< ಅಪೊಸ್ತಲರ ಕೃತ್ಯಗಳ 20 >

1 ಗದ್ದಲವು ನಿಂತ ತರುವಾಯ ಪೌಲನು ಶಿಷ್ಯರನ್ನು ಜೊತೆಗೆ ಕರೆಯಿಸಿ ಧೈರ್ಯಗೊಳಿಸಿ ಅವರ ಅಪ್ಪಣೆ ತೆಗೆದುಕೊಂಡು ಮಕೆದೋನ್ಯಕ್ಕೆ ಹೊರಟನು.
ఇత్థం కలహే నివృత్తే సతి పౌలః శిష్యగణమ్ ఆహూయ విసర్జనం ప్రాప్య మాకిదనియాదేశం ప్రస్థితవాన్|
2 ಆ ಸೀಮೆಯಲ್ಲಿ ಸಂಚಾರಮಾಡಿ ಅಲ್ಲಿಯವರನ್ನು ಅನೇಕ ಸಂದೇಶಗಳಿಂದ ಧೈರ್ಯಪಡಿಸಿ ಗ್ರೀಸ್ ದೇಶಕ್ಕೆ ಬಂದನು.
తేన స్థానేన గచ్ఛన్ తద్దేశీయాన్ శిష్యాన్ బహూపదిశ్య యూనానీయదేశమ్ ఉపస్థితవాన్|
3 ಅಲ್ಲಿ ಮೂರು ತಿಂಗಳು ಕಳೆದ ನಂತರ ಸಿರಿಯ ದೇಶಕ್ಕೆ ಸಮುದ್ರಮಾರ್ಗವಾಗಿ ಹೋಗಬೇಕೆಂದಿದ್ದಾಗ ಅವನಿಗೆ ವಿರುದ್ಧವಾಗಿ ಯೆಹೂದ್ಯರು ಒಳಸಂಚುಮಾಡಿದ್ದು ಅವನಿಗೆ ತಿಳಿದು ಬಂದ್ದುದರಿಂದ ಅವನು ಮಕೆದೋನ್ಯದ ಮಾರ್ಗವಾಗಿ ಹಿಂತಿರುಗಿ ಹೋಗುವುದಕ್ಕೆ ತೀರ್ಮಾನಿಸಿದನು.
తత్ర మాసత్రయం స్థిత్వా తస్మాత్ సురియాదేశం యాతుమ్ ఉద్యతః, కిన్తు యిహూదీయాస్తం హన్తుం గుప్తా అతిష్ఠన్ తస్మాత్ స పునరపి మాకిదనియామార్గేణ ప్రత్యాగన్తుం మతిం కృతవాన్|
4 ಪುರ್ರನ ಮಗನಾದ ಬೆರೋಯ ಪಟ್ಟಣದ ಸೋಪತ್ರನೂ, ಥೆಸಲೋನಿಕದವರಲ್ಲಿ ಅರಿಸ್ತಾರ್ಕನೂ, ಸೆಕುಂದನೂ ದೆರ್ಬೆಪಟ್ಟಣದ ಗಾಯನೂ, ತಿಮೊಥೆಯನೂ, ಆಸ್ಯಸೀಮೆಯವರಲ್ಲಿ ತುಖಿಕನೂ, ತ್ರೊಫಿಮನೂ, ಆಸ್ಯಸೀಮೆಯ ವರೆಗೂ ಅವನ ಜೊತೆಯಲ್ಲಿ ಹೋದರು.
