< ಲೂಕನು 18 >
1 ೧ ಬೇಸರಗೊಳ್ಳದೆ ಯಾವಾಗಲೂ ಪ್ರಾರ್ಥನೆ ಮಾಡುತ್ತಿರಬೇಕೆಂಬುದಕ್ಕೆ ಆತನು ಅವರಿಗೆ ಒಂದು ಸಾಮ್ಯವನ್ನು ಹೇಳಿದನು.
ଏର୍ଲୋଲୋନେନ୍ ଆଏଡ଼ର୍ ପାର୍ତନାନେନ୍ କାବ୍ବାଡ଼ାଲେନ୍, ତିଆସନ୍ କେନ୍ ଆ ବର୍ନେଲୋଙ୍ ଜିସୁନ୍ ଆ ଞଙ୍ନେମରଞ୍ଜିଆଡଙ୍ ଅବୟ୍ ଅନବ୍ଜଙ୍ବରନ୍ ବରେଞ୍ଜି ।
2 ೨ ಅದೇನೆಂದರೆ, “ಒಂದು ಊರಿನಲ್ಲಿ ಒಬ್ಬ ನ್ಯಾಯಾಧಿಪತಿ ಇದ್ದನು. ಅವನು ದೇವರಿಗೆ ಹೆದರದೆ ಮನುಷ್ಯರನ್ನು ಲಕ್ಷ್ಯಮಾಡದೆ ಇದ್ದವನು.
“ଅବୟ୍ ଗଡ଼ାଲୋଙନ୍ ଅବୟ୍ ପନ୍ସୁଆତିମରନ୍ ଡକୋଏନ୍, ଆନିନ୍ ଇସ୍ୱରନ୍ଆଡଙ୍ ଅଃବ୍ବତଙ୍ଲୋ କି ମନ୍ରାନ୍ଆଡଙ୍ ଅଃମ୍ମାନ୍ନେଲୋ ।
3 ೩ ಅದೇ ಊರಿನಲ್ಲಿ ಒಬ್ಬ ವಿಧವೆ ಇದ್ದಳು. ಆಕೆಯು ಅವನ ಬಳಿಗೆ ಬಂದು, ‘ನ್ಯಾಯವಿಚಾರಣೆಮಾಡಿ ನನ್ನ ವಿರೋಧಿಯಿಂದ ನನ್ನನ್ನು ಬಿಡಿಸು’ ಎಂದು ಕೇಳಿಕೊಳ್ಳುತ್ತಿದ್ದಳು.
ତି ଆ ଗଡ଼ାଲୋଙ୍ ଅବୟ୍ ଜୁଆର୍ବଜନ୍ ଡକୋଏନ୍, ଆନିନ୍ ବବେଡ଼ାନ୍ କି ବବେଡ଼ାନ୍ ପନ୍ସୁଆତିମରନ୍ ଆମଙ୍ ଇୟ୍ଲେ କାକୁର୍ତିଡାଲନ୍ ଇୟ୍ଲେ ବର୍ନେ, ‘ବନେରାଞେନ୍ ବୟନ୍ ବିସାରଇଁୟ୍ ।’
4 ೪ ಅವನು ಸ್ವಲ್ಪ ಕಾಲ ಮನಸ್ಸುಕೊಡಲಿಲ್ಲ. ಆ ಮೇಲೆ ಅವನು, ‘ನಾನು ದೇವರಿಗೆ ಹೆದರುವವನಲ್ಲ, ಮನುಷ್ಯರನ್ನು ಲಕ್ಷ್ಯ ಮಾಡುವವನಲ್ಲ,
ଆରି, ପନ୍ସୁଆତିମରନ୍ ଜବ୍ର ଡିନ୍ନା ଜାୟ୍ ଅଃନ୍ନବ୍ପନ୍ସୁଆତିଲୋ, ବନ୍ଡ ଆନିନ୍ ତିକ୍କି ଇୟମେନ୍, ‘ଞେନ୍ ଇସ୍ୱରନ୍ଆଡଙ୍ ଅଃବ୍ବତଙାୟ୍ କି ମନ୍ରାନ୍ଆଡଙ୍ ଅଃମ୍ମାନ୍ନେଲାୟ୍ ଜନଙ୍ଡେନ୍,
5 ೫ ಆದರೂ ಈ ವಿಧವೆ ನನ್ನನ್ನು ಕಾಡುತ್ತಾ ಬರುತ್ತಿರುವುದರಿಂದ ಈಕೆಯ ನ್ಯಾಯವನ್ನು ವಿಚಾರಿಸಿ ತೀರ್ಪುಮಾಡುವೆನು. ಇಲ್ಲವಾದರೆ ಈಕೆ ಪದೇಪದೇ ಬಂದು ನನ್ನನ್ನು ದಣಿಸಾಳು’ ಎಂದು ತನ್ನೊಳಗೆ ಅಂದುಕೊಂಡನು.”
କେନ୍ ଜୁଆର୍ବଜନ୍ ଞେନ୍ଆଡଙ୍ ବାଉଲ୍ଲି ଆରେମ୍ମେତିଞନ୍ ଆନିନ୍ଆଡଙ୍ ଆରିନ୍ନତେଞ୍ଜି ଞେନ୍ ପନ୍ସୁଆତିତାୟ୍, ଇଜ୍ଜାନ୍ଡେନ୍ ଆନିନ୍ ଡିତାନ୍ ବାଉଲ୍ଲି ଇୟ୍ତାୟ୍ ଏମ୍ମେଇଁୟ୍ ।’”
6 ೬ ಕರ್ತನು ಈ ಸಾಮ್ಯವನ್ನು ಹೇಳಿದ ಮೇಲೆ, “ಅನ್ಯಾಯಗಾರನಾದ ಈ ನ್ಯಾಯಾಧಿಪತಿ ಅಂದುಕೊಂಡದ್ದನ್ನು ಆಲೋಚಿಸಿಕೊಳ್ಳಿರಿ.
