< ತಿಮೊಥೆಯನಿಗೆ ಬರೆದ ಮೊದಲನೆಯ ಪತ್ರಿಕೆ 6 >
1 ೧ ದಾಸತ್ವ ನೊಗದ ಅಧೀನದಲ್ಲಿರುವವರು ತಮ್ಮ ಯಜಮಾನರನ್ನು ಪೂರ್ಣ ಗೌರವಕ್ಕೂ ಯೋಗ್ಯರೆಂದೆಣಿಸಲಿ, ಇಲ್ಲದಿದ್ದರೆ ದೇವರ ನಾಮಕ್ಕೂ ನಾವು ಹೊಂದಿರುವ ಉಪದೇಶಕ್ಕೂ ನಿಂದನೆ ಉಂಟಾಗುತ್ತದೆ.
யாவந்தோ லோகா யுக³தா⁴ரிணோ தா³ஸா: ஸந்தி தே ஸ்வஸ்வஸ்வாமிநம்’ பூர்ணஸமாத³ரயோக்³யம்’ மந்யந்தாம்’ நோ சேத்³ ஈஸ்²வரஸ்ய நாம்ந உபதே³ஸ²ஸ்ய ச நிந்தா³ ஸம்ப⁴விஷ்யதி|
2 ೨ ಯಾರಿಗಾದರೂ ಕ್ರಿಸ್ತನನ್ನು ನಂಬುವವರಾದ ಯಜಮಾನರಿದ್ದರೆ, ಅವರು ಆ ಯಜಮಾನರನ್ನು ಸಹೋದರರೆಂದು ಉದಾಸೀನಮಾಡದೆ, ತಮ್ಮ ಸೇವೆಯ ಫಲವನ್ನು ಹೊಂದುವವರು, ನಂಬಿಗಸ್ತರು, ಪ್ರಿಯರೂ ಆಗಿದ್ದಾರೆಂದು ತಿಳಿದು ಅವರಿಗೆ ಇನ್ನು ಹೆಚ್ಚಾದ ಸಂತೋಷದಿಂದಲೇ ಸೇವೆಮಾಡಬೇಕು. ಈ ಉಪದೇಶವನ್ನು ಮಾಡಿ ಅವರನ್ನು ಎಚ್ಚರಿಸು.
யேஷாஞ்ச ஸ்வாமிநோ விஸ்²வாஸிந: ப⁴வந்தி தைஸ்தே ப்⁴ராத்ரு’த்வாத் நாவஜ்ஞேயா: கிந்து தே கர்ம்மப²லபோ⁴கி³நோ விஸ்²வாஸிந: ப்ரியாஸ்²ச ப⁴வந்தீதி ஹேதோ: ஸேவநீயா ஏவ, த்வம் ஏதாநி ஸி²க்ஷய ஸமுபதி³ஸ² ச|
3 ೩ ಯಾವನಾದರೂ ಭಿನ್ನವಾದ ಉಪದೇಶವನ್ನು ಮಾಡಿ ನಮ್ಮ ಕರ್ತನಾದ ಯೇಸು ಕ್ರಿಸ್ತನ ಸ್ವಸ್ಥವಾದ ಮಾತುಗಳಿಗೂ, ಭಕ್ತಾನುಸಾರವಾದ ಉಪದೇಶಗಳಿಗೂ ಸಮ್ಮತಿಸದೆ ಹೋದರೆ,
ய: கஸ்²சித்³ இதரஸி²க்ஷாம்’ கரோதி, அஸ்மாகம்’ ப்ரபோ⁴ ர்யீஸு²க்²ரீஷ்டஸ்ய ஹிதவாக்யாநீஸ்²வரப⁴க்தே ர்யோக்³யாம்’ ஸி²க்ஷாஞ்ச ந ஸ்வீகரோதி
4 ೪ ಅವನು ಅಹಂಭಾವಿಯೂ ಅಜ್ಞಾನಿಯೂ ಆಗಿದ್ದು, ನಿಂದನೆ ವಾಗ್ವಾದಗಳನ್ನುಂಟು ಮಾಡುವ ಭ್ರಾಂತಿಯಲ್ಲಿದ್ದಾನೆ. ಇವುಗಳಿಂದ ಹೊಟ್ಟೆಕಿಚ್ಚು, ಜಗಳ, ದೂಷಣೆ, ದುಸ್ಸಂಶಯ ಮುಂತಾದವುಗಳು ಉಂಟಾಗುತ್ತವೆ.