బిరయానగరీయసోపాత్రః థిషలనీకీయారిస్తార్ఖసికున్దౌ దర్బ్బోనగరీయగాయతీమథియౌ ఆశియాదేశీయతుఖికత్రఫిమౌ చ తేన సార్ద్ధం ఆశియాదేశం యావద్ గతవన్తః|
5 ಅವರು ಮುಂಚಿತವಾಗಿ ಹೋಗಿ ನಮಗೋಸ್ಕರ ತ್ರೋವದಲ್ಲಿ ಕಾಯುತ್ತಿದ್ದರು
ఏతే సర్వ్వే ఽగ్రసరాః సన్తో ఽస్మాన్ అపేక్ష్య త్రోయానగరే స్థితవన్తః|
6 ಹುಳಿಯಿಲ್ಲದ ರೊಟ್ಟಿಯ ಹಬ್ಬದ ದಿನಗಳನ್ನು ಪೂರೈಸಿದ ಮೇಲೆ ನಾವು ಫಿಲಿಪ್ಪಿಯಿಂದ ಹೊರಟು ಹಡಗನ್ನು ಹತ್ತಿ ಐದು ದಿನಗಳಲ್ಲಿ‍ ತ್ರೋವದಲ್ಲಿ ಬಂದು ಅವರನ್ನು ಸೇರಿದೆವು. ಅಲ್ಲಿ ಏಳು ದಿನಗಳ ಕಾಲ ತಂಗಿದ್ದೆವು.
కిణ్వశూన్యపూపోత్సవదినే చ గతే సతి వయం ఫిలిపీనగరాత్ తోయపథేన గత్వా పఞ్చభి ర్దినైస్త్రోయానగరమ్ ఉపస్థాయ తత్ర సప్తదినాన్యవాతిష్ఠామ|
7 ವಾರದ ಮೊದಲನೆಯ ದಿನದಲ್ಲಿ ನಾವು ರೊಟ್ಟಿ ಮುರಿಯುವ ನಿಯಮಕ್ಕಾಗಿ ಸೇರಿಬಂದಾಗ ಪೌಲನು ಅಲ್ಲಿ ನೆರೆದಂತಹ ವಿಶ್ವಾಸಿಗಳಿಗೆ ಬೋಧನೆಮಾಡಿದನು. ಮರುದಿನ ಹೊರಡಬೇಕೆಂದಿದ್ದ ಪೌಲನು ಅವರಿಗೆ ಬೋಧಿಸುತ್ತಾ ಮಧ್ಯರಾತ್ರಿಯವರೆಗೂ ಉಪನ್ಯಾಸವನ್ನು ನೀಡಿದನು.
సప్తాహస్య ప్రథమదినే పూపాన్ భంక్తు శిష్యేషు మిలితేషు పౌలః పరదినే తస్మాత్ ప్రస్థాతుమ్ ఉద్యతః సన్ తదహ్ని ప్రాయేణ క్షపాయా యామద్వయం యావత్ శిష్యేభ్యో ధర్మ్మకథామ్ అకథయత్|
8 ನಾವು ಕೂಡಿದ್ದ ಮೇಲಂತಸ್ತಿನಲ್ಲಿ ಅನೇಕ ದೀಪಗಳಿದ್ದವು.
ఉపరిస్థే యస్మిన్ ప్రకోష్ఠే సభాం కృత్వాసన్ తత్ర బహవః ప్రదీపాః ప్రాజ్వలన్|
9 ಯೂತಿಖನೆಂಬ ಒಬ್ಬ ಯೌವನಸ್ಥನು ಕಿಟಿಕಿಯ ಹೊಸ್ತಿಲಿನಲ್ಲಿ ಕುಳಿತುಕೊಂಡು ಗಾಢನಿದ್ರೆಯಿಂದ ತೂಕಡಿಸುತ್ತಿದ್ದನು. ಪೌಲನು ಇನ್ನೂ ಬೋಧನೆ ಮಾಡುತ್ತಾ ಇದ್ದಾಗ ಆ ಯೌವನಸ್ಥನು ಗಾಢವಾದ ನಿದ್ರೆಯಿಂದ ತೂಕಡಿಸಿ ಮೂರನೆಯ ಅಂತಸ್ತಿನಿಂದ ಕೆಳಕ್ಕೆ ಬಿದ್ದುಬಿಟ್ಟನು; ಅವನನ್ನು ಎಬ್ಬಿಸಲು ಹೋದಾಗ ಅವನು ಸತ್ತುಹೋಗಿದ್ದನು.
