< ಇಬ್ರಿಯರಿಗೆ ಬರೆದ ಪತ್ರಿಕೆ 13 >

1 ಸಹೋದರ ಪ್ರೀತಿಯನ್ನು ಸತತವಾಗಿ ತೋರಿಸಿರಿ.
భ్రాతృషు ప్రేమ తిష్ఠతు| అతిథిసేవా యుష్మాభి ర్న విస్మర్య్యతాం
2 ಅತಿಥಿ ಸತ್ಕಾರಮಾಡುವುದನ್ನು ಅಲಕ್ಷ್ಯಮಾಡಬೇಡಿರಿ. ಏಕೆಂದರೆ ಅದನ್ನು ಮಾಡುವುದರಲ್ಲಿ ಕೆಲವರು ತಿಳಿಯದೆ ದೇವದೂತರನ್ನೂ ಸತ್ಕರಿಸಿದ್ದಾರೆ.
యతస్తయా ప్రచ్ఛన్నరూపేణ దివ్యదూతాః కేషాఞ్చిద్ అతిథయోఽభవన్|
3 ಸೆರೆಯವರ ಸಂಗಡ ನೀವೂ ಜೊತೆಸೆರೆಯವರೆಂದು ತಿಳಿದು, ಅವರಿಗುಂಟಾದ ಶಾರೀರಿಕ ಕಷ್ಟಾನುಭವವು ನಿಮಗೂ ಸಂಭವಿಸಿತೆಂದು ಭಾವಿಸಿಕೊಂಡು, ಅವರನ್ನು ಜ್ಞಾಪಕಮಾಡಿಕೊಳ್ಳಿರಿ.
బన్దినః సహబన్దిభిరివ దుఃఖినశ్చ దేహవాసిభిరివ యుష్మాభిః స్మర్య్యన్తాం|
4 ಎಲ್ಲರೂ ವಿವಾಹವನ್ನು ಮಾನ್ಯವಾದದ್ದೆಂದು ಎಣಿಸಬೇಕು ಮತ್ತು ದಾಂಪತ್ಯ ಜೀವನವು ಶುದ್ಧವಾಗಿರಬೇಕು. ಏಕೆಂದರೆ ಜಾರರಿಗೂ ಮತ್ತು ವ್ಯಭಿಚಾರಿಗಳಿಗೂ ದೇವರು ನ್ಯಾಯತೀರಿಸುವನೆಂದು ತಿಳಿದುಕೊಳ್ಳಿರಿ.
వివాహః సర్వ్వేషాం సమీపే సమ్మానితవ్యస్తదీయశయ్యా చ శుచిః కిన్తు వేశ్యాగామినః పారదారికాశ్చేశ్వరేణ దణ్డయిష్యన్తే|
5 ಹಣದಾಸೆಯಿಂದ ದೂರವಿರಿ. ನಿಮಗಿರುವವುಗಳಲ್ಲಿ ತೃಪ್ತರಾಗಿರಿ. “ನಾನು ನಿಮ್ಮನ್ನು ಎಂದಿಗೂ ಕೈಬಿಡುವುದಿಲ್ಲ, ಎಂದಿಗೂ ತೊರೆಯುವುದಿಲ್ಲ” ಎಂದು ದೇವರು ತಾನೇ ಹೇಳಿದ್ದಾನೆ.
యూయమ్ ఆచారే నిర్లోభా భవత విద్యమానవిషయే సన్తుష్యత చ యస్మాద్ ఈశ్వర ఏవేదం కథితవాన్, యథా, "త్వాం న త్యక్ష్యామి న త్వాం హాస్యామి| "
6 ಆದ್ದರಿಂದ, “ಕರ್ತನು ನನ್ನ ಸಹಾಯಕನು ನಾನು ಭಯಪಡುವುದಿಲ್ಲ, ಮನುಷ್ಯನು ನನಗೆ ಏನು ಮಾಡಿಯಾನು?” ಎಂದು ನಾವು ಧೈರ್ಯವಾಗಿ ಹೇಳಬಲ್ಲೆವು.
