< ಕೊರಿಂಥದವರಿಗೆ ಬರೆದ ಮೊದಲನೆಯ ಪತ್ರಿಕೆ 15 >

1 ಸಹೋದರರೇ, ನಾನು ನಿಮಗೆ ತಿಳಿಸಿದ ಸುವಾರ್ತೆಯನ್ನು ನಿಮ್ಮ ನೆನಪಿಗೆ ತರುತ್ತೇನೆ; ನೀವು ಅದನ್ನು ಸ್ವೀಕರಿಸಿ, ಅದರಲ್ಲಿ ನಿಂತಿದ್ದೀರಿ.
हे मसीह भाईयो, मैं तुहांजो सै ही शुभसमाचार याद करांदा है, जड़ा मैं पेहले सुणाई बैठया है, जिस पर तुसां पेहले भरोसा भी किता था कने जिदे च तुसां टिकयों भी न।
2 ನಾನು ನಿಮಗೆ ಸಾರಿದ ಸುವಾರ್ತೆಯನ್ನು ನೀವು ದೃಢವಾಗಿ ಹಿಡಿದುಕೊಂಡರೆ ನಿಮಗೆ ರಕ್ಷಣೆಯಾಗುತ್ತದೆ. ಇಲ್ಲದಿದ್ದರೆ ನಿಮ್ಮ ನಂಬಿಕೆಯು ನಿರರ್ಥಕವಾಗುತ್ತದೆ.
अगर तुसां उस शुभसमाचार पर जिदा मैं प्रचार किता, तुहाड़ा भरोसा उस पर बणी रेंगा तां परमेश्वरे तुहाड़ा उद्धार करणा; अगर तुहाड़ा भरोसा कमजोर होई जांगा तां उदी कोई कीमत नी कने सै बेकार है।
3 ನಾನು ಸಹ ಕಲಿತುಕೊಂಡ ಮೊದಲನೆಯ ಸಂಗತಿಗಳೊಳಗೆ ಪ್ರಮುಖವಾದ ಸಂಗತಿಯನ್ನೇ ನಿಮಗೆ ತಿಳಿಸಿದ್ದೇನೆ ಅದೇನೆಂದರೆ ಧರ್ಮಶಾಸ್ತ್ರದಲ್ಲಿ ತಿಳಿಸಿರುವ ಪ್ರಕಾರ ಕ್ರಿಸ್ತನು ನಮ್ಮ ಪಾಪಗಳ ನಿವಾರಣೆಗಾಗಿ ಸತ್ತನು; ಹೂಣಲ್ಪಟ್ಟನು;
इसा बजा ला मैं तुहांजो सारयां ला जरूरी संदेश दसया, जड़ा मिंजो प्रभु यीशु मसीह ला मिलया। कने सै संदेश ऐ है पबित्र शास्त्रे दे बचने अनुसार यीशु मसीह साड़े पापां तांई मरी गिया।
4 ಶಾಸ್ತ್ರದ ಪ್ರಕಾರವೇ ಮೂರನೆಯ ದಿನದಲ್ಲಿ ಎಬ್ಬಿಸಲ್ಪಟ್ಟನು.
कने धरती च दबया; कने पबित्र शास्त्र दे अनुसार त्रिऐ रोजे मरयां चे जिन्दा भी होई गिया।
5 ಅನಂತರ ಕೇಫನಿಗೂ ತರುವಾಯ ಆತನು ಹನ್ನೆರಡು ಜನ ಅಪೊಸ್ತಲರಿಗೂ ಕಾಣಿಸಿಕೊಂಡನು.
कने फिरी सै पतरस जो मिल्ला कने उदे बाद सै बारां चेलयां जो मिल्ला।
6 ತರುವಾಯ ಒಂದೇ ಸಮಯದಲ್ಲಿ ಐನೂರಕ್ಕಿಂತ ಹೆಚ್ಚು ಸಹೋದರರಿಗೆ ಕಾಣಿಸಿಕೊಂಡನು. ಇವರಲ್ಲಿ ಹೆಚ್ಚು ಜನರು ಇಂದಿನವರೆಗೂ ಜೀವಿಸುತ್ತಿದ್ದಾರೆ, ಆದರೆ ಕೆಲವರು ನಿದ್ರೆ ಹೋಗಿದ್ದಾರೆ.
फिरी उदे बाद सै पंज सौ ला जादा चेलयां जो मिल्ला, जिना चे मते लोक हले दीकर जिंदे न पर केई मरी गियो न।
7 ತರುವಾಯ ಆತನು ಯಾಕೋಬನಿಗೂ ಅನಂತರ ಎಲ್ಲಾ ಅಪೊಸ್ತಲರಿಗೂ ಕಾಣಿಸಿಕೊಂಡನು.
फिरी उदे बाद याकूबे जो मिल्ला कने सारे चुणयो प्रेरितां जो भी मिल्ला।
8 ಕಟ್ಟಕಡೆಗೆ, ದಿನತುಂಬದೆ ಹುಟ್ಟಿದವನಂತಿರುವ ನನಗೂ ಕಾಣಿಸಿಕೊಂಡನು.