ఉతుఖనామా కశ్చన యువా చ వాతాయన ఉపవిశన్ ఘోరతరనిద్రాగ్రస్తో ఽభూత్ తదా పౌలేన బహుక్షణం కథాయాం ప్రచారితాయాం నిద్రామగ్నః స తస్మాద్ ఉపరిస్థతృతీయప్రకోష్ఠాద్ అపతత్, తతో లోకాస్తం మృతకల్పం ధృత్వోదతోలయన్|
10 ೧೦ ಆದರೆ ಪೌಲನು ಇಳಿದು ಹೋಗಿ ಅವನ ಮೇಲೆ ಬಿದ್ದು ತಬ್ಬಿಕೊಂಡು; “ಗೋಳಾಡಬೇಡಿರಿ, ಅವನು ಜೀವಂತವಾಗಿದ್ದಾನೆ” ಎಂದು ಹೇಳಿದನು.
తతః పౌలోఽవరుహ్య తస్య గాత్రే పతిత్వా తం క్రోడే నిధాయ కథితవాన్, యూయం వ్యాకులా మా భూత నాయం ప్రాణై ర్వియుక్తః|
11 ೧೧ ಆಗ ಅವನು ಮೇಲಕ್ಕೆ ಹೋಗಿ ರೊಟ್ಟಿ ಮುರಿದು ಊಟಮಾಡಿ ಬಹಳ ಹೊತ್ತು ಬೆಳಗಾಗುವ ತನಕ ಮಾತನಾಡಿ ಹೊರಟುಹೋದನು.
పశ్చాత్ స పునశ్చోపరి గత్వా పూపాన్ భంక్త్వా ప్రభాతం యావత్ కథోపకథనే కృత్వా ప్రస్థితవాన్|
12 ೧೨ ಅವರು ಜೀವಿತನಾದ ಆ ಹುಡುಗನನ್ನು ಕರೆದುಕೊಂಡು ಬರಲು ಅವರಿಗೆ ಬಹಳ ಸಮಾಧಾನವಾಯಿತು.
తే చ తం జీవన్తం యువానం గృహీత్వా గత్వా పరమాప్యాయితా జాతాః|
13 ೧೩ ನಾವು ಮೊದಲೇ ಅಲ್ಲಿಗೆ ಹೋಗಿ ಅಸ್ಸೊಸಿನಲ್ಲಿ ಪೌಲನನ್ನು ತಮ್ಮೊಂದಿಗೆ ಹತ್ತಿಸಿಕೊಳ್ಳಬೇಕೆಂದು ಸಮುದ್ರ ಪ್ರಯಾಣಮಾಡಿದೆವು. ಪೌಲನು ಹಾಗೆಯೇ ನಮಗೆ ಅಪ್ಪಣೆ ಮಾಡಿ ತಾನು ಕಾಲುನಡಿಗೆಯಾಗಿ ಹೋಗಬೇಕೆಂದು ಮನಸ್ಸು ಮಾಡಿದ್ದನು.
అనన్తరం వయం పోతేనాగ్రసరా భూత్వాస్మనగరమ్ ఉత్తీర్య్య పౌలం గ్రహీతుం మతిమ్ అకుర్మ్మ యతః స తత్ర పద్భ్యాం వ్రజితుం మతిం కృత్వేతి నిరూపితవాన్|
14 ೧೪ ಅಸ್ಸೊಸಿನಲ್ಲಿ ಅವನು ನಮ್ಮನ್ನು ಕೂಡಿಕೊಂಡಾಗ ನಾವು ಅವನನ್ನು ಹಡಗಿನಲ್ಲಿ ಸೇರಿಸಿಕೊಂಡು ಮಿತಿಲೇನೆ ಪಟ್ಟಣಕ್ಕೆ ಹೊರಟೆವು.
తస్మాత్ తత్రాస్మాభిః సార్ద్ధం తస్మిన్ మిలితే సతి వయం తం నీత్వా మితులీన్యుపద్వీపం ప్రాప్తవన్తః|
15 ೧೫ ಅಲ್ಲಿಂದ ಹೊರಟು ಮರುದಿನ ಖೀಯೊಸ್‍ ದ್ವೀಪಕ್ಕೆ ಎದುರಾಗಿ ಬಂದು ಅದರ ಮರುದಿನ ಸಾಮೊಸಿನ ಹತ್ತಿರ ಬಂದೆವು. ಮರುದಿನ ಮಿಲೇತಕ್ಕೆ ಸೇರಿದೆವು.