ସିଲତ୍ତେ ପ୍ରବୁନ୍ ବର୍ରନେ, “କେନ୍ ଏର୍ଡରମ୍ମମର୍ ପନ୍ସୁଆତିମରନ୍ ଇନି ଗାମ୍ତେ ତିଆତେ ଅମ୍ଡଙ୍ବା ।
7 ೭ ದೇವರು ಆರಿಸಿಕೊಂಡವರು ಆತನಿಗೆ ಹಗಲುರಾತ್ರಿ ಮೊರೆಯಿಡುವಲ್ಲಿ, ಆತನು ಅವರ ವಿಷಯದಲ್ಲಿ ತಡಮಾಡಿದರೂ ಅವರ ನ್ಯಾಯವನ್ನು ತೀರಿಸದೆ ಇರುವನೇ? ಅವರಿಗೆ ಬೇಗ ನ್ಯಾಯವನ್ನು ತೀರಿಸದೆ ಇರುವನೇ?
ଏତ୍ତେଲ୍ଡେନ୍ ଇସ୍ୱରନ୍ ଆସ୍ରେଡାଏନ୍ ଆ ମନ୍ରାଜି ତଗଲ୍ ତମ୍ବା ଆନିନ୍ଆଡଙ୍ ଆରୋଡ୍ଡେତେଞ୍ଜି, ଇସ୍ୱରନ୍ ତି ଆ ମନ୍ରାଜି ଆ ବନେରାଜିଆଡଙ୍ ଗୋଗୋୟ୍ ସନଏନ୍ ଡକୋଏନ୍ ଜନଙ୍ଡେନ୍, ଆନିନ୍ ପଙ୍ ଆନିଞ୍ଜିଆଡଙ୍ ଆରିନ୍ନତେଞ୍ଜି ଅଃନ୍ନବ୍ପନ୍ସୁଆତିଏଜି?
8 ೮ ಅವರಿಗೆ ಬೇಗ ನ್ಯಾಯತೀರಿಸುವನೆಂದು ನಿಮಗೆ ಹೇಳುತ್ತೇನೆ. ಹೀಗಿದ್ದರೂ ಮನುಷ್ಯಕುಮಾರನು ಬರುವಾಗ ಭೂಮಿಯ ಮೇಲೆ ನಂಬಿಕೆಯನ್ನು ಕಾಣಲು ಸಾಧ್ಯವೋ?” ಅಂದನು.
ଞେନ୍ ଆମ୍ୱେଞ୍ଜିଆଡଙ୍ ବର୍ତବେନ୍, ଆନିଞ୍ଜିଆଡଙ୍ ଆରିନ୍ନତେଞ୍ଜି ଆ ମନ୍ରାଜି ଆନିନ୍ ଲପନ୍ସୁଆତିତଜି । ବନ୍ଡ, ମନ୍ରା ଡାଙ୍ଗଡ଼ାଅନନ୍ ପୁର୍ତିଲୋଙନ୍ ଇନି ଡର୍ନେନ୍ ଇୟ୍ତାୟ୍ ଗିଜେ ପଙ୍?”
9 ೯ ಇದಲ್ಲದೆ ತಾವೇ ನೀತಿವಂತರೆಂದು ತಮ್ಮಲ್ಲಿ ಭರವಸವಿಟ್ಟುಕೊಂಡು ಉಳಿದವರನ್ನು ತಿರಸ್ಕಾರ ಮಾಡುವಂತಹ ಕೆಲವರಿಗೆ ಒಂದು ಸಾಮ್ಯವನ್ನು ಯೇಸು ಹೇಳಿದನು.
ଲାଙ୍ଲେଡ୍ ଡର୍ଡମ୍ନେମରଞ୍ଜି ଆନିଞ୍ଜିଡମ୍ ଡରମ୍ମମର୍ ଗାମ୍ଲେ ଅବ୍ତୁୟ୍ଡାଲନ୍ ଆନ୍ନାମରଞ୍ଜିଆଡଙ୍ ବାସ୍ସେଏଞ୍ଜି, ତି ଆ ମନ୍ରାଜିଆଡଙ୍ ଗିୟ୍ଲେ ଜିସୁନ୍ ଅବୟ୍ ଅନବ୍ଜଙ୍ବରନ୍ ବର୍ରନେ ।
10 ೧೦ ಅದೇನೆಂದರೆ, “ಪ್ರಾರ್ಥನೆಮಾಡಬೇಕೆಂದು ಇಬ್ಬರು ಮನುಷ್ಯರು ದೇವಾಲಯಕ್ಕೆ ಹೋದರು. ಒಬ್ಬನು ಫರಿಸಾಯನು, ಇನ್ನೊಬ್ಬನು ಸುಂಕದವನು.
“ବାଗୁ ମନ୍ରା ପାର୍ତନାନେନ୍ ଆସନ୍ ସରେବାସିଙନ୍ ଇୟେଞ୍ଜି, ଅବୟ୍ନେ ପାରୁସି ଆରି ଅବୟ୍ନେ ପାନୁବେଡ୍ମର୍ ।”
11 ೧೧ ಫರಿಸಾಯನು ನಿಂತುಕೊಂಡು ಪ್ರಾರ್ಥಿಸುವಾಗ ತನ್ನೊಳಗೆ, ‘ದೇವರೇ, ದರೋಡೆಕೋರರೂ, ಅನ್ಯಾಯಗಾರರೂ, ಹಾದರಮಾಡುವವರೂ ಆಗಿರುವ ಉಳಿದ ಜನರಂತೆ ನಾನಲ್ಲ, ಈ ಸುಂಕದವನಂತೆಯೂ ಅಲ್ಲ, ಆದುದರಿಂದ ನಿನಗೆ ಸ್ತೋತ್ರಮಾಡುತ್ತೇನೆ.