ஸ த³ர்பத்⁴மாத: ஸர்வ்வதா² ஜ்ஞாநஹீநஸ்²ச விவாதை³ ர்வாக்³யுத்³தை⁴ஸ்²ச ரோக³யுக்தஸ்²ச ப⁴வதி|
5 ೫ ಇದಲ್ಲದೆ ಬುದ್ಧಿಗೆಟ್ಟು ಸತ್ಯವಿಹೀನರಾಗಿದ್ದು ದೇವಭಕ್ತಿಯನ್ನು ಲಾಭಸಾಧನವೆಂದೆಣಿಸುವ ಈ ಮನುಷ್ಯರಲ್ಲಿ ನಿತ್ಯವಾದ ಕಚ್ಚಾಟಗಳು ಉಂಟಾಗುತ್ತವೆ.
தாத்³ரு’ஸா²த்³ பா⁴வாத்³ ஈர்ஷ்யாவிரோதா⁴பவாத³து³ஷ்டாஸூயா ப்⁴ரஷ்டமநஸாம்’ ஸத்யஜ்ஞாநஹீநாநாம் ஈஸ்²வரப⁴க்திம்’ லாபோ⁴பாயம் இவ மந்யமாநாநாம்’ லோகாநாம்’ விவாதா³ஸ்²ச ஜாயந்தே தாத்³ரு’ஸே²ப்⁴யோ லோகேப்⁴யஸ்த்வம்’ ப்ரு’த²க் திஷ்ட²|
6 ೬ ಸಂತುಷ್ಟಿಸಹಿತವಾದ ಭಕ್ತಿಯು ದೊಡ್ಡ ಲಾಭವೇ ಸರಿ.
ஸம்’யதேச்ச²யா யுக்தா யேஸ்²வரப⁴க்தி: ஸா மஹாலாபோ⁴பாயோ ப⁴வதீதி ஸத்யம்’|
7 ೭ ನಾವು ಲೋಕದೊಳಕ್ಕೆ ಏನೂ ತೆಗೆದುಕೊಂಡು ಬರಲಿಲ್ಲವಾದ್ದರಿಂದ, ಅದರೊಳಗಿಂದ ಏನೂ ತೆಗೆದುಕೊಂಡು ಹೋಗಲಾರೆವು.
ஏதஜ்ஜக³த்ப்ரவேஸ²நகாலே(அ)ஸ்மாபி⁴: கிமபி நாநாயி தத்தயஜநகாலே(அ)பி கிமபி நேதும்’ ந ஸ²க்ஷ்யத இதி நிஸ்²சிதம்’|
8 ೮ ನಮಗೆ ಅನ್ನ ವಸ್ತ್ರಗಳಿದ್ದರೆ ಸಾಕು, ನಾವು ಸಂತುಷ್ಟರಾಗುತ್ತವೆ.
அதஏவ கா²த்³யாந்யாச்சா²த³நாநி ச ப்ராப்யாஸ்மாபி⁴: ஸந்துஷ்டை ர்ப⁴விதவ்யம்’|
9 ೯ ಐಶ್ವರ್ಯವಂತರಾಗಬೇಕೆಂದು ಮನಸ್ಸುಮಾಡುವವರು ದುಷ್ಟ್ರೇರಣೆಯೆಂಬ ಬಲೆಯಲ್ಲಿ ಸಿಕ್ಕಿಕೊಂಡು, ಬುದ್ಧಿಗೆ ವಿರುದ್ಧವಾಗಿಯೂ ಹಾನಿಕರವಾಗಿಯೂ ಇರುವ ಅನೇಕ ಆಸೆಗಳಲ್ಲಿ ಬೀಳುತ್ತಾರೆ. ಇಂಥ ಆಸೆಗಳು ಮನುಷ್ಯರನ್ನು ಸಂಹಾರ ವಿನಾಶಗಳಲ್ಲಿ ಸಿಕ್ಕಿಸುತ್ತವೆ.