తస్మాత్ పోతం మోచయిత్వా పరేఽహని ఖీయోపద్వీపస్య సమ్ముఖం లబ్ధవన్తస్తస్మాద్ ఏకేనాహ్నా సామోపద్వీపం గత్వా పోతం లాగయిత్వా త్రోగుల్లియే స్థిత్వా పరస్మిన్ దివసే మిలీతనగరమ్ ఉపాతిష్ఠామ|
16 ೧೬ ಪೌಲನು ತನಗೆ ಸಾಧ್ಯವಾದರೆ ಪಂಚಾಶತ್ತಮ ದಿನದ ಹಬ್ಬಕ್ಕೆ ಯೆರೂಸಲೇಮಿನಲ್ಲಿರಬೇಕೆಂದು ಅವಸರಪಡುತ್ತಾ ಇದ್ದುದರಿಂದ ಆಸ್ಯಸೀಮೆಯಲ್ಲಿ ಕಾಲವನ್ನು ಕಳೆಯುವುದಕ್ಕೆ ಮನಸ್ಸಿಲ್ಲದೆ ಎಫೆಸ ಪಟ್ಟಣವನ್ನು ದಾಟಿಹೋಗಬೇಕೆಂದು ತೀರ್ಮಾನಿಸಿಕೊಂಡಿದ್ದನು.
యతః పౌల ఆశియాదేశే కాలం యాపయితుమ్ నాభిలషన్ ఇఫిషనగరం త్యక్త్వా యాతుం మన్త్రణాం స్థిరీకృతవాన్; యస్మాద్ యది సాధ్యం భవతి తర్హి నిస్తారోత్సవస్య పఞ్చాశత్తమదినే స యిరూశాలమ్యుపస్థాతుం మతిం కృతవాన్|
17 ೧೭ ಅವನು ಮಿಲೇತದಿಂದ ಎಫೆಸಕ್ಕೆ ಹೇಳಿಕಳುಹಿಸಿ ಅಲ್ಲಿಯ ಸಭೆಯ ಹಿರಿಯರನ್ನು ಕರಿಸಿದನು.
పౌలో మిలీతాద్ ఇఫిషం ప్రతి లోకం ప్రహిత్య సమాజస్య ప్రాచీనాన్ ఆహూయానీతవాన్|
18 ೧೮ ಅವರು ಅವನ ಬಳಿಗೆ ಬಂದಾಗ ಅವರಿಗೆ ಅವನು ಹೇಳಿದ್ದೇನಂದರೆ; “ನಾನು ಆಸ್ಯಸೀಮೆಯಲ್ಲಿ ಕಾಲಿಟ್ಟ ಮೊದಲನೆಯ ದಿನದಿಂದ ನಿಮ್ಮ ಮಧ್ಯೆ ಎಲ್ಲಾ ಕಾಲಗಳಲ್ಲಿಯೂ ಹೇಗೆ ನಡೆದುಕೊಂಡೆನೆಂಬುದನ್ನು ನೀವೇ ಬಲ್ಲಿರಿ.
తేషు తస్య సమీపమ్ ఉపస్థితేషు స తేభ్య ఇమాం కథాం కథితవాన్, అహమ్ ఆశియాదేశే ప్రథమాగమనమ్ ఆరభ్యాద్య యావద్ యుష్మాకం సన్నిధౌ స్థిత్వా సర్వ్వసమయే యథాచరితవాన్ తద్ యూయం జానీథ;
19 ೧೯ ಯೆಹೂದ್ಯರ ಒಳಸಂಚುಗಳಿಂದ ಸಂಭವಿಸಿದ ಸಂಕಷ್ಟಗಳಲ್ಲಿ, ನಾನು ಅತಿ ನಮ್ರತೆಯಿಂದಲೂ, ಕಣ್ಣೀರಿನಿಂದಲೂ ಕರ್ತನ ಸೇವೆ ಮಾಡುತ್ತಿದ್ದೇನೆ.