“ପାରୁସିନ୍ ତନଙ୍ଡାଲେ ଆନିନ୍ଡମ୍ ଏନ୍ନେଲେ ପାର୍ତନାଲନେ, ‘ଏ ଇସ୍ୱର, ଞେନ୍ ଆମନ୍ଆଡଙ୍ ସେଙ୍କେତମ୍, ଞେନ୍ ଆନ୍ନାମରଞ୍ଜି ଅନ୍ତମ୍ ଅଃର୍ରାଉନାୟ୍, ଅଃଡ୍ଡାରିନାୟ୍, ଏର୍ଡରମ୍ମମର୍ ତଡ୍, ଆରି କେନ୍ ପାନୁବେଡ୍ମରନ୍ ଅନ୍ତମ୍ ନିୟ୍ ତଡ୍;
12 ೧೨ ವಾರಕ್ಕೆ ಎರಡಾವರ್ತಿ ಉಪವಾಸಮಾಡುತ್ತೇನೆ; ನಾನು ಸಂಪಾದಿಸಿದ ಎಲ್ಲಾದರಲ್ಲಿಯೂ ಹತ್ತರಲ್ಲೊಂದು ಪಾಲು ಕೊಡುತ್ತೇನೆ’ ಎಂದು ಪ್ರಾರ್ಥಿಸಿದನು.
ଞେନ୍ ବପାଲ୍ଲିନ୍ ବାଗୁତର ଆନମ୍ତନାୟ୍ ଆରି ଞେନ୍ ଅନର୍ଜେଲୋଙ୍ଞେନ୍ ଅଡ଼୍କୋନ୍ ଆ ଦସମାଂସ ତିୟ୍ତାୟ୍ ।’”
13 ೧೩ ಆದರೆ ಆ ಸುಂಕದವನು ದೂರದಲ್ಲಿ ನಿಂತು ಆಕಾಶದ ಕಡೆಗೆ ಕಣ್ಣೆತ್ತಿ ನೋಡುವುದಕ್ಕೂ ಆಗದೇ, ‘ದೇವರೇ, ಪಾಪಿಯಾದ ನನ್ನನ್ನು ಕರುಣಿಸು’ ಅಂದನು.
“ବନ୍ଡ ପାନୁବେଡ୍ମରନ୍ ସଙାୟ୍ଲୋଙ୍ ତନଙ୍ଡାଲେ ରୁଆଙ୍ଗଡ୍ ତୋଣ୍ଡୋନ୍ ଆଙାଙ୍ନେନ୍ ଆସନ୍ ନିୟ୍ ଅଃନ୍ନୋମଙ୍ଲୋ, ବନ୍ଡ ଆ ମାୟଙ୍ଲୋଙନ୍ ତିଡ୍ଡମ୍ଲନ୍ ବର୍ରନେ, ‘ଏ ଇସ୍ୱର, ଞେନ୍ ଇର୍ସେମର୍, ଞେନ୍ଆଡଙ୍ ସାୟୁମିଁୟ୍ ।’
14 ೧೪ ಇವನು ನೀತಿವಂತನೆಂದು ನಿರ್ಣಯಿಸಲ್ಪಟ್ಟವನಾಗಿ ತನ್ನ ಮನೆಗೆ ಹೋದನು. ಆ ಫರಿಸಾಯನು ಅಂಥವನಾಗಿ ಹೋಗಲಿಲ್ಲ ಎಂದು ನಿಮಗೆ ಹೇಳುತ್ತೇನೆ. ತನ್ನನ್ನು ಹೆಚ್ಚಿಸಿಕೊಳ್ಳುವ ಪ್ರತಿಯೊಬ್ಬನು ತಗ್ಗಿಸಲ್ಪಡುವನು, ತನ್ನನ್ನು ತಗ್ಗಿಸಿಕೊಳ್ಳುವವನು ಹೆಚ್ಚಿಸಲ್ಪಡುವನು” ಅಂದನು.
ଞେନ୍ ଆମ୍ୱେଞ୍ଜିଆଡଙ୍ ବର୍ତବେନ୍, ପାରୁସିନ୍ ତଡ୍ ଆର୍ପାୟ୍ ପାନୁବେଡ୍ମରନ୍ ଡରମ୍ମମର୍ ଗାମ୍ଲେ ଡନିଡିନ୍ ଡେଏନ୍ କି ଆନିନ୍ ଆସିଙନ୍ ଜିରେନ୍; ଇନିଆସନ୍ଗାମେଣ୍ଡେନ୍ ଅଙ୍ଗା ମନ୍ରା ଆନିନ୍ଡମ୍ ଅବ୍ସୋଡ଼ାଲନ୍ ଅବ୍ତୁୟ୍ତନେ ଆନିନ୍ଆଡଙ୍ ଅନବ୍ସନ୍ନାନ୍ ଡେତେ, ବନ୍ଡ ଅଙ୍ଗା ମନ୍ରା ଆନିନ୍ଡମ୍ ଅବ୍ସନ୍ନାତନେ ଆନିନ୍ଆଡଙ୍ ଅବ୍ସୋଡ଼ାନ୍ ଡେତେ ।”
15 ೧೫ ಕೆಲವರು ತಮ್ಮ ಕೂಸುಗಳನ್ನು ಯೇಸುವಿನಿಂದ ಮುಟ್ಟಿಸಬೇಕೆಂದು ಆತನ ಬಳಿಗೆ ತರಲು, ಶಿಷ್ಯರು ಕಂಡು ಅವರನ್ನು ಗದರಿಸಿದರು.