யே து த⁴நிநோ ப⁴விதும்’ சேஷ்டந்தே தே பரீக்ஷாயாம் உந்மாதே² பதந்தி யே சாபி⁴லாஷா மாநவாந் விநாஸே² நரகே ச மஜ்ஜயந்தி தாத்³ரு’ஸே²ஷ்வஜ்ஞாநாஹிதாபி⁴லாஷேஷ்வபி பதந்தி|
10 ೧೦ ಹಣದಾಸೆಯು ಸಕಲವಿಧವಾದ ಕೆಟ್ಟತನಕ್ಕೆ ಮೂಲವಾಗಿದೆ. ಕೆಲವರು ಅದಕ್ಕಾಗಿ ಆತುರಪಟ್ಟು, ಅದರಿಂದ ಕ್ರಿಸ್ತ ನಂಬಿಕೆಯನ್ನು ಬಿಟ್ಟು, ಅಲೆದಾಡಿ ಅನೇಕ ವೇದನೆಗಳಿಂದ ತಮ್ಮನ್ನು ತಿವಿಸಿಕೊಳ್ಳುತ್ತಾರೆ.
யதோ(அ)ர்த²ஸ்ப்ரு’ஹா ஸர்வ்வேஷாம்’ து³ரிதாநாம்’ மூலம்’ ப⁴வதி தாமவலம்ப்³ய கேசித்³ விஸ்²வாஸாத்³ அப்⁴ரம்’ஸ²ந்த நாநாக்லேஸை²ஸ்²ச ஸ்வாந் அவித்⁴யந்|
11 ೧೧ ಎಲೈ, ದೇವರ ಮನುಷ್ಯನೇ, ನೀನಾದರೋ ಇವುಗಳಿಗೆ ದೂರವಾಗಿರು. ನೀತಿ, ಭಕ್ತಿ, ನಂಬಿಕೆ, ಪ್ರೀತಿ, ಸ್ಥಿರಚಿತ್ತ ಹಾಗೂ ಸಾತ್ವಿಕತ್ವ ಇವುಗಳನ್ನು ಸಂಪಾದಿಸುವುದಕ್ಕೆ ಪ್ರಯಾಸಪಡು.
ஹே ஈஸ்²வரஸ்ய லோக த்வம் ஏதேப்⁴ய: பலாய்ய த⁴ர்ம்ம ஈஸ்²வரப⁴க்தி ர்விஸ்²வாஸ: ப்ரேம ஸஹிஷ்ணுதா க்ஷாந்திஸ்²சைதாந்யாசர|
12 ೧೨ ಕ್ರಿಸ್ತ ನಂಬಿಕೆಯ ಶ್ರೇಷ್ಠ ಹೋರಾಟವನ್ನು ಮಾಡು, ನಿತ್ಯಜೀವವನ್ನು ಹಿಡಿದುಕೋ. ಅದಕ್ಕಾಗಿ ನೀನು ದೇವರಿಂದ ಕರೆಯಲ್ಪಟ್ಟಿದಿ ಮತ್ತು ನೀನು ಅನೇಕ ಸಾಕ್ಷಿಗಳ ಮುಂದೆ ಒಳ್ಳೆಯ ಪ್ರತಿಜ್ಞೆಯನ್ನು ಮಾಡಿದಿಯಲ್ಲಾ. (aiōnios )
விஸ்²வாஸரூபம் உத்தமயுத்³த⁴ம்’ குரு, அநந்தஜீவநம் ஆலம்ப³ஸ்வ யதஸ்தத³ர்த²ம்’ த்வம் ஆஹூதோ (அ)ப⁴வ: , ப³ஹுஸாக்ஷிணாம்’ ஸமக்ஷஞ்சோத்தமாம்’ ப்ரதிஜ்ஞாம்’ ஸ்வீக்ரு’தவாந்| (aiōnios )
13 ೧೩ ಸರ್ವ ಸೃಷ್ಟಿಗೆ ಜೀವಾಧಾರಕನಾದ ದೇವರ ಮುಂದೆಯೂ, ಪೊಂತ್ಯ ಪಿಲಾತನ ಕಾಲದಲ್ಲಿ ಶ್ರೇಷ್ಠ ಪ್ರತಿಜ್ಞೆಯನ್ನು ತಾನೇ ಸಾಕ್ಷಿಯಾಗಿದ್ದು ಸ್ಥಾಪಿಸಿದ ಕ್ರಿಸ್ತ ಯೇಸುವಿನ ಮುಂದೆಯೂ ನಾನು ನಿನಗೆ ಆಜ್ಞಾಪಿಸುವುದೇನಂದರೆ,