कने सारयां ला बादे च उनी अपणे आप जो मिंजो पर प्रगट किता, जड़ा उस बच्चे सांई है जिदा जन्म सही बकत पर नी होया हो।
9 ನಾನಂತೂ ಅಪೊಸ್ತಲರಲ್ಲಿ ಕನಿಷ್ಠನು; ನಾನು ದೇವರ ಸಭೆಯನ್ನು ಹಿಂಸೆಪಡಿಸಿದ್ದರಿಂದ ಅಪೊಸ್ತಲೆನಿಸಿಕೊಳ್ಳುವುದಕ್ಕೆ ಯೋಗ್ಯನಲ್ಲ.
क्योंकि मैं प्रेरितां च सारयां ला घट खास है, बल्कि प्रेरित बणने जोगा भी नी है, क्योंकि मैं परमेश्वरे दिया कलीसिया दे लोकां जो सताया था।
10 ೧೦ ಆದರೆ ನಾನು ಈಗ ಎಂಥವನಾಗಿದ್ದೇನೊ ಅದು ದೇವರ ಕೃಪೆಯಿಂದಲೇ ಮತ್ತು ಆತನ ಕೃಪೆಯು ನನ್ನಲ್ಲಿ ನಿಷ್ಫಲವಾಗಲಿಲ್ಲ. ನಾನು ಅವರೆಲ್ಲರಿಗಿಂತಲೂ ಹೆಚ್ಚಾಗಿ ಪ್ರಯಾಸಪಟ್ಟೆನು. ಆದರೆ ಪ್ರಯಾಸಪಟ್ಟವನು ನಾನಲ್ಲ, ನನ್ನೊಂದಿಗಿರುವ ದೇವರ ಕೃಪೆಯೇ.
पर अगर अज मैं प्रेरित है तां सै परमेश्वरे दा अनुग्रह है: कने उनी जड़ा अनुग्रह मिंजो पर कितया है, सै बेकार नी होया। पर मैं उना दुज्जे प्रेरितां ला जादा बदीकरी मेहनत किती; तमी ऐ मेरिया तरफा ला नी होया, पर परमेश्वरे दे अनुग्रह मेरी बड़ी सहायता किती की मैं उदा कम्म करी सकें।
11 ೧೧ ಆದ್ದರಿಂದ ನಾನಾದರೇನು ಅಥವಾ ಅವರಾದರೇನು, ಈ ರೀತಿಯಾಗಿ ನಾವೆಲ್ಲರೂ ಸುರ್ವಾತೆಯನ್ನು ಸಾರಿದ್ದೇವೆ; ಅದನ್ನು ನೀವು ನಂಬಿದಿರಿ.
इस तांई अगर चाऐ मैं है, या दुज्जे प्रेरित न, असां सारे मसीह दे बारे च प्रचार करदे न, कने इसी पर तुसां भरोसा किता।
12 ೧೨ ಕ್ರಿಸ್ತನು ಸತ್ತವರೊಳಗಿಂದ ಎಬ್ಬಿಸಲ್ಪಟ್ಟನೆಂದು ಸಾರುತ್ತಿರುವಲ್ಲಿ, ನಿಮ್ಮೊಳಗೆ ಕೆಲವರು ಸತ್ತವರಿಗೆ ಪುನರುತ್ಥಾನವೇ ಇಲ್ಲವೆಂದು ಹೇಳುವುದಾದರೂ ಹೇಗೆ?
हुण मैं तुहांजो ऐ बोलणा चांदा; क्योंकि असां सारयां तुहाड़े बिच ऐई प्रचार किता की जालू मसीहा मरया तां परमेश्वरे उसयो जिन्दा किता, तां तुसां चे कोई भी ऐ ना बोले की परमेश्वरे भरोसा करणे बाले दे मरणे बाद उना जो जिन्दा नी करणा।
13 ೧೩ ಸತ್ತವರಿಗೆ ಪುನರುತ್ಥಾನವಿಲ್ಲವೆಂಬುದು ನಿಜವಾಗಿದ್ದರೆ ಕ್ರಿಸ್ತನು ಸಹ ಎದ್ದುಬರಲಿಲ್ಲ.
अगर मरणे बाद जिन्दा होणा नी होंदा, तां फिरी मसीह भी मरयां चे जिन्दा नी होया।
14 ೧೪ ಕ್ರಿಸ್ತನೂ ಎದ್ದುಬರಲಿಲ್ಲವಾದರೆ ನಮ್ಮ ಬೋಧನೆಯು ವ್ಯರ್ಥ ಮತ್ತು ನಿಮ್ಮ ನಂಬಿಕೆಯು ಸಹ ವ್ಯರ್ಥವಾದದ್ದು.
कने अगर मसीह मरयां चे जिन्दा नी होया, तां जिस संदेश दा असां प्रचार करदे न कने मसीह पर तुहाड़ा भरोसा करणा दोनों बेकार न।
15 ೧೫ ಇದಲ್ಲದೆ ಸತ್ತವರು ಎದ್ದುಬರುವುದಿಲ್ಲವೆಂಬುದು ನಿಜವಾಗಿದ್ದ ಪಕ್ಷದಲ್ಲಿ ದೇವರು ಕ್ರಿಸ್ತನನ್ನು ಎಬ್ಬಿಸಲೇ ಇಲ್ಲ; ಎಬ್ಬಿಸಿದನೆಂದು ಸಾಕ್ಷಿಕೊಟ್ಟ ನಾವು ದೇವರ ವಿಷಯವಾಗಿ ಸುಳ್ಳುಸಾಕ್ಷಿ ಹೇಳಿದವರಾಗಿ ಕಂಡುಬಂದೆವು.
