< ಲೂಕನು 12 >
1 ೧ ಇಷ್ಟರಲ್ಲಿ ಸಾವಿರಾರು ಜನರು ಒಬ್ಬರನ್ನೊಬ್ಬರು ತುಳಿಯುವಷ್ಟು ಕೂಡಿಬಂದಿರಲಾಗಿ ಯೇಸು ಮೊದಲು ತನ್ನ ಶಿಷ್ಯರಿಗೆ ಉಪದೇಶಿಸಿ ಹೇಳಿದ್ದೇನೆಂದರೆ, “ಫರಿಸಾಯರ ಹುಳಿಹಿಟ್ಟಿನ ಬಗ್ಗೆ, ಅಂದರೆ ಅವರ ಕಪಟತನದ ವಿಷಯದಲ್ಲಿ ಜಾಗರೂಕರಾಗಿರಿ.
ਤਦਾਨੀਂ ਲੋਕਾਃ ਸਹਸ੍ਰੰ ਸਹਸ੍ਰਮ੍ ਆਗਤ੍ਯ ਸਮੁਪਸ੍ਥਿਤਾਸ੍ਤਤ ਏਕੈਕੋ (ਅ)ਨ੍ਯੇਸ਼਼ਾਮੁਪਰਿ ਪਤਿਤੁਮ੍ ਉਪਚਕ੍ਰਮੇ; ਤਦਾ ਯੀਸ਼ੁਃ ਸ਼ਿਸ਼਼੍ਯਾਨ੍ ਬਭਾਸ਼਼ੇ, ਯੂਯੰ ਫਿਰੂਸ਼ਿਨਾਂ ਕਿਣ੍ਵਰੂਪਕਾਪਟ੍ਯੇ ਵਿਸ਼ੇਸ਼਼ੇਣ ਸਾਵਧਾਨਾਸ੍ਤਿਸ਼਼੍ਠਤ|
2 ೨ ಮರೆಯಾಗಿರುವಂಥದ್ದು ವ್ಯಕ್ತವಾಗುವುದು. ರಹಸ್ಯವಾಗಿರುವಂಥದ್ದು ಪ್ರಕಟವಾಗುವುದು.
ਯਤੋ ਯੰਨ ਪ੍ਰਕਾਸ਼ਯਿਸ਼਼੍ਯਤੇ ਤਦਾੱਛੰਨੰ ਵਸ੍ਤੁ ਕਿਮਪਿ ਨਾਸ੍ਤਿ; ਤਥਾ ਯੰਨ ਜ੍ਞਾਸ੍ਯਤੇ ਤਦ੍ ਗੁਪ੍ਤੰ ਵਸ੍ਤੁ ਕਿਮਪਿ ਨਾਸ੍ਤਿ|
3 ೩ ಹೀಗಿರುವುದರಿಂದ ನೀವು ಕತ್ತಲಲ್ಲಿ ಹೇಳಿದಂಥದು ಬೆಳಕಿನಲ್ಲಿ ಕೇಳಲಾಗುವುದು. ಮತ್ತು ನೀವು ಕೋಣೆಗಳೊಳಗೆ ಪಿಸುಗುಟ್ಟಿದ್ದು ಮಾಳಿಗೆಗಳ ಮೇಲೆ ಸಾರಲಾಗುವುದು.
ਅਨ੍ਧਕਾਰੇ ਤਿਸ਼਼੍ਠਨਤੋ ਯਾਃ ਕਥਾ ਅਕਥਯਤ ਤਾਃ ਸਰ੍ੱਵਾਃ ਕਥਾ ਦੀਪ੍ਤੌ ਸ਼੍ਰੋਸ਼਼੍ਯਨ੍ਤੇ ਨਿਰ੍ਜਨੇ ਕਰ੍ਣੇ ਚ ਯਦਕਥਯਤ ਗ੍ਰੁʼਹਪ੍ਰੁʼਸ਼਼੍ਠਾਤ੍ ਤਤ੍ ਪ੍ਰਚਾਰਯਿਸ਼਼੍ਯਤੇ|
4 ೪ “ನನ್ನ ಸ್ನೇಹಿತರಾದ ನಿಮಗೆ ಹೇಳುತ್ತೇನೆ, ದೇಹವನ್ನು ಕೊಲ್ಲುವವರಿಗೆ ಭಯಪಡಬೇಡಿ. ಕೊಂದು ಹಾಕಿದ ಮೇಲೆ ಹೆಚ್ಚೇನು ಮಾಡಲು ಅವರಿಂದಾಗದು.
ਹੇ ਬਨ੍ਧਵੋ ਯੁਸ਼਼੍ਮਾਨਹੰ ਵਦਾਮਿ, ਯੇ ਸ਼ਰੀਰਸ੍ਯ ਨਾਸ਼ੰ ਵਿਨਾ ਕਿਮਪ੍ਯਪਰੰ ਕਰ੍ੱਤੁੰ ਨ ਸ਼ਕ੍ਰੁਵਨ੍ਤਿ ਤੇਭ੍ਯੋ ਮਾ ਭੈਸ਼਼੍ਟ|
5 ೫ ಆದರೆ ನೀವು ಯಾರಿಗೆ ಭಯಪಡಬೇಕೆಂದು ತೋರಿಸುತ್ತೇನೆ, ಕೇಳಿ. ಸತ್ತ ಮೇಲೆ ನರಕದೊಳಗೆ ಹಾಕುವ ಅಧಿಕಾರವುಳ್ಳಾತನಿಗೆ ಹೆದರಬೇಕು. ಹೌದು ಆತನಿಗೇ ಭಯಪಡಬೇಕೆಂದು ನಿಮಗೆ ಒತ್ತಿಹೇಳುತ್ತೇನೆ. (Geenna )
ਤਰ੍ਹਿ ਕਸ੍ਮਾਦ੍ ਭੇਤਵ੍ਯਮ੍ ਇਤ੍ਯਹੰ ਵਦਾਮਿ, ਯਃ ਸ਼ਰੀਰੰ ਨਾਸ਼ਯਿਤ੍ਵਾ ਨਰਕੰ ਨਿਕ੍ਸ਼਼ੇਪ੍ਤੁੰ ਸ਼ਕ੍ਨੋਤਿ ਤਸ੍ਮਾਦੇਵ ਭਯੰ ਕੁਰੁਤ, ਪੁਨਰਪਿ ਵਦਾਮਿ ਤਸ੍ਮਾਦੇਵ ਭਯੰ ਕੁਰੁਤ| (Geenna )
6 ೬ ಐದು ಗುಬ್ಬಿಗಳನ್ನು ಎರಡು ದುಡ್ಡಿಗೆ ಮಾರುತ್ತಾರಲ್ಲ? ಆದಾಗ್ಯೂ ಅವುಗಳಲ್ಲಿ ಒಂದನ್ನೂ ದೇವರು ಮರೆತುಹೋಗುವುದಿಲ್ಲ.
ਪਞ੍ਚ ਚਟਕਪਕ੍ਸ਼਼ਿਣਃ ਕਿੰ ਦ੍ਵਾਭ੍ਯਾਂ ਤਾਮ੍ਰਖਣ੍ਡਾਭ੍ਯਾਂ ਨ ਵਿਕ੍ਰੀਯਨ੍ਤੇ? ਤਥਾਪੀਸ਼੍ਵਰਸ੍ਤੇਸ਼਼ਾਮ੍ ਏਕਮਪਿ ਨ ਵਿਸ੍ਮਰਤਿ|
7 ೭ ಅಷ್ಟುಮಾತ್ರವಲ್ಲ, ನಿಮ್ಮ ತಲೆ ಕೂದಲುಗಳು ಸಹ ಎಲ್ಲವೂ ಎಣಿಕೆಯಾಗಿವೆ. ಹೆದರಬೇಡಿರಿ, ಬಹಳ ಗುಬ್ಬಿಗಳಿಗಿಂತ ನೀವು ಹೆಚ್ಚಿನವರು.
ਯੁਸ਼਼੍ਮਾਕੰ ਸ਼ਿਰਃਕੇਸ਼ਾ ਅਪਿ ਗਣਿਤਾਃ ਸਨ੍ਤਿ ਤਸ੍ਮਾਤ੍ ਮਾ ਵਿਭੀਤ ਬਹੁਚਟਕਪਕ੍ਸ਼਼ਿਭ੍ਯੋਪਿ ਯੂਯੰ ਬਹੁਮੂਲ੍ਯਾਃ|
8 ೮ “ನಾನು ನಿಮಗೆ ಹೇಳುತ್ತೇನೆ, ಯಾವನು ಮನುಷ್ಯರ ಮುಂದೆ ತಾನು ನನ್ನವನೆಂದು ಒಪ್ಪಿಕೊಳ್ಳುತ್ತಾನೋ, ಮನುಷ್ಯಕುಮಾರನು ಸಹ ಆ ವ್ಯಕ್ತಿಯನ್ನು ದೇವದೂತರ ಮುಂದೆ ತನ್ನವನೆಂದು ಒಪ್ಪಿಕೊಳ್ಳುವನು.