అతఏవ వయమ్ ఉత్సాహేనేదం కథయితుం శక్నుమః, "మత్పక్షే పరమేశోఽస్తి న భేష్యామి కదాచన| యస్మాత్ మాం ప్రతి కిం కర్త్తుం మానవః పారయిష్యతి|| "
7 ನಿಮಗೆ ದೇವರ ವಾಕ್ಯವನ್ನು ಬೋಧಿಸಿದ ನಿಮ್ಮ ಸಭಾನಾಯಕರನ್ನು ನೆನಪುಮಾಡಿಕೊಳ್ಳಿರಿ. ಅವರು ಜೀವಾಂತ್ಯದವರೆಗೆ ಯಾವ ರೀತಿ ನಡೆದುಕೊಂಡುರೆಂಬುದನ್ನು ನೆನಪಿಸಿಕೊಂಡು ಮತ್ತು ಅವರ ನಂಬಿಕೆಯನ್ನು ಅನುಸರಿಸಿರಿ.
యుష్మాకం యే నాయకా యుష్మభ్యమ్ ఈశ్వరస్య వాక్యం కథితవన్తస్తే యుష్మాభిః స్మర్య్యన్తాం తేషామ్ ఆచారస్య పరిణామమ్ ఆలోచ్య యుష్మాభిస్తేషాం విశ్వాసోఽనుక్రియతాం|
8 ಯೇಸು ಕ್ರಿಸ್ತನು ನಿನ್ನೇ ಇದ್ದ ಹಾಗೆಯೇ, ಈ ಹೊತ್ತು, ನಿರಂತರವೂ ಇರುವನು. (aiōn g165)
యీశుః ఖ్రీష్టః శ్వోఽద్య సదా చ స ఏవాస్తే| (aiōn g165)
9 ನಾನಾ ವಿಧವಾದ ಅನ್ಯೋಪದೇಶಗಳ ಸೆಳವಿಗೆ ಸಿಕ್ಕಿಕೊಳ್ಳಬೇಡಿರಿ. ಏಕೆಂದರೆ ದೇವರ ಕೃಪೆಯಿಂದ ಹೃದಯವನ್ನು ದೃಢಪಡಿಸಿಕೊಳ್ಳುವುದು ಒಳ್ಳೆಯದು. ಭೋಜನ ಪದಾರ್ಥಗಳ ಕುರಿತಾದ ನಿಯಮಗಳನ್ನು ಅನುಸರಿಸುವವರಿಗೆ ಏನೂ ಪ್ರಯೋಜನವಾಗುವುದಿಲ್ಲ.
యూయం నానావిధనూతనశిక్షాభి ర్న పరివర్త్తధ్వం యతోఽనుగ్రహేణాన్తఃకరణస్య సుస్థిరీభవనం క్షేమం న చ ఖాద్యద్రవ్యైః| యతస్తదాచారిణస్తై ర్నోపకృతాః|
10 ೧೦ ನಮಗೊಂದು ಯಜ್ಞವೇದಿ ಉಂಟು ಈ ಯಜ್ಞವೇದಿಯ ಪದಾರ್ಥಗಳನ್ನು ತಿನ್ನುವುದಕ್ಕೆ ಗುಡಾರದಲ್ಲಿ ಸೇವೆ ನಡೆಸುವವರಿಗೆ ಹಕ್ಕಿಲ್ಲ.
యే దష్యస్య సేవాం కుర్వ్వన్తి తే యస్యా ద్రవ్యభోజనస్యానధికారిణస్తాదృశీ యజ్ఞవేదిరస్మాకమ్ ఆస్తే|
11 ೧೧ ಮಹಾಯಾಜಕನು ದೋಷಪರಿಹಾರಕ ಯಜ್ಞದ ಪಶುಗಳ ರಕ್ತವನ್ನು ತೆಗೆದುಕೊಂಡು ಪವಿತ್ರ ಸ್ಥಾನದೊಳಗೆ ಹೋಗುತ್ತಾನೆ, ಆದರೆ ಆ ಪಶುಗಳ ದೇಹಗಳು ಪಾಳೆಯದ ಆಚೆ ಸುಡಲ್ಪಡುತ್ತವಲ್ಲ.
