< ಯಾಕೋಬನು ಬರೆದ ಪತ್ರಿಕೆ 1 >

1 ದೇವರಿಗೂ ಕರ್ತನಾದ ಯೇಸು ಕ್ರಿಸ್ತನಿಗೂ ದಾಸನಾಗಿರುವ ಯಾಕೋಬನು ಅನ್ಯದೇಶಗಳಲ್ಲಿ ಚದುರಿರುವ ಇಸ್ರಾಯೇಲ್ಯರ ಹನ್ನೆರಡು ಗೋತ್ರದವರಿಗೂ ಬರೆಯುವುದೇನೆಂದರೆ, “ನಿಮಗೆ ಶುಭವಾಗಲಿ.”
ਈਸ਼੍ਵਰਸ੍ਯ ਪ੍ਰਭੋ ਰ੍ਯੀਸ਼ੁਖ੍ਰੀਸ਼਼੍ਟਸ੍ਯ ਚ ਦਾਸੋ ਯਾਕੂਬ੍ ਵਿਕੀਰ੍ਣੀਭੂਤਾਨ੍ ਦ੍ਵਾਦਸ਼ੰ ਵੰਸ਼ਾਨ੍ ਪ੍ਰਤਿ ਨਮਸ੍ਕ੍ਰੁʼਤ੍ਯ ਪਤ੍ਰੰ ਲਿਖਤਿ|
2 ನನ್ನ ಸಹೋದರರೇ, ನೀವು ನಾನಾವಿಧವಾದ ಕಷ್ಟಗಳನ್ನು ಅನುಭವಿಸುವಾಗ ಅದನ್ನು ಕೇವಲ ಆನಂದಕರವಾದದ್ದೆಂದು ತಿಳಿಯಿರಿ.
ਹੇ ਮਮ ਭ੍ਰਾਤਰਃ, ਯੂਯੰ ਯਦਾ ਬਹੁਵਿਧਪਰੀਕ੍ਸ਼਼ਾਸ਼਼ੁ ਨਿਪਤਤ ਤਦਾ ਤਤ੍ ਪੂਰ੍ਣਾਨਨ੍ਦਸ੍ਯ ਕਾਰਣੰ ਮਨ੍ਯਧ੍ਵੰ|
3 ಏಕೆಂದರೆ ನಿಮ್ಮ ನಂಬಿಕೆಗೆ ಆಗುವ ಪರಿಶೋಧನೆಯು ನಿಮಗೆ ತಾಳ್ಮೆಯನ್ನುಂಟು ಮಾಡುತ್ತದೆಂದು ನೀವು ತಿಳಿಯಿರಿ.
ਯਤੋ ਯੁਸ਼਼੍ਮਾਕੰ ਵਿਸ਼੍ਵਾਸਸ੍ਯ ਪਰੀਕ੍ਸ਼਼ਿਤਤ੍ਵੇਨ ਧੈਰ੍ੱਯੰ ਸਮ੍ਪਾਦ੍ਯਤ ਇਤਿ ਜਾਨੀਥ|
4 ಆ ತಾಳ್ಮೆಯು ಸಂಪೂರ್ಣವಾಗಿ ನಿಮ್ಮಲ್ಲಿ ಫಲಿಸಲಿ, ಆಗ ನೀವು ಸರ್ವಸುಗುಣಸಂಪನ್ನರೂ, ಪರಿಪೂರ್ಣರೂ, ಯಾವುದಕ್ಕೂ ಕಡಿಮೆಯಿಲ್ಲದವರೂ ಆಗುವಿರಿ.
ਤੱਚ ਧੈਰ੍ੱਯੰ ਸਿੱਧਫਲੰ ਭਵਤੁ ਤੇਨ ਯੂਯੰ ਸਿੱਧਾਃ ਸਮ੍ਪੂਰ੍ਣਾਸ਼੍ਚ ਭਵਿਸ਼਼੍ਯਥ ਕਸ੍ਯਾਪਿ ਗੁਣਸ੍ਯਾਭਾਵਸ਼੍ਚ ਯੁਸ਼਼੍ਮਾਕੰ ਨ ਭਵਿਸ਼਼੍ਯਤਿ|
5 ನಿಮ್ಮಲ್ಲಿ ಯಾರಿಗಾದರು ಜ್ಞಾನದ ಕೊರತೆಯಿರುವುದಾದರೆ ಅವರು ದೇವರನ್ನು ಬೇಡಿಕೊಳ್ಳಲಿ, ಅದು ಅವರಿಗೆ ದೊರಕುವುದು. ಯಾಕೆಂದರೆ ದೇವರು ಹಂಗಿಸದೆ ಎಲ್ಲರಿಗೂ ಉದಾರವಾಗಿ ಕೊಡುವಾತನಾಗಿದ್ದಾನೆ.