इसला भी बदीकरी ऐ की असां परमेश्वरे दे झूठे गबाह साबित होआ दे न क्योंकि असां उदे बारे च ऐ गबाई दीतियो है की उनी मसीह जो मरयां चे जिन्दा कितया है, पर अगर मरयो असल च जिन्दे नी होंदे न तां परमेश्वरे मसीह जो भी जिन्दा नी कितया है।
16 ೧೬ ಸತ್ತವರು ಎದ್ದು ಬರುವುದಿಲ್ಲವಾದರೆ ಕ್ರಿಸ್ತನೂ ಎದ್ದು ಬರಲಿಲ್ಲ.
अगर मरयो लोक मौत ला बाद जिन्दा नी होंदे न, तां मसीह भी मौत ला बाद जिन्दा नी होया है।
17 ೧೭ ಕ್ರಿಸ್ತನು ಎದ್ದುಬರಲಿಲ್ಲವಾದರೆ ನಿಮ್ಮ ನಂಬಿಕೆಯು ನಿರರ್ಥಕವಾಗಿದೆ, ಹಾಗೂ ನೀವು ಇನ್ನೂ ನಿಮ್ಮ ಪಾಪಗಳಲ್ಲಿಯೇ ಇದ್ದೀರಿ.
कने अगर मसीह जिन्दा नी होया, तां मसीह पर तुहाड़ा भरोसा करणा बेकार है; कने तुसां हले दीकर भी अपणे पापां च जिया दे न।
18 ೧೮ ಇದು ಮಾತ್ರವಲ್ಲದೆ ಕ್ರಿಸ್ತನಲ್ಲಿ ನಿದ್ರೆಹೋದವರು ನಾಶವಾದರು ಎಂದರ್ಥ.
अगर मसीह मरयां चे जिन्दा नी होया है, तां जड़े मसीह च भरोसा करणे बाले लोक मरी गियो न, सै बचायो नी न, बल्कि नाश होई गियो न, मतलब की ऐ की हमेशा तांई परमेश्वरे ला लग होई गियो न।
19 ೧೯ ಕ್ರಿಸ್ತನಲ್ಲಿ ನಮಗಿರುವ ನಿರೀಕ್ಷೆಯು ಕೇವಲ ಈ ಬದುಕಿಗೆ ಮಾತ್ರ ಸೀಮಿತವಾಗಿದ್ದರೆ ನಾವು ಎಲ್ಲಾ ಮನುಷ್ಯರಿಗಿಂತಲೂ ಹೀನರಾಗುತ್ತೇವೆ.
अगर असां सिर्फ ऐथू दी जिन्दगिया तांई मसीह पर आस रखदे न, तां इस संसारे दे माणुऐ ला साड़ी हालत जादा बुरी है।
20 ೨೦ ಆದರೆ ಕ್ರಿಸ್ತನು ಸತ್ತವರೊಳಗಿಂದ ಎದ್ದು ಬಂದನು. ಸತ್ತುಹೋದವರಲ್ಲಿ ಪ್ರಥಮಫಲವಾದನು.
पर सच्चाई ऐ की परमेश्वरे मसीह जो सारयां ला पेहले मरयां चे जिन्दा कितया है, सै इसा गल्ला दा सबूत है उनी सै जिन्दे करणे जड़े मरी गियो न।
21 ೨೧ ಮನುಷ್ಯನ ಮೂಲಕ ಮರಣ ಉಂಟಾದ ಕಾರಣ, ಮನುಷ್ಯನ ಮೂಲಕವೇ ಸತ್ತವರಿಗೆ ಪುನರುತ್ಥಾನವುಂಟಾಗಿದೆ.
इस तांई जियां इक माणु आदम दे जरिये मौत इस संसारे च आई कने हुण मरयां दा जिन्दा होणा भी इक माणुऐ जरिये है मतलब की यीशु मसीह जरिये शुरू होया है।
22 ೨೨ ಆದಾಮನಿಂದ ಹೇಗೆ ಎಲ್ಲರೂ ಸಾಯುವವರಾದರೋ ಅದೇ ಪ್ರಕಾರ ಯೇಸು ಕ್ರಿಸ್ತನಿಂದ ಎಲ್ಲರೂ ಬದುಕುವವರಾದರು.
जियां आदम दिया बजा ला सारयां दी मौत होंदी है, क्योंकि असां उदे बंश न, तियां ही दुज्जे माणु मतलब की मसीह सोगी जितणे भी लोक जुड़यो न, उना सारयां मरयां चे जिन्दे होई जाणा है।
23 ೨೩ ಆದರೆ ಪ್ರತಿಯೊಬ್ಬನು ತನ್ನ ಕ್ರಮದಲ್ಲಿ ಎದ್ದುಬರುವನು. ಕ್ರಿಸ್ತನು ಪ್ರಥಮಫಲವಾದನು; ತರುವಾಯ ಕ್ರಿಸ್ತನಿಗೆ ಸೇರಿದವರು ಆತನ ಬರೋಣದಲ್ಲಿ ಜೀವವುಳ್ಳವರಾಗಿ ಎದ್ದು ಬರುವರು.
