< मत्ती 4 >

1 तैल्ला पत्ती, पवित्र आत्मा यीशु सुनसान ठैरी मां नीयो, ताके शैतान तैसेरी अज़मैइश केरे।
ಆಗ ಯೇಸು ಸೈತಾನನಿಂದ ಶೋಧಿಸಲ್ಪಡುವುದಕ್ಕಾಗಿ ದೇವರಾತ್ಮನು ಆತನನ್ನು ಅಡವಿಗೆ ನಡೆಸಿದನು.
2 40 दिहाड़े ते 40 रातन किछ न खानेरां पत्ती तैस ढ्लुख लग्गी।
ಆತನು ನಲವತ್ತು ದಿನ ಹಗಲಿರುಳು ಉಪವಾಸವಿದ್ದ ತರುವಾಯ ಆತನಿಗೆ ಹಸಿವಾಯಿತು.
3 त तैखन शैताने ज़ैस जो अज़माने बालो भी ज़ोतन, तैस कां एइतां ज़ोवं, “अगर तू परमेशरेरू मट्ठू आस, त इन घोड़न जो हुक्म देइतां साबत केर, कि एना रोट्टी बनन् ताके तू खेइ सकस।”
ಆಗ ಸೈತಾನನು ಆತನ ಬಳಿಗೆ ಬಂದು, “ನೀನು ದೇವರ ಮಗನಾಗಿದ್ದರೆ ಈ ಕಲ್ಲುಗಳಿಗೆ ರೊಟ್ಟಿಯಾಗುವಂತೆ ಅಪ್ಪಣೆಕೊಡು” ಎಂದು ಹೇಳಲು,
4 यीशुए तैस जुवाब दित्तो, “अवं न केरेलो किजोकि परमेशरेरी किताबी मां लिखोरूए, ‘मैन्हु सिर्फ रोट्टेइं सेइं ज़ींतो न राए, बल्के तै हर गल मन्ने सेइं ज़ींतो राते, ज़ै परमेशर ज़ोते।’”
ಯೇಸು, “‘ಮನುಷ್ಯನು ರೊಟ್ಟಿ ತಿಂದ ಮಾತ್ರದಿಂದ ಬದುಕುವುದಿಲ್ಲ, ಆದರೆ ದೇವರ ಬಾಯಿಂದ ಬರುವ ಪ್ರತಿಯೊಂದು ನುಡಿಯಿಂದಲೂ ಬದುಕುವನು’ ಎಂದು ಬರೆದಿದೆ” ಅಂದನು.
5 फिरी शैताने तै पवित्र नगर यरूशलेमे मां नीयो ते मन्दरेरी उच्ची छ़म्पी पुड़ नेइतां खड़ो कियो।
ಆಗ ಸೈತಾನನು ಯೇಸುವನ್ನು ಪರಿಶುದ್ಧ ಪಟ್ಟಣಕ್ಕೆ ಕರೆದುಕೊಂಡು ಹೋಗಿ ದೇವಾಲಯದ ಗೋಪುರದ ಮೇಲೆ ನಿಲ್ಲಿಸಿ
6 तैखन तैनी यीशु सेइं ज़ोवं, “अगर तू हकीक्ति मां परमेशरेरू मट्ठू आस त इट्ठां बिछ़ड़तां साबत केर, किजोकि पवित्रशास्त्रे मां लिखोरूए, ‘तै तेरे लेइ अपने स्वर्गदूतन हुक्म देलो, ते तैना तीं अपने हथ्थन मां ट्लाले, ताके तेरे पावन केन्ची घोड़न सेइं ठोकर न लग्गे।’”
ಯೇಸುವಿಗೆ, “ನೀನು ದೇವರ ಮಗನೇ ಆಗಿದ್ದರೆ ಇಲ್ಲಿಂದ ಕೆಳಕ್ಕೆ ದುಮುಕು; ‘ದೇವರು ನಿನ್ನ ವಿಷಯವಾಗಿ ತನ್ನ ದೂತರಿಗೆ ಅಪ್ಪಣೆಕೊಡುವನು; ನಿನ್ನ ಕಾಲು ಕಲ್ಲಿಗೆ ತಗಲದಂತೆ ಅವರು ನಿನ್ನನ್ನು ಕೈಗಳಲ್ಲಿ ಎತ್ತಿಕೊಳ್ಳುವರು’ ಎಂಬುದಾಗಿ ಬರೆದಿದೆಯಲ್ಲಾ” ಎಂದು ಹೇಳಿದನು.