ਯੁਸ਼਼੍ਮਾਕੰ ਕਸ੍ਯਾਪਿ ਜ੍ਞਾਨਾਭਾਵੋ ਯਦਿ ਭਵੇਤ੍ ਤਰ੍ਹਿ ਯ ਈਸ਼੍ਵਰਃ ਸਰਲਭਾਵੇਨ ਤਿਰਸ੍ਕਾਰਞ੍ਚ ਵਿਨਾ ਸਰ੍ੱਵੇਭ੍ਯੋ ਦਦਾਤਿ ਤਤਃ ਸ ਯਾਚਤਾਂ ਤਤਸ੍ਤਸ੍ਮੈ ਦਾਯਿਸ਼਼੍ਯਤੇ|
6 ಆದರೆ ದೇವರ ಬಳಿ ಬೇಡುವವನು ಸ್ವಲ್ಪವೂ ಸಂದೇಹಪಡದೆ ನಂಬಿಕೆಯಿಂದ ಬೇಡಿಕೊಳ್ಳಲಿ. ಸಂದೇಹಪಡುವವನು ಗಾಳಿಯಿಂದ ಬಡಿಯಲ್ಪಟ್ಟ ಸಮುದ್ರದ ಅಲೆಯಂತೆ ಅತ್ತಿತ್ತ ಅಲೆಯುತ್ತಿರುತ್ತಾನೆ.
ਕਿਨ੍ਤੁ ਸ ਨਿਃਸਨ੍ਦੇਹਃ ਸਨ੍ ਵਿਸ਼੍ਵਾਸੇਨ ਯਾਚਤਾਂ ਯਤਃ ਸਨ੍ਦਿਗ੍ਧੋ ਮਾਨਵੋ ਵਾਯੁਨਾ ਚਾਲਿਤਸ੍ਯੋਤ੍ਪ੍ਲਵਮਾਨਸ੍ਯ ਚ ਸਮੁਦ੍ਰਤਰਙ੍ਗਸ੍ਯ ਸਦ੍ਰੁʼਸ਼ੋ ਭਵਤਿ|
7 ಇಂಥವನು ತಾನು ಕರ್ತನಿಂದ ಬೇಡಿಕೊಂಡಿದ್ದೆಲ್ಲವನ್ನು ಹೊಂದುವೆನೆಂದು ಭಾವಿಸದೆ ಇರಲಿ.
ਤਾਦ੍ਰੁʼਸ਼ੋ ਮਾਨਵਃ ਪ੍ਰਭੋਃ ਕਿਞ੍ਚਿਤ੍ ਪ੍ਰਾਪ੍ਸ੍ਯਤੀਤਿ ਨ ਮਨ੍ਯਤਾਂ|
8 ಏಕೆಂದರೆ ಅವನು ಎರಡು ಮನಸ್ಸುಳ್ಳವನು, ತನ್ನ ನಡತೆಯಲ್ಲಿ ಚಂಚಲನಾಗಿದ್ದಾನೆ.
ਦ੍ਵਿਮਨਾ ਲੋਕਃ ਸਰ੍ੱਵਗਤਿਸ਼਼ੁ ਚਞ੍ਚਲੋ ਭਵਤਿ|
9 ದೀನಸ್ಥಿತಿಯಲ್ಲಿರುವ ಸಹೋದರನು ತಾನು ಉನ್ನತ ಸ್ಥಿತಿಗೆ ಬಂದೆನೆಂದು ಉಲ್ಲಾಸಪಡಲಿ.