ఫలతః సర్వ్వథా నమ్రమనాః సన్ బహుశ్రుపాతేన యిహుదీయానామ్ కుమన్త్రణాజాతనానాపరీక్షాభిః ప్రభోః సేవామకరవం|
20 ೨೦ ನಾನು ನಿಮಗೆ ಹಿತಕರವಾದದ್ದೆಲ್ಲವನ್ನು ಹೇಳುವುದಕ್ಕೂ, ಸಭೆಯಲ್ಲಿಯೂ, ಮನೆಮನೆಯಲ್ಲಿಯೂ, ಉಪದೇಶಿಸುವದಕ್ಕೂ ಹಿಂತೆಗೆಯದೆ
కామపి హితకథాం న గోపాయితవాన్ తాం ప్రచార్య్య సప్రకాశం గృహే గృహే సముపదిశ్యేశ్వరం ప్రతి మనః పరావర్త్తనీయం ప్రభౌ యీశుఖ్రీష్టే విశ్వసనీయం
21 ೨೧ ಯೆಹೂದ್ಯರಿಗೂ, ಗ್ರೀಕರಿಗೂ ಪಶ್ಚಾತ್ತಾಪಪಟ್ಟು ದೇವರ ಕಡೆಗೆ ತಿರುಗಿಕೊಳ್ಳಬೇಕೆಂತಲೂ, ನಮ್ಮ ಕರ್ತನಾದ ಯೇಸುವಿನ ಮೇಲೆ ನಂಬಿಕೆಯಿಡಬೇಕೆಂತಲೂ ದೃಢವಾಗಿ ಬೋಧಿಸುವವನಾಗಿದ್ದೆನು, ಇದೆಲ್ಲಾ ನಿಮಗೇ ತಿಳಿದಿದೆ.
యిహూదీయానామ్ అన్యదేశీయలోకానాఞ్చ సమీప ఏతాదృశం సాక్ష్యం దదామి|
22 ೨೨ ಇಗೋ, ನಾನು ಈಗ ಪವಿತ್ರಾತ್ಮನ ನಿರ್ಬಂಧವುಳ್ಳವನಾಗಿ ಯೆರೂಸಲೇಮಿಗೆ ಹೋಗುತ್ತಿದ್ದೇನೆ. ಅಲ್ಲಿ ನನಗೆ ಏನು ಸಂಭವಿಸುವುದೋ ನಾನರಿಯೆನು.
పశ్యత సామ్ప్రతమ్ ఆత్మనాకృష్టః సన్ యిరూశాలమ్నగరే యాత్రాం కరోమి, తత్ర మామ్ప్రతి యద్యద్ ఘటిష్యతే తాన్యహం న జానామి;
23 ೨೩ ನಿನಗೆ ಬೇಡಿಗಳೂ, ಹಿಂಸೆಗಳೂ ಕಾದುಕೊಂಡಿವೆ ಎಂದು ಪವಿತ್ರಾತ್ಮನು ಎಲ್ಲಾ ಪಟ್ಟಣಗಳಲ್ಲಿಯೂ ನನಗೆ ಎಚ್ಚರಿಕೆ ನೀಡಿದ್ದಾನೆ ಎಂಬುದನ್ನು ಬಲ್ಲೆನು.
