< ಪೇತ್ರನು ಬರೆದ ಮೊದಲನೆಯ ಪತ್ರಿಕೆ 1 >

1 ಯೇಸು ಕ್ರಿಸ್ತನ ಅಪೊಸ್ತಲನಾದ ಪೇತ್ರನು ಪೊಂತ, ಗಲಾತ್ಯ, ಕಪ್ಪದೋಕ್ಯ, ಆಸ್ಯ, ಬಿಥೂನ್ಯ ಎಂಬ ಸೀಮೆಗಳಲ್ಲಿ ಚದುರಿಹೋಗಿರುವಂಥ ಪರದೇಶಸ್ಥರಾದ ದೇವಜನರಿಗೆ ಅಂದರೆ,
పన్త-గాలాతియా-కప్పదకియా-ఆశియా-బిథునియాదేశేషు ప్రవాసినో యే వికీర్ణలోకాః
2 ಪವಿತ್ರಾತ್ಮನಿಂದ ಪ್ರತಿಷ್ಠಿಸಲ್ಪಟ್ಟವರಾಗಿ, ವಿಧೇಯರಾಗುವುದಕ್ಕಾಗಿ, ಯೇಸು ಕ್ರಿಸ್ತನ ರಕ್ತದಿಂದ ಪ್ರೋಕ್ಷಿತರಾಗಿ, ತಂದೆಯಾದ ದೇವರ ಭವಿಷ್ಯದ ಜ್ಞಾನಾನುಸಾರವಾಗಿ ಆರಿಸಿಕೊಳಲ್ಪಟ್ಟವರಿಗೆ ಬರೆಯುವುದೇನೆಂದರೆ ನಿಮಗೆ ಕೃಪೆಯೂ ಶಾಂತಿಯೂ ಹೆಚ್ಚೆಚ್ಚಾಗಿ ಉಂಟಾಗಲಿ.
పితురీశ్వరస్య పూర్వ్వనిర్ణయాద్ ఆత్మనః పావనేన యీశుఖ్రీష్టస్యాజ్ఞాగ్రహణాయ శోణితప్రోక్షణాయ చాభిరుచితాస్తాన్ ప్రతి యీశుఖ్రీష్టస్య ప్రేరితః పితరః పత్రం లిఖతి| యుష్మాన్ ప్రతి బాహుల్యేన శాన్తిరనుగ్రహశ్చ భూయాస్తాం|
3 ನಮ್ಮ ಕರ್ತನಾದ ಯೇಸು ಕ್ರಿಸ್ತನ ತಂದೆಯೂ ದೇವರೂ ಆಗಿರುವಾತನಿಗೆ ಸ್ತೋತ್ರವಾಗಲಿ. ಆತನು ಯೇಸು ಕ್ರಿಸ್ತನನ್ನು ಸತ್ತವರೊಳಗಿಂದ ಎಬ್ಬಿಸಿದ್ದರಲ್ಲಿ, ತನ್ನ ಮಹಾ ಕರುಣಾನುಸಾರವಾಗಿ ನಮ್ಮನ್ನು ತಿರುಗಿ ಜೀವಿಸುವಂತೆ ಮಾಡಿ ಜೀವಕರವಾದ ನಿರೀಕ್ಷೆಯನ್ನು ನಮ್ಮಲ್ಲಿ ಹುಟ್ಟಿಸಿ,
అస్మాకం ప్రభో ర్యీశుఖ్రీష్టస్య తాత ఈశ్వరో ధన్యః, యతః స స్వకీయబహుకృపాతో మృతగణమధ్యాద్ యీశుఖ్రీష్టస్యోత్థానేన జీవనప్రత్యాశార్థమ్ అర్థతో
4 ನಮ್ಮನ್ನು ಲಯ, ಕಳಂಕ, ನಾಶಗಳಿಲ್ಲದ ಬಾಧ್ಯತೆಯನ್ನು ಎದುರು ನೋಡುವವರನ್ನಾಗಿ ಮಾಡಿದನು. ಆ ಬಾಧ್ಯತೆಯು ನಿಮಗೋಸ್ಕರ ಪರಲೋಕದಲ್ಲಿ ಇಡಲ್ಪಟ್ಟಿದೆ.
