮಿತ್ತವಾಗಿಯೂ, ತನ್ನ ಸಂಗಡ ಊಟಕ್ಕೆ ಕುಳಿತಿದ್ದವರ ನಿಮಿತ್ತವಾಗಿಯೂ ಅದನ್ನು ತಂದುಕೊಡುವುದಕ್ಕೆ ಅಪ್ಪಣೆ ಕೊಟ್ಟನು.
तवय राजाले खुप वाईट वाटनं; तरी आपली देयल शपथमुये अनी ज्या पंक्तिस्मा बठेल व्हतात त्यासनामुये त्यानी ते देवानी आज्ञा करी.
10 ೧೦ ಅವನು ಆಳುಗಳನ್ನು ಕಳುಹಿಸಿ ಸೆರೆಮನೆಯಲ್ಲಿ ಯೋಹಾನನ ಶಿರಚ್ಛೇದನಮಾಡಿ,
तवय त्यानी माणसं धाडीसन कैदखानामा योहानना वध करा.
11 ೧೧ ಅವರು ಅವನ ತಲೆಯನ್ನು ಹರಿವಾಣದಲ್ಲಿ ತಂದು ಆ ಹುಡುಗಿಗೆ ಕೊಟ್ಟರು. ಅವಳು ಅದನ್ನು ತನ್ನ ತಾಯಿಯ ಬಳಿಗೆ ತೆಗೆದುಕೊಂಡು ಹೋದಳು.
मंग त्याना मुंडकं ताटमा ठेईसन पोरले आणी दिधं अनी तिनी ते आपली मायनाजोडे आणं.
12 ೧೨ ಯೋಹಾನನ ಶಿಷ್ಯರು ಬಂದು ಅವನ ದೇಹವನ್ನು ಹೊತ್ತುಕೊಂಡು ಹೋಗಿ ಹೂಣಿಟ್ಟರು. ಅನಂತರ ಯೇಸುವಿನ ಬಳಿಗೆ ಬಂದು ತಿಳಿಸಿದರು.
मंग त्याना शिष्यसनी ईसन त्यानं प्रेत उचलीन आणं अनं त्याले पुरी टाकं; अनी जाईसन येशुले हाई बातमी दिधी.
13 ೧೩ ಯೇಸು ಅದನ್ನು ಕೇಳಿ ದೋಣಿಯನ್ನು ಹತ್ತಿ ಆ ಸ್ಥಳವನ್ನು ಬಿಟ್ಟು ಅಡವಿಯ ಸ್ಥಳಕ್ಕೆ ಹೋದನು. ಇದನ್ನು ಕೇಳಿದ ಜನರು ಗುಂಪು ಗುಂಪಾಗಿ ತಮ್ಮ ತಮ್ಮ ಪಟ್ಟಣಗಳಿಂದ ಕಾಲುನಡಿಗೆಯಿಂದ ಆತನನ್ನು ಹಿಂಬಾಲಿಸಿದರು.
हाई ऐकीसन येशु तठेन नावमा बशीन निंघना अनी एकांतमा गया; हाई ऐकीसन लोकसनी गर्दी नगरमातीन त्यानामांगे पायीपायी गयी.
14 ೧೪ ಆತನು ಅವರಿಗಿಂತ ಮುಂದಾಗಿ ಬಂದು ಬಹು ಜನರ ಗುಂಪನ್ನು ಕಂಡು ಅವರ ಮೇಲೆ ಕನಿಕರಪಟ್ಟು ಅವರಲ್ಲಿದ್ದ ರೋಗಿಗಳನ್ನು ಸ್ವಸ್ಥಮಾಡಿದನು.
मंग त्यानी बाहेर ईसन लोकसनी गर्दी दखी; तवय त्याले त्यासनी किव वनी अनं त्यासनामा बराच रोगीसले त्यानी बरं करं.
15 ೧೫ ಸಂಜೆಯಾದಾಗ ಶಿಷ್ಯರು ಆತನ ಬಳಿಗೆ ಬಂದು, “ಇದು ಅಡವಿಯ ಸ್ಥಳ ಈಗ ಹೊತ್ತು ಮುಳುಗಿಹೋಯಿತು. ಅವರು ಹಳ್ಳಿಗಳಿಗೆ ಹೋಗಿ ತಮಗಾಗಿ ಆಹಾರ ಪದಾರ್ಥಗಳನ್ನು ಕೊಂಡುಕೊಳ್ಳುವಂತೆ ಕಳುಹಿಸಿಕೊಡು” ಎಂದು ಹೇಳಿದರು.