కిన్తు మయా బన్ధనం క్లేశశ్చ భోక్తవ్య ఇతి పవిత్ర ఆత్మా నగరే నగరే ప్రమాణం దదాతి|
24 ೨೪ ಆದರೆ ಪ್ರಾಣವನ್ನು ಉಳಿಸಿಕೊಳ್ಳುವುದೇ ಶ್ರೇಷ್ಠವೆಂದು ನಾನು ಎಣಿಸುವುದಿಲ್ಲ; ದೇವರ ಕೃಪೆಯ ವಿಷಯವಾದ ಸುವಾರ್ತೆಯನ್ನು ಆಸಕ್ತಿಯಿಂದ ಸಾಕ್ಷ್ಯಪೂರಕವಾಗಿ ಸಾರುವ ನಿಯೋಗವನ್ನು ಕರ್ತನಾದ ಯೇಸುವಿನಿಂದ ನಾನು ಹೊಂದಿದ್ದೇನೆ ಈ ನಿಯೋಗವನ್ನು ಪೂರ್ಣಗೊಳಿಸುವುದೊಂದೇ ನನ್ನ ಅಪೇಕ್ಷೆಯಾಗಿದೆ.
తథాపి తం క్లేశమహం తృణాయ న మన్యే; ఈశ్వరస్యానుగ్రహవిషయకస్య సుసంవాదస్య ప్రమాణం దాతుం, ప్రభో ర్యీశోః సకాశాద యస్యాః సేవాయాః భారం ప్రాప్నవం తాం సేవాం సాధయితుం సానన్దం స్వమార్గం సమాపయితుఞ్చ నిజప్రాణానపి ప్రియాన్ న మన్యే|
25 ೨೫ ಇಗೋ, ಇಷ್ಟು ದಿನ ನಿಮ್ಮಲ್ಲಿ ಸಂಚಾರಮಾಡಿ ದೇವರ ರಾಜ್ಯವನ್ನು ಸಾರಿದವನಾದ ನನ್ನ ಮುಖವನ್ನು ಇನ್ನು ಮೇಲೆ ನಿಮ್ಮಲ್ಲಿ ಒಬ್ಬರೂ ನೋಡುವುದಿಲ್ಲವೆಂದು ಬಲ್ಲೆನು.
అధునా పశ్యత యేషాం సమీపేఽహమ్ ఈశ్వరీయరాజ్యస్య సుసంవాదం ప్రచార్య్య భ్రమణం కృతవాన్ ఏతాదృశా యూయం మమ వదనం పున ర్ద్రష్టుం న ప్రాప్స్యథ ఏతదప్యహం జానామి|
26 ೨೬ ಆದಕಾರಣ ನಾನು ಈ ಹೊತ್ತು ಖಂಡಿತವಾಗಿ ಹೇಳುತ್ತೇನೆ, ನಿಮ್ಮಲ್ಲಿ ಯಾರಾದರೂ ನಾಶವಾದರೆ ಅದು ನನ್ನ ತಪ್ಪಿನಿಂದಲ್ಲ.
యుష్మభ్యమ్ అహమ్ ఈశ్వరస్య సర్వ్వాన్ ఆదేశాన్ ప్రకాశయితుం న న్యవర్త్తే|
27 ೨೭ ಏಕೆಂದರೆ ಒಂದನ್ನೂ ಮರೆಮಾಡದೆ ದೇವರ ಸಂಕಲ್ಪವನ್ನೆಲ್ಲಾ ನಿಮಗೆ ತಿಳಿಸಿದ್ದೇನೆ.
అహం సర్వ్వేషాం లోకానాం రక్తపాతదోషాద్ యన్నిర్దోష ఆసే తస్యాద్య యుష్మాన్ సాక్షిణః కరోమి|
28 ೨೮ ಕರ್ತನು ತನ್ನ ಸ್ವಂತ ರಕ್ತದಿಂದ ಸಂಪಾದಿಸಿಕೊಂಡ ದೇವರ ಸಭೆಯನ್ನು ಪರಿಪಾಲಿಸುವುದಕ್ಕಾಗಿ ಪವಿತ್ರಾತ್ಮನು ನಿಮ್ಮನ್ನೇ ಆ ಗುಂಪಿನಲ್ಲಿ ಅಧ್ಯಕ್ಷರನ್ನಾಗಿ ಇಟ್ಟಿರುವುದರಿಂದ ನಿಮ್ಮ ವಿಷಯದಲ್ಲಿಯೂ, ಎಲ್ಲಾ ಹಿಂಡಿನ ವಿಷಯದಲ್ಲಿಯೂ ಎಚ್ಚರಿಕೆಯಾಗಿರಿ.