ਯੋ ਭ੍ਰਾਤਾ ਨਮ੍ਰਃ ਸ ਨਿਜੋੰਨਤ੍ਯਾ ਸ਼੍ਲਾਘਤਾਂ|
10 ೧೦ ಐಶ್ವರ್ಯವಂತನಾದ ಸಹೋದರನು ತಾನು ದೀನಸ್ಥಿತಿಗೆ ಬಂದೆನೆಂದು ಉಲ್ಲಾಸಪಡಲಿ; ಏಕೆಂದರೆ ಐಶ್ವರ್ಯವಂತನು ಹುಲ್ಲಿನ ಹೂವಿನಂತೆ ಗತಿಸಿ ಹೋಗುವನು.
ਯਸ਼੍ਚ ਧਨਵਾਨ੍ ਸ ਨਿਜਨਮ੍ਰਤਯਾ ਸ਼੍ਲਾਘਤਾਂਯਤਃ ਸ ਤ੍ਰੁʼਣਪੁਸ਼਼੍ਪਵਤ੍ ਕ੍ਸ਼਼ਯੰ ਗਮਿਸ਼਼੍ਯਤਿ|
11 ೧೧ ಸೂರ್ಯನು ಉದಯಿಸಿದ ಮೇಲೆ ಸುಡುವ ಬಿಸಿಲಿಗೆ ಹುಲ್ಲು ಬಾಡಿ, ಹೂವು ಉದುರಿ ಅದರ ರೂಪದ ಸೊಗಸು ನಾಶವಾಗುತ್ತದೆ; ಹಾಗೆಯೇ ಐಶ್ವರ್ಯವಂತನು ತನ್ನ ಪ್ರಯತ್ನಗಳಲ್ಲಿ ಕುಂದಿಹೋಗುವನು.
ਯਤਃ ਸਤਾਪੇਨ ਸੂਰ੍ੱਯੇਣੋਦਿਤ੍ਯ ਤ੍ਰੁʼਣੰ ਸ਼ੋਸ਼਼੍ਯਤੇ ਤਤ੍ਪੁਸ਼਼੍ਪਞ੍ਚ ਭ੍ਰਸ਼੍ਯਤਿ ਤੇਨ ਤਸ੍ਯ ਰੂਪਸ੍ਯ ਸੌਨ੍ਦਰ੍ੱਯੰ ਨਸ਼੍ਯਤਿ ਤਦ੍ਵਦ੍ ਧਨਿਲੋਕੋ(ਅ)ਪਿ ਸ੍ਵੀਯਮੂਢਤਯਾ ਮ੍ਲਾਸ੍ਯਤਿ|
12 ೧೨ ಕಷ್ಟಗಳನ್ನು ಸಹಿಸಿಕೊಳ್ಳುವವನು ಧನ್ಯನು. ಅವನು ಪರಿಶೋಧಿತನಾದ ಮೇಲೆ ಕರ್ತನು ತನ್ನನ್ನು ಪ್ರೀತಿಸುವವರಿಗೆ ವಾಗ್ದಾನಮಾಡಿದಂತೆ ಜೀವದ ಕಿರೀಟವನ್ನು ಹೊಂದುವನು.
ਯੋ ਜਨਃ ਪਰੀਕ੍ਸ਼਼ਾਂ ਸਹਤੇ ਸ ਏਵ ਧਨ੍ਯਃ, ਯਤਃ ਪਰੀਕ੍ਸ਼਼ਿਤਤ੍ਵੰ ਪ੍ਰਾਪ੍ਯ ਸ ਪ੍ਰਭੁਨਾ ਸ੍ਵਪ੍ਰੇਮਕਾਰਿਭ੍ਯਃ ਪ੍ਰਤਿਜ੍ਞਾਤੰ ਜੀਵਨਮੁਕੁਟੰ ਲਪ੍ਸ੍ਯਤੇ|
13 ೧೩ ಯಾರಾದರೂ ಶೋಧನೆಗೆ ಪ್ರೇರೇಪಿಸಲ್ಪಡುವಾಗ “ಈ ಪ್ರೇರಣೆಯು ತನಗೆ ದೇವರಿಂದ ಉಂಟಾಯಿತೆಂದು” ಹೇಳಬಾರದು. ಏಕೆಂದರೆ ದೇವರು ಕೆಟ್ಟದ್ದಕ್ಕೆ ಪ್ರೇರಣೆ ನೀಡುವವನಲ್ಲ. ಮತ್ತು ಆತನು ಯಾರನ್ನೂ ಪಾಪಕ್ಕೆ ಪ್ರೇರೇಪಿಸಿ ಶೋಧಿಸುವುದೂ ಇಲ್ಲ.