पर हर इक जणा अपणिया-अपणिया बारिया पर जिन्दा होणा; इदा सबूत ऐ है की मसीह सारयां ला पेहले जिन्दा किता, फिरी जालू मसीहे मुड़ी करी ओणा है, तां जड़े लोक उदे सोगी मजबूत रिश्ता रखदे न उना जो मरयां चे जिन्दा करणा है।
24 ೨೪ ಅನಂತರ ಆತನು ಎಲ್ಲಾ ದೊರೆತನವನ್ನೂ, ಎಲ್ಲಾ ಅಧಿಕಾರವನ್ನೂ ಮತ್ತು ಬಲವನ್ನೂ ನಿರ್ಮೂಲಗೊಳಿಸಿ ತಂದೆ ದೇವರಿಗೆ ರಾಜ್ಯವನ್ನು ಒಪ್ಪಿಸಿಕೊಡುವಾಗ ಸಮಾಪ್ತಿಯಾಗುವುದು.
कने फिरी जालू मसीहे परमेश्वरे दा बिरोध करणे बालियां सारियां बुरियां शक्तियां दा नाश करी देणा उदे बाद संसारे दा अंत होई जाणा। तालू मसीहे अपणे पिता परमेश्वरे जो अपणा राज्य सौंपी देणा ताकि सै उस पुरे तरीके ला राज्य करे।
25 ೨೫ ಯಾಕೆಂದರೆ ತಾನು ಎಲ್ಲಾ ವಿರೋಧಿಗಳನ್ನು ತನ್ನ ಪಾದಗಳ ಕೆಳಗೆ ಹಾಕಿಕೊಳ್ಳುವ ತನಕ ರಾಜ್ಯವನ್ನಾಳುವುದು ಅವಶ್ಯ.
पर जालू दीकर परमेश्वर उदे सारे दुशमणा जो पूरे तरीके ला राई नी दे, तालू दीकर मसीहा जो उस राज्य पर राज करणा चाईदा।
26 ೨೬ ನಿರ್ಮೂಲವಾಗುವ ಕಡೆ ಶತ್ರುವು ಮರಣವಾಗಿದೆ.
सारयां ला आखरी दुशमण खत्म करी देणा है, सै मौत है।
27 ೨೭ “ದೇವರು ಸಮಸ್ತವನ್ನೂ ಆತನ ಪಾದಗಳ ಕೆಳಗೆ ಹಾಕಿ ಆತನಿಗೆ ಅಧೀನಮಾಡಿದ್ದಾನೆ.” ಆದರೆ “ಸಮಸ್ತವೂ ಆತನಿಗೆ ಅಧೀನಮಾಡಲ್ಪಟ್ಟಿದೆ” ಎಂದು ಹೇಳುವಾಗ ಸಮಸ್ತವನ್ನು ಅಧೀನಮಾಡಿಕೊಟ್ಟಾತನು ಅದರಲ್ಲಿ ಸೇರಲಿಲ್ಲವೆಂಬುದು ಸ್ಪಷ್ಟವಾಗಿದೆ.
पबित्र शास्त्र च भजनकार लिखदा है की, “परमेश्वरे सब कुछ मसीह दे अधिकारे थले करी देणा है,” पर इदे च परमेश्वर अपु शामिल नी है क्योंकि सै ही है जिनी मसीह जो अधिकार दितया था।
28 ೨೮ ಸಮಸ್ತವೂ ಆತನಿಗೆ ಅಧೀನವಾದ ಮೇಲೆ ಮಗನು ಸಮಸ್ತವನ್ನೂ ತನಗೆ ಅಧೀನಮಾಡಿ ಕೊಟ್ಟಾತನಿಗೆ ತಾನೇ ಅಧೀನನಾಗುವನು; ಹೀಗೆ ದೇವರು ಸಮಸ್ತರಲ್ಲಿಯೂ ಸಮಸ್ತವೂ ಆಗುವನು.
कने जालू सारा कुछ मसीह दे मतलब की पुत्रे दे अधीन होई जाणा, तां पुत्रे भी अपु जो परमेश्वरे दे अधीन करी देणा। ताकि परमेश्वर जिनी अपणे पुत्रे जो सारियां चीजां पर हक दितया है, ताकि परमेश्वर ही सारयां तांई सारा कुछ होणा।
29 ೨೯ ಸತ್ತವರಿಗೆ ಪುನರುತ್ಥಾನವಿಲ್ಲವಾದರೆ ಸತ್ತವರಿಗೋಸ್ಕರ ದೀಕ್ಷಾಸ್ನಾನ ಮಾಡಿಸಿಕೊಳ್ಳುವವರು ಏನು ಮಾಡುವರು? ಸತ್ತವರು ಎದ್ದು ಬರುವುದೇ ಇಲ್ಲ ಎನ್ನುವುದು ನಿಜವಾಗಿದ್ದರೆ ಯಾಕೆ ಅವರಿಗೋಸ್ಕರ ದೀಕ್ಷಾಸ್ನಾನ ಮಾಡಿಸಿಕೊಳ್ಳುತ್ತಾರೆ.
अगर मरयो लोक जिन्दे नी होंदे तां उना दा क्या होणा, जड़े मरयो लोकां तांई बपतिस्मा लेंदे न? अगर परमेश्वर मरयों लोकां जो जिन्दा नी करदा तां लोक हुण भी ऐसा कजो करदे न?
30 ೩೦ ನಾವು ಸಹ ಯಾಕೆ ಪ್ರತಿ ಗಳಿಗೆಯಲ್ಲಿಯೂ ಭಯದಲ್ಲಿದ್ದೇವೆ?
अगर मरयो लोकां दा जिन्दा होणा नी होंदा है, तां ऐ साड़े तांई मुर्खता दी गल्ल है की असां अपणे आपे जो बार-बार कजो खतरे च पांदे रेंदे?