ఽక్షయనిష్కలఙ్కామ్లానసమ్పత్తిప్రాప్త్యర్థమ్ అస్మాన్ పున ర్జనయామాస| సా సమ్పత్తిః స్వర్గే ఽస్మాకం కృతే సఞ్చితా తిష్ఠతి,
5 ಅಂತ್ಯ ಕಾಲದಲ್ಲಿ ಪ್ರಕಟವಾಗುವುದಕ್ಕೆ ಸಿದ್ಧವಾಗಿರುವ ರಕ್ಷಣೆಯು ನಂಬುವವರಾದ ನಿಮಗೆ ದೊರೆಯಬೇಕೆಂದು ದೇವರು ನಿಮ್ಮನ್ನು ತನ್ನ ಶಕ್ತಿಯಿಂದ ಕಾಪಾಡುತ್ತಾನೆ.
యూయఞ్చేశ్వరస్య శక్తితః శేషకాలే ప్రకాశ్యపరిత్రాణార్థం విశ్వాసేన రక్ష్యధ్వే|
6 ಆದ್ದರಿಂದ ನೀವು ಸದ್ಯಕ್ಕೆ ಸ್ವಲ್ಪಕಾಲ ಅಗತ್ಯವಿದ್ದಲ್ಲಿ ನಾನಾ ವಿಧ ಕಷ್ಟಗಳಲ್ಲಿ ದುಃಖಿಸುವವರಾಗಿದ್ದರೂ, ಹರ್ಷಿಸುವವರಾಗಿದ್ದೀರಿ.
తస్మాద్ యూయం యద్యప్యానన్దేన ప్రఫుల్లా భవథ తథాపి సామ్ప్రతం ప్రయోజనహేతోః కియత్కాలపర్య్యన్తం నానావిధపరీక్షాభిః క్లిశ్యధ్వే|
7 ನಾಶವಾಗುವಂತಹದ್ದೂ, ಬೆಂಕಿಯಿಂದ ಶೋಧಿಸುವಂತಹದ್ದೂ ಆಗಿರುವ ಬಂಗಾರಕ್ಕಿಂತಲೂ ಬಹು ಅಮೂಲ್ಯವಾಗಿರುವ ನಿಮ್ಮ ನಂಬಿಕೆಯು ಈ ಕಷ್ಟಗಳಿಂದ ಶೋಧಿತವಾಗಿ ಯೇಸು ಕ್ರಿಸ್ತನು ಪ್ರತ್ಯಕ್ಷನಾಗುವಾಗ ನಿಮಗೆ ಕೀರ್ತಿ, ಮಾನ, ಮಹಿಮೆಗಳನ್ನು ಉಂಟುಮಾಡುವಂತಹದ್ದಾಗಿದೆ.
యతో వహ్నినా యస్య పరీక్షా భవతి తస్మాత్ నశ్వరసువర్ణాదపి బహుమూల్యం యుష్మాకం విశ్వాసరూపం యత్ పరీక్షితం స్వర్ణం తేన యీశుఖ్రీష్టస్యాగమనసమయే ప్రశంసాయాః సమాదరస్య గౌరవస్య చ యోగ్యతా ప్రాప్తవ్యా|
8 ನೀವು ಆತನನ್ನು ಕಣ್ಣಾರೆ ನೋಡಲಿಲ್ಲವಾದರೂ ಆತನನ್ನು ಪ್ರೀತಿಸುತ್ತೀರಿ. ನೀವು ಈಗ ಆತನನ್ನು ಕಾಣದಿದ್ದರೂ ಆತನಲ್ಲಿ ನಂಬಿಕೆಯಿಟ್ಟು, ನಿಮ್ಮ ನಂಬಿಕೆಯ ಅಂತ್ಯಫಲವಾಗಿರುವ ಆತ್ಮಗಳ ರಕ್ಷಣೆಯನ್ನು ಹೊಂದುವವರಾಗಿ ಹೇಳಲಸಾಧ್ಯವಾದಂತಹ ಮಹಿಮೆಯುಳ್ಳ ಸಂತೋಷದಿಂದ ಹರ್ಷಿಸುತ್ತೀರಿ.