యూయం స్వేషు తథా యస్య వ్రజస్యాధ్యక్షన్ ఆత్మా యుష్మాన్ విధాయ న్యయుఙ్క్త తత్సర్వ్వస్మిన్ సావధానా భవత, య సమాజఞ్చ ప్రభు ర్నిజరక్తమూల్యేన క్రీతవాన తమ్ అవత,
29 ೨೯ ನಾನು ಹೋದ ಮೇಲೆ ಕ್ರೂರವಾದ ತೋಳಗಳು ನಿಮ್ಮೊಳಗೆ ಬರುವುದೆಂದು ನಾನು ಬಲ್ಲೆನು; ಅವು ಹಿಂಡನ್ನು ಕನಿಕರಿಸುವುದಿಲ್ಲ.
యతో మయా గమనే కృతఏవ దుర్జయా వృకా యుష్మాకం మధ్యం ప్రవిశ్య వ్రజం ప్రతి నిర్దయతామ్ ఆచరిష్యన్తి,
30 ೩೦ ಇದಲ್ಲದೆ ನಿಮ್ಮಲ್ಲೇ ಕೆಲವರು ಎದ್ದು ಅಸತ್ಯವಾದ ಬೋಧನೆಗಳನ್ನು ಮಾಡಿ ಶಿಷ್ಯರನ್ನು ತಮ್ಮ ಕಡೆಗೆ ಎಳೆದುಕೊಳ್ಳುವರು.
యుష్మాకమేవ మధ్యాదపి లోకా ఉత్థాయ శిష్యగణమ్ అపహన్తుం విపరీతమ్ ఉపదేక్ష్యన్తీత్యహం జానామి|
31 ೩೧ ಆದಕಾರಣ ನಾನು ಕಣ್ಣೀರು ಸುರಿಸುತ್ತಾ ಮೂರು ವರ್ಷ ಹಗಲಿರುಳು ಎಡೆಬಿಡದೆ ಪ್ರತಿಯೊಬ್ಬನಿಗೆ ಬುದ್ಧಿ ಹೇಳಿದೆನೆಂಬುದನ್ನು ನೀವು ನೆನಪಿಸಿಕೊಂಡು ಎಚ್ಚರವಾಗಿರಿ.
ఇతి హేతో ర్యూయం సచైతన్యాః సన్తస్తిష్టత, అహఞ్చ సాశ్రుపాతః సన్ వత్సరత్రయం యావద్ దివానిశం ప్రతిజనం బోధయితుం న న్యవర్త్తే తదపి స్మరత|
32 ೩೨ ನಾನೀಗ ನಿಮ್ಮನ್ನು ದೇವರಿಗೂ, ಆತನ ಕೃಪಾವಾಕ್ಯಕ್ಕೂ ಒಪ್ಪಿಸಿಕೊಡುತ್ತೇನೆ. ಆತನು ನಿಮ್ಮಲ್ಲಿ ಭಕ್ತಿವೃದ್ಧಿಯನ್ನುಂಟುಮಾಡುವುದಕ್ಕೂ, ಪರಿಶುದ್ಧರೊಂದಿಗೆ ನಿಮಗೆ ಹಕ್ಕನ್ನು ಅನುಗ್ರಹಿಸುವುದಕ್ಕೆ ಶಕ್ತನಾಗಿದ್ದಾನೆ.
ఇదానీం హే భ్రాతరో యుష్మాకం నిష్ఠాం జనయితుం పవిత్రీకృతలోకానాం మధ్యేఽధికారఞ్చ దాతుం సమర్థో య ఈశ్వరస్తస్యానుగ్రహస్య యో వాదశ్చ తయోరుభయో ర్యుష్మాన్ సమార్పయమ్|
33 ೩೩ ನಾನು ಯಾರ ಬೆಳ್ಳಿಬಂಗಾರವನ್ನಾಗಲಿ, ಉಡಿಗೆತೊಡಿಗೆಯನ್ನಾಗಲಿ ಬಯಸಲಿಲ್ಲ.