ଜିସୁନ୍ ଏଙ୍ଗାଲ୍ଡେନ୍ ପସିଜଞ୍ଜିଆଡଙ୍ ସୁଙେତଜି, ତିଆସନ୍ ମନ୍ରାଞ୍ଜି ପସିଜଞ୍ଜି ନିୟ୍ ଜିସୁନ୍ ଆମଙ୍ବା ଓରୋଙ୍ଲାଜି; ବନ୍ଡ ଞଙ୍ନେମରଞ୍ଜି ତିଆତେ ଗିୟ୍ଲେ ଆନିଞ୍ଜିଆଡଙ୍ କଞେଞ୍ଜି ।
16 ೧೬ ಆದರೆ ಯೇಸು ಆ ಕೂಸುಗಳನ್ನು ತನ್ನ ಬಳಿಗೆ ಕರೆತರಿಸಿ, “ಮಕ್ಕಳನ್ನು ನನ್ನ ಹತ್ತಿರಕ್ಕೆ ಬರಗೊಡಿಸಿರಿ, ಅವುಗಳಿಗೆ ಅಡ್ಡಿಮಾಡಬೇಡಿರಿ, ದೇವರ ರಾಜ್ಯವು ಇಂಥವರದೇ.
ବନ୍ଡ ଜିସୁନ୍ ପସିଜଞ୍ଜିଆଡଙ୍ ଆମଙନ୍ ଓଡ୍ଡେଲେ ବର୍ରନେ, “ପସିଜଞ୍ଜି ଅମଙ୍ଞେନ୍ ତନିୟନ୍ ଆସନ୍ ତଙରନ୍ ସାବ୍ବାଜି, ଆରି ଆନିଞ୍ଜିଆଡଙ୍ ଏରଙ୍ଡଙେଜି; ଇନିଆସନ୍ଗାମେଣ୍ଡେନ୍ ଇସ୍ୱରନ୍ ଆ ରାଜ୍ୟ କେନ୍ ଅନ୍ତମ୍ ଆ ପସିୟ୍ଜିଆତେ ।
17 ೧೭ ನಿಮಗೆ ಸತ್ಯವಾಗಿ ಹೇಳುತ್ತೇನೆ, ಯಾರು ಶಿಶುಭಾವದಿಂದ ದೇವರ ರಾಜ್ಯವನ್ನು ಅಂಗೀಕರಿಸುವುದಿಲ್ಲವೋ ಅವನು ಅದರಲ್ಲಿ ಸೇರುವುದೇ ಇಲ್ಲ” ಅಂದನು.
ଞେନ୍ ଆମ୍ୱେଞ୍ଜିଆଡଙ୍ ଆଜାଡ଼ିଡମ୍ ବର୍ତବେନ୍, ଅଙ୍ଗା ମନ୍ରା ସନ୍ନାସିଜଞ୍ଜି ଅନ୍ତମ୍ ଇସ୍ୱରନ୍ ଆ ରାଜ୍ୟ ଅଃଜ୍ଜାଏ, ଆନିନ୍ ତେତ୍ତେ ଗନ୍ଲେ ଅଃର୍ରପ୍ତିଏ ।”
18 ೧೮ ಒಬ್ಬ ಅಧಿಕಾರಿಯು ಬಂದು, “ಒಳ್ಳೆಯ ಬೋಧಕನೇ, ನಾನು ನಿತ್ಯಜೀವಕ್ಕೆ ಬಾಧ್ಯನಾಗುವಂತೆ ಏನು ಮಾಡಬೇಕು?” ಎಂದು ಆತನನ್ನು ಕೇಳಲಾಗಿ, (aiōnios )
ଅବୟ୍ ଜିଉଦି ଆମ୍ମୁଙ୍ଗଡ୍ମରନ୍ ଜିସୁନ୍ଆଡଙ୍ ବରେନ୍, “ଏ ଆଜାଡ଼ି ଞନଙ୍ତିୟ୍ମର୍, ଅଃନ୍ନଞିଡେନ୍ ଆ ପରାନ୍ନା ଆଞନାଙ୍ ଆସନ୍ ଞେନ୍ ଇନି ଏଙ୍ଗାନାୟ୍?” (aiōnios )
19 ೧೯ ಯೇಸು ಅವನಿಗೆ, “ನನ್ನನ್ನು ಒಳ್ಳೆಯವನೆಂದು ಯಾಕೆ ಹೇಳುತ್ತೀ? ದೇವರೊಬ್ಬನೇ ಹೊರತು ಮತ್ತಾವನೂ ಒಳ್ಳೆಯವನಲ್ಲ.
ସିଲତ୍ତେ ଜିସୁନ୍ ଗାମେନ୍, “ଞେନ୍ଆଡଙ୍ ଆଜାଡ଼ି ଗାମ୍ଲେ ଇନିବା ବର୍ତନେ? ଅବୟ୍ନେନ୍ ଅମ୍ରେଙ୍ଡାଲେ, କେନ୍ ଆଗ୍ରାମ୍ଗାମନ୍, ଇସ୍ୱରନ୍ ଅମ୍ରେଡାଲେ ଆନ୍ନିଙ୍ ଆରି ଆଜାଡ଼ି ତଡ୍ ।
20 ೨೦ ‘ವ್ಯಭಿಚಾರ ಮಾಡಬಾರದು, ನರಹತ್ಯ ಮಾಡಬಾರದು, ಕದಿಯಬಾರದು, ಸುಳ್ಳುಸಾಕ್ಷಿ ಹೇಳಬಾರದು, ನಿನ್ನ ತಂದೆತಾಯಿಗಳನ್ನು ಗೌರವಿಸಬೇಕು’ ಎಂಬ ದೇವರಾಜ್ಞೆಗಳು ನಿನಗೆ ಗೊತ್ತಿವೆಯಷ್ಟೆ” ಎಂದು ಹೇಳಿದನು.