యూయం తం ఖ్రీష్టమ్ అదృష్ట్వాపి తస్మిన్ ప్రీయధ్వే సామ్ప్రతం తం న పశ్యన్తోఽపి తస్మిన్ విశ్వసన్తో ఽనిర్వ్వచనీయేన ప్రభావయుక్తేన చానన్దేన ప్రఫుల్లా భవథ,
9
స్వవిశ్వాసస్య పరిణామరూపమ్ ఆత్మనాం పరిత్రాణం లభధ్వే చ|
10 ೧೦ ದೇವರು ನಿಮಗೆ ತೋರಿಸಿದ ಕೃಪೆಯನ್ನು ಕುರಿತು ಮುಂತಿಳಿಸಿದ ಪ್ರವಾದಿಗಳು ಈ ರಕ್ಷಣೆಯ ವಿಷಯದಲ್ಲಿ ಸೂಕ್ಷ್ಮವಾಗಿ ವಿಚಾರಿಸಿ ಪರಿಶೋಧನೆ ಮಾಡಿದರು.
యుష్మాసు యో ఽనుగ్రహో వర్త్తతే తద్విషయే య ఈశ్వరీయవాక్యం కథితవన్తస్తే భవిష్యద్వాదినస్తస్య పరిత్రాణస్యాన్వేషణమ్ అనుసన్ధానఞ్చ కృతవన్తః|
11 ೧೧ ತಮ್ಮಲ್ಲಿದ್ದ ಕ್ರಿಸ್ತನ ಆತ್ಮನು ಕ್ರಿಸ್ತನಿಗೆ ಬರಬೇಕಾದ ಬಾಧೆಗಳನ್ನೂ ಅವುಗಳ ತರುವಾಯ ಉಂಟಾಗುವ ಮಹಿಮೆಯನ್ನೂ ಮುಂದಾಗಿ ತಿಳಿಸಿದಾಗ ಆತನು ಯಾವ ಕಾಲವನ್ನು ಇಲ್ಲವೆ ಎಂಥ ಕಾಲವನ್ನು ಸೂಚಿಸುವನೆಂಬುದನ್ನು ಅವರು ಪರಿಶೋಧನೆ ಮಾಡಿದರು.
విశేషతస్తేషామన్తర్వ్వాసీ యః ఖ్రీష్టస్యాత్మా ఖ్రీష్టే వర్త్తిష్యమాణాని దుఃఖాని తదనుగామిప్రభావఞ్చ పూర్వ్వం ప్రాకాశయత్ తేన కః కీదృశో వా సమయో నిరదిశ్యతైతస్యానుసన్ధానం కృతవన్తః|
12 ೧೨ ಆದರೆ ಈ ಸಂಗತಿಗಳನ್ನು ಮುಂತಿಳಿಸುವುದರಲ್ಲಿ ತಮಗೋಸ್ಕರವಲ್ಲ ನಿಮಗೋಸ್ಕರವೇ ಸೇವೆ ಮಾಡುವವರಾಗಿದ್ದಾರೆಂಬುದು ಅವರಿಗೆ ಪ್ರಕಟವಾಯಿತು. ಅವರು ಮುಂದಾಗಿ ಹೇಳಿದ ಸಂಗತಿಗಳೇ ಈಗ ಸಂಭವಿಸಲ್ಪಡುತ್ತಿವೆ ಎಂಬ ವರ್ತಮಾನವು ಪರಲೋಕದಿಂದ ಕಳುಹಿಸಲ್ಪಟ್ಟ ಪವಿತ್ರಾತ್ಮನ ಬಲದಿಂದ ನಿಮಗೆ ಸುವಾರ್ತೆಯನ್ನು ಸಾರಿದವರ ಮೂಲಕ ನಿಮಗೆ ಪ್ರಸಿದ್ಧಿಮಾಡಲ್ಪಟ್ಟಿದೆ. ದೇವದೂತರೂ ಈ ಸಂಗತಿಗಳನ್ನು ಲಕ್ಷ್ಯವಿಟ್ಟು ನೋಡಬೇಕೆಂದು ಬಯಸುತ್ತಿದ್ದಾರೆ.