அபரம்’ ஸர்வ்வேஷாம்’ ஜீவயிதுரீஸ்²வரஸ்ய ஸாக்ஷாத்³ யஸ்²ச க்²ரீஷ்டோ யீஸு²: பந்தீயபீலாதஸ்ய ஸமக்ஷம் உத்தமாம்’ ப்ரதிஜ்ஞாம்’ ஸ்வீக்ரு’தவாந் தஸ்ய ஸாக்ஷாத்³ அஹம்’ த்வாம் இத³ம் ஆஜ்ஞாபயாமி|
14 ೧೪ ನಮ್ಮ ಕರ್ತನಾದ ಯೇಸು ಕ್ರಿಸ್ತನ ಪ್ರತ್ಯಕ್ಷತೆಯ ತನಕ ನೀನು ಈ ಆಜ್ಞೆಯನ್ನು ನಿಷ್ಕಳಂಕವಾಗಿಯೂ ನಿಂದಾರಹಿತವಾಗಿಯೂ ಕಾಪಾಡಿಕೊಂಡಿರಬೇಕು.
ஈஸ்²வரேண ஸ்வஸமயே ப்ரகாஸி²தவ்யம் அஸ்மாகம்’ ப்ரபோ⁴ ர்யீஸு²க்²ரீஷ்டஸ்யாக³மநம்’ யாவத் த்வயா நிஷ்கலங்கத்வேந நிர்த்³தோ³ஷத்வேந ச விதீ⁴ ரக்ஷ்யதாம்’|
15 ೧೫ ಭಾಗ್ಯವಂತನಾದ ಏಕಾಧಿಪತಿಯು ತಾನು ನಿಗದಿಪಡಿಸಿರುವ ಸೂಕ್ತ ಸಮಯದಲ್ಲೇ ಆತನನ್ನು ಪ್ರತ್ಯಕ್ಷಪಡಿಸುವನು. ಆ ಏಕಾಧಿಪತಿಯು, ರಾಜಾಧಿರಾಜನೂ, ಕರ್ತಾಧಿಕರ್ತನೂ,
ஸ ஈஸ்²வர: ஸச்சிதா³நந்த³: , அத்³விதீயஸம்ராட், ராஜ்ஞாம்’ ராஜா, ப்ரபூ⁴நாம்’ ப்ரபு⁴: ,
16 ೧೬ ತಾನೊಬ್ಬನೇ ಅಮರತ್ವವುಳ್ಳವನೂ ಅಗಮ್ಯವಾದ ಬೆಳಕಿನಲ್ಲಿ ವಾಸಮಾಡುವವನೂ ಆಗಿದ್ದಾನೆ. ಮನುಷ್ಯರಲ್ಲಿ ಯಾರೂ ಆತನನ್ನು ಕಾಣಲಿಲ್ಲ, ಯಾರೂ ಕಾಣಲಾರರು. ಆತನಿಗೆ ಮಾನವೂ ನಿತ್ಯಾಧಿಪತ್ಯವೂ ಎಂದೆಂದಿಗೂ ಇರಲಿ. ಆಮೆನ್. (aiōnios )
அமரதாயா அத்³விதீய ஆகர: , அக³ம்யதேஜோநிவாஸீ, மர்த்த்யாநாம்’ கேநாபி ந த்³ரு’ஷ்ட: கேநாபி ந த்³ரு’ஸ்²யஸ்²ச| தஸ்ய கௌ³ரவபராக்ரமௌ ஸதா³தநௌ பூ⁴யாஸ்தாம்’| ஆமேந்| (aiōnios )