ବନାଁୟ୍ବରଞ୍ଜି ତ ଆମନ୍ ଜନା, ଏଡାରିଡଙ୍ନେ, ମନ୍ରାନ୍ ଏରବ୍ବୁଡଙ୍, ଏରାଉଡଙ୍ନେ, କଣ୍ଡାୟ୍ ସାକିନ୍ ଏତିୟ୍ଡଙ୍, ଆପେୟ୍ବେନ୍ ଅୟୋଙ୍ବେନ୍ଆଡଙ୍ ମାନ୍ନେବାଜି ।”
21 ೨೧ ಅದಕ್ಕವನು, “ನಾನು ಬಾಲ್ಯದಿಂದಲೂ ಇವೆಲ್ಲನ್ನು ಸರಿಯಾಗಿ ಪಾಲಿಸುತ್ತಾ ಬಂದಿದ್ದೇನೆ” ಎಂದು ಹೇಳಿದನು.
ତି ମନ୍ରାନ୍ ବର୍ରନେ, “କେନ୍ଆତେଜି ଅଡ଼୍କୋନ୍ ଞେନ୍ ବନେଣ୍ଡିଆଞେନ୍ ସିଲଡ୍ ଲୁମ୍ଲେ ଜିର୍ରାୟ୍ ।”
22 ೨೨ ಯೇಸು ಅದನ್ನು ಕೇಳಿ ಅವನಿಗೆ, “ಇನ್ನೂ ನಿನಗೆ ಒಂದು ಕೊರತೆಯಿದೆ. ನಿನಗಿರುವುದನ್ನೆಲ್ಲಾ ಮಾರಿ ಬಡವರಿಗೆ ಹಂಚಿಕೊಡು, ಪರಲೋಕದಲ್ಲಿ ನಿನಗೆ ಸಂಪತ್ತುಂಟಾಗುವುದು. ತರುವಾಯ ನೀನು ಬಂದು ನನ್ನನ್ನು ಹಿಂಬಾಲಿಸು” ಎಂದು ಹೇಳಿದನು.
ଜିସୁନ୍ କେନ୍ଆତେ ଅମ୍ଡଙ୍ଡାଲେ ବର୍ରନେ, “ଆମନ୍ ଆରି ଅବୟ୍ ବର୍ନେଲୋଙନ୍ ଉନା ଡକୋ; ଆମନ୍ଆତେଜି ଅଡ଼୍କୋନ୍ ତମ୍ଲୋଙ୍ ତମ୍ଲେ ଡୋଲେୟ୍ମରଞ୍ଜିଆଡଙ୍ ବାନ୍ତେଆଜି, ଆରି ଞେନ୍ଆଡଙ୍ ଆୟ୍ ସଣ୍ଡୋଙିୟ୍; ଏତ୍ତେଲ୍ଡେନ୍ ଆମନ୍ ରୁଆଙ୍ଲୋଙନ୍ ରନ୍ନାନ୍ ଞାଙ୍ତେ ।”
23 ೨೩ ಅವನು ಬಹಳ ಐಶ್ವರ್ಯವಂತನಾಗಿದ್ದದರಿಂದ ಇದನ್ನು ಕೇಳಿ ಬಹಳ ದುಃಖಪಟ್ಟನು.
ବନ୍ଡ ଆନିନ୍ କେନ୍ ଅଡ଼୍କୋନ୍ ଆ ବର୍ନେଜି ଅମ୍ଡଙ୍ଡାଲେ ଆକ୍ରାନ୍ ମୁସୁକ୍କା ଡେଏନ୍, ଇନିଆସନ୍ଗାମେଣ୍ଡେନ୍ ଆନିନ୍ ଅବୟ୍ ଗମାଙ୍ମର୍ ଡକୋଏନ୍ ।
24 ೨೪ ಆಗ ಯೇಸು ಅವನನ್ನು ನೋಡಿ, “ಐಶ್ವರ್ಯವಂತರು ದೇವರ ರಾಜ್ಯದಲ್ಲಿ ಸೇರುವುದು ಎಷ್ಟೋ ಕಷ್ಟ.
ଗମାଙ୍ମରନ୍ ମୁସୁକ୍କା ଆଡ୍ରେଏନ୍ଆତେ ଗିୟ୍ଲେ, ଜିସୁନ୍ ବର୍ରନେ, “ଆନାଜି ଆମଙ୍ ରନ୍ନାନ୍ ଡକୋ, ଆନିଞ୍ଜି କାକୁର୍ତିଃ ଇସ୍ୱରନ୍ ଆ ରାଜ୍ୟଲୋଙ୍ ଗନ୍ତଜି ।
25 ೨೫ ಐಶ್ವರ್ಯವಂತನು ದೇವರ ರಾಜ್ಯದಲ್ಲಿ ಸೇರುವುದಕ್ಕಿಂತ ಒಂಟೆಯು ಸೂಜಿಕಣ್ಣಿನಲ್ಲಿ ನುಗ್ಗುವುದು ಸುಲಭ” ಅಂದನು.