యతో యేషాం పశూనాం శోణితం పాపనాశాయ మహాయాజకేన మహాపవిత్రస్థానస్యాభ్యన్తరం నీయతే తేషాం శరీరాణి శిబిరాద్ బహి ర్దహ్యన్తే|
12 ೧೨ ಅದರಂತೆ ಯೇಸು ಕೂಡ ಸ್ವಂತ ರಕ್ತದಿಂದ ತನ್ನ ಜನರನ್ನು ಶುದ್ಧೀಕರಿಸುವುದಕ್ಕೋಸ್ಕರ ಪಟ್ಟಣದ ಹೊರಗೆ ಸತ್ತನು.
తస్మాద్ యీశురపి యత్ స్వరుధిరేణ ప్రజాః పవిత్రీకుర్య్యాత్ తదర్థం నగరద్వారస్య బహి ర్మృతిం భుక్తవాన్|
13 ೧೩ ಆದ್ದರಿಂದ ನಾವು ಆತನ ನಿಮಿತ್ತ ಉಂಟಾಗುವ ನಿಂದೆಯನ್ನು ತಾಳಿಕೊಳ್ಳುವವರಾಗಿ, ಪಾಳೆಯದ ಆಚೆ ಆತನ ಬಳಿಗೆ ಹೊರಟುಹೋಗೊಣ.
అతో హేతోరస్మాభిరపి తస్యాపమానం సహమానైః శిబిరాద్ బహిస్తస్య సమీపం గన్తవ్యం|
14 ೧೪ ಏಕೆಂದರೆ ಇಹದಲ್ಲಿ ಶಾಶ್ವತವಾದ ಪಟ್ಟಣವು ನಮಗಿಲ್ಲ. ಭವಿಷ್ಯತ್ತಿನಲ್ಲಿ ಬರುವ ಪಟ್ಟಣವನ್ನು ಎದುರುನೋಡುತ್ತಾ ಇದ್ದೇವೆ.
యతో ఽత్రాస్మాకం స్థాయి నగరం న విద్యతే కిన్తు భావి నగరమ్ అస్మాభిరన్విష్యతే|
15 ೧೫ ಆದ್ದರಿಂದ ಯೇಸುವಿನ ಮೂಲಕವಾಗಿಯೇ ದೇವರಿಗೆ ಸ್ತೋತ್ರವೆಂಬ ಯಜ್ಞವನ್ನು ಎಡೆಬಿಡದೆ ಸಮರ್ಪಿಸೋಣ, ಆತನನ್ನು ನಾವು ಕರ್ತನೆಂದು ನಂಬಿ ಬಾಯಿಂದ ಅರಿಕೆ ಮಾಡುವುದೇ ನಾವು ಅರ್ಪಿಸುವ ಯಜ್ಞವಾಗಿದೆ.
అతఏవ యీశునాస్మాభి ర్నిత్యం ప్రశంసారూపో బలిరర్థతస్తస్య నామాఙ్గీకుర్వ్వతామ్ ఓష్ఠాధరాణాం ఫలమ్ ఈశ్వరాయ దాతవ్యం|
16 ೧೬ ಇದಲ್ಲದೆ ಪರೋಪಕಾರ ಮಾಡುವುದನ್ನು, ಬೇರೆಯವರಿಗೆ ಸಹಾಯ ಮಾಡುವುದನ್ನು ಮರೆಯಬೇಡಿರಿ. ಇವೇ ದೇವರಿಗೆ ಮೆಚ್ಚಿಕೆಯಾದ ಯಜ್ಞಗಳು.