ਅਪਰੰ ਯੁਸ਼਼੍ਮਭ੍ਯੰ ਕਥਯਾਮਿ ਯਃ ਕਸ਼੍ਚਿਨ੍ ਮਾਨੁਸ਼਼ਾਣਾਂ ਸਾਕ੍ਸ਼਼ਾਨ੍ ਮਾਂ ਸ੍ਵੀਕਰੋਤਿ ਮਨੁਸ਼਼੍ਯਪੁਤ੍ਰ ਈਸ਼੍ਵਰਦੂਤਾਨਾਂ ਸਾਕ੍ਸ਼਼ਾਤ੍ ਤੰ ਸ੍ਵੀਕਰਿਸ਼਼੍ਯਤਿ|
9 ೯ ಆದರೆ ಯಾವನು ಮನುಷ್ಯರ ಮುಂದೆ ತಾನು ನನ್ನವನಲ್ಲವೆಂದು ಹೇಳುವನೋ ಅವನನ್ನು ನಾನು ದೇವದೂತರ ಮುಂದೆ ನನ್ನವನಲ್ಲವೆಂದು ಹೇಳುವೆನು.
ਕਿਨ੍ਤੁ ਯਃ ਕਸ਼੍ਚਿਨ੍ਮਾਨੁਸ਼਼ਾਣਾਂ ਸਾਕ੍ਸ਼਼ਾਨ੍ਮਾਮ੍ ਅਸ੍ਵੀਕਰੋਤਿ ਤਮ੍ ਈਸ਼੍ਵਰਸ੍ਯ ਦੂਤਾਨਾਂ ਸਾਕ੍ਸ਼਼ਾਦ੍ ਅਹਮ੍ ਅਸ੍ਵੀਕਰਿਸ਼਼੍ਯਾਮਿ|
10 ೧೦ ಮನುಷ್ಯಕುಮಾರನ ವಿರುದ್ಧ ಮಾತನಾಡುವ ಪ್ರತಿಯೊಬ್ಬನಿಗೆ ಕ್ಷಮಾಪಣೆಯಾಗುವುದು. ಆದರೆ ಪವಿತ್ರಾತ್ಮನನ್ನು ದೂಷಿಸಿದವನಿಗೆ ಕ್ಷಮಾಪಣೆಯಿಲ್ಲ.
ਅਨ੍ਯੱਚ ਯਃ ਕਸ਼੍ਚਿਨ੍ ਮਨੁਜਸੁਤਸ੍ਯ ਨਿਨ੍ਦਾਭਾਵੇਨ ਕਾਞ੍ਚਿਤ੍ ਕਥਾਂ ਕਥਯਤਿ ਤਸ੍ਯ ਤਤ੍ਪਾਪਸ੍ਯ ਮੋਚਨੰ ਭਵਿਸ਼਼੍ਯਤਿ ਕਿਨ੍ਤੁ ਯਦਿ ਕਸ਼੍ਚਿਤ੍ ਪਵਿਤ੍ਰਮ੍ ਆਤ੍ਮਾਨੰ ਨਿਨ੍ਦਤਿ ਤਰ੍ਹਿ ਤਸ੍ਯ ਤਤ੍ਪਾਪਸ੍ਯ ਮੋਚਨੰ ਨ ਭਵਿਸ਼਼੍ਯਤਿ|
11 ೧೧ ಅವರು ನಿಮ್ಮನ್ನು ಸಭಾಮಂದಿರಗಳಿಗೂ, ಸಭಾಮಂದಿರಗಳ ಅಧಿಕಾರಿಗಳ ಎದುರಿಗೂ, ಅಧಿಪತಿಗಳ ಎದುರಿಗೂ, ಹಿಡಿದುಕೊಂಡು ಹೋಗುವಾಗ ಹೇಗೆ ಉತ್ತರ ಕೊಡಬೇಕು? ಏನು ಉತ್ತರ ಕೊಡಬೇಕು? ಏನು ಹೇಳಬೇಕು? ಎಂದು ಚಿಂತೆಮಾಡಬೇಡಿರಿ.
ਯਦਾ ਲੋਕਾ ਯੁਸ਼਼੍ਮਾਨ੍ ਭਜਨਗੇਹੰ ਵਿਚਾਰਕਰ੍ਤ੍ਰੁʼਰਾਜ੍ਯਕਰ੍ਤ੍ਰੁʼਣਾਂ ਸੰਮੁਖਞ੍ਚ ਨੇਸ਼਼੍ਯਨ੍ਤਿ ਤਦਾ ਕੇਨ ਪ੍ਰਕਾਰੇਣ ਕਿਮੁੱਤਰੰ ਵਦਿਸ਼਼੍ਯਥ ਕਿੰ ਕਥਯਿਸ਼਼੍ਯਥ ਚੇਤ੍ਯਤ੍ਰ ਮਾ ਚਿਨ੍ਤਯਤ;
12 ೧೨ ಏಕೆಂದರೆ ನೀವು ಹೇಳತಕ್ಕದ್ದನ್ನು ಪವಿತ್ರಾತ್ಮನು ಆ ಗಳಿಗೆಯಲ್ಲಿಯೇ ನಿಮಗೆ ಕಲಿಸಿಕೊಡುವನು” ಅಂದನು.
ਯਤੋ ਯੁਸ਼਼੍ਮਾਭਿਰ੍ਯਦ੍ ਯਦ੍ ਵਕ੍ਤਵ੍ਯੰ ਤਤ੍ ਤਸ੍ਮਿਨ੍ ਸਮਯਏਵ ਪਵਿਤ੍ਰ ਆਤ੍ਮਾ ਯੁਸ਼਼੍ਮਾਨ੍ ਸ਼ਿਕ੍ਸ਼਼ਯਿਸ਼਼੍ਯਤਿ|
13 ೧೩ ಆಗ ಜನರಲ್ಲಿ ಒಬ್ಬನು, “ಬೋಧಕನೇ, ತಂದೆಯ ಆಸ್ತಿಯನ್ನು ನನಗೆ ಪಾಲುಮಾಡುವಂತೆ ನನ್ನ ಅಣ್ಣನಿಗೆ ಹೇಳು” ಎಂದು ಯೇಸುವನ್ನು ಕೇಳಿಕೊಳ್ಳಲು,
ਤਤਃ ਪਰੰ ਜਨਤਾਮਧ੍ਯਸ੍ਥਃ ਕਸ਼੍ਚਿੱਜਨਸ੍ਤੰ ਜਗਾਦ ਹੇ ਗੁਰੋ ਮਯਾ ਸਹ ਪੈਤ੍ਰੁʼਕੰ ਧਨੰ ਵਿਭਕ੍ਤੁੰ ਮਮ ਭ੍ਰਾਤਰਮਾਜ੍ਞਾਪਯਤੁ ਭਵਾਨ੍|
14 ೧೪ ಅದಕ್ಕೆ ಯೇಸು, “ಮನುಷ್ಯನೇ, ನನ್ನನ್ನು ನಿಮಗೆ ನ್ಯಾಯಾಧಿಪತಿಯನ್ನಾಗಿ ಅಥವಾ ಪಾಲುಮಾಡುವವನನ್ನಾಗಿ ನೇಮಿಸಿದವರಾರು?” ಎಂದು ಅವನನ್ನು ಕೇಳಿ,
ਕਿਨ੍ਤੁ ਸ ਤਮਵਦਤ੍ ਹੇ ਮਨੁਸ਼਼੍ਯ ਯੁਵਯੋ ਰ੍ਵਿਚਾਰੰ ਵਿਭਾਗਞ੍ਚ ਕਰ੍ੱਤੁੰ ਮਾਂ ਕੋ ਨਿਯੁਕ੍ਤਵਾਨ੍?
15 ೧೫ ಜನರಿಗೆ, “ಎಲ್ಲಾ ದುರಾಶೆಗಳಿಂದಲು ಎಚ್ಚರಿಕೆಯಾಗಿದ್ದು ನಿಮ್ಮನ್ನು ಕಾಪಾಡಿಕೊಳ್ಳಿರಿ. ಒಬ್ಬನಿಗೆ ಎಷ್ಟು ಆಸ್ತಿಯಿದ್ದರೂ ಅದು ಅವನಿಗೆ ಜೀವಾಧಾರವಾಗುವುದಿಲ್ಲ” ಎಂದು ಹೇಳಿ, ಒಂದು ಸಾಮ್ಯವನ್ನು ಹೇಳಿದನು.