ଇନିଆସନ୍ଗାମେଣ୍ଡେନ୍ ଇସ୍ୱରନ୍ ଆ ରାଜ୍ୟଲୋଙ୍ ଗମାଙ୍ମରନ୍ ଆଗ୍ରନ୍ତେନ୍ ସିଲଡ୍ ଆର୍ପାୟ୍ ସୁର୍ଜାନ୍ ଆ ପତୁଡ୍ ଗଡ୍ ଓଟନ୍ ଆଗ୍ରନ୍ତେନ୍ ସଜ ।”
26 ೨೬ ಈ ಮಾತನ್ನು ಕೇಳಿದವರು, “ಹಾಗಾದರೆ ಯಾರಿಗೆ ರಕ್ಷಣೆಯಾದೀತು?” ಎಂದು ಕೇಳಲು,
ଆନାଜି କେନ୍ ଆ ବର୍ନେ ଅମ୍ଡଙେଞ୍ଜି, ଆନିଞ୍ଜି ବର୍ରଞ୍ଜି, “ଏତ୍ତେଲ୍ଡେନ୍ ଆନା ଅନୁରନ୍ ଞାଙ୍ଲେ ରପ୍ତିଏ?”
27 ೨೭ ಆತನು, “ಮನುಷ್ಯರಿಗೆ ಅಸಾಧ್ಯವಾದ ಕಾರ್ಯಗಳು ದೇವರಿಗೆ ಸಾಧ್ಯವಾಗಿವೆ” ಅಂದನು.
ବନ୍ଡ ଜିସୁନ୍ ଗାମେନ୍, “ଅଙ୍ଗାତେ ମନ୍ରାନ୍ ଲୁମ୍ଲେ ଅଃର୍ରପ୍ତିଏ, ତିଆତେ ଇସ୍ୱରନ୍ ଲୁମ୍ତେ ।”
28 ೨೮ ಆಗ ಪೇತ್ರನು, “ಇಗೋ, ನಾವು ನಮ್ಮ ನಮ್ಮ ಮನೆ ಮಾರುಗಳನ್ನು ಬಿಟ್ಟು ನಿನ್ನ ಹಿಂಬಾಲಿಸಿದೆವು” ಎಂದು ಹೇಳಲು,
ସିଲତ୍ତେ ପିତ୍ରନ୍ ବର୍ରନେ, “ଗିଜା ଇନ୍ଲେଞ୍ଜି ରମ୍ମଙ୍ ରମ୍ମଙ୍ଆତେ ଅଡ଼୍କୋନ୍ ଅମ୍ରେଙ୍ଡାଲେ ଆମନ୍ଆଡଙ୍ ଏସଣ୍ଡୋଙ୍ତମ୍ ।”
29 ೨೯ ಆತನು ಅವರಿಗೆ, “ನಿಮಗೆ ಸತ್ಯವಾಗಿ ಹೇಳುತ್ತೇನೆ, ಯಾವನು ದೇವರ ರಾಜ್ಯಕ್ಕಾಗಿ ಮನೆಯನ್ನಾಗಲಿ, ಹೆಂಡತಿಯನ್ನಾಗಲಿ, ಅಣ್ಣತಮ್ಮಂದಿರನ್ನಾಗಲಿ, ತಂದೆತಾಯಿಗಳನ್ನಾಗಲಿ, ಮಕ್ಕಳನ್ನಾಗಲಿ ತ್ಯಜಿಸುತ್ತಾನೋ,
ଜିସୁନ୍ ଆନିଞ୍ଜିଆଡଙ୍ ବରେଞ୍ଜି, “ଞେନ୍ ଆମ୍ୱେଞ୍ଜିଆଡଙ୍ ଆଜାଡ଼ିଡମ୍ ବର୍ତବେନ୍, ଅଙ୍ଗା ମନ୍ରା ଇସ୍ୱରନ୍ ଆ ରାଜ୍ୟ ଆସନ୍ ଅସିଙନ୍, ଡୁକ୍ରିନ୍, ବୋଞାଙନ୍, ଆପେୟନ୍, ଅୟୋଙନ୍, ଆରି ଆ ପସିଜଞ୍ଜି ଅଡ଼୍କୋନ୍ ଅମ୍ରେଙ୍ଡାଲେ,
30 ೩೦ ಅವನಿಗೆ ಈ ಲೋಕದಲ್ಲಿ ಅನೇಕ ಪಾಲು ಹೆಚ್ಚಾಗಿ ಸಿಕ್ಕೇ ಸಿಕ್ಕುತ್ತವೇ. ಮತ್ತು ಮುಂದಣ ಲೋಕದಲ್ಲಿ ನಿತ್ಯಜೀವವು ದೊರೆಯುವುದು” ಎಂದು ಹೇಳಿದನು. (aiōn , aiōnios )
ନମି ଆଡିନ୍ନାଲୋଙ୍ ଗୋଗୋୟ୍ଡମ୍ ଆରି ତିକ୍କି ଆଡିନ୍ନାଲୋଙ୍ ଅଃନ୍ନଞିଡେନ୍ ଆ ପରାନ୍ନା ଅଃଞାଙେ, ତିଅନ୍ତମ୍ ଆ ମନ୍ରା ଆନ୍ନିଙ୍ ତଡ୍!” (aiōn , aiōnios )
31 ೩೧ ಆತನು ತನ್ನ ಹನ್ನೆರಡು ಮಂದಿ ಶಿಷ್ಯರನ್ನು ಕರೆದುಕೊಂಡು ಅವರಿಗೆ, “ನೋಡಿರಿ, ನಾವು ಯೆರೂಸಲೇಮಿಗೆ ಹೋಗುತ್ತಾ ಇದ್ದೇವೆ ಮತ್ತು ಮನುಷ್ಯಕುಮಾರನ ವಿಷಯದಲ್ಲಿ ಪ್ರವಾದಿಗಳು ಬರೆದದ್ದೆಲ್ಲಾ ಅವನಲ್ಲಿ ನೆರವೇರುವುದು.
