< ಅಪೊಸ್ತಲರ ಕೃತ್ಯಗಳ 3 >
1 ೧ ಒಂದು ದಿನ ಪೇತ್ರ ಮತ್ತು ಯೋಹಾನನು ಮಧ್ಯಾಹ್ನದ ಮೇಲೆ ಮೂರು ಘಂಟೆಗೆ ನಡೆಯತ್ತಿದ್ದ ಪ್ರಾರ್ಥನೆಗಾಗಿ ದೇವಾಲಯಕ್ಕೆ ಹೋದರು.
తృతీయయామవేలాయాం సత్యాం ప్రార్థనాయాః సమయే పితరయోహనౌ సమ్భూయ మన్దిరం గచ్ఛతః|
2 ೨ ಅಲ್ಲಿ ಹುಟ್ಟು ಕುಂಟನಾಗಿದ್ದ ಒಬ್ಬ ಮನುಷ್ಯನನ್ನು ಕೆಲವರು ಹೊತ್ತುಕೊಂಡು ಬಂದರು; ದೇವಾಲಯದೊಳಕ್ಕೆ ಹೋಗುವವರಿಂದ ಭಿಕ್ಷೆಬೇಡುವುದಕ್ಕಾಗಿ ದೇವಾಲಯದ ಸುಂದರದ್ವಾರವೆಂಬ ಬಾಗಿಲಿನಲ್ಲಿ ಅವನನ್ನು ಪ್ರತಿದಿನ ಕೂರಿಸುತ್ತಿದ್ದರು.
తస్మిన్నేవ సమయే మన్దిరప్రవేశకానాం సమీపే భిక్షారణార్థం యం జన్మఖఞ్జమానుషం లోకా మన్దిరస్య సున్దరనామ్ని ద్వారే ప్రతిదినమ్ అస్థాపయన్ తం వహన్తస్తద్వారం ఆనయన్|
3 ೩ ಅವನು ದೇವಾಲಯದೊಳಕ್ಕೆ ಹೋಗುತ್ತಿರುವ ಪೇತ್ರ ಮತ್ತು ಯೋಹಾನರನ್ನು ಕಂಡು ಭಿಕ್ಷೆ ಬೇಡಿದನು.
తదా పితరయోహనౌ మన్తిరం ప్రవేష్టుమ్ ఉద్యతౌ విలోక్య స ఖఞ్జస్తౌ కిఞ్చిద్ భిక్షితవాన్|
4 ೪ ಪೇತ್ರ, ಯೋಹಾನರಿಬ್ಬರೂ ಅವನನ್ನು ದೃಷ್ಟಿಸಿ ನೋಡಿದರು. ಪೇತ್ರನು ಅವನಿಗೆ “ನಮ್ಮನ್ನು ನೋಡು” ಅಂದನು.
తస్మాద్ యోహనా సహితః పితరస్తమ్ అనన్యదృష్ట్యా నిరీక్ష్య ప్రోక్తవాన్ ఆవాం ప్రతి దృష్టిం కురు|
5 ೫ ಅವನು ಅವರಿಂದ ಏನಾದರೂ ದೊರಕೀತೆಂದು ನಿರೀಕ್ಷಿಸಿ, ಅವರನ್ನು ಲಕ್ಷ್ಯವಿಟ್ಟು ನೋಡಿದನು.
తతః స కిఞ్చిత్ ప్రాప్త్యాశయా తౌ ప్రతి దృష్టిం కృతవాన్|
6 ೬ ಆಗ ಪೇತ್ರನು “ಬೆಳ್ಳಿ ಬಂಗಾರವಂತೂ ನನ್ನಲ್ಲಿಲ್ಲ, ನನ್ನಲ್ಲಿರುವುದನ್ನು ನಿನಗೆ ಕೊಡುತ್ತೇನೆ; ನಜರೇತಿನ ಯೇಸು ಕ್ರಿಸ್ತನ ಹೆಸರಿನಲ್ಲಿ ಎದ್ದು ನಡೆ” ಎಂದು ಹೇಳಿ,
తదా పితరో గదితవాన్ మమ నికటే స్వర్ణరూప్యాది కిమపి నాస్తి కిన్తు యదాస్తే తద్ దదామి నాసరతీయస్య యీశుఖ్రీష్టస్య నామ్నా త్వముత్థాయ గమనాగమనే కురు|
7 ೭ ಅವನನ್ನು ಬಲಗೈಹಿಡಿದು ಎತ್ತಿದನು. ತಕ್ಷಣವೇ ಅವನ ಅಂಗಾಲುಗಳಿಗೆ, ಮುಂಗಾಲುಗಳಿಗೆ ಹಾಗು ಹಿಮ್ಮಡಿಗಳಿಗೂ ಬಲಬಂದಿತು.