ਅਨਨ੍ਤਰੰ ਸ ਲੋਕਾਨਵਦਤ੍ ਲੋਭੇ ਸਾਵਧਾਨਾਃ ਸਤਰ੍ਕਾਸ਼੍ਚ ਤਿਸ਼਼੍ਠਤ, ਯਤੋ ਬਹੁਸਮ੍ਪੱਤਿਪ੍ਰਾਪ੍ਤ੍ਯਾ ਮਨੁਸ਼਼੍ਯਸ੍ਯਾਯੁ ਰ੍ਨ ਭਵਤਿ|
16 ೧೬ ಅದೇನೆಂದರೆ “ಒಬ್ಬಾನೊಬ್ಬ ಐಶ್ವರ್ಯವಂತನ ಭೂಮಿಯಲ್ಲಿ ಸಮೃದ್ಧಿಯಾಗಿ ಬೆಳೆ ಬೆಳೆಯಿತು.
ਪਸ਼੍ਚਾਦ੍ ਦ੍ਰੁʼਸ਼਼੍ਟਾਨ੍ਤਕਥਾਮੁੱਥਾਪ੍ਯ ਕਥਯਾਮਾਸ, ਏਕਸ੍ਯ ਧਨਿਨੋ ਭੂਮੌ ਬਹੂਨਿ ਸ਼ਸ੍ਯਾਨਿ ਜਾਤਾਨਿ|
17 ೧೭ ಆಗ ಅವನು ತನ್ನೊಳಗೆ, ‘ನಾನೇನು ಮಾಡಲಿ? ನನ್ನ ಬೆಳೆಯನ್ನು ತುಂಬಿಡುವುದಕ್ಕೆ ನನಗೆ ಸ್ಥಳವಿಲ್ಲವಲ್ಲಾ?’ ಎಂದು ಆಲೋಚಿಸಿ,
ਤਤਃ ਸ ਮਨਸਾ ਚਿਨ੍ਤਯਿਤ੍ਵਾ ਕਥਯਾਮ੍ਬਭੂਵ ਮਮੈਤਾਨਿ ਸਮੁਤ੍ਪੰਨਾਨਿ ਦ੍ਰਵ੍ਯਾਣਿ ਸ੍ਥਾਪਯਿਤੁੰ ਸ੍ਥਾਨੰ ਨਾਸ੍ਤਿ ਕਿੰ ਕਰਿਸ਼਼੍ਯਾਮਿ?
18 ೧೮ ‘ಒಂದು ಕೆಲಸ ಮಾಡುತ್ತೇನೆ. ನನ್ನ ಕಣಜಗಳನ್ನು ಕೆಡವಿ ಅವುಗಳಿಗಿಂತ ದೊಡ್ಡ ಕಣಜಗಳನ್ನು ಕಟ್ಟಿಸುವೆನು. ಅಲ್ಲಿ ನನ್ನ ಎಲ್ಲಾ ದವಸಧಾನ್ಯಗಳನ್ನೂ ಸರಕುಗಳನ್ನು ತುಂಬಿಟ್ಟು,
ਤਤੋਵਦਦ੍ ਇੱਥੰ ਕਰਿਸ਼਼੍ਯਾਮਿ, ਮਮ ਸਰ੍ੱਵਭਾਣ੍ਡਾਗਾਰਾਣਿ ਭਙ੍ਕ੍ਤ੍ਵਾ ਬ੍ਰੁʼਹਦ੍ਭਾਣ੍ਡਾਗਾਰਾਣਿ ਨਿਰ੍ੰਮਾਯ ਤਨ੍ਮਧ੍ਯੇ ਸਰ੍ੱਵਫਲਾਨਿ ਦ੍ਰਵ੍ਯਾਣਿ ਚ ਸ੍ਥਾਪਯਿਸ਼਼੍ਯਾਮਿ|
19 ೧೯ ನನ್ನ ಜೀವಾತ್ಮಕ್ಕೆ, ಜೀವವೇ, ಅನೇಕ ವರ್ಷಗಳಿಗೆ ಬೇಕಾದಷ್ಟು ಸರಕು ನಿನಗೆ ಬಂದಿದೆ, ವಿಶ್ರಮಿಸಿಕೋ, ಊಟಮಾಡು, ಕುಡಿ, ಸುಖಪಡು ಎಂದು ಹೇಳುವೆನು’ ಅಂದುಕೊಂಡನು.
ਅਪਰੰ ਨਿਜਮਨੋ ਵਦਿਸ਼਼੍ਯਾਮਿ, ਹੇ ਮਨੋ ਬਹੁਵਤ੍ਸਰਾਰ੍ਥੰ ਨਾਨਾਦ੍ਰਵ੍ਯਾਣਿ ਸਞ੍ਚਿਤਾਨਿ ਸਨ੍ਤਿ ਵਿਸ਼੍ਰਾਮੰ ਕੁਰੁ ਭੁਕ੍ਤ੍ਵਾ ਪੀਤ੍ਵਾ ਕੌਤੁਕਞ੍ਚ ਕੁਰੁ| ਕਿਨ੍ਤ੍ਵੀਸ਼੍ਵਰਸ੍ਤਮ੍ ਅਵਦਤ੍,
20 ೨೦ “ಆದರೆ ದೇವರು ಅವನಿಗೆ, ‘ಬುದ್ಧಿಹೀನನೇ, ಈ ರಾತ್ರಿಯೇ ನಿನ್ನ ಪ್ರಾಣವನ್ನು ನಿನ್ನಿಂದ ಕೇಳಲ್ಪಡುವುದು. ಆಗ ನೀನು ಕೂಡಿಸಿಟ್ಟಿರುವುದು ಯಾರಿಗಾಗುವುದು?’ ಎಂದು ಕೇಳಿದನು.
ਰੇ ਨਿਰ੍ਬੋਧ ਅਦ੍ਯ ਰਾਤ੍ਰੌ ਤਵ ਪ੍ਰਾਣਾਸ੍ਤ੍ਵੱਤੋ ਨੇਸ਼਼੍ਯਨ੍ਤੇ ਤਤ ਏਤਾਨਿ ਯਾਨਿ ਦ੍ਰਵ੍ਯਾਣਿ ਤ੍ਵਯਾਸਾਦਿਤਾਨਿ ਤਾਨਿ ਕਸ੍ਯ ਭਵਿਸ਼਼੍ਯਨ੍ਤਿ?
21 ೨೧ ತನಗೋಸ್ಕರ ಹಣವನ್ನು ಸಂಗ್ರಹಿಸಿಟ್ಟುಕೊಂಡು ದೇವರ ವಿಷಯಗಳಲ್ಲಿ ಐಶ್ವರ್ಯವಂತನಾಗದೆ ಇರುವವನು ಅವನಂತೆಯೇ ಇದ್ದಾನೆ” ಅಂದನು.
ਅਤਏਵ ਯਃ ਕਸ਼੍ਚਿਦ੍ ਈਸ਼੍ਵਰਸ੍ਯ ਸਮੀਪੇ ਧਨਸਞ੍ਚਯਮਕ੍ਰੁʼਤ੍ਵਾ ਕੇਵਲੰ ਸ੍ਵਨਿਕਟੇ ਸਞ੍ਚਯੰ ਕਰੋਤਿ ਸੋਪਿ ਤਾਦ੍ਰੁʼਸ਼ਃ|
22 ೨೨ ಇದಲ್ಲದೆ ಯೇಸು ತನ್ನ ಶಿಷ್ಯರಿಗೆ ಹೇಳಿದ್ದೇನಂದರೆ, “ಈ ಕಾರಣದಿಂದ ಪ್ರಾಣಧಾರಣೆಗೆ ಏನು ಊಟ ಮಾಡಬೇಕು? ದೇಹ ರಕ್ಷಣೆಗೆ ಏನು ಧರಿಸಿಕೊಳ್ಳಬೇಕು ಎಂದು ಚಿಂತೆಮಾಡಬೇಡಿರಿ ಎಂಬುದಾಗಿ ನಿಮಗೆ ಹೇಳುತ್ತೇನೆ.
ਅਥ ਸ ਸ਼ਿਸ਼਼੍ਯੇਭ੍ਯਃ ਕਥਯਾਮਾਸ, ਯੁਸ਼਼੍ਮਾਨਹੰ ਵਦਾਮਿ, ਕਿੰ ਖਾਦਿਸ਼਼੍ਯਾਮਃ? ਕਿੰ ਪਰਿਧਾਸ੍ਯਾਮਃ? ਇਤ੍ਯੁਕ੍ਤ੍ਵਾ ਜੀਵਨਸ੍ਯ ਸ਼ਰੀਰਸ੍ਯ ਚਾਰ੍ਥੰ ਚਿਨ੍ਤਾਂ ਮਾ ਕਾਰ੍ਸ਼਼੍ਟ|
23 ೨೩ ಊಟಕ್ಕಿಂತ ಪ್ರಾಣವೂ ಉಡುಪಿಗಿಂತ ದೇಹವು ಮೇಲಾದದು.