ਈਸ਼੍ਵਰੋ ਮਾਂ ਪਰੀਕ੍ਸ਼਼ਤ ਇਤਿ ਪਰੀਕ੍ਸ਼਼ਾਸਮਯੇ ਕੋ(ਅ)ਪਿ ਨ ਵਦਤੁ ਯਤਃ ਪਾਪਾਯੇਸ਼੍ਵਰਸ੍ਯ ਪਰੀਕ੍ਸ਼਼ਾ ਨ ਭਵਤਿ ਸ ਚ ਕਮਪਿ ਨ ਪਰੀਕ੍ਸ਼਼ਤੇ|
14 ೧೪ ಆದರೆ ಪ್ರತಿಯೊಬ್ಬನು ತನ್ನ ಸ್ವಂತ ದುರಾಶೆಗಳಿಂದ ಸೆಳೆಯಲ್ಪಟ್ಟು ಮರುಳುಗೊಂಡವನಾಗಿ ಶೋಧಿಸಲ್ಪಡುತ್ತಾನೆ.
ਕਿਨ੍ਤੁ ਯਃ ਕਸ਼੍ਚਿਤ੍ ਸ੍ਵੀਯਮਨੋਵਾਞ੍ਛਯਾਕ੍ਰੁʼਸ਼਼੍ਯਤੇ ਲੋਭ੍ਯਤੇ ਚ ਤਸ੍ਯੈਵ ਪਰੀਕ੍ਸ਼਼ਾ ਭਵਤਿ|
15 ೧೫ ಆ ಮೇಲೆ ದುರಾಶೆಯು ಗರ್ಭಧರಿಸಿ ಪಾಪವನ್ನು ಹೆರುತ್ತದೆ. ಪಾಪವು ಪೂರ್ಣವಾಗಿ ಬೆಳೆದು ಮರಣವನ್ನು ತರುತ್ತದೆ.
ਤਸ੍ਮਾਤ੍ ਸਾ ਮਨੋਵਾਞ੍ਛਾ ਸਗਰ੍ਭਾ ਭੂਤ੍ਵਾ ਦੁਸ਼਼੍ਕ੍ਰੁʼਤਿੰ ਪ੍ਰਸੂਤੇ ਦੁਸ਼਼੍ਕ੍ਰੁʼਤਿਸ਼੍ਚ ਪਰਿਣਾਮੰ ਗਤ੍ਵਾ ਮ੍ਰੁʼਤ੍ਯੁੰ ਜਨਯਤਿ|
16 ೧೬ ನನ್ನ ಪ್ರಿಯ ಸಹೋದರರೇ, ಮೋಸಹೋಗಬೇಡಿರಿ.
ਹੇ ਮਮ ਪ੍ਰਿਯਭ੍ਰਾਤਰਃ, ਯੂਯੰ ਨ ਭ੍ਰਾਮ੍ਯਤ|
17 ೧೭ ಎಲ್ಲಾ ಒಳ್ಳೆಯ ವರಗಳು ಮತ್ತು ಪರಿಪೂರ್ಣವಾದ ವರಗಳು ಮೇಲಿನಿಂದ ಬಂದವುಗಳೇ, ಅವು ಸಕಲ ವಿಧವಾದ ಬೆಳಕಿಗೆ ಮೂಲಕರ್ತನಾದ ದೇವರಿಂದ ಇಳಿದು ಬರುತ್ತವೆ; ಆತನು ನೆರಳಿನಂತೆ ಬದಲಾಗುವವನಲ್ಲ, ಚಂಚಲಚಿತ್ತನೂ ಅಲ್ಲ.