31 ೩೧ ಪ್ರಿಯರೇ, ನಮ್ಮ ಕರ್ತನಾದ ಕ್ರಿಸ್ತ ಯೇಸುವಿನಲ್ಲಿ ನಿಮ್ಮನ್ನು ಕುರಿತಾಗಿ ನನಗಿರುವ ಹೆಮ್ಮೆಯ ನಿಮಿತ್ತ ನಾನು ದಿನಾಲು ಸಾಯುತ್ತಲಿದ್ದೇನೆ ಎಂದು ಹೇಳುತ್ತೇನೆ.
हे मसीह भाईयो, जियां ऐ गल्ल पक्की है की तुसां दे यीशु मसीह ला जुड़ने दिया बजा ला मैं घमंड करदा है, तां ऐ गल्ल भी पक्की है की मिंजो हर रोज मरणे दा खतरा है।
32 ೩೨ ನಾನು ಎಫೆಸದಲ್ಲಿ ಮೃಗ ಯುದ್ಧ ಮಾಡಿದ್ದು ಕೇವಲ ಮಾನುಷಾಭಿಪ್ರಾಯದಿಂದಾದರೆ ನನಗೇನು ಪ್ರಯೋಜನ? ಸತ್ತವರು ಎದ್ದು ಬರುವುದಿಲ್ಲವಾದರೆ, ನಾವು ತಿನ್ನೋಣ, ಕುಡಿಯೋಣ, ನಾಳೆ ಸಾಯುತ್ತೇವಲ್ಲಾ.
ऐथू इफिसुस शेहरे च जिना लोकां मेरा जंगली जानवरां सांई बिरोध किता, कने जड़े दुख उना मिंजो दिते उना जो सेहन करणे दा क्या फायदा होया? कुछ भी नी! अगर ऐ सच्च होंदा की मरयो लोक दुबारा जिन्दा नी होंदे न, तां खरा होंदा की मैं उना लोकां दी गल्ल मन्नी लेंदा जड़े ऐ बोलदे न की, “ओआ असां खांदे-पिंदे क्योंकि अगर असां कल मरी गे तां सब कुछ खत्म होई जाणा।”
33 ೩೩ ಮೋಸಹೋಗಬೇಡಿರಿ; “ಕೆಟ್ಟ ಸಹವಾಸವು ಸದಾಚಾರವನ್ನು ಕೆಡಿಸುತ್ತವೆ.”
जड़े इयुदियां गल्लां करदे न उना ला मुर्ख मत बणदे, “बुरी संगती खरे चरित्र जो बिगाड़ी दिन्दी है।”
34 ೩೪ ಗಂಭೀರವಾಗಿ ಯೋಚಿಸಿರಿ! ನೀತಿವಂತರಾಗಿ ಎಚ್ಚರದಿಂದಿರಿ. ಪಾಪಮಾಡಬೇಡಿರಿ. ಕೆಲವರಿಗೆ ದೇವರ ಕುರಿತಾಗಿ ಜ್ಞಾನವೇ ಇಲ್ಲ; ನಿಮಗೆ ನಾಚಿಕೆ ಆಗಲೆಂದೇ ಇದನ್ನು ಹೇಳುತ್ತಿದ್ದೇನೆ.
तुसां होसा च ओआ कने पाप करणा छडी दिया; मैं तुहांजो ऐ गल्ल शरमिंदा करणे तांई बोला दा है, क्योंकि तुसां बिच केई ऐसे न जिना दा परमेश्वरे सोगी रिश्ता ठीक नी है।
35 ೩೫ “ಸತ್ತವರನ್ನು ಮರಳಿ ಜೀವಂತರಾಗಿಸುವುದು ಹೇಗೆ ಸಾಧ್ಯ? ಎಂಥ ದೇಹದಿಂದ ಎದ್ದುಬರುತ್ತಾರೆ?” ಎಂದು ಯಾರಾದರೂ ಪ್ರಶ್ನಿಸಬಹುದು.
उदाहरण तांई अगर तुसां चे कोई पुच्छे की, “कियां परमेश्वर मरयां जो जिन्दा करदा या उना दा शरीर कदिया होणा,”
36 ೩೬ ಮೂರ್ಖನೇ; ನೀನು ಬಿತ್ತುವ ಬೀಜವು ಸಾಯದಿದ್ದರೆ, ಅದು ಜೀವ ತಾಳುವುದುಂಟೆ? ಇಲ್ಲ.
जड़ा भी इस तरीके दे सबाल पुछदा है तां सै मुर्ख है। तुसां जाणदे न की इक बी जालू उसयो जमिना च रांदे न, तां सै जालू दीकर सड़ी नी जांदा है, अंकुरित नी होंदा है।
37 ೩೭ ನೋಡು; ಒಂದು ವೇಳೆ ಗೋದಿಯಕಾಳನ್ನಾಗಲಿ ಬೇರೆ ಯಾವುದೇ ಬೀಜವನ್ನಾಗಲಿ ಬಿತ್ತುವಾಗ ಬರೀ ಕಾಳನ್ನೇ ಹೊರತು ಮುಂದೆ ಬೆಳೆಯಬೇಕಾದ ಗಿಡವನ್ನು ಬಿತ್ತುವುದಿಲ್ಲ.