7 यीशुए तैस सेइं ज़ोवं, “(नईं, अवं छाल न मारेलो, किजोकि) परमेशरेरी किताबी मां एन भी लिखोरूए, ‘तू प्रभु अपने परमेशरे अज़मेइतां इन साबत केरनेरी कोशिश न केर कि तै अपने वादे पूरे केरते या नईं।’”
ಅದಕ್ಕೆ ಯೇಸು, “ನಿನ್ನ ದೇವರಾಗಿರುವ ಕರ್ತನನ್ನು ಪರೀಕ್ಷಿಸಬಾರದು ಎಂಬುದಾಗಿಯೂ ಬರೆದಿದೆ” ಅಂದನು.
8 तैखन शैताने, यीशु एक्की बड़े उच्चे पहाड़े पुड़ नीयो, ते तैड़ी दुनियारां सारां राज़्ज़ां ते तैन केरि धन दौलत तैस हिराई।
ಬಳಿಕ ಸೈತಾನನು ಆತನನ್ನು ಬಹಳ ಎತ್ತರವಾದ ಬೆಟ್ಟಕ್ಕೆ ಕರೆದುಕೊಂಡು ಹೋಗಿ ಪ್ರಪಂಚದ ಎಲ್ಲಾ ರಾಜ್ಯಗಳನ್ನೂ ಅವುಗಳ ವೈಭವವನ್ನೂ ಆತನಿಗೆ ತೋರಿಸಿ,
9 तैखन तैनी यीशु सेइं ज़ोवं, “अगर तू मीं कां मथ्थो टेकस ते मेरी आराधना केरस, त अवं इन सब किछ तीं देलो।”
ಯೇಸುವಿಗೆ, “ನೀನು ನನಗೆ ಅಡ್ಡಬಿದ್ದು ನನ್ನನ್ನು ಆರಾಧಿಸಿದರೆ ಇವುಗಳನ್ನೆಲ್ಲಾ ನಿನಗೆ ಕೊಡುವೆನು” ಅಂದನು.
10 यीशुए तैस जो ज़ोवं, “हे शैतान! दूर भो, किजोकि परमेशरेरी किताबी मां लिखोरूए, ‘तू सिर्फ प्रभु अपने परमेशरे कां मथ्थो टेक ते तैसेरी आराधना केर!’”
೧೦ಯೇಸು ಅವನಿಗೆ, “ಸೈತಾನನೇ, ನೀನು ತೊಲಗಿ ಹೋಗು. ‘ನಿನ್ನ ದೇವರಾಗಿರುವ ಕರ್ತನನ್ನು ಮಾತ್ರ ಆರಾಧಿಸಬೇಕು ಆತನೊಬ್ಬನನ್ನೇ ಸೇವಿಸಬೇಕು’ಎಂಬುದಾಗಿ ಬರೆದಿದೆಯಲ್ಲಾ” ಎಂದು ಹೇಳಿದನು.
11 तैखन शैतान तैस करां च़लो जेव, ते अकदम किछ स्वर्गदूत यीशु कां एइतां तैसेरी सेवा केरने लग्गे।
೧೧ಆಗ ಸೈತಾನನು ಆತನನ್ನು ಬಿಟ್ಟು ಹೊರಟು ಹೋದನು, ಆಗ ದೇವದೂತರು ಬಂದು ಆತನಿಗೆ ಉಪಚಾರ ಮಾಡಿದರು.