ਯਤ੍ ਕਿਞ੍ਚਿਦ੍ ਉੱਤਮੰ ਦਾਨੰ ਪੂਰ੍ਣੋ ਵਰਸ਼੍ਚ ਤਤ੍ ਸਰ੍ੱਵਮ੍ ਊਰ੍ੱਧ੍ਵਾਦ੍ ਅਰ੍ਥਤੋ ਯਸ੍ਮਿਨ੍ ਦਸ਼ਾਨ੍ਤਰੰ ਪਰਿਵਰ੍ੱਤਨਜਾਤੱਛਾਯਾ ਵਾ ਨਾਸ੍ਤਿ ਤਸ੍ਮਾਦ੍ ਦੀਪ੍ਤ੍ਯਾਕਰਾਤ੍ ਪਿਤੁਰਵਰੋਹਤਿ|
18 ೧೮ ದೇವರು ತನ್ನ ಸುಚಿತ್ತದ ಪ್ರಕಾರ ಸತ್ಯವಾಕ್ಯದ ಮೂಲಕ ಜೀವಕೊಟ್ಟಿವುದರಿಂದ ನಾವು ಆತನ ಸರ್ವ ಸೃಷ್ಟಿಯಲ್ಲಿ ಪ್ರಥಮ ಫಲವಾದೆವು.
ਤਸ੍ਯ ਸ੍ਰੁʼਸ਼਼੍ਟਵਸ੍ਤੂਨਾਂ ਮਧ੍ਯੇ ਵਯੰ ਯਤ੍ ਪ੍ਰਥਮਫਲਸ੍ਵਰੂਪਾ ਭਵਾਮਸ੍ਤਦਰ੍ਥੰ ਸ ਸ੍ਵੇੱਛਾਤਃ ਸਤ੍ਯਮਤਸ੍ਯ ਵਾਕ੍ਯੇਨਾਸ੍ਮਾਨ੍ ਜਨਯਾਮਾਸ|
19 ೧೯ ನನ್ನ ಪ್ರಿಯ ಸಹೋದರರೇ, ನೀವು ಇದನ್ನು ಚೆನ್ನಾಗಿ ತಿಳಿದುಕೊಳ್ಳಿರಿ, ಪ್ರತಿಯೊಬ್ಬನೂ ಕಿವಿಗೊಡುವುದರಲ್ಲಿ ಚುರುಕಾಗಿಯೂ, ಮಾತನಾಡುವುದರಲ್ಲಿ ನಿಧಾನವಾಗಿಯೂ ಮತ್ತು ಕೋಪಿಸುವುದರಲ್ಲಿ ನಿಧಾನವಾಗಿಯೂ ಇರಲಿ.
ਅਤਏਵ ਹੇ ਮਮ ਪ੍ਰਿਯਭ੍ਰਾਤਰਃ, ਯੁਸ਼਼੍ਮਾਕਮ੍ ਏਕੈਕੋ ਜਨਃ ਸ਼੍ਰਵਣੇ ਤ੍ਵਰਿਤਃ ਕਥਨੇ ਧੀਰਃ ਕ੍ਰੋਧੇ(ਅ)ਪਿ ਧੀਰੋ ਭਵਤੁ|
20 ೨೦ ಏಕೆಂದರೆ ಮನುಷ್ಯನು ಕೋಪಗೊಂಡಾಗ ದೇವರು ಬಯಸುವ ನೀತಿ ಕಾರ್ಯಗಳನ್ನು ಮಾಡಲು ಸಾಧ್ಯವಾಗುವುದಿಲ್ಲ.
ਯਤੋ ਮਾਨਵਸ੍ਯ ਕ੍ਰੋਧ ਈਸ਼੍ਵਰੀਯਧਰ੍ੰਮੰ ਨ ਸਾਧਯਤਿ|
21 ೨೧ ಆದಕಾರಣ ಎಲ್ಲಾ ನೀಚತನವನ್ನೂ, ಎಲ್ಲಾ ದುಷ್ಟತನವನ್ನೂ ತೆಗೆದುಹಾಕಿ ಮನಸ್ಸಿನೊಳಗೆ ಬೇರೂರಿರುವ ದೇವರ ವಾಕ್ಯವನ್ನು ನಮ್ರತೆಯಿಂದ ಸ್ವೀಕರಿಸಿರಿ. ಅದು ನಿಮ್ಮ ಆತ್ಮಗಳನ್ನು ರಕ್ಷಿಸುವುದಕ್ಕೆ ಸಾಮರ್ಥ್ಯವುಳ್ಳದ್ದಾಗಿರುತ್ತದೆ.