मंग संध्याकाय व्हवावर त्याना शिष्य त्यानाकडे ईसन बोलनात, हाई एकांतनी जागा शे अनं येळ व्हई जायेल शे; तर लोकसनी गावमा जाईसन स्वतःकरता खावाले अन्न ईकत लई येवाले पाहिजे म्हणीसन त्यासले निरोप द्या.
16 ೧೬ ಆದರೆ ಯೇಸು, “ಅವರು ಹೋಗುವ ಅಗತ್ಯವಿಲ್ಲ. ನೀವೇ ಅವರಿಗೆ ಊಟಕ್ಕೆ ಏನಾದರೂ ಕೊಡಿರಿ” ಅಂದನು.
येशु त्यासले बोलना, लोकसले जावानी गरज नही; तुम्हीनच त्यासले खावाले द्या.
17 ೧೭ ಅದಕ್ಕವರು, “ಇಲ್ಲಿ ಐದು ರೊಟ್ಟಿ ಎರಡು ಮೀನು ಮಾತ್ರ ಇವೆ” ಅನ್ನಲಾಗಿ,
त्या त्याले बोलनात, आमनाजोडे फक्त पाच भाकरी अनं दोन मासा शेतस.
18 ೧೮ ಆತನು, “ಅವುಗಳನ್ನು ನನಗೆ ತಂದು ಕೊಡಿರಿ” ಅಂದನು.
येशुनी सांगं, ते ईकडं मनाजोडे आणा.
19 ೧೯ ತರುವಾಯ ಜನರ ಗುಂಪಿಗೆ ಹುಲ್ಲಿನ ಮೇಲೆ ಕುಳಿತುಕೊಳ್ಳುವುದಕ್ಕೆ ಹೇಳಿ ಆ ಐದು ರೊಟ್ಟಿ ಎರಡು ಮೀನುಗಳನ್ನು ತೆಗೆದುಕೊಂಡು ಆಕಾಶದ ಕಡೆಗೆ ನೋಡಿ ದೇವರಿಗೆ ಸ್ತೋತ್ರ ಮಾಡಿ ರೊಟ್ಟಿಗಳನ್ನು ಮುರಿದು ಶಿಷ್ಯರಿಗೆ ಕೊಟ್ಟನು. ಶಿಷ್ಯರು ಜನರಿಗೆ ಕೊಟ್ಟರು.
मंग येशुनी लोकसनी गर्दीले गवतमा बसानी आज्ञा करी अनी त्या पाच भाकरी अनं दोन मासा लिसन त्यानी वर आकाशमा दखीन आशिर्वाद मांगा अनी भाकरी मोडीसन शिष्यसकडे दिध्यात अनं शिष्यसनी त्या लोकसले वाढी दिध्यात.
20 ೨೦ ಅವರೆಲ್ಲರೂ ಊಟಮಾಡಿ ತೃಪ್ತರಾದರು. ಉಳಿದ ತುಂಡುಗಳನ್ನು ಕೂಡಿಸಲಾಗಿ ಹನ್ನೆರಡು ಪುಟ್ಟಿ ತುಂಬಿತು.
मंग त्या सर्वा खाईसन तृप्त व्हईनात; अनी उरेल तुकडासना बारा टोपला त्यासनी भरी लिध्यात.
21 ೨೧ ಊಟಮಾಡಿದವರು ಹೆಂಗಸರೂ ಮಕ್ಕಳನ್ನು ಬಿಟ್ಟು ಗಂಡಸರೇ ಸುಮಾರು ಐದು ಸಾವಿರವಿದ್ದರು.
खाणारा सर्वा पाच हजार माणसं व्हतात; अनी बाया अनं पोऱ्या या अजुन निराळाच व्हतात.