अगर तुसां धान या कोई होर बी रांदे न, तां तुसां पेहले ला ही उगया बूटा नी लांदे न, बल्कि सिर्फ इक बी रांदे न।
38 ೩೮ ಆದರೆ ದೇವರು ತನ್ನ ಇಷ್ಟದಂತೆ ಅದಕ್ಕೆ ದೇಹವನ್ನು ಕೊಡುತ್ತಾನೆ. ಒಂದೊಂದು ಬೀಜಕ್ಕೂ ಅದಕ್ಕೆ ತಕ್ಕ ದೇಹವನ್ನು ಕೊಡುತ್ತಾನೆ.
पर परमेश्वर अपणिया इच्छा अनुसार उसयो बूटे दा रूप दिन्दा है; कने हर किस्मा दे बी अपणे रुपे च बददे न।
39 ೩೯ ಎಲ್ಲಾ ಶರೀರಗಳು ಒಂದೇ ವಿಧವಾದವುಗಳಲ್ಲ; ಮನುಷ್ಯನ ಶರೀರ ಬೇರೆ, ಪಶುಗಳ ಶರೀರ ಬೇರೆ, ಪಕ್ಷಿಗಳ ಶರೀರ ಬೇರೆ, ಮೀನುಗಳದು ಬೇರೆ.
संसार च सारे प्राणियां दा शरीर इकोदिया नी हुंदा, माणुआं दा शरीर डंगरां सांई नी हुंदा; चिड़ुआं पखेरुआं दा शरीर मछियां सांई नी हुंदा।
40 ೪೦ ಇದಲ್ಲದೆ ಸ್ವರ್ಗೀಯ ಶರೀರಗಳುಂಟು, ಭೂಲೋಕದ ಶರೀರಗಳುಂಟು, ಆದರೆ ಪರಲೋಕದ ಶರೀರಗಳ ಮಹಿಮೆ ಬೇರೆ, ಭೂಲೋಕದ ಶರೀರಗಳ ಮಹಿಮೆ ಬೇರೆ.
कने जियां संसार दे प्राणिया दे शरीर केई तरा दे होंदे न, तियां ही अम्बरे च भी है, जियां की सूरज, चाँद कने तारे। आसमाने दियां चीजां दी सुन्दरता इको देई होंदी, कने धरती दियां चीजां चे इक होर तरा दी सुन्दरता होंदी है।
41 ೪೧ ಸೂರ್ಯನ ತೇಜಸ್ಸು ಒಂದು ವಿಧವಾದರೆ, ಚಂದ್ರನ ಪ್ರಕಾಶವೇ ಮತ್ತೊಂದು ವಿಧ, ಹಾಗೆಯೇ ನಕ್ಷತ್ರ ನಕ್ಷತ್ರಗಳ ಪ್ರಕಾಶವು ಸಹ ವೈವಿಧ್ಯವಾದುದು.
सूरजे दी सुन्दरता लग है, चन्द्रमे दी सुन्दरता लग है, कने तारयां दी सुन्दरता लग है, क्योंकि इक तारे ला दुज्जे तारे दी सुन्दरता च फरक है।
42 ೪೨ ಸತ್ತವರಿಗಾಗುವ ಪುನರುತ್ಥಾನವು ಅದೇ ಪ್ರಕಾರವಾಗಿರುವುದು. ಬಿತ್ತುವಂಥದ್ದು ಅಳಿದುಹೊಗುವಂಥದ್ದು. ಪುನರುತ್ಥಾನವಾಗುವಂಥದ್ದು ಅಮರವಾದದ್ದು.
इस तांई जालू मरयां लोकां दुबारा जिन्दे होणा, तालू उना सोगी भी ऐसा होणा। जिस शरीरे जो सै दफनांदे न, सै ऐसा शरीर है जड़ा सड़ी जांदा है, पर जालू ऐ दुबारा जिन्दा होंदा है, तां ऐ ऐसा शरीर होणा है जड़ा सड़ी नी सकदा है।
43 ೪೩ ಹೀನಾವಸ್ಥೆಯಲ್ಲಿ ಬಿತ್ತಲ್ಪಡುತ್ತದೆ, ಮಹಿಮೆಯಲ್ಲಿ ಪುನರುತ್ಥಾನಹೊಂದುವುದು; ನಿರ್ಬಲಾವಸ್ಥೆಯಲ್ಲಿ ಬಿತ್ತಲ್ಪಡುತ್ತದೆ, ಬಲಹೊಂದಿ ಪುನರುತ್ಥಾನಹೊಂದುವುದು;
जालू असां मरी जांदे न, तालू साड़ा शरीर बदसूरत कने कमजोर होंदा है, पर जालू उना मरयां चे जिन्दा होणा, तां उना छेल कने ताकतबर होणा।
44 ೪೪ ಬಿತ್ತಿದ್ದು ಪ್ರಾಕೃತ ದೇಹವಾಗಿ ಬಿತ್ತಲ್ಪಡುತ್ತದೆ, ಪುನರುತ್ಥಾನಹೊಂದುವಂಥದ್ದು ಆತ್ಮೀಕ ದೇಹ. ಪ್ರಾಕೃತದೇಹ ಇರುವುದಾದರೆ ಆತ್ಮೀಕ ದೇಹವೂ ಇರುವುದು ಸತ್ಯ.