ਭਕ੍ਸ਼਼੍ਯਾੱਜੀਵਨੰ ਭੂਸ਼਼ਣਾੱਛਰੀਰਞ੍ਚ ਸ਼੍ਰੇਸ਼਼੍ਠੰ ਭਵਤਿ|
24 ೨೪ ಕಾಗೆಗಳನ್ನು ಗಮನಿಸಿರಿ. ಅವು ಬಿತ್ತುವುದಿಲ್ಲ, ಕೊಯ್ಯುವುದಿಲ್ಲ, ಅವುಗಳಿಗೆ ಉಗ್ರಾಣವೂ ಇಲ್ಲ, ಕಣಜವೂ ಇಲ್ಲ; ಆದಾಗ್ಯೂ ದೇವರು ಅವುಗಳನ್ನು ಸಾಕಿಸಲಹುತ್ತಾನೆ. ಹಕ್ಕಿಗಳಿಗಿಂತ ನೀವು ಎಷ್ಟೋ ಹೆಚ್ಚಿನವರಲ್ಲವೇ.
ਕਾਕਪਕ੍ਸ਼਼ਿਣਾਂ ਕਾਰ੍ੱਯੰ ਵਿਚਾਰਯਤ, ਤੇ ਨ ਵਪਨ੍ਤਿ ਸ਼ਸ੍ਯਾਨਿ ਚ ਨ ਛਿਨ੍ਦਨ੍ਤਿ, ਤੇਸ਼਼ਾਂ ਭਾਣ੍ਡਾਗਾਰਾਣਿ ਨ ਸਨ੍ਤਿ ਕੋਸ਼਼ਾਸ਼੍ਚ ਨ ਸਨ੍ਤਿ, ਤਥਾਪੀਸ਼੍ਵਰਸ੍ਤੇਭ੍ਯੋ ਭਕ੍ਸ਼਼੍ਯਾਣਿ ਦਦਾਤਿ, ਯੂਯੰ ਪਕ੍ਸ਼਼ਿਭ੍ਯਃ ਸ਼੍ਰੇਸ਼਼੍ਠਤਰਾ ਨ ਕਿੰ?
25 ೨೫ ಚಿಂತಿಸಿ, ಚಿಂತಿಸಿ, ನಿಮ್ಮ ಜೀವನಾವಧಿಯನ್ನು ಒಂದು ಮೊಳದಷ್ಟು ಹೆಚ್ಚಿಸಲುನಿಮ್ಮಲ್ಲಿ ಯಾರಿಂದಾದೀತು?
ਅਪਰਞ੍ਚ ਭਾਵਯਿਤ੍ਵਾ ਨਿਜਾਯੁਸ਼਼ਃ ਕ੍ਸ਼਼ਣਮਾਤ੍ਰੰ ਵਰ੍ੱਧਯਿਤੁੰ ਸ਼ਕ੍ਨੋਤਿ, ਏਤਾਦ੍ਰੁʼਸ਼ੋ ਲਾਕੋ ਯੁਸ਼਼੍ਮਾਕੰ ਮਧ੍ਯੇ ਕੋਸ੍ਤਿ?
26 ೨೬ ಇಂಥ ಅಲ್ಪ ಕಾರ್ಯಗಳನ್ನು ಮಾಡಲು ನೀವು ಆಸಕ್ತರಾಗಿರಲಾಗಿ ಉಳಿದ ವಿಷಯದಲ್ಲಿ ಚಿಂತೆಮಾಡುವುದೇಕೆ?
ਅਤਏਵ ਕ੍ਸ਼਼ੁਦ੍ਰੰ ਕਾਰ੍ੱਯੰ ਸਾਧਯਿਤੁਮ੍ ਅਸਮਰ੍ਥਾ ਯੂਯਮ੍ ਅਨ੍ਯਸ੍ਮਿਨ੍ ਕਾਰ੍ੱਯੇ ਕੁਤੋ ਭਾਵਯਥ?
27 ೨೭ ಅಡವಿಯ ಹೂವುಗಳು ಬೆಳೆಯುವ ರೀತಿಯನ್ನು ಲಕ್ಷ್ಯವಿಟ್ಟು ಗಮನಿಸಿ ನೋಡಿರಿ; ಅವು ದುಡಿಯುವುದಿಲ್ಲ, ನೂಲುವುದಿಲ್ಲ, ಆದರೂ ಅರಸನಾದ ಸೊಲೊಮೋನನು ತನ್ನ ಸರ್ವ ವೈಭವದಲ್ಲಿ ಇದ್ದಾಗಲೂ, ಈ ಅಡವಿಯ ಹೂವುಗಳಲ್ಲಿ ಒಂದರಷ್ಟೂ ಸುಂದರವಾದ ಉಡುಪುಗಳನ್ನು ಧರಿಸಲಿಲ್ಲವೆಂದು ನಿಮಗೆ ಹೇಳುತ್ತೇನೆ.
ਅਨ੍ਯੱਚ ਕਾਮ੍ਪਿਲਪੁਸ਼਼੍ਪੰ ਕਥੰ ਵਰ੍ੱਧਤੇ ਤਦਾਪਿ ਵਿਚਾਰਯਤ, ਤਤ੍ ਕਞ੍ਚਨ ਸ਼੍ਰਮੰ ਨ ਕਰੋਤਿ ਤਨ੍ਤੂੰਸ਼੍ਚ ਨ ਜਨਯਤਿ ਕਿਨ੍ਤੁ ਯੁਸ਼਼੍ਮਭ੍ਯੰ ਯਥਾਰ੍ਥੰ ਕਥਯਾਮਿ ਸੁਲੇਮਾਨ੍ ਬਹ੍ਵੈਸ਼੍ਵਰ੍ੱਯਾਨ੍ਵਿਤੋਪਿ ਪੁਸ਼਼੍ਪਸ੍ਯਾਸ੍ਯ ਸਦ੍ਰੁʼਸ਼ੋ ਵਿਭੂਸ਼਼ਿਤੋ ਨਾਸੀਤ੍|
28 ೨೮ ಎಲೈ ಅಲ್ಪ ವಿಶ್ವಾಸಿಗಳೇ, ಈ ಹೊತ್ತು ಇದ್ದು ನಾಳೆ ಒಲೆಯ ಪಾಲಾಗುವ ಅಡವಿಯ ಹುಲ್ಲಿಗೆ ದೇವರು ಈ ಪ್ರಕಾರ ಉಡಿಸಿದರೆ ಅದಕ್ಕಿಂತ ಎಷ್ಟೋ ಹೆಚ್ಚಾಗಿ ನಿಮಗೆ ಉಡಿಸಿ ತೊಡಿಸುವನು.
ਅਦ੍ਯ ਕ੍ਸ਼਼ੇਤ੍ਰੇ ਵਰ੍ੱਤਮਾਨੰ ਸ਼੍ਵਸ਼੍ਚੂੱਲ੍ਯਾਂ ਕ੍ਸ਼਼ੇਪ੍ਸ੍ਯਮਾਨੰ ਯਤ੍ ਤ੍ਰੁʼਣੰ, ਤਸ੍ਮੈ ਯਦੀਸ਼੍ਵਰ ਇੱਥੰ ਭੂਸ਼਼ਯਤਿ ਤਰ੍ਹਿ ਹੇ ਅਲ੍ਪਪ੍ਰਤ੍ਯਯਿਨੋ ਯੁਸ਼਼੍ਮਾਨ ਕਿੰ ਨ ਪਰਿਧਾਪਯਿਸ਼਼੍ਯਤਿ?
29 ೨೯ ಏನು ಊಟ ಮಾಡಬೇಕು? ಏನು ಕುಡಿಯಬೇಕು? ಎಂದು ತವಕಪಟ್ಟು ಚಿಂತಿಸಬೇಡಿರಿ.
ਅਤਏਵ ਕਿੰ ਖਾਦਿਸ਼਼੍ਯਾਮਃ? ਕਿੰ ਪਰਿਧਾਸ੍ਯਾਮਃ? ਏਤਦਰ੍ਥੰ ਮਾ ਚੇਸ਼਼੍ਟਧ੍ਵੰ ਮਾ ਸੰਦਿਗ੍ਧ੍ਵਞ੍ਚ|
30 ೩೦ ಇವೆಲ್ಲವುಗಳ ಕುರಿತು ಇಹಲೋಕದ ಜನಗಳು ಅಲೆದಾಡುತ್ತಾರೆ. ಇವು ನಿಮಗೆ ಅವಶ್ಯವೆಂದು ನಿಮ್ಮ ತಂದೆಗೆ ತಿಳಿದಿದೆ.