22 ೨೨ ಇದಾದ ಕೂಡಲೆ ಆತನು ತನ್ನ ಶಿಷ್ಯರಿಗೆ ನಾನು ಈ ಜನರ ಗುಂಪುಗಳನ್ನು ಕಳುಹಿಸಿಬಿಡುವಷ್ಟರೊಳಗೆ ನೀವು ದೋಣಿಯನ್ನು ಹತ್ತಿ ನನಗೆ ಮುಂದಾಗಿ ಆಚೇದಡಕ್ಕೆ ಹೋಗಿರಿ ಎಂದು ಒತ್ತಾಯ ಮಾಡಿದನು.
नंतर, मी लोकसनी गर्दीले निरोप दिसन येस तोपावत तुम्हीन नावमा बशीन मनापुढे दुसरी बाजुले जा, अस म्हणीसन येशुनी शिष्यसले लगेच धाडी दिधं.
23 ೨೩ ಆತನು ಜನರ ಗುಂಪುಗಳನ್ನು ಕಳುಹಿಸಿಬಿಟ್ಟ ಮೇಲೆ ಪ್ರಾರ್ಥನೆ ಮಾಡುವುದಕ್ಕಾಗಿ ಏಕಾಂಗಿಯಾಗಿ ಬೆಟ್ಟವನ್ನು ಹತ್ತಿದನು. ಮತ್ತು ಸಂಜೆಯಾದಾಗ ಆತನೊಬ್ಬನೇ ಅಲ್ಲಿ ಇದ್ದನು.
मंग लोकसले निरोप देवावर तो प्रार्थना कराले डोंगरवर एकलाच गया अनी रात व्हवावर पण येशु तठे एकलाच व्हता.
24 ೨೪ ಆದರೆ ದೋಣಿಯು ಸಮುದ್ರದ ನಡುವೆಯಿತ್ತು, ಎದುರು ಗಾಳಿ ಬೀಸುತ್ತಿದ್ದುದರಿಂದ ಅಲೆಗಳ ಬಡಿತಕ್ಕೆ ಸಿಕ್ಕಿ ಹೊಯ್ದಾಡುತ್ತಿತ್ತು.
ईकडं वारा तोंडना दिशातीन ऱ्हावामुये किनारापाईन बराच अंतरमा नाव समुद्रना मधला भागमा लाटासघाई हैराण व्हई जायेल व्हती.
25 ೨೫ ರಾತ್ರಿಯ ನಾಲ್ಕನೆಯ ಜಾವದಲ್ಲಿ ಯೇಸು ಸಮುದ್ರದ ಮೇಲೆ ನಡೆಯುತ್ತಾ ಅವರ ಕಡೆಗೆ ಬಂದನು.
तवय पहाटले तीन ते सव वाजाना दरम्यान येशु समुद्रवरतीन चालत त्यासनाजोडे वना.
26 ೨೬ ಸಮುದ್ರದ ಮೇಲೆ ನಡೆಯುವ ಆತನನ್ನು ನೋಡಿದ ಶಿಷ್ಯರು “ಭೂತವೆಂದು” ದಿಗಿಲುಬಿದ್ದು ಭಯದಿಂದ ಕೂಗಿದರು.
शिष्य त्याले समुद्रवरतीन चालतांना दखीसन घाबरी गयात अनं त्या भ्याईसन वरडनात; हाई भूत शे.
27 ೨೭ ಕೂಡಲೆ ಯೇಸು ಮಾತನಾಡಿ ಅವರಿಗೆ, “ಧೈರ್ಯವಾಗಿರಿ ನಾನೇ ಭಯಪಡಬೇಡಿರಿ” ಎಂದು ಹೇಳಿದನು.
पण येशु त्यासले लगेच बोलना, धीर धरा मी शे; घाबरू नका.
28 ೨೮ ಅದಕ್ಕೆ ಪೇತ್ರನು, “ಕರ್ತನೇ ನೀನೇ ಆದರೆ ನಾನು ನೀರಿನ ಮೇಲೆ ನಡೆದು ನಿನ್ನ ಬಳಿಗೆ ಬರುವುದಕ್ಕೆ ಅಪ್ಪಣೆ ಕೊಡು” ಅನ್ನಲು,
तवय पेत्रनी उत्तर दिधं, प्रभुजी, जर तुम्हीन शेतस तर पाणीवरतीन तुमना जोडे येवाले माले सांगा.