అపరఞ్చ పరోపకారో దానఞ్చ యుష్మాభి ర్న విస్మర్య్యతాం యతస్తాదృశం బలిదానమ్ ఈశ్వరాయ రోచతే|
17 ೧೭ ನಿಮ್ಮ ಸಭಾನಾಯಕರ ಮಾತನ್ನು ಕೇಳಿರಿ, ಅವರಿಗೆ ಅಧೀನರಾಗಿರಿ. ಅವರು ಲೆಕ್ಕ ಒಪ್ಪಿಸಬೇಕಾದವರಾಗಿರುವುದರಿಂದ ನಿಮ್ಮ ಆತ್ಮಗಳನ್ನು ಕಾಯುವವರಾಗಿದ್ದಾರೆ. ಅವರು ದುಃಖಿಸದೆ ಸಂತೋಷದಿಂದ ಇದನ್ನು ಮಾಡುವಂತೆ ನಡೆದುಕೊಳ್ಳಿರಿ. ಏಕೆಂದರೆ ಅವರು ವ್ಯಸನದಿಂದಿರುವುದು ನಿಮಗೆ ಪ್ರಯೋಜನಕರವಾದದ್ದಲ್ಲ.
యూయం స్వనాయకానామ్ ఆజ్ఞాగ్రాహిణో వశ్యాశ్చ భవత యతో యైరుపనిధిః ప్రతిదాతవ్యస్తాదృశా లోకా ఇవ తే యుష్మదీయాత్మనాం రక్షణార్థం జాగ్రతి, అతస్తే యథా సానన్దాస్తత్ కుర్య్యు ర్న చ సార్త్తస్వరా అత్ర యతధ్వం యతస్తేషామ్ ఆర్త్తస్వరో యుష్మాకమ్ ఇష్టజనకో న భవేత్|
18 ೧೮ ನಮಗೋಸ್ಕರ ಪ್ರಾರ್ಥಿಸಿರಿ. ನಾವು ಎಲ್ಲಾ ವಿಷಯಗಳಲ್ಲಿ ಸಜ್ಜನರಾಗಿ ನಡೆದುಕೊಳ್ಳಬೇಕೆಂದು ಅಪೇಕ್ಷಿಸುವವರಾಗಿದ್ದು ಒಳ್ಳೆಯ ಮನಸ್ಸಾಕ್ಷಿ ಹೊಂದಿದ್ದೇವೆಂದು ನಿಶ್ಚಯಿಸಿಕೊಂಡಿದ್ದೇವೆ.
అపరఞ్చ యూయమ్ అస్మన్నిమిత్తిం ప్రార్థనాం కురుత యతో వయమ్ ఉత్తమమనోవిశిష్టాః సర్వ్వత్ర సదాచారం కర్త్తుమ్ ఇచ్ఛుకాశ్చ భవామ ఇతి నిశ్చితం జానీమః|
19 ೧೯ ಮತ್ತು ನಾನು ಅತಿ ಶೀಘ್ರವಾಗಿ ನಿಮ್ಮ ಬಳಿಗೆ ತಿರುಗಿ ಬರುವಂತೆ ನೀವು ಪ್ರಾರ್ಥಿಸಬೇಕೆಂದು ನಾನು ನಿಮ್ಮನ್ನು ಬಹಳವಾಗಿ ಕೇಳಿಕೊಳ್ಳುತ್ತೇನೆ.