ਅਤੋ ਹੇਤੋ ਰ੍ਯੂਯੰ ਸਰ੍ੱਵਾਮ੍ ਅਸ਼ੁਚਿਕ੍ਰਿਯਾਂ ਦੁਸ਼਼੍ਟਤਾਬਾਹੁਲ੍ਯਞ੍ਚ ਨਿਕ੍ਸ਼਼ਿਪ੍ਯ ਯੁਸ਼਼੍ਮਨ੍ਮਨਸਾਂ ਪਰਿਤ੍ਰਾਣੇ ਸਮਰ੍ਥੰ ਰੋਪਿਤੰ ਵਾਕ੍ਯੰ ਨਮ੍ਰਭਾਵੇਨ ਗ੍ਰੁʼਹ੍ਲੀਤ|
22 ೨೨ ದೇವರ ವಾಕ್ಯದ ಪ್ರಕಾರ ನಡೆಯುವವರಾಗಿರಿ, ಅದನ್ನು ಕೇವಲ ಕೇಳುವವರು ಮಾತ್ರವೇ ಆಗಿದ್ದು ನಿಮ್ಮನ್ನು ನೀವೇ ಮೋಸಗೊಳಿಸಿಕೊಳ್ಳಬೇಡಿರಿ.
ਅਪਰਞ੍ਚ ਯੂਯੰ ਕੇਵਲਮ੍ ਆਤ੍ਮਵਞ੍ਚਯਿਤਾਰੋ ਵਾਕ੍ਯਸ੍ਯ ਸ਼੍ਰੋਤਾਰੋ ਨ ਭਵਤ ਕਿਨ੍ਤੁ ਵਾਕ੍ਯਸ੍ਯ ਕਰ੍ੰਮਕਾਰਿਣੋ ਭਵਤ|
23 ೨೩ ಯಾವನಾದರೂ ವಾಕ್ಯವನ್ನು ಕೇಳುವವನಾಗಿದ್ದು ಅದರ ಪ್ರಕಾರ ನಡೆಯದಿದ್ದರೆ ಅವನು ಕನ್ನಡಿಯಲ್ಲಿ ತನ್ನ ಸಹಜ ಮುಖವನ್ನು ನೋಡಿದ ಮನುಷ್ಯನಂತಿರುವನು.
ਯਤੋ ਯਃ ਕਸ਼੍ਚਿਦ੍ ਵਾਕ੍ਯਸ੍ਯ ਕਰ੍ੰਮਕਾਰੀ ਨ ਭੂਤ੍ਵਾ ਕੇਵਲੰ ਤਸ੍ਯ ਸ਼੍ਰੋਤਾ ਭਵਤਿ ਸ ਦਰ੍ਪਣੇ ਸ੍ਵੀਯਸ਼ਾਰੀਰਿਕਵਦਨੰ ਨਿਰੀਕ੍ਸ਼਼ਮਾਣਸ੍ਯ ਮਨੁਜਸ੍ਯ ਸਦ੍ਰੁʼਸ਼ਃ|
24 ೨೪ ಏಕೆಂದರೆ ಇವನು ತನ್ನನ್ನು ತಾನೇ ನೋಡಿ ನಂತರ ತಾನು ಹೀಗಿದ್ದೇನೆಂಬುದನ್ನು ಆ ಕ್ಷಣವೇ ಮರೆತುಬಿಡುವನು.
ਆਤ੍ਮਾਕਾਰੇ ਦ੍ਰੁʼਸ਼਼੍ਟੇ ਸ ਪ੍ਰਸ੍ਥਾਯ ਕੀਦ੍ਰੁʼਸ਼ ਆਸੀਤ੍ ਤਤ੍ ਤਤ੍ਕ੍ਸ਼਼ਣਾਦ੍ ਵਿਸ੍ਮਰਤਿ|
25 ೨೫ ಆದರೆ ಬಿಡುಗಡೆಯನ್ನು ಉಂಟುಮಾಡುವ ಪರಿಪೂರ್ಣವಾದ ಧರ್ಮಶಾಸ್ತ್ರವನ್ನು ಲಕ್ಷ್ಯಕೊಟ್ಟು ಓದಿ, ಮನನ ಮಾಡಿ ಅದನ್ನು ಅನುಸರಿಸುವವನು ವಾಕ್ಯವನ್ನು ಕೇಳಿ ಮರೆತು ಹೋಗದೆ ಅದರ ಪ್ರಕಾರ ನಡೆಯುತ್ತಾ ತನ್ನ ನಡತೆಯಿಂದ, ಕ್ರಿಯೆಗಳಿಂದ ಧನ್ಯನಾಗುವನು.