ତିକ୍କି ଜିସୁନ୍ ବାରଜଣ ଞଙ୍ନେମରଞ୍ଜିଆଡଙ୍ ଆନ୍ନାଡାଲେ ଆନିଞ୍ଜିଆଡଙ୍ ବରେଞ୍ଜି, “ଗିୟ୍ବା, ଇନ୍ଲେଞ୍ଜି ଜିରୁସାଲମନ୍ ଜିର୍ତବୋ, ଆରି ପୁର୍ବାଃତେ ବର୍ନେମରଞ୍ଜି ମନ୍ରା ଡାଙ୍ଗଡ଼ାଅନନ୍ ଆସନ୍ ଇନିଜି ଇଡେଞ୍ଜି, ତି ଅଡ଼୍କୋନ୍ ଡେଡମ୍ତେ;
32 ೩೨ ಹೇಗೆಂದರೆ, ಅವನನ್ನು ಅನ್ಯಜನರ ಕೈಗೆ ಒಪ್ಪಿಸುವರು, ಅವರು ಅವನನ್ನು ಅಪಹಾಸ್ಯ ಮಾಡುವರು, ಬೈಯುವರು, ಉಗುಳುವರು,
ଇନିଆସନ୍ଗାମେଣ୍ଡେନ୍ ଆନିନ୍ ଏର୍ଜିଉଦିମରଞ୍ଜି ଆସିଲୋଙ୍ ସୋରୋପ୍ପାୟ୍ତନେ, ଆରି ଆନିଞ୍ଜି ଆନିନ୍ଆଡଙ୍ ଡୋସେତଜି, ସୟ୍ସୟ୍ମୁତଜି, ବିଜଲ୍ତଜି,
33 ೩೩ ಕೊರಡೆಗಳಿಂದ ಹೊಡೆಯುವರು, ಕೊಲ್ಲುವರು ಮತ್ತು ಮೂರನೆಯ ದಿನದಲ್ಲಿ ಅವನು ಜೀವಿತನಾಗಿ ಎದ್ದು ಬರುವನು” ಎಂದು ಹೇಳಿದನು.
ସାମକାନ୍ ବାତ୍ତେ ତିଡ୍ତଜି, ରବ୍ବୁତଜି, ଆରି ଏର୍ତାଲୋଙ୍ ଆନିନ୍ ୟର୍ମେଙ୍ତେ ।”
34 ೩೪ ಅವರು ಈ ಸಂಗತಿಗಳಲ್ಲಿ ಒಂದನ್ನಾದರೂ ಗ್ರಹಿಸಲಿಲ್ಲ, ಈ ಮಾತುಗಳು ಅವರಿಗೆ ಮರೆಯಾಗಿದ್ದವು, ಆತನು ಏನು ಹೇಳುತ್ತಿದ್ದಾನೆಂದು ಅವರಿಗೆ ತಿಳಿಯಲಿಲ್ಲ.
ବନ୍ଡ କେନ୍ ଅଡ଼୍କୋନ୍ ଆ ବର୍ନେଜି ଞଙ୍ନେମରଞ୍ଜି ଇନ୍ନିଙ୍ ଅଃଗନ୍ଲୁଡ୍ଲଜି; କେନ୍ ଆ ବର୍ନେ ଆମଙଞ୍ଜି ସିଲଡ୍ ସଲନ୍ ଡକୋଲନ୍, ଆରି ଇନିଜି ଇନିଜି ବର୍ନେନ୍ ଡେଏନ୍, ତି ଅଡ଼୍କୋନ୍ ଆନିଞ୍ଜି ଅଃଗନ୍ଲୁଡ୍ଲଜି ।
35 ೩೫ ಆತನು ಯೆರಿಕೋವಿನ ಸಮೀಪಕ್ಕೆ ಬಂದಾಗ ದಾರಿಯ ಬಳಿಯಲ್ಲಿ ಕುಳಿತು ಭಿಕ್ಷೆಬೇಡುತ್ತಿದ್ದ ಒಬ್ಬ ಕುರುಡನು,
ଜିସୁନ୍ ଜିରିଓନ୍ ଆତ୍ରୁୟାଜେନ୍ ଆଡିଡ୍ ଅବୟ୍ ଆ କାଡ଼ୁମରନ୍ ଅନେଙ୍ ରୋତ୍ତନ୍ ତଙ୍କୁମ୍ଡାଲେ ବେବ୍ବେଡ୍ଲନେ ।
36 ೩೬ ಗುಂಪಾಗಿ ಹೋಗುತ್ತಿದ್ದ ಜನರ ಶಬ್ದವನ್ನು ಕೇಳಿ ಇದೇನು ಎಂದು ವಿಚಾರಿಸಿದನು.
ମନ୍ରାଞ୍ଜି ଆତ୍ରଙିୟ୍ଲଞ୍ଜି ଆ ସନଡ୍ଡା ଅମ୍ଡଙ୍ଡାଲେ, କାଡ଼ୁମରନ୍ “କେନ୍ ଇନି” ଗାମ୍ଲେ ମନ୍ରାଞ୍ଜିଆଡଙ୍ ବରେଞ୍ଜି ।
37 ೩೭ ಅವರು ಅವನಿಗೆ, ನಜರೇತಿನ ಯೇಸು ಈ ಮಾರ್ಗವಾಗಿ ಹೋಗುತ್ತಿದ್ದಾನೆಂದು ತಿಳಿಸಿದಾಗ,
ଆନିଞ୍ଜି କାଡ଼ୁମରନ୍ଆଡଙ୍ ବରେଞ୍ଜି, “ନାଜରିତ ଜିସୁନ୍ କେନ୍ ଆ ତଙର୍ଗଡ୍ ଜିର୍ତେ ।”
38 ೩೮ ಅವನು, “ಯೇಸುವೇ, ದಾವೀದನ ಕುಮಾರನೇ, ನನ್ನನ್ನು ಕರುಣಿಸು” ಎಂದು ಕೂಗಿಕೊಂಡನು.