విశేషతోఽహం యథా త్వరయా యుష్మభ్యం పున ర్దీయే తదర్థం ప్రార్థనాయై యుష్మాన్ అధికం వినయే|
20 ೨೦ ನಿತ್ಯವಾದ ಒಡಂಬಡಿಕೆಯನ್ನು, ರಕ್ತದಿಂದ ನಿಶ್ಚಯಪಡಿಸುವುದಕ್ಕಾಗಿ, ಸಭೆಯೆಂಬ ಹಿಂಡಿಗೆ ಮಹಾಪಾಲಕನಾಗಿರುವ ನಮ್ಮ ಕರ್ತನಾದ ಯೇಸುವನ್ನು ಸತ್ತವರೊಳಗಿಂದ ಬರಮಾಡಿದ, ಶಾಂತಿದಾಯಕನಾದ ದೇವರು, ನೀವು ಆತನ ಚಿತ್ತವನ್ನು ನೆರವೇರಿಸುವ ಹಾಗೆ ಸಕಲ ಸತ್ಕಾರ್ಯಗಳಿಗೆ ಬೇಕಾದ ಅನುಕೂಲತೆಗಳನ್ನು ನಿಮಗೆ ದಯಪಾಲಿಸಿ, ಆತನು ಯೇಸು ಕ್ರಿಸ್ತನ ಮೂಲಕ ತನಗೆ ಮೆಚ್ಚಿಕೆಯಾದದ್ದನ್ನು ನಮ್ಮಲ್ಲಿ ನೆರವೇರಿಸಲಿ. ಯುಗಯುಗಾಂತರಗಳಲ್ಲಿಯೂ ಆತನಿಗೆ ಮಹಿಮೆ ಉಂಟಾಗಲಿ. ಆಮೆನ್. (aiōn g165, aiōnios g166)
అనన్తనియమస్య రుధిరేణ విశిష్టో మహాన్ మేషపాలకో యేన మృతగణమధ్యాత్ పునరానాయి స శాన్తిదాయక ఈశ్వరో (aiōnios g166)
21 ೨೧
నిజాభిమతసాధనాయ సర్వ్వస్మిన్ సత్కర్మ్మణి యుష్మాన్ సిద్ధాన్ కరోతు, తస్య దృష్టౌ చ యద్యత్ తుష్టిజనకం తదేవ యుష్మాకం మధ్యే యీశునా ఖ్రీష్టేన సాధయతు| తస్మై మహిమా సర్వ్వదా భూయాత్| ఆమేన్| (aiōn g165)
22 ೨೨ ಸಹೋದರರೇ, ಈ ಬುದ್ಧಿಯ ಮಾತನ್ನು ಸಹಿಸಿಕೊಳ್ಳಬೇಕೆಂದು ನಿಮ್ಮನ್ನು ಬೇಡಿಕೊಳ್ಳುತ್ತೇನೆ. ನಿಮಗೆ ಸಂಕ್ಷೇಪವಾಗಿ ಬರೆದಿದ್ದೇನೆ.
హే భ్రాతరః, వినయేఽహం యూయమ్ ఇదమ్ ఉపదేశవాక్యం సహధ్వం యతోఽహం సంక్షేపేణ యుష్మాన్ ప్రతి లిఖితవాన్|
23 ೨೩ ನಮ್ಮ ಸಹೋದರನಾದ ತಿಮೊಥೆಯನಿಗೆ ಬಿಡುಗಡೆಯಾಯಿತೆಂಬುದು ನಿಮಗೆ ತಿಳಿದಿರಲಿ. ಅವನು ಬೇಗ ಬಂದರೆ ನಾನು ಅವನೊಂದಿಗೆ ಬಂದು ನಿಮ್ಮನ್ನು ಕಾಣುವೆನು.
అస్మాకం భ్రాతా తీమథియో ముక్తోఽభవద్ ఇతి జానీత, స చ యది త్వరయా సమాగచ్ఛతి తర్హి తేన సార్ద్ధంమ్ అహం యుష్మాన్ సాక్షాత్ కరిష్యామి|
24 ೨೪ ನಿಮ್ಮ ಎಲ್ಲಾ ಸಭಾನಾಯಕರಿಗೂ ಮತ್ತು ಪರಿಶುದ್ಧ ದೇವಜನರಿಗೂ ವಂದನೆ ಹೇಳಿರಿ. ಇತಾಲ್ಯ ದೇಶದಿಂದ ಬಂದವರು ನಿಮಗೆ ವಂದನೆ ಹೇಳುತ್ತಾರೆ.
యుష్మాకం సర్వ్వాన్ నాయకాన్ పవిత్రలోకాంశ్చ నమస్కురుత| అపరమ్ ఇతాలియాదేశీయానాం నమస్కారం జ్ఞాస్యథ|
25 ೨೫ ಕೃಪೆಯು ನಿಮ್ಮೆಲ್ಲರೊಂದಿಗೆ ಇರಲಿ.
అనుగ్రహో యుష్మాకం సర్వ్వేషాం సహాయో భూయాత్| ఆమేన్|

< ಇಬ್ರಿಯರಿಗೆ ಬರೆದ ಪತ್ರಿಕೆ 13 >