తతః పరం స తస్య దక్షిణకరం ధృత్వా తమ్ ఉదతోలయత్; తేన తత్క్షణాత్ తస్య జనస్య పాదగుల్ఫయోః సబలత్వాత్ స ఉల్లమ్ఫ్య ప్రోత్థాయ గమనాగమనే ఽకరోత్|
8 ೮ ಅವನು ಹಾರಿ ನಿಂತು ನಡೆದಾಡಿದನು; ನಡೆಯುತ್ತಾ, ಕುಣಿಯುತ್ತಾ ದೇವರನ್ನು ಕೊಂಡಾಡುತ್ತಾ ಅವರ ಜೊತೆಯಲ್ಲಿ ದೇವಾಲಯದೊಳಗೆ ಹೋದನು.
తతో గమనాగమనే కుర్వ్వన్ ఉల్లమ్ఫన్ ఈశ్వరం ధన్యం వదన్ తాభ్యాం సార్ద్ధం మన్దిరం ప్రావిశత్|
9 ೯ ಅವನು ನಡೆಯುತ್ತಾ ದೇವರನ್ನು ಕೊಂಡಾಡುತ್ತಾ ಇರುವದನ್ನು ಜನರೆಲ್ಲರು ನೋಡಿ;
తతః సర్వ్వే లోకాస్తం గమనాగమనే కుర్వ్వన్తమ్ ఈశ్వరం ధన్యం వదన్తఞ్చ విలోక్య
10 ೧೦ ಇವನು ದೇವಾಲಯದ ಸುಂದರ ದ್ವಾರವೆಂಬ ಬಾಗಿಲಿನಲ್ಲಿ ಕುಳಿತು ಭಿಕ್ಷೆಬೇಡುತ್ತಿದ್ದವನೆಂದು ಗುರುತುಹಿಡಿದು, ಅವನಿಗೆ ಸಂಭವಿಸಿರುವ ಅದ್ಭುತಕಾರ್ಯಕ್ಕೆ ವಿಸ್ಮಯಗೊಂಡು ಬಹಳ ಬೆರಗಾದರು.
మన్దిరస్య సున్దరే ద్వారే య ఉపవిశ్య భిక్షితవాన్ సఏవాయమ్ ఇతి జ్ఞాత్వా తం ప్రతి తయా ఘటనయా చమత్కృతా విస్మయాపన్నాశ్చాభవన్|
11 ೧೧ ಗುಣಹೊಂದಿದ ಕುಂಟನು ಪೇತ್ರ ಮತ್ತು ಯೋಹಾನನ್ನು ಹಿಡುಕೊಂಡೇ ಇರುವಾಗ, ಆಶ್ಚರ್ಯಪಡುತ್ತಿರುವ ಆ ಜನರೆಲ್ಲರು ಸೊಲೊಮೋನನದೆಂದು ಹೆಸರುಳ್ಳ ಮಂಟಪಕ್ಕೆ ಒಟ್ಟಾಗಿ ಓಡಿಬಂದರು.
యః ఖఞ్జః స్వస్థోభవత్ తేన పితరయోహనోః కరయోర్ధ్టతయోః సతోః సర్వ్వే లోకా సన్నిధిమ్ ఆగచ్ఛన్|
12 ೧೨ ಪೇತ್ರನು ಇದನ್ನು ನೋಡಿ ಜನರಿಗೆ; “ಇಸ್ರಾಯೇಲ್ ಜನರೇ, ಈ ಘಟನೆಯಿಂದ ನೀವೇಕೆ ಆಶ್ಚರ್ಯಚಕಿತರಾಗಿದ್ದೀರಿ? ನೀವು ನಮ್ಮನೇಕೆ ಈ ರೀತಿ ದೃಷ್ಟಿಯಿಟ್ಟು ನೋಡುತ್ತಿದ್ದಿರಿ? ನಾವು ನಮ್ಮ ಸ್ವಂತ ಶಕ್ತಿಯಿಂದಾಗಲಿ, ನಮ್ಮ ದೈವಭಕ್ತಿಯಿಂದಾಗಲಿ ಇವನನ್ನು ನಡೆಯುವಂತೆ ಮಾಡಿದೆವೆಂದು ಭಾವಿಸಬೇಡಿರಿ.