కస్యాపి స్వర్ణం రూప్యం వస్త్రం వా ప్రతి మయా లోభో న కృతః|
34 ೩೪ ಈ ಕೈಗಳಿಂದಲೇ ಕೆಲಸಮಾಡಿ, ನನ್ನ ಕೊರತೆಗಳನ್ನೂ, ನನ್ನ ಜೊತೆಯಲ್ಲಿದ್ದವರ ಕೊರತೆಗಳನ್ನು ನೀಗಿಸಿದ್ದನ್ನು ನೀವೇ ಬಲ್ಲಿರಿ.
కిన్తు మమ మత్సహచరలోకానాఞ్చావశ్యకవ్యయాయ మదీయమిదం కరద్వయమ్ అశ్రామ్యద్ ఏతద్ యూయం జానీథ|
35 ೩೫ ಎಲ್ಲಾ ವಿಷಯಗಳಲ್ಲಿ ನಾನು ನಿಮಗೆ ಮಾದರಿ ತೋರಿಸಿದ್ದೇನೆ. ನೀವು ಹಾಗೆಯೇ ದುಡಿದು ಬಲವಿಲ್ಲದವರಿಗೆ ಉಪಕಾರಮಾಡಬೇಕು; ಮತ್ತು; ‘ತೆಗೆದುಕೊಳ್ಳುವುದಕ್ಕಿಂತ ಕೊಡುವುದೇ ಹೆಚ್ಚಿನ ಭಾಗ್ಯವೆಂಬುದಾಗಿ’ ಕರ್ತನಾದ ಯೇಸು ತಾನೇ ಹೇಳಿದ ಮಾತುಗಳನ್ನು ನೆನಪಿನಲ್ಲಿಟ್ಟುಕೊಂಡಿರಬೇಕು” ಅಂದನು.
అనేన ప్రకారేణ గ్రహణద్ దానం భద్రమితి యద్వాక్యం ప్రభు ర్యీశుః కథితవాన్ తత్ స్మర్త్తుం దరిద్రలోకానాముపకారార్థం శ్రమం కర్త్తుఞ్చ యుష్మాకమ్ ఉచితమ్ ఏతత్సర్వ్వం యుష్మానహమ్ ఉపదిష్టవాన్|
36 ೩೬ ಈ ಮಾತುಗಳನ್ನು ಅವನು ಹೇಳಿದ ಮೇಲೆ ಮೊಣಕಾಲೂರಿಕೊಂಡು ಅವರೆಲ್ಲರ ಸಂಗಡ ಪ್ರಾರ್ಥನೆಮಾಡಿದನು.
ఏతాం కథాం కథయిత్వా స జానునీ పాతయిత్వా సర్వైః సహ ప్రార్థయత|
37 ೩೭ ಬಳಿಕ ಪೌಲನು; “ನೀವು ನನ್ನ ಮುಖವನ್ನು ಇನ್ನೆಂದೂ ಕಾಣಲಾರಿರಿ” ಅನ್ನಲು, ಅವರೆಲ್ಲರು ವ್ಯಥೆಪಟ್ಟು, ದುಃಖದಿಂದ ಅಳುತ್ತಾ, ಅವನ ಕೊರಳನ್ನು ತಬ್ಬಿಕೊಂಡು ಅವನಿಗೆ ಮುದ್ದಿಟ್ಟರು.
తేన తే క్రన్ద్రన్తః
38 ೩೮ ತರುವಾಯ ಅವರು ಹಡಗಿನವರೆಗೆ ಅವನ ಸಂಗಡ ಹೋಗಿ ಅವನನ್ನು ಬೀಳ್ಕೊಟ್ಟರು.
పున ర్మమ ముఖం న ద్రక్ష్యథ విశేషత ఏషా యా కథా తేనాకథి తత్కారణాత్ శోకం విలాపఞ్చ కృత్వా కణ్ఠం ధృత్వా చుమ్బితవన్తః| పశ్చాత్ తే తం పోతం నీతవన్తః|

< ಅಪೊಸ್ತಲರ ಕೃತ್ಯಗಳ 20 >