ਕਿਨ੍ਤੁ ਯਃ ਕਸ਼੍ਚਿਤ੍ ਨਤ੍ਵਾ ਮੁਕ੍ਤੇਃ ਸਿੱਧਾਂ ਵ੍ਯਵਸ੍ਥਾਮ੍ ਆਲੋਕ੍ਯ ਤਿਸ਼਼੍ਠਤਿ ਸ ਵਿਸ੍ਮ੍ਰੁʼਤਿਯੁਕ੍ਤਃ ਸ਼੍ਰੋਤਾ ਨ ਭੂਤ੍ਵਾ ਕਰ੍ੰਮਕਰ੍ੱਤੈਵ ਸਨ੍ ਸ੍ਵਕਾਰ੍ੱਯੇ ਧਨ੍ਯੋ ਭਵਿਸ਼਼੍ਯਤਿ|
26 ೨೬ ತನ್ನನ್ನು ಸದ್ಭಕ್ತನೆಂದೆಣಿಸಿಕೊಳ್ಳುವ ಯಾವನಾದರೂ ತನ್ನ ನಾಲಿಗೆಯನ್ನು ಹತೋಟಿಯಲ್ಲಿ ಇಟ್ಟುಕೊಳ್ಳದೆ ತನ್ನ ಹೃದಯವನ್ನು ಮೋಸಗೊಳಿಸುವವನಾದರೆ ಅವನ ಭಕ್ತಿಯು ವ್ಯರ್ಥವಾಗಿದೆ.
ਅਨਾਯੱਤਰਸਨਃ ਸਨ੍ ਯਃ ਕਸ਼੍ਚਿਤ੍ ਸ੍ਵਮਨੋ ਵਞ੍ਚਯਿਤ੍ਵਾ ਸ੍ਵੰ ਭਕ੍ਤੰ ਮਨ੍ਯਤੇ ਤਸ੍ਯ ਭਕ੍ਤਿ ਰ੍ਮੁਧਾ ਭਵਤਿ|
27 ೨೭ ಸಂಕಟದಲ್ಲಿ ಬಿದ್ದಿರುವ ದಿಕ್ಕಿಲ್ಲದವರನ್ನೂ, ವಿಧವೆಯರನ್ನೂ ಪರಾಂಬರಿಸಿ ತನಗೆ ಇಹಲೋಕದ ದೋಷವು ಹತ್ತದಂತೆ ತನ್ನನ್ನು ತಾನು ಕಾಪಾಡಿಕೊಳ್ಳುವುದೇ ತಂದೆಯಾದ ದೇವರ ಸನ್ನಿಧಾನದಲ್ಲಿ ಶುದ್ಧವೂ, ನಿರ್ಮಲವೂ ಆಗಿರುವ ಭಕ್ತಿ.
ਕ੍ਲੇਸ਼ਕਾਲੇ ਪਿਤ੍ਰੁʼਹੀਨਾਨਾਂ ਵਿਧਵਾਨਾਞ੍ਚ ਯਦ੍ ਅਵੇਕ੍ਸ਼਼ਣੰ ਸੰਸਾਰਾੱਚ ਨਿਸ਼਼੍ਕਲਙ੍ਕੇਨ ਯਦ੍ ਆਤ੍ਮਰਕ੍ਸ਼਼ਣੰ ਤਦੇਵ ਪਿਤੁਰੀਸ਼੍ਵਰਸ੍ਯ ਸਾਕ੍ਸ਼਼ਾਤ੍ ਸ਼ੁਚਿ ਰ੍ਨਿਰ੍ੰਮਲਾ ਚ ਭਕ੍ਤਿਃ|

< ಯಾಕೋಬನು ಬರೆದ ಪತ್ರಿಕೆ 1 >