తతస్తై ర్విషయైస్తే యన్న స్వాన్ కిన్త్వస్మాన్ ఉపకుర్వ్వన్త్యేతత్ తేషాం నికటే ప్రాకాశ్యత| యాంశ్చ తాన్ విషయాన్ దివ్యదూతా అప్యవనతశిరసో నిరీక్షితుమ్ అభిలషన్తి తే విషయాః సామ్ప్రతం స్వర్గాత్ ప్రేషితస్య పవిత్రస్యాత్మనః సహాయ్యాద్ యుష్మత్సమీపే సుసంవాదప్రచారయితృభిః ప్రాకాశ్యన్త|
13 ೧೩ ಆದ್ದರಿಂದ ನೀವು ನಿಮ್ಮ ಮನಸ್ಸನ್ನು ದೃಢಪಡಿಸಿಕೊಂಡು, ಸ್ವಸ್ಥಚಿತ್ತರಾಗಿದ್ದು ಯೇಸು ಕ್ರಿಸ್ತನು ಪ್ರತ್ಯಕ್ಷನಾಗುವಾಗ ನಿಮಗೆ ದೊರಕುವ ಕೃಪೆಯ ಮೇಲೆ ನಿಮ್ಮ ನಿರೀಕ್ಷೆಯನ್ನು ಸಂಪೂರ್ಣವಾಗಿ ಇಡಿರಿ.
అతఏవ యూయం మనఃకటిబన్ధనం కృత్వా ప్రబుద్ధాః సన్తో యీశుఖ్రీష్టస్య ప్రకాశసమయే యుష్మాసు వర్త్తిష్యమానస్యానుగ్రహస్య సమ్పూర్ణాం ప్రత్యాశాం కురుత|
14 ೧೪ ವಿಧೇಯತ್ವವುಳ್ಳ ಮಕ್ಕಳಂತೆ ನಡೆಯಿರಿ, ನೀವು ಮೊದಲು ಅಜ್ಞಾನಿಗಳಾಗಿದ್ದಾಗ ನಿಮಗಿದ್ದ ದುರಾಶೆಗಳನ್ನು ಅನುಸರಿಸಿ ನಡೆದಂತೆ ಇನ್ನು ನಡೆಯುವವರಾಗಿರದೆ,
అపరం పూర్వ్వీయాజ్ఞానతావస్థాయాః కుత్సితాభిలాషాణాం యోగ్యమ్ ఆచారం న కుర్వ్వన్తో యుష్మదాహ్వానకారీ యథా పవిత్రో ఽస్తి
15 ೧೫ ನಿಮ್ಮನ್ನು ಕರೆದಾತನು ಪರಿಶುದ್ಧನಾಗಿರುವ ಪ್ರಕಾರವೇ ನೀವೂ ವಿಧೇಯರಾಗಿದ್ದು ಆತನಿಗೆ ನಿಮ್ಮ ಎಲ್ಲಾ ನಡವಳಿಕೆಗಳಲ್ಲಿ ಪರಿಶುದ್ಧರಾಗಿರಿ.
యూయమప్యాజ్ఞాగ్రాహిసన్తానా ఇవ సర్వ్వస్మిన్ ఆచారే తాదృక్ పవిత్రా భవత|
16 ೧೬ ಏಕೆಂದರೆ, “ನಾನು ಪರಿಶುದ್ಧನಾಗಿರುವುದರಿಂದ ನೀವೂ ಪರಿಶುದ್ಧರಾಗಿರಬೇಕು” ಎಂದು ಬರೆದಿದೆಯಲ್ಲಾ.