ਜਗਤੋ ਦੇਵਾਰ੍ੱਚਕਾ ਏਤਾਨਿ ਸਰ੍ੱਵਾਣਿ ਚੇਸ਼਼੍ਟਨਤੇ; ਏਸ਼਼ੁ ਵਸ੍ਤੁਸ਼਼ੁ ਯੁਸ਼਼੍ਮਾਕੰ ਪ੍ਰਯੋਜਨਮਾਸ੍ਤੇ ਇਤਿ ਯੁਸ਼਼੍ਮਾਕੰ ਪਿਤਾ ਜਾਨਾਤਿ|
31 ೩೧ ನೀವಾದರೋ ದೇವರ ರಾಜ್ಯಕ್ಕಾಗಿ ತವಕಪಡಿರಿ. ಇದರ ಕೂಡ ಅವೂ ನಿಮಗೆ ದೊರಕುವವು.
ਅਤਏਵੇਸ਼੍ਵਰਸ੍ਯ ਰਾਜ੍ਯਾਰ੍ਥੰ ਸਚੇਸ਼਼੍ਟਾ ਭਵਤ ਤਥਾ ਕ੍ਰੁʼਤੇ ਸਰ੍ੱਵਾਣ੍ਯੇਤਾਨਿ ਦ੍ਰਵ੍ਯਾਣਿ ਯੁਸ਼਼੍ਮਭ੍ਯੰ ਪ੍ਰਦਾਯਿਸ਼਼੍ਯਨ੍ਤੇ|
32 ೩೨ ಚಿಕ್ಕ ಹಿಂಡೇ, ಹೆದರಬೇಡ; ಆ ರಾಜ್ಯವನ್ನು ನಿಮಗೆ ದಯಪಾಲಿಸುವುದಕ್ಕೆ ನಿಮ್ಮ ತಂದೆಯು ಸಂತೋಷವುಳ್ಳವನಾಗಿದ್ದಾನೆ.
ਹੇ ਕ੍ਸ਼਼ੁਦ੍ਰਮੇਸ਼਼ਵ੍ਰਜ ਯੂਯੰ ਮਾ ਭੈਸ਼਼੍ਟ ਯੁਸ਼਼੍ਮਭ੍ਯੰ ਰਾਜ੍ਯੰ ਦਾਤੁੰ ਯੁਸ਼਼੍ਮਾਕੰ ਪਿਤੁਃ ਸੰਮਤਿਰਸ੍ਤਿ|
33 ೩೩ ನಿಮಗಿರುವುದನ್ನು ಮಾರಿಬಿಟ್ಟು ದಾನಧರ್ಮ ಮಾಡಿರಿ. ನಶಿಸದ ಹಣಚೀಲಗಳನ್ನು ಗಳಿಸಿಕೊಳ್ಳಿರಿ. ಪರಲೋಕದಲ್ಲಿ ಲಯವಾಗದ ಸಂಪತ್ತನ್ನು ಇಟ್ಟುಕೊಳ್ಳಿರಿ. ಅದನ್ನು ಕದಿಯುವುದಕ್ಕೆ ಕಳ್ಳನು ಸಮೀಪಕ್ಕೆ ಬರಲಾರನು. ಅವು ನುಸಿ ಹಿಡಿದು ನಾಶವಾಗುವುದಿಲ್ಲ.
ਅਤਏਵ ਯੁਸ਼਼੍ਮਾਕੰ ਯਾ ਯਾ ਸਮ੍ਪੱਤਿਰਸ੍ਤਿ ਤਾਂ ਤਾਂ ਵਿਕ੍ਰੀਯ ਵਿਤਰਤ, ਯਤ੍ ਸ੍ਥਾਨੰ ਚੌਰਾ ਨਾਗੱਛਨ੍ਤਿ, ਕੀਟਾਸ਼੍ਚ ਨ ਕ੍ਸ਼਼ਾਯਯਨ੍ਤਿ ਤਾਦ੍ਰੁʼਸ਼ੇ ਸ੍ਵਰ੍ਗੇ ਨਿਜਾਰ੍ਥਮ੍ ਅਜਰੇ ਸਮ੍ਪੁਟਕੇ (ਅ)ਕ੍ਸ਼਼ਯੰ ਧਨੰ ਸਞ੍ਚਿਨੁਤ ਚ;
34 ೩೪ ನಿಮ್ಮ ಗಂಟು ಇದ್ದಲ್ಲಿಯೇ ನಿಮ್ಮ ಮನಸ್ಸು ಇರುತ್ತದಷ್ಟೆ.
ਯਤੋ ਯਤ੍ਰ ਯੁਸ਼਼੍ਮਾਕੰ ਧਨੰ ਵਰ੍ੱਤਤੇ ਤਤ੍ਰੇਵ ਯੁਸ਼਼੍ਮਾਕੰ ਮਨਃ|
35 ೩೫ “ನಿಮ್ಮ ನಡುಗಳು ಕಟ್ಟಿರಲಿ. ನಿಮ್ಮ ದೀಪಗಳು ಆರದಂತೆ ಉರಿಯುತ್ತಾ ಇರಲಿ.
ਅਪਰਞ੍ਚ ਯੂਯੰ ਪ੍ਰਦੀਪੰ ਜ੍ਵਾਲਯਿਤ੍ਵਾ ਬੱਧਕਟਯਸ੍ਤਿਸ਼਼੍ਠਤ;
36 ೩೬ ನೀವಂತೂ ತಮ್ಮ ಯಜಮಾನನು ಯಾವಾಗ ಮದುವೆ ಔತಣ ಮುಗಿಸಿಕೊಂಡು ಹಿಂತಿರುಗುವನೋ ಎಂದು ಕಾಯುವಂಥ ಮತ್ತು ಆತನು ತಟ್ಟಿದ ಕೂಡಲೆ ಬಾಗಿಲನ್ನು ತೆರೆಯಲು ಸಿದ್ಧರಾಗಿರುವಂಥ ಆಳುಗಳಂತೆ ಇರಿ.
ਪ੍ਰਭੁ ਰ੍ਵਿਵਾਹਾਦਾਗਤ੍ਯ ਯਦੈਵ ਦ੍ਵਾਰਮਾਹਨ੍ਤਿ ਤਦੈਵ ਦ੍ਵਾਰੰ ਮੋਚਯਿਤੁੰ ਯਥਾ ਭ੍ਰੁʼਤ੍ਯਾ ਅਪੇਕ੍ਸ਼਼੍ਯ ਤਿਸ਼਼੍ਠਨ੍ਤਿ ਤਥਾ ਯੂਯਮਪਿ ਤਿਸ਼਼੍ਠਤ|
37 ೩೭ ಯಜಮಾನನು ಬಂದು ಯಾವ ಆಳು ಎಚ್ಚರವಾಗಿದ್ದಾನೆಂದು ಕಂಡುಕೊಳ್ಳುವನೋ ಆ ಆಳುಗಳೇ ಧನ್ಯರು. ಏಕೆಂದರೆ, ಯಜಮಾನನೇ ನಡುಕಟ್ಟಿಕೊಂಡು ಆ ಆಳುಗಳನ್ನು ಊಟಕ್ಕೆ ಕುಳ್ಳಿರಿಸಿ, ಹತ್ತಿರಕ್ಕೆ ಬಂದು ಅವರಿಗೆ ಊಟವನ್ನು ಬಡಿಸುವನು ಎಂದು ನಿಮಗೆ ಸತ್ಯವಾಗಿ ಹೇಳುತ್ತೇನೆ.
ਯਤਃ ਪ੍ਰਭੁਰਾਗਤ੍ਯ ਯਾਨ੍ ਦਾਸਾਨ੍ ਸਚੇਤਨਾਨ੍ ਤਿਸ਼਼੍ਠਤੋ ਦ੍ਰਕ੍ਸ਼਼੍ਯਤਿ ਤਏਵ ਧਨ੍ਯਾਃ; ਅਹੰ ਯੁਸ਼਼੍ਮਾਨ੍ ਯਥਾਰ੍ਥੰ ਵਦਾਮਿ ਪ੍ਰਭੁਸ੍ਤਾਨ੍ ਭੋਜਨਾਰ੍ਥਮ੍ ਉਪਵੇਸ਼੍ਯ ਸ੍ਵਯੰ ਬੱਧਕਟਿਃ ਸਮੀਪਮੇਤ੍ਯ ਪਰਿਵੇਸ਼਼ਯਿਸ਼਼੍ਯਤਿ|
38 ೩೮ ಯಜಮಾನನು ಬರುವಾಗ ನಡು ರಾತ್ರಿಯಾಗಿರಲಿ, ಮುಂಜಾವವಾಗಿರಲಿ, ಆತನು ಬರುವಾಗ ಎಚ್ಚರವಾಗಿ ಕಾಣಿಸಿಕೊಳ್ಳುವ ಆಳುಗಳು ಧನ್ಯರು.