12 एक्सां केन्चे यीशु जो ज़ोवं, कि यूहन्ना ज़ै बपतिस्मो देनेबालो थियो, कैद कियोरोए त यीशु यहूदिया इलाकेरां, गलील इलाके मां वापस अव।
೧೨ಯೋಹಾನನು ಸೆರೆಯಾದನು ಎಂದು ಯೇಸು ಕೇಳಿ ಆ ಸ್ಥಳವನ್ನು ಬಿಟ್ಟು ಗಲಿಲಾಯ ಸೀಮೆಗೆ ಹೊರಟು ಹೋದನು.
13 ते नासरत नगर शैरतां कफरनहूम नगरे मां राने लगो, ज़ैन समुन्दरेरे बन्ने पुड़ आए, ज़ैड़ी जबूलून ते कने नप्ताली गोट्लेरे लोक राते थिये।
೧೩ಬಳಿಕ ನಜರೇತೆಂಬ ಊರನ್ನು ಬಿಟ್ಟು ಜೆಬುಲೋನ್‌ ಮತ್ತು ನಫ್ತಾಲಿಯರ ಗಡಿ ನಾಡುಗಳಿಗೆ ಬಂದು ಸಮುದ್ರದ ಹತ್ತಿರದಲ್ಲಿರುವ ಕಪೆರ್ನೌಮೆಂಬ ಊರಿನಲ್ಲಿ ವಾಸಿಸತೊಡಗಿದನು.
14 ताके तैन वचन ज़ैन यशायाह नेबे ज़ोरू थियूं पूरू भोए, तैनी ज़ोवं,
೧೪ಇದರಿಂದ ಯೆಶಾಯನೆಂಬ ಪ್ರವಾದಿಯ ಮುಖಾಂತರ ಹೇಳಿರುವ ಮಾತು ನೆರವೇರಿತು; ಆ ಮಾತು ಏನೆಂದರೆ,
15 “ज़ैना लोक जबूलून ते नप्ताली गोत्रां केरे इलाके मां आन, ज़ैना गलील समुन्दरेरे नेड़े यरदन दरियारे उस पार, गलील इलाके मां आन, ज़ैड़ी गैर यहूदी लोक भी रातन,
೧೫“ಜೆಬುಲೋನ್ ಸೀಮೆ ಮತ್ತು ನಫ್ತಾಲಿ ಸೀಮೆ, ಯೊರ್ದನಿನ ಆಚೆ, ಸಮುದ್ರದ ಕಡೆಗಿರುವ ಸೀಮೆ, ಅನ್ಯಜನಗಳಿರುವ ಗಲಿಲಾಯ ಸೀಮೆ,
16 (तैना लोक) ज़ैना पापेरे आंधरे मां बिश्शोरेन, तैनेईं बड्डी लौ लई। तै लौ तैन पुड़ चमकी ज़ैना हमेशारे मौतारे आंधरेरे मुलखे मां बिश्शोरेन।”
೧೬ಹೀಗೆ ಕತ್ತಲಲ್ಲಿ ವಾಸಿಸಿದ ಈ ಸೀಮೆಯ ಜನರಿಗೆ ಮಹಾ ಬೆಳಕು ಕಾಣಿಸಿತು; ಮರಣದ ಛಾಯೆ ನೆರೆದ ಪ್ರದೇಶಗಳಲ್ಲಿ ವಾಸಿಸುವವರಿಗೆ ಬೆಳಕು ಉದಯವಾಯಿತು” ಎಂಬುದು.
17 तेइसेरू देंतू यीशुए परमेशरेरी खबर लोकन शुनानेरी सेवा शुरू की। तैनी लोकन ज़ोवं, “अपने पापन करां मनफिराथ, किजोकि स्वर्गेरू राज़ नेड़े ओरूए।”
೧೭ಅಂದಿನಿಂದ ಯೇಸು, “ಪಶ್ಚಾತ್ತಾಪಪಡಿರಿ ಪರಲೋಕ ರಾಜ್ಯವು ಸಮೀಪಿಸಿತು” ಎಂದು ಸಾರುವುದಕ್ಕೆ ಪ್ರಾರಂಭಿಸಿದನು.