తద్ దృష్ట్వా పితరస్తేభ్యోఽకథయత్, హే ఇస్రాయేలీయలోకా యూయం కుతో ఽనేనాశ్చర్య్యం మన్యధ్వే? ఆవాం నిజశక్త్యా యద్వా నిజపుణ్యేన ఖఞ్జమనుష్యమేనం గమితవన్తావితి చిన్తయిత్వా ఆవాం ప్రతి కుతోఽనన్యదృష్టిం కురుథ?
13 ೧೩ ನಮ್ಮ ಪೂರ್ವಿಕರಾದ ಅಬ್ರಹಾಮ ಇಸಾಕ ಯಾಕೋಬರ ದೇವರು ತನ್ನ ಸೇವಕನಾದ ಯೇಸುವನ್ನು ಮಹಿಮೆಪಡಿಸಿದ್ದಾನೆ. ನೀವಂತೂ ಆತನನ್ನು ಪಿಲಾತನಿಗೆ ಹಿಡಿದುಕೊಟ್ಟಿರಿ; ಮತ್ತು ಪಿಲಾತನು ಆತನನ್ನು ಬಿಡಿಸಬೇಕೆಂದು ನಿರ್ಣಯಿಸಿದಾಗ, ಆತನ ಮುಂದೆ ಆತನನ್ನು ಧಿಕ್ಕರಿಸಿ ಬೇಡವೆಂದು ಕೂಗಿದ್ದೀರಿ.
యం యీశుం యూయం పరకరేషు సమార్పయత తతో యం పీలాతో మోచయితుమ్ ఏచ్ఛత్ తథాపి యూయం తస్య సాక్షాన్ నాఙ్గీకృతవన్త ఇబ్రాహీమ ఇస్హాకో యాకూబశ్చేశ్వరోఽర్థాద్ అస్మాకం పూర్వ్వపురుషాణామ్ ఈశ్వరః స్వపుత్రస్య తస్య యీశో ర్మహిమానం ప్రాకాశయత్|
14 ೧೪ ನೀವು ಪರಿಶುದ್ಧನೂ, ನೀತಿವಂತನೂ ಆಗಿರುವ ಯೇಸುವನ್ನು ಬೇಡವೆಂದು ಹೇಳಿ ಕೊಲೆಗಾರನಾದ ಒಬ್ಬನನ್ನು ಬಿಡಿಸಿಕೊಡಬೇಕೆಂದು ಬೇಡಿಕೊಂಡು ಜೀವದಾಯಕನಾದ ಕ್ರಿಸ್ತನನ್ನು ಕೊಲ್ಲಿಸಿದ್ದೀರಿ.
కిన్తు యూయం తం పవిత్రం ధార్మ్మికం పుమాంసం నాఙ్గీకృత్య హత్యాకారిణమేకం స్వేభ్యో దాతుమ్ అయాచధ్వం|
15 ೧೫ ಆದರೆ ದೇವರು ಆತನನ್ನು ಸತ್ತವರೊಳಗಿಂದ ಎಬ್ಬಿಸಿದನು; ಈ ವಿಷಯದಲ್ಲಿ ನಾವೇ ಸಾಕ್ಷಿಗಳು.
పశ్చాత్ తం జీవనస్యాధిపతిమ్ అహత కిన్త్వీశ్వరః శ్మశానాత్ తమ్ ఉదస్థాపయత తత్ర వయం సాక్షిణ ఆస్మహే|
16 ೧೬ ನೀವು ನೋಡುತ್ತಿರುವಂತಹ, ನಿಮಗೆ ಗುರುತಿರುವಂತಹ ಈ ಮನುಷ್ಯನು ಗುಣವಾಗುವುದಕ್ಕೆ ಯೇಸುವಿನ ಹೆಸರಿನಲ್ಲಿ ಇಟ್ಟ ಅವನ ನಂಬಿಕೆಯೇ ಕಾರಣ; ಆ ಹೆಸರೇ ಇವನನ್ನು ಬಲಪಡಿಸಿತು. ಆತನ ಮೂಲಕ ಉಂಟಾಗಿರುವ ನಂಬಿಕೆಯೇ ಇವನಿಗೆ ನಿಮ್ಮೆಲ್ಲರ ಮುಂದೆ ಸಂಪೂರ್ಣಸೌಖ್ಯವನ್ನು ಕೊಟ್ಟಿತು.