जियां साड़े बाल मास कने खूने दा शरीर है, इयां ही ऐसे शरीर भी न जिना जो परमेश्वरे दी आत्मा जरिये जिन्दगी मिलदी है; साड़े ऐ मास कने खूने दे शरीर उना शरीरे च बदलुई जाणा जिसयो परमेश्वर दी आत्मा जरिये जिन्दगी मिलदी है।
45 ೪೫ “ಮೊದಲನೆಯ ಮನುಷ್ಯನಾದ ಆದಾಮನು ಜೀವ ಪಡೆದ ವ್ಯಕ್ತಿ” ಎಂಬುದಾಗಿ ಪವಿತ್ರ ಗ್ರಂಥದಲ್ಲಿ ಬರೆದದೆಯಲ್ಲಾ. ಕಡೆ ಆದಾಮನಾದರೋ ಜೀವ ಕೊಡುವ ಆತ್ಮನಾದನು.
पबित्र शास्त्र च भी लिखया है, “पेहला माणु, मतलब की आदम, जिन्दा माणु बणया” कने आखरी आदम, मतलब की यीशु मसीह हमेशा दी जिन्दगी देणेबाला बणया।
46 ೪೬ ಆತ್ಮೀಕವಾದದ್ದು ಮೊದಲು ಬಂದದ್ದಲ್ಲಾ, ಪ್ರಾಕೃತವಾದದ್ದು ಮೊದಲನೆಯದು; ಅನಂತರ ಆತ್ಮೀಕವಾದದ್ದು.
सारयां ला पेहला मॉस कने खूने दा शरीर आया, फिरी सै शरीर आया जिसयो परमेश्वरे दिया आत्मा जिन्दगी दिती।
47 ೪೭ ಮೊದಲನೆಯ ಮನುಷ್ಯನು ಮಣ್ಣಿನಿಂದ ಮಾಡಲ್ಪಟ್ಟವನು; ಭೂಮಿಗೆ ಸೇರಿದವನು, ಎರಡನೆಯ ಮನುಷ್ಯನು ಪರಲೋಕದಿಂದ ಬಂದವನು.
पेहला माणु आदम था धरतिया ला मतलब की मीटिया दा बणया था। दुज्जा माणु मसीह है जड़ा स्वर्गे ला आया है।
48 ೪೮ ಮಣ್ಣಿನಿಂದ ಹುಟ್ಟಿದವನು ಎಂಥವನೋ ಮಣ್ಣಿಗೆ ಸಂಬಂಧಪಟ್ಟವರೂ ಅಂಥವರೇ ಆಗಿರುತ್ತಾರೆ; ಪರಲೋಕದಿಂದ ಬಂದಾತನು ಎಂಥವನೋ ಪರಲೋಕಕ್ಕೆ ಸಂಬಂಧಪಟ್ಟವರೂ ಅಂಥವರೇ.
संसारे दे पेहले माणु आदम सांई न जड़ा मीटिया दा बणया था, पर जड़े स्वर्गे दे लोक न, सै स्वर्गे ला आयो माणु मतलब की मसीह सांई न।
49 ೪೯ ನಾವು ಮಣ್ಣಿನಿಂದ ಹುಟ್ಟಿದವನ ಸಾರೂಪ್ಯವನ್ನು ಧರಿಸಿಕೊಂಡಿರುವ ಪ್ರಕಾರ ಪರಲೋಕದಿಂದ ಬಂದಾತನ ಸಾರೂಪ್ಯವನ್ನೂ ಧರಿಸಿಕೊಳ್ಳಬೇಕು.
असां सारयां बाल आदम दा रूप है जिसयो मीटिया ला बणाया था, इयां ही इक रोज सांझो मसीह दा रूप भी मिलणा, जड़ा स्वर्गे ला आया था।
50 ೫೦ ಸಹೋದರರೇ, ನಾನು ಹೇಳುವುದೇನಂದರೆ, ರಕ್ತ ಮಾಂಸಗಳು ದೇವರ ರಾಜ್ಯವನ್ನು ವಶಪಡಿಸಿಕೊಳ್ಳಲಾರದು; ಅಂತೆಯೇ, ಅಳಿದುಹೋಗುವಂಥದ್ದು ಅಮರತ್ವಕ್ಕೆ ಬಾಧ್ಯವಾಗಲು ಸಾಧ್ಯವಿಲ್ಲ.
हे मसीह भाईयो, मैं तुसां जो बोलदा है, इसा धरती पर साड़े शरीर मॉस कने खूने ला बणयो न; असां स्वर्ग च परमेश्वरे दे राज्य च अपणे इस शरीरे सोगी नी रेई सकदे जड़ा मरी सकदा है, क्योंकि ओथु कोई भी मौत नी है।
51 ೫೧ ನೋಡಿರಿ! ಇದುವರೆಗೆ ಗುಪ್ತವಾಗಿದ್ದ ಸಂಗತಿಯನ್ನು ನಾನು ನಿಮಗೆ ತಿಳಿಸುತ್ತೇನೆ, ನಾವೆಲ್ಲರೂ ಸಾಯುವುದಿಲ್ಲ, ಮಾರ್ಪಡುವೆವು.