యతో లిఖితమ్ ఆస్తే, యూయం పవిత్రాస్తిష్ఠత యస్మాదహం పవిత్రః|
17 ೧೭ ಪ್ರತಿಯೊಬ್ಬನ ನಡತೆಯನ್ನು ನೋಡಿ ಪಕ್ಷಪಾತವಿಲ್ಲದೆ ತೀರ್ಪುಮಾಡುವಾತನನ್ನು ನೀವು ತಂದೆಯೆಂದು ಕರೆಯುವವರಾಗಿರುವುದರಿಂದ ಈ ಲೋಕದಲ್ಲಿನ ನಿಮ್ಮ ಪ್ರವಾಸಕಾಲವನ್ನು ಭಯಭಕ್ತಿಯಿಂದ ಕಳೆಯಿರಿ.
అపరఞ్చ యో వినాపక్షపాతమ్ ఏకైకమానుషస్య కర్మ్మానుసారాద్ విచారం కరోతి స యది యుష్మాభిస్తాత ఆఖ్యాయతే తర్హి స్వప్రవాసస్య కాలో యుష్మాభి ర్భీత్యా యాప్యతాం|
18 ೧೮ ನಿಮ್ಮ ಪೂರ್ವಿಕರಿಂದ ಬಂದಿರುವ ವ್ಯರ್ಥವಾದ ಸಂಪ್ರದಾಯಗಳ ನಡವಳಿಕೆಗಳಿಂದ ನಿಮಗೆ ಬಿಡುಗಡೆಯನ್ನುಂಟುಮಾಡಿದ್ದು ಬೆಳ್ಳಿ, ಬಂಗಾರ ಮೊದಲಾದ ನಶಿಸಿಹೋಗುವ ವಸ್ತುಗಳಿಂದಲ್ಲ.
యూయం నిరర్థకాత్ పైతృకాచారాత్ క్షయణీయై రూప్యసువర్ణాదిభి ర్ముక్తిం న ప్రాప్య
19 ೧೯ ಯೇಸು ಕ್ರಿಸ್ತನೆಂಬ ನಿಷ್ಕಳಂಕವೂ, ನಿರ್ಮಲವೂ ಆದ ಕುರಿಮರಿಯ ಅಮೂಲ್ಯವಾದ ರಕ್ತದಿಂದಲೇ ಎಂದು ನೀವು ಬಲ್ಲಿರಲ್ಲವೇ.
నిష్కలఙ్కనిర్మ్మలమేషశావకస్యేవ ఖ్రీష్టస్య బహుమూల్యేన రుధిరేణ ముక్తిం ప్రాప్తవన్త ఇతి జానీథ|
20 ೨೦ ಆತನು ಜಗದುತ್ಪತ್ತಿಗೆ ಮೊದಲೇ ನೇಮಿಸಲ್ಪಟ್ಟವನಾಗಿದ್ದು ಈ ಅಂತ್ಯಕಾಲಗಳಲ್ಲಿ ನಿಮಗಾಗಿ ಪ್ರತ್ಯಕ್ಷನಾದನು.
స జగతో భిత్తిమూలస్థాపనాత్ పూర్వ్వం నియుక్తః కిన్తు చరమదినేషు యుష్మదర్థం ప్రకాశితో ఽభవత్|
21 ೨೧ ಆತನನ್ನು ಸತ್ತವರೊಳಗಿಂದ ಎಬ್ಬಿಸಿ ಆತನಿಗೆ ಮಹಿಮೆಯನ್ನು ಕೊಟ್ಟ ದೇವರಲ್ಲಿ ನೀವು ಆತನ ಮೂಲಕ ನಂಬಿಕೆಯಿಟ್ಟವರಾಗಿದ್ದೀರಷ್ಟೆ. ಹೀಗಿರಲಾಗಿ ನಿಮ್ಮ ನಂಬಿಕೆಯೂ ನಿರೀಕ್ಷೆಯೂ ದೇವರಲ್ಲಿಯೇ ನೆಲೆಗೊಂಡಿವೆ.