ఇమం యం మానుషం యూయం పశ్యథ పరిచినుథ చ స తస్య నామ్ని విశ్వాసకరణాత్ చలనశక్తిం లబ్ధవాన్ తస్మిన్ తస్య యో విశ్వాసః స తం యుష్మాకం సర్వ్వేషాం సాక్షాత్ సమ్పూర్ణరూపేణ స్వస్థమ్ అకార్షీత్|
17 ೧೭ “ಸಹೋದರರೇ, ಅದಿರಲಿ, ನೀವು ಆ ಕಾರ್ಯವನ್ನು ತಿಳಿಯದೆ ಮಾಡಿದಿರೆಂದು ಬಲ್ಲೆನು; ನಿಮ್ಮ ಅಧಿಕಾರಿಗಳೂ ಅದನ್ನು ತಿಳಿಯದೆ ಮಾಡಿದರು.
హే భ్రాతరో యూయం యుష్మాకమ్ అధిపతయశ్చ అజ్ఞాత్వా కర్మ్మాణ్యేతాని కృతవన్త ఇదానీం మమైష బోధో జాయతే|
18 ೧೮ ಆದರೆ, ಕ್ರಿಸ್ತನು ಕಷ್ಟಗಳನ್ನನುಭವಿಸಬೇಕೆಂದು, ದೇವರು ಎಲ್ಲಾ ಪ್ರವಾದಿಗಳ ಮೂಲಕ ಮುಂಚಿತವಾಗಿ ಹೇಳಿಸಿದ ಮಾತುಗಳನ್ನು ಹೀಗೆ ನೆರವೇರಿಸಿದನು.
కిన్త్వీశ్వరః ఖ్రీష్టస్య దుఃఖభోగే భవిష్యద్వాదినాం ముఖేభ్యో యాం యాం కథాం పూర్వ్వమకథయత్ తాః కథా ఇత్థం సిద్ధా అకరోత్|
19 ೧೯ ಆದುದರಿಂದ ನಿಮ್ಮ ಪಾಪಗಳನ್ನು ಅಳಿಸಿಬಿಡುವ ಹಾಗೆ ನೀವು ಪಶ್ಚಾತ್ತಾಪಪಟ್ಟು ಆತನ ಕಡೆಗೆ ತಿರುಗಿಕೊಳ್ಳಿರಿ. ಹಾಗೆ ತಿರುಗಿದರೆ ಕರ್ತನ, ಸನ್ನಿಧಾನದಿಂದ
అతః స్వేషాం పాపమోచనార్థం ఖేదం కృత్వా మనాంసి పరివర్త్తయధ్వం, తస్మాద్ ఈశ్వరాత్ సాన్త్వనాప్రాప్తేః సమయ ఉపస్థాస్యతి;
20 ೨೦ ಪುನರುಜ್ಜೀವನದ ಕಾಲಗಳು ಒದಗಿ ಆತನು ನಿಮಗೆ ನೇಮಕವಾಗಿರುವ ಕ್ರಿಸ್ತನಾದ ಯೇಸುವನ್ನು ಕಳುಹಿಸಿಕೊಡುವನು.
పునశ్చ పూర్వ్వకాలమ్ ఆరభ్య ప్రచారితో యో యీశుఖ్రీష్టస్తమ్ ఈశ్వరో యుష్మాన్ ప్రతి ప్రేషయిష్యతి|
21 ೨೧ ಆದರೆ ಸಮಸ್ತವನ್ನು ಸರಿಮಾಡುವ ಕಾಲವು ಬರುವ ತನಕ ಪರಲೋಕವೇ ಕ್ರಿಸ್ತನ ಸ್ಥಾನವಾಗಿರಬೇಕು. ಆ ಕಾಲದ ವಿಷಯವಾಗಿ ದೇವರು ಪೂರ್ವದಲ್ಲಿದ್ದ ತನ್ನ ಪರಿಶುದ್ಧ ಪ್ರವಾದಿಗಳ ಮುಖಾಂತರ ಹೇಳಿಸಿದ್ದಾನೆ. (aiōn )
కిన్తు జగతః సృష్టిమారభ్య ఈశ్వరో నిజపవిత్రభవిష్యద్వాదిగణోన యథా కథితవాన్ తదనుసారేణ సర్వ్వేషాం కార్య్యాణాం సిద్ధిపర్య్యన్తం తేన స్వర్గే వాసః కర్త్తవ్యః| (aiōn )
22 ೨೨ ಮೋಶೆಯು ಹೇಳಿದ್ದೇನಂದರೆ, ‘ದೇವರಾಗಿರುವ ಕರ್ತನು ನನ್ನ ಹಾಗೆ ನಿಮ್ಮ ಸಹೋದರರಲ್ಲಿ ಮತ್ತೊಬ್ಬ ಪ್ರವಾದಿಯನ್ನು ನಿಮಗೆ ಎಬ್ಬಿಸುವನು; ಆತನು ಹೇಳುವ ಎಲ್ಲಾ ಮಾತುಗಳಿಗೆ ನೀವು ಕಿವಿಗೊಡಬೇಕು.