ਯਦਿ ਦ੍ਵਿਤੀਯੇ ਤ੍ਰੁʼਤੀਯੇ ਵਾ ਪ੍ਰਹਰੇ ਸਮਾਗਤ੍ਯ ਤਥੈਵ ਪਸ਼੍ਯਤਿ, ਤਰ੍ਹਿ ਤਏਵ ਦਾਸਾ ਧਨ੍ਯਾਃ|
39 ೩೯ ಕಳ್ಳನು ಬರುವ ಗಳಿಗೆಯು ಮನೆ ಯಜಮಾನನಿಗೆ ತಿಳಿದಿದ್ದರೆ ಅವನು ಎಚ್ಚರವಾಗಿದ್ದು, ತನ್ನ ಮನೆಗೆ ಕನ್ನಾ ಹಾಕಗೊಡಿಸುತ್ತಿರಲಿಲ್ಲವೆಂದು ತಿಳಿದುಕೊಳ್ಳಿರಿ.
ਅਪਰਞ੍ਚ ਕਸ੍ਮਿਨ੍ ਕ੍ਸ਼਼ਣੇ ਚੌਰਾ ਆਗਮਿਸ਼਼੍ਯਨ੍ਤਿ ਇਤਿ ਯਦਿ ਗ੍ਰੁʼਹਪਤਿ ਰ੍ਜ੍ਞਾਤੁੰ ਸ਼ਕ੍ਨੋਤਿ ਤਦਾਵਸ਼੍ਯੰ ਜਾਗ੍ਰਨ੍ ਨਿਜਗ੍ਰੁʼਹੇ ਸਨ੍ਧਿੰ ਕਰ੍ੱਤਯਿਤੁੰ ਵਾਰਯਤਿ ਯੂਯਮੇਤਦ੍ ਵਿੱਤ|
40 ೪೦ ಅದುದರಿಂದ ನೀವು ಸಹ ಸಿದ್ಧವಾಗಿರಿ. ನೀವು ನೆನಸದ ಗಳಿಗೆಯಲ್ಲಿ ಮನುಷ್ಯಕುಮಾರನು ಬರುತ್ತಾನೆ” ಅಂದನು.
ਅਤਏਵ ਯੂਯਮਪਿ ਸੱਜਮਾਨਾਸ੍ਤਿਸ਼਼੍ਠਤ ਯਤੋ ਯਸ੍ਮਿਨ੍ ਕ੍ਸ਼਼ਣੇ ਤੰ ਨਾਪ੍ਰੇਕ੍ਸ਼਼ਧ੍ਵੇ ਤਸ੍ਮਿੰਨੇਵ ਕ੍ਸ਼਼ਣੇ ਮਨੁਸ਼਼੍ਯਪੁਤ੍ਰ ਆਗਮਿਸ਼਼੍ਯਤਿ|
41 ೪೧ ಆಗ ಪೇತ್ರನು, “ಕರ್ತನೇ, ನೀನು ಈ ಸಾಮ್ಯವನ್ನು ನಮಗೆ ಮಾತ್ರ ಹೇಳುತ್ತಿದ್ದೀಯೋ ಅಥವಾ ಎಲ್ಲರಿಗೋ?” ಎಂದು ಕೇಳಲು,
ਤਦਾ ਪਿਤਰਃ ਪਪ੍ਰੱਛ, ਹੇ ਪ੍ਰਭੋ ਭਵਾਨ੍ ਕਿਮਸ੍ਮਾਨ੍ ਉੱਦਿਸ਼੍ਯ ਕਿੰ ਸਰ੍ੱਵਾਨ੍ ਉੱਦਿਸ਼੍ਯ ਦ੍ਰੁʼਸ਼਼੍ਟਾਨ੍ਤਕਥਾਮਿਮਾਂ ਵਦਤਿ?
42 ೪೨ ಕರ್ತನು ಹೇಳಿದ್ದೇನಂದರೆ, “ಹೊತ್ತು ಹೊತ್ತಿಗೆ ಅವಶ್ಯಕತೆಗೆ ಬೇಕಾದದ್ದನ್ನು ಅಳೆದು ಕೊಡುವುದಕ್ಕಾಗಿ ಯಜಮಾನನು ತನ್ನ ಆಳುಗಳ ಮೇಲೆ ನೇಮಿಸಿದ ನಂಬಿಗಸ್ತನೂ ವಿವೇಕಿಯೂ ಆದ ಮೇಲ್ವಿಚಾರಕ ಯಾರು?
ਤਤਃ ਪ੍ਰਭੁਃ ਪ੍ਰੋਵਾਚ, ਪ੍ਰਭੁਃ ਸਮੁਚਿਤਕਾਲੇ ਨਿਜਪਰਿਵਾਰਾਰ੍ਥੰ ਭੋਜ੍ਯਪਰਿਵੇਸ਼਼ਣਾਯ ਯੰ ਤਤ੍ਪਦੇ ਨਿਯੋਕ੍ਸ਼਼੍ਯਤਿ ਤਾਦ੍ਰੁʼਸ਼ੋ ਵਿਸ਼੍ਵਾਸ੍ਯੋ ਬੋੱਧਾ ਕਰ੍ੰਮਾਧੀਸ਼ਃ ਕੋਸ੍ਤਿ?
43 ೪೩ ಯಜಮಾನನು ಬಂದು ಯಾವ ಆಳು ಹೀಗೆ ಮಾಡುವುದನ್ನು ಕಾಣುವನೋ ಆ ಆಳು ಧನ್ಯನು.
ਪ੍ਰਭੁਰਾਗਤ੍ਯ ਯਮ੍ ਏਤਾਦ੍ਰੁʼਸ਼ੇ ਕਰ੍ੰਮਣਿ ਪ੍ਰਵ੍ਰੁʼੱਤੰ ਦ੍ਰਕ੍ਸ਼਼੍ਯਤਿ ਸਏਵ ਦਾਸੋ ਧਨ੍ਯਃ|
44 ೪೪ ಅಂಥವನನ್ನು ಅವನು ತನ್ನ ಎಲ್ಲಾ ಆಸ್ತಿಯ ಮೇಲೆ ಅಧಿಕಾರಿಯಾಗಿ ನೇಮಿಸುವನು ಎಂದು ನಿಮಗೆ ಸತ್ಯವಾಗಿ ಹೇಳುತ್ತೇನೆ.
ਅਹੰ ਯੁਸ਼਼੍ਮਾਨ੍ ਯਥਾਰ੍ਥੰ ਵਦਾਮਿ ਸ ਤੰ ਨਿਜਸਰ੍ੱਵਸ੍ਵਸ੍ਯਾਧਿਪਤਿੰ ਕਰਿਸ਼਼੍ਯਤਿ|
45 ೪೫ ಆದರೆ ಆ ಆಳು, ನನ್ನ ಯಜಮಾನನು ಬರುವುದಕ್ಕೆ ತಡವಾಗುತ್ತದೆಯೆಂದು ತನ್ನ ಮನಸ್ಸಿನಲ್ಲಿ ಅಂದುಕೊಂಡು ಗಂಡಾಳು ಹೆಣ್ಣಾಳುಗಳನ್ನು ಹೊಡೆಯುವುದಕ್ಕೂ ತೊಂದರೆಕೊಡುವುದಕ್ಕೂ ಮತ್ತು ಅಮಲೇರುವಷ್ಟು ತಿಂದು ಕುಡಿಯುವುದಕ್ಕೂ ತೊಡಗಿದರೆ,
ਕਿਨ੍ਤੁ ਪ੍ਰਭੁਰ੍ਵਿਲਮ੍ਬੇਨਾਗਮਿਸ਼਼੍ਯਤਿ, ਇਤਿ ਵਿਚਿਨ੍ਤ੍ਯ ਸ ਦਾਸੋ ਯਦਿ ਤਦਨ੍ਯਦਾਸੀਦਾਸਾਨ੍ ਪ੍ਰਹਰ੍ੱਤੁਮ੍ ਭੋਕ੍ਤੁੰ ਪਾਤੁੰ ਮਦਿਤੁਞ੍ਚ ਪ੍ਰਾਰਭਤੇ,
46 ೪೬ ಅವನು ನೆನಸದ ದಿನದಲ್ಲಿಯೂ ತಿಳಿಯದ ಗಳಿಗೆಯಲ್ಲಿಯೂ ಆ ಆಳಿನ ಯಜಮಾನನು ಬಂದು ಅವನನ್ನು ಕಠಿಣವಾದ ಚಿತ್ರಹಿಂಸೆಗೂ ಅಪನಂಬಿಗಸ್ತರಿಗೆ ಆಗತಕ್ಕ ಗತಿಯನ್ನು ಅವನಿಗೆ ನೇಮಿಸುವನು.