18 एक्सां ज़ैखन यीशु गलील समुन्दरेरे बन्ने च़लोरो थियो, त तैनी दूई मैन्हु लाए ज़ैना मेछ़ली ट्लानेबाले थिये। तैना मेछ़ली ट्लानेरे लेइ समुन्दरे मां ज़ाल छ़ेड्डी राओरे थिये। तैन मरां एक्केरू नवं शमौन, ज़ैस जो पतरस भी ज़ोतन, ते तैसेरो ढ्ला ज़ेसेरू नवं अन्द्रियास थियूं।
೧೮ಯೇಸು ಗಲಿಲಾಯ ಸಮುದ್ರದ ತೀರದಲ್ಲಿ ನಡೆದು ಹೋಗುವಾಗ ಪೇತ್ರನೆನಿಸಿಕೊಳ್ಳುವ ಸೀಮೋನ ಮತ್ತು ಅವನ ಸಹೋದರನಾದ ಅಂದ್ರೆಯನು ಸಮುದ್ರದಲ್ಲಿ ಬಲೆಬೀಸುವುದನ್ನು ಕಂಡನು; ಅವರು ಬೆಸ್ತರಾಗಿದ್ದರು.
19 यीशुए तैन सेइं ज़ोवं, “एज्जा मेरे चेले बना। अवं तुसन शिखालेलो कि केन्च़रां होरे मैन्हु मेरे चेले बनानेन।”
೧೯ಅವರಿಗೆ ಆತನು, “ನನ್ನನ್ನು ಹಿಂಬಾಲಿಸಿರಿ, ಮನುಷ್ಯರನ್ನು ಹಿಡಿಯುವ ಬೆಸ್ತರನ್ನಾಗಿ ನಿಮ್ಮನ್ನು ಮಾಡುವೆನು” ಎಂದು ಹೇಳುತ್ತಲೇ,
20 तैना अकदम अपना ज़ालां छ़ेडतां यीशु पत्ती च़ले जे।
೨೦ತಕ್ಷಣ ಅವರು ತಮ್ಮ ಬಲೆಗಳನ್ನು ಬಿಟ್ಟು ಆತನನ್ನು ಹಿಂಬಾಲಿಸಿದರು.
21 ते तैना तैट्ठां थोड़े ज़ेरे अग्गर जे, त यीशुए होरे दूई ढ्ला, यानी याकूब त कने तैसेरो ढ्ला यूहन्ना अपने बाजी जब्दी सेइं साथी किश्ती मां लाए। तैना किश्ती मां ज़ालां ठीक केरने लग्गोरे थिये। यीशुए तैना भी कुजाए (कि तैना तैसेरे चेले बनन्)।
೨೧ಯೇಸು ಅಲ್ಲಿಂದ ಮುಂದೆ ಹೋಗುತ್ತಿರುವಾಗ ಇನ್ನಿಬ್ಬರು ಅಣ್ಣ ತಮ್ಮಂದಿರನ್ನು ಅಂದರೆ ಜೆಬೆದಾಯನ ಮಗನಾದ ಯಾಕೋಬನನ್ನೂ ಅವನ ತಮ್ಮನಾದ ಯೋಹಾನನ್ನೂ ಕಂಡನು; ಇವರು ತಮ್ಮ ತಂದೆಯಾದ ಜೆಬೆದಾಯನ ಸಂಗಡ ದೋಣಿಯಲ್ಲಿ ತಮ್ಮ ಬಲೆಗಳನ್ನು ಸರಿಮಾಡುತ್ತಿದ್ದರು. ಆತನು ಅವರನ್ನು ಕರೆದನು.