इस भेद दिया गल्लां जो सुणा, साड़े चे कुछ भरोसा करणे बालयां केई लोकां नी मरणा। ऐ सारियां गल्लां पलक झपकदे ही होई जाणियां न। जालू आखरी तुरही बजाई जाणी, तां जड़े लोक मरी गियो न, सै हमेशा दी जिन्दगी तांई दुबारा जिन्दे करणे न कने असां जड़े जिन्दे न, साड़े शरीर बदलूई जाणे।
52 ೫೨ ಕಡೆ ತುತ್ತೂರಿಯ ಧ್ವನಿಯು ಮೊಳಗುವಲ್ಲಿ, ಕ್ಷಣಮಾತ್ರದಲ್ಲಿ, ರೆಪ್ಪೆಬಡಿಯುವಷ್ಟರೊಳಗಾಗಿ ನಾವೆಲ್ಲರೂ ಮಾರ್ಪಡುವೆವು. ಹೌದು, ತುತ್ತೂರಿಯು ಮೊಳಗಿ ಸತ್ತವರು ನಿರ್ಲಯರಾಗಿ ಎಬ್ಬಿಸಲ್ಪಡುವರು, ನಾವು ರೂಪಾಂತರ ಹೊಂದುವೆವು.
53 ೫೩ ನಶಿಸುವಂಥ ಈ ದೇಹವು ನಿರ್ಲಯತ್ವವನ್ನು ಧರಿಸಿಕೊಳ್ಳುವುದೂ, ಮರಣಕ್ಕೆ ಅಧೀನವಾಗಿರುವ ಈ ದೇಹವು ಅಮರತ್ವವನ್ನು ಧರಿಸಿಕೊಳ್ಳುವುದೂ ಅಗತ್ಯವಾಗಿದೆ.
क्योंकि साड़ा शरीर जड़ा तोल्ली ही मरणे बाला कने सड़ने बाला है, जरूरी है की ऐ इक ऐसे शरीरे च बदलूई जा जड़ा कदी नी मरदा कने सड़दा हो।
54 ೫೪ ನಶಿಸಿಹೋಗುವ ಈ ದೇಹವು ನಿರ್ಲಯತ್ವವನ್ನು ಧರಿಸಿಕೊಂಡಾಗ ಮರಣಾಧೀನವಾಗಿರುವ ಈ ದೇಹವು ಅಮರತ್ವವನ್ನು ಧರಿಸಿಕೊಂಡಾಗ ಬರೆದಿರುವ ಮಾತು ನೆರವೇರುವುದು.
कने जालू ऐसा होणा तालू ऐ गल्ल पूरी होई जाणी जड़ी परमेश्वरे पबित्र शास्त्र च लिखियो की, “मौत जो हराई देणा कने उना कदी नी रेणा।” कने इयां पबित्र शास्त्र च लिखया पूरा होई जाणा।
55 ೫೫ “ಹೇ! ಮರಣವೇ ನಿನ್ನ ಜಯವೆಲ್ಲಿ? ಹೇ! ಮರಣವೇ ನಿನ್ನ ವಿಷದ ಕೊಂಡಿ ಎಲ್ಲಿ?” (Hadēs g86)
“हे मौत तेरी जित कुथु है? हे मौत तेरा डंक कुथु रिया?” इस तरीके ला पबित्र शास्त्र च जड़ा लिख्या था सै पूरा होया। (Hadēs g86)
56 ೫೬ ಸಾವಿನ ವಿಷಕೊಂಡಿ ಪಾಪವೇ; ಪಾಪದ ಶಕ್ತಿಯ ಆಧಾರವು ಧರ್ಮಶಾಸ್ತ್ರವಿಧಿಗಳೇ.
क्योंकि पाप ऐसा डंक है जिदा नतीजा मौत है, कने व्यवस्था दिया बजा ला पाप दी शक्ति साड़िया जिन्दगिया च ओंदी है।
57 ೫೭ ಆದರೆ ನಮ್ಮ ಕರ್ತನಾದ ಯೇಸು ಕ್ರಿಸ್ತನ ಮೂಲಕ ನಮಗೆ ಜಯವನ್ನು ಕೊಡುವ ದೇವರಿಗೆ ಸದಾಕಾಲ ಮಹಿಮೆಯುಂಟಾಗಲಿ.
पर परमेश्वरे दा धन्यबाद हो, जड़ा सांझो साड़े प्रभु यीशु मसीह दे मरणे जरिये पाप कने मौत पर जितांदा है।
58 ೫೮ ಆದ್ದರಿಂದ, ನನ್ನ ಸಹೋದರರೇ, ಸ್ಥಿರಚಿತ್ತರಾಗಿಯೂ, ನಿಶ್ಚಲರಾಗಿರಿ. ಯಾಕೆಂದರೆ ನೀವು ಕರ್ತನ ಸೇವೆಯಲ್ಲಿ ಪಡುವ ಪ್ರಯಾಸವು ನಿಷ್ಫಲವಾಗುವುದಿಲ್ಲ. ಅದನ್ನು ತಿಳಿದು ಕರ್ತನ ಕೆಲಸವನ್ನು ಸದಾ ಅತ್ಯಾಸಕ್ತಿಯಿಂದಲೂ ಮತ್ತು ನಿರಂತರ ಶ್ರದ್ಧೆಯುಳ್ಳವರಾಗಿಯೂ ಮಾಡುವವರಾಗಿರಿ.
इस तांई हे मेरे मसीह भाईयो, अपणे भरोसे च मजबूत रिया कने कोई तुसां जो न भड़काए, कने प्रभु दे कम्मा च हमेशा बददे जा, क्योंकि तुसां ऐ जाणदे न की तुसां प्रभु तांई मेहनत करदे न कने सै बेकार नी है।

< ಕೊರಿಂಥದವರಿಗೆ ಬರೆದ ಮೊದಲನೆಯ ಪತ್ರಿಕೆ 15 >