ସିଲତ୍ତେ ଆନିନ୍ ସୋଡ଼ା ସର୍ରଙନ୍ ବାତ୍ତେ ବର୍ରନେ, “ଏ ଜିସୁ, ଦାଉଦନ୍ ଆ ଡାଙ୍ଗଡ଼ାଅନ୍, ଞେନ୍ଆଡଙ୍ ସାୟୁମିଁୟ୍ ।”
39 ೩೯ ಮುಂದೆ ಹೋಗುತ್ತಿದ್ದವರು ಸುಮ್ಮನಿರು ಎಂದು ಅವನನ್ನು ಗದರಿಸಲು ಅವನು, “ದಾವೀದನ ಕುಮಾರನೇ, ನನ್ನನ್ನು ಕರುಣಿಸು” ಎಂದು ಮತ್ತಷ್ಟು ಬೇಡಿಕೊಂಡನು.
ବନ୍ଡ ଆମ୍ମୁଙ୍ ଆଜିର୍ରେଞ୍ଜି ଆ ମନ୍ରାଜି ଆନିନ୍ଆଡଙ୍ କଡ଼ିଙା ଗାମ୍ଲେ ବବ୍ତଙେଞ୍ଜି, ବନ୍ଡ ଆନିନ୍ ଆରି ସୋଡ଼ା ସର୍ରଙନ୍ ବାତ୍ତେ ବାବ୍ବାବ୍ଲେ ବର୍ରନେ, “ଏ ଦାଉଦନ୍ ଆ ଡାଙ୍ଗଡ଼ାଅନ୍ ଞେନ୍ଆଡଙ୍ ସାୟୁମିଁୟ୍ ।”
40 ೪೦ ಆಗ ಯೇಸು ನಿಂತು, ಅವನನ್ನು ತನ್ನ ಬಳಿಗೆ ಕರೆತರುವುದಕ್ಕೆ ಅಪ್ಪಣೆಕೊಟ್ಟನು. ಅವನು ಹತ್ತಿರಕ್ಕೆ ಬಂದಾಗ,
ସିଲତ୍ତେ ଜିସୁନ୍ ତନଙ୍ଡାଲେ ତି କାଡ଼ୁମରନ୍ଆଡଙ୍ ଆମଙନ୍ ଅନୋରୋଙନ୍ ଆସନ୍ ମନ୍ରାଞ୍ଜିଆଡଙ୍ ବରେଞ୍ଜି, ଆରି, କାଡ଼ୁମରନ୍ ଆମଙନ୍ ଆତ୍ରୁଙ୍ଲାଞନ୍, ଜିସୁନ୍ କାଡ଼ୁମରନ୍ଆଡଙ୍ ବରେନ୍,
41 ೪೧ ಆತನು ಅವನಿಗೆ, “ನಾನು ನಿನಗೆ ಏನು ಮಾಡಬೇಕೆಂದು ಕೋರುತ್ತೀ?” ಎಂದು ಕೇಳಲು, ಅವನು, “ನನಗೆ ಕಣ್ಣುಕಾಣುವಂತೆ ಮಾಡು ಕರ್ತನೇ” ಅಂದನು.
“ଞେନ୍ ଆମନ୍ ଆସନ୍ ଇନି ଲୁମାୟ୍ ଗାମ୍ଲେ ଆମନ୍ ଲଡୟ୍ତମ୍?” ଆନିନ୍ ଗାମେନ୍, “ଏ ପ୍ରବୁ, ଞେନ୍ ଏଙ୍ଗାଲ୍ଡେନ୍ ଆରି ଗିୟ୍ଲେ ରପ୍ତିଆୟ୍ ।”
42 ೪೨ ಯೇಸು ಅವನಿಗೆ, “ನಿನಗೆ ಕಣ್ಣುಕಾಣುವಂತಾಗಲಿ, ನಿನ್ನ ನಂಬಿಕೆಯೇ ನಿನ್ನನ್ನು ಸ್ವಸ್ಥಮಾಡಿದೆ” ಎಂದು ಹೇಳಿದನು.
ଜିସୁନ୍ ଆନିନ୍ଆଡଙ୍ ବରେନ୍, “ଗିଜା, ଡର୍ନେନମ୍ ଆମନ୍ଆଡଙ୍ ମବ୍ନଙ୍ଲମ୍ ।”
43 ೪೩ ತಕ್ಷಣವೇ ಅವನಿಗೆ ಕಣ್ಣು ಕಾಣಿಸಿದವು, ಅವನು ದೇವರನ್ನು ಕೊಂಡಾಡುತ್ತಾ ಯೇಸುವಿನ ಹಿಂದೆ ಹೋದನು. ಜನರೆಲ್ಲರು ನಡೆದ ಸಂಗತಿಯನ್ನು ನೋಡಿ ದೇವರನ್ನು ಸ್ತುತಿಸಿದರು.
ସିଲତ୍ତେମା ଆନିନ୍ ଗିୟ୍ଲେ ରପ୍ତିଏନ୍, ଆରି ଇସ୍ୱରନ୍ଆଡଙ୍ ସେନ୍ଲେ ସେନ୍ଲେ ଜିସୁନ୍ଆଡଙ୍ ସଣ୍ଡୋଙେନ୍ ଆରି ଅଡ଼୍କୋ ମନ୍ରାନ୍ ତିଆତେ ଗିୟ୍ଲେ ଇସ୍ୱରନ୍ଆଡଙ୍ ସେଙ୍କେଏଞ୍ଜି ।