17 ೧೭ ಇಹಲೋಕ ವಿಷಯದಲ್ಲಿ ಐಶ್ವರ್ಯವುಳ್ಳವರು ಅಹಂಕಾರಿಗಳಾಗಿರದೆ, ಅಸ್ಥಿರವಾದ ಐಶ್ವರ್ಯದ ಮೇಲೆ ನಿರೀಕ್ಷೆಯನ್ನಿಡದೆ, ನಮ್ಮ ಅನುಭೋಗಕ್ಕೋಸ್ಕರ ನಮಗೆ ಎಲ್ಲವನ್ನೂ ಹೇರಳವಾಗಿ ದಯಪಾಲಿಸುವ ದೇವರ ಮೇಲೆ ನಿರೀಕ್ಷೆಯನ್ನಿಡಬೇಕು. (aiōn )
இஹலோகே யே த⁴நிநஸ்தே சித்தஸமுந்நதிம்’ சபலே த⁴நே விஸ்²வாஸஞ்ச ந குர்வ்வதாம்’ கிந்து போ⁴கா³ர்த²ம் அஸ்மப்⁴யம்’ ப்ரசுரத்வேந ஸர்வ்வதா³தா (aiōn )
18 ೧೮ ವಾಸ್ತವವಾದ ಜೀವವನ್ನು ಹೊಂದುವುದಕ್ಕೋಸ್ಕರ ಅವರು ಒಳ್ಳೆಯದನ್ನು ಮಾಡುವವರೂ, ಸತ್ಕಾರ್ಯಗಳನ್ನು ಮಾಡುವುದರಲ್ಲಿ ಐಶ್ವರ್ಯವಂತರೂ, ಉದಾರಶೀಲರೂ, ಪರೋಪಕಾರಮಾಡುವವರೂ ಆಗಿದ್ದು, ಮುಂದಿನ ಕಾಲಕ್ಕೆ ಒಳ್ಳೆ ಅಸ್ತಿವಾರವಾಗುವಂಥವುಗಳನ್ನು ತಮಗೆ ಕೂಡಿಸಿಟ್ಟುಕೊಳ್ಳಬೇಕೆಂದು ಅವರಿಗೆ ಆಜ್ಞಾಪಿಸು.
யோ(அ)மர ஈஸ்²வரஸ்தஸ்மிந் விஸ்²வஸந்து ஸதா³சாரம்’ குர்வ்வந்து ஸத்கர்ம்மத⁴நேந த⁴நிநோ ஸுகலா தா³தாரஸ்²ச ப⁴வந்து,
யதா² ச ஸத்யம்’ ஜீவநம்’ பாப்நுயுஸ்ததா² பாரத்ரிகாம் உத்தமஸம்பத³ம்’ ஸஞ்சிந்வந்த்வேதி த்வயாதி³ஸ்²யந்தாம்’|
20 ೨೦ ಎಲೈ ತಿಮೊಥೆಯನೇ, ಜ್ಞಾನೋಪದೇಶವೆಂದು ಸುಳ್ಳಾಗಿ ಹೇಳಿಕೊಳ್ಳುವ ಬೋಧನೆಗೆ ಸಂಬಂಧಪಟ್ಟ, ಪ್ರಾಪಂಚಿಕವಾದ ಆ ಹರಟೆ ಮಾತುಗಳಿಗೂ, ವಿವಾದಗಳಿಗೂ ನೀನು ದೂರವಾಗಿದ್ದು ನಿನ್ನ ವಶಕ್ಕೆ ಕೊಟ್ಟಿರುವುದನ್ನು ಕಾಪಾಡಿಕೋ.
ஹே தீமதி²ய, த்வம் உபநிதி⁴ம்’ கோ³பய கால்பநிகவித்³யாயா அபவித்ரம்’ ப்ரலாபம்’ விரோதோ⁴க்திஞ்ச த்யஜ ச,
21 ೨೧ ಕೆಲವರು ಆ ಸುಳ್ಳಾದ ಜ್ಞಾನವನ್ನು ಒಪ್ಪಿಕೊಂಡು ಕ್ರಿಸ್ತ ನಂಬಿಕೆಯಿಂದ ಭ್ರಷ್ಟರಾಗಿ ಹೋದರು. ಕೃಪೆಯು ನಿಮ್ಮೊಂದಿಗಿರಲಿ.
யத: கதிபயா லோகாஸ்தாம்’ வித்³யாமவலம்ப்³ய விஸ்²வாஸாத்³ ப்⁴ரஷ்டா அப⁴வந| ப்ரஸாத³ஸ்தவ ஸஹாயோ பூ⁴யாத்| ஆமேந்|