29 ೨೯ ಆತನು, “ಬಾ” ಅಂದನು. ಆಗ ಪೇತ್ರನು ಯೇಸುವಿನ ಬಳಿಗೆ ಹೋಗುವುದಕ್ಕೆ ದೋಣಿಯಿಂದ ಇಳಿದು ನೀರಿನ ಮೇಲೆ ನಡೆದನು.
त्यानी सांगं, ये; तवय पेत्र येशुकडे जावाकरता नावमाईन उतरीसन चालाले लागना;
30 ೩೦ ಆದರೆ ಅವನು ಗಾಳಿಯನ್ನು ನೋಡಿದಾಗ ಭಯಪಟ್ಟು ಮುಳುಗಲಾರಂಭಿಸಿದಾಗ, “ಕರ್ತನೇ, ನನ್ನನ್ನು ಕಾಪಾಡು” ಎಂದು ಕೂಗಿಕೊಂಡನು.
पण वारा दखीसन तो भ्याईना अनी बुडाले लागना तवय तो वरडना, प्रभुजी, माले वाचाडा.
31 ೩೧ ತಕ್ಷಣವೇ ಯೇಸು ಕೈಚಾಚಿ ಅವನನ್ನು ಹಿಡಿದು, “ಅಲ್ಪ ವಿಶ್ವಾಸಿಯೇ ಏಕೆ ಸಂದೇಹ ಪಟ್ಟೆ” ಎಂದು ಹೇಳಿದನು.
येशुनी लगेच हात पुढं करीसन त्याले धरं अनं बोलना, अरे अल्पईश्वासी तु शंका कशाले धरी?
32 ೩೨ ತರುವಾಯ ಅವರು ದೋಣಿಯನ್ನು ಹತ್ತಿದ ಮೇಲೆ ಗಾಳಿ ನಿಂತು ಹೋಯಿತು.
मंग त्या नावमा चढनात तवय वारा बंद पडना.
33 ೩೩ ಆಗ ದೋಣಿಯಲ್ಲಿದ್ದ ಶಿಷ್ಯರು “ನಿಜವಾಗಿ ನೀನು ದೇವಕುಮಾರನು” ಎಂದು ಹೇಳಿ ಆತನನ್ನು ಆರಾಧಿಸಿದರು.
तवय ज्या नावमा व्हतात त्या सर्वा त्याना पाया पडीसन बोलनात, तुम्हीन खरोखर देवना पोऱ्या शेतस.
34 ೩೪ ಅವರು ಸಮುದ್ರವನ್ನು ದಾಟಿ ಗೆನೆಜರೇತ್ ಪಟ್ಟಣದ ದಡಕ್ಕೆ ಬಂದರು.
नंतर त्या दुसरा बाजुले जाईसन गनेसरेत प्रांतमा गयात;
35 ೩೫ ಆ ಸ್ಥಳದ ಜನರು ಆತನ ಗುರುತನ್ನು ಹಿಡಿದು ಆ ಸುತ್ತಲಿನ ಸೀಮೆಗೆಲ್ಲಾ ಹೇಳಿ ಕಳುಹಿಸಿದರು ಮತ್ತು ಅವರು ಅಸ್ವಸ್ಥರಾದವರೆಲ್ಲರನ್ನು ಆತನ ಬಳಿಗೆ ಕರೆತಂದರು.
अनी तठला लोकसनी त्याले वळखीन आपला आसपासना सर्वा नगरमा माणसं धाडीसन आजारी लोकसले त्यानाकडे आणं.
36 ೩೬ ಅವರು ಆತನನ್ನು ನಿನ್ನ ಉಡುಪಿನ ಅಂಚನ್ನಾದರೂ ಮುಟ್ಟಗೊಡಿಸಬೇಕೆಂದು ಬೇಡಿಕೊಂಡರು, ಮತ್ತು ಮುಟ್ಟಿದವರೆಲ್ಲರು ಸ್ವಸ್ಥರಾದರು.
अनी फक्त तुमना कपडासले आमले हात लावु द्या, अशी त्यासनी त्याले ईनंती करी; तवय जितलासनी त्याले हात लावा तितला सर्वा बरा व्हईनात.

< ಮತ್ತಾಯನು 14 >