యతస్తేనైవ మృతగణాత్ తస్యోత్థాపయితరి తస్మై గౌరవదాతరి చేశ్వరే విశ్వసిథ తస్మాద్ ఈశ్వరే యుష్మాకం విశ్వాసః ప్రత్యాశా చాస్తే|
22 ೨೨ ನೀವು ಸತ್ಯೋಪದೇಶಕ್ಕೆ ವಿಧೇಯರಾಗಿದ್ದು ನಿಮ್ಮ ಆತ್ಮಗಳನ್ನು ಶುದ್ಧಿಮಾಡಿಕೊಂಡದ್ದರಿಂದ ನಿಷ್ಕಪಟವಾದ ಸಹೋದರ ಪ್ರೀತಿಯುಳ್ಳವರಾಗಿರತಕ್ಕದ್ದು. ಹೀಗಿರಲಾಗಿ ಒಬ್ಬರನೊಬ್ಬರು ಶುದ್ಧಹೃದಯದಿಂದಲೂ, ಯಥಾರ್ಥವಾಗಿಯೂ ಪ್ರೀತಿಸಿರಿ.
యూయమ్ ఆత్మనా సత్యమతస్యాజ్ఞాగ్రహణద్వారా నిష్కపటాయ భ్రాతృప్రేమ్నే పావితమనసో భూత్వా నిర్మ్మలాన్తఃకరణైః పరస్పరం గాఢం ప్రేమ కురుత|
23 ೨೩ ಏಕೆಂದರೆ ನೀವು ಹೊಸದಾಗಿ ಹುಟ್ಟಿರುವಂಥದ್ದು ನಾಶವಾಗುವ ವಾಕ್ಯದಿಂದದ್ದಲ್ಲ. ಆದರೆ ನಾಶವಾಗದಂಥ ವಾಕ್ಯದಿಂದಲೇ. ಅದು ಸದಾ ಜೀವವುಳ್ಳ ದೇವರವಾಕ್ಯದ ಮೂಲಕ ಉಂಟಾಯಿತು. (aiōn g165)
యస్మాద్ యూయం క్షయణీయవీర్య్యాత్ నహి కిన్త్వక్షయణీయవీర్య్యాద్ ఈశ్వరస్య జీవనదాయకేన నిత్యస్థాయినా వాక్యేన పునర్జన్మ గృహీతవన్తః| (aiōn g165)
24 ೨೪ ಏಕೆಂದರೆ ಪವಿತ್ರಗ್ರಂಥದಲ್ಲಿ ಬರೆದಿರುವಂತೆ: “ನರಜಾತಿಯೆಲ್ಲಾ ಹುಲ್ಲಿನ ಹಾಗಿದೆ. ಅದರ ಮಹಿಮೆಯೆಲ್ಲಾ ಹುಲ್ಲಿನ ಹೂವಿನಂತಿದೆ. ಹುಲ್ಲು ಒಣಗಿ ಹೋಗುವುದು. ಅದರ ಹೂವು ಉದುರಿ ಹೋಗುವುದು.
సర్వ్వప్రాణీ తృణైస్తుల్యస్తత్తేజస్తృణపుష్పవత్| తృణాని పరిశుష్యతి పుష్పాణి నిపతన్తి చ|
25 ೨೫ ಆದರೆ ಕರ್ತನ ಮಾತೋ ಸದಾಕಾಲವೂ ಇರುವುದು.” ಆ ಮಾತು ಯಾವುದೆಂದರೆ ನಿಮಗೆ ಸಾರಲ್ಪಟ್ಟ ಸುವಾರ್ತಾವಾಕ್ಯವೇ. (aiōn g165)
కిన్తు వాక్యం పరేశస్యానన్తకాలం వితిష్ఠతే| తదేవ చ వాక్యం సుసంవాదేన యుష్మాకమ్ అన్తికే ప్రకాశితం| (aiōn g165)

< ಪೇತ್ರನು ಬರೆದ ಮೊದಲನೆಯ ಪತ್ರಿಕೆ 1 >