ਤਰ੍ਹਿ ਯਦਾ ਪ੍ਰਭੁੰ ਨਾਪੇਕ੍ਸ਼਼ਿਸ਼਼੍ਯਤੇ ਯਸ੍ਮਿਨ੍ ਕ੍ਸ਼਼ਣੇ ਸੋ(ਅ)ਚੇਤਨਸ਼੍ਚ ਸ੍ਥਾਸ੍ਯਤਿ ਤਸ੍ਮਿੰਨੇਵ ਕ੍ਸ਼਼ਣੇ ਤਸ੍ਯ ਪ੍ਰਭੁਰਾਗਤ੍ਯ ਤੰ ਪਦਭ੍ਰਸ਼਼੍ਟੰ ਕ੍ਰੁʼਤ੍ਵਾ ਵਿਸ਼੍ਵਾਸਹੀਨੈਃ ਸਹ ਤਸ੍ਯ ਅੰਸ਼ੰ ਨਿਰੂਪਯਿਸ਼਼੍ਯਤਿ|
47 ೪೭ ತನ್ನ ಯಜಮಾನನ ಇಷ್ಟಾರ್ಥವನ್ನು ಆಳು ಅರಿತುಕೊಂಡಿದ್ದರೂ ಅಜಾಗರೂಕನಾಗಿ ಅವನ ಚಿತ್ತಕ್ಕನುಸಾರ ನಡೆಯದಿದ್ದರೆ ಕಠಿಣವಾದ ಶಿಕ್ಷೆಗೆ ಗುರಿಯಾಗುವನು.
ਯੋ ਦਾਸਃ ਪ੍ਰਭੇਰਾਜ੍ਞਾਂ ਜ੍ਞਾਤ੍ਵਾਪਿ ਸੱਜਿਤੋ ਨ ਤਿਸ਼਼੍ਠਤਿ ਤਦਾਜ੍ਞਾਨੁਸਾਰੇਣ ਚ ਕਾਰ੍ੱਯੰ ਨ ਕਰੋਤਿ ਸੋਨੇਕਾਨ੍ ਪ੍ਰਹਾਰਾਨ੍ ਪ੍ਰਾਪ੍ਸ੍ਯਤਿ;
48 ೪೮ ತಿಳಿಯದೆ ಅಜಾಗರೂಕನಾಗಿದ್ದರೆ ಕಡಿಮೆ ಶಿಕ್ಷೆಗೆ ಗುರಿಯಾಗುತ್ತಾನೆ. ಯಾವನಿಗೆ ಬಹಳವಾಗಿ ಕೊಡಲ್ಪಟ್ಟಿದೆಯೋ ಅವನ ಕಡೆಯಿಂದ ಬಹಳವಾಗಿ ನಿರೀಕ್ಷಿಸಲ್ಪಡುವುದು. ಇದಲ್ಲದೆ ಯಾವನ ವಶಕ್ಕೆ ಬಹಳವಾಗಿ ಒಪ್ಪಿಸಿದೆಯೋ ಅವನ ಕಡೆಯಿಂದ ಇನ್ನೂ ಹೆಚ್ಚಾಗಿ ಕೇಳಲ್ಪಡುವುದು.
ਕਿਨ੍ਤੁ ਯੋ ਜਨੋ(ਅ)ਜ੍ਞਾਤ੍ਵਾ ਪ੍ਰਹਾਰਾਰ੍ਹੰ ਕਰ੍ੰਮ ਕਰੋਤਿ ਸੋਲ੍ਪਪ੍ਰਹਾਰਾਨ੍ ਪ੍ਰਾਪ੍ਸ੍ਯਤਿ| ਯਤੋ ਯਸ੍ਮੈ ਬਾਹੁਲ੍ਯੇਨ ਦੱਤੰ ਤਸ੍ਮਾਦੇਵ ਬਾਹੁਲ੍ਯੇਨ ਗ੍ਰਹੀਸ਼਼੍ਯਤੇ, ਮਾਨੁਸ਼਼ਾ ਯਸ੍ਯ ਨਿਕਟੇ ਬਹੁ ਸਮਰ੍ਪਯਨ੍ਤਿ ਤਸ੍ਮਾਦ੍ ਬਹੁ ਯਾਚਨ੍ਤੇ|
49 ೪೯ “ನಾನು ಭೂಮಿಯ ಮೇಲೆ ಬೆಂಕಿಯನ್ನು ಹಾಕಬೇಕೆಂದು ಬಂದೆನು. ಅದು ಇಷ್ಟರೊಳಗೆ ಹತ್ತಿಕೊಂಡಿದ್ದರೆ ನನಗೆ ಎಷ್ಟೋ ಸಂತೋಷ.
ਅਹੰ ਪ੍ਰੁʼਥਿਵ੍ਯਾਮ੍ ਅਨੈਕ੍ਯਰੂਪੰ ਵਹ੍ਨਿ ਨਿਕ੍ਸ਼਼ੇਪ੍ਤੁਮ੍ ਆਗਤੋਸ੍ਮਿ, ਸ ਚੇਦ੍ ਇਦਾਨੀਮੇਵ ਪ੍ਰਜ੍ਵਲਤਿ ਤਤ੍ਰ ਮਮ ਕਾ ਚਿਨ੍ਤਾ?
50 ೫೦ ಆದರೆ ನಾನು ಹೊಂದತಕ್ಕ ದೀಕ್ಷಾಸ್ನಾನ ಒಂದುಂಟು, ಅದು ನೆರವೇರುವ ತನಕ ನನಗೆ ನೆಮ್ಮದಿಯಿಲ್ಲ.
ਕਿਨ੍ਤੁ ਯੇਨ ਮੱਜਨੇਨਾਹੰ ਮਗ੍ਨੋ ਭਵਿਸ਼਼੍ਯਾਮਿ ਯਾਵਤ੍ਕਾਲੰ ਤਸ੍ਯ ਸਿੱਧਿ ਰ੍ਨ ਭਵਿਸ਼਼੍ਯਤਿ ਤਾਵਦਹੰ ਕਤਿਕਸ਼਼੍ਟੰ ਪ੍ਰਾਪ੍ਸ੍ਯਾਮਿ|
51 ೫೧ ನಾನು ಭೂಮಿಯಲ್ಲಿ ಸಮಾಧಾನವನ್ನುಂಟು ಮಾಡುವುದಕ್ಕೆ ಬಂದೆನೆಂದು ಭಾವಿಸುತ್ತೀರೋ? ಅದಕ್ಕೆ ಬರಲಿಲ್ಲ, ಭಿನ್ನಭೇದಗಳನ್ನು ಉಂಟುಮಾಡುವದಕ್ಕೆ ಬಂದೆನೆಂದು ನಿಮಗೆ ಒತ್ತಿ ಹೇಳುತ್ತೇನೆ.
ਮੇਲਨੰ ਕਰ੍ੱਤੁੰ ਜਗਦ੍ ਆਗਤੋਸ੍ਮਿ ਯੂਯੰ ਕਿਮਿੱਥੰ ਬੋਧਧ੍ਵੇ? ਯੁਸ਼਼੍ਮਾਨ੍ ਵਦਾਮਿ ਨ ਤਥਾ, ਕਿਨ੍ਤ੍ਵਹੰ ਮੇਲਨਾਭਾਵੰ ਕਰ੍ੱਤੁੰਮ੍ ਆਗਤੋਸ੍ਮਿ|
52 ೫೨ ಹೇಗೆಂದರೆ, ಒಂದೇ ಮನೆಯಲ್ಲಿರುವ ಐದು ಮಂದಿಯೊಳಗೆ ಇಬ್ಬರಿಗೆ ವಿರೋಧವಾಗಿ ಮೂವರು, ಮೂವರಿಗೆ ವಿರೋಧವಾಗಿ ಇಬ್ಬರೂ ಏಳುವರು.
ਯਸ੍ਮਾਦੇਤਤ੍ਕਾਲਮਾਰਭ੍ਯ ਏਕਤ੍ਰਸ੍ਥਪਰਿਜਨਾਨਾਂ ਮਧ੍ਯੇ ਪਞ੍ਚਜਨਾਃ ਪ੍ਰੁʼਥਗ੍ ਭੂਤ੍ਵਾ ਤ੍ਰਯੋ ਜਨਾ ਦ੍ਵਯੋਰ੍ਜਨਯੋਃ ਪ੍ਰਤਿਕੂਲਾ ਦ੍ਵੌ ਜਨੌ ਚ ਤ੍ਰਯਾਣਾਂ ਜਨਾਨਾਂ ਪ੍ਰਤਿਕੂਲੌ ਭਵਿਸ਼਼੍ਯਨ੍ਤਿ|
53 ೫೩ ಮಗನಿಗೆ ವಿರೋಧವಾಗಿ ತಂದೆಯು, ತಂದೆಗೆ ವಿರೋಧವಾಗಿ ಮಗನು, ಮಗಳಿಗೆ ವಿರೋಧವಾಗಿ ತಾಯಿಯು, ತಾಯಿಗೆ ವಿರೋಧವಾಗಿ ಮಗಳು, ಸೊಸೆಗೆ ವಿರೋಧವಾಗಿ ಅತ್ತೆಯು. ಅತ್ತೆಗೆ ವಿರೋಧವಾಗಿ ಸೊಸೆಯು ಪರಸ್ಪರ ಭಿನ್ನಭೇದವುಳ್ಳವರಾಗಿ ವಿಂಗಡಿಸಿ ಹೋಗುವರು” ಅಂದನು.