యుష్మాకం ప్రభుః పరమేశ్వరో యుష్మాకం భ్రాతృగణమధ్యాత్ మత్సదృశం భవిష్యద్వక్తారమ్ ఉత్పాదయిష్యతి, తతః స యత్ కిఞ్చిత్ కథయిష్యతి తత్ర యూయం మనాంసి నిధద్ధ్వం|
23 ೨೩ ಆ ಪ್ರವಾದಿಯ ಮಾತನ್ನು ಕೇಳದಿರುವ ಪ್ರತಿಯೊಬ್ಬನು ನಮ್ಮ ಜನರೊಳಗಿಂದ ಸಂಪೂರ್ಣವಾಗಿ ನಾಶವಾಗುವನು’ ಎಂಬುದೇ.
కిన్తు యః కశ్చిత్ ప్రాణీ తస్య భవిష్యద్వాదినః కథాం న గ్రహీష్యతి స నిజలోకానాం మధ్యాద్ ఉచ్ఛేత్స్యతే," ఇమాం కథామ్ అస్మాకం పూర్వ్వపురుషేభ్యః కేవలో మూసాః కథయామాస ఇతి నహి,
24 ೨೪ ಇದಲ್ಲದೆ ಸಮುವೇಲನೂ, ಅವನ ತರುವಾಯ ಬಂದು ಪ್ರವಾದಿಸಿದ ಎಲ್ಲಾ ಪ್ರವಾದಿಗಳೂ ಸಹ ಈಗಿನ ದಿನಗಳನ್ನು ಕುರಿತು ತಿಳಿಸಿರುವರು.
శిమూయేల్భవిష్యద్వాదినమ్ ఆరభ్య యావన్తో భవిష్యద్వాక్యమ్ అకథయన్ తే సర్వ్వఏవ సమయస్యైతస్య కథామ్ అకథయన్|
25 ೨೫ ನೀವು ಆ ಪ್ರವಾದಿಗಳ ಶಿಷ್ಯರು, ದೇವರು ನಮ್ಮ ಪೂರ್ವಿಕರ ಸಂಗಡ ಮಾಡಿಕೊಂಡ ಒಡಂಬಡಿಕೆಗೆ ಬಾಧ್ಯರೂ ಆಗಿದ್ದೀರಿ. ಆತನು ಅಬ್ರಹಾಮನಿಗೆ ‘ನಿನ್ನ ಸಂತತಿಯ ಮೂಲಕ ಭೂಲೋಕದ ಎಲ್ಲಾ ಕುಲದವರಿಗೂ ಆಶೀರ್ವಾದವುಂಟಾಗುವುದು’ ಎಂದು ಹೇಳಿ ಆ ಒಡಂಬಡಿಕೆಯನ್ನು ಮಾಡಿಕೊಂಡನಲ್ಲಾ.
యూయమపి తేషాం భవిష్యద్వాదినాం సన్తానాః, "తవ వంశోద్భవపుంసా సర్వ్వదేశీయా లోకా ఆశిషం ప్రాప్తా భవిష్యన్తి", ఇబ్రాహీమే కథామేతాం కథయిత్వా ఈశ్వరోస్మాకం పూర్వ్వపురుషైః సార్ద్ధం యం నియమం స్థిరీకృతవాన్ తస్య నియమస్యాధికారిణోపి యూయం భవథ|
26 ೨೬ ಮೊದಲು ನಿಮಗಾಗಿಯೇ ದೇವರು ತನ್ನ ಸೇವಕನನ್ನು ಪ್ರತಿಷ್ಠೆಪಡಿಸಿ ಈತನು ನಿಮ್ಮಲ್ಲಿ ಪ್ರತಿಯೊಬ್ಬನನ್ನು ಅವನವನ ಕೆಟ್ಟ ನಡತೆಗಳಿಂದ ತಿರುಗಿಸಿ ನಿಮ್ಮನ್ನು ಆಶೀರ್ವದಿಸಬೇಕೆಂದು ಆತನನ್ನು ಕಳುಹಿಸಿಕೊಟ್ಟಿದ್ದಾನೆ” ಎಂದು ಹೇಳಿದನು.
అత ఈశ్వరో నిజపుత్రం యీశుమ్ ఉత్థాప్య యుష్మాకం సర్వ్వేషాం స్వస్వపాపాత్ పరావర్త్త్య యుష్మభ్యమ్ ఆశిషం దాతుం ప్రథమతస్తం యుష్మాకం నికటం ప్రేషితవాన్|