22 ते तैना भी तैखने किश्ती ते अपने बाजी तैड़ी ज़ेरे छ़ेडतां यीशु सेइं साथी च़ले जे।
೨೨ಕೂಡಲೆ ಅವರು ದೋಣಿಯನ್ನು ಮತ್ತು ತಮ್ಮ ತಂದೆಯನ್ನು ಬಿಟ್ಟು ಆತನನ್ನು ಹಿಂಬಾಲಿಸಿದರು.
23 तैल्ला पत्ती, यीशु सारे गलील इलाके मां हंठतो फिरतो राव। तै तैन केरे प्रार्थना घरन मां लोकन शिक्षा देतो राव ते परमेशरेरे राज़्ज़ेरी खुशखबरी शुनातो राव। ते तै लोकां केरि हर किसमेरी बिमैरी ते कमज़ोरी दूर केरतो राव।
೨೩ಬಳಿಕ ಯೇಸು ಗಲಿಲಾಯದಲ್ಲೆಲ್ಲಾ ಸಂಚರಿಸಿ ಅಲ್ಲಿಯವರ ಸಭಾಮಂದಿರಗಳಲ್ಲಿ ಉಪದೇಶ ಮಾಡುತ್ತಾ, ದೇವರ ರಾಜ್ಯದ ಸುವಾರ್ತೆಯನ್ನು ಸಾರಿ ಹೇಳುತ್ತಾ ಜನರ ಎಲ್ಲಾ ತರದ ರೋಗಗಳನ್ನೂ ಎಲ್ಲಾ ತರದ ಬೇನೆಗಳನ್ನೂ ವಾಸಿಮಾಡುತ್ತಾ ಬಂದನು.
24 यीशुएरे बारे मां ई खबर सारे सीरिया इलाके मां मुशूर भोइ जेई। एसेरे वजाई सेइं, ज़ैड़ी कोन्ची तै जेव, तैड़ी लोक सेब्भी बिमारन ज़ैना हर किसमेरी बिमैरी ते तकलीफन मां फसोरे थिये, ते ज़ैन लोकन पुड़ भूतां केरो सायो थियो, ते ज़ैना मिरगरे रोगी थिये, ते ज़ैना अधरंगेरे रोगी थिये, तैना यीशु कां आने ते यीशुए तैना सारे बज़्झ़ाए।
೨೪ಆತನ ಸುದ್ದಿಯು ಸಿರಿಯಾದಲ್ಲೆಲ್ಲಾ ಹಬ್ಬಿದ್ದರಿಂದ ಅಸ್ವಸ್ಥರಾದವರನ್ನು, ಅಂದರೆ ನಾನಾ ರೀತಿಯ ರೋಗಗಳಿಂದ ಮತ್ತು ವೇದನೆಗಳಿಂದ ಕಷ್ಟಪಡುವವರನ್ನೂ, ದೆವ್ವಹಿಡಿದವರನ್ನೂ ಮೂರ್ಛಾರೋಗಿಗಳನ್ನೂ ಪಾರ್ಶ್ವವಾಯುವಿನವರನ್ನೂ ಆತನ ಬಳಿಗೆ ಕರತಂದರು; ಆತನು ಅವರನ್ನು ಸ್ವಸ್ಥಮಾಡಿದನು.
25 एसेरे वजाई सेइं मैन्हु केरि बड़ी भीड़ यीशु पत्ती च़ली। तैना लोक गलील, दिकापुलिस इलाकां केरे, यरूशलेम नगरेरे, यहूदिया इलाकेरे, ते यरदन दरियारे पैरीं पारेरे इलाकां केरां ओरे थिये।
೨೫ಗಲಿಲಾಯ, ದೆಕಪೊಲಿ, ಯೆರೂಸಲೇಮ್, ಯೂದಾಯ ಎಂಬೀ ಸ್ಥಳಗಳಿಂದಲೂ ಯೊರ್ದನ್ ಹೊಳೆಯ ಆಚೇ ಕಡೆಯಿಂದಲೂ ಜನರು ಗುಂಪುಗುಂಪಾಗಿ ಆತನನ್ನು ಹಿಂಬಾಲಿಸಿದರು.

< मत्ती 4 >