ਪਿਤਾ ਪੁਤ੍ਰਸ੍ਯ ਵਿਪਕ੍ਸ਼਼ਃ ਪੁਤ੍ਰਸ਼੍ਚ ਪਿਤੁ ਰ੍ਵਿਪਕ੍ਸ਼਼ੋ ਭਵਿਸ਼਼੍ਯਤਿ ਮਾਤਾ ਕਨ੍ਯਾਯਾ ਵਿਪਕ੍ਸ਼਼ਾ ਕਨ੍ਯਾ ਚ ਮਾਤੁ ਰ੍ਵਿਪਕ੍ਸ਼਼ਾ ਭਵਿਸ਼਼੍ਯਤਿ, ਤਥਾ ਸ਼੍ਵਸ਼੍ਰੂਰ੍ਬਧ੍ਵਾ ਵਿਪਕ੍ਸ਼਼ਾ ਬਧੂਸ਼੍ਚ ਸ਼੍ਵਸ਼੍ਰ੍ਵਾ ਵਿਪਕ੍ਸ਼਼ਾ ਭਵਿਸ਼਼੍ਯਤਿ|
54 ೫೪ ಇದಲ್ಲದೆ ಯೇಸು ಜನಸಮೂಹಕ್ಕೆ ಹೇಳಿದ್ದೇನಂದರೆ, “ಪಶ್ಚಿಮ ದಿಕ್ಕಿನಲ್ಲಿ ಮೋಡ ಏಳುವುದನ್ನು ನೀವು ನೋಡಿದ ಕೂಡಲೆ ಮಳೆ ಬರುತ್ತದೆ ಅನ್ನುತ್ತೀರಿ, ಹಾಗೆಯೇ ಆಗುತ್ತದೆ.
ਸ ਲੋਕੇਭ੍ਯੋਪਰਮਪਿ ਕਥਯਾਮਾਸ, ਪਸ਼੍ਚਿਮਦਿਸ਼ਿ ਮੇਘੋਦ੍ਗਮੰ ਦ੍ਰੁʼਸ਼਼੍ਟ੍ਵਾ ਯੂਯੰ ਹਠਾਦ੍ ਵਦਥ ਵ੍ਰੁʼਸ਼਼੍ਟਿ ਰ੍ਭਵਿਸ਼਼੍ਯਤਿ ਤਤਸ੍ਤਥੈਵ ਜਾਯਤੇ|
55 ೫೫ ದಕ್ಷಿಣ ದಿಕ್ಕಿನಿಂದ ಗಾಳಿ ಬೀಸಲಾಗಿ ಸೆಕೆ ಹುಟ್ಟುತ್ತದೆ ಅನ್ನುತ್ತೀರಿ. ಅದೂ ಹಾಗೆಯೇ ಆಗುತ್ತದೆ.
ਅਪਰੰ ਦਕ੍ਸ਼਼ਿਣਤੋ ਵਾਯੌ ਵਾਤਿ ਸਤਿ ਵਦਥ ਨਿਦਾਘੋ ਭਵਿਸ਼਼੍ਯਤਿ ਤਤਃ ਸੋਪਿ ਜਾਯਤੇ|
56 ೫೬ ಕಪಟಿಗಳೇ, ನೀವು ಭೂಮ್ಯಾಕಾಶಗಳ ಲಕ್ಷಣಗಳನ್ನು ಸರಿಯಾಗಿ ಅರಿತುಕೊಳ್ಳಬಲ್ಲಿರಿ, ಆದರೆ ಪ್ರಸ್ತುತ ಕಾಲವನ್ನು ವಿವರಿಸುವ ಸಾಮರ್ಥ್ಯವನ್ನು ಹೊಂದದೆ ಹೋಗಿದ್ದಿರಾ?
ਰੇ ਰੇ ਕਪਟਿਨ ਆਕਾਸ਼ਸ੍ਯ ਭੂਮ੍ਯਾਸ਼੍ਚ ਲਕ੍ਸ਼਼ਣੰ ਬੋੱਧੁੰ ਸ਼ਕ੍ਨੁਥ,
57 ೫೭ “ಇದಲ್ಲದೆ ನ್ಯಾಯವಾದದ್ದು ಯಾವುದೆಂದು ನೀವೇ ಯಾಕೆ ತೀರ್ಮಾನ ಮಾಡಿಕೊಳ್ಳುವುದಿಲ್ಲ?
ਕਿਨ੍ਤੁ ਕਾਲਸ੍ਯਾਸ੍ਯ ਲਕ੍ਸ਼਼ਣੰ ਕੁਤੋ ਬੋੱਧੁੰ ਨ ਸ਼ਕ੍ਨੁਥ? ਯੂਯਞ੍ਚ ਸ੍ਵਯੰ ਕੁਤੋ ਨ ਨ੍ਯਾਸ਼਼੍ਯੰ ਵਿਚਾਰਯਥ?
58 ೫೮ ನೀನು ಪ್ರತಿವಾದಿಯ ಸಂಗಡ ನ್ಯಾಯಾಧಿಪತಿಯ ಬಳಿಗೆ ಹೋಗುತ್ತಿರುವಾಗ ದಾರಿಯಲ್ಲಿಯೇ ಜಗಳವನ್ನು ಪರಿಹರಿಸಿಕೊಳ್ಳಲು ಪ್ರಯತ್ನಿಸು. ಇಲ್ಲದಿದ್ದರೆ ಅವನು ನಿನ್ನನ್ನು ನ್ಯಾಯಾಧಿಪತಿಯ ಬಳಿಗೆ ಎಳಕೊಂಡು ಹೋದಾನು. ನ್ಯಾಯಾಧಿಪತಿಯು ನಿನ್ನನ್ನು ಸೆರೆ ಯಜಮಾನನ ವಶಕ್ಕೆ ಒಪ್ಪಿಸಾನು. ಸೆರೆಯಜಮಾನನು ನಿನ್ನನ್ನು ಸೆರೆಮನೆಯಲ್ಲಿ ಹಾಕಿಯಾನು.
ਅਪਰਞ੍ਚ ਵਿਵਾਦਿਨਾ ਸਾਰ੍ੱਧੰ ਵਿਚਾਰਯਿਤੁਃ ਸਮੀਪੰ ਗੱਛਨ੍ ਪਥਿ ਤਸ੍ਮਾਦੁੱਧਾਰੰ ਪ੍ਰਾਪ੍ਤੁੰ ਯਤਸ੍ਵ ਨੋਚੇਤ੍ ਸ ਤ੍ਵਾਂ ਧ੍ਰੁʼਤ੍ਵਾ ਵਿਚਾਰਯਿਤੁਃ ਸਮੀਪੰ ਨਯਤਿ| ਵਿਚਾਰਯਿਤਾ ਯਦਿ ਤ੍ਵਾਂ ਪ੍ਰਹਰ੍ੱਤੁਃ ਸਮੀਪੰ ਸਮਰ੍ਪਯਤਿ ਪ੍ਰਹਰ੍ੱਤਾ ਤ੍ਵਾਂ ਕਾਰਾਯਾਂ ਬਧ੍ਨਾਤਿ
59 ೫೯ ನೀನು ಕೊನೆಯ ಕಾಸನ್ನು ಕೊಟ್ಟು ತೀರಿಸುವವರೆಗೂ ಅಲ್ಲಿಂದ ಹೊರ ಬರುವುದಕ್ಕೆ ಸಾಧ್ಯವಿಲ್ಲವೆಂದು ನಾನು ನಿನಗೆ ಒತ್ತಿ ಹೇಳುತ್ತೇನೆ” ಅಂದನು.
ਤਰ੍ਹਿ ਤ੍ਵਾਮਹੰ ਵਦਾਮਿ ਤ੍ਵਯਾ ਨਿਃਸ਼ੇਸ਼਼ੰ ਕਪਰ੍ਦਕੇਸ਼਼ੁ ਨ ਪਰਿਸ਼ੋਧਿਤੇਸ਼਼ੁ ਤ੍ਵੰ ਤਤੋ ਮੁਕ੍ਤਿੰ ਪ੍ਰਾਪ੍ਤੁੰ ਨ ਸ਼ਕ੍ਸ਼਼੍ਯਸਿ|