< ಯಾಕೋಬನು ಬರೆದ ಪತ್ರಿಕೆ 2 >
1 ೧ ನನ್ನ ಸಹೋದರರೇ, ಮಹಿಮೆಯುಳ್ಳ ನಮ್ಮ ಕರ್ತನಾದ ಯೇಸು ಕ್ರಿಸ್ತನಲ್ಲಿ ನಂಬಿಕೆಯಿಟ್ಟವರಾದ ನೀವು ಪಕ್ಷಪಾತಿಗಳಾಗಿರಬಾರದು.
ଏ ନା ଟଣ୍ଡାର୍ ଆରି ତଣ୍ଦେକାଦେର୍, ଆସେଙ୍ଗ୍ ଜାଜ୍ମାଲ୍ନି ମାପ୍ରୁ ଜିସୁ କ୍ରିସ୍ଟତାକେ ପାର୍ତି କିଜ଼ି ମାଚିଲେ ମାନାୟ୍ତିଂ ମୁକ୍ମେଟ୍ କିମାଟ୍ ।
2 ೨ ಹೇಗೆಂದರೆ ಒಬ್ಬ ಮನುಷ್ಯನು ಚಿನ್ನದ ಉಂಗುರಗಳನ್ನು ಮತ್ತು ಉತ್ತಮವಾದ ವಸ್ತ್ರಗಳನ್ನೂ ಹಾಕಿಕೊಂಡು ನಿಮ್ಮ ಸಭೆಯೊಳಗೆ ಬಂದಾಗ ಮತ್ತು ಒಬ್ಬ ಬಡ ಮನುಷ್ಯನು ಕೊಳಕು ಬಟ್ಟೆಗಳನ್ನು ಧರಿಸಿಕೊಂಡು ಬಂದಾಗ,
ଇନେକିଦେଂକି ଜଦି ହନା ୱାତୁସ୍ ଆରି ଜିଲ୍ମାଲ୍ ଆଙ୍ଗିଙ୍ଗ୍ କି ହେନ୍ଦ୍ରା ଉସ୍ପିସ୍ ଇମ୍ଣି ମାନାୟ୍ ମି କୁଟୁମ୍ ଇଞ୍ଜ ୱାତିସ୍, ଆରେ ରୱାନ୍ ଅର୍କିତ୍ ଲଗୁ କାନ୍ଞ୍ଚି ଆଙ୍ଗି ଉସ୍ପିସ୍ ୱାତିସ୍,
3 ೩ ನೀವು ಉತ್ತಮವಾದ ವಸ್ತ್ರಗಳನ್ನು ಧರಿಸಿಕೊಂಡು ಬಂದಿರುವವನನ್ನು ಗೌರವದಿಂದ ನೋಡಿ ಅವನಿಗೆ “ನೀವು ಇಲ್ಲಿ ಈ ಗೌರವ ಆಸನದಲ್ಲಿ ಕುಳಿತುಕೊಳ್ಳಿರಿ” ಎಂತಲೂ, ಆ ಬಡ ಮನುಷ್ಯನಿಗೆ “ನೀನು ಅಲ್ಲಿ ನಿಂತುಕೋ” ಇಲ್ಲವೇ “ಇಲ್ಲಿ ನನ್ನ ಕಾಲ್ಮಣೆಯ ಬಳಿ ಕುಳಿತುಕೋ” ಎಂತಲೂ ಹೇಳಿದರೆ,
ଆରେ, ଏପେଙ୍ଗ୍ ଜିଲ୍ମିଲ୍ ହେନ୍ଦ୍ରା ଉସ୍ପିତି ମାନାୟ୍ତିଂ ମର୍ଜଦା କିଜ଼ି ଇନାଟ୍, “ଇବେ ହାର୍ଦି ବାହାତ କୁଚେନ୍, ଆରେ ଅର୍କିତ୍ ମାନାୟ୍ତିଂ ଇନାଟ୍, ହେବେ ନିଲା, କି ତାରେନ୍ କୁଚେନ୍,”
4 ೪ ನೀವು ನಿಮ್ಮ ನಿಮ್ಮಲ್ಲಿ ಭೇದಭಾವ ಮಾಡುವವರಾಗಿದ್ದು, ತಾರತಮ್ಯ ಆಲೋಚನೆಗಳಂತೆ ನಡೆಯುವ ನಿರ್ಧಾರ ಮಾಡುವವರಾಗಿರುತ್ತೀರಿ ಅಲ್ಲವೇ?
ତା ଆତିସ୍ ଏପେଙ୍ଗ୍ ଇନାକା ଜାର୍ ଜାର୍ ବିତ୍ରେ ହାରୁଗାଜା ଇଡ଼୍ଜି ମୁକ୍ମେଟ୍ ବେବାର୍ ଆରି ବାନ୍ୟା ବାବ୍ରେ ବିଚାର୍ କିନାଦେରା ।
5 ೫ ನನ್ನ ಪ್ರಿಯ ಸಹೋದರರೇ, ಕೇಳಿರಿ ದೇವರು ಈ ಲೋಕದಲ್ಲಿನ ಬಡವರನ್ನು ನಂಬಿಕೆಯಲ್ಲಿ ಐಶ್ವರ್ಯವಂತರನ್ನಾಗಿಯೂ, ತನ್ನನ್ನು ಪ್ರೀತಿಸುವವರಿಗೆ ತಾನು ವಾಗ್ದಾನ ಮಾಡಿದ ರಾಜ್ಯಕ್ಕೆ ಬಾಧ್ಯರಾಗಿಯೂ ಇರಬೇಕೆಂದು ಆರಿಸಿಕೊಳ್ಳಲಿಲ್ಲವೇ?
ଏ ନା ୱାରିନି ଟଣ୍ଡାର୍ ଆରି ତଣ୍ଦେକାଦେର୍, ୱେନାଟ୍, ଇସ୍ୱର୍ ଇନାକା ଇ ପୁର୍ତିତ ନଂଜର୍ତ ଅର୍କିତ୍ ଲକୁରିଂ ପାର୍ତି ଲାକେ ଦନ୍ତ ମାଜାନ୍ ଆଦେଂ ବାଚି କିୱାତାନ୍ନା କି, ଆରେ ଜାର୍ ଜିଉନନାକାରିଂ ଇମ୍ଣି ରାଜି ହିନାନ୍ ହେବେନି ଆଦିକାର୍ ଆନି କାଜିଂ ପାର୍ମାଣ୍ ହିତାନ୍ନା, ହେବେନି ଆଦିକାର୍ ହିଦେଂ କାଜିଂ ବାଚି କିୱାତାନ୍ନା?
6 ೬ ನೀವಾದರೋ ಬಡವರನ್ನು ಅವಮಾನಪಡಿಸಿದ್ದೀರಿ. ನಿಮ್ಮನ್ನು ಬಾಧಿಸಿ ನ್ಯಾಯಸ್ಥಾನದ ಮುಂದೆ ಎಳೆದುಕೊಂಡು ಹೋಗುವವರು ಐಶ್ವರ್ಯವಂತರಲ್ಲವೋ?
ମାତର୍ ଏପେଙ୍ଗ୍ ଅର୍କିତ୍ ମାନାୟାରିଂ ଜିଉନଉଦେରା । ମାଜାନିଂ ଇନାକା ମି କାଜିଂ ଇନସ୍ତା କିଦୁର୍ ଆରି ଏପେଙ୍ଗ୍ ବିଚାର୍ଣ୍ଣା ବାହାତ ଜେଲ୍ଜି ଅଦୁର୍?
7 ೭ ನೀವು ಕರೆಯಲ್ಪಟ್ಟ ಆ ಶ್ರೇಷ್ಠವಾದ ನಾಮವನ್ನು ದೂಷಿಸುವವರು ಅವರಲ್ಲವೋ?
ଇମ୍ଣି ଜିସୁ କ୍ରିସ୍ଟତି ତର୍ଦ ଏପେଙ୍ଗ୍ ଡାକ୍ପୁଟା, ହେୱାର୍ ଇନାକା ହେ ତର୍ଦ ନିନ୍ଦା କିଉର୍?
8 ೮ ಆದರೂ ಧರ್ಮಶಾಸ್ತ್ರಕ್ಕೆ ಸರಿಯಾಗಿ “ನಿನ್ನ ನೆರೆಯವನನ್ನು ನಿನ್ನಂತೆಯೇ ಪ್ರೀತಿಸಬೇಕು” ಎಂಬ ರಾಜಾಜ್ಞೆಯನ್ನು ನೆರವೇರಿಸುವವರಾದರೆ, ನೀವು ಒಳ್ಳೆಯದನ್ನೇ ಮಾಡುವವರಾಗಿರುವಿರಿ.
ଏପେଙ୍ଗ୍ ଜାର୍ ପାଡ଼୍ହାଲୁଗାଂ ୱାସ୍କିଲାକେ ଜିଉନୱାଟ୍ ସାସ୍ତର୍ ଇ ରାଜାତି ବିଦି ଜଦି ହାତ୍ପା କାମାୟ୍ ପାଲି କିନାଦେରା, “ତା ଆତିସ୍ ଏପ୍ ହାର୍ କାମାୟ୍ କିନାଦେରା ।”
9 ೯ ಒಂದು ವೇಳೆ ಅದನ್ನು ಬಿಟ್ಟು ನೀವು ಪಕ್ಷಪಾತಿಗಳಾಗಿದ್ದರೆ ಪಾಪಮಾಡುವವರಾಗಿದ್ದು ಅಪರಾಧಿಗಳೆಂದು ಧರ್ಮಶಾಸ್ತ್ರದ ಪ್ರಕಾರ ತೀರ್ಮಾನಿಸಲ್ಪಡುತ್ತೀರಿ.
ମାତର୍ ଜଦି ମାନାୟ୍ତିଂ ମୁକ୍ମେଟ୍ କିନାଦେରା, ତା ଆତିସ୍ ଏପେଙ୍ଗ୍ ପାପ୍ କିନାଦେରା, ଆରେ ହେ ମସାତି ବିଦି ହୁଦାଂ ଦସି ଇଞ୍ଜି ପାର୍ମାଣ୍ ଆନାଦେର୍ ।
10 ೧೦ ಏಕೆಂದರೆ ಯಾರಾದರೂ ಧರ್ಮಶಾಸ್ತ್ರವನ್ನೆಲ್ಲಾ ಕೈಕೊಂಡು ನಡೆದು ಅದರಲ್ಲಿ ಒಂದೇ ಒಂದು ವಿಷಯದಲ್ಲಿ ತಪ್ಪಿದರೆ ಅಂಥವರು ಎಲ್ಲಾ ವಿಷಯಗಳಲ್ಲಿಯೂ ಅಪರಾಧಿಯಾಗಿರುತ್ತಾರೆ.
ଇନେକିଦେଂକି ଇନେର୍ ୱିଜ଼ୁ ମସାତି ବିଦି ପାଲି କିଜ଼ି କେବଲ୍ ରଞ୍ଜାଙ୍ଗ୍ ବିସ୍ରେ ଆସ୍ତାର୍, ବାଟିଙ୍ଗ୍ ହେୱାନ୍ ୱିଜ଼ୁ ମସାତି ବିଦି ଉଡ଼ାନି ଦସ୍ତ ଡାଣ୍ଡ୍ ପାୟାନାନ୍ ।
11 ೧೧ ಏಕೆಂದರೆ ವ್ಯಭಿಚಾರ ಮಾಡಬಾರದೆಂದು ಹೇಳಿದವನೇ ನರಹತ್ಯ ಮಾಡಬಾರದೆಂತಲೂ ಹೇಳಿದನು. ಆದಕಾರಣ ನೀನು ವ್ಯಭಿಚಾರಮಾಡದೆ ಇದ್ದರೂ ನರಹತ್ಯ ಮಾಡಿದರೆ ಧರ್ಮಶಾಸ್ತ್ರವನ್ನು ಮೀರಿದವನಾಗಿರುತ್ತಿ.
ଇନେକିଦେଂକି ଇମ୍ଣି ଇସ୍ୱର୍ ଦାରି କିମାଟ୍ ଇଞ୍ଜି ଇଞ୍ଜି ମାଞ୍ଚାର୍, “ହେୱାନ୍ ପା ନାର୍ଦିଂଅହ୍ମାଟ୍ ଇଞ୍ଜି ଇଞ୍ଜି ମାଚାନ୍,” ଲାଗିଂ ଏପେଙ୍ଗ୍ ଜଦି ଦାରି କିୱାଦାଂ ନାର୍ଦିଂ ଅହ୍ନାଦେର୍, ତେବେ ମସାତି ବିଦି ଉଡ଼ାନାକାଦେର୍ ଆତାଦେର୍ଣ୍ଣା
12 ೧೨ ನೀವು ಬಿಡುಗಡೆಯನ್ನುಂಟು ಮಾಡುವ ಧರ್ಮಶಾಸ್ತ್ರದ ಪ್ರಕಾರ ತೀರ್ಪುಹೊಂದುವವರಿಗೆ ತಕ್ಕಂತೆ ಮಾತನಾಡಿರಿ ಮತ್ತು ವಿಧೇಯರಾಗಿರಿ.
ମୁକ୍ଡ଼ାନି ଦିନ୍ ବିଦି ଲାହାଙ୍ଗ୍ ଜେ ଏପେଙ୍ଗ୍ ବିଚାର୍ କିୟାଆନାଦେର୍ ଇଦାଂ ପୁନ୍ଞ୍ଜି ହେ ଲାକେ କାତା ଇନାଟ୍ ଆରି କାମାୟ୍ କିୟାଟ୍ ।
13 ೧೩ ಏಕೆಂದರೆ ಕರುಣೆ ತೋರಿಸದೆ ಇರುವವನಿಗೆ ನ್ಯಾಯತೀರ್ಪಿನಲ್ಲಿ ಕರುಣೆಯು ತೋರಿಸಲ್ಪಡುವುದಿಲ್ಲ. ಕರುಣೆಯು ನ್ಯಾಯತೀರ್ಪಿನ ಮೇಲೆ ಜಯ ಹೊಂದುತ್ತದೆ.
ଇନେକିଦେଂକି ଇନେର୍ ବିନ୍ନିକାନିଂ ଦୟା କିଉନ୍, ଇସ୍ୱର୍ତାଂ ଦୟା କିଉନ୍, ନିୟାଁୟ୍ ବିଚାର୍ ଜପି ଦୟାନେ ଜିଣା ଆନାନ୍ ।
14 ೧೪ ನನ್ನ ಸಹೋದರರೇ, ಒಬ್ಬನು ತನಗೆ ನಂಬಿಕೆಯುಂಟೆಂದು ಹೇಳಿಕೊಂಡು ತಕ್ಕ ಕ್ರಿಯೆಗಳಿಲ್ಲದವನಾಗಿದ್ದರೆ ಪ್ರಯೋಜನವೇನು? ಅಂಥ ನಂಬಿಕೆಯು ಅವನನ್ನು ರಕ್ಷಿಸುವುದೋ?
ଏ ନା ଟଣ୍ଡାର୍ ଆରି ତଣ୍ଦେକାଦେର୍, ଜଦି ଇନେର୍ ନା ପାର୍ତି ମାନାତ୍ ଇଞ୍ଜି ଇନାନ୍, ମାତର୍ ତା କାମାୟ୍ ମାନୁତ୍, ଲାଗିଂ ହେବେଣ୍ଡାଂ ହେୱାନ୍ତି ଇନା ଲାବ୍? ଇ ଲାକେ ପାର୍ତି ଇନାକା ଇନେରିଂ ମୁକ୍ତି କିଦେଙ୍ଗ୍ ଆଡ୍ନାତ୍ କି?
15 ೧೫ ನಿಮ್ಮಲ್ಲಿ ಒಬ್ಬ ಸಹೋದರನಿಗೆ ಇಲ್ಲವೆ ಒಬ್ಬ ಸಹೋದರಿಗೆ ಉಡಲು ಬಟ್ಟೆಯೂ ಮತ್ತು ದಿನನಿತ್ಯದ ಆಹಾರವೂ ಅಗತ್ಯವಾಗಿರುವಾಗ,
ଜଦି ରୱାନ୍ ଟଣ୍ଡେନ୍ କି ତଣ୍ଦେଲ୍ ହେନ୍ଦ୍ରା ଆରି ଦିନ୍କେନି ନାସ୍କି ଆନାତ୍,
16 ೧೬ ನಿಮ್ಮಲ್ಲಿ ಒಬ್ಬನು ಅವರಿಗೆ ದೈಹಿಕ ಅವಶ್ಯಕತೆಗಳನ್ನು ಪೂರೈಸದೆ “ಸಮಾಧಾನದಿಂದ ಹೋಗಿರಿ, ಬೆಚ್ಚಗೆ ಬೆಂಕಿಕಾಯಿಸಿಕೊಳ್ಳಿ, ಹೊಟ್ಟೆ ತುಂಬಾ ಊಟಮಾಡಿ” ಎಂದು ಹೇಳಿದರೆ ಪ್ರಯೋಜನವೇನು?
ଆରେ ମି ବିତ୍ରେତାଂ ଇନେର୍ ତାଙ୍ଗେଙ୍ଗ୍ ଗାଗାଡ଼୍ନି ଲଡ଼ାନି ଏଜ଼ୁଙ୍ଗ୍ ବିର୍କୁଲ୍ ହିୱାଦାଂ ଇନାନ୍, “ବିୱାହିଙ୍ଗ୍ ମାନା ଆରି ପାନ୍ଜି ସୁସ୍ତା କିଜ଼ି ହାଲା,” ଲାଗିଂ ହେବେ ଇନା ଲାବ୍?
17 ೧೭ ಹಾಗೆಯೇ ಕ್ರಿಯೆಗಳಿಲ್ಲದ ನಂಬಿಕೆಯು ನಿರ್ಜೀವವಾದದು.
ହେ ଲାକେ ପା ପାର୍ତି, କାମାୟ୍ ପିସ୍ତି ନିଜେ ପାର୍ତିତ ହାକି ।
18 ೧೮ ಆದರೂ ಒಬ್ಬನು; “ನಿನಗೆ ನಂಬಿಕೆಯುಂಟು ಮತ್ತು ನನಗೆ ಕ್ರಿಯೆಗಳುಂಟು” ನೀನು ಕ್ರಿಯೆಗಳಿಲ್ಲದೆ ನಿನ್ನ ನಂಬಿಕೆಯನ್ನು ನನಗೆ ತೋರಿಸು. ನಾನು ನನ್ನ ಕ್ರಿಯೆಗಳ ಮುಖಾಂತರ ನನ್ನ ನಂಬಿಕೆಯನ್ನು ತೋರಿಸುತ್ತೇನೆ ಎಂದು ಹೇಳುವನಲ್ಲವೇ.
ମାତର୍ ଇନେର୍ ପା ଇନାର୍ ରୱାନ୍ତି ପାର୍ତି ମାନାତ୍, “ଆରେ ବିନ୍ ନିକାର୍ତି କାମାୟ୍ ମାନାତ୍, କାମାୟ୍ ପାଚେ ମି ପାର୍ତି ନାଙ୍ଗେଙ୍ଗ୍ ଚଚ୍ଚାଟ୍, ଆରେ ଆନ୍ କାରୁମ୍ ଲାହାଙ୍ଗ୍ ମିଙ୍ଗେଙ୍ଗ୍ ନା ପାର୍ତି ଚଚ୍ନାଙ୍ଗ୍ ।”
19 ೧೯ ದೇವರು ಒಬ್ಬನೇ ಎಂದು ನೀನು ನಂಬುತ್ತೀ; ಹಾಗೆ ನಂಬುವುದು ಸರಿ. ಆದರೆ ದೆವ್ವಗಳು ಸಹ ಹಾಗೆಯೇ ನಂಬಿ ಹೆದರಿ ನಡುಗುತ್ತವೆ.
ଇସ୍ୱର୍ ଜେ ରକାନ୍ ମାତର୍, ଇଦାଂ ଏପେଙ୍ଗ୍ ପାର୍ତି କିନାଦେରା ଜେ ହାର୍ କାତା, ପୁଦାଙ୍ଗ୍ ପା ପାର୍ତି କିଜ଼ି ପାଣ୍ଡ୍ରୁତିଂ ତ୍ରିଗ୍ଜି ହାନିକ୍ ।
20 ೨೦ ಅವಿವೇಕಿಯೇ, ಕ್ರಿಯೆಗಳಿಲ್ಲದ ನಂಬಿಕೆಯು ವ್ಯರ್ಥವಾದದ್ದು ಎಂದು ನಿನಗೆ ಸಾಬಿತುಪಡಿಸಬೇಕೋ?
ମାତର୍ ଏ ନିର୍ବୁଦିୟା ମାନାୟ୍ କାମାୟ୍ ପିସ୍ତି ପାର୍ତି ଜେ ପଲ୍ୟା, ଇଦାଂ ଇନାକା ପୁନ୍ୱାତାୟ୍ନା?
21 ೨೧ ನಮ್ಮ ಪಿತೃವಾದ ಅಬ್ರಹಾಮನು ತನ್ನ ಮಗನಾದ ಇಸಾಕನನ್ನು ಯಜ್ಞವೇದಿಯ ಮೇಲೆ ಅರ್ಪಿಸಿದಾಗ ನೀತಿವಂತನೆಂಬ ನಿರ್ಣಯವನ್ನು ಹೊಂದಿದ್ದು ನಂಬಿಕೆಯ ಕ್ರಿಯೆಗಳಿಂದಲ್ಲವೇ?
ମା ଆବା ଲାତ୍ରା ଅବ୍ରାହାମ୍, ଇସ୍ୱର୍ତି କାଣ୍କୁତ ଇନେସ୍ ଦାର୍ମି ଇଞ୍ଜି ଇନ୍ୟାଜ଼ି ମାଚାନ୍? ହେୱାନ୍ କାମାୟ୍ ହୁକେ ଦାର୍ମି ଇନ୍ୟା ଆତାନ୍, ଏଚେକାଡ଼୍ଦ ହେୱାନ୍ ତା ମାଜ଼ି ଇସ୍ହାକ୍ତିଂ ଗାର୍ଣି ଜପି ପୁଜା କିତାନ୍ ।
22 ೨೨ ಅವನ ನಂಬಿಕೆಯು ಕ್ರಿಯೆಗಳೊಂದಿಗೆ ಕಾರ್ಯಮಾಡಿತ್ತು ಮತ್ತು ಆ ಕ್ರಿಯೆಗಳಿಂದಲೇ ಅವನ ನಂಬಿಕೆಯ ಉದ್ದೇಶವು ನೆರವೇರಿತು ಎಂದು ಕಾಣುತ್ತೇವಲ್ಲಾ.
ଇନାକା ଏପେଙ୍ଗ୍ ବୁଜା ଆଉଦେରା? ଜେ ଅବ୍ରାହାମ୍ ପାର୍ତିନି ତା କାମାୟ୍ ତାଙ୍ଗ୍ ମାଚାତ୍ ଆରେ କାମାୟ୍ ଲାହାଙ୍ଗ୍ ପାର୍ତି ବାର୍ତି ମାଚାତ୍ ।
23 ೨೩ “ಅಬ್ರಹಾಮನು ದೇವರನ್ನು ನಂಬಿದನು ಮತ್ತು ಆ ನಂಬಿಕೆ ಅವನ ಲೆಕ್ಕಕ್ಕೆ ನೀತಿಯೆಂದು ಎಣಿಸಲ್ಪಟ್ಟಿತು” ಎಂಬ ಧರ್ಮಶಾಸ್ತ್ರದ ಮಾತು ಹೀಗೆ ನೆರವೇರಿತು. ಆದ್ದರಿಂದ ಅಬ್ರಹಾಮನು ದೇವರ ಸ್ನೇಹಿತನೆಂದು ಕರೆಯಲ್ಪಟ್ಟನು.
ହେବେତାଂ ସାସ୍ତର୍ତ ଇ ବଚନ୍ ପୁରା ଆତାତ୍, “ଅବ୍ରାହାମ୍ ଇସ୍ୱର୍ତାକେ ପାର୍ତି କିତାନ୍ । ଆରେ ତା କଚଣ୍ତ ହେଦାଂ ଦାର୍ମି ଇଞ୍ଜି ଗାଣାକିୟାନାତ୍,” ଆରେ ହେୱାନ୍ ଇସ୍ୱର୍ତି ହାଙ୍ଗ୍ଦାକାନ୍ ଇଞ୍ଜି ଡାକ୍ପୁଟାତାନ୍ ।
24 ೨೪ ಆದುದರಿಂದ ಮನುಷ್ಯನು, ಕ್ರಿಯೆಗಳಿಂದ ನೀತಿವಂತನೆಂದು ನಿರ್ಣಯಿಸಲ್ಪಡುತ್ತಾನೆ ಹೊರತು ಬರೀ ನಂಬಿಕೆಯಿಂದಲ್ಲ ಎಂದು ನೋಡುತ್ತೀರಿ.
କେବଲ୍ ପାର୍ତି ଲାହାଙ୍ଗ୍ ମାନାୟ୍ ଦାର୍ମି ଇଞ୍ଜି ଗାଣାକିୟାୱାଦାଙ୍ଗ୍ କାମାୟ୍ ହୁକେ ଜେ ଇନେର୍ ଦାର୍ମି ଇଞ୍ଜି ଗାଣାକିୟାନାନ୍, ଇଦାଂ ଏପେଙ୍ଗ୍ ହୁଡ଼୍ନାଦେରା ।
25 ೨೫ ಅದೇ ರೀತಿಯಾಗಿ ವೇಶ್ಯೆಯಾದ ರಾಹಾಬಳು ಗೂಢಚಾರರನ್ನು ತನ್ನ ಮನೆಯಲ್ಲಿ ಸೇರಿಸಿಕೊಂಡು, ಬೇರೆ ದಾರಿಯಿಂದ ಅವರನ್ನು ಕಳುಹಿಸಿದ ಕ್ರಿಯೆಗಳಿಂದಲೇ ನೀತಿವಂತಳೆಂಬ, ನಿರ್ಣಯವನ್ನು ಹೊಂದಿದಳಲ್ಲವೇ?
ହେ ଲାକେ ପା ରାହାବ୍ ପାଦ୍ରା ଡ଼ୁକ୍ତି ଚର୍କୁକାଂ ହେବା କିଜ଼ି ବିନ୍ ହାଜ଼ି ହିଜ଼ି ହେୱାରିଂ ପକ୍ତିଲେ ଇନାକା କାମାୟ୍ ହୁଦାଂ ଦାର୍ମି ଗାଣାକିୟାୱାତାନ୍?
26 ೨೬ ಆತ್ಮವಿಲ್ಲದ ದೇಹವು ಸತ್ತದ್ದಾಗಿರುವ ಪ್ರಕಾರವೇ ಕ್ರಿಯೆಗಳಿಲ್ಲದ ನಂಬಿಕೆಯೂ ಸತ್ತದ್ದಾಗಿದೆ.
ଇନେକିଦେଂକି ଜିବୁନ୍ ପିସ୍ତି ଗାଗାଡ଼୍ ଇନେସ୍ ହାକି, ହେ ଲାକେ କାମାୟ୍ ପିସ୍ତି ପାର୍ତି